POLICE BHAVAN KALABURAGI

POLICE BHAVAN KALABURAGI

08 December 2017

KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಂಜುನಾಥ ತಂದೆ ಚಂದ್ರಕಾಂತ ಸಿಂಗೇ ಸಾ ಆಶ್ರಯ ಕಾಲೂನಿ ಕಲಬುರಗಿ  ರವರು ದಿನಾಂಕ 06-12-2017 ರಂದು ಸಾಯಂಕಾಲ ನಮ್ಮ ಓಣಿಯ ಗಣೇಶ ಕೂಡಿಸುವ ಸ್ಥಳದಲ್ಲಿ ನ್ನ ಸ್ನೇಹಿತ ಮದರ ಮುಜಾವರ ಸಾ : ಡಬರಾಬಾದ ಇಬ್ಬರು ಮಾತನಾಡುತ್ತಾ ನಿಂತುಕೊಂಡಾಗ ನಮ್ಮ ಓಣಿಯ ಇರ್ಫಾನ ತಂದೆ ಮನ್ನು ಇತನು ಬಂದು ವಿನಾಕಾರಣ ನಮ್ಮಿಬ್ಬರಿಗು ಇಲ್ಲಿ ಯಾಕೆ ನಿಂತಿರುವಿರಿ ಅಂತಾ ನಮ್ಮೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಯಾಕೆ ವಿನಾಕಾರಣ  ಬೈಯುತ್ತಿದ್ದಿಯಾ ಅಂತಾ ಕೇಳಲು ಇರ್ಫಾನ ಇತನು ತನ್ನ ಮನೆಗೆ ಹೋಗಿ ಮನೆಯಲ್ಲಿದ್ದ ಕೊಡಲಿಯನ್ನು ಹಿಡಿದುಕೊಂಡು ತನ್ನ ಮಕ್ಕಳಾದ ಅಪ್ಸರ ತಂದೆ ಇರ್ಫಾನ ಫಾರುಕ ತಂದೆ ಇರಫಾನ ಇವರನ್ನು ಕರೆದುಕೊಂಡು ಬಂದನು ಅವರ ಮಕ್ಕಳು ಬಂದವರೆ ನಮ್ಮ ತಂದೆಯೊಂದಿಗೆ ಯಾಕೆ ಜಗಳವಾಡುತ್ತಿದ್ದಿಯಾ ಅಂತಾ ಜಗಳ ತೆಗೆದು ಇರ್ಫಾನ ತಂದೆ ಮನ್ನು, ಅಪ್ಸರ ತಂದೆ ಇರ್ಫಾನ, ಮತ್ತು ಫಾರುಕ ತಂದೆ ಇರ್ಫಾನ ಇವರು ಕೂಡಿಕೊಂಡು ನನಗೆ ದೇಡ ಮಾಕೇ ಲೌಡೆ ಅಂದು ಜಾತಿ ನಿಂದನೆ ಮಾಡಿ ನಿಂದು ಬಹಳ ಆಗಿದೆ ಅಂತಾ ಅಂದು  ತನ್ನ ಕೈಲ್ಲಿದ್ದ  ಕೊಡಲಿಯಿಂದ ನನ್ನ ತಲೆಗೆ ಮತ್ತು ಎಡಗೈ ಮಣಿಕಟ್ಟಿಗೆ ಹೊಡೆದು ರಕ್ತಗಾಯಗೊಳಿಸಿದನು ಅಪ್ಸರ ತಂದೆ ಇರ್ಫಾನ ಇತನು ಅಲ್ಲಿಯೆ ಬಿದ್ದ ಕಬ್ಬಿಣದ ಪೈಪ ತೆಗೆದುಕೊಂಡು ಹೊಡೆದು ಗುಪ್ತಗಾಯಗೊಳಿಸಿರುತ್ತಾನೆ ನಾನು ಚಿರಾಡುವ ಸಪ್ಪಳ ಕೇಳಿ ನನ್ನ ತಾಯಿ ಮಹಾದೇವಿ ಇವಳು ಬಿಡಿಸಲು ಬಂದಾಗ ಅವಳಿಗೂ ಕೂಡಾ ಇರ್ಫಾನ ಈತನು ಕಾಲಿನಿಂದ ಹೊಟ್ಟಗೆ ಒದ್ದಿರುತ್ತಾನೆ ಅಪ್ಸರ ಮತ್ತು ಫಾರುಕ ಇವರು ಕುಡಾ ನನ್ನ ತಾಯಿಗೆ ಹಿಡಿದು ಎಳೆದಾಡಿ ಅವಮಾನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ರೇವೂರ ಠಾಣೆ : ದಿನಾಂಕ 06-12-2017 ರಂದು ನಾನು ಮನೆಯಲ್ಲಿ ಇದ್ದಾಗ ನನ್ನ ಕಿರಿಯ ಮಗ ಸುರೇಶನು ಅಫಜಲಪೂರ ಮತ್ತು ಕೋಗನೂರ ಗ್ರಾಮದಲ್ಲಿ ಕೆಲಸವಿದೆ ಅಲ್ಲಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾನೆ. ನಂತರ 8-30 ಪಿಎಂ ಕ್ಕೆ ನಾನು ಮನೆಯಲ್ಲಿದ್ದಾಗ ನಮ್ಮ ಗುಡಿಸಲು ಪಕ್ಕ ಇರುವ ಲಾಡ್ಜನ ಮಾಲಿಕರಾದ ಶ್ರೀ ಗೌಡಪ್ಪಗೌಡ ಬಿರಾದಾರ ಸಾ|| ಮದರಾ(ಬಿ) ರವರು ಬಂದು ಸ್ಟೆಷನಗಾಣಗಾಪೂರದ ನಿಂಗಪ್ಪ ತಂದೆ ರಾಮಯ್ಯಾ ಕಲ್ಯಾಣಕರ ಫೋನ ಮಾಡಿದ್ದಾನೆ ನಿನ್ನ ಜೊತೆ ಮಾತನಾಡುತ್ತಾನೆ ನೋಡು ಅಂತಾ ಮೋಬೈಲ ಫೊನ ನನಗೆ  ಕೊಟ್ಟರು. ಆಗ ನಿಂಗಪ್ಪ ತಂದೆ ರಾಮಯ್ಯಾ ಕಲ್ಯಾಣಕರ ರವರು ಫೋನನಲ್ಲಿ ತಿಳಿಸಿದ್ದೆನೆಂದರೆ ನಾನು ಕೋಗನೂರ ಕ್ರಾಸ್ ಹತ್ತಿರ ಸ್ಟೇಷನ ಗಾಣಪೂರಕ್ಕೆ ಹೋಗಲೇಂದು ಟಂ,ಟಂ ಗಾಗಿ ಕಾಯತ್ತಾ ಕುಳಿತಿದ್ದೆ. ಕೋಗನೂರ ಕಡೆಯಿಂದ ಕೋಗನೂರ ಕ್ರಾಸದಿಂದ ಸುಮಾರು 50 ಮೀಟರ ಅಂತರದಲ್ಲಿ ಒಂದು ಮೋಟರ ಸೈಕಲ ಮೇಲೆ ಒಬ್ಬ ವ್ಯಕ್ತಿ ಬರುತ್ತಿದ ಆತ ತಾನು ಚಾಲಾಯಿಸುತ್ತಿದ್ದ ಮೋಟರ ಸೈಕಲನ್ನು ವೇಗವಾಗಿ ಚಲಿಸಿ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಆಕಡೆ, ಈಕಡೆ ಓಡಿಸಿ ಸ್ಕಿಡಾಗಿ ಬಿದ್ದನು. ಆಗ ನಾನು ಓಡಿ ಹೋಗಿ ನೋಡಲು ಆತನು ನಿನ್ನ ಕಿರಿಯ ಮಗ ಸುರೇಶನಿದ್ದು. ಆತನು ಮೋಟರ ಸೈಕಲ ಮೇಲಿಂದ  ಬಿದ್ದದರಿಂದ ಆತನ ಕುತ್ತಿಗೆ ಹತ್ತಿರ ತೆರಚಿದ ಗಾಯ, ಕೇಳದುಟಿಗೆ ರಕ್ತಗಾಯ, ಎಡಪಕ್ಕೇಲುಬಿನ ಕೇಳಭಾಗದಲ್ಲಿ ತೆರೆಚಿದ ಗಾಯ ಮತ್ತು ಎಡಗೈಮಣಿ ಕಟ್ಟಿನ ಹತ್ತಿರ ತೆರೆಚಿದ ರಕ್ತಗಾಯಗಳಾಗಿ ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗುತ್ತಾ ಬಿದ್ದದನು. ನಾನು ಹತ್ತಿರ ಹೋಗಿ ನೋಡಲು ಆತನು ಮೃತಪಟ್ಟಿರುತ್ತಾನೆ. ಆತನು ಚಲಾಯಿಸುತ್ತಿದ್ದ ಮೋಟರ ಸೈಕಲ ಟಿವಿಎಸ್ ಎಕ್ಸಲ ಕಂಪನಿಯದಿದ್ದು ನಂಬರ- ಕೆಎ-32-ಈಸಿ-3015 ಅಂತಾ ಇರುತ್ತದೆ. ನಿನ್ನ ಫೋನ ನಂಬರ ನನ್ನ ಹತ್ತಿರ ಇರದ ಕಾರಣ ಶ್ರೀ ಗೌಡಪ್ಪಗೌಡ ಬಿರಾದಾರ ರವರ ಫೋನ ನಂಬರ ತೆಗೆದುಕೊಂಡು ಅವರಿಗೆ ಫೋನ ಮಾಡಿರುತ್ತೇನೆ. ನೀವು ಬೇಗ ಬನ್ನಿ ಅಂತಾ ತಿಳಿಸಿದನು. ಆಗ ನಾನು ನನ್ನ ಹೆಂಡತಿ, ನನ್ನ ಹಿರಿಯ ಮಗ ರಮೇಶ, ನನ್ನ ಅಣ್ಣ ದುರ್ಗಪ್ಪ, ಮತ್ತು ನಮಗೆ ಪರಿಚಯ ಇರುವ ದೇಲಗಾಣಗಾಪೂರ ಅಣ್ಣಪ್ಪ ತಂದೆ ಭಗವಂತ ಭಜಂತ್ರಿ ಎಲ್ಲರೂ ಕೂಡಿಕೊಂಡು ಅಪಘಾತವಾಗಿ ನನ್ನ ಮಗ ಬಿದ್ದ ಸ್ಥಳಕ್ಕೆ ಹೋಗಿ ನೋಡಲು ನನ್ನ ಮಗನ ಕುತ್ತಿಗೆ ಹತ್ತಿರ ತೆರಚಿದ ಗಾಯ, ಕೇಳದುಟಿಗೆ ರಕ್ತಗಾಯ, ಎಡಪಕ್ಕೇಲುಬಿನ ಕೇಳಭಾಗದಲ್ಲಿ ತೆರೆಚಿದ ಗಾಯ ಮತ್ತು ಎಡಗೈಮಣಿ ಕಟ್ಟಿನ ಹತ್ತಿರ ತೆರೆಚಿದ ರಕ್ತಗಾಯಗಳಾಗಿ ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ  ಮಂಜುಳಾ ಗಂಡ ಶಿವಶರಣಪ್ಪ ಹಚ್ಚಡ ಸಾ|| ಹರನಾಳ(ಬಿ) ತಾ|| ಜೇವರ್ಗಿ ರವರದು ನಮ್ಮೂರ ಸಿಮಾಂತರದಲ್ಲಿ ನಮ್ಮ ಹೊಲಗಳಿದ್ದು, ಅದರ ಸರ್ವೆ ನಂ 32/2/2 ನೇದ್ದರಲ್ಲಿ 3 ಎಕರೆ 38 ಗುಂಟೆ ಮತ್ತು ಇನ್ನೊಂದು ಹೊಲ ಸರ್ವೆ ನಂ 32/2/1 ನೇದ್ದರಲ್ಲಿ 3 ಎಕರೆ 23 ಗುಂಟೆ ಜಮೀನು ಇರುತ್ತದೆ, ಸದ್ಯ ಆ ಹೊಲಗಳು ನಮ್ಮ ಮಾವ ದೊಡ್ಡಪ್ಪ ಹಚ್ಚಡ ಮತ್ತು ನಮ್ಮ ಅತ್ತೆ ಪಾರ್ವತಿ ಹಚ್ಚಡ ರವರ ಹೆಸರಿಗೆ ಇದ್ದು, ಅವುಗಳನ್ನು ನನ್ನ ಗಂಡ ನೋಡಿಕೊಳ್ಳುತ್ತಿದ್ದು, ಅದರ ಉಪಭೋಗವನ್ನು ನಾವೆ ಮಾಡುತ್ತಿರುತ್ತೇವೆ, ಅದರಂತೆ ನನ್ನ ಗಂಡ ಆ ಹೊಲದ ಮೇಲೆ ಯಡ್ರಾಮಿ ಕೆ.ಜಿ.ಬಿ ಬ್ಯಾಂಕನಲ್ಲಿ ಸರ್ವೆ ನಂ 32/2/2 ನೇದ್ದಕ್ಕೆ 42,700/- ರೂ ಮತ್ತು ಸರ್ವೆ ನಂ 32/2/1 ನೇದ್ದಕ್ಕೆ 82,700/- ರೂ, ಹಂಗರಗಾ (ಕೆ) ಸೋಸೈಟಿಯಲ್ಲಿ 15,000/- ರೂ, ಮತ್ತು ಕುಕ್ಕನೂರ ಸೊಸೈಟಿಯಲ್ಲಿ 10,000/- ರೂ, ಹಾಗು ಇತರೆ ಖಾಸಗಿಯಾಗಿ 5,00,000/- ರೂ ಸಾಲ ಮಾಡಿಕೊಂಡಿದ್ದು ಇರುತ್ತದೆ. ಆಗಾಗ ನನ್ನ ಗಂಡ ಸಾಲ ಬಹಳಾಗಿದೆ ಹೇಗೆ ತೀರಿಸುವುದು ಅಂತಾ ಚಿಂತೆ ಮಾಡುತ್ತಿದ್ದರು, ದಿನಾಂಕ 02-12-2017 ರಂದು ರಾತ್ರಿ 9;30 ಗಂಟೆ ಸುಮಾರಿಗೆ ನನ್ನ ಗಂಡ ಹೊಲದಿಂದ ಮನೆಗೆ ಬಂದು ನಾನು ಹೊಲದಲ್ಲಿ ವಿಷ ಕುಡದಿನಿ ಇನ್ನುಮುಂದೆ ಸಾಲ ನೀವೇ ತೀರಿಸಬೇಕು ಅಂತಾ ಅಂದು ಒಮ್ಮೇಲೆ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದನು, ನಂತರ ನಾನು ಮತ್ತು ನಮ್ಮ ಭಾವ ಸಿದ್ದಣ್ಣ ಹಾಗು ಮತ್ತು ನಮ್ಮ ಸಂಬಂಧಿಕನಾದ ಪ್ರೇಮನಗೌಡ ಹಚ್ಚಡ ರವರು ಕೂಡಿಕೊಂಡು ಅಂಬುಲೆನ್ಸನಲ್ಲಿ ಹಾಕಿಕೊಂಡು ಜೇವರ್ಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ, ಇಂದು ದಿನಾಂಕ 07-12-2017 ರಂದು ಬೆಳಿಗ್ಗೆ 7;30 .ಎಂ ಸುಮಾರಿಗೆ ನನ್ನ ಗಂಡ ಉಪಚಾರ ಫಲಿಸದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:06/12/2017 ರಂದು ಶ್ರೀ ಅಪ್ಪಾಸಾಬ ತಂದೆ ಗುರುಬಸಪ್ಪ ಬಿರಾದಾರ ಸಾ: ವಿವೇಕಾನಂದ ನಗರ ಸಂಗಮತಾಯಿ ಲೇಔಟ ಮನೆ ನಂ.122 ಶಿವಗುರು ಸದನ ಕಲಬುರಗಿ ಇವರ  ಮಗ ತುಶಾರ ಇವನು  ಶಾಲೆಯಿಂದ ಬಂದು ಬಟ್ಟೆ ಬದಲಾಯಿಸಿ 2-30 ಪಿ.ಎಂಕ್ಕೆ ಹೊರಗೆ ಹೊಗಿರುತ್ತಾನೆ ಅಂತಾ ಅಕ್ಕ-ಪಕ್ಕದವರಿಂದ ತಿಳಿದು ಬಂದಿರುತ್ತದೆ. ನಿನ್ನೆ 2-30 ಗಂಟೆಗೆ ಹೊದ ನನ್ನ ಮಗ ಮರಳಿ ಮನೆಗೆ ಬಂದಿರುವುದಿಲ್ಲಾ ನಾವು ಎಲ್ಲಾ ಕಡೆ ಹುಡುಕಾಡಿದರು  ಅಲ್ಲದೆ ನಮ್ಮ ಸ್ವಂತ ಗ್ರಾಮವಾದ ಖಾನಾಪುರಕ್ಕೆ ನಮ್ಮ ಅಣ್ಣ ಮಹಾಂತಪ್ಪ ಇವರಿಗೆ ವಿಚಾರಿಸಲು ಊರಿಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದರು, ಇಲ್ಲಿಯವರೆಗೆ ನನ್ನ ಮಗ ಪತ್ತೆಯಾಗಿರುವುದಿಲ್ಲಾ, ಇಂದು ದಿನಾಂಕ:07/12/2017 ರಂದು ಚಂದ್ರಶೇಖರ ಪಾಟೀಲ ಸಿಬಿಸಿ ಶಾಲೇಗೆ ಹೋಗಿ ವಿಚಾರಿಸಲು ನಿಮ್ಮ ಹುಡುಗ 2 ದಿವಸಗಳಿಂದ ಶಾಲೆಗೆ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತಾರೆ. ಎಲ್ಲಾಕಡೆ ಹುಡುಕಾಡಿದರು ನನ್ನ ಮಗ ಪತ್ತೆಯಾಗಿರುವದಿಲ್ಲ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 06-12-2017 ರಂದು ಮುಂಜಾನೆ ಅರ್ಜುನ ತಂದೆ ತಿಮ್ಮಯ್ಯ ಕೆರಮಗಿ ಸಂಗಡ 06 ಜನರು ಕೂಡಿಕೊಂಡು ಶ್ರೀಮತಿ ಕಲಾವತಿ ಗಂಡ ಶಿವಕುಮಾರ ದೇವರಮನಿ ಸಾಃ ಸಿರನೂರ ಗ್ರಾಮ ತಾ.ಜಿಃ ಕಲಬುರಗಿ ರವರ ಮನೆಗೆ ಬಂದು  ನಿಮ್ಮ ತಮ್ಮ ಸಂತೋಷ ಈತನು ಕಾವೇರಿ ಇವಳಿಗೆ ಚೂಡಾಸುತ್ತಿದ್ದಾನೆ ರಂಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆ ಬಡೆ ಮಾಡಿ, ಸೀರೆ ಹಿಡಿದು ಎಳೆದಾಡಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 December 2017

KALABURAGI DISTRICT REPORTED CRIMES

ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 06.12.2017 ರಂದು ಸಾಯಂಕಾಲ 5 ಗಂಟೆಯಿಂದ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗೋವಾ ಹೊಟೇಲ ಹತ್ತಿರ ಮುಖ್ಯ ರಸ್ತೆಯ ಮೇಲೆ ಶ್ರೀಮತಿ ಅಕ್ಕಮಾಹಾದೇವಿ ಪಿ.ಎಸ್.ಐ. ಮತ್ತು , ನಮ್ಮ ಠಾಣೆಯ ಶ್ರೀ ಎ. ಪೌಲ ಎ.ಎಸ್.ಐ. ಶ್ರೀ ಶಿವಪುತ್ತಪ್ಪ ಎ.ಎಸ್.ಐ. ಶ್ರೀ ಮಲ್ಲಿನಾಥ ಹೆಚ್.ಸಿ 355 ಮತ್ತು ಶ್ರೀ ಪ್ರಮೋದ ಪಿಸಿ 249 ರವರನ್ನು ಸಂಗಡ ಕರೆದುಕೊಂಡು ರಸ್ತೆಯ ಮೇಲೆ ಸಂಚರಿಸುವ ವಾಹನಗಳ ದಾಖಲಾತಿಗಳನ್ನು ಪರಿಶಿಲನೆ ಮಾಡಿಕೊಂಡಿದ್ದು ಸಾಯಂಕಾಲ 7:30 ಗಂಟೆಯ ಸುಮಾರಿಗೆ ಮೋಟಾರ ಸೈಕಲ ನಂ ಕೆಎ 32 ಇಎಚ್ 6333 ಪಲ್ಸರ 180 ನೇದ್ದರ ಚಾಲಕನು ಮೋಟಾರ ಸೈಕಲ ತೆಗೆದುಕೊಂಡು ಇಬ್ಬರು ಹುಡುಗರು ಬಂದಿದ್ದು ಆಗ ನಾನು ಸದರಿ ಮೋಟಾರ ಸೈಕಲ ಚಾಲಕನಿಗೆ ಮೊಟಾರ ಸೈಕಲ ದಾಖಲಾತಿಗಳನ್ನು ಹಾಜರ ಪಡಿಸಲು ಸೂಚಿಸಿದ್ದು ಆಗ ಸದರಿ ಮೊಟಾರ ಸೈಕಲ ಮೇಲೆ ಬಂದ ಇಬ್ಬರು ಹುಡುಗರು ಪೊಲೀಸರಿಗೆ ಬೇರೆ ಕೆಲಸ ಇಲ್ಲವೆ ವಿನಾಕಾರಣ ತೊಂದರೆ ಮಾಡುತ್ತಾರೆ. ಅಂತ ಏರು ದ್ವನಿಯಲ್ಲಿ ಅವಾಚ್ಯವಾಗಿ ಮಾತನಾಡುತ್ತಾ ಒಮ್ಮೆಲೆ ನನ್ನ ಮೈ ಮೇಲೆ ಬಂದಿದ್ದು ಆಗ ನನ್ನ ಜೋತೆಯಲ್ಲಿ ಇದ್ದ ಸಿಬ್ಬಂದಿಯವರು ಸದರಿ ಮೋಟಾರ ಸೈಕಲ ಸವಾರರಿಗೆ ನಿಧಾನವಾಗಿ ಮಾತನಾಡು ಏಕೆ ಚಿರಾಡುತ್ತಿ ನಿಮ್ಮ ಮೋಟಾರ ಸೈಕಲ ದಾಖಲಾತಿಗಳು ತೋರಿಸಿ ಅಂತ ಹೇಳಿದ್ದು ಆಗ ಸದರಿಯವರು ನೀವು ಯಾರು ನಮಗೆ ತಡೆಯುವವರು ಅಂತ ನನಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ನೂಕಿ ಕೊಟ್ಟು ನಮ್ಮ ಕೈಗಳಲ್ಲಿದ ಪೈನ ಬುಕ್ಕಗಳನ್ನು ಬಿಸಾಡಿ ನಮ್ಮ ಕರ್ತವ್ಯಕ್ಕೆ ಅಡತಡೆ ಮಾಡಿ ತಮ್ಮ ಮೋಟಾರ ಸೈಕಲ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಸದರಿ ಮೋಟಾರ ಸೈಕಲ ಸವಾರರಿಗೆ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1) ಅಶೋಕ ತಂದೆ ದತ್ತಪ್ಪ ದಯಾಗೊಂಡ ಸಾ: ಪಟ್ಟಣ ತಾ:ಜ: ಕಲಬುರಗಿ 2) ಉದಯ ತಂದೆ ಚಂದ್ರಕಾಂತ ಪಡಸಾವಳೆ ಸಾ: ಝಳಕಿ ಹಾ:ವ: ಹೀರಾಪೂರ ಕಣ್ಣಿ ಮಾರ್ಕೇಟ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವರಿಗೆ ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದುಕೊಂಡು ರಾತ್ರಿ 8:30 ಗಂಟೆಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟದರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ 06-12-2017   ರಂದು  ಹೊನಗುಂಟಾ  ಸಿಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ  ಕಲ್ಯಾಣಿ  ಎ.ಎಸ್.ಐ ಶಹಾಬಾದ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಶಹಾಬಾದ ರವರ ಮಾರ್ಗದರ್ಶನದಲ್ಲಿ  ಹೊನಗುಂಟಾ ಗ್ರಾಮದ ಬ್ರೀಡ್ಜ ಕೆಳಗಿನ ಹಳ್ಳದ ರಸ್ತೆಯಲ್ಲಿ 4-00 ಗಂಟೆಗೆ ಹೋದಾಗ ಕಾಗಿಣಾ ನದಿ ಕಡೆಯಿಂದ ಒಂದು ಮರಳು ತುಂಬಿದ ಟ್ಯಾಕ್ಟರ  ಬರುತ್ತಿದ್ದು, ಅದನ್ನು ನೋಡಿ ನಿಲ್ಲಿಸುವಾಗ ಚಾಲಕನು ಟ್ಯಾಕ್ಟರ ನಿಲ್ಲಿಸಿ ಓಡಿ ಹೋದನು.  ಅವನಿಗೆ ನೋಡಿದರೆ ಗುರ್ತಿಸುತ್ತೇನೆ.  ಅದರ ನಂಬರ   ಪರಿಶೀಲಿಸಿ ನೋಡಲಾಗಿ ಮಶಿ ಫರಗೂಷನ ಟ್ಯಾಕ್ಟರ ಮರಳು ತುಂಬಿದ್ದು ಅದರ ನಂಬರ ಕೆ.ಎ. 32 ಟಿ 5411 – 5412 ಇದ್ದು ಅದರ ಅ.ಕಿ 2 ಲಕ್ಷ ರೂ. ಅದರಲ್ಲಿದ್ದ ಮರಳು ಅ.ಕಿ 1000/- ರೂ.  ಮರಳು ತುಂಬಿದ ಟ್ಯಾಕ್ಟರ  ಪಂಚರ ಸಮಕ್ಷಮದಲ್ಲಿ  ಜಪ್ತಿಮಾಡಿಕೊಂಡು ಟ್ಯಾಕ್ಟರ ಚಾಲಕ ಮತ್ತು ಮಾಲಕ ಇಬ್ಬರೂ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಅಕ್ರಮವಾಗಿ ಮರಳು ಕಾಗಿಣಾ ನದಿಯಿಂದ ಕಳ್ಳತನದಿಂದತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟ್ರ್ಯಾಕ್ಟರನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅರ್ಜುನ  ತಂದೆ ತಿಮ್ಮಯ್ಯ ಕೇರಮಗಿ ಸಾಃ ಸಿರನೂರ ತಾ.ಜಿಃ ಕಲಬುರಗಿ ರವರ  ತಂಗಿಯಾದ ರೇಣುಕಾ ಇವಳಿಗೆ ಸುಮಾರು 2-3 ದಿವಸಗಳಿಂದ ಆರೋಪಿ ಸಂತೋಷ ಈತನು ಚೂಡಾಸುತ್ತಿದ್ದರಿಂದ ದಿನಾಂಕ 05/12/2017 ರಂದು ಫಿರ್ಯಾದಿದಾರರ ಕೇಳಲು ಹೊದಾಗ ಸಂತೊಷ ಸಂಗಡ ಇನ್ನೂ 07 ಜನರು ಕೂಡಿಕೊಂಡು ಫಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವದ ಭೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 

06 December 2017

KALABURAGI DISTRICT REPORTED CRIMES

ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವಳ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 05.12.2017 ರಂದು ಸಮತಾ ಕಾಲೋನಿಯಲ್ಲಿ ಕಾಲೋನಿಯಲ್ಲಿ ವಾಸವಾಗಿರುವ ಮೀನಾಕ್ಷಿ ಗಂಡ ಬಾಳಪ್ಪ ಗುತ್ತೇದಾರ ಸಾ: ನೀರಿನ ಟ್ಯಾಂಕ ಹತ್ತಿರ ಸಮತಾ ಕಾಲೋನಿ ಕಲಬುರಗಿ ಇವಳು ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀಮತಿ ಅಕ್ಕಮಹಾದೇವಿ ಪಿ.ಎಸ್‌‌.  ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಸಮತಾ ಕಾಲೋನಿ ನೀರಿನ ಟ್ಯಾಂಕ ಹತ್ತಿರ ನೀರಿನ ಟ್ಯಾಂಕ ಹತ್ತಿರ ಹೋಗುತ್ತಿದ್ದಂತೆ ನೀರಿನ ಟ್ಯಾಂಕ ಪಕ್ಕದ ಮನೆಯ ಮುಂದೆ ಒಬ್ಬ ಹೆಣ್ಣು ಮಗಳು ರಟ್ಟಿನ ಬಾಕ್ಸದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟು ಕೊಂಡು ಮಧ್ಯ ಮಾರಾಟ ಮಾಡುತ್ತಿದ್ದು ಸದರಿಯವಳು ನಮ್ಮ ಪೊಲೀಸ ಜೀಪನ್ನು ನೋಡಿ ತಕ್ಷಣ ಅಲ್ಲಿಂದ ಓಡಿ ಹೋಗಿದ್ದು ನಂತರ ಸದರಿಯವಳು ಮಧ್ಯ ಮರಾಟ ಮಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ್ದ ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 60 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 28.ರೂ 13 ಪೈಸೆ. ಒಟ್ಟು ಕಿಮ್ಮತ್ತು 1687.ರೂ 80 ಪೈಸೆ. ಕಿಮ್ಮತ್ತಿನ ಮಾಲು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಮೀನಾಕ್ಷಿ ಗಂಡ ಬಾಳಪ್ಪ ಗುತ್ತೇದಾರ ಸಾ: ನೀರಿನ ಟ್ಯಾಂಕ ಹತ್ತಿರ ಸಮತಾ ಕಾಲೋನಿ ಕಲಬುರಗಿ ಇವಳ ವಿರುಧ್ದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ದಿಪಿಕಾ ಗಂಡ ಮಲ್ಲಿಕಾರ್ಜುನ ಬನ್ನೂರಕರ ಸಾ|| ಎನ್.ಜಿ..ಕಾಲೋನಿ  ಕಲಬುರಗಿ ಹಾ|| || ವಿಜಯ ನಗರ ಕಾಲೋನಿ ಬಸವಕಲ್ಯಾಣ ತಾ|| ಬಸವಕಲ್ಯಾಣ ಜಿ|| ಬೀದರ ಇವರು ದಿನಾಂಕ 23-04-2016 ರಂದು ಮಲ್ಲಿಕಾರ್ಜುನ ತಂದೆ ಶಂಕರರಾವ ಬನ್ನೂರಕರ ಈತನ ಜೊತೆಯಲ್ಲಿ ನನ್ನ ತಾಯಿಯವರು ನಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆಯಲ್ಲಿ 5 ಲಕ್ಷ ರೂಪಾಯಿ 10ತೊಲೆ ಬಂಗಾರ ಹಾಗೂ ಸುಮಾರು 5 ಲಕ್ಷ ರೂಪಾಯಿ ಮನೆಬಳಕೆ ಸಾಮಾನುಗಳನ್ನು ಕೊಟ್ಟಿರುತ್ತಾರೆ. ನನ್ನ ಗಂಡನು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ನನಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ 2-3 ತಿಂಗಳು ಉಳಿದಿದ್ದು  ಹೀಗಿದ್ದು ನನ್ನ ಗಂಡ ಮಲ್ಲಿಕಾರ್ಜುನ ಈತನು ನನ್ನ ಮೇಲೆ ವಿನಾಕಾರಣ ಸಂಶಯ ಮಾಡಿ ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದನು ವಿಷಯವನ್ನು ನಾನು ನನ್ನ ಅತ್ತೆಯವರಾದ ಕುಸುಮಾವತಿ ಇವರಿಗೆ ತಿಳಿಸಿದಾಗ ಅವಳು ನೀನು ಬೆಂಗಳೂರಿನ್ಲಿ ಇರಬೇಡಾ ಅಂತಾ ಹೇಳಿದಾಗ ಕಲಬುರಗಿಗೆ ಬಂದು ನನ್ನ ಗಂಡನ ಮನೆಯಲ್ಲಿ ಅತ್ತೆಯ ಜೊತೆಯಲ್ಲಿಯೆ ಮನೆಯಲ್ಲಿ ಉಳಿದಿರುತ್ತೇನೆ ನನಗೆ ಒಂದು ಗಂಡು ಮಗು ಹುಟ್ಟಿರುತ್ತದೆ ಆದ ನಂತರ ನನ್ನ ಗಂಡ ಮಲ್ಲಿಕಾರ್ಜುನ ಈತನು 15 ದಿವಸಗಳಿಗೊಮ್ಮೆ ಕಲಬುರಗಿಗೆ ಮನೆಗೆ ಬಂದು ಹೋಗುತ್ತಿದ್ದನು ನನ್ನ ಗಂಡ ಮತ್ತು ನನ್ನ ಅತ್ತೆಯಾದ ಇಬ್ಬರು ಕೂಡಿಕೊಂಡು ನೀನು ನಿನ್ನ ತವರು ಮನೆಯಿಂದ ಕಡಿಮೆ ವರದಕ್ಷಿಣೆ ತೆಗೆದುಕೊಂಡು ಬಂದಿದ್ದಿ ಇನ್ನು ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಅಂತಾ ಪದೇ ಪದೇ ನನಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರು ಆಗ ನಾನು ನನ್ನ ತಂದೆಯವರು ಇರುವದಿಲ್ಲಾ ತಾಯಿ ಒಬ್ಬಳೆ ಇರುವದರಿಂದ ನನಗೆ ತವರು ಮನೆಯಿಂದ ಹಣ ತರಲು ಆಗುವದಿಲ್ಲಾ ಅಂತಾ ಹೇಳಿದಾಗ ನನ್ನ ಗಂಡ ಮಲ್ಲಿಕಾರ್ಜುನ ಹಾಗೂ ನಾದಿನಿಯರಾದ ರಾಘವೇಣಿ, ಗೀತಾ, ಶೈಲಶ್ರೀ, ಇವರಿಗೆ ಕರೆಯಿಸಿ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ನೀನು ತವರು ಮನೆಯಿಂದ ಇನ್ನು 2 ಲಕ್ಷ ರೂಪಾಯಿ ಹಣ ತರದೆ ಇದ್ದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಭಯ ಹಾಕಿರುತ್ತಾರೆ ದಿನಾಂಕ 17-10-2016 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನನ್ನ ಅತ್ತೆಯಾದ ಕುಸುಮಾವತಿ ಮತ್ತು ನನ್ನ ನಾದಿನಿಯರಾದ ರಾಘವೇಣಿ ಮತ್ತು ಸದರಿ ರಾಘವೇಣಿ ಇವರ ಗಂಡನಾದ ವಿಜಯಕುಮಾರ ಮತ್ತು ಗೀತಾ ಮತ್ತು ಗೀತಾ ಇವಳ ಗಂಡ ಈಶ್ವರಚಂದ್ರ ಮತ್ತು ಶೈಲಶ್ರೀ ಹಾಗೂ ಸದರಿ ಶೈಲಶ್ರೀ ಇವಳ ಗಂಡ ವಿಠ್ಠಲ್ ಇವರೆಲ್ಲರೂ ಕೂಡಿಕೊಂಡು ನೀನು ನಮ್ಮ ತವರು ಮನೆಯಿಂದ ಇನ್ನು 2 ಲಕ್ಷ ರೂಪಾಯಿ ತಂದರೆ ಉಳಿಯುತ್ತಿ ಅಂತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡಲು ಪ್ರಾರಂಭಿಸಿದರು ಆಗ ನಾನು ನನ್ನ ತಾಯಿಯ ಹತ್ತಿರ ಹಣ ಇರುವದಿಲ್ಲಾ ನಾನು ಎಲ್ಲಿಂದ ಹಣ ತರಬೇಕು ಅಂತಾ ಕೇಳಿದಾಗ ನನ್ನ ಗಂಡ ಮಲ್ಲಿಕಾರ್ಜುನ ಈತನು ನಿನಗೆ ಖಲಾಸ ಮಾಡುತ್ತೇನೆ ಅಂತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಕುತ್ತಿಗೆ ಜೊರಾಗಿ ಒತ್ತಿದಾಗ ನಾನು ಚೀರಾಡಲು ಅಕ್ಕ ಪಕ್ಕದ ಮನೆಯವರು ಬಂದು ಬಿಡಿಸಿರುತ್ತಾರೆ ಇಲ್ಲದಿದ್ದರೆ ನನಗೆ ಕೊಲೆ ಮಾಡಿಯೆ ಬಿಡುತ್ತಿದ್ದರು. ವಿಷಯ ನನ್ನ ತಾಯಿಗೆ ತಿಳಿಸಿದಾಗ ನನ್ನ ತಾಯಿ ಬಂದು ನನಗೆ ಕರೆದುಕೊಂಡು ಹೋಗಿರುತ್ತಾಳೆ. ನನ್ನ ಸಂಸಾರ ಇಂದಲ್ಲಾ ನಾಳೆ ಸರಿ ಹೋಗುತ್ತದೆ ಅಂತಾ ಇಲ್ಲಿಯವರೆಗೆ ನಾನು ನನ್ನ ತವರು ಮನೆಯಲ್ಲಿಯೆ ಉಳಿದಿರುತ್ತೇನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.