POLICE BHAVAN KALABURAGI

POLICE BHAVAN KALABURAGI

02 December 2017

KALABURAGI DISTRICT REPORTED CRIMES.

gÁWÀªÉÃAzÀæ £ÀUÀgÀÀ oÁuÉ : ದಿನಾಂಕ:01/12/2017 ರಂದು ಮಧ್ಯಾನ 2.30 ಪಿ.ಎಂಕ್ಕೆ ಎಎಸ್‌‌ ಮಲ್ಲಿನಾಥರವರು ಜಪ್ತಿಮಾಡಿದ ಮರಳು ತುಂಬಿದ 2 ಟಿಪ್ಪರಗಳು ಮತ್ತು ಇಬ್ಬರೂ ಚಾಲಕರನ್ನು ಠಾಣೆಗೆ ತಂದು ಹಾಜರ ಪಡಿಸಿ ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 01.12.2017 ರಂದು ಇದ್ ಮೀಲಾದ ಹಬ್ಬರದ ಪ್ರಯುಕ್ತ ಬೆಳ್ಳಿಗ್ಗೆ 8:30 ಗಂಟೆಗೆ ನಾನು ನಮ್ಮ ಠಾಣೆ ಶ್ರೀ ಶಿವಲಿಂಗಪ್ಪ ಹೆಚ್.ಸಿ 06. ಶ್ರೀ ಗಂಗಾಧರ ಪಿಸಿ 642 ಮತ್ತು ಕೀಶೊರ ಪಿಸಿ 1010 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೇಟ್ರೊಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಬೆಳ್ಳಿಗ್ಗೆ 10:15 ಗಂಟೆಗೆ ನಾನು ಸಿಬ್ಬಂದಿಯವರು ಕೂಡಿಕೊಂಡು ಠಾಣಾ ವ್ಯಾಪ್ತಿಯ ದೇವರದಾಸಿಮಯ್ಯ ಬಡಾವಣೆಯಲ್ಲಿ ಹೋದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಡಬರಾಬಾದ ಕ್ರಾಸ ದಿಂದ ಖಾದ್ರಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ್ದು ಬಾತ್ಮಿಯಂತೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ತಿಳಿಹೇಳಿ ಅವರು ದಾಳಿಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿಕೂಡಲು ಒಪ್ಪಿಕೊಂಡಿದ್ದು ನಂತರ ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಡಬರಾಬಾದ ಕ್ರಾಸ ದಿಂದ ಖಾದ್ರಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಬೆಳ್ಳಿಗ್ಗೆ 11:15 ಗಂಟೆಗೆ ಬಂದು ರಸ್ತೆಯ ಮೇಲೆ ನಿಂತುಕೊಂಡಿದ್ದು ಬೆಳ್ಳಿಗ್ಗೆ 11:45 ಗಂಟೆಯ ಸುಮಾರಿಗೆ ಎರಡು ಟಿಪ್ಪರಗಳು ಡಬರಾಬಾದ ಕ್ರಾಸ ದಿಂದ ಖಾದ್ರಿ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ಬರುತ್ತಿರುವದನ್ನು ನೋಡಿ ನಾನು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಎರಡು ಟಿಪ್ಪರಗಳನ್ನು ನಿಲ್ಲಿಸಿ ನೋಡಲು ಅವುಗಳ ನಂಬರ ಜಿ.ಜೆ 12 ಎಟಿ 8619 ಅಂತ ಇದ್ದು ಇನ್ನೂಂದರ ನಂಬರ ಎಮ್.ಹೆಚ್.13 ಆರ್ 1618 ಅಂತ ಇದ್ದು ನಂತರ ಸದರಿ ಟಿಪ್ಪರಗಳನ್ನು ಪರಿಶೀಲಿಸಿ ನೋಡಲು ಅವುಗಳಲ್ಲಿ ಕೆಂಪು ಮರಳು ಇದ್ದು ಸದರಿ ಟಿಪ್ಪರ ಚಾಲಕರಿಗೆ ಹೆಸರು ವಿಳಾಸ ವಿಚಾರಿಸಲು ಟಿಪ್ಪರ ನಂ ಜಿ.ಜೆ 12 ಎಟಿ 8619 ನೇದ್ದರ ಚಾಲಕ ಅಯುಬ @ ಅಯುಬ ಖಾನ ತಂದೆ ಚಾಂದಸಾಬ ವಯ: 30 ವರ್ಷ : ಚಾಲಕ ಜಾತಿ: ಮುಸ್ಲಿಂ ಸಾ: ಬಂದರವಾಡ ಹಾ:: ಪಟೇಲ ಕಾಲೋನಿ ಡಬರಾಬಾದ ಕ್ರಾಸ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಮತ್ತು ಟಿಪ್ಪರ ನಂ ಎಮ್.ಹೆಚ್. 13 ಆರ್ 1618 ನೇದ್ದರ ಚಾಲಕ ತನ್ನ ಹೆಸರು ಆಸೀಬ ಅಲಿ ತಂದೆ ಸಾಭೀರ ಅಲಿ ವಯ: 29 ವರ್ಷ : ಚಾಲಕ ಜಾತಿ: ಮುಸ್ಲಿಂ ಸಾ: ಡಬರಾಬಾದ ತಾ:ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿ ಇಬ್ಬರು ಟಿಪ್ಪರ ಚಾಲಕರಿಗೆ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಕಾಗದ ಪತ್ರಗಳನ್ನು ಹಾಜರ ಪಡಿಸಿಲು ಸೂಚಿಸಿದ್ದು. ಸದರಿ ಇಬ್ಬರು ಚಾಲಕರು ತಮ್ಮ ಹತ್ತಿರ ಯಾವುದೆ ದಾಖಲಾತಿಗಳು ಇರುವದಿಲ್ಲ ತಮ್ಮ ಮಾಲಿಕರಾದ ಜಾವೀದ ಸಾ:ಹುಸೇನ ಗಾರ್ಡನ ಇವರು ಹೇಳಿದಂತೆ ಕಳ್ಳತನ ದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದು ಬಗ್ಗೆ ತಿಳಿಸಿದ್ದು ಅದರಂತೆ ಸದರಿಯವರ ಸ್ವ-ಖುಷಿ ಹೇಳಿಕೆಯನ್ನು ಪಡೆದುಕೊಂಡಿದ್ದು, ಟಿಪ್ಪರ ನಂ ಜಿ.ಜೆ 12 ಎಟಿ 8619 :ಕಿ; 3 ಲಕ್ಷ ರೂ ಮತ್ತು ಅದರಲ್ಲಿ ಇದ್ದ ಅಂದಾಜ 3 ಬ್ರಾಸ ಕೆಂಪು ಮರಳು :ಕಿ: 6,000/-ರೂ ಮತ್ತು ಟಿಪ್ಪರ ನಂ ಎಮ್.ಹೆಚ್.13 ಆರ್ 1618 :ಕಿ; 3 ಲಕ್ಷ ರೂ ಮತ್ತು ಅದರಲ್ಲಿ ಅಂದಾಜ 3 ಬ್ರಾಸ ಕೆಂಪು ಮರಳು :ಕಿ: 6,000/-ರೂ ಇದ್ದು ಸದರಿ ಎರಡು ಕೆಂಪು ಮರಳು ತುಂಬಿದ ಟಿಪ್ಪರಗಳನ್ನು ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆಯನ್ನು ಕೈಕೊಂಡಿದ್ದು ಇರುತ್ತದೆ. ಜಪ್ತಿ ಪಂಚನಾಮೆ, ಜಪ್ತಿ ಮಾಡಿದ ಟಿಪ್ಪರಗಳು ಮರಳು ಸಮೇತ ಅವುಗಳ ಚಾಲಕರನ್ನು ತಮ್ಮ ಮುಂದೆ ಹಾಜರ ಪಡಿಸಿದ್ದು ಸದರಿಯವರ ವಿರುಧ್ದ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಿದ ಮೇರೆಗೆ ಠಾಣೆ ಗುನ್ನೆ.ನಂ.224/2017 ಕಲಂ:379 ಐಪಿಸಿ ಮತ್ತು ಕಲಂ:21 ಎಮ್‌‌ಎಮ್‌‌ಆರ್‌‌ಡಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಬಗ್ಗೆ ವರದಿ .
C¥sÀd®¥ÀÆgÀ oÁuÉ : ದಿನಾಂಕ 01-12-2017 ರಂದು 1:00 ಪಿ ಎಮ್ ಕ್ಕೆ ಧರ್ಮಣ್ಣ ತಂದೆ ಲಾಲಮಾನ್ ಭೋವಿ ಸಾ|| ಶೇಷಗಿರಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದನ್ನು ನೀಡಿದ್ದು, ಸದರ ದೂರಿನ ಸಾರಾಂಶವೇನೆಂದರೆ ನಾನು ಮೇಲೆ ಹೇಳಿದ ವಿಳಾಸದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, ಮೀನು ಹಿಡಿಯುವ ಕೆಲಸ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿರುತ್ತೇನೆ. ನನಗೆ ಒಟ್ಟು 1) ರಾದಾಬಾಯಿ 2) ಮಂಜುಬಾಯಿ 3) ಮಚೀಂದ್ರ 4) ಅಶೋಕ ಅಂತಾ 2 ಗಂಡು ಮತ್ತು 2 ಹೆಣ್ಣು ಮಕ್ಕಳಿರುತ್ತಾರೆ. ಹೆಣ್ಣು ಮಕ್ಕಳಿಬ್ಬರಿಗೂ ಮದುವೆ ಮಾಡಿಕೊಟ್ಟಿರುತ್ತೇನೆ. ಮಚೀಂದ್ರ ಈತನು ವಿದ್ಯಾಬ್ಯಾಸ ಮಾಡಿಕೊಂಡಿದ್ದು, ಅಶೋಕ ಈತನು ನನ್ನ ಜೋತೆಗೆ ಮೀನು ಹಿಡಿಯುವ ಕೆಲಸ ಮಾಡುತ್ತಾನೆ. ನನ್ನ ಮೊದಲನೆ ಮಗಳಾದ ರಾದಾಬಾಯಿ ವಯ|| 30 ವರ್ಷ ಇವಳಿಗೆ 15 ವರ್ಷಗಳ ಹಿಂದೆ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದ ದತ್ತು ತಂದೆ ಚಂದಪ್ಪ ಭೋವಿ ಈತನೊಂದಿಗೆ, ಕೋಳಕೂರ ಗ್ರಾಮದ ಬಸವಣ್ಣಪ್ಪನ ಗುಡಿಯ ಮುಂದೆ ಮದುವೆ ಮಾಡಿಕೊಟ್ಟಿದ್ದು, ಈಗ ಅವರಿಗೆ ಎರಡು ಗಂಡು ಮತ್ತು ಒಂದು ಹೆಣ್ಣು ಮಗು ಇರುತ್ತದೆ. ನನ್ನ ಮಗಳ ಗಂಡನ ಮನೆಯವರು ಈಗ ಒಂದು ವರ್ಷದ ಹಿಂದೆ ಒಂದು ಖಾಲಿ ಜಾಗ ಖರೀದಿ ಮಾಡಿದ್ದು, ಅದರ ಹಣ ಕೊಡುವುದಕ್ಕಾಗಿ ನನ್ನ ಮಗಳಿಗೆ ಅವಳ ಗಂಡ ಮತ್ತು ಅತ್ತೆ ಮಾವನವರು ಖರೀದಿ ಮಾಡಿದ ಜಾಗಕ್ಕೆ ಹಣ ಕೊಡಬೇಕು ನೀನು ನಿನ್ನ ತವರು ಮನೆಯಿಂದ ಹಣ ತಗೆದುಕೊಂಡು ಬಾ ಅಂತ ಹೇಳಿದ್ದಾರೆ ಎಂದು ನನ್ನ ಮಗಳು ನಮ್ಮ ಮನೆಗೆ ಬಂದಾಗ ನಮಗೆ ತಿಳಿಸಿರುತ್ತಾಳೆ. ನಾವು ಸಹ ಬಡವರಾಗಿದ್ದರಿಂದ ನಮ್ಮ ಹತ್ತಿರ ಹಣ ಇಲ್ಲ ಎಲ್ಲಿಂದ ತಂದು ಕೊಡೊಣು ಅಂತಾ ನನ್ನ ಮಗಳಿಗೆ ಹೇಳಿ ಕಳುಹಿಸಿರುತ್ತೇವೆ. ಆದರೆ ನನ್ನ ಮಗಳ ಗಂಡ ಮತ್ತು ಅತ್ತೆ ಮಾವ ಇವರು ನನ್ನ ಮಗಳಿಗೆ ನೀನು ಹಣ ತಗೆದುಕೊಂಡು ಬರೊವರೆಗೂ ನಮ್ಮ ಮನೆಗೆ ಬರಬೇಡ ಅಂತಾ ಹೊಡೆ ಬಡೆ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿ ನಮ್ಮ ಮಗಳನ್ನು ನಮ್ಮ ಮನೆಗೆ ಕಳುಹಿಸಿರುತ್ತಾರೆ. ನಮ್ಮ ಮಗಳು ನಮ್ಮ ಮನೆಗೆ ಬಂದರಿಂದ ನಮ್ಮ ಮಗಳನ್ನು ನ್ಯಾಯ ಪಂಚಾಯತಿ ಮಾಡಿ ಅವಳ ಗಂಡನ ಮನೆಗೆ ಬಿಟ್ಟು ಬರಬೇಕು ಎಂದು ನಿನ್ನೆ ದಿನಾಂಕ 30-11-2017 ರಂದು ಬೆಳಿಗ್ಗೆ ನಾನು ಮತ್ತು ನನ್ನ ಹೆಂಡತಿಯಾದ ತುಳಸಾಬಾಯಿ, ನನ್ನ ಮಗನಾದ ಅಶೋಕ ಹಾಗೂ ನಮ್ಮ ಸಂಭಂದಿಕರಾದ ಗನಸಿಂಗ ಭೋವಿ, ಚಂದಪ್ಪ ಭೋವಿ, ಅರ್ಜುನ ಭೋವಿ, ಮಹಾಧೇವ ಭೋವಿ, ತುಳಜಾರಾಮ ಭೋವಿ, ಭಗವಾನ ಭೋವಿ ಇನ್ನು ಕೆಲವು ಜನರು ಕೂಡಿ ನಮ್ಮ ಮಗಳನ್ನು ಕರೆದುಕೊಂಡು ನನ್ನ ಮಗಳ ಗಂಡನ ಮನೆಗೆ ಹೋಗಿರುತ್ತೇವೆ. ಅಲ್ಲಿ ನನ್ನ ಮಗಳಿಗೆ ಅವಳ ಗಂಡನಾದ ದತ್ತು ಹಾಗೂ ಮಾವ ಚಂದಪ್ಪ, ಅತ್ತೆ ರೂಪಾಬಾಯಿ ಮೂರು ಜನರು ನನ್ನ ಮಗಳಿಗೆ ನೀನು ಹಣ ತಗೆದುಕೊಂಡು ಬರೊವರೆಗೂ ನಮ್ಮ ಮನೆಗೆ ಬರಬೇಡಾ, ಅಲ್ಲಿ ಒರೆಗೂ ನಮಗೆ ಮುಖ ತೋರಿಸಬೇಡ ಎಂದು ಬೈಯುವುದು ಮಾಡಿರುತ್ತಾರೆ. ನ್ಯಾಯ ಪಂಚಾಯತಿ ಮಾಡಲು ಬಂದ ನಮ್ಮಲ್ಲೆರ ಮಾತನ್ನು ಸಹ ಕೇಳದೆ ನನ್ನ ಮಗಳಿಗೆ ಇಲ್ಲವಾದರೆ ನೀನು ಸಾಯಿ, ನಾವು ನಮ್ಮ ಮಗನಿಗೆ ಬೇರೆ ಮದವೆ ಮಾಡುತ್ತೇವೆ ಎಂದು ಹಾಗೂ ನನ್ನ ಮಗಳ ಗಂಡನು ಸಹ ನೀನು ಸತ್ತರೆ ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ಎಂದು ನನ್ನ ಮಗಳಿಗೆ ಸಾಯಿ ಸಾಯಿ ಅಂತಾ ಪದೆ ಪದೆ ಸಾಯಲು ದುಸ್ಪ್ರೇರಣೆಯನ್ನು ನೀಡಿರುತ್ತಾರೆ. ಸದರಿ ನನ್ನ ಮಗಳ ಗಂಡ ಮತ್ತು ಅತ್ತೆ ಮಾವ ಮೂರು ಜನರು ನ್ಯಾಯ ಪಂಚಾಯತಿಗೆ ಒಪ್ಪದೆ ನನ್ನ ಮಗಳ ಇಬ್ಬರು ಗಂಡು ಮಕ್ಕಳನ್ನು ಸಹ ನಮ್ಮ ಜೋತೆಗೆ ಕಳುಹಿಸದೆ ನಮ್ಮ ಮಗಳನ್ನು ಮನೆಯಿಂದ ತಳ್ಳಿ ಮನೆಯಿಂದ ಕಳುಹಿಸಿರುತ್ತಾರೆ. ಅದರಂತೆ ಇಂದು ದಿನಾಂಕ 01-12-2017 ರಂದು ನಸುಕಿನಜಾವ 05:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗನಾದ ಅಶೋಕ ಇಬ್ಬರು  ಮೀನು ಹಿಡಿಯಲು ಹೋಳೆಗೆ ಹೋಗಿರುತ್ತೇವೆ. ನನ್ನ ಹೆಂಡತಿಯಾದ ತುಳಸಾಬಾಯಿ ಇವಳು ನಮ್ಮ ಸಂಭಂದಿಕರಲ್ಲಿ ತೀರಿಕೊಂಡಿದ್ದರಿಂದ ಅವಳ ತೀರಿಕೊಂಡ ಸುದ್ದಿಗೆ ಹೋಗಿರುತ್ತಾಳೆ. ಮನೆಯಲ್ಲಿ ನನ್ನ ಮಗಳಾದ ರಾದಾಬಾಯಿ ಒಬ್ಬಳೆ ಅವಳ 06 ತಿಂಗಳ ಹೆಣ್ಣು ಮಗುವಿನೊಂದಿಗೆ ಮನೆಯಲ್ಲಿ ಒಬ್ಬಳೆ ಇದ್ದಿರುತ್ತಾಳೆ. ಬೆಳಿಗ್ಗೆ 08:30 ಗಂಟೆಗೆ ನಮ್ಮ ಅಣ್ಣ ತಮ್ಮಕಿಯ ನೀಲಪ್ಪ ಭೋವಿ ಈತನು ನಮಗೆ ಪೋನ ಮಾಡಿ, ನಿನ್ನ ಮಗಳು ರಾದಾಬಾಯಿ ಇವಳು ಮನೆಯಲ್ಲಿ ನೇಣುಹಾಕಿಕೊಂಡಿದ್ದಾಳೆ ಎಂದು ತಿಳಿಸಿದ ಮೇರೆಗೆ ನಾವು ಮನೆಗೆ ಬಂದು ನೋಡಲಾಗಿ ನನ್ನ ಮಗಳು ನಮ್ಮ ಮನೆಯ ಜಂತಿಗೆ ಇರುವ ಫ್ಯಾನಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಳು, ನಂತರ ನನ್ನ ಮಗಳನ್ನು ನೇಣಿನಿಂದ ಬಿಡಿಸಿ ಒಂದು ಖಾಸಗಿ ವಾಹನದಲ್ಲಿ ನನ್ನ ಮಗಳ ಶವವನ್ನು ಹಾಕಿಕೊಂಡು ಅಫಜಲಪೂರದ ಸರ್ಕಾರಿ ಆಸ್ಪತ್ರೆ ಶವಗಾರ ಕೋಣೆಯಲ್ಲಿ ತಂದು ಹಾಕಿರುತ್ತೇವೆ. ನನ್ನ ಮಗಳ ಗಂಡನಾದ ದತ್ತು ತಂದೆ ಚಂದಪ್ಪ ಭೋವಿ ಹಾಗೂ ಮಾವನಾದ ಚಂದಪ್ಪ ತಂದೆ ಮರೇಪ್ಪ ಭೋವಿ ಅತ್ತೆಯಾದ ರೂಪಾಬಾಯಿ ಗಂಡ ಚಂದ್ಪಪ ಭೋವಿ ಸಾ|| ಮೂರು ಜನರು ಕೋಳಕೂರ ತಾ|| ಜೇವರ್ಗಿ ಇವರು ನನ್ನ ಮಗಳಾದ ರಾದಾಬಾಯಿ ಗಂಡ ದತ್ತು ಭೋವಿ ವಯ|| 30 ವರ್ಷ ಜಾ|| ಭೋವಿ ಉ|| ಕೂಲಿ ಸಾ|| ಕೋಳಕೂರ ತಾ|| ಜೇವರ್ಗಿ ಹಾ|| || ಶೇಷಗೀರಿ ಇವಳಿಗೆ ತವರು ಮನೆಯಿಂದ ಹಣ ತಗೆದುಕೊಂಡು ಬಾ ಅಂತಾ ಹೊಡೆ ಬಡೆ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದು, ನನ್ನ ಮಗಳು ತವರು ಮನೆಯಿಂದ ಹಣ ತಗೆದುಕೊಂಡು ಬರಲು ಒಪ್ಪದೆ ಇದ್ದಾಗ ಅವಳನ್ನು ಸಾಯಿ ಸಾಯಿ ಅಂತಾ ಆತ್ಮಹತ್ಯ ಮಾಡಿಕೊಳ್ಳುವಂತೆ ದುಸ್ಪ್ರೇರಣೆ ನೀಡಿದ್ದರಿಂದ ನನ್ನ ಮಗಳು ನಮ್ಮ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಇಂದು ದಿನಾಂಕ 01-12-2017 ರಂದು ಬಳಿಗ್ಗೆ 05:00 ಗಂಟೆಯಿಂದ ಬೆಳಿಗ್ಗೆ 08:30 ಗಂಟೆಯ ಮದ್ಯದಲ್ಲಿ ನಮ್ಮ ಮನೆಯ ಜಂತಿಗೆ ಇರುವ ಫ್ಯಾನಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಕಾರಣ ನನ್ನ ಮಗಳು ಸಾಯುವಂತೆ ದುಸ್ಪ್ರೇರಣೆ ನೀಡಿದ ನನ್ನ ಮಗಳ ಗಂಡ ಹಾಗೂ ಗಂಡನ ಮನೆಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು  ಅಂತಾ ಕೊಟ್ಟ ಹೇಳಿಕೆ ಫೀರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .
C¥sÀd®¥ÀÆgÀ oÁuÉ : ದಿನಾಂಕ 01-12-2017  ರಂದು 3.30 ಪಿ ಎಮ್ ಕ್ಕೆ ನಮ್ಮ ಠಾಣೆಯ ಶ್ರೀ ರಮೇಶ ಸಿಪಿಸಿ 596 ರವರು ಠಾಣೆಗೆ ಹಾಜರಾಗಿ ವರದಿ ನೀಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ ಇಂದು ದಿನಾಂಕ 01-12-2017 ರಂದು 9:30 ಎ ಎಮ್ ಕ್ಕೆ ತಮ್ಮ ಆದೇಶದಂತೆ ಅಫಜಲಪೂರ ಪೊಲೀಸ ಠಾಣಾ ಸುಧಾರಿತ ಬೀಟ್ ನಂ 40 ನೇದ್ದರ ಗೌರ (ಬಿ) ಗ್ರಾಮಕ್ಕೆ  ಗಸ್ತು ಕರ್ತವ್ಯ ಕುರಿತು  ಠಾಣೆಯಿಂದ ಹೊರಟು, ಗ್ರಾಮದ ಹನುಮಾನ ದೇವರ ದೇವಸ್ಥಾನದ ಹತ್ತಿರ 11.30 ಎಎಮ್ ಕ್ಕೆ ಹೋದಾಗ ನಮ್ಮ ಬಾತ್ಮಿದಾರರು ತಿಳಿಸಿದ್ದೆನೆಂದರೆ  ಗ್ರಾಮದ 1) ಶ್ರೀಕಾಂತ ತಂದೆ ಪುಂಡಪ್ಪ ನಿಂಬರ್ಗಿ ವ||34 ವರ್ಷ ಜಾ|| ಕಬ್ಬಲಿಗ ಉ||ಒಕ್ಕಲುತನ ಸಾ|| ಗೌರ(ಬಿ) ತಾ||ಅಫಜಲಪೂರ  ಇವರು  ಗ್ರಾಮದಲ್ಲಿನ ಸಾರ್ವಜನಿಕರಿಗೆ ಹೆದರಿಸುತ್ತಾ ದಬ್ಬಾಳಿಕೆ ತೊರಿಸಿ ಗ್ರಾಮದ ಇತರರಿಗೆ ಹೆದರಿಸಿ ಗ್ರಾಮದಲ್ಲಿ ಸಾರ್ವಜನಿಕರ ನೆಮ್ಮದಿ ಹಾಳಾಗುವ & ಜಗಳ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಗ್ರಾಮದಲ್ಲಿ ಅನದಿಕೃತ ಚಟುವಟಿಕೆಗಳನ್ನು ಮಾಡಿ ಸಾರ್ವಜನಿಕರಿಗೆ ಹೆದರಿಸುವ ಮತ್ತು ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವ ಸಂಭವ ಇರುತ್ತದೆ. ಹಾಗೂ ಗ್ರಾಮದಲ್ಲಿ ಅಹಿತಕರ ಘಟನೆಗಳು ಜರಗುವ ಸಂಭವ ಇರುತ್ತದೆ ಅಂತಾ ಗ್ರಾಮದ ಬಾತ್ಮಿದಾರರು ತಿಳಿಸಿರುತ್ತಾರೆ.  ಇವತನಿಂದ ಅಹಿತಕರ ಘಟನೆಗಳು ಜರುಗಿ ಗ್ರಾಮದಲ್ಲಿ ಸಾರ್ವಜನಿಕರ ಶಾಂತಿ ಭಂಗವಾಗುವ ಸಂಭವ ಇರುವುದರಿಂದ ಹಾಗೂ ಸದರಿಯವನು ನಮ್ಮ ಠಾಣೆಯ ಚುರುಕಾದ ರೌಡಿ ಆಸಾಮಿ ಇರುವದರಿಂದ ಮರಳಿ ಠಾಣೆಗೆ  ಬಂದು 3:30 ಪಿ.ಎಂ ಕ್ಕೆ ಸದರಿಯವನ ವಿರುದ್ದ ಕಾನೂನು ಕ್ರಮ ಜರೂಗಿಸಬೇಕು ಎಂದು ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .

C¥sÀd®¥ÀÆgÀ oÁuÉ : ದಿನಾಂಕ 01/12/2017 ರಂದು 6.00 ಪಿಎಮ್ ಕ್ಕೆ  ಫೀರ್ಯಾದಿದಾರನಾದ ಶ್ರೀ ಗುರಣ್ಣ ತಂದೆ ಬನ್ನೇಪ್ಪ ಪೂಜಾರಿ ಸಾ|| ಮಲ್ಲಾಬಾದ ರವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಂಶವೇನೆಂದರೆ ನಾನು ಮೇಲ್ಕಾಣಿಸಿದ ವಿಳಾಸದಲ್ಲಿ ಕೂಲಿಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ  ಇದ್ದುಸ ಜೀವನ ಸಾಗಿಸುತ್ತೇನೆ.ನಮಗೆ ಮೂರು ಜನ ಮಕ್ಕಳಾದ 1) ತ್ರಿವೇಣಿ 2) ಪೂಜಾ 3) ಓಂಕಾರ ವ||09 ವರ್ಷ ಅಂತ ಇರುತ್ತಾರೆ ದಿನಾಂಕ 25/11/2017 ರಂದು ಬೆಳಿಗ್ಗೆ ನಾನು ನನ್ನ ಹೆಂಡತಿ ಕೂಲಿಕೆಲಸಕ್ಕೆ ಹೊಲಕ್ಕೆ ಹೊಗುವಾಗ ನಮ್ಮ ಮಗ ಓಂಕಾರ ಈತನು ಹೊಲಕ್ಕೆ  ಬರುತ್ತೇನೆ ಅಂತ ಜಗಳ ಮಾಡುತಿದ್ದರಿಂದ ನಾವು ನಮ್ಮ ಸಂಗಡ ನಮ್ಮ ಮಗನಿಗೆ ಹೊಲಕ್ಕೆ ಕರೆದುದೊಂಡು ಹೋಗಿ ಮರಳಿ ನಡೆದುಕೊಂಡು ಮನೆಗೆ ಬರುವಾಗ ಸಾಯಂಕಾಲ 6.30 ಗಂಟೆ ನಾವು ನಮ್ಮ ಗ್ರಾಮದ ಕಲಬುರಗಿ ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಇದ್ದಾಗ ನಮ್ಮ ಮಗ ಓಂಕಾರ ಈತನು ನಮಗಿಂತ ಸ್ವಲ್ಪ ಮುಂದೆ ಹೋಗುತಿದ್ದನು ನಮ್ಮ  ಎದುರಿನಿಂದ ಒಂದು ತವೇರಾ ವಾಹನದ ಚಾಲಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ತನ್ನ ವಾಹನ ಚಲಾಯಿಸಿಕೊಂಡು ಬಂದು ನಮ್ಮ ಮಗನಿಗೆ ಡಿಕ್ಕಿ ಪಡಿಸಿದ ನಾವು ಚಿರಾಡುತ್ತಾ ನಮ್ಮ ಮಗನ ಹತ್ತಿರ ಓಡಿ ಹೋಗುವಾಗ ಸದರಿ ವಾಹನದ ಚಾಲಕ ತನ್ನ ತವೇರಾ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು ನಮ್ಮ  ಮಗನಿಗೆ ನೋಡಲಾಗಿ ತಲೆಗೆ ಭಾರಿ ರಕ್ತಗಾಯ ಮೈ ಕೈ ಗೆ ತರಚಿತ ಗಾಯಗಳಾಗಿ ನಮ್ಮ ಮಗನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲಾ ಆಗ  ಅಲ್ಲೆ  ಲಕ್ಷ್ಮಿ ಗುಡಿ ಹತ್ತಿರ ಕುಳಿತಿದ್ದ ನಮ್ಮ ಗ್ರಾಮದ ಶರಣಪ್ಪ ತಂದೆ ಈರಪ್ಪಾ ಪೂಜಾರಿ, ಲಕ್ಕಪ್ಪ ತಂದೆ ಶರಣಪ್ಪ ಪೂಜಾರಿ ರವರು ಓಡಿ ಬಂದಿದ್ದು ನಮ್ಮ ಮಗನಿಗೆ ಅಫಘಾತ ಪಡಿಸಿದ ವಾಹನದ ನಂಬರ ನೋಡಲಾಗಿ ಎಮ್ ಹೆಚ್ 14 ಸಿಎಕ್ಸ 7993 ಅಂತ ಇದ್ದಿರುತ್ತದೆ ನಾವೇಲ್ಲರು ಒಂದು ಖಾಸಗಿ ವಾಹನದಲ್ಲಿ ನನ್ನ ಮಗನಿಗೆ ಹಾಕಿಕೊಂಡು ಕಲಬುರಗಿಯ ವಾತ್ಸಲ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಸೊಲಾಪೂರದ ಗಂಗಾಮಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಈಗ ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಕಾರಣ ತವೇರಾ ವಾಹನ ನಂಬರ ಎಮ್ ಹೆಚ್ 14 ಸಿಎಕ್ಸ 7993 ನೇದ್ದರ ಚಾಲಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ವಾಹನ ಚಲಾಯಿಸಿ ನನ್ನ ಮಗನಿಗೆ ಡಿಕ್ಕಿ ಪಡಿಸಿ ತಲೆಗೆ ಭಾರಿ ರಕ್ತಗಾಯ ಹಾಗು ತರಚಿದ ಗಾಯ ಪಡಿಸಿದವನ ಮೇಲೆ  ಕಾನೂನಿನ ಕ್ರಮ ಜರುಗಿಸಬೇಕು ಅಂತ ಹೇಳಿಕೆ ನೀಡಿದ್ದರ ಮೇರೆಗೆ ಠಾಣೆ ಗುನ್ನೆ ನಂ 311/2017 ಕಲಂ 279, 337, 338 ಐಪಿಸಿ ಸಂ 187 ಐಎಮ್ ವ್ಹಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .

01 December 2017

KALABURAGI DISTRICT REPORTED CRIMES.

 ಗ್ರಾಮೀಣ ಠಾಣೆ : ದಿನಾಂಕ 30/11/17 ರಂದು ರಾತ್ರಿ 10-45 ಗಂಟೆಗೆ ಫಿರ್ಯಾದಿ ಮತ್ತು ಆತನ ಹತ್ತಿರ ವೇಟರ ಕೆಲಸ ಮಾಡುವ ಶಿವಶಂಕರ  ಮಡಕಿ ಇಬ್ಬರು ತಮ್ಮ ತಮ್ಮ ಮೋಟಾರ ಸೈಕಲ ಮೇಲೆ ಮಿರ್ಚಿ ಗೋದಾಮ ಹಿಂದುಗಡೆ ಇರುವ ಮೊಯೀನ ಫಂಕ್ಷನ ಹಾಲಕ್ಕೆ ಹೋಗಿ ಶಫೀ ಅಣ್ಣನ ಮಗನ ಮದುವೆಗೆ ಹಾಜರಾಗಿ ಊಟ ಮಾಡಿಕೊಂಡು ಇಬ್ಬರು ಮನೆಗೆ ಹೋಗುವ ಕುರಿತು ಫಂಕ್ಷನ ಹಾಲದಿಂದ ನಮ್ಮ ನಮ್ಮ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಮಿರ್ಚಿ ಗೋದಾಮ ಹತ್ತಿರ ದಿನಾಂಕ 01/12/17 ರಂದು ರಾತ್ರಿ 12-25 ಗಂಟೆ ಸುಮಾರಿಗೆ ಬಂದಾಗ ಶಿವಶಂಕರ ಇತನು ಲಂಗರ ಹನುಮಾನ ಕಾಲನಿಯಲ್ಲಿ ಇರುವ ತನ್ನ ಮನೆಯ ಕಡೆಗೆ ಹೋದನು. ನಾನು ನಮ್ಮ ಮನೆಗೆ ಹೋಗುವ ಕುರಿತು ನನ್ನ TVS XL Heavy Duty KA 32 EB 3457 ಮೇಲೆ ಒಬ್ಬನೇ ಕುಳಿತುಕೊಂಡು ಹೊರಟಿದ್ದು, ರಾತ್ರಿ 12-35 ಗಂಟೆ ಸುಮಾರಿಗೆ ಹೀರಾಪೂರ ರೇಲ್ವೆ ಬ್ರೀಡ್ಜ ಅಂಡರ ಬ್ರೀಡ್ಜ ಒಳಗೆ ಹೋಗಬೇಕೆಂದು ಹೊರಟಾಗ ಆಗ ಹಿಂದಿನಿಂದ ಒಂದು ಮೋಟಾರ ಸೈಕಲ ಮೇಲೆ ಮೂರು ಜನರು ಕುಳಿತುಕೊಂಡು ನನ್ನ ಟಿವಿಎಸಗೆ ಗಾಡಿ ಅಡ್ಡಗಟ್ಟಿ ನಿಲ್ಲಿಸಿದರು. ಮೂರು ಜನರು ಮೋಟಾರ ಸೈಕಲ ಮೇಲಿಂದ ಕೆಳೆಗೆ ಇಳಿದರು. ಮೂರು ಜನರು ಮಂಕಿ ಕ್ಯಾಪ ಹಾಕಿಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು. ಅವರಿಗೆ ನೋಡಿ ಹೆದರಿದೆನು. ಅವರಲ್ಲಿ ಒಬ್ಬನು ನನ್ನ TVS XL Heavy Duty KA 32 EB 3457 ಅ:ಕಿ: 25,000/- ರೂ.  ಮೇಲಿಂದ  ಕೆಳೆಗೆ ಇಳಿಸಿ ಜಬರದಸ್ತಿಯಿಂದ ನನ್ನ ಗಾಡಿಯ ಮೇಲೆ ಕುಳಿತುಕೊಂಡೆನು. ಇನ್ನಿಬ್ಬರು ನನ್ನ ಎದೆಯ ಮೇಲೆ ಅಂಗಿ ಹಿಡಿದು ಹಿಂದಿಯಲ್ಲಿ ಚಲ್ಲ್ ಅಂತಾ ಅನ್ನುತ್ತಾ ಸ್ವಲ್ಪ ದೂರದ ವರೆಗೆ ಜಬರದಸ್ತಿಯಿಂದ ಎಳೆದುಕೊಂಡು ಹೋಗಿ ಒಬ್ಬನು ನನ್ನ ಎದೆಯ ಮೇಲಿನ ಕಿಸೆಯಲ್ಲಿದ್ದ ಮೈಕ್ರೋಮಾಕ್ಸ ಮೋಬಾಯಿಲ್ ಅ:ಕಿ:500/- ರೂ. ಅದರ ಒಳಗಡೆ ಇದ್ದ ಎರಟೆಲ್ ಸಿಮ್ ನಂಬರ 9632214268 ನೇದ್ದು ಜಬರದಸ್ತಿಯಿಂದ ಕಸಿದುಕೊಂಡೆನು. ಮತ್ತು ಬಲ ಮತ್ತು ಎಡ ಪ್ಯಾಂಟಿನ ಕಿಸೆ ಚೆಕ್ಕ ಮಾಡಲು ಯಾವುದೇ ಹಣ ಸಿಗಲಿಲ್ಲಾ., ಇನ್ನೊಬ್ಬ ನನ್ನ  ಹಿಂದಿನ ಪ್ಯಾಂಟಿನ ಕಿಸೆಯಲ್ಲಿ ಜಬರದಸ್ತಿಯಿಂದ ಕೈ ಹಾಕಿ ಹಿಂದಿನ ಕಿಸೆಯಲ್ಲಿದ್ದ ನಗದು ಹಣ 3420/- ರೂ. ಕಸಿದುಕೊಂಡೆನು. ನಂತರ ಅವರಿಬ್ಬರು ನನಗೆ ಅಲ್ಲೇ ಬಿಟ್ಟು ತಾವು ತಂದಿದ್ದ ಮೋಟಾರ ಸೈಕಲ ಹತ್ತಿರ ಹೋದಾಗ ನನ್ನ ಟಿವಿಎಸ ಗಾಡಿಯ ಮೇಲೆ ಕುಳಿತು ನನ್ನ ಟಿವಿಎಸ ಚಾಲು ಮಾಡಿದನು. ಮತ್ತು ನನ್ನ ಹತ್ತಿರವಿದ್ದ  ಮೋಬಾಯಿಲ ಮತ್ತು ಹಣ ಕಸಿದುಕೊಂಡವರು ತಾವು ತಂದಿದ್ದ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಹೀರಾಪೂರ ಕ್ರಾಸ ಕಡೆಗೆ ಹೋದರು. ಸದರಿ ಮೂರು ಅಪರಿಚಿತರ ಜನರು ಅಂದಾಜ 20 ರಿಂದ 25 ವರ್ಷ ವಯಸ್ಸಿನವರಿದ್ದು, ಪ್ಯಾಂಟು,ಷರ್ಟು ಧರಿಸಿರುತ್ತಾರೆ. ಅವರು ನನಗೆ ಹಿಂದಿಯಲ್ಲಿ ಚಲ್ಲ್ ಅಂತಾ  ಅಂದಿದ್ದರಿಂದ ಅವರು ಹಿಂದಿ ಭಾಷೆ ಮಾತಾಡುತ್ತಾರೆ ಎಂದು ಗೊತ್ತಾಗಿರುತ್ತದೆ.. ಕಾರಣ ನನ್ನ ಟಿವಿಎಸ ಗಾಡಿ ಹೀಗೆ ಒಟ್ಟು ಅ:ಕಿ: 28,920/- ರೂ. ನೇದ್ದವುಗಳು ಜಬರದಸ್ತಿಯಿಂದ ಕಸಿದುಕೊಂಡು ಹೋದವರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ನನ್ನ ಮೋಬಾಯಿಲ್,ಹಣ, ಟಿವಿಎಸ ಗಾಡಿ ಮರಳಿ ಕೊಡಿಸಬೇಕೆಂದು ಎಂದು ಕೊಟ್ಟ ಇತ್ಯಾದಿ ಹೇಳಿಕೆ ಪಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರಿದಿ ಇರುತ್ತದೆ.
±ÀºÁ¨ÁzÀ £ÀUÀgÀ  oÁuÉ : ದಿನಾಂಕಃ 30/11/2017 ರಂದು  ಸಾಯಂಕಾಲ 5-00 ಗಂಟೆಗೆ ನಾನು ಕಚೇರಿಯಲ್ಲಿದ್ದಾಗ ನನಗೆ  ಖಚಿತ ಬಾತ್ಮಿ ಬಂದಿದ್ದೇನೆಂದರೆ  ಶಹಾಬಾದ ನಗರದ ಬಸವೇಶ್ವರ ನಗರದಲ್ಲಿ  ಮಟಕಾ ನಂಬರೆ ಬರೆದುಕೊಳ್ಳುತ್ತಿರುವ  ಬಗ್ಗೆ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೆಬರ ಮಾರ್ಗದರ್ಶನದಲ್ಲಿ ಆರಕ್ಷಕ ಉಪಾಧೀಕ್ಷಕರ ಕಚೇರಿಯ ವಿಶೇಷ ದಳದ ಸಿಬ್ಬಂದಿಯವರಾದ 1] ಶ್ರೀ ಸುಬಾಷ ಹಚ.ಸಿ 178 2] ಶ್ರೀ ಬಸವರಾಜ ಪಿಸಿ 705 3] ಶ್ರೀ ಗಜಾನಂದ  ಪಿಸಿ 821  ಪಂಚರಾದ 1)ಶ್ರೀ ಮನೋಜಕುಮಾರ ತಂದೆ ದೇವದಾಸ :43 :ಖಾಸಗಿ ಕೆಲಸ ಸಾ:ಹೆಚ.ಎಂ..ಪಿ ಕಾಲೋನಿ ಶಹಾಬಾದ 2)ಶ್ರೀ ದೇವಿಂದ್ರ ತಂದೆ ಶರಣಪ್ಪ ನಗನೂರ ವಃ45ವರ್ಷ ಉಃವ್ಯಾಪಾರ ಸಾಃಹನುಮಾನ ನಗರ ಶಹಾಬಾದ ರವರೊಂದಿಗೆ ಎಲ್ಲರೂ ಕೂಡಿ ಒಂದು  ಖಾಸಗಿ ವಾಹನದಲ್ಲಿ ಠಾಣೆಯಿಂದ ಇಂದು 5-45 ಗಂಟೆಗೆ ಹೋರಟು  ಬಸವೇಶ್ವರ ನಗರದ ಅಂಬಿಗರ ಚೌಡಯ್ಯಾ ಕಟ್ಟೆಯ ಹತ್ತಿರ ಹೋಗಿ ನೋಡಲಾಗಿ ಕಟ್ಟೆಯ ಮೇಲೆ  ಒಬ್ಬ ವ್ಯಕ್ತಿಯು ಕುಳಿತು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳೂತ್ತಾ ಒಂದು ರೂಪಾಯಿ 80 ರೂ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಮೋಸದಿಂದ ಹಣ ಪಡೆದುಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಇಂದು ಸಾಯಂಕಾಲ 6-00 ಗಂಟೆಗೆ ನಾವು ಪಂಚರೊಂದಿಗೆ ದಾಳಿ ಮಾಡಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನಿಗೆ ಹಿಡಿದು ಅವನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಭೀಮಶಾ ತಂದೆ ಶಿವಾಜಿ ಗಜ್ಜಿನಮನಿ :38  :ಖಣಿಕೆಲಸ ಜಾ:ವಡ್ಡರ ಸಾ:ಬಸವೇಶ್ವರ ನಗರ ಶಹಾಬಾದ. ಅಂತಾ ತಿಳಿಸಿದನು  ಸದರಿವನಿಗೆ ಅಂಗ ಶೋದನೆ ಮಾಡಲಾಗಿ ಅವನಿಂದ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ 15,560/- ರೂ ಹಾಗೂ 1 ಮಟಕಾ ನಂಬರ ಬರೇದ ಚೀಟಿ, ಒಂದು ಬಾಲ ಪೆನ್ನು  ಮತ್ತು ಸ್ಯಾಮಸಂಗ್  ಕಂಪನಿಯ ಮೋಬೈಲ ದೊರೆತ್ತಿದ್ದು ನಂತರ  ಅಲ್ಲಿ ಮಟಕಾ ನಂಬರ ಬರೆಯಿಸಲು ಬಂದ ವಿಜಯಕುಮಾರ ತಂದೆ ನಾಗಪ್ಪ ತರಪಲ್ :45 ಸಾ:ಶಹಾಬಾದ ಇತನಿಗೆ ವಿಚಾರಿಸಲು ಸದರಿಯವನು ತಿಳಿಸಿದ್ದೇನೆಂದರೆ ಸದರಿ ಭೀಮಶ್ಯಾ ಗಚ್ಚಿನಮನಿ  ಇತನು ಸುಮಾರು ದಿವಸಗಳಿಂದ ಮಟಕಾ ನಂಬರ ಬರೆದುಕೊಳ್ಳುತ್ತಿದ್ದು ಹಿಂದೆ ನಾನು ಬರೆಯಿಸಿದ ಮಟಕಾ ನಂಬರ ಬಂದಿದ್ದು 01 ರೂಗೆ 80 ರೂ ಕೊಡುತ್ತೇನೆ ಅಂತಾ ತಿಳಿಸಿದ್ದು ಪ್ರಕಾರ ನಿನ್ನೆ ದಿನಾಂಕಃ 29/11/2017 ರಂದು 7 ನಂಬರಿಗೆ 20 ರೂ ಮಟಕಾ ನಂಬರ  ಬರೆಸಿದ್ದೇನು  ನಂಬರ ಹತ್ತಿದರು ಕೂಡ ನನಗೆ  ಹಣ ಕೊಡದೇ & ತಿಳಿಸದೇ ತಾನೆ ಸ್ವಂತಕ್ಕೆ ಬಳಸಿಕೊಂಡು  ನನಗೆ  ಮೋಸ ಮಾಡಿರುತ್ತಾನೆ   ಅಂತಾ ತಿಳಿಸಿದನು. ನಂತರ ಪಂಚರ ಸಮಕ್ಷಮದಲ್ಲಿ  ಇಂದು ದಿನಾಂಕಃ 30/11/2017  ರಂದು  6-00 ಗಂಟೆಯಿಂದ 7-00  ಗಂಟೆಯವರಿಗೆ  ಜಪ್ತಿ ಪಂಚನಾಮೆಯನ್ನು ಕೈಗೊಂಡು ಜಪ್ತಿ ಪಂಚನಾಮೆ, ಮುದ್ದೆಮಾಲು  ಅರೋಪಿತನೊಂದಿಗೆ ಬಂದಿದ್ದು ಸದರಿವನ ವಿರುದ್ದ ಸೂಕ್ತ ಕ್ರಮ ಜರುಗಿಸ ಬಗ್ಗೆ ವರಿದಿ ಇರುತ್ತದೆ.
C¥sÀd®¥ÀÆgÀ oÁuÉ : ದಿನಾಂಕ 30.11.2017 ರಂದು 6.20 ಎ.ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಎರಡು ಜನ ಆರೋಪಿತರೊಂದಿಗೆ ಬಂದು ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೇನೆಂದರೆ ದಿನಾಂಕ 30-11-2017 ರಂದು ಬೆಳಿಗ್ಗೆ 06:00 ಗಂಟೆಗೆ ಹೆಚ್ ಸಿ-412 ಯಲ್ಲಪ್ಪ ರವರನ್ನು ಸಂಗಡ ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಮಾಡುತ್ತಾ 6:10 ಎ ಎಮ್ ಕ್ಕೆ ಅಫಜಲಪೂರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಬಂದಾಗ ಬಸ್ ನಿಲ್ದಾಣದ ಮುಂದೆ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ ಜನರಿಗೆ ಹಾಗೂ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಅಸಬ್ಯವಾಗಿ ಬೈಯುವುದು ಅಸಬ್ಯ ರೀತಿಯಿಂದ ವರ್ತಿಸುವುದು, ಹಾಗೂ ಒದರಾಡುವುದುಕೂಗಾಡುವುದು ಮಾಡಿ ಸಾರ್ವಜನಿಕರ ಶಾಂತಿ ಭಂಗವಾಗುವಂತೆ ವರ್ತಿಸುತ್ತಿದ್ದರು ಮತ್ತು ಸದರಿಯವರು ಬಸ್ ನಿಲ್ದಾಣದ ಆವರಣದಲ್ಲಿ ಜನರಿಗೆ ನಾವು ಇದೇ ತಾಲೂಕಿನವರು ಇದ್ದಿವಿ, ಯಾರು ಏನು ಮಾಡುತ್ತಾರೆ ನೋಡಿಕೊಳ್ಳುತ್ತೆವೆ ಎಂದು ಜನರಿಗೆ ಭಯವುಂಟಾಗುವಂತೆ ವರ್ತಿಸುತ್ತಿದ್ದರು. ಸದರಿಯವರು ಸಾರ್ವಜನಿಕರ ಶಾಂತಿ ಭಂಗ ಮಾಡುತ್ತಿದ್ದರಿಂದ ಅವರ ಹತ್ತಿರ ಹೋಗಿ ಅವರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಸಾಯಿಬಣ್ಣ ತಂದೆ ಸಿದ್ರಾಮ ಚಿಕ್ಕಮಣೂರ ವ||33 ವರ್ಷ ಜಾ||ಕಬ್ಬಲಿಗೇರ ಉ||ಒಕ್ಕಲುತನ ಸಾ||ಮಣೂರ 2) ಕುಪೇಂದ್ರ ತಂದೆ ಗೋಪಾಲ ಜಮಾದಾರ ವ||28 ವರ್ಷ ಜಾ||ಕಬ್ಬಲಿಗೇರ ಉ||ಒಕ್ಕಲುತನ ಸಾ||ಕೂಡಿಗಾನೂರ ಅಂತಾ ಏರು ಧ್ವನಿಯಲ್ಲಿ ಹೇಳಿದರು. ಸದರಿಯವರನ್ನು ಅದೇ ಸ್ಥಳದಲ್ಲಿ ಬಿಟ್ಟಲ್ಲಿ ಪುನ ಸಾರ್ವಜನಿಕರ ಶಾಂತಿ ಭಂಗವುಂಟು ಮಾಡುತ್ತಿದ್ದರಿಂದ ಸದರಿಯವರನ್ನು ಹಿಡಿದುಕೊಂಡು ಠಾಣೆಗೆ 6.20 ಎ ಎಮ್ ಕ್ಕೆ ತಂದು ಸದರಿಯವರ ವಿರುದ್ದ ಕಾನೂನು ಕ್ರಮ ಜರೂಗಿಸ ಬೇಕು ಎಂದು ಸೂಚಿಸಿ ವರದಿ ಸಲ್ಲಿಸಿದ್ದ ಮೇರೆಗೆ ಠಾಣೆ ಗುನ್ನೆ ನಂ 307/2017 ಕಲಂ 110 (& ಜಿ)  ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲು ಬಗ್ಗೆ ವರಿದಿ ಇರುತ್ತದೆ. .
C¥sÀd®¥ÀÆgÀ oÁuÉ : ದಿನಾಂಕ 30-11-2017 ರಂದು 5:30 ಪಿ ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿತನೊಂದಿಗೆ ಮುದ್ದೆ ಮಾಲು ಮತ್ತು ವರದಿ ಹಾಜರ ಪಡಿಸಿದ್ದು, ಸದರ ವರದಿ ಸಾರಾಂಶವೇನೆಂದರೆ ದಿನಾಂಕ 30-11-2017 ರಂದು 4.00 ಪಿಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ, ಸುಧಾರಿತ ಗಸ್ತು ಸಂ 07 ಅಫಜಲಪೂರ ಪಟ್ಟಣದ ಬೀಟ್ ಸಿಬ್ಬಂದಿಯಾದ ಗುರುರಾಜ ಸಿಪಿಸಿ-1087 ರವರು ಮಾಹಿತಿ ತಿಳಿಸಿದ್ದೆನೆಂದರೆ ಅಫಜಲಪೂರ ಪಟ್ಟಣದ ಡಿಗ್ರಿ ಕಾಲೇಜ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ್ದು ನಾನು ಇಬ್ಬರು ಪಂಚರಾದ 1) ಚಂದಪ್ಪ ತಂದೆ ರಮೇಶ ಕೋಳಿಗೇರಿ 2) ಸೊಂದಪ್ಪ ತಂದೆ ಪರಮೇಶ್ವರ ಹೊಸಮನಿ ಸಾ|| ಇಬ್ಬರು ಅಫಜಲಪೂರ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ ನಾನು ಮತ್ತು ಸಿಬ್ಬಂದಿಯವರಾದ ರುರುರಾಜ ಸಿಪಿಸಿ-1087, ಶಿವಪ್ಪ ಸಿಹೆಚ್ ಸಿ-547, ಶಿವಪುತ್ರ ಸಿಪಿಸಿ-1139 ಕೂಡಿಕೊಂಡು ಪಂಚರೊಂದಿಗೆ 4.10 ಪಿಎಮ್ ಕ್ಕೆ ನಮ್ಮ ಇಲಾಖಾ ವಾಹನದಲ್ಲಿ ಹೊರಟು.4:15 ಪಿ ಎಮ್ ಕ್ಕೆ ಅಫಜಲಪೂರ ಡಿಗ್ರಿ ಕಾಲೇಜ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಡಿಗ್ರಿ ಕಾಲೇಜ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾನು ಹಾಗೂ ನಮ್ಮ ಸಿಬ್ಬಂದಿ ಜನರು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಲ್ಲಿಕಾರ್ಜುನ ತಂದೆ ವಿಠ್ಠಲ ಕಾಮಗೊಂಡ ವ||60 ವರ್ಷ ಜಾ||ಮಾಳಿ ಉ||ಒಕ್ಕಲುತನ ಸಾ||ಲಿಂಬಿತೋಟ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 500/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವುಸದರಿಯವುಗಳನ್ನು ಪಂಚರ ಸಮಕ್ಷಮ 4:20 ಪಿ.ಎಮ್ ದಿಂದ 5:20 ಪಿಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು, ನಂತರ ಸದರಿ ಆರೋಪಿತನೊಂದಿಗೆ ಮರಳಿ ಠಾಣೆಗೆ 5:30  ಪಿ.ಎಮ್ ಕ್ಕೆ ಬಂದು ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನಿಡಿದ್ದರ ಮೇರೆಗೆ ಠಾಣೆ ಗುನ್ನೆ ನಂ 308/2017 ಕಲಂ 78 (3) ಕೆ.ಪಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರಿದಿ ಇರುತ್ತದೆ.

gÁWÀªÉÃAzÀæ £ÀUÀgÀ oÁuÉ : ದಿನಾಂಕ:30/11/2017 ರಂದು ಮಧ್ಯಾನ 2.00 ಗಂಟೆಗೆ ಸರ್ಕಾರಿ ತರ್ಫೇಯಾಗಿ ಗಂಗಾಧರ ಸಿಪಿಸಿ-642 ಆರ್‌‌.ಜಿ ನಗರ ಠಾಣೆರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಮತ್ತು ಪಿಸಿ-1241 ಇಬ್ಬರೂ ಕೂಡಿಕೊಂಡು ಈದ್ ಮೀಲಾದ ಹಬ್ಬದ ಪ್ರಯುಕ್ತ ಇಂದು ದಿನಾಂಕ 30.11.2017 ರಂದು ಬೆಳಗ್ಗೆ 10.00 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಕರ್ತವ್ಯ ಮಾಡುತ್ತಾ ಲಾಲಗೇರಿ ಕ್ರಾಸ, ಬ್ರಹ್ಮಪೂರ, ಸಂತೋಷ ಕಾಲೋನಿ, ಕಾಳೆ ಲೇಔಟ, ಮಾಣಿಕೇಶ್ವರಿ ಕಾಲೋನಿ, ವಿಶ್ವರಾಧ್ಯ ಕಾಲೋನಿ ಪೆಟ್ರೋಲಿಂಗ ಮಾಡುತ್ತಾ ಮಧ್ಯಾನ 1.30 ಗಂಟೆಗೆ ಖದೀರ ಚೌಕ ಹತ್ತಿರ ಹೋದಾಗ ಸಾರ್ವಜನಿಕರಿಂದ ತಿಳಿದು ಬಂದ ಮಾಹಿತಿ ಏನೆಂದರೆ, 3-4 ದಿವಸಗಳಿಂದ ಮಹೇಶ, ಸಾಗರ ಇವರುಗಳು ಸಾರ್ವಜನಿಕರಿಗೆ ತೊಂದರೆ ಕೊಡುವದು ಭಯ ಹುಟ್ಟಿಸುವದು ಮಾಡುತ್ತಿದ್ದಾರೆ ಅಂತಾ ತಿಳಿದು ಬಂದ ಮೇರೆಗೆ ಖದೀರ ಚೌಕ ಹತ್ತಿರ ಹೋದಾಗ ಇಬ್ಬರೂ ಹುಡುಗರು ಸಾರ್ವಜನಿಕ ಸ್ಥಳದಲ್ಲಿ ನಿಂತು ಹೋಗಿ ಬರುವ ಜನರಿಗೆ ಹೆದರಿಸುವದು ತೊಂದರೆ ಕೊಡುವದು ಅವಾಚ್ಯ ಶಬ್ದಗಳಿಂದ ನಿಂದಿಸುವದು ಮಾಡುತ್ತಿದ್ದು ಸದರಿಯವರಿಗೆ ಹಿಡಿದು ವಿಚಾರಿಸಲು ತಮ್ಮ ತಮ್ಮ ಹೆಸರು 1)ಮಹೇಶ ತಂದೆ ಹಣಮಂತರಾವ ಗೊಬ್ಬೂರ ಜಾ:ಲಿಂಗಾಯತ ವ:25 ಉ:ಖಾಸಗಿ ಕೆಲಸ ಸಾ:ವಿಜಯ ನಗರ ಕಾಲೋನಿ ಕಲಬುರಗಿ 2)ಸಾಗರ ತಂದೆ ಶರಣಪ್ಪಾ ಕಟ್ಟಿಮನಿ ವ:22 ಉ:ವ್ಯಾಪಾರ ಜಾ:ಕಟಬೂರ ಸಾ:ದೇವಿನಗರ ಹನುಮಾನ ಗುಡಿ ಹತ್ತಿರ ಕಲಬುರಗಿ ಅಂತಾ ಹೇಳಿದರು. ಸದರಿಯವರ ವರ್ತನೆಯಿಂದ ಈದ್ ಮೀಲಾದ ಹಬ್ಬದಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗವುಂಟಾಗಿ ಆಸ್ತಿ-ಪಾಸ್ತಿ ಹಾನಿವುಂಟಾಗುವ ಸಂಭವವಿರುವದರಿಂದ ಸದರಿಯವರನ್ನು ನಾವು ಇಬ್ಬರೂ ಹಿಡಿದುಕೊಂಡು ಠಾಣೆಗೆ ಕರೆದುಕೊಂಡು ಬಂದಿದ್ದು ಇವರ ಮೇಲೆ ಮುಂಜಾಗೃತ ಕ್ರಮ ಕೈಕೊಳ್ಳಲು ವಿನಂತಿ ಅಂತಾ ದೂರಿನ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆ ಗುನ್ನೆ.ನಂ.223/17 ಕಲಂ:151,107 ಸಿಆರ್‌‌ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ಬಗ್ಗೆ ವರಿದಿ ಇರುತ್ತದೆ.