POLICE BHAVAN KALABURAGI

POLICE BHAVAN KALABURAGI

22 June 2016

Kalaburagi District Reported Crimes

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ²æÃ ಶೇಖ ಖಾಜಾ ತಂದೆ ಶೇಖ ಮೋದ್ದಿನ ಸಾ: ಬೆರೂನಖಿಲ್ಲಾ ರಾಯಚೂರ. ರವರು ದಿನಾಂಕ: 28/05/2016 ರಂದು ರಾತ್ರಿ 11 ಗಂಟೆಯ ಸುಮಾರಿಗೆ ನಾವು ಕಲಬುರಗಿ ಜಿಲ್ಲೆಯ ಪೀರೋಜಾಬಾದ ಗ್ರಾಮದ ಖಲ್ಲಿಫತ್ ರೆಹಮಾನ ದರ್ಗಾಕ್ಕೆ ದೇವರ ಕಾರ್ಯ ಮಾಡುವ ಸಲುವಾಗಿ ನಾನು, ನಮ್ಮ ಅಣ್ಣಂದಿರಾದ ಮಹ್ಮದ ಶಫಿ,ಮಹ್ಮದ ರಫೀಕ ಹಾಗೂ ಇತರರು ಕೂಡಿಕೊಂಡು ರಾಯಚೂರಿನಿಂದ ಬಂದಿರುತ್ತೆವೆ. ದಿನಾಂಕ 29/05/2016 ರಂದು ಬೆಳಗ್ಗೆ 6.15 ಗಂಟೆಯ ಸುಮಾರಿಗೆ ನಮ್ಮ ಅಣ್ಣನಾದ ಮಹ್ಮದ ರಫೀಕ ಈತನು ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಪಕ್ಕಕ್ಕೆ ಇರುವ ಬಸ್ ನಿಲ್ದಾಣದ ಹತ್ತಿರ ಸಂಡಾಸಕ್ಕೆ ಹೋಗುತ್ತೆನೆ ಅಂತಾ ಹೇಳಿ ಹೋಗಿರುತ್ತಾನೆ. ನಾವು ದರ್ಗಾದ ಹೊರಗೆ ದೇವರ ಕಾರ್ಯದ ತಯಾರಿ ಮಾಡುತ್ತಿದ್ದೆವು. ಬೆಳಗ್ಗೆ 6.30 ಗಂಟೆಯ ಸುಮಾರಿಗೆ ಸಂಡಾಸಕ್ಕೆ ಹೋದ ನಮ್ಮ ಅಣ್ಣ ಮಹ್ಮದ ರಫೀಕ ಈತನು ಒಮ್ಮೆಲೆ ಚೀರಾಡುವುದನ್ನು ಕೇಳಿ ಹೋಗಿ ನೋಡಲಾಗಿ ಜೇವರ್ಗಿ ಕಡೆಯಿಂದ ಒಬ್ಬ ಮಹೀಂದ್ರ ಪಿಕಪ್ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ವಾಹನದ ನಿಯಂತ್ರಣದ ತಪ್ಪಿ ರಸ್ತೆಯ ಎಡಬದಿಗೆ ಬೋರಲಾಗಿ ಪಲ್ಟಿಗೊಳಿಸಿರುತ್ತಾನೆ. ಇದರಿಂದ ರಸ್ತೆಯ ಪಕ್ಕಕ್ಕೆ ಕೆಳಗೆ ಸಂಡಾಸಕ್ಕೆ ಕುಳಿತ ನಮ್ಮ ಅಣ್ಣನ ಮೇಲೆ ಪಿಕಪ್ ವಾಹನದಲ್ಲಿದ್ದ ಜೋಳದ ಚೀಲಗಳು ಮೈ ಮೇಲೆ ಬಿದ್ದಿರುತ್ತವೆ. ಇದರಿಂದ ನಮ್ಮ ಅಣ್ಣನಿಗೆ ಬಲಗಾಲಿಗೆ ಭಾರಿ ರಕ್ತಗಾಯ ,ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ. ಮಹೀಂದ್ರ ಪಿಕಪ್ ವಾಹನದಲ್ಲಿದ್ದ ಹುಲಗಪ್ಪಾ ಎನ್ನುವವನಿಗೆ ಕುತ್ತಿಗೆಗೆ ಮತ್ತು ಬೆನ್ನಿಗೆ ಭಾರಿ ಗುಪ್ತಗಾಯವಾಗಿರುತ್ತದೆ. ಅದರಲ್ಲಿದ್ದ ಯಲ್ಲಪ್ಪ ಎನ್ನುವವನಿಗೆ ಹಾಗೂ ಅದರ ಚಾಲಕ ಇಸ್ಮಾಯಿಲ್ ಎನ್ನುವವನಿಗೆ ಯಾವುದೇ ಗಾಯ ವೈಗೆರೆಯಾಗಿರುವುದಿಲ್ಲಾ.ಸದರಿ ವಾಹನವನ್ನು ಪಲ್ಟಿಗೊಳಿಸಿದ ನಂತರ ಅದರ ಚಾಲಕನು ಸದರಿ ಸ್ಥಳದಿಂದ ಓಡಿಹೋಗಿರುತ್ತಾನೆ. ನಂತರ ನಾವು ಸದರಿ ಮಹೀಂದ್ರ ಪಿಕಪ್ ವಾಹನದ ನಂಬರ ನೋಡಲಾಗಿ ಕೆಎ-36/ಬಿ-2545 ಅಂತಾ ಇರುತ್ತದೆ.ಈ ವಾಹನದಲ್ಲಿ ಜೋಳದ ಚೀಲಗಳು ಇರುತ್ತವೆ.ನಂತರ ಗಾಯಳು ನಮ್ಮ ಅಣ್ಣನಿಗೆ ಹಾಗೂ ಪಿಕಪ್ ವಾಹನದಲ್ಲಿದ್ದ ಗಾಯಾಳು ಹುಲಗಪ್ಪಾ ಎನ್ನುವವನಿಗೆ 108 ಅಂಬ್ಯುಲೆನ್ಸದಲ್ಲಿ ಉಪಚಾರ ಕುರಿತು ಕಲಬುರಗಿಗೆ ತೆಗೆದುಕೊಂಡು ಬಂದಿರುತ್ತೆವೆ. ನಮ್ಮ ಅಣ್ಣನಾದ ಮಹ್ಮದ ರಫೀಕ ಈತನು ಕಾಮರೆಡ್ಡಿ ಆಸ್ಪತ್ರೆಯಲ್ಲಿ  ಹಾಗೂ ಹುಲಗಪ್ಪಾ ಈತನು ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ಹುಲಗಪ್ಪಾ ಈತನು ದಿನಾಂಕ 21-06-2016 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಬಸಮ್ಮ ಗಂಡ ಹುಲಗಪ್ಪಾ ಜಗೋದವರ ಸಾ : ಗುರಗುಂಟಾ ತಾ : ಲಿಂಗಸೂರ ಜಿಲ್ಲಾ : ರಾಯಚೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಅಂಭೋಜಿ ತಂದೆ ರೂಪಲಾ ಚವ್ಹಾಣ, || ಆಹಾರ ನೀರಿಕ್ಷಕರು ಆಳಂದ, ಇವರು  ದಿನಾಂಕ 03/06/2016 ರಂದು ಗ್ರಾಮಕ್ಕೆ ಭೇಟ್ಟಿ ಕೊಟ್ಟು ವಿಚಾರಿಸಲಾಗಿ ನ್ಯಾಯಬೇಲೆ ಅಂಗಡಿ ಸಂಖ್ಯೆ 38 ರ ವಿತರಕರಾದ ಬಾಬುರಾವ ಹಾಗೂ ನ್ಯಾಯಬೇಲೆ ಅಂಗಡಿ ಸಂಖ್ಯೆ 118 ರ ವಿತರಕರಾದ ಭೀಮಣ್ಣಾ ಇವರು ಮೇ – 2016 ನೇ ಸಾಲಿನ ಪಡಿತರ ಆಹಾರ ಧಾನ್ಯವನ್ನು ಕಾರ್ಡುದಾರರಿಗೆ ಒಟ್ಟಾರೆಯಾಗಿ ವಿತರಣೆ ಮಾಡದೆ, ಜೂನ – 2016 ನೇ ಸಾಲಿನ ಪಡಿತರ ಆಹಾರ ಧಾನ್ಯದ ಪೈಕಿ ಕಾರ್ಡದಾರರಿಗೆ ನಿಗದಿತ ಪ್ರಮಾಣದಲ್ಲಿ ವಿತರಿಸದೆ ಕಡಿಮೆ ಪ್ರಮಾಣದಲ್ಲಿ ವಿತರಿಸಿ ಮೋಸ ಮಾಡಿರುತ್ತಾರೆ  ಸದರಿಯವರ ಮೇಲೆ ಸೂಕ್ತ ಕಾನೂನು  ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಹಿಂಸೆ ನೋಡಿ ಸಾಯಲು ಪ್ರಚೋದಿಸಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ  ರಮಾಬಾಯಿ ಇವಳಿಗೆ ಈಗ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಆಕೆಯ ಗಂಡ, ಅತ್ತೆ, ಮಾವ ನಾದಿನಿಯವರು  ಮದುವೆಯಾದ 2 ತಿಂಗಳ ವರೆಗೆ ಸರಿಯಾಗಿ ನೋಡಿಕೊಂಡಿದ್ದು, ನಂತರ ಅವಳಿಗೆ ಅಡುಗೆ ಕೆಲಸ ಸರಿಯಾಗಿ ಮಾಡುವುದಿಲ್ಲಾ ಅಂತಾ ಹೇಳಿ ನನಗೆ ಚುಚ್ಚು ಮಾತುಗಳಿಂದ ಹೀಯಾಳಿಸಿ ಬೈಯ್ಯುವುದು ಮತ್ತು  ನನಗೆ ಕೂಲಿ ಕೆಲಸಕ್ಕೆ ಹೋಗು ಅಂತಾ ಹೇಳುತ್ತಿದ್ದು. ಮತ್ತು  ನನ್ನ ಗಂಡ ಅತ್ತೆ, ಮಾವ, ನಾದಿನಿಯವರಿಗೆ ನಮ್ಮ ತವರು ಮನೆಯಲ್ಲಿ ಕೂಲಿಕೆಲಸಕ್ಕೆ ಹೋಗಿಲ್ಲಾ. ಕೂಲಿ ಕೆಲಸ ಮಾಡಲು ಬರುವುದಿಲ್ಲಾ ಎಂದು ಹೇಳಿದರೂ ಕೂಡಾ ಕೂಲಿಕೆಲಸಕ್ಕೆ ಹೋಗುವುದಿಲ್ಲಾ ಅಂತಾ ಹೇಳುತ್ತೀ ರಂಡಿ ಭೋಸಡಿ ಅಂತಾ ಬೈದು ಹೊಡೆ ಬಡಿ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದರು. ಅಲ್ಲದೇ ಮನೆಯಲ್ಲಿ ಮಗ ಸಮರ್ಥ ಇತನಿಗೆ ಊಟ ಮಾಡಿಸಿದರೆ  ಸೂಳೀ ಬಿಟ್ಟಿ ಕೂಳಾ ಯಾಕ ತಿನ್ನುಸುತ್ತೀ ನೀನು ದುಡಿದು ತಂದು ನಿನ್ನ ಮಗನಿಗೆ ಊಟ  ಮತ್ತು ಬಟ್ಟೆ ಬರೆ ಹಾಕು ಅಂತಾ ಹೇಳಿ  ನನ್ನ ಗಂಡ ಅತ್ತೆ ಇಟಾಬಾಯಿ, ಮಾವ ಶಿವಪ್ಪ, ನಾದಿನಿ ಸುಧಾರಣಿ  ಇವರೆಲ್ಲರೂ ನನಗೆ ಮತ್ತು ನನ್ನ ಮಗ ಇಬ್ಬರು  ಊಟ ಮಾಡುತ್ತಿದ್ದರೆ ಬಿಟ್ಟಿ ಕೂಳಾ ತಿನ್ನಬೇಡಾ ಅಂತಾ ಹೊಡೆ ಬಡಿ ಮಾಡುತ್ತಿದ್ದರು. ಈ ವಿಷಯ ತನ್ನ ತಾಯಿಗೆ ತಿಳಿಸಿದ್ದು, ತವರು ಮನೆಗೆ ಕರೆದುಕೊಂಡು ಹೋಗಿ ಒಂದು ವಾರದ ಹಿಂದೆ ಗಂಡನ ಮನೆಗೆ ಬಂದು ಬಿಟ್ಟು ತನ್ನ ಮಗಳಿಗೆ ಸರಿಯಾಗಿ ನೋಡಿಕೊಳ್ಳಿರಿ ಅಂತಾ ಹೇಳಿ ಬಿಟ್ಟು ಹೋಗಿದ್ದು ಇರುತ್ತದೆ. ದಿನಾಂಕ 21/06/16 ರಂದು ಬೆಳಿಗ್ಗೆ  09-00 ಗಂಟೆಗೆ ನನ್ನ ಮಗನಿಗೆ ಊಟ ಮಾಡಿಸುತ್ತಿದ್ದಾಗ ಆಗ ನನ್ನ ಗಂಡ, ಅತ್ತೆ ಇಟಾಬಾಯಿ, ಮಾವ ಶಾಂತಪ್ಪ, ಸುಧಾರಾಣಿ ಮತ್ತು ಕಾರುಹುಣ್ಣಿಮೆ ಹಬ್ಬಕ್ಕೆ ಬಂದಿದ್ದ ನಾದಿನಿ ಅನಿತಾ ಇವರೆಲ್ಲರೂ ಕೂಡಿ ನನಗೆ ಎ ರಂಡಿ, ಸೂಳೇ ಬಿಟ್ಟಿ ಕೂಳಾ ನಿನ್ನ ಮಗನಿಗೆ ಯಾಕೇ ತಿನ್ನುಸುತ್ತೀದ್ದೀ ನೀನು ದುಡಿದು ತಂದು ನಿನ್ನ ಮಗನಿಗೆ ಕೂಳಾ ಹಾಕು ಆಗಿಲ್ಲಾ ಅಂದರೆ ಎಲ್ಲಿಯಾದರೂ ಹೋಗಿ ಸಾಯಿ ನೀನು ಸತ್ತ ನಂತರ ನನ್ನ ಮಗ/ಅಣ್ಣ ತಮ್ಮನಿಗೆ ಕೂಲಿ ಕೆಲಸ ಮಾಡುವ ಇನ್ನೊಂದು ಹೆಣ್ಣು ತೆಗೆದು ಮದುವೆ ಮಾಡುತ್ತೇವೆ ರಂಡಿ ಅಂತಾ ಬೈದರು. ಅವರಲ್ಲಿ  ನನ್ನ ಗಂಡ  ಲಕ್ಷ್ಮಣ ಇತನು ನನಗೆ ಕೂಲಿಕೆಲಸ ಮಾಡಿ ಮಗನಿಗೆ ಕೂಳ ಹಾಕು ಇಲ್ಲಾ ಅಂದರೆ ಎಲ್ಲಿಯಾದರೂ ಹೋಗಿ ಸಾಯಿ ಅಂತಾ ಅಂದು ಕೈಯಿಂದ ಕಪಾಳ ಹೊಡೆದು ಕೆಲಸಕ್ಕೆ ಹೋದನು. ಮನೆಗೆಲಸ ಮುಗಿಸಿದ ನಂತರ ಮಗನೊಂದಿಗೆ ಕೋಣೆಯಲ್ಲಿ ಮಲಗಿಕೊಂಡೆನು. ಸಂಜೆ 04-30 ಗಂಟೆ ಸುಮಾರಿಗೆ ನಾನು ಮತ್ತು ಮಗ ಎದ್ದೇವು. ನನ್ನ ಮಗ ಸಮರ್ಥ ಹೊರೆಗಡೆ ಪಡಸಾಲಿಯಲ್ಲಿ ಆಟ ಆಡುತ್ತಿದ್ದನು. ಸಂಜೆ  05-00 ಗಂಟೆ ಸುಮಾರಿಗೆ  ನನ್ನ ಗಂಡ ಮತ್ತು ಅವರ ಮನೆಯವರು ಕೊಟ್ಟ ಮಾನಸಿಕ ಮತ್ತು ದೈಹಿಕ ಕಿರುಕುಳ ತಾಳಲಾರದೇ ಮನನೊಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿದ್ದ ಸೀಮೆ ಎಣ್ಣೆ ಮತ್ತು ಕಡ್ಡಿ ಪೆಟ್ಟಿಗೆ ತೆಗೆದುಕೊಂಡು ಮಲಗುವ ಕೋಣೆಯಲ್ಲಿ ಹೋಗಿ ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಕಡ್ಡಿ ಕೊರೆದು ಮೈಯಿಗೆ ಬೆಂಕಿ ಹಚ್ಚಿಕೊಂಡೆನು. ತ್ರಾಸ ತಾಳಲಾರದೇ ಚೀರಾಡುತ್ತಾ ನೆಲಕ್ಕೆ ಬಿದ್ದು ಹೊರಳಾಡುತ್ತಿದ್ದಾಗ ಪಡಸಾಲೆಯಲ್ಲಿ ಆಟ ಆಡುತ್ತಿದ್ದ ನನ್ನ ಮಗ ಸಮರ್ಥ ಇತನು ನನ್ನ ಹತ್ತಿರ ಬರಲು ಅವನಿಗೆ ನನ್ನ ಹತ್ತಿರ ಬರದಂತೆ ನೂಕಿಸಿಕೊಟ್ಟೆನು. ನಾನು ಚೀರುವ ಸಪ್ಪಳ ಕೇಳಿ ನನ್ನ ಮಗ ಸಮರ್ಥ ಬೆಂಕಿ ಹತ್ತಿದ ನನ್ನ  ಮೈಮೇಲೆ ಬಂದು ಬಿದ್ದಾಗ ಅವನಿಗೂ ಕೂಡಾ ನೆಲದ ಮೇಲೆ ಸೀಮೆ ಎಣ್ಣೆ ಮಗ ಧರಿಸಿದ ಬಟ್ಟೆಗೆ ಹತ್ತಿ ಅವನ ಮೈ ಕೂಡಾ ಸುಟ್ಟಿತು. ಚೀರಾಡುವ ಸಪ್ಪಳ ಕೇಳಿ  ಅಕ್ಕ ಪಕ್ಕದ ಮನೆಯ ಲಕ್ಷ್ಮಣ ಡಾಂಗೆ, ಅಶೋಕ ಡಾಂಗೆ, ಮಧುಮತಿ, ಅತ್ತೆ ಇಟಾಬಾಯಿ ಇತರೇ ಜನರು ಕೂಡಿಕೊಂಡು ಬಂದು ಮೈಮೇಲೆ ನೀರು ಹಾಕಿ ಬೆಂಕಿ ಆರಿಸಿದರು. ಜನರು ಬೆಂಕಿ ಆರಿಸುವಷ್ಟರಲ್ಲಿ ನನ್ನ ತಲೆಯಿಂದ ಕಾಲಿನ ಪಾದದವರೆ ಪೂರ್ತಿ ಮೈ ಸುಟ್ಟು ಚರ್ಮ ಸುಲಿದಿರುತ್ತದೆ. ಮತ್ತು ನನ್ನ ಮಗನ ಮೈ ಪೂರ್ತಿ ಸುಟಿರುತ್ತದೆ.  ನನಗೆ ಮತ್ತು ನನ್ನ ಮಗ ಸಮರ್ಥ ಇಬ್ಬರಿಗೂ ಉಪಚಾರ ಕುರಿತು ಅಶೋಕ ಡಾಂಗೆ ಮತ್ತು ಮಧುಮತಿ ಮತ್ತು ಮಾಹಾದೇವಿ, ಅತ್ತೆ ಇಟಾಬಾಯಿ  ಇವರೆಲ್ಲರೂ ಕೂಡಿಕೊಂಡು  ಒಂದು ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದರು. ಆಗ ವೈದ್ಯರು ನನ್ನ ಮಗನಿಗೆ ನೋಡಿ ದಾರಿಯಲ್ಲಿ ತರುವಾಗ ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು. ಕಾರಣ ನನ್ನ ಗಂಡ ಅತ್ತೆ, ಮಾವ, ನಾದಿನಿಯರು, ಇವರೆಲ್ಲರೂ ಕೂಡಿಕೊಂಡು ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಟ್ಟು ಎಲ್ಲಿಯಾದರೂ ಹೋಗಿ ಸಾಯಿ ಎಂದು ದುಷ್ರಪೇರಣೆ (ಪ್ರದೋಚನೆ) ನೀಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಮಂಜುನಾಥ ತಂದೆ ಚಂದ್ರಶಾ ಸಾ: ಕಲಗುರ್ತಿ ತಾ:ಚಿತ್ತಾಪೂರ ನಾನು ನನ್ನ ತಂದೆ ತಾಯಿ ಜೂತೆಯಲ್ಲಿ ಕಿರಾಣಿ ಅಂಗಡಿ ವ್ಯಾಪಾರ ಮಾಡಿಕೊಂಡು ವಾಸವಾಗಿರುತ್ತೆನೆ ನನ್ನ ತಾಯಿ ಸದ್ಯ ಕೋರವಾರ ಗ್ರಾಮ ಪಂಚಾಯಿತಿಯ ಉಪಾದ್ಯಕ್ಷ ಇರುತ್ತಾರೆ, ಈಗ ಕೇಲವು ದಿವಸಗಳ ಹಿಂದೆ ನಮ್ಮೂರಿನ ನಮ್ಮ ಓಣಿಯಲ್ಲಿ ವಾಸವಾಗಿರುವ  ನಮ್ಮ ಜಾತಿಯದವರಾದ ಗುರಬಸಪ್ಪಾ ತಂದೆ ಶಿವಪ್ಪಾ ಸಂಗನ ಹಾಗೂ ಹಾಗೂ ಅವರ ಅಣ್ಣತಮ್ಮಕಿ ದವರು ನಮ್ಮ ಓಣಿಯ ರಸ್ತೆಯಲ್ಲಿ ನೀರು ಬೀಡುವ ವಿಚಾರಕ್ಕೆ ಸಂಬಂದಿಸಿದಂತೆ ನಮ್ಮ ಜೊತೆಯಲ್ಲಿ ಸುಮಾರು ಬಾರಿ ತಂಟೆ ತಕರಾರು ಮಾಡಿರುತ್ತಾರೆ. ಅದೆ ಹಳೆಯ ವೈಮನಸ್ಸು ಇಟ್ಟಿಕೊಂಡು  ದಿನಾಂಕ: 21/6/2016 ರಂದು ನಮ್ಮೋರಿನಲ್ಲಿ ಕಾರಹುಣ್ಣೆಮ್ಮೆ ಇದ್ದ ಪ್ರಯುಕ್ತ ರಾತ್ರಿ 8-30 ಪಿಎಂ ಸುಮಾರಿಗೆ ನಮ್ಮ ಸಂಬಂದಿಕನಾದ ಮಹೇಶ ತಂದೆ ಚಂದ್ರಪ್ಪಾ ಇವರು ತನ್ನ  ಮನೆಯ ಅಂಗಳದಲ್ಲಿ ನಿಂತಾಗ ಆಸಂದರ್ಭದಲ್ಲಿ ನಮ್ಮ ಓಣಿಯ ಈ ಮೇಲೆ ನಮೂದಿಸಿದ ಆರೋಪಿತರೆಲ್ಲರು  ತಮ್ಮ ಎತ್ತುಗಳನ್ನು ಮೇರವಣಿಗೆ ಮಾಡುತ್ತಾ ಕೈಯಲ್ಲಿ ಬಡಿಗೆ  ಕಲ್ಲು ಗಳು ಹಿಡಿದುಕೊಂಡು ಬಂದವರೆ ಮಹೇಶ ಇತನ ಮನೆಯ ಮುಂದಿನ ರಸ್ತೆ ಮೆಲೆ ಜಗಳ ತೆಗೆಯುವು  ಸಲುವಾಗಿ ಉದ್ದೆಶ ಪೋರ್ವಕವಾಗಿ ನಿಂತು ಜೋರಾಗಿ ಹಲಗಿ  ಬಾರಿಸುತ್ತಿದ್ದಾಗ  ಆಗ ಮಹೇಶ ಇತನು ರಸ್ತೆಯ ಮೇಲೆ ಬಂದು ಜೋರಾಹಿ ಹಲಗಿ ಬಾರಿಸ ಬೇಡಿ ಮನೆಯ ಅಂಗಳದಲ್ಲಿ ಕಟ್ಟಿದ ನನ್ನ ಧನಗಳೂ ಬೆದರುತ್ತಾವೆ ಮುಂದಗಡೆ ಹೋಗಿ ಬಾರಿಸು ಅಂತ ಅನ್ನಲು  ಎಲ್ಲರು ಈ ಸೂಳೆ ಮಗದು ಬಹಳ ಸೂಕ್ಕ ಇದೆ ಅಂತಾ ಬೈಯ್ಯುತ್ತಾ ಅದರಲ್ಲಿ 1) ಗುರಬಸಪ್ಪಾ ತಂದೆ ಶಿವಪ್ಪಾ ಸಂಗನ 2) ದಸರಥ ತಂದೆ ಶಿವಪ್ಪಾ ಸಂಗನ 3) ಭೀಮಶಾ ಸರಡಗಿ ಇವರು ಮೂವರು ಈ ರಂಡಿ ಮಗನೆಗೆ ಹೋಡ್ರಿಲೇ ಅಂತಾ ಅಂದು ಗುರಬಸಪ್ಪಾ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಜೂರಾಗಿ ಮಹೇಶ ಇತನ ತಲೆ ಮೇಲೆ ಹೂಡೆದು ರಕ್ತಗಾಯಪಡಿಸಿದನು  ಉಳಿದ ಇಬ್ಬರು ಬಡಿಗೆಯಿಂದ ಬಲ ತೋಡೆಗೆ ಹಾಗೂ ಬುಜದ ಮೇಲೆ  ಹೂಡೆ ಹತ್ತಿದ್ದಾಗ ಆಗ ನನ್ನ ತಂದೆ ಚಂದ್ರಶಾ ಹಾಗೂ ನಾನು ನನ್ನ ಅಣ್ಣ ಕೃಷ್ಣಾ ಹಾಗೂ ಶಮರಂತ ನಾವೆಲ್ಲರೂ ನೋಡಿ  ಮದ್ಯ  ಹೂಗಿ ಬಿಡಿಸಲು ಹೂದಾಗ  ಈ ಮೂವರ ಪೈಕಿ ಗುರಬಸಪ್ಪಾ ಇತನು  ಸರಿ ಅಲೇ ಈ ಸೂಳೆ ಮಗನಿಗೆ ಇವತ್ತು ಖಲಾಸ ಮಾಡ್ತಿನಿ  ಅಂತಾ  ಅಂದು ತನ್ನ ಕೈಲ್ಲಿದ್ದ  ಬಡಿಗೆ ಯಿಂದ  ನನ್ನ ತಂದೆ ತಲೆಯ ಮೇಲೆ ಜೋರಾಗಿ ಹೋಡೆದು ರಕ್ತಗಾಯ ಪಡಿಸಿ ನಂತರ  ದಶರಥ ಇತನು ಕೋಲೆ ಮಾಡುವ ಉದ್ದೆಶದಿಂದ  ಕೈಲ್ಲಿದ್ದ ಕಲ್ಲಿನಿಂದ ತಲೇ ಮೇಲೆ ಜೂರಾಗಿಹಾಗಿ ರಕ್ತ ಗಾಯ ಪಡಿಸಿದಾಗ ಭಿಮಶಾ ಸರಡಗಿ ಇತನು ಎಡಗೈ ಮೇಲೆ ಕಲ್ಲಿನಿಂದ ಹೂಡೆದು ಗುಪ್ತಗಾಯ ಪಡಿಸುತ್ತಿರುವಾಗ  ಬೀಡಿಸಲು ಹೂದಾಗ ನನ್ನ ಅಣ್ಣನಿಗೆ ರಾಜಪ್ಪಾ ತಂದೆ ಚಂದ್ರಪ್ಪಾ ಸಂಗನ ಇತನು ಕಲ್ಲಿನಿಂದ ತಲೆಗೆ ಹೂಡೆದು ರಕ್ತಗಾಯ ಪಡಿಸಿದನು ದಶರಥ ತಂದೆ ಪ್ರಕಾಶ ಸಂಗನ, ರವಿ ತಂದೆ ಬಸವರಾಜ ಸಂಗನ  ಇವರಿಬ್ಬರು ಬಡಿಗೆಯಿಂದ ಎಡಗೈ ಹಸ್ತ ಹಾಗೂ ಕೈ ಬೆರಳಲ್ಲಿ ಬೆನ್ನಿನ ಮೆಲೆ ಹೂಡೆದು ರಕ್ತ ಗಾಯ ಹಾಗೂ ಗುಪ್ತ ಗಾಯ ಪಡಿಸಿದನು, ದಶರಥ ತಂದೆ ಘಾಳಪ್ಪಾ ಇತನು ನನಗೆ  ಬಡಿಗೆಯಿಂದ ತಲೆ ಮೆಲೆ ಹೋಡೆದು ರಕ್ತ ಗಾಯ ಪಡಿಸಿದನು ಶಮರಂತ ಇತನಿಗೆ ದೆವಪ್ಪಾ ತಂದೆ ಘಾಳಪ್ಪಾ ಇತನಿಗೆ  ಬೇನ್ನಿನ ಮೆಲೆ ಬಡಿಗೆ ಯಿಂದ ಹೂಡೆದು ಗುಪ್ತ ಗಾಯ ಪಡಿಸಿದನು  ಬೀಡಿಸಲು ಬಂದ  ಶಾರದಾ ಹಾಗೂ ನನ್ನ ತಾಯಿ ಇವರಿಬ್ಬರಿಗೆ ಬಸವರಾಜ ತಂದೆ ದೇವಿಂದ್ರಪ್ಪಾ ಹಾಗೂ ಮಹಾಂತಪ್ಪಾ ತಂದೆ ಚಂದ್ರಪ್ಪಾ  ಇವರಿಬ್ಬರು ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ ಅವಮಾನ ಗೂಳಿಸಿ  ಬಡಿಗೆಯಿಂದ  ಕೈಗಗಳಿಗೆ ಹೂಡೆದು ಒಳಪೆಟ್ಟ ಮಾಡಿರುತ್ತಾನೆ  ಬಿಡಿಸಲು ಬಂದ ಗುಜಮ್ಮಾ ಇವಳಿಗೆ ಬಲ ಹಣೆಯ ಮೇಲೆ ಹೂಡೆದು ಗುಪ್ತ ಗಾಯ ಪಡಿಸಿ ನನ್ನ ತಂದೆಯವರು  ಭಾರಿ ರಕ್ತಗಾಯವಾಗಿ ಬೇಹೂಷಾಗಿ ಕೆಳಗೆ ಬೇಹೊಷಆಗಿ  ಬಿದ್ದಿದ್ದನ್ನು ನೋಡಿ ಸತ್ತಿರುತ್ತಾರೆ ಅಂತಾ ತಿಳಿದು ನಮಗೆ ಹೂಡೆಯುವುದನ್ನು ಬಿಟ್ಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 June 2016

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ದತ್ತು ತಂದೆ ಅಣ್ಣಪ್ಪ ಕೊಳಿ ಸಾ: ಮಣ್ಣೂರ ರವರು ತಮ್ಮೂರಿನ ಮಹಾದೇವ ತಂ/ಜಟ್ಟೆಪ್ಪ ತಳವಾರ ರವರಲ್ಲಿ ಕೆಲಸಕ್ಕೆ ಇದ್ದು, ನನ್ನ ಹೆಂಡತಿ ಮಕ್ಕಳೊಂದಿಗೆ ಅವರ ಹೊಲದಲ್ಲಿನ ಮೆಟಗಿಯಲ್ಲಿ ವಾಸವಾಗಿರುತ್ತೇನೆ. ನಮ್ಮ ಮಾಲಿಕರು ಮಹಾರಾಷ್ಟ್ರದ ಅಕ್ಲೂಜ್ ನಲ್ಲಿ ವಾಸವಾಗಿದ್ದು ಆಗಾಗ ಬಂದು ಹೊಲದ ಕೆಲಸಗಳನ್ನು ನೋಡಿಕೊಂಡು ಹೋಗುತ್ತಾರೆ. ನಮ್ಮ ಮಾಲಿಕರ ಹೊಲದಲ್ಲಿ ಕಬ್ಬು ಬೆಳೆದಿರುತ್ತೇವೆ. ದಿನಾಂಕ:18-06-2016 ರಂದು ಬೆಳಿಗ್ಗೆ 07-00 ಗಂಟೆ ಸುಮಾರಿಗೆ ನಾನು ಕಬ್ಬಿನ ಗದ್ದೆಯಲ್ಲಿ ಕಬ್ಬಿಗೆ ನೀರುಣಿಸುತ್ತಾ ಹೋದಾಗ ಕಬ್ಬಿನ ಕವಲಿ(ಸಾಲು) ಗಳಲ್ಲಿ ಒಬ್ಬ ಗಂಡು ವ್ಯಕ್ತಿಯ ಶವ ಬೋರಲಾಗಿ ಬಿದ್ದಿದ್ದು ಕಂಡುಬಂದಿರುತ್ತದೆ. ಕೂಡಲೆ ನಾನು ಈ ವಿಷಯವನ್ನು ನಮ್ಮ ಮಾಲಿಕರಾದ ಮಹಾದೇವ ತಳವಾರರವರಿಗೆ ಪೋನ ಮೂಲಕ ತಿಳಿಸಿರುತ್ತೇನೆ. ಅವರು ಈ ವಿಷಯವನ್ನು ಅಫಜಲಪೂರ ಪೊಲೀಸ್ ಠಾಣೆಗೆ ತಿಳಿಸಿದ್ದು, ಪೊಲೀಸನವರು ಬಂದ ನಂತರ ಮೃತ ವ್ಯಕ್ತಿಯ ಶವವನ್ನು ಹೊರಳಿಸಿ ನೋಡಿದ್ದು ಸದರಿಯವನ ಮೈಮೇಲೆ ಒಂದು ಬೂದು ಬಣ್ಣದ ಪ್ಯಾಂಟ ಮತ್ತು ಬಿಳಿ ಬಣ್ಣದ ನೀಲಿ ಹಾಗು ಹಸಿರು ಪಟ್ಟಿಗಳುಳ್ಳ ಚೌಕಡಿ ಶರ್ಟ ಇರುತ್ತದೆ. ಶರ್ಟಿನ ಕಾಲರ್ ಮೇಲೆ LIFE STYLE INDI ಎಂಬ ಲೇಬಲ್ ಇರುತ್ತದೆ. ಸದರಿಯವನ ವಯಸ್ಸು ಅಂದಾಜು 25 ರಿಂದ 30 ವರ್ಷ ಇದ್ದು ಸೊಂಟದಲ್ಲಿ ದಾರದ ಉಡದಾರ ಮತ್ತು ಕೊರಳಲ್ಲಿ ಸಣ್ಣ ರುದ್ರಾಕ್ಷಿ ಇದ್ದುದರಿಂದ ಹಿಂದೂ ಇದ್ದಂತೆ ಕಂಡುಬರುತ್ತದೆ. ಸದರಿಯವನಿಗೆ ಯಾರೋ ದುಷ್ಕರ್ಮಿಗಳು ಯಾವುದೊ ದುರುದ್ದೇಶದಿಂದ ನಮ್ಮ ಮಾಲಿಕರ ಹೊಲದ ಪಕ್ಕದ ಮಲ್ಲಪ್ಪ ಪೂಜಾರಿ ರವರ ಹೊಲದಲ್ಲಿ ಯಾವುದೊ ಹರಿತವಾದ ಆಯುಧಗಳಿಂದ ಕುತ್ತಿಗೆಗೆ, ಗದ್ದಕ್ಕೆ, ಬಾಯಿಗೆ, ಮೂಗಿನ ಮೇಲೆ, ತಲೆಗೆ, ಎರಡೂ ಕೈಗಳ ಮೇಲೆ ಮತ್ತು ಶರೀರದ ಇನ್ನಿತರ ಕಡೆಗಳಲ್ಲಿ ಹೊಡೆದು ಭಾರಿರಕ್ತಗಾಯಗಳು ಪಡಿಸಿ ಕೊಲೆ ಮಾಡಿ ಸಾಕ್ಷಿ ಪುರಾವೆಗಳು ನಾಶಪಡಿಸುವ ಉದ್ದೇಶದಿಂದ ಶವವನ್ನು ನಮ್ಮ ಮಾಲಿಕರ ಕಬ್ಬಿನ ಗದ್ದೆಯಲ್ಲಿ ಎಸೆದಿರುತ್ತಾರೆ. ಸದರಿಯವನಿಗೆ ಕೊಲೆ ಮಾಡಿದ ಸ್ಥಳದಲ್ಲಿ ಹಲ್ಲುಗಳು, ತಲೆಮೇಲಿನ ಕೂದಲು ಮತ್ತು ರಕ್ತ ಬಿದ್ದಿರುತ್ತದೆ. ಸದರಿ ಮೃತನ ಎತ್ತರ ಅಂದಾಜು 05 ಫೀಟ್ 05 ಇಂಚು ಇದ್ದು, ಗೋದಿಗೆಂಪು ಬಣ್ಣ ಇರುತ್ತದೆಸದರಿ ಘಟನೆಯು ದಿನಾಂಕ-17-06-2016 ಮತ್ತು ದಿನಾಂಕ-18-06-2016 ರ ಬೆಳಿಗ್ಗೆ 07-00 ಗಂಟೆಯ ಮದ್ಯದ ಅವಧಿಯಲ್ಲಿ ಸಂಭವಿಸಿರಬಹುದು. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 20/06/2016 ರಂದು ಬೆಳ್ಳಿಗೆ ದೇವಿ ನಗರ ಬಡಾವಣೆಯ ಭವಾನಿ ಗುಡಿಯ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ಯುವಕನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೇಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀ ಡಬ್ಲೂ.ಹೆಚ್‌.ಕೊತ್ವಾಲ್‌ ಪಿಎಸ್‌‌ಐ ರಾಘವೇಂದ್ರ ನಗರ ಪೊಲೀಸ ಠಾಣೆರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಿ ಖಚಿತಪಡಿಸಿಕೊಂಡು ದಾಳಿ ಮಾಡಿ ಒಬ್ಬ ಯುವಕನನ್ನು ಹೀಡಿದು ಆತನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಭೀಮಾಶಂಕರ ತಂದೆ ಕಾಶೀನಾಥ ಗೇಣಿ ಸಾ: ದುದನಿ ತಾ: ಅಕ್ಕಲಕೊಟ ಮಹಾರಾಷ್ಟ್ರ ಹಾ:ವ: ಜೆ.ಆರ್ ನಗರ ಕಲಬುರಗಿ ಅಂತಾ ತಿಳಿಸಿದನು . ಆತನ ಅಂಗ ಶೋದನೆ ಮಾಡಲು ಅವನ ಹತ್ತಿರ ಮಟಕಾ ಜೂಜಾಟ ಸಂಬಂಧಿಸಿದ ನಗದು ಹಣ 2770=00 ರೂ ಮತ್ತು 5 ಮಟಕಾ ನಂಬರ ಬರೆದ ಚಿಟಿಗಳು ಮತ್ತು ಒಂದು ಬಾಲ ಪೇನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

20 June 2016

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಮೃತ ಯಲ್ಲಮ್ಮ ಗಂಡ ಕೃಷ್ಣಪ್ಪ ಇವಳು ಸಾರ್ವಜನಿಕರೊಂದಿಗೆ ಅನೈತಿಕ ಸಂಭಂಧ ಇಟ್ಟುಕೊಂಡಿರುವುದರಿಂದ ಯಲ್ಲಮ್ಮಳ ಮಲತಾಯಿಯ ಮಗನಾದ ಮಾಹಾಂತೇಶ ಈತನು ಹಲವಾರು ಬಾರಿ ಯಲ್ಲಮ್ಮಳಿಗೆ ಮತ್ತು ಆತನ ತಂದೆಯಾದ ಕೃಷ್ಣಪ್ಪ ಇವರಿಗೆ ಅನೈತಿಕ ಸಂಭಂಧ ಬಿಡುವಂತೆ ಅದರಿಂದ ಮನೆಯ ಮರ್ಯಾದೆ ಹೋಗುತ್ತಿದೆ ಅಂತಾ ತಂಟೆ ತಕರಾರು ಮಾಡಿಕೊಳ್ಳುತ್ತಾ ಬಂದರೂ ಸಹ ಯಲ್ಲಮ್ಮ ಇವಳು ಅನೈತಿಕ ಸಂಭಂಧ ಮುಂದುವರೆಸಿಕೊಂಡು ಬಂದಿರುವುದರಿಂದ ಅವಳನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ಆರೋಪಿತನಾದ ಅಶೋಕ ತಂದೆ ಶರಣಯ್ಯ ಗುತ್ತೇದಾರ ಈತನ ಪ್ರಚೋದನಯಿಂದ ತನ್ನ ಗೆಳೆಯರಾದ ಗುಡೂಸಾಬ್ ತಂದೆ ಅಜೀಜ್‌ ಮಿಯಾ ಹಾಗೂ ಅಂಬರೀಶ ತಂದೆ ಈರಣ್ಣ ಬಿರಾದಾರ ಇವರೊಂದಿಗೆ ದಿನಾಂಕ: 19/06/2016 ರಂದು ರಾತ್ರಿ 9-00 ಗಂಟೆ ಸುಮಾರಿಗೆ ದೀನ್‌ ದಯಾಳ್‌ ಕಾಲೋನಿಯ ಮಾಹಾಂತೇಶ ನ ಪಾನ್ ಶಾಪ್‌ ದಲ್ಲಿ ಪ್ಲಾನ್ ಮಾಡಿಕೊಂಡು ಯಲ್ಲಮ್ಮಳ ಮನೆಗೆ ಹೋಗಿ ನಿನ್ನ ಗಂಡ ಕುಡಿದು ರೋಡಿನ ಮೆಲೆ ಬಿದ್ದಿರುತ್ತಾನೆ ಅಂತಾ ಹೇಳಿ ಮನೆಯಿಂದ ಕರೆದುಕೊಂಡು ಎಸ್.ಎಂ ಕೃಷ್ಣಾ ಕಾಲೋನಿಯ ರೋಡಿಗೆ ಕರೆದುಕೊಂಡು ಹೋಗಿ ಯಲ್ಲಮ್ಮಳಿಗೆ ಗುಡೂಸಾಬ್‌ ಮತ್ತು ಅಂಬರೀಶ್ ಇವರು ಕೆಳಗೆ ಕೆಡವಿದ್ದು ಮಾಹಾಂತೇಶನು ಕಲ್ಲುಗಳಿಂದ ತಲೆಯ ಮೇಲೆ ಹಣೆಯ ಮೇಲೆ ಹೊಡೆದು ಕೊಲೆ ಮಾಡಿರುತ್ತಾನೆ ನಂತರ ಬಿಡಿಸಲು ಬಂದಿರುವ ಯಲ್ಲಮ್ಮಳ ಮಗಳು ಆಶಾ ಇವಳಿಗೂ ಸಹ ಸ್ವಲ್ಪ ದೂರ ಎಳೆದುಕೊಂಡು ಹೋಗಿ ಗೂಡೂಸಾಬ್ ಈತನು ಒಂದು ಕಟ್ಟಿಗೆಯಿಂದ ತಲೆಯ ಮೇಲೆ ಹೊಡೆದಿದ್ದು ಅಂಬರೀಶ ಇತನು ಎರಡು ಕೈಗಳು ಹಿಡಿದಿದ್ದು ಮಾಹಾಂತೇಶನು ಚಾಕುವಿನಿಂದ ಆಶಾಳ ಕುತ್ತಿಗೆ ಕೊಯಿದು ಕೊಲೆ ಮಾಡಿರುತ್ತಾರೆ.  ಅಂಥಾ ಶ್ರೀ ಕೃಷ್ಣಪ್ಪ ತಂದೆ ರುಕ್ಮಯ್ಯ ಕಲಾಲ್‌ ಸಾ: ಡಬರಾಬಾದ ಹಾವ: ಪಂಡಿತ್ ದೀನ್‌ ದಯಾಳ್ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 19/06/2016 ರಂದು ಮದ್ಯಾಹ್ನ 12-00 ಪಿ.ಎಂಕ್ಕೆ  ಶ್ರೀ. ಸುರೇಶ ತಂದೆ ನಿಂಗಪ್ಪಾ ಕಟ್ಟಿಮನಿ  ಸಾ:  ಅರುಣ ಗೊಡಬೊಲೆ ಮನೆಯಲ್ಲಿ ಬಾಡಿಗೆ ಅಶೋಕ ನಗರ ಕಲಬುರಗಿ ರವರು ಮತ್ತು ತನ್ನ ಪತ್ನಿ ಮಕ್ಕಳೊಂದಿಗೆ ಈಗ ಒಂದುವರೆ ವರ್ಷಗಳಿಂದ ಅರುಣ ಗೊಡಬೊಲೆ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿರುತ್ತೆವೆ.  ಅದೇ ಮನೆಯಲ್ಲಿ ಓರಿಸ್ಸಾ ಮೂಲದವರಾದ ಕೃಷ್ಣಾ ಮತ್ತು ಅವರ ಪತ್ನಿ ಮಮತಾ ರವರು ವಾಸವಾಗಿರುತ್ತಾರೆ. ನೀರು ತುಂಬವ ಮೊಟರ ಸಲುವಾಗಿ ಈ ಹಿಂದೆ ನನ್ನ ಪತ್ನಿ ವಾಣಿ ಜೊತೆಯಲ್ಲಿ ಮಮತಾ ರವರು ಜಗಳ ಮಾಡಿದ್ದರು. ಇಂದು ದಿನಾಂಕ 19/06/2016 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮಳೆ ನೀರು ನಿಂತಿದಕ್ಕೆ ನನ್ನ ಪತ್ನಿ ವಾಣಿ ರವರು ಮನೆ ಮಾಲಿಕರ ಸಂಬಂಧಿಕ ಮನೋಜ ರವರಿಗೆ ಹೇಳಿದಕ್ಕೆ ಅವರು ಒಡ್ಡೆ ಒಡೆದು ನೀರು ತೆಗೆದಿರುತ್ತಾರೆ. ಅದಕ್ಕೆ ಕೃಷ್ಣ ಮತ್ತು ಮಮತಾ  ರವರು ನನ್ನ ಪತ್ನಿ ವಾಣಿ ರವರಿಗೆ ರಂಡಿ ನೀನೆ ಹೇಳಿ ಒಡ್ಡು ಮುರಿಸಿದ್ದಿ ಅಂತಾ ಬೈದ್ದರು. ಆಗ ನಾನು ನನ್ನ ಹೆಂಡತಿಗೆ ಯ್ಯಾಕೆ? ಬೈಯ್ದಿರಿ ಎಂದು ಕೇಳಲು ಹೊದಾಗ ಕೃಷ್ಣ ರವರು  ರಂಡಿ ಮನಗೆ ಭೋಸಡಿ ಮನಗೆ ಎಂದು ಬೈದ್ದು ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಾಯಗೊಳಿಸಿರುತ್ತಾರೆ.  ಮಮತಾ ರವರು ನನ್ನ ಪತ್ನಿ ವಾಣಿರವರ ಜೋತೆ ದಕ್ಕಮಸ್ತಿಗೆ ಬಿದ್ದು ಕೈಯಿಂದ ಹೊಡೆದಿರುತ್ತಾರೆ. ಮತ್ತು ಅವರಿಂದ ನನ್ನ ಜೀವಕ್ಕೆ ಅಪಾಯವಿದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಬಸ್ಸಿಗೆ ಕಲ್ಲು ತೂರಾಟ ಮಾಡಿದ ಪ್ರಕರಣಗಳು :
ಅಶೋಕ ನಗರ ಠಾಣೆ : ದಿನಾಂಕ 19/06/2016 ರಂದು 13:30  ಪಿ.ಎಮ್.ಕ್ಕೆ ನಾನು & ಕಂಡಕ್ಟರ್ ಅಣ್ಣಪ್ಪಾ ಕಂ. ನಂ. 4992 ರವರೊಂದಿಗೆ ಕೆ.ಎಸ್.ಆರ್.ಟಿ.ಸಿ ನೃಪತುಂಗ ನಗರ ಸಾರಿಗೆ ಸಬ್ ನಂ. ಕೆಎ 32 ಎಪ್‌ 1850 ರಲ್ಲಿ ಪ್ರಯಾಣಿಕರನ್ನು ಹಾಕಿಕೊಂಡು ಬಸ್ಟಾಂಡದಿಂದ ರಾಮ ಮಂದಿರ ಕಡೆಗೆ ಹೋಗುತ್ತಿರುವಾಗ ಸಮಯ 13:45 ಪಿಎಮ್ ಕ್ಕೆ ರಾಷ್ಟ್ರಪತಿ ಸರ್ಕಲ ಎದುರುಗಡೆ ಎಕ್ಸಿಸ್ ಬ್ಯಾಂಕ ಎದುರುಗಡೆ ರಸ್ತೆಯ ಮೇಲೆ ಎರಡು ಬೈಕ್ ಮೇಲೆ 3-4 ಜನ ಪ್ರತಿಭಟನಾ ಕಾರರು ಒಮ್ಮೆಲೆ ಬಂದು ಕಲ್ಲು ತೂರಾಟ ಮಾಡಿದ್ದರಿಂದ ನಮ್ಮ ಬಸ್ಸಿನ ಎದುರುಗಡೆ ಗ್ಲಾಸ ಮತ್ತು ಬಲಗಡೆಯ ಎರಡು ಗ್ಲಾಸಗಳು ಜಖಂಗೊಂಡಿದ್ದು ಇದರಿಂದ 15000/-ರೂ. ಹಾನಿ ಆಗಿರುತ್ತದೆ. ಇಂದು ನಗರದಲ್ಲಿ ಖಮರುಲ್ ಇಸ್ಲಾಂ ರವರಿಗೆ ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಅವರ ಬೆಂಬಲಿಗರು ಆಕ್ರೋಶಗೊಂದು ಪ್ರತಿಭಟನೆ ಮಾಡಿ ಕಲ್ಲು ತೂರಾಟ ಮಾಡಿರುತ್ತಾರೆ. ಕಲ್ಲು ತೂರಾಟ ಮಾಡಿದವರಲ್ಲಿ ಒಬ್ಬ ಕಪ್ಪು ಟಿ ಶರ್ಟ ಧರಿಸಿದ್ದು ಕಾರಣ ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ರವಿ ತಂದೆ ಪ್ರಭುಲಿಂಗ ಡ್ರೈವರ ನಂ.972 ಬಸ್ ಡಿಪೋ ನಂ.4 ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಶೋಕ ನಗರ ಠಾಣೆ : ದಿನಾಂಕ 19/06/2016 ರಂದು 13-50 ಪಿಎಂಕ್ಕೆ  ನಾನು ಮತ್ತು ಕಂಡಕ್ಟರ ರೂಪ್ಲಪ್ಪಾ ಡಿ ಕಂ.ಸಿ 195 ರವರೊಂದಿಗೆ ಕೆ.ಎಸ್‌.ಆರ್‌.ಟಿ.ಸಿ ಬಸ  ನಿಲ್ದಾಣದಿಂದ ಬಸ ನಂ. ಕೆಎ 36-ಎಫ್‌-1237 ರಲ್ಲಿ ಪ್ರಯಾಣಿಕರೊಂದಿಗೆ ಬಸ  ಸ್ಟ್ಯಾಂಡ ದಿಂದ ಹೊರ ಹೊಗುವಾಗ  13-50 ಪಿಎಂಕ್ಕೆ ರಸ್ತೆಯ ಮೇಲೆ 2 ಬೈಕ ಮೇಲೆ 3-4 ಪ್ರತಿಭಟನಾಕಾರರು ಒಮ್ಮೇಲೆ ಬಂದು ಕಲ್ಲು ತೂರಾಟ ಮಾಡಿದ್ದ ಕಾರಣ ನಮ್ಮ ಬಸ್ಸಿನ ಎದರುಗಡೆಯ ಗ್ಲಾಸ ಜಖಂ ಗೊಂಡಿದ್ದು ಇದರಿಂದ 15000/- ರೂ ಹಾನಿ ಹಾಗಿರುತ್ತದೆ. ಇಂದು ಕಲಬುರಗಿ ನಗರದಲ್ಲಿ  ಖಮರೂಲ ಇಸ್ಲಾಂ ರವರಿಗೆ ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಕ್ಕೆ ಅವರ ಬೆಂಬಲಿಗರು ಆಕ್ರೊಶಗೊಂಡು ಪ್ರತಿಭಟನೆ ಮಾಡುತ್ತಾ ಕಲ್ಲು ತೂರಾಟ ಮಾಡಿರುತ್ತಾರೆ.  ಕಲ್ಲು ತೂರಾಟ ಮಾಡಿದವರಲ್ಲಿ ಒಬ್ಬ ಕಪ್ಪು ಟಿ-ಶರ್ಟ ಧರಿಸಿದವನು ಆಗಿದ್ದು ಕಾರಣ ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೆಕೆಂದು  ಅಂತಾ ಶ್ರೀ ಇಬ್ರಾಹಿಂ ಬಸ ಚಾಲಕ ನಂ.257 ಸಿಂಧನೂರ ಬಸ ಡಿಪೊ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 19/06/16 ರಂದು ಬೆಳಿಗ್ಗೆ 11-45  ಗಂಟೆ ಸುಮಾರಿಗೆ ಕೆ.ಎಸ್.ಅರ್.ಟಿ.ಸಿ. ಬಸ್ಸು ನಂ ಕೆಎ 32 F 1702 ನೇದ್ದರಲ್ಲಿ ಪ್ರಯಾಣಿಕರನ್ನು  ಉಮರ್ಗಾದಿಂದ ಕೂಡಿಸಿಕೊಂಡು ಬಸ್ಸು ನಡೆಸುತ್ತಾ ಮಧ್ಯಾಹ್ನ 02-30 ಗಂಟೆ ಸುಮಾರಿಗೆ  ಕಲಬುರಗಿ ನಗರದ ಮಿಜಾಬ ರಿಂಗ ರೋಡ ಕ್ರಾಸನಲ್ಲಿ ಬಂದಾಗ ಆಗ ನಾಲ್ಕು ಜನರು ಅಂದಾಜ 30-34 ವರ್ಷ ವಯಸ್ಸಿನವರು ಕೂಡಿಕೊಂಡು ಬಂದು ಖಮರಲ್ಲ ಇಸ್ಲಾಂ ಇವರಿಗೆ ಸಚಿವ ಸಂಪುಟಕ್ಕೆ ಕೈ ಬಿಟ್ಟಿದ್ದಕ್ಕೆ ಅವರ ಬೆಂಬಲಿಗರು ಪ್ರತಿಭಟನೆ ಮಾಡುತ್ತಾ ಮತ್ತು ಕೂಗುತ್ತಾ  ಆಕ್ರೋಶಗೊಂಡು  ನಮ್ಮ ಬಸ್ಸಿನ ಎದುರುಗಡೆ ಬಂದು ನನಗೆ ಬಸ್ಸು ನಿಲ್ಲಿಸುವಂತೆ ಕೈ ಸನ್ನೆ ಮಾಡಿ ಬಸ್ಸು ನಿಲ್ಲಿಸಿ, ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಬಸ್ಸಿನ ಮುಂದಿನ ಗ್ಲಾಸಿಗೆ ಕಲ್ಲು ತೂರಾಟ ಮಾಡಿ ದೊಡ್ಡ ಗ್ಲಾಸು ಒಡೆದರು. ಮತ್ತು ಅದರಂತೆ ಬಲಗಡೆಯ ಸೈಡ ಗ್ಲಾಸು ಒಟ್ಟು ಆರು ಗ್ಲಾಸುಗಳಿಗೆ ಕಲ್ಲು ತೂರಾಟ ಮಾಡಿ ಒಡೆದು ಅಲ್ಲಿಂದ ಹೋದರು. ಈ ಘಟನೆಯಿಂದಾಗಿ ಬಸ್ಸಿನಲ್ಲಿದ್ದ  ನನಗೆ ಮತ್ತು ಕಂಡಕ್ಟರ ಹಾಗೂ ಪ್ರಯಾಣಿಕರಿಗೆ ಯಾವುದೇ ಗಾಯಗಳು ವಗೈರೇ ಆಗಿರುವುದಿಲ್ಲಾ. ಬಸ್ಸಿನಲ್ಲಿದ್ದ ಪ್ರಯಾಣಿಕರ ಹೆಸರು ವಿಳಾಸ ಗೊತ್ತಿಲ್ಲಾ. ಮುಂದಿನ ಗ್ಲಾಸು ಒಡೆದಿದ್ದರಿಂದ ಅಂದಾಜ 12,000/- ರೂ.  ಮತ್ತು ಬಲಗಡೆ ಸೈಡ ಗ್ಲಾಸು ಒಡೆದಿದ್ದರಿಂದ ಅಂದಾಜ 6000/- ರೂ. ಹೀಗೆ ಒಟ್ಟು 18,000/- ರೂ. ಲುಕ್ಸಾನ ಆಗಿರುತ್ತದೆ. ಕಲ್ಲು ತೂರಾಟ ಮಾಡಿದ ನಾಲ್ಕು ಜನರ ಹೆಸರು ವಿಳಾಸ ಗೊತ್ತಿಲ್ಲಾ. ಅವರಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆ. ಅಂತಾ ಶ್ರೀ ಕರಬಸಪ್ಪ ತಂದೆ ಶಿವಪ್ಪ ಮೂಕ ವ:34 ವರ್ಷ ಉ:ಕೆ.ಎಸ್.ಅರ್.ಟಿ.ಸಿ. ಬಸ್ಸು ಕೆಎ 32 ಎಫ 1702 ಚಾಲಕ  ಪಿ.ನಂ. 26824 ಆಳಂದ ಡಿಪೋ ಮು:ಕಡಗಂಚಿ ಗ್ರಾಮ ತಾ:ಆಳಂದ ಜಿ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.