POLICE BHAVAN KALABURAGI

POLICE BHAVAN KALABURAGI

07 June 2017

Kalaburagi District Reported Crimes

ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಪಂಡಿತರಾವ ಬದನಿಹಾಳ ಗ್ರಾಮ ಪ್ರಾಚಾರ್ಯರು ಸರಕಾರಿ ಪದವಿ ಪೂರ್ವ ಕಾಲಏಜು ನೆಲೋಗಿ ಇವರ  ಹೋಲ ಬದನಿಹಾಳ ಸಿಮಾಂತರದಲ್ಲಿ ಸರ್ವೇ ನಂ: 3.ಎ 17-23 ಗುಂಟೆ ಜಮೀನು ಹೊಂದಿದ್ದು ಘನ ನ್ಯಾಯಾಲಯ ಜೇವರ್ಗಿ ರವರ ಆದೇಶದಂತೆ ನನ್ನ ಪರವಾಗಿ ಆದೇಶವಾಗಿದ್ದು ಸದರಿ ಹೊಲಕ್ಕೆ ಸಾಗುವಳಿ ಮಾಡಲು ಪರವಾನಿಗೆ ಆದೇಶವಾಗಿದ್ದು ಸದರಿ ಹೋಲಕ್ಕೆ ಸಾಗುವಳಿ ಮಾಡಲು ದಿನಾಂಕ: 04/05/2017 ರಂದು ಹೋದಾಗ ನನ್ನ ಜೋತೆಗೆ ಪೊಲೀಸ್ ಠಾಣೆ ಸಿಬ್ಬಂದಿಯವರು ಬಂದು ನನ್ನ ಸಹೋದರರನ್ನು ಕರೆದು ನ್ಯಾಯಾಲಯದ ಆದೇಶ ಪಂಡಿತ ಪರವಾಗಿದ್ದು ಅವರನ್ನು ಸಾಗುವಳಿ ಮಾಡಲು ಯಾವುದೆ ರೀತಿಯಿಂದ ತೊಂದರೆ ಕೊಡಬಾರದು ಅಂತ ಎಚ್ಚರಿಕೆ ಕೊಟ್ಟರು ಅವರೆದರು ಸುಮ್ಮನಿದ್ದು ಸಾಗುವಳಿ ಮಾಡಲು ಬೆಳಿಗ್ಗೆ 10:00 ಗಂಟೆಗೆ ಒಪ್ಪಿಕೊಂಡರು ನಂತರ ದಿನಾಂಕ: 13/05/2017 ರಂದು ನಾನು ಮೂರು ಟ್ರ್ಯಾಕ್ಟರ ಹಾಗೂ ಕೂಲಿ ಕಾರ್ಮಿಕರೊಂದಿಗೆ ಹೋಲಕ್ಕೆ ಹೋಗಿ ಕೆಲಸ ಮಾಡಲು ಪ್ರಾರಂಬಿಸಿದೆ ಟ್ರ್ಯಾಕ್ಟರ ನೇಗಿಲು ಹೋಡೆಯುವಾಗ ನನ್ನ ಅಣ್ಣ ಸದಾನಂದ ತಂದೆ ರಾಮುಕೊಜ, ಮಹಾದೇವಿ ಗಂಡ ಸದಾನಂದ,  ಜಂಬು ತಂದೆ ರಾಮಕೊಜ, ಗೋವಿಂದ ಹಾಗೂ ಇವರ ಹೆಂಡತಿಯವರಾದ ಮಹಾಂತಮ್ಮಾ ಮತ್ತು ಮಿನಾಕ್ಷಿ , ಗುಂಡು ತಂದೆ  ಸದಾನಂದ ಹಾಗೂ ಲಲೀತಾ ಗಂಡ ಗುಂಡು ಇವರೆಲ್ಲರೂ ಬಂದು ನನ್ನ ಮೇಲೆ ಹಲ್ಲೆ ಮಾಡಿದರು ಸದಾನಂದ ಇತನು ನನ್ನ ತಲೆಗೆ ರಕ್ತಗಾಯ ಮಾಡಿ ಕಟ್ಟಿಗೆಯಿಂದ ಹೋಡೆದು ಹಾಗೂ ಜಂಬು, ಮಾಂತಮ್ಮಾ ನನ್ನ ಪಕ್ಕೆಲಬಿಗೆ ಹೊಡೆದಳು ಪ್ರಾಕ್ಚರ ಆಗುವಂತೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಗೊವಿಂದ ಸಾಯಿಸಿರಿ ಹೋಡೆಯಿರಿ ಕೊಂದು ಹಾಕಿರಿ ಪೇಟ್ರೋಲ ಸುರಿದು ಬೆಂಕಿ ಹಚ್ಚಿರಿ ಎಂದು ಕೂಗಾಡಿ ನನ್ನನ್ನೂ ನಿಂದಿಸಿದರು ನಂತರ ನನ್ನ ಮೈಮೇಲೆ ಇದ್ದ ವಾಚ ಮೋಬಾಯಿಲ ಹಾಗೂ 20 ಗ್ರಾಂ ಬಂಗಾರ ಬ್ಯಾಗನಲ್ಲಿ ಇದ್ದ 50,000 ರೂ ಬಿದ್ದಿರುತ್ತವೆ. ನಂತರ ನನ್ನನ್ನೂ ನಮ್ಮ ತಾಂಡಾ ಸೇವಾಲಾಲ ಮಂದಿರಕ್ಕೆ ಕರೆದುಕೊಂಡು ಹೋಗಿ ಕಾನೂನು ಬಾಹಿರ ಬಂಧನವಿರಿಸಿ ಸುಮಾರು 20,ರಿಂದ 30 ರಷ್ಟು ಗುಂಡಾಗಳು ನನ್ನನ್ನೂ ಒತ್ತಾಯಮಾಡಿ ಅವರು ಹೇಳಿದಂತೆ ಈ-ಬಾಂಡ ಪತ್ರದಲ್ಲಿ ಪಾಲು ಪತ್ರ ಬರೆಸಿಕೊಂಡು ಸಹಿ ಹಾಕಿಸಿದ್ದಾರೆ. ನನ್ನ ಸಂತ ಹ್ಯಾಂಡ ರೈಟಿಂಗನಿಂದ ಪಾಲು ಪತ್ರ ಬರೆಯಿಸಿಕೊಂಡಿದ್ದಾರೆ. ಹೊಲದಲ್ಲಿ ಜಗಳ ನಡೆಯುವಾಗ ನನ್ನಕಾಕಾನವರಾದ ಕಮೋಲ,ಬಾಬು, ಮೋಹನ ಹಾಗೂ ವಕೀಲ ತಂದೆ ಮೋತಿಲಾಲ ತಿಕಾರಾಮ ತಂದೆ ರಾಮಸಿಂಗ ಎಲ್ಲರೂ ಬಂದು ಜಗಳ ಬಿಡಿಸಿದರು ಆಗುವತನಕ ಸಹಾಯದಿಂದ ನಾನು ಕಲಬುರಗಿಗೆ ಬಂದು ದವಾಖೆನೆಯಲ್ಲಿ ಉಪಚಾರ ಪಡೆದು ಗುಣಮುಖನಾಗಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ವಿಕ್ರಮ ತಂದೆ ವಿಜಯಾನಂದ ಗಂಗನೆ ಸಾ: ದೇಶಮುಖ್‌ ಕಾಲೋನಿ ಆಳಂದ ರವರು ಆಳಂದ ಪಟ್ಟಣದ ದೇಶಮುಖ ಕಾಲೋನಿಯಲ್ಲಿ ನನ್ನದೊಂದು ಸ್ವಂತ ಮನೆಯಿದ್ದು ದಿನಾಂಕ: 31/05/2017 ರಂದು ಬೆಳಗ್ಗೆ 9-30 ಎ.ಎಮ್‌ ವೇಳೆಗ ನಾನು ಮನೆಯ ಕೀಲಿ ಹಾಕಿ ಕರ್ತವ್ಯಕ್ಕೆ ಹೋಗಿರುತ್ತೇನೆ. ನಂತರ ನಾನು ಕರ್ತವ್ಯ ಮುಗಿಸಿಕೊಂಡು ಮದ್ಯಾಹ್ನ 1-45 ಪಿಎಮ್‌ ವೇಳೆಗೆ ಮನೆಗ ಬಂದು ನೋಡಲು  ನಮ್ಮ ಮನೆಯ ಮುಖ್ಯ ದ್ವಾರದ ಕೀಲಿ ಮುರಿದಿದ್ದು ನಂತರ ನಾನು ಒಳಗಡೆ ಹೋಗಿ ನೋಡಲು ನಾನು ಮಲಗುವ ಕೋಣೆಯಲ್ಲಿದ್ದ ಎರಡು ಅಲ್ಮಾರದ ಕೀಲಿ ಮುರಿದಿದ್ದು ಅದರಲ್ಲಿರುವ 01) 65,000/- ರೂ ನಗದು ಹಣ 02) 5 ಗ್ರಾಂ ದ ಎರಡು ಬಂಗಾರದ ಚೈನುಗಳು 03) 01 ಗ್ರಾಂ ದ 05 ಮಕ್ಕಳ ಕೈಯಲ್ಲಿ ಹಾಕುವ ಬಂಗಾರದ ಉಂಗುರುಗಳು ಹೀಗೆ ಒಟ್ಟು 15 ಗ್ರಾಂ ಬಂಗಾರದ ಆಭರಣಗಳು ಅಕಿ; 40,000/- ರೂ ಮತ್ತು 04) ಒಂದು 250 ಗ್ರಾಂ ದ ಬೆಳ್ಳಿಯ ವಿಭೂತಿ ಬುಟ್ಟಿ 05) 30 ಗ್ರಾಂ ದ.ಎರಡು ಬೆಳ್ಳಿಯ ಗ್ಲಾಸ್‌ಗಳು 06) 500 ಗ್ರಾಂ ದ ಒಂದು ಬೆಳ್ಳಿಯ ಆರತಿ ಸೆಟ್‌ ಹೀಗೆ ಒಟ್ಟು 780 ಗ್ರಾಂ ಬೆಳ್ಳಿಯ ಆಭರಣಗಳು ಅಕಿ:  25,000/- ಹೀಗೆ ಎಲ್ಲಾ ಸೇರಿ ಒಟ್ಟು 1,30,000/- ರೂ ಕಿಮ್ಮತ್ತಿನ ಸ್ವತ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಶ್ರಿಕಾಂತ ತಂದೆ ಹಣಮಂತ  ದುಮ್ಮನಸೂರ  ಸಾ : ಚುನ್ನಾಭಟ್ಟಿ ಬಾರಿ ನಗರ ಶಹಬಾದ  ರವರು ಮತ್ತು ತನ್ನ ಗೆಳೆಯನಾದ ಶರಣಪ್ಪ ತಂದೆ ಭೀಮಶ್ಯಾ ಮುದ್ನಾಳ ಸಾ : ಶಹಬಾದ ಇಬ್ಬರೂ ಕೂಡಿಕೊಂಡು ಮೊನ್ನೆ ದಿನಾಂಕ 04/06/2017 ರಂದು ಬೆಳಿಗ್ಗೆ ಮದುವೆ ಕಾರ್ಯಕ್ರಮಕ್ಕೆ  ಶಹಾಪೂರಕ್ಕೆ ಶರಣಪ್ಪನ ಮೋ/ಸೈ ನಂ ಕೆಎ-25 ಇ.ಎಲ್ -7771  ನೇದ್ದರ ಮೇಲೆ ಹೋಗಿ  ಮದುವೆ ಮುಗಿಸಿಕೊಂಡು ಮರಳಿ ಶಹಾಬಾದ ಕ್ಕೆ  ಸದರಿ ಮೋ/ಸೈ ನಂ ಕೆಎ-25 ಇ.ಎಲ್ -7771 ನೇದ್ದರ ನಾವಿಬ್ಬರೂ ಬರುತ್ತೀರುವಾಗ ಮೋ/ಸೈ ಶರಣಪ್ಪನು ಚಲಾಯಿಸುತ್ತಿದ್ದು ನಾನು ಹಿಂದೆ ಕುಳಿತ್ತಿದ್ದೇನು  ನಮ್ಮ ಮೋ/ಸೈ ಜೆವರ್ಗಿ ನಗರದ ಸಿಂದಗಿ ಕ್ರಾಸ್ ನಲ್ಲಿ ಹೋಗುತ್ತಿದ್ದಂತೆ ಎದುರಿನಿಂದ  ಒಂದು ಕ್ರುಜರ ಜೀಪ ನಂ  ಕೆಎ-28 ಎಮ್- 5803  ನೇದ್ದರ ಚಾಲಕನು  ತನ್ನ ಜೀಪನ್ನು ಅತೀ ವೇಗ ಮತ್ತು ಅಜಾಗೂರಕತೆಯಿಂದ  ಚಲಾಯಿಸಿಕೊಂಡು ಬಂದು ನಮ್ಮ ಮೋ/ಸೈ ಗೆ ಡಿಕ್ಕಿ ಪಡಿಸಿದ್ದರಿಂದ  ನಾವಿಬ್ಬರೂ ಮೊ/ಸೈ ಸಮೇತವಾಗಿ ಕೆಳಗೆ ಬಿದ್ದ ಪರಿಣಾಮವಾಗಿ ನನಗೆ ಎಡಗಡೆ ಕಣ್ಣಿನ ಮೆಲೆ ರಕ್ತಗಾಯ ,ಬಾಯಿಯಲ್ಲಿನ ಐದು ಹಲ್ಲುಗಳು  ಬಿದ್ದಿರುತ್ತವೆ ಮತ್ತು ತಲೆಗೆ ಗುಪ್ತಗಾಯ ವಾಗಿರುತ್ತದೆ.ಶರಣಪ್ಪನಿಗೆ  ಬಲಗೈ ಮೋಳಕೈ ಕೆಳಗೆ ಗುಪ್ತಗಾಯವಾಗಿ ಕೈ ಮುರಿದಿದ್ದು, ಎಡಗೈ ಮೊಳಕೈಗೆ, ತುಟಿಗೆ, ಗದ್ದಕ್ಕೆಹಾಗೂ ತಲೆಗೆ ರಕ್ತಗಾಯವಾಗಿರುತ್ತದೆ. ಈ ಘಟನೆಯ ನಂತರ  ಸದರಿ ಕ್ರುಜರ ಚಾಲಕನು ತನ್ನ ಕ್ರುಜರ ಜೀಪ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

06 June 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:05/06/2017 ರಂದು ಸಂಜೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಇಬ್ಬರು ವ್ಯಕ್ತಿ ದೈವಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಶ್ರೀ ಸಂಜೀವಕುಮಾರ ಪಿಎಸ್‌ಐ ರಾಘವೆಂಸ್ರ ನಗರ ಪೊಲೀಸ್‌ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಬಸ್‌ ನಿಲ್ದಾಣದಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಶಹಾಬುದ್ದಿನ್‌ ತಂದೆ ಅಬ್ದುಲ್‌ ಗಫಾರ ಸಾ: ಎಮ್‌ಎಸ್‌ಕೆ ಮಿಲ್‌ ಜಿಲಾನಾಬಾದ ಕಲಬುರಗಿ ಅಂತಿ ತಿಳಿಸಿದ್ದು ಸದರಿಯವನಿಗೆ ಅಂಗ ಶೋದನೆ ಮಾಡಲು ಒಂದು ಬಾಲ್‌ ಪೆನ್‌, ಚಾವಿ ಕಂಪನಿಯ ಕಡ್ಡಿ ಡಬ್ಬಿಯ ಮೇಲೆ  ಮಟಕಾ ನಂಬರ ಬರೆದ  7 ಚೀಟಿಗಳು, ನಗದು ಹಣ 3000/-ರೂಗಳು ದೊರಕಿದ್ದು, ಇನ್ನೊಬ್ಬನನ್ನು ವಿಚಾರಿಸಲು ತನ್ನ ಹೆಸರು 2) ರವಿ ತಂದೆ ಸಂಗಮನಾಥ ಸಾ:ಶಾಂತಿ ನಗರ ನೀರಿನ ಪ್ಲ್ಯಾಂಟ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗ ಶೋದನೆ ಮಾಡಲು 1) ಒಂದು ಬಾಲ್‌ ಪೆನ್‌, 2) 3 ಮಟಕಾ ನಂಬರಗಳನ್ನು ಬರೆದ ಮಟಕಾ ಚೀಟಿಗಳು 3) ನಗದು ಹಣ 960/- ರೂಪಾಯಿ ದೊರಕಿರುತ್ತವೆ. ಸದರಿಯವನಿಗೆ ನೀನು ಬರೆದುಕೊಂಡ ಮಟಕಾ ಚೀಟಿಯನ್ನು ಯಾರಿಗೆ ಕೊಡುತ್ತಿ ಅಂತ ವಿಚಾರಿಸಲು ನಾನು ತಿರುಗಾಡಿ ಬರೆದುಕೊಂಡ ಮಟಕಾ ಚೀಟಿ ಮತ್ತು ಹಣವನ್ನು ಶಹಾಬುದ್ದಿನ್‌ನಿಗೆ ಕೊಡಲು ಬಂದಿರುತ್ತೆನೆ ಅಂತ ತಿಳಿಸಿದನು. ಹೀಗೆ ಒಟ್ಟು ನಗದು ಹಣ 3960/- ರೂಗಳು ಮತ್ತು 10 ಮಟಕಾ ಚೀಟಿಗಳನ್ನು ಹಾಗೂ ಎರಡು ಬಾಲ್‌ ಪೆನ್‌ಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ  ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹೇಂದ್ರ ತಂದೆ ಶಂಕರ ಬೊರೆ ಸಾ: ಲಾಲಗೇರಿ ಕ್ರಾಸ್ ಅಂಬಾ ಭವಾನಿ ಗುಡಿ ಹತ್ತಿರ ಕಲಬುರಗಿ ಇವರ ಮಗನಾದ ರೋಹಿತ ಇತನು ಸುಮಾರು 2 ವರ್ಷದ ಹಿಂದೆ ಕಳ್ಳತನ ಕೇಸಿನಲ್ಲಿ ಜೇಲಿಗೆ ಹೋಗಿ ಬಂದಿರುತ್ತಾನೆ. ಬಂದ ನಂತರ ಸುಮಾರು 3 ತಿಂಗಳು ಮನೆಯಲ್ಲಿ ಹೆಳದೆ ಹೋಗಿದ್ದು ಮರಳಿ ಬಂದಾಗ ಎಲ್ಲಿಗೆ ಹೋಗಿದ್ದೆ ಅಂತ ಕೇಳಿದಾಗ, ನಾನು ಬೆಂಗಳೂರಿಗೆ ಹೋಗಿದ್ದೆ ದಾಬಾದಲ್ಲಿ ಕೆಲಸ ಮಾಡಿಕೊಂಡಿದ್ದೆನು ಅಂತ ತಿಳಿಸಿದನು. ಈ ತರಹ ನೀನು ಮನೆಯಲ್ಲಿ ಹೇಳದೆ ಕೇಳದೆ ಹೋದರೆ ನಾವು ಏನು ತಿಳಿಕೊಬೇಕು ಅಂತ ಸಿಟ್ಟಾದಾಗ  ಪುನಃ ಒಂದು ವಾರ ಹೇಳದೆ ಕೇಳದೆ ಹೋಗಿ ಮೆನೆಗೆ ಬಂದಿರುತ್ತಾನೆ. ದಸರಾ ಹಬ್ಬದ ಸಮಯದಲ್ಲಿ ಮನೆಯಲ್ಲಿ ಹೇಳದೆ-ಕೇಳದೆ 2-3 ತಿಂಗಳು ಹೋಗಿದ್ದು ಮರಳಿ ಮನೆಗೆ ಬಂದಾಗ ಎಲ್ಲಿಗೆ ಹೋಗಿದ್ದಿ ಅಂತ ಕೇಳಿದಾಗ  ಇವಾಗಲು ನಾನು ಪುಣೆಯಲ್ಲಿ ದಾಬಾದಲ್ಲಿ ಕೆಲಸ ಮಾಡಿಕೊಂಡಿರುತ್ತೆನೆ ನನ್ನ ಬಗ್ಗೆ ವಿಚಾರ ಮಾಡಬೇಡಿ ಅಂತ ಅನ್ನುತ್ತಿದ್ದನು. ಇವನ ಸಂಗಡ ಗಂಗಾ ನಗರ ರಾಜು ಜಾಸ್ತಿ ಓಡಾಡುತ್ತಿದ್ದನು. ಈಗ ದಿನಾಂಕ:9/02/2017 ರಂದು ಸಂಜೆ 4 ಗಂಟೆಗೆ ಯಾರೋ ಇಬ್ಬರು ಗೆಳೆಯರೊಂದಿಗೆ ಹೋಗಿ ಬರುತ್ತನೆ ಎಂದು ಹೇಳಿ ಮನೆಯಿಂದ ಹೋಗಿದ್ದು ಇಲ್ಲಿಯವರೆಗೆ ಬಂದಿರುವದಿಲ್ಲ. ಆತನು ಎಲ್ಲಿದ್ದಾನೆ ಅಂತ ಕೂಡಾ ನಮಗೆ ಫೋನ್‌ ಮಾಡಿ ತಿಳಿಸಿರುವದಿಲ್ಲ. ನಾವು ಮತ್ತು ಮನೆಯವರು ನಮ್ಮ ಸಂಬಂದಿಕರ ಕಡೆಗೆ ಹೋಗಿರಬಹುದು ಅಂತ ಎಲ್ಲಾ ಕಡೆ ವಿಚಾರಿಸಿದರು ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ. ಎಲ್ಲಿಯಾದರು ಈ ಹಿಂದಿನ ರೀತಿಯಲ್ಲಿ ಕೆಲಸ ಮಾಡಿಕೊಂಡು ಇದ್ದಿರಬಹುದೆಂದು ತಿಳಿದಿದ್ದೆವು. ಆದರು ಇಂದು ನಾಳೆ ಬರಬಹದು ಅಂತ ಸುಮ್ಮನಿದ್ದೆವು. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಶರಣಪ್ಪ ತಂದೆ ನಾಗೇಂದ್ರಪ್ಪ ವಾಲಿಕಾರ್ ಸಾ|| ಸೂರವಾರ ಗ್ರಾಮ ತಾ|| ಸೇಡಂ ಇವರು ದಿನಾಂಕ :02-06-2017 ರ ರಾತ್ರಿ 10 ಗಂಟೆಗೆ ಪಿರ್ಯಾದಿಯ ಅಕ್ಕ ಮತ್ತು ಪಿರ್ಯಾಧಿಯ ಕುಟುಂಬದವರು ಮನೆಯಲ್ಲಿ ಮಲಗಿರುವಾಗ ಮನೆಯ ಬಾಗಿಲ ಕೊಂಡಿ ಮುರಿದು ಮನೆಯ ಪೆಟ್ಟಿಗೆಯಲ್ಲಿಟ್ಟಿದ್ದ 1) ಒಂದು ತೊಲೆಯ ಬಂಗಾರದ ಚೈನು ಅ.ಕಿ 20,000/- ರೂ. 2) ನಗದು ಹಣ 4000/- ಹೀಗೆ ಒಟ್ಟು 24000/- ರೂ. ನೇದ್ದವುಗಳು ಯಾರೊ ಕಳ್ಳರು ದಿನಾಂಕ : 02-06-2017 ರ ರಾತ್ರಿ 10 ಗಂಟೆಯಿಂದ ದಿನಾಂಕ : 03-06-2017 ರ ಬೆಳಗಿನ 6 ಗಂಟೆಯ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 05/06/2017 ರಂದು ಮುಂಜಾನೆ ಮುತ್ತಗಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ  ಮೇರೆಗೆ  ಶ್ರೀ ಕಲ್ಯಾಣಿ ಎ.ಎಸ್.ಐ ಶಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೊದಾಗ ಮುತ್ತಗಾ ಗ್ರಾಮದ ಕಾಗಿಣಾ ನದಿ ಕಡೆಯಿಂದ  ಒಂದು ಮರಳು ತುಂಬಿದ ಟ್ಯಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ ಜೀಪ ನೋಡಿ  ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು  ಸದರಿ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ` ಟ್ರಾಕ್ಟರ ನಂಬರ ಎ.ಪಿ28 ಟಿ.ಸಿ 8042 ಇದ್ದು  ಅ.ಕಿ  2 ಲಕ್ಷ ರೂ ಅಂತಾ ಇದ್ದು ಸದರಿ ಟ್ರಾಕ್ಟರನದಲ್ಲಿ ಮರಳು ತುಂಬಿದು ಮರಳಿನ ಅ.ಕಿ 1000-00 ರೂ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ನಿಂಗಮ್ಮ ಗಂಡ ದಿ|| ಸಾಯಬಣ್ಣ ಗೋಪಾಲಕರ್ ಸಾ|| ಜೇವರ್ಗಿ (ಕೆ) ತಾ|| ಜೇವರ್ಗಿ ಜಿಲ್ಲಾ ಕಲಬುರಗಿ ಇವರು ದಿನಾಂಕ 10-10-09-2015 ರಂದು ಅಬೀದಾ ಬೆಗಂ ಗಂಡ ಬಂದೆನವಾಜ ಹಾಜಿ ಸಾ|| ಅರಳಗುಂಡಗಿ ಇವರ ಪುತ್ರನಾದ  ಅಬೂಬಕರ ಇವರ ಒಪ್ಪಿಗೆಯ ಮೇರೆಗೆ ಸರ್ವೆ ನಂ 278/3 ರ ಕ್ಷೇತ್ರ 6 ಎಕರೆ 8 ಗುಂಟೆ ಅರಳಗುಂಡಗಿ ಗ್ರಾಮದ ಜಮೀನನ್ನು ರೂಪಾಯಿ 20,40,000/- ರೂ  ಜಮೀನು ಖರಿದಿ ಕೊಡಲು ಒಪ್ಪಿ ಸದರಿ ದಿನ 20,00,000/- ರೂ ನಗದಾಗಿ ನನ್ನ ಗಂಡನಿಂದ ಪಡೆದು ದಸ್ತಾವೇಜು ಸಂಖ್ಯೆ 3938/15-16 ದಿನಾಂಕ 10-09-2015 ರಂದು ಖರೀದಿ ಕರಾರು ಪತ್ರ ಬರೆದುಕೊಟ್ಟಿದ್ದು ತದನಂತರ ಊರಿನವರ ಮುಖಾಂತರ ನಮಗೆ ಸದರಿಯವರು ಮೋಸ ಮಾಡಿರುವ ವಿಚಾರ ಬಂದು ಸದರಿಯವರು ನಮಗೆ ಬೇರೆ ಜಮೀನು ತೋರಿಸಿ ಆ ಜಮೀನಿನಲ್ಲಿ ಮನೆಗಳು ನಿರ್ಮಿಸಲಾಗಿರುವ ಸರ್ವೆ ನಂ 278/3 ರ ಜಮೀನನ್ನು ಮೋಸದಿಂದ ಬರೆದುಕೊಟ್ಟಿರುತ್ತಾರೆ. ನನ್ನ ಗಂಡ ದಿನಾಂಕ 27-12-17 ರಂದು ಮೃತ ಪಟ್ಟಿರುತ್ತಾರೆ. ಕೆಲವು ದಿನಗಳ ನಂತರ ನಾನು ಮತ್ತು ನನ್ನ ಮೈದುನನಾದ ಭಾಗಣ್ಣ ತಂದೆ ಮರೇಪ್ಪ ಇವರು ಸದರಿ ಮೋಸ ವಿಚಾರ ಕೇಳಲು ಹೋದಾಗ ಆ ಸಮಯದಲ್ಲಿ ಹಣ ವಾಪಸ್ಸು ಕೊಡುತ್ತೆವೆಂದು ತಿಳಿಸಿದ್ದು ಇಲ್ಲಿಯವರೆಗೆ ಕೊಟ್ಟಿಲ್ಲ. ಇಂದು ದಿನಾಂಕ 05-06-17 ರಂದು ಮದ್ಯಾನ 12 ಗಂಟೆಯ ಸಮಯದಲ್ಲಿ ನಾನು ಮತ್ತು ನನ್ನ ಮೈದುನನಾದ ಭಾಗಣ್ಣ ತಂದೆ ಮರೇಪ್ಪ ಇಬ್ಬರು ಅರಳಗುಂಡಗಿ ಗ್ರಾಮಕ್ಕೆ ಅವರ ಮನೆಗೆ ಹೋಗಿ ನೀವು ಮೋಸಮಾಡಿ ಹೋಲ ಖರೀದಿ ಕೊಟ್ಟು ನಮ್ಮ ಹಣವು ಕೊಡಲಿಲ್ಲ ಹಣ ಕೋಡಿರಿ ಅಂತಾ ಕೇಳಿದೆವು ಆಗ ಅಬೀದಾ ಬೆಗಂ ಗಂಡ ಬಂದೆನವಾಜ ಖಾಜಿ ಹಾಗು ಆಕೆಯ ಮಕ್ಕಳಾದ 1) ಅಬೂಬಕರ ತಂದೆ ಬಂದೆನವಾಜ  2) ಅಸ್ಲಾಂ ತಂದೆ ಬಂದೆನವಾಜ  3) ಆದಂ ತಂದೆ ಬಂದೆನವಾಜ  ಎಲ್ಲರೂ ಕೂಡಿ ನಮಗೆ ಹಣ ನಾವು ತೆಗೆದುಕೊಂಡಿಲ್ಲ ಏನು ಬೇಕಾದರು ಮಾಡಿಕೊಳ್ಳಿ ಹೋಲಿಯಾ ಸೂಳೆ ಮಕ್ಕಳೆ ಇದಕ್ಕೆ ಬಿದ್ದಿರಿ ಹಣ ಕೊಟ್ಟ ಸಾಯಬಣ್ಣನೇ ಸತ್ತ ನೀವೇನೂ ಕೆಳಬೆಕಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಅಬೀದಾ ಬೆಗಂ ನನಗೆ ಕಪಾಳಕ್ಕೆ ಹೋಡೆದು ಹೋಲೆರ ರಂಡಿ ಹೋಗು ಎಂದು ಅವಾಚ್ಯ ಶಬ್ದಗಳಿಂದ ಬೈದು ನೂಕಿರುತ್ತಾಳೆ. ಆಗ ಅಬೂಬಕರ, ಅಸ್ಲಾಂ, ಆದಂ ಇವರು ನನಗೆ ಮಾನ ಹಾನಿಯಾಗುವಂತೆ ನನ್ನ ಕೂದಲು ಹಿಡಿದು ಮತ್ತು ಸೀರೆ ಎಳೆದಾಡಿ ಕೈಯಿಂದ ನನ್ನ ಬೆನ್ನಿಗೆ ಹಲ್ಲೆ ಮಾಡಿರುತ್ತಾರೆ. ಆಗ ಜಗಳ ಬಿಡಿಸಲು ಬಂದ ನನ್ನ ಮೈದುನನಿಗೆ ಅಬೀದಾ ಬೆಗಂ ಮತ್ತು ಆದಂ ತಡೆದು ನಿಲ್ಲಿಸಿ ಈ ಹೊಲೆ ಸೂಳೆ ಮಗನಂದು ಬಹಳ ಆಗಿದೆ ಎಂದು ನೂಕಾಡಿದರು ಆ ಸಂಧರ್ಭದಲ್ಲಿ ಅನೇಕ ಜನರು ನೆರೆದಿದ್ದು ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 June 2017

Kalaburagi District Reported Crimes

ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:04/06/2017 ರಂದು ಕಲಬುರಗಿಯಲ್ಲಿ ಇರುವ ನಮ್ಮ ಅಣ್ಣ ರಫೀಯೂದ್ದಿನ ಇವರು ಮದೀನಾ ಕಾಲೋನಿಯ ಅವುಲಿಯಾ ಮಜೀದ ಹತ್ತಿರ ರಂಜಾನ ಹಬ್ಬದ ಪ್ರಯುಕ್ತ ಇಫ್ತಿಯಾರ ಕೂಟ ಇಟ್ಟಿಕೊಂಡಿದ್ದು ಬರಲು ತಿಳಿಸಿದ್ದರಿಂದ ನಾನು ಸಾಯಂಕಾಲ ಕಲಬುರಗಿಗೆ ಬಂದಿರುತ್ತೇನೆ. ಸಾಯಂಕಾಲ 7.30 ಪಿ.ಎಂಕ್ಕೆ ಅವುಲಿಯಾ ಮಜೀದ ಹತ್ತಿರ ಇಫ್ತಿಯಾರ ಕೂಟದಲ್ಲಿ ಭಾಗವಹಿಸಿದೆನು. ಅಡಿಗೆ ಮಾಡುವ ಸ್ಥಳದಲ್ಲಿ ನಾನು ನನ್ನ ಅಣ್ಣನ ಮಗನಾದ ಸಮೀರ ಹಾಗೂ ತನ್ವೀರ ಮತ್ತು ನಮ್ಮ ಅಣ್ಣ ರಫೀಯೂದ್ದಿನ ಕೂಡಿ ನಿಂತಿದ್ದೆವು ಜನರು ಮಜೀದ ಮೇಲ್ಗಡೆ ಊಟದ ವ್ಯವಸ್ಥೆ ಮಾಡಿದ್ದರು ಅಡುಗೆ ಮಾಡುವ ಸ್ಥಳಕ್ಕೆ ಮದೀನಾ ಕಾಲೋನಿಯ ಇರ್ಫಾನ, ಜಬ್ಬಾರ, ಸದ್ದಾಂ, ರಶೀದ ಎಂಬುವರು ಬಂದು ಊಟಕ್ಕೆ ಪ್ಲೇಟ ಕೇಳಿದರು ನಾನು ಊಟದ ವ್ಯವಸ್ಥೆ ಮಜೀದ ಮೇಲ್ಗಡೆ ಮಾಡಿರುತ್ತದೆ ಊಟಕ್ಕೆ ಮೇಲ್ಗಡೆ ಹೋಗಿ ಅಂತಾ ಹೇಳಿದಾಗ ಸಾಲೆ ಖಾನಾ ದೇವೋ ಬೇಲೊತೋ ಉಪ್ಪರ ಜಾವ ಬೋಲತೆ ಮಾಕೆ ಲವಡೆ ಮಾದರ ಚೋದ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಇರ್ಫಾನ ಎಂಬುವನು ಅಡುಗೆ ಮಾಡುವ ಸ್ಥಳದಲ್ಲಿದ್ದ ಕಬ್ಬಣದ ಕಡಚಿ ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ನನಗೆ ಹೊಡೆಯುವದನ್ನು ಬಿಡಿಸಲು ಬಂದ ನನ್ನ ಅಣ್ಣನ ಮಗನಾದ ಸಮೀರ ಇವನಿಗೆ ಜಬ್ಬಾರ ಈತನು ಕಟ್ಟಿಗೆಯಿಂದ ಸಮೀರನ ತಲೆಯ ಮುಂಬಾಗ ಹೊಡೆದು ರಕ್ತಗಾಯ ಮಾಡಿದನು. ಸದ್ದಾಂ & ರಶೀದ ಇವರು ಖಲಾಸ ಕರೋ ಸಾಲೇಕೊ ಎಂದು ಜೀವದ ಭಯ ಹಾಕಿ ಹೊಡೆಬಡೆ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ 03/06/2017 ರಂದು ಸೈಕಲ್ ಮೇಲೆ ಬಜಾರಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋದಾಗ 8 ಪಿ ಎಮ್ ಕ್ಕೆ ಅನೀಲ್ ಕಿರಣಗಿ ಇವರು ತಿಳಿಸಿದ್ದೇ ನೆಂದರೆ ನಿಮ್ಮ ತಂದೆಗೆ ಈಗೆ ಅಲ್ಟಾಮ್ ಕಂಪನಿಯ ಗೇಟ್ ಎದುರುಗಡೆ ರಸ್ತೆಯಲ್ಲಿ ಕ್ರೂಸರ್ ಚಾಲಕ ಡಿಕ್ಕಿಪಡಿಸಿ ಅಪಘಾತ ಪಡಿಸಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಹಾಗೂ ಇತರರು ಸ್ಥಳಕ್ಕೆ ಹೋಗಿ ಭಗವಾನ ಈತನಿಗೆ ನೋಡಲಾಗಿ ಎಡಗಾಲಿನ ತೊಡೆಗೆ ಮತ್ತು ಪಾದಕ್ಕೆ ಗುಪ್ತ ಪೆಟ್ಟಾಗಿ ಎಡಗೈ ಮೊಳಕೈಗೆ ತರಚಿದ ರಕ್ತಗಾಯವಾಗಿದ್ದು ಅಲ್ಲಿಯೇ ಇದ್ದ ಅನೀಲ್ ಈತನಿಗೆವಿಚಾರಿಸಲಾಗಿ ಕಲಬುರಗಿ ಕಡೆಯಿಂದ ವಾಡಿ ಕ್ರಾಸ್ ಕಡೆಗೆ ಕ್ರೂಸರ್ ಜೀಪ್ ನಂಬರ್ ಎಮ್ ಹೆಚ್ 26 ವಿ 5490 ನೇದ್ದರ ಚಾಲಕ ಅತೀ ವೇಗ ಮತ್ತು ಅಲಕ್ಷತನಿದಿಂದ ನಡೆಸುತ್ತಾ ಬಂದು ಡಿಕ್ಕಿಪಡಿಸಿ ವಾಹನದೊಂದಿಗೆ ಓಡಿ ಹೋಗಿದ್ದು ನಂತರ ಗಾಯ ಪೆಟ್ಟು ಹೊಂದಿದ ನಮ್ಮ ತಂದೆಗೆ ಅಲ್ಸ್ಟಾಮ ಕಂಪನಿಯ ಆಂಬುಲೆನ್ಸ್ ಹಾಕಿಕೊಂಡು ಉಪಚಾರ ಕುರಿತು ಕಾಮರೆಡ್ಡಿ ಆಸ್ಪತ್ರೆ ಕಲಬುರಗಿ ಸೇರಿಕೆ ಮಾಡಿರುತ್ತಾರೆ ಅಂತಾ  ತಿಳಿಸಿದ್ದರ ಮೇರೆಗೆ ಶ್ರೀ ಪಾಂಡುರಂಗ ತಂದೆ ಭಗವಾನ ಇಂಗಳೆ ಸಾ:ಅಲಸ್ಟಮ ಕಾಲೋನಿ ಶಹಾಬಾದ.ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.