POLICE BHAVAN KALABURAGI

POLICE BHAVAN KALABURAGI

02 May 2016

Kalaburagi District Reported Crimes

ಅತ್ಯಾಚಾರ ಪ್ರಕರಣ :
ಯಡ್ರಾಮಿ ಠಾಣೆ : ಫಿರ್ಯಾದಿಯ ತಂದೆಯವರು ಇಗ ಸುಮಾರು 15-16 ವರ್ಷಗಳ ಹಿಂದೆ ಮೃತ ಪಟ್ಟಿದ್ದು. ನನ್ನ ತಂಗಿ ಕುಮಾರಿ ಇವಳು ನಮ್ಮ ಮನೆಯವರೆಲ್ಲರಿಗೂ ಹೇಳಿದ್ದೆನೆಂದರೆ ಇಗ ಕೆಲವು ತಿಂಗಳಿಂದ ನಾನು ಬಯಲು ದಸೇಗೆ ಹೋದಾಗೆಲ್ಲ ನಮ್ಮೂರಿನ ಬಸವರಾಜ ತಂದೆ ಮಹಾಂತಪ್ಪ ದೊಡ್ಡಮನಿ ಇತನು ನನಗೆ ಲೈಗಿಂಕ ಉದ್ದೆಶದಿಂದ  ಹಿಂಬಾಲಿಸುವದು, ಕೈ ಸನ್ನೆ ಮಾಡಿ ಕರೆಯುವದು, ನನಗೆ ಮದುವೆ ಮಾಡಿಕೊ ಪುಸಲಾಯಿಸಿ ಪಿಡಿಸುತ್ತಿದ್ದ ಅಂತಾ ನನ್ನ ತಂಗಿಯಿಂದ ಕೇಳಿ ಗೊತ್ತಾಗಿದ್ದು ದಿನಾಂಕ 30-04-2016 ರಂದು ರಾತ್ರಿ ನಾವೆಲ್ಲರೂ ಮನೆಯಲ್ಲಿ ಊಟ ಮಾಡಿ ಮಾತಾಡುತ್ತಾ ಕುಳಿತ್ತಿದ್ದೆವು. ರಾತ್ರಿ 10 ಗಂಟೆಯ ಸುಮಾರಿಗೆ ನನ್ನ ತಂಗಿಯಾದ ಗೀತಾ ಇವಳು ಬಯಲು ದಸೆಗೆ ಹೋಗುವದಾಗಿ ಹೇಳಿದಾಗ ಆಕೆಯೊಂದಿಗೆ ನನ್ನ ತಾಯಿಯಾದ ಲಕ್ಷ್ಮಿಬಾಯಿ, ಹಾಗು ನನ್ನ ತಮ್ಮನ ಹೆಂಡತಿಯಾದ ನೀಲಮ್ಮ ಹೀಗೆಲ್ಲರೂ ಬಯಲು ದಸೆಗೆ ಹೊದರು. ಸಲ್ಪ ಸಮಯದ ನಂತರ ನನ್ನ ತಾಯಿ ಹಾಗು ನನ್ನ ತಮ್ಮನ ಹೆಂಡತಿ ಇಬ್ಬರೂ ಚೀರಾಡುತ್ತಾ ಮನೆಗೆ ಬಂದು ಹೇಳಿದ್ದೆನೆಂದರೆ  ನಾವೆಲ್ಲರೂ ಸ್ವಲ್ಪ ದೂರ ದೂರದಲ್ಲಿ ಬಯಲು ದಸೆಗೆ ಕುಳಿತಾಗ ನಮ್ಮೂರಿನ ಬಸವರಾಜ ಇತನು ಕುಮಾರಿ ಇವಳ ಕಡೆಗೆ ಬಂದಾಗ ಗೀತಾ ಇವಳು ಎದ್ದು ನಿಂತು ಯಾಕೆ ಬರುತ್ತಿ ಹೆಣ್ಣು ಮಕ್ಕಳು ಕುಳಿತಿದ್ದು ಕಾಣಿಸುವದಿಲ್ಲಾ ಅಂತಾ ಅಂದಿದ್ದಕ್ಕೆ ಬಸವರಾಜ ಇತನು ನನ್ನೊಂದಿಗೆ ಮದುವೆ ಮಾಡಿಕೊ ಅಂತಾ ಅಂದರು ವಲ್ಲಂತಿಯಾ ಅಂತಾ ಅಂದು ನಿನಗೆ ಮದುವೆಯಾಗಿದೆ ನಾನು ಇನ್ನು ಚಿಕ್ಕವಳಿದ್ದೆನೆ ಅಂತಾ ಅಂದರು ಕೂಡ ಕೇಳದೆ ಅವಳ ಕೈ ಹಿಡಿದು ಜಗ್ಗಾಡುತ್ತಿದ್ದಾಗ ನಾವಿಬ್ಬರೂ ಬಿಡಿಸಿಕೊಳ್ಳಲು ಹೋದಾಗ ನಮ್ಮಿಬ್ಬರಿಗೆ ಬಸವರಾಜ ಇತನು ನುಕಿಸಿಕೊಟ್ಟು  ಅಲ್ಲಿಂದ ನಮ್ಮ ಮಗಳನ್ನುಅಪಹರಿಕೊಂಡು ಹೋಗಿರುತ್ತಾನೆ ಹೋಗುವಾಗ ಗೀತಾಳನ್ನು ಅಪಹರಿಸಿಕೊಂಡು ಹೋದ ಬಗ್ಗೆ ಯಾರಿಗಾದರು ಹೇಳಿದರೆ ನಿಮಗೆ ಖಲಾಸ ಮಾಡುತ್ತೆನೆ ಅಂತಾ ಜೀವದ ಭೆದರಿಕೆ ಹಾಕಿರುತ್ತಾನೆ. ಅಂತಾ ಅರ್ಜಿ ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಮಾಡಿಕೊಂಡಿದ್ದು ಅಪಹರಣಕ್ಕೊಳಗಾದ ಕುಮಾರಿ ಇವಳು ಇಂದು ದಿನಾಂಕ: 02-05-2016 ರಂದು ಬೆಳಿಗ್ಗೆ 10 ಗಂಟೆಗೆ ಪತ್ತೆಯಾಗಿದ್ದು, ಅವಳ ಹೇಳಿಕೆಯನ್ನು ಪಡೆದುಕೊಳ್ಳಲಾಗಿ ಅವಳು ತನ್ನ ಹೇಳಿಕೆಯಲ್ಲಿ ಈಗ ಕೇಲವು ತಿಂಗಳಿಂದ ನನಗೆ ಬಸವರಾಜ ಇತನು ನಮ್ಮೂರಿನ ಬಯಲು ದೆಸೆಗೆ ಹೋದ ಗಿಡ ಗಂಟಿಗಳಲ್ಲಿ 2-3 ಸಲ ಜಬರಿ ಸಂಬೋಗ ಮಾಡಿದ್ದು, ಈ ಬಗ್ಗೆ ಯಾರಿಗಾದರು ಹೇಳಿದರೆ ನನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದರಿಂದ ನಾನು ಯಾರಿಗೂ ಈ ವಿಷಯ ಹೇಳಿರುವದಿಲ್ಲ. ಅಲ್ಲದೆ ದಿನಾಂಕ 30-04-2016 ರಂದು ನನಗೆ ಅಪಹರಿಸಿಕೊಂಡು ಹೋಗಿ ನಮ್ಮೂರಿನ ಬಸ್ಸ ಸ್ಟ್ಯಾಂಡ ಮುಂದುಗಡೆ ಗೋದಾಮಿನ ಹತ್ತಿರ ನನ್ನ ಇಚ್ಚೆಗೆ ವಿರೋಧವಾಗಿ ಜಭರಿ ಸಂಬೋಗ ಮಾಡಿರುತ್ತಾನೆ. ಅಂತಾ ಸಲ್ಲಿಸಿದ್ದರ ದೂರು ಸಾರಾಂಶದ ಮೇಲಿಂದ  ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಭೀಮಾಶಂಕರ ತಂದೆ ನಾಗಶೇಟ್ಟಿ ಯದಲಾಪೂರ ಸಾಃ ಲಕ್ಷ್ಮೀ ಚೌಕ ಜೇವರಗಿ [ಬಿ] ರವರ ಮಗಳಾದ ಅಶ್ವಿನಿ ವಯ: 20 ವರ್ಷ, ಇವಳೆ ದೊಡ್ಡವಳಿದ್ದು ಇವಳಿಗೆ 31.05.2015 ರಂದು ಪ್ರೋಪಸರ್ ಕಾಲೋನಿ ಸಿಂದಗಿ ನಿವಾಸಿಯಾದ ಶ್ರೀಶೈಲ ತಂದೆ ಸಿದ್ದಣ್ಣ ಹಳ್ಳಿ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನನ್ನ ಮಗಳು ಮತ್ತು ಅಳಿಯ ಇಬ್ಬರು ಚೆನ್ನಾಗಿ ಇದ್ದರು. ಹೀಗಿದ್ದು ದಿನಾಂಕ 28.03.2016 ರಂದು ಯುಗಾದಿ ಹಬ್ಬಕ್ಕಾಗಿ ನನ್ನ ಮಗಳಿಗೆ ಗಂಡನ ಮನೆಯಿಂದ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದು ದಿನಾಂಕ  22.04.2016 ರಂದು ಮುಂಜಾನೆ 11-00 ಗಂಟೆಗೆ ನನ್ನ ಮಗಳು ಅಶ್ವಿನಿ ಇವಳಿಗೆ ಮನೆಯ ಮುಂದೆ ಇರು ಅಂತಾ ಹೇಳಿ ನಾನು ಮತ್ತು ನನ್ನ ಹೆಂಡತಿ ವಿಜಯಲಕ್ಷ್ಮೀ ಇಬ್ಬರು ಕೂಡಿಕೊಂಡು ಮಜೀದ ಹತ್ತಿರ ಇರುವ ನಮ್ಮ ಕಿರಾಣಿ ಅಂಗಡಿಗೆ ಬಂದು ಅಂಗಡಿಯ ವ್ಯಾಪಾರ ಮುಗಿಸಿಕೊಂಡು ನಂತರ ಸಾಯಂಕಾಲ 7.00 ಗಂಟೆಯ ಸುಮಾರಿಗೆ ನಾವಿಬ್ಬರು ನಮ್ಮ ಮನೆಗೆ ಹೋದಾಗ ನನ್ನ ಮಗಳು ಮನೆಯಲ್ಲಿ ಇರಲಿಲ್ಲಾ ಆಗ ನಾನು ಮತ್ತು ನನ್ನ ಹೆಂಡತಿ ನಮ್ಮ ಮನೆಯ ಅಕ್ಕ ಪಕ್ಕದ ರವರಿಗೆ ವಿಚಾರಿಸಲಾಗಿ ಅವಳು ನಮ್ಮ ಹತ್ತಿರ ಬಂದಿರುವದಿಲ್ಲಾ ಅಂತಾ ತಿಳಿಸಿದರು. ನಂತರ ರಾತ್ರಿಯಾಗಿದ್ದರಿಂದ ಅವಳು ಎಲ್ಲಿ ತನ್ನ ಗೆಳೆತಿಯರ ಮನೆಗೆ ಹೋಗಿರಬಹುದು ಅಂತಾ ತಿಳಿದುಕೊಂಡು ಸುಮ್ಮನೆ ಮನೆಯಲ್ಲಿದ್ದಾಗ ಮುಂಜಾನೆಯಾದರು ವಾಪಸ ಮನೆಗೆ ಬರದೇ ಇದ್ದುದ್ದಕ್ಕೆ ನಾವು ಗಾಬರಿಗೊಂಡು ಅಂದಿನಿಂದ ಇಲ್ಲಿಯ ವರೆಗೆ ನಮ್ಮ ಸಂಬಂಧಿಕರ ಊರುಗಳಲ್ಲಿ ವಿಚಾರಿಸಿದರೂ ಪತ್ತೆಯಾಗಿರುವದಿಲ್ಲಾ. ಮತ್ತು ನಮಗೆ ಪರಿಚಯಸ್ತರ ಹತ್ತಿರ ಹೋಗಿ ಅಶ್ವಿನಿ ಬಗ್ಗೆ ಕೇಳಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಮತ್ತು ಅವಳು ಇಲ್ಲಿಯವರೆಗೂ ಮರಳಿ ಮನೆಗೆ ಬಂದಿರುವುದಿಲ್ಲಾ ಅವಳು ಕಾಣೆಯಾಗಿರುತ್ತಾಳೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕಟ್ಟರಗಳ  ಜಪ್ತಿ ಮಾಡಿದ ಪ್ರಕರಣಗಳು:
ಜೇವರಗಿ ಠಾಣೆ : ದಿನಾಂಕ: 01.05.2016 ರಂದು ಜೇವರಗಿ ತಾಲೂಕಿನ ರಾಜವಾಳ ಗ್ರಾಮ ಸಿಮಾಂತರದ ಭೀಮಾನದಿಯ ದಡದಲ್ಲಿ ಟ್ರಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ರಾಜವಾಳ ಗ್ರಾಮಕ್ಕೆ ಹೋಗಿ ಬೀಮಾ ನದಿ ಸ್ವಲ್ಪ ದೂರದಲ್ಲಿ ಗಿಡಗಂಟಿಗಳ ಮರೆಯಾಗಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೇಳಗೆ ಇಳಿದು ಬೀಮಾ ನದಿಯ ಕಡಗೆ ನಡೆದುಕೊಂಡು ಹೋಗಿ ಗಿಡಗಂಟಿಗಳ ಮರೆಯಾಗಿ ನಿಂತು ನೋಡಲಾಗಿ ಬೀಮಾ ನದಿಯಿಂದ ಟ್ರ್ಯಾಕ್ಟರಗಳಲ್ಲಿ ಉಸುಕು ತುಂಬುತ್ತಿರುವದನ್ನು ನೊಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾವೇಲ್ಲರೂ ಮುಂಜಾನೆ 7.00 ಗಂಟೆಗೆ ದಾಳಿ ಮಾಡಿ ಹಿಡಿಯಲು ಹೋದಾಗ ಟ್ರ್ಯಾಕ್ಟರ ಚಾಲಕರು ಬಿಟ್ಟು ಓಡಲು ಪ್ರಾರಂಬಿಸಿದರು ನಾವು ಅವರಿಗೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನಸಿದರೂ ಸಿಕ್ಕಿರುವುದಿಲ್ಲಾ. ನಂತರ ಟ್ರ್ಯಾಕ್ಟರಗಳು ನಿಂತ ಸ್ಥಳಕ್ಕೆ ಬಂದು ಪಂಚರ ಸಮಕ್ಷಮ ಪರಿಶೀಲಿಸಲು ನೋಡಲು 1. ಕೆಂಪು ಬಣ್ಣದ ಮಹೇಂದ್ರಾ  ಕಂಪನಿಯಾ ಟ್ರಾಕ್ಟರ ನಂ ಕೆಎ-36-ಟಿಎ-730 ಇತ್ತು ಅದಕ್ಕೆ ನಿಲಿ ಬಣ್ಣ ನಂಬರ ಇರಲಾದ ಟ್ರ್ಯಾಲಿ ಇದ್ದು  ಅದರ ಟ್ರ್ಯಾಲಿಯಲ್ಲಿ ಒಂದು ಬ್ರಾಸ ಮರಳು ಇತ್ತು. ಟ್ರಾಕ್ಟರ ಅ.ಕಿ 2,00,000/-ರೂ ಒಂದು ಬ್ರಾಸ ಮರಳು ಅ.ಕಿ 1000/-ರೂ ಆಗಬಹುದು 2) ಒಂದು ಕೆಂಪು ಬಣ್ಣದ ಮಹಿಂದ್ರ ಟ್ರಾಕ್ಟರ ನಂಬರ ಕೆಎ-32-ಟಿ-7816 ಇದ್ದು ಅದಕ್ಕೆ ನಿಲಿ ಬಣ್ಣ ಟ್ರ್ಯಾಲಿ ಇತ್ತು  ಟ್ರ್ಯಾಲಿ ಮೇಲೆ ನಂಬರ ಇರುವುದಿಲ್ಲಾ, ಅದರ ಟ್ರಾಲಿಯಲ್ಲಿ ಒಂದು ಬ್ರಾಸ ಮರಳು ಇತ್ತು ಟ್ರಾಕ್ಟರ ಅ.ಕಿ 2,00,000/-ರೂ ಒಂದು ಬ್ರಾಸ ಮರಳಿನ ಅಕಿ 1000/-ರೂ ಆಗಬಹುದು. ನೋಡಿದರೆ ಸದರಿ ಟ್ರ್ಯಾಕ್ಟರಗಳ ಚಾಲಕರು ಸರಕಾದಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಸರಕಾರಕ್ಕೆ ರಾಜ ದನ ಭರಿಸದೇ ಮೋಸ ಮಾಡಿ ಕಳ್ಳತನದಿಂದ ಮರಳು ಮಾರಾಟ ಮಾಡಲು ತುಂಬುತಿರುವದು ಮತ್ತು ಟ್ರಾಕ್ಟರಗಳಲ್ಲಿ ಮರುಳು ತುಂಬಲು ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಇರುವದು ಕಂಡು ಬಂದಿದ್ದರಿಂದ ಸದರಿ ಎರಡು  ಟ್ರ್ಯಾಕ್ಟರ್ ಮರಳು ಸಮೇತ ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ದಿನಾಂಕ: 01.05.2016 ರಂದು ಜೇವರಗಿ ತಾಲೂಕಿನ ಮಲ್ಲಾ ( ಬಿ ) ಗ್ರಾಮ ಸಿಮಾಂತರದ ಭೀಮ ನದಿಯ ದಡದಲ್ಲಿ ಟ್ರಾಕ್ಟರಗಳು ಅಕ್ರಮವಾಗಿ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಾ (ಬಿ) ಗ್ರಾಮಕ್ಕೆ ಹೋಗಿ ಬಾತ್ಮಿ ಇದ್ದ ಸ್ಥಳದ ಕಡೆಗೆ ಹೊರಟ್ಟು ಸ್ವಲ್ಪ ದೂರದಲ್ಲಿ ಗಿಡಗಂಟಿಗಳ ಮರೆಯಾಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಬೀಮಾ ನದಿಯ ಕಡಗೆ ನಡೆದುಕೊಂಡು ಹೋಗಿ ನಮ್ಮ ಬ್ಯಾಟರಿ ಬೆಳಕಿನಲ್ಲಿ ನೋಡಲಾಗಿ ಬೀಮಾನದಿಯಿಂದ ಟ್ರ್ಯಾಕ್ಟರದಲ್ಲಿ ಉಸುಕು ತುಂಬುತ್ತಿರುವದನ್ನು ಖಚತ ಪಡಿಸಿಕೊಂಡು ದಾಳಿ ಮಾಡಿ ಹಿಡಿಯಲು ಹೋದಾಗ ಟ್ರ್ಯಾಕ್ಟರ ಚಾಲಕರು ಬಿಟ್ಟು ಓಡಲು ಪ್ರಾರಂಬಿಸಿದರು ನಾವು ಅವರಿಗೆ ಬೆನ್ನು ಹತ್ತಿ ಹಿಡಿಯಲು ಒಬ್ಬ ಸಿಕ್ಕಿದ್ದು ಉಳಿದವರು ಕತ್ತಲಲ್ಲಿ ಓಡಿ ಹೋದರು. ಸಿಕ್ಕವನಿಗೆ ಹೆಸರು ಕೇಳಲು ಮಲ್ಲಿಕಾರ್ಜುನ ತಂದೆ ಸಂಗಣ್ಣ ರೆಡ್ಡಿ ಸಾ: ಮಲ್ಲಾ ಬಿ ಮಸ್ಸಿ ಫರಗುಶೇನ್ ಕಂಪನಿಯಾ ಕೆಂಪು ಬಣ್ಣದ ಟ್ರಾಕ್ಟರ ನಂಬರ ಇರುವದಿಲ್ಲಾ ಅದರ ಟ್ರಾಲಿ ನಂ ಕೆಎ-32, ಟಿ-5293 ನೇದ್ದರ ಚಾಲಕ ಇರುತ್ತೇನೆ ಅಂತ ಹೇಳಿದ್ದು ಮತ್ತು ಓಡಿ ಹೋದವರ ಹೆಸರು ಗೊತ್ತಿರುವದಿಲ್ಲಾ ಹೇಳಿದನು. ಮತ್ತು ಮರಳು ತುಂಬುತ್ತಿರುವ ಬಗ್ಗೆ  ಪರವಾನಿಗೆ ಪತ್ರದ ಬಗ್ಗೆ ವಿಚಾರಿಸಲು ಏನು ಇರುವದಿಲ್ಲಾ ಅಂತ ಹೇಳಿದನು. ನಂತರ ಸ್ಥಳದಲ್ಲಿದ್ದ ಟ್ರಾಕ್ಟರಗಳು ಪಂಚರ ಸಮಕ್ಷಮ ಪರಿಶೀಲಿಸಲು ನೋಡಲು 1. ಕೆಂಪು ಬಣ್ಣದ ಮೇಸ್ಸಿ ಫರಗುಶೇನ್ ಕಂಪನಿಯಾ ಟ್ರಾಕ್ಟರ ಇಂಜಿನ ಮೇಲೆ ನಂಬರ ಇರುವದಿಲ್ಲಾ ಅದರ ಇಂಜಿನ ನಂಬರ ನೋಡಲು ಅದು ಎಸ್-325,03373 ಇದ್ದು ಅದರ ಟ್ರಾಲಿ ನಂ ಕೆಎ-32,ಟಿ5293 ಇತ್ತು ಅದರ ಟ್ರಾಲಿಯಲ್ಲಿ ಒಂದು ಬ್ರಾಸ ಮರಳು ಇತ್ತು. ಟ್ರಾಕ್ಟರ ಅ.ಕಿ 2,00,000/-ರೂ ಒಂದು ಬ್ರಾಸ ಮರಳು ಅ.ಕಿ 1000/-ರೂ ಆಗಬಹುದು 2) ಒಂದು ಕೆಂಪು ಬಣ್ಣದ ಮಹಿಂದ್ರ ಟ್ರಾಕ್ಟರ ಇಂಜಿನ ಮೇಲೆ ನಂಬರ ಇರುವದಿಲ್ಲಾ ಅದರ ಇಂಜಿನ ನಂಬರ ಆರ್.ಕೆಡಬ್ಲೂ 02297 ಅದರ ಟ್ರಾಲಿ ನಂಬರ ಕೆಎ-33,ಟಿ-1747 ಇದ್ದು ಅದರ ಟ್ರಾಲಿಯಲ್ಲಿ ಒಂದು ಬ್ರಾಸ ಮರಳು ಇತ್ತು ಟ್ರಾಕ್ಟರ ಅ.ಕಿ 2,00,000/-ರೂ ಒಂದು ಬ್ರಾಸ ಮರಳಿನ ಅಕಿ 1000/-ರೂ ಆಗಬಹುದು 3. ಒಂದು ಹಸಿರು ಬಣ್ಣದ ಜಾನ್ ಡೀರ ಕಂಪನಿಯಾ ಟ್ರಾಕ್ಟರ ಇಂಜೆನ ಮತ್ತು ಟ್ರಾಲಿ ಮೇಲೆ ನಂಬರ ಇರುವದಿಲ್ಲಾ ಅದರ ಇಂಜಿನ ನಂಬರ ನೋಡಲು ಪಿ.ವಾಯಿ3029ಡಿ355324 & 30292ಡಿಪಿವಾಯಿ25 ಇತ್ತು ಟ್ರಾಲಿಯಲ್ಲಿ ಒಂದು ಬ್ರಾಸ ಮರಳು ಇತ್ತು ಟ್ರಾಕ್ಟರ ಅ.ಕಿ 2,00,000/-ರೂ ಒಂದು ಬ್ರಾಸ ಮರಳಿನ ಅ,ಕಿ 1000/-ರೂ ಆಗಬಹುದು ಸದರಿ ಟ್ರ್ಯಾಕ್ಟರಗಳ ಚಾಲಕರು ಸರಕಾದಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಸರಕಾರಕ್ಕೆ ರಾಜ ದನ ಭರಿಸದೇ ಮೋಸ ಮಾಡಿ ಕಳ್ಳತನದಿಂದ ಮರಳು ಮಾರಾಟ ಮಾಡಲು ತುಂಬುತಿರುವದು ಮತ್ತು ಟ್ರ್ಯಾಕ್ಟರಗಳಲ್ಲಿ ಮರುಳು ತುಂಬಲು ಪರವಾನಿಗೆ ಪಡೆದುಕೊಳ್ಳದೇ ಇರುವದು ಕಂಡು ಬಂದಿದ್ದರಿಂದ ಸದರಿ ಮೂರು ಟ್ರ್ಯಾಕ್ಟರ್ ಮರಳು ಸಮೇತ ಜಪ್ತಿಮಾಡಿಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಶಿವಶರಣಪ್ಪಾ ತಂದೆ ಹಣಮಂತರಾಯ ನಿಂಬಾಳ ಸಾಃ ವಿಜಯ ನಗರ ಕಾಲೋನಿ ಕಲಬುರಗಿ  ರವರು ಕಲಬುರಗಿ ನಗರದ 108 ಅಂಬುಲೈನ್ಸ್ನಲ್ಲಿ ಡ್ರೈವರ ನೌಕರಿ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಿಜಯ ನಗರ ಕಾಲೋನಿಯಲ್ಲಿರುವ ಶಿವಕುಮಾರ ಮೇಲಶೆಟ್ಟಿ ಎಂಬುವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿದ್ದು ದಿನಾಂಕಃ 29.04.2016 ರಂದು ನನ್ನ ಹೆಂಡತಿಯ ತಂಗಿಯ ಮದುವೆ ಇರುವ ಕಾರಣ ನನ್ನ ಹೆಂಡತಿಯು ದಿನಾಂಕಃ 10.04.2016 ರಂದು ಸಿಂದನೂರಿಗೆ ಹೋಗಿದ್ದು  ಅವರಿಗೆ ಮುಂದೆ ಕಳುಹಿಸಿ ನಂತರ ದಿನಾಂಕಃ 26.04.2016  ರಂದು ಸಾಯಾಂಕಾಲ 6.00 ಗಂಟೆಯ ಸುಮಾರಿಗೆ ನಾನು ಮದುವೆಗೋಸ್ಕರ ಮನೆಗೆ ಸರಿಯಾಗಿ ಬೀಗ್ ಹಾಕಿಕೊಂಡು ಸಿಂದನೂರಿಗೆ ಹೋಗಿದ್ದು ದಿನಾಂಕಃ 29.04.2016 ರಂದು ಮದ್ಯಾಹ್ನ 4.00 ಗಂಟೆಯ ಸುಮಾರಿಗೆ ನನ್ನ ಸಂಗಡ ಕೆಲಸ ಮಾಡುವ ಶರಣಶಂಕರಯ್ಯಾ ಎಂಬುವರು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ನಿಮ್ಮ ಮನೆಯ ಮಾಲೀಕರಾದ ಶಿವಕುಮಾರ ಮೇಲಶೆಟ್ಟಿ  ಎಂಬುವರು ಪೋನ್ ಮಾಡಿ ತಿಳಿಸಿದೆನಂದರೆ ನಿಮ್ಮ ಮನೆಗೆ ಹಾಕೀರುವ ಬೀಗ ಮುರಿದಿದ್ದು ಮನೆಯಲ್ಲಿರುವ ಸಾಮಾನಗಳು ಚಲ್ಲಾ ಪಿಲ್ಲೇ ಆಗಿ ಬಿದ್ದರುತ್ತವೆ. ಯಾರೋ ಮನೆ ಕಳ್ಳತನ ಮಾಡಿಕೊಮಡು ಹೋಗಿದ ಹಾಗೆ ಕಾಣುತ್ತಿದೆ ಅಂತಾ ಪೋನ್ ಮಾಡಿ ತಿಳಿಸಿರುತ್ತಾರೆ. ಅಂತಾ ಹೇಳಿದ್ದಾಗ ನಾನು ದಿನಾಂಕಃ 30.04.2016 ರಂದು  ಸಿಂದನೂರಿನಿಂದ ಕಲಬುರಗಿ ನಗರಕ್ಕೆ ನೇರವಾಗಿ ಬಂದು ನಮ್ಮ ಮನೆಯಲ್ಲಿರುವ ಸಾಮಾನಗಳು ಪರಿಶೀಲನೆ ಮಾಡಿ ನೋಡಿದ್ದಾಗ ನಮ್ಮ ಮನೆಯಲ್ಲಿಟ್ಟಿರುವ 25000/- ನಗದು ಹಣ, 2 ತೋಲೆ ಬಂಗಾರದ ಉಂಗೂರ ಅಃಕಿಃ 30,000/-  ಒಂದು ಎಲ್ಇಡಿ ಟಿವಿ ಅಃಕಿಃ 5000/-4 ಜೋತೆ ಪ್ಯಾಂಟ,ಶರ್ಟಗಳು ಹಾಗೂ 2-3 ಸೀರೆಗಳು  ಹೀಗೆ ಒಟ್ಟು 60,000/- ಬೆಲೆ ಬಾಳುವ  ಸಾಮಾನಗಳು ದಿನಾಂಕಃ 28.04.2016 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ನಮ್ಮ ಮನೆಗೆ ಹಾಕಿರುವ ಕೀಲಿಯನ್ನು ಮುರಿದ್ದು ಮನೆಯಲ್ಲಿರುವ ಒಟ್ಟು ಅಃಕಿಃ 60,000/- ಬೆಳೆ ಬಾಳುವ  ಕಿಮ್ಮತಿನದ್ದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇವಿನ ಬಣವಿಗೆ ಬೆಂಕಿ ಹಚ್ಚಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ  ಚಂದ್ರಕಾಂತ ತಂದೆ ಬಂಡೆಪ್ಪ ರಂಜೇರಿ ಸಾ:ಆಲಗೂಡ ಇವರು ದಿನಾಂಕ:-30/04/2016 ರಂದು ಮದ್ಯಾಹ್ನ 01:30 ಗಂಟೆ ಸುಮಾರಿಗೆ ಫಿರ್ಯಾದಿ ಚಂದ್ರಕಾಂತ ಇವರ ಹೋಲಾ ಸರ್ವೆ ನಂ 136/1 ನೇದ್ದರಲ್ಲಿ ಇದ್ದ ಕಣಕಿ ಬಣಮಿಗೆ ಮಹಾದೇವಿ ಗಂಡ ಮಲ್ಲಿಕಾರ್ಜುನ ಹರಸೂರ ಸಾ:ಆಲಗೂಡ ಇವಳು ತನಗೆ ಹೋಲದಲ್ಲಿ ಕೆಲಸ ಮಾಡವುದು ಬೀಡಿಸಿದ ವಿಷಯದ ಉದ್ದೇಶದಿಂದ ಸದರಿ ಫಿರ್ಯಾದಿ ಹೋಲದಲ್ಲಿದ್ದ ಕಣಕಿ ಬಣಮಿಗೆ ಬೆಂಕಿ ಹಚ್ಚಿ ಅಕಿ-1,15000/-ರೂ ಬೆಲೆ ಬಾಳುವ ಸ್ವತ್ತನ್ನು ನಾಶಪಡಿಸಿರುತ್ತಾಳೆಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

01 May 2016

KALABURAGI DISTRICT CRIME REPORTS.

ಹೆಚ್ಚುವರಿ ಸಂಚಾರಿ   ಠಾಣೆ : ದಿನಾಂಕ 30.04.16 ರಂದು ಬೆಳಿಗ್ಗೆ 9-50 ಗಂಟೆ ಸುಮಾರಿಗೆ ಮೃತ ರುಕ್ಮಣಪ್ಪಾ ಇತನು ತನ್ನ ಹೊಸ ಜೇವಗರ್ಿ ರೋಡನಲ್ಲಿ ಬರುವ ನೀಲಾಂಬಿಕಾ ಕಲ್ಯಾಣ ಮಂಟಪಕ್ಕೆ ಸಂಬಂದಿಕರ ಮನೆಗೆ ಹೋಗುವ ಕುರಿತು ಮೋಟಾರ ಸೈಕಲ ನಂ ಕೆಎ-32-ಜೆ-7417 ನೇದ್ದನ್ನು ಚಲಾಯಿಸಿಕೊಂಡು ರೋಡ ಎಡಗಡೆಯಿಂದ ಹೋಗುವಾಗ ಚಿತಾರಿ ಅಡ್ಡಾ ಎದುರು ರೋಡ ಮೇಲೆ ಎನ್.ಈ.ಕೆ.ಆರ.ಟಿ.ಸಿ ಬಸ್ಸ ನಂ ಕೆಎ-28-ಎಫ್-1713 ನೇದ್ದರ ಚಾಲಕ ರಂಗು ಇತನು ತನ್ನ ಬಸ್ಸನ್ನು ಆರ.ಪಿ. ಸರ್ಕಲ ಕಡೆಯಿಂದ ರಾಮಮಂದಿರ ರಿಂಗ ರೋಡ ಕಡೆಗೆ ಹೋಗುವ ಕುರಿತು  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ ರುಕ್ಮಣಪ್ಪಾ ಇತನು ಚಲಾಯಿಸಿಕೊಂಡು ಹೋಗುತಿದ್ದ ಮೋಟಾರ ಸೈಕಲಕ್ಕೆ ಎಡಗಡೆಯಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದಾಗ ರುಕ್ಮಣಪ್ಪಾ ಇತನು ಕೆಳಗಡೆ ಬಿದ್ದಾಗ ಬಸ್ಸ ಚಾಲಕ ಬಸ್ಸ ಆತನ ಮೇಲೆ ಚಲಾಯಿಸಿದ್ದರಿಂದ ಮೃತ ರುಕ್ಮಣಪ್ಪಾ ಇತನಿಗೆ ತೆಲೆಯ ಮೇಲೆ ಭಾರಿ ಪೆಟ್ಟು ಬಿದ್ದು ರಕ್ತಗಾಯ ಬಲಬುಜಕ್ಕೆ ಭಾರಿ ಗುಪ್ತ ಪೆಟ್ಟು, ಬಾಲಗಾಲು ಮೊಳಕಾಲ ಕೆಳಗೆ ಭಾರಿ ಪೇಟ್ಟು, ಬಲಗಡೆ ಹೊಟ್ಟೆಯ ಮೇಲೆ , ಟೊಂಕಿನ ಮೇಲೆ ಬಸ್ಸಿನ ಗಾಲಿ ಹೋಗಿ ಭಾರಿ ಗುಪ್ತ ಪೆಟ್ಟು ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ.
ಗ್ರಾಮೀಣ ಠಾಣೆ : ದಿನಾಂಕ: 30/4/2016  ರಂದು 5-00 ಪಿ.ಎಮ್ ಕ್ಕೆ ಫಿರ್ಯಾದಿ ಗುರುರಾಜ ತಂದೆ ಶ್ರೀಶೈಲ್  ಸ್ಥಾವರ ಮಠ ವಯ;28 ವರ್ಷ ಉ;ಅಕೌಂಟೆಂಟ  ವಿಳಾಸ; ಮಾಣೀಕಪ್ರಬು ಕಾಲೂನಿ ಉದನೂರ ರೋಡ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದರ ಸಾರಾಂಶವೆನೆಂದರೆ; ದಿನಾಂಕ. 22-4-2016 ರಂದು ರಾತ್ರಿ 10-30 ಪಿ.ಎಂ.ಕ್ಕೆ ತನ್ನ ಹೋಂಡಾ ಸಿ.ಬಿ.ಶೈನ್ ಮೋಟಾರಸೈಕಲ್ ನಂ. ಕೆ.ಎ.32 ಇಕೆ.6008  ಅಕಿ. 49,000/- ರೂ ಬೆಲೆಬಾಳುವದನ್ನು ತನ್ನ ಮನೆಯ ಎದರುಗಡೆ ನಿಲ್ಲಿಸಿ ಮಲಗಿಕೊಂಡಿದ್ದು ದಿನಾಂಕ. 23-4-2016 ರಂದು 6-30 ಎ.ಎಂ.ಕ್ಕೆ. ಬೆಳೆಗ್ಗೆ ಎದ್ದು ನೋಡಲಾಗಿ  ತನ್ನ ಮೋಟಾರ ಸೈಕಲ್ ಇರಲಿಲ್ಲಾ  ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಆದುದರಿಂದ ದಿನಾಂಕ.22-4-2016 ರಂದು ರಾತ್ರಿ 10-30ಪಿ.ಎಂ.ದಿಂದ ದಿನಾಂಕ.23-4-2016ರಂದು ಬೆಳಗ್ಗೆ 6-30 ಎ.ಎಂ.ದ ಮದ್ಯದ ಅವಧಿಯಲ್ಲಿ ನನ್ನ ಮನೆಯ ಎದರುಗಡೆ ನಿಲ್ಲಿಸಿದ್ದ ನನ್ನ ಹೋಂಡಾ ಸಿ.ಬಿ.ಶೈನ್ ಮೋಟಾರಸೈಕಲ್ ನಂ.ಕೆ.ಎ.32ಇಕೆ.6008ಅಕಿ. 49,000/-ರೂಬೆಲೆಬಾಳುವದನ್ನುಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವು ಆದ ನನ್ನ ಮೋಟಾರ ಸೈಕಲನ್ನು ಪತ್ತೆ ಹಚ್ಚಿವ ಕಾನೂನು ಕ್ರಮ ಕೈಕೊಳ್ಳಬೇಕೆಂದು ತಮ್ಮಲ್ಲಿ ಪ್ರಾರ್ಥನ . ಕಳವು ಆದ ನನ್ನ ಮೋಟಾರ ಸೈಕಲನ್ನು ಪತ್ತೆ ಕುರಿತು ಎಲ್ಲಾ ಕಡೆಗೆ ಹುಡುಕಾಡಿ ಸಿಗದ ಕಾರಣ  ಇಂದು ತಮ್ಮಲ್ಲಿ  ತಡವಾಗಿ ಬಂದು ಫಿರ್ಯಾದಿ ನೀಡಲು ವಿಳಂಬವಾಗಿರುತ್ತದೆ ಅಂತಾ ವಗೈರೆ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 164/2016 ಕಲಂ. 379  ಐಪಿಸಿ ಪ್ರಕಾರ ಗುನ್ನೆ ಧಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

29 April 2016

KALABURAGI DISTRICT REPORTED CRIMES.

ನಿಂಬರ್ಗಾ ಪೊಲೀಸ ಠಾಣೆ : ನಾನು ಈ ಹಿಂದೆ 2 ಬಾರಿ ಮತ್ತು ನನ್ನ ಹೆಂಡತಿಯಾದ ಶಾಂತಾಬಾಯಿ 2 ಬಾರಿ ದಂಗಾಪೂರ ಗ್ರಾಮ ಪಂಚಾಯತನ ಸದಸ್ಯರು ಆಗಿದ್ದೇವು. ಇದಕ್ಕೆ ನಮ್ಮ ಜಾತಿಯವರೆ ಆದ ರವಿ ತಂದೆ ಮೌಲಪ್ಪ ಮದನಕರ ಮತ್ತು ಆತನ ಮನೆಯವರು ನಮ್ಮ ಮೇಲೆ ದ್ವೇಶ ಸಾಧಿಸುತ್ತಾ ಬಂದಿರುತ್ತಾರೆ. ಕಳೆದ ಬಾರಿ ನನ್ನ ಹೆಂಡತಿ ಶಾಂತಾಬಾಯಿ ಇವಳು ಕೂಡ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ಪರ್ದಿಸಿದ್ದು ಇವಳ ಎದುರು ರವಿ ತಂದೆ ಮೌಲಪ್ಪ ಮದನಕರ ಇವರ ತಾಯಿಯಾದ ನೀಲಮ್ಮ ಗಂಡ ಮೌಲಪ್ಪ ಮದನಕರ ಇವಳು ಗೆದ್ದಿರುತ್ತಾಳೆ. ನಮ್ಮಷ್ಟಕ್ಕೆ ನಾವು ಇದ್ದರು ಸಹ ರವಿ ಮತ್ತು ಆತನ ಕಡೆಯವರು ನಮ್ಮ ಮೇಲೆ ದ್ವೇಶ ಹೆಚ್ಚಿಸಿಕೊಂಡು ದಿನಾಂಕ 28/04/2016 ರಂದು ಅಂದಾಜ ಸಾಯಂಕಾಲ 0700 ಗಂಟೆಯ ಸುಮಾರಿಗೆ ನಮ್ಮೂರಿನ ಅಂಬೇಡ್ಕರ ಕಟ್ಟೆಯ ಮೇಲೆ ನಾನು ನನ್ನ ಕಡೆಯವರಾದ 01] ಮಲೀಕಪ್ಪ ತಂದೆ ಫಕೀರಪ್ಪ ಸಿಂಘೆ, 02] ಬಾಬು ತಂದೆ ದತ್ತಪ್ಪ ಸಿಂಘೇ. 03] ಸಂತೋಷತಂದೆ ದತ್ತಪ್ಪ ಸಿಂಘೆ, 04] ವಿಶಾಲ ತಂದೆ ಬಸವರಾಜ ಸಿಂಘೇ, 05] ಶಿವಾನಂದ ತಂದೆ ಮಲ್ಲಿಕಾರ್ಜುನ ಸಿಂಘೇ, 06] ಭಾಗಮ್ಮ ಗಂಡ ಮಹಾಂತಪ್ಪ ಸಿಂಘೇ, 07] ಉಮಾಶ್ರೀ ಗಂಡ ಬಾಬು ಸಿಂಘೆ, 08] ರಮಾ ಗಂಡ ಸಂತೋಷ ಸಿಂಘೆ, 09] ಶಾಂತಾಬಾಯಿ ಗಂಡ ದತ್ತಪ್ಪ ಸಿಂಘೆ ಎಲ್ಲರೂ ಸೇರಿ ಮಾತನಾಡುತ್ತಾ ಕುಳಿತಾಗ ಇದೆ ಸಮಯ ಸಾಧೀಸಿಕೊಂಡು ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ 01] ರವಿ ತಂದೆ ಮೌಲಪ್ಪ ಮದನಕರ, 02] ಮಹಾಂತಪ್ಪ ತಂದೆ ಮೌಲಪ್ಪ ಮದನಕರ, 03] ಬಾಬು ತಂದೆ ಮಲ್ಕಪ್ಪ ಮದನಕರ, 04] ಮಡಿವಾಳ ತಂದೆ ಮಲ್ಕಪ್ಪ ಮದನಕರ, 05] ವಿಶ್ವನಾಥ ತಂದೆ ಮಲ್ಕಪ್ಪ ಮದನಕರ, 06] ಮಲ್ಕಪ್ಪ ತಂದೆ ಶಿವಪ್ಪ ಮದನಕರ, 07] ಗೌತಮ ತಂದೆ ರವಿ  ಮದನಕರ, 08] ರಾಹುಲ ತಂದೆ ರವಿ ಮದನಕರ, 09] ಜೈಕುಮಾರ ತಂದೆ ಅಣ್ಣಪ್ಪ ಘತ್ತರ್ಗಿ, 10] ಬಾಬು ತಂದೆ ಅಣ್ಣಪ್ಪ ಘತ್ತರ್ಗಿ, 11] ಭೋಗಪ್ಪ ತಂದೆ ಸೋಮಣ್ಣ ಝಳಕಿ, 12] ಪರಸಪ್ಪ ತಂದೆ ಭೋಗಪ್ಪ ಝಳಕಿ, 13] ಬಸವರಾಜ ತಂದೆ ಭೋಗಪ್ಪ ಝಳಕಿ, 14] ಸೋಮಣ್ಣ ತಂದೆ ಪರಸಪ್ಪ ಝಳಕಿ, 15] ನಾಗಪ್ಪ ತಂದೆ ಬಸಪ್ಪ ಸಿಂಘೆ, 16] ಜೈಕುಮಾರ ತಂದೆ ನಾಗಪ್ಪ ಸಿಂಘೆ, 17] ಸುನೀಲ ತಂದೆ ಮಲಕಪ್ಪ ದಂಡನಕರ, 18] ರವಿ ತಂದೆ ಮಲಕಪ್ಪ ದಂಡನಕರ, 19] ಬಾಬು ತಂದೆ ಗಾಳೆಪ್ಪ ಖಾನಾಪೂರ, 20] ರಮೇಶ ತಂದೆ ಗಾಳೆಪ್ಪ ಖಾನಾಪೂರ ಸಾ|| ಎಲ್ಲರೂ ಭಟ್ಟರ್ಗಾ, 21] ವಸಂತ ತಂದೆ ಮಲ್ಲಿಕಾರ್ಜುನ ಕುಮಸಿ ಸಾ|| ನಿಂಬರ್ಗಾ ಅಲ್ಲದೆ ಇನ್ನು ಇತರರು ತಮ್ಮ ತಮ್ಮ ಕೈಯಲ್ಲಿ ತಲವಾರ, ಚಾಕು, ಕಲ್ಲು ಮತ್ತು ಬಡಿಗೆಗಳೊಂದಿಗೆ ಚೀರಾಡುತ್ತಾ ಗುಂಪು ಕಟ್ಟಿಕೊಂಡು ಇವತ್ತು ನಿಮಗೆ ಇಡಂಗಿಲ್ಲ ರಂಡಿ ಮಕ್ಕಳೆ ಅಂತ ಬೈದಾಡುತ್ತಾ ಬಂದರು ನಾವೆಲ್ಲರೂ ಗಾಬರಿಗೊಂಡು ನಡಗುತ್ತಾ ನಿಂತಾಗ ರವಿ ತಂದೆ ಮೌಲಪ್ಪ ಮದನಕರ ಇತನು ತನ್ನ ಕೈಯಲ್ಲಿರುವ ತಲವಾರದಿಂದ ನನ್ನ ತಮ್ಮ ಮಲ್ಲಿಕಪ್ಪ ಇತನಿಗೆ ಮನಸ್ಸಿಗೆ ಬಂದಂತೆ ತಲೆಗೆ, ಬೆನ್ನಿಗೆ ಅಲ್ಲದೆ ಎಡಗೈ ಗೆ ಹೊಡೆದನು ನನ್ನ ತಮ್ಮ ಒದ್ದಾಡುತ್ತಾ ಅಲ್ಲಿಯೇ ಬಿದ್ದಾಗ ಬಾಬು ತಂದೆ ದತ್ತಪ್ಪ ಸಿಂಘೆ ಇತನು ಬಿಡಿಸಲು ಹೋಗಿದ್ದಕ್ಕೆ ಆತನಿಗೆ ಮಹಾಂತಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಲೆಯ ಮೇಲೆ ಮನಸ್ಸಿಗೆ ಬಂದಂತೆ ಹೊಡೆದನು, ಬಾಬು ತಂದೆ ಮಲ್ಕಪ್ಪ ಮದನಕರ ಇತನು ಕಲ್ಲಿನಿಂದ ಬೀಸಿ ಹೊಡೆದನು, ಸಂತೋಷ ತಂದೆ ದತ್ತಪ್ಪ ಸಿಂಘೆ ಇತನಿಗೆ ಜೈಕುಮಾರ ತಂದೆ ಅಣ್ಣಪ್ಪ ಘತ್ತರ್ಗಿ ಇತನು ಕೈಯಿಂದ ಹೊಟ್ಟೆ ಎದೆ ಬೆನ್ನಿಗೆ ಹೊಡೆದು ನೆಲಕ್ಕೆ ಹಾಕಿ ಕಲ್ಲಿನಿಂದ ಬಲಗಾಲ ಮೇಲೆ ಹೇರಿದನು, ವಿಶಾಲ ತಂದೆ ಬಸವರಾಜ ಸಿಂಘೆ ಇತನಿಗೆ ವಿಶ್ವನಾಥ ತಂದೆ ಮಲ್ಕಪ್ಪ ಮದನಕರ ಇತನು ಕಲ್ಲಿನಿಂದ ಕಪಾಳಕ್ಕೆ ಹೊಡೆದು ರಕ್ತಗಾಯ ಗುಪ್ತಗಾಯಪಡಿಸಿದನು. ಶಿವನಾಂದ ತಂದೆ ಮಲ್ಲಿಕಾರ್ಜುನ ಸಿಂಘೆ ಇತನಿಗೆ ಮಡಿವಾಳ ತಂದೆ ಮಲ್ಕಪ್ಪ ಮದನಕರ ಇತನು ಕಟ್ಟಿಗೆಯಿಂದ ತಲೆಯ ಮೇಲೆ ಹೊಡೆದನು, ಭಾಗಮ್ಮ ಗಂಡ ಮಹಾಂತಪ್ಪ ಸಿಂಘೆ ಇವಳಿಗೆ ಜೈಕುಮಾರ  ತಂದೆ ನಾಗಪ್ಪ  ಸಿಂಘೆ ಇತನು ಕಲ್ಲಿನಿಂದ ತೊಡೆಯ  ಮೇಲೆ  ಹೊಡೆದನು,  ಉಮಾಶ್ರೀಗೆ ಭೋಗಪ್ಪ ತಂದೆ  ಸೋಮಣ್ಣ ಝಳಕಿ ಇತನು ಬಲಗೈ ತಿರುವಿರುತ್ತಾನೆ. ರಮಾ ಇವಳೀಗೆ ಸೋಮಣ್ಣ ತಂದೆ ಪರಸಪ್ಪ ಝಳಕಿ ಇತನು ಬೆನ್ನ ಮೇಲೆ ಹಾಗೂ ಶಾಂತಾಬಾಯಿಗೆ ರಮೇಶ ತಂದೆ ಗಾಳೆಪ್ಪ ಖಾನಾಪೂರ ಇತನು ಕಾಲಿನಿಂದ ಹೊಟ್ಟೆ ಮೇಲೆ ಒದ್ದಿರುತ್ತಾನೆ. ನಾನು ನಿಮ್ಮ ಕಾಲ ಬೀಳತೀನಿ ಬಿಡರೋ ಅಂತ ಅಂದಾಗ ನನಗೆ ರವಿ ಮದನಕರ ಇತನು ಪಿಸ್ತೂಲ ತೆಗೆದುಕೊಂಡು ನನಗೆ ತೋರಿಸಿ ಇವತ್ತು ನಿನಗೆ ಇಡಂಗಿಲ್ಲ ಅಂತ ಅಂಜಿಸಿರುತ್ತಾನೆ. ಮಲೀಕಪ್ಪನು ರಕ್ತದ ಮಡುವಿನಲ್ಲಿ ಬಿದ್ದಾಗ ಮಲೀಕಪ್ಪ ಸತ್ತಾನ  ನಡಿರೋ ಅಂತ ಚೀರಾಡುತ್ತಾ ತಮ್ಮ ಮನೆಯ ಕಡೆಗೆ ಹೋಗಿರುತ್ತಾರೆ. ರವಿ ಮತ್ತು ಆತನ ಕಡೆಯವರು ನನ್ನ ತಮ್ಮನಾದ ಮಲೀಕಪ್ಪನಿಗೆ ತಲವಾರದಿಂದ ಹಲ್ಲೆ ಮಾಡಿ ತಲೆ, ಎಡಗೈಗೆ ಭಾರಿ ರಕ್ತಗಾಯಪಡಿಸಿ, ಬಾಬು, ಸಂತೋಷ, ವಿಶಾಲ, ಶಿವಾನಂದ ಇವರುಗಳಿಗೆ ಕಲ್ಲು ಬಡಿಗೆಗಳಿಂದ ತಲೆ, ಹೊಟ್ಟೆಗಳಿಗೆ ಭಾರಿ ರಕ್ತಗಾಯ ಗುಪ್ತಗಾಯಪಡಿಸಿ ಕೊಲೆ ಮಾಡಲು ಯತ್ನಿಸಿ ಹೆಣ್ಣುಮಕ್ಕಳ ಮೇಲು ಸಹ ಹಲ್ಲೆ ಮಾಡಿ ದೌರ್ಜನ್ಯವೆಸಗಿ ಹೋಗಿರುತ್ತಾರೆ. ಜಗಳದಲ್ಲಿ ಗಾಯಗೊಂಡವರನ್ನು ನಾನು ಮತ್ತು ನಮ್ಮೂರಿನ ಕಾಂತಪ್ಪ ತಂದೆ ಸೈಬಣ್ಣ ಸಿಂಘೇ, ಭೀಮಾಶಂಕರ ತಂದೆ ಹಣಮಂತ ಸಿಂಘೆ, ಸಂತೋಷ ತಂದೆ ಭೀಮಾಶಂಕರ ಸಿಂಘೆ, ಲಕ್ಷಪ್ಪ ತಂದೆ ತಿಪ್ಪಣ್ಣ ದಂಡನಕರ ಎಲ್ಲರೂ ಸೇರಿ  ಒಂದು ಖಾಸಗಿ  ವಾಹನದಲ್ಲಿ ನಿಂಬರ್ಗಾ ಆಸ್ಪತ್ರೆಗೆ ತಂದು ಉಪಚಾರ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕೊಟ್ಟು ಕಳಿಸಿರುತ್ತೇನೆ. ಕಾರಣ ರವಿ ಮತ್ತು ಇತರರ ಮೇಲೆಸೂಕ್ತ ಕಾನೂನು  ಕ್ರಮ ಜರುಗಿಸಲು ಹೇಳಿಯ ಪ್ರಕಾರ ಗುನ್ನೆ ದಾಖಲಾದ ಬಗ್ಗೆ ವರದಿ.
ಅಶೋಕ ನಗರ ಠಾಣೆ : ದಿನಾಂಕ 28/04/2016 ರಂದು ಸಂಜೆ 6 ಪಿಎಂಕ್ಕೆ  ಶ್ರೀ. ವಿಶ್ವನಾಥ ತಂದೆ ಹಣಮಂತರಾವ ಕೌವಲಗಿ  ವಿಳಾಸ: ಮನೆ ನಂ. 1-891/30/254/1 ಸಂತೋಷ ಕಾಲೋನಿ ಚಾಮುಂಡೆಶ್ವರಿ ನಗರ ಕಲಬುರಗಿ ರವರು ಸಲ್ಲಿಸಿದ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ ನನ್ನ ಪತ್ನಿಯವರು ಬೆಂಗಳೂರಿಗೆ ಹೊಗಿರುತ್ತಾರೆ. ಈಗ 3 ದಿನದಿಂದ  ನಾನು ಮತ್ತು ನನ್ನ ಮಗ ವೀರಣ್ಣ ಕೌವಲಗಿ ಇಬ್ಬರೇ ಮನೆಯಲ್ಲಿದ್ದೆವೆದಿನಾಂಕ 26/04/2016 ರಂದು ನಾನು ಮತ್ತು ನನ್ನ ಮಗನಾದ ವೀರಣ್ಣ ಕೌವಲಗಿ ಇಬ್ಬರೂ ಕೂಡಿ ಪಂಜಾಬ ನ್ಯಾಶನಲ್‌ ಬ್ಯಾಂಕಿಗ ಹೊಗಿ  ಅಗ್ರಿ ಗೊಲ್ಡ ಲೋನದಲ್ಲಿ ಇಟ್ಟಿದ್ದ ನನ್ನ ಪತ್ನಿಯ  21 ತೊಲೆ ಚಿನ್ನದ ಆಭರಣಗಳನ್ನು ಬಿಡಿಸಿಕೊಂಡು ಮನೆಯ ಬೇಡ್‌ ರೂಮಿನಲ್ಲಿರುವ ಕಪಾಟ ಡ್ರಾವದಲ್ಲಿಟ್ಟಿರುತ್ತೆನೆ. ನಿನ್ನೆ ದಿನಾಂಕ 27/04/2016 ರಂದು ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೊಗಿದ್ದು ಮನೆಯಲ್ಲಿ ನನ್ನ ಮಗ ಒಬ್ಬರೇ ಇದ್ದರು. ಮನೆಕೆಲಸದವಳಾದ  ನಿಂಗಮ್ಮಾ ಮಡಿವಾಳಪ್ಪಾ ರವರು ಮನೆಯಲ್ಲಿ ಕೆಲಸ ಮಾಡಿ ಹೊಗಿರುತ್ತಾರೆ. ನಾನು ಮದುವೆ ಕಾರ್ಯಕ್ರಮದಿಂದ ರಾತ್ರಿ ಮನೆಗೆ ಬಂದಿರುತ್ತೆನೆಇಂದು ದಿನಾಂಕ: 28/04/2016 ರಂದು ಮದ್ಯಾಹ್ನ 3 ಗಂಟೆಗೆ ಕೂಡಲಸಂಗಮಕ್ಕೆ ಮದುವೆ ಕಾರ್ಯಕ್ರಮಕ್ಕಾಗಿ ಹೊಗುತ್ತಿರುವಾಗ ನನ್ನ ಮಗನಾದ ವೀರಣ್ಣ ಕೌವಲಗಿ ರವರು ಫೋನ ಮಾಡಿ ಕಪಾಟ ಡ್ರಾವದಲ್ಲಿಟ್ಟಿದ್ದ  ಬಂಗಾರದ ಆಭರಣಗಳು ಕಡಿಮೆ ಕಾಣಿಸುತ್ತಿವೆ. ಎಂದು ಹೇಳಿದಾಗ ನಾನು ಮರಳಿ ಬಂದು ನೊಡಲು ಡ್ರಾವದಲ್ಲಿಟ್ಟಿದ್ದ ಒಂದು ಬಿಳಿಬಟ್ಟೆಯ ಪಾಕೇಟದಲ್ಲಿ ಎರಡು ಚಿನ್ನದ ಪಾಟಲಿಗಳು ಮಾತ್ರ ಇದ್ದು, ಇನ್ನೂಳಿದ  1) ಚಿನ್ನದ ನಾಲ್ಕು ಬಿಲ್ವಾರ್‌ಗಳು 50 ಗ್ರಾಂ, 2) ಚಿನ್ನದ ಒಂದು ಜೊತೆ ತೊಡೆಗಳು 50 ಗ್ರಾಂ, 3) ಚಿನ್ನದ ಚಪ್ಪಲಾರ್‌ 60 ಗ್ರಾಂ, ಕಾಣಿಸಲಿಲ್ಲಈ ಬಗ್ಗೆ ನನ್ನ ಮಗ ವೀರಣ್ಣ ಕೌವಲಗಿ ಮತ್ತು ಮನೆಕೆಲಸದವಳಾದ ನಿಂಗಮ್ಮಾ ಮಡಿವಾಳಪ್ಪಾ ರವರಿಗೆ ಕರೆದು ಕೇಳಿದ್ದು  ನಮಗೇನು ಗೊತ್ತಿಲ್ಲಾ ಎಂದು ಹೇಳಿದರು. ನನ್ನ ಮನೆಯ ಬೇಡ ರೂಮಿನ ಡ್ರಾವದಲ್ಲಿಟ್ಟಿದ್ದ  ಒಟ್ಟು 21 ತೊಲೆ ಚಿನ್ನಾಭರಣದಲ್ಲಿಂದ  16 ತೊಲೆ ಚಿನ್ನಾಭರಣಗಳು ಅದರ ಅಂದಾಜು ಕಿಮ್ಮತ್ತು 4,16,000/- ರೂ ನೇದ್ದನ್ನು ಯಾರೋ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಥವಾ ಮನೆಗೆಲಸದವರು ಮಾಡಿರುತ್ತಾರೆ ಎನ್ನುವ ಬಗ್ಗೆ ಸಂಶಯ ಇರುತ್ತದೆ. ಈ ಬಗ್ಗೆ ತನಿಖೆ ಮಾಡಿ ಕಳ್ಳತನವಾಗಿರುವ ನನ್ನ ಚಿನ್ನಾಭರಣಗಳನ್ನು ಪತ್ತೆ ಹಚ್ಚಿಕೊಡಬೇಕೆಂದು ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲಾದ ಬಗ್ಗೆ ವರದಿ.
ಆಳಂದ ಠಾಣೆ : ದಿನಾಂಕ:28/04/2016 ರಂದು 02:00 ಪಿ.ಎಂ.ಕ್ಕೆ ಪಿರ್ಯಾದಿ ಶ್ರೀ.ಸಂತೋಷ ತಂದೆ ರೇವಣಸಿದ್ದಪ್ಪಾ ಬಂಡೆ ವಯಸ್ಸು:33 ವರ್ಷ ಜಾತಿ:ಲಿಂಗಾಯತ ಸಾ:ಖಂಡಾಳ ತಾ: ಆಳಂದ ಇವರು ಠಾಣೆಗೆ ಹಾಜರಾಗಿ ಅರ್ಜಿ ನೀಡಿದರ ಸಾರಾಂಶವೆನೆಂದರೆ ನಾನು ಹಾಗೂ ಉಲ್ಲಾಸ ಗಂಡು ಮಕ್ಕಳಿದ್ದು ನಮ್ಮ ತಾಯಿ ಮಹಾನಂದಾ ನಮ್ಮ ಜೊತೆಗೆ ವಾಸವಾಗಿದ್ದು. ನಮ್ಮ ತಂದೆಯ ಪಾಲಿಗೆ 04 ಎಕರೆ ಜಮೀನು ಇದ್ದು ಅದನ್ನು ಸಾಗುವಳಿ ಮಾಡುತ್ತಾ ಬಂದಿದ್ದಿದೆ ಈ ಎರಡು ತಿಂಗಳ ಹಿಂದೆ ನನ್ನ ಹೆಂಡತಿ ಹೆರಿಗೆ ಸಮಯದಲ್ಲಿ ಉಮರ್ಗಾದ ಶಿಂದೆ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾಳೆ. ನಮ್ಮ ತಂದೆಯವರು ಆಸ್ಪತ್ರೆಯ ನನ್ನ ಹೆಂಡತಿಯ ಉಪಚಾರಕ್ಕಾಗಿ 02 ಲಕ್ಷ ರೂಪಾಯಿ ಖರ್ಚು ಮಾಡಿದ್ದು ಅಲ್ಲದೆ ಈ ವರ್ಷ ಬರಗಾಲ ಬಿದ್ದು ಹೊಲದಲ್ಲಿ ಯಾವುದೇ ಬೆಳೆ ಇರದಿದ್ದರಿಂದ ಸರಕಾರದ ಸಾಲ ಹಾಗೂ ಖಾಸಗಿ ಸಾಲ ಹೊಲದ ಮೇಲೆ ಅಂದಾಜು 05 ಲಕ್ಷ ರೂಪಾಯಿದಷ್ಟು ಸಾಲ ಮಾಡಿಕೊಂಡಿದ್ದು ಅದನ್ನು ಹೇಗೆ ತೀರಿಸುವದು ಅಂತಾ ನಮ್ಮ ತಂದೆಯವರು ಚಿಂತೆ ಮಾಡುತ್ತಿದ್ದರು ಅದಕ್ಕೆ ನಾವು ಹೇಗಾದರೂ ಮಾಡಿ ಸಾಲ ಮುಟ್ಟಿಸೋಣ ಚಿಂತಿಸಬೇಡ ಎಂದು ಧೈರ್ಯ ಹೇಳುತ್ತಾ ಬಂದಿದ್ದೆವೆ. ದಿನಾಂಕ: 27/04/2016 ರಂದು ಬೆಳೆಗ್ಗೆ ಸುಮಾರು 10 ಗಂಟೆಗೆ ಮನೆಯಿಂದ ಆಳಂದಕ್ಕೆ ಹೋಗುತ್ತೆನಂತ ಹೋದವನು ಮರಳಿ ಮನೆಗೆ ಬಂದಿರಲಿಲ್ಲಾ. ಇಂದು ದಿನಾಂಕ:28/04/2016 ರಂದು ಮದ್ಯಾಹ್ನ 01:00 ಗಂಟೆ ಸುಮಾರಿಗೆ ಪೋನ್ ಮುಖಾಂತರ ಮಾಹಿತಿ ಬಂದಿದ್ದೆನೆಂದರೆ ನಮ್ಮ ತಂದೆಯವರು ಆಳಂದದ ಕ್ರಿಡಾಂಗಣದ ಹತ್ತಿರ ಘಾಳೇಪ್ಪಾ ಹಟಗಾರ ಇವರ ಹೊಲದಲ್ಲಿದ ಬೇವಿನ ಮರಕ್ಕೆ ಹಗ್ಗದಿಂದ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾರೆಂದು ನಮ್ಮೂರ ಲಕ್ಷ್ಮಣ ತಂದೆ ಗುಂಡಪ್ಪಾ ಜಮಾದಾರ ತಿಳಿಸಿದ ಮೇರೆಗೆ ನಮ್ಮೂರಿಂದ ನಾನು ಹಾಗೂ ನನ್ನ ಚಿಕ್ಕಪ್ಪಾ ಮಲ್ಲಿನಾಥ ಹಾಗೂ ಗ್ರಾಮಸ್ಥರು ಕೂಡಿ ಬಂದು ನೋಡಲಾಗಿ ನಮ್ಮ ತಂದೆಯವರು ಉರಲು ಹಾಕಿಕೊಂಡು ಮೃತಪಟ್ಟಿದ್ದು ನಿಜವಿತ್ತು. ನಮ್ಮ ತಂದೆಯವರಿಗೆ ಆದ ಸಾಲದ ಭಾದೆಯನ್ನು ತಾಳದೆ ಅದನ್ನು ಹೇಗೆ ಮುಟ್ಟಿಸುವದು ಎಂದು ಚಿಂತಿಸಿ ಮನ:ನೊಂದು ಉರಲು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಆತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲಾ ತಾವುಗಳು ಮುಂದಿನ ಕ್ರಮ ಜರುಗಿಸಬೇಕು. ನಮ್ಮ ತಂದೆಯವರು ಇಂದು 28/04/2016 ರಂದು 10:00 ಎ.ಎಂ.ದಿಂದ 12:00 ಪಿ.ಎಂ. ಅವಧಿಯಲ್ಲಿ ಮರಣ ಹೊಂದಿರುತ್ತಾರೆಂದು ಅಂತಾ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ಬಗ್ಗೆ ವರದಿಯಾಗಿರುತ್ತದೆ ಮೃತ ಪಟ್ಟವರು ರೇವಣಸಿದ್ದಪ್ಪಾ ತಂದೆ ರಾಮಲಿಂಗಪ್ಪಾ ಬಂಡೆ ವಯ: 65 ವರ್ಷ ಜಾತಿ:ಲಿಂಗಾಯತ ಉ:ಒಕ್ಕಲುತನ ಸಾ: ಖಂಡಾಳ ತಾ: ಆಳಂದ .