POLICE BHAVAN KALABURAGI

POLICE BHAVAN KALABURAGI

10 December 2014

Kalaburagi District Reported Crimes

ದರೋಡೆ ಮಾಡಲು ಪ್ರಯತ್ನಿಸಿ ಹಲ್ಲೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಸಂತೋಷ ತಂದೆ ಚಂದ್ರಶ್ಯಾ ಕೇಶ್ವಾರ ಸಾ : ಡೊಂಗರಗಾಂವ ರವರು ದಿನಾಂಕ:07/12/2014 ರಂದು ನನ್ನದು ಸಾಯಂಕಾಲ 7-00 ಗಂಟೆಯಿಂದ ಮರುದಿವಸ ಬೆಳಿಗ್ಗೆ 7-00 ಗಂಟೆಯವರೆಗೆ ಕರ್ತವ್ಯವಿದ್ದ ಪ್ರಯುಕ್ತ ನಾನು ಸಾಯಂಕಾಲ 7-00 ಗಂಟೆ ಸುಮಾರಿಗೆ ಸದರಿ ಟಾವರಿಗೆ ಬಂದು ಕರ್ತವ್ಯದ ಮೇಲಿದ್ದೆನು. ಸದರಿ ದಿನಾಂಕದಂದು ರಾತ್ರಿ 9-00 ಗಂಟೆ ಸುಮಾರಿಗೆ ಊಟ ಮಾಡಿಕೊಂಡು ಟಾವರದ ಹತ್ತಿರ ಇದ್ದ ಕೋಣೆಯಲ್ಲಿ ನಾನು ಕುಳಿತುಕೊಂಡಿದ್ದೆ. ಅಂದಾಜು ರಾತ್ರಿ 12-30 ಗಂಟೆ ಸುಮಾರಿಗೆ ನಮ್ಮ ಟಾವರಿನ ಗೇಟ ತೆರೆಯುವ ಸಪ್ಪಳ ಕೇಳಿಸಿತು. ಅದಕ್ಕೆ ನಾನು ಬಾಗಿಲು ತೆರೆದು ಹೊರಗೆ ಬಂದು ನೋಡಲಾಗಿ, ಗೇಟ ಹತ್ತಿರ ಸುಮಾರು 8-10 ಜನರು ನಿಂತುಕೊಂಡಿದ್ದು. ಅದರಲ್ಲಿ ಒಬ್ಬನು ತನ್ನ ಕೈಯಲ್ಲಿದ್ದ ಗುಲೇರನಿಂದ ಕಲ್ಲು ಹೊಡೆಯಲು ಆ ಕಲ್ಲು ನನ್ನ ಗದ್ದಕ್ಕೆ ಬಡಿಯಿತು ಅದಕ್ಕೆ ನಾನು ಅಂಜಿ ನನ್ನ ರೂಮಿನಲ್ಲಿ ಹೋಗಿ, ಬಾಗಿಲು ಬಂದು ಮಾಡಿಕೊಂಡು ಒಳಗಿನಿಂದ ನನ್ನ ಮೊಬೈಲ ಮುಖಾಂತರ ಟೆಕ್ನಿಶಿಯನ್ನಾದ ಉಮೇಶ ಇವರಿಗೆ ಫೋನ ಮಾಡಿ, ಯಾರೋ 8-10 ಜನರು ಟಾವರ ಸಮೀಪದಲ್ಲಿದ್ದ ಬ್ಯಾಟರಿಗಳನ್ನು ಕದಿಯಲು ಬಂದಿದ್ದಾರೆ ಬೇಗನೇ ಬನ್ನಿ ಅಂತಾ ಹೇಳಿ ನನ್ನ ಮೊಬೈಲದಲ್ಲಿದ್ದ ಸಿಮ್ ಹೊರಗೆ ತೆಗದು ಬಿಸಾಕಿರುತ್ತೇನೆ. ಅಷ್ಟರಲ್ಲಿ ಬಂದಿದ ಜನರ ಪೈಕಿ 3-4 ಜನರು ನನ್ನ ರೂಮಿನ ಮೇಲೆರಿ ಪತ್ರಾಗಳನ್ನು ಸರಿಸಿ ಒಳಗೆ ಇಳಿದು ಬಂದು ಆ ಪೈಕಿ ಒಬ್ಬನು ತನ್ನ ಕೈಯಲ್ಲಿದ್ದ ರಾಡಿನಿಂದ ನನಗೆ ಹೊಡೆದನು.  ಅದರಿಂದ ನನ್ನ ತಲೆಯ ಮುಂಭಾಗಕ್ಕೆ ರಕ್ತಗಾಯವಾಗಿ ರಕ್ತ ಸೋರಹತ್ತಿತ್ತು ಇನ್ನೂಳಿದವರ ಪೈಕಿ ಒಬ್ಬನು ಇಟ್ಟಿಗೆಯಿಂದ ಹೊಡೆಯಲು ನನ್ನ ಎಡಕಾಲ ಮೊಳಕಾಲಿಗೆ ಮತ್ತು ಬಲಗೈ ಮುಂಗೈಗೆ ಗುಪ್ತಗಾಯವಾಯಿತು ನಂತರ ಅವರೆಲ್ಲರೂ ನನ್ನನ್ನು ರೂಮಿನಿಂದ ಹೊರಗೆ ಎಳೆದು ರೂಮಿನ ಹಿಂದುಗಡೆ ಒಯ್ದು ಎರಡು ಕಾಲು ಮತ್ತು ಕೈಗಳನ್ನು ವೈರಿನಿಂದ ಕಟ್ಟಿ ಸಂದಿಯಲ್ಲಿ ಹಾಕಿ ಮೇಲುಗಡೆ ಕಬ್ಬಿಣದ ರ್ಯಾಕ್ಸ ಹಾಕಿರುತ್ತಾರೆ. ಅಷ್ಟರಲ್ಲಿ ನಮ್ಮ ಟೆಕ್ನೀಶಿಯನ್ ಉಮೇಶ ಮತ್ತು ಇತರರು ನಮ್ಮ ಟಾವರ ಹತ್ತಿರ ಬಂದಿರುವ ಸಪ್ಪಳ ಕೇಳಿ ನಾನು ಜೋರಾಗಿ ಬಿದ್ದಲ್ಲಿಂದ ಚಿರಾಡಲು ಅಲ್ಲಿಗೆ ಬಂದಿರುವ ಸುಮಾರು 8-10 ಜನರು ಟಾವರ ಹಿಂದುಗಡೆ ಇದ್ದ ಗುಡ್ಡದಲ್ಲಿ ಓಡಿ ಹೋದರು. ಹಾಗೆ ಓಡಿ ಹೋಗುವಾಗ ನನ್ನಲ್ಲಿದ್ದ ಮೊಬೈಲನ್ನು ಕಸಿದುಕೊಂಡಿರುತ್ತಾರೆ. ಸದರಿ ಜನರು ಅಂದಾಜು 25 ರಿಂದ 30 ವರ್ಷ ವಯಸ್ಸಿನವರಿದ್ದು ಕನ್ನಡ ಮತ್ತು ತೆಲಗು ಭಾಷೆಯಲ್ಲಿ ಮಾತನಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 27-11-2014 ರಂದು 5 ಪಿಎಂದಿಂದ 6 ಪಿಎಂದ ಅವಧಿಯಲ್ಲಿ ಅಪರಿಚಿತ ಗಂಡು ಮನುಷ್ಯನು ಕೆರೆ ಭೋಸಗಾ ಕ್ರಾಸ ಕಡೆಯಿಂದ ಕಲಬುರಗಿ ಕಡೆಗೆ  ನಡೆದುಕೊಂಡು, ರೋಡಿನ ಎಡಗಡೆಯಿಂದ ಬರುವಾಗ ಯಾವುದೋ ವಾಹನ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಅಪರಿಚಿತನಿಗೆ ಅಪಘಾತಪಡಿಸಿ ಭಾರಿ ರಕ್ತಗಾಯಗೊಳಿಸಿ ಹಾಗೇ ಓಡಿಸಿಕೊಂಡು ಹೋಗಿದ್ದು ಅಂಬುಲೈನ್ಸ ಗಾಡಿಯವರು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ಸೇರಿಕೆ ಮಾಡಿದ್ದುಸದರ ವ್ಯಕ್ತಿಯು  ದಿನಾಂಕ 27-11-2014 ರಂದು ಆದ ರಸ್ತೆ ಅಪಘಾತಗಳಿಂದ ಉಪಚಾರ ಹೊಂದುತ್ತಾ ಗುಣ ಮುಖವಾಗದೇ ಇಂದು ದಿನಾಂಕ 09-12-2014 ರಂದು ಸಂಜೆ 5-30 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಲಕ್ಷ್ಮೀಕಾಂತ ತಂದೆ ನಾಗೇಂದ್ರಪ್ಪಾ ಪಾಟೀಲ್ ಸಾ|| ಚೌಡೇಶ್ವರ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಲಾಲಸಾಬ ತಂದೆ ಬಾಲೇಸಾಬ ಕಡಮೂಡ ಸಾ|| ಮಾಡಿಯಾಳ ರವರು ದಿನಾಂಕ 08-12-14 ರಂದು 1830 ಗಂಟೆಗೆ ಜಾಫರಲಿ ತಂದೆ ಮೈಬೂಬಸಾಬ ಭೈರಾಮಡಗಿ ಇತನನ್ನು ಆತನ ಮನೆಯ ಮುಂದೆ ಘಟಾರ ನೀರಿನ ಸಂಭಂಧ ಕೇಳಲು ಹೋದಾಗ ಜಾಫರಲಿ ತಂದೆ ಮೈಬೂಬಸಾಬ ಭೈರಾಮಡಗಿ ಆತನ ಸಂಗಡ ಮೂರು ಜನರು ತನಗೂ ಹಾಗೂ ತನ್ನ ತಮ್ಮನಾದ ವಜೀರಸಾಬನಿಗೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ತಡೆದು ಹೊಡೆ ಬಡೆ ಮಾಡಿ ಜೀವ ಭಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 December 2014

Kalaburagi District Reported Crimes

ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ನಾಗರಾಜ ತಂದೆ ಮಲ್ಲೇಶಪ್ಪಾ ತೆಗನೂರ ಸಾಃ ಪೌರ ಕಾರ್ಮಿಕರ ಕಾಲೋನಿ ಕಲಬುರಗಿ ರವರು ಹಾಗು ಅಂಜಲಿ ತಂದೆ ಪ್ರಕಾಶ ಭರಣಿ ಇಬ್ಬರೂ ಈಗ ಸುಮಾರು 01 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು . ದಿನಾಂಕಃ 08/12/2014 ರಂದು ಮದ್ಯಾಹ್ನ 03:00 ಗಂಟೆ ಸುಮಾರಿಗೆ ಸದರಿ ಅಂಜಲಿ ಇವಳು ಫಿರ್ಯಾದಿ ವಾಸವಾಗಿರುವ ಪ್ಲಾಟ ನಂ. 43 ಪೌರ ಕಾರ್ಮಿಕರ ಕಾಲೋನಿಯ ಮನೆಗೆ ಬಂದಿದ್ದು, ಸದರಿ ಅಂಜಲಿಯ ಅಣ್ಣಂದಿರಾದ 1) ಸಂದೀಪ ಭರಣಿ 2) ಪವನ ಭರಣಿ 3) ತಾಯಿಯಾದ ಕಮಲಾಬಾಯಿ ಅವರ ಸಂಗಡ 4) ಕಿಟ್ಯಾ 5) ಪಪ್ಪು ಪುಟಗೆ ಹಾಗು ಇತರೆ 10-15 ಜನರು ಕೂಡಿಕೊಂಡು ಫಿರ್ಯಾದಿಯ ಮನೆಯೊಳಗೆ ಬಂದು ಫೀರ್ಯಾದಿ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ನಂತರ ಫಿರ್ಯಾದಿಯ ಅಕ್ಕಳಾದ ಪಾರ್ವತಿ ಇವಳ ಮನೆಯೊಳಗೆ ಕೈಯಲ್ಲಿ ಬಡಿಗೆ ಹಾಗು ಚಾಕು ಹಿಡಿದುಕೊಂಡು ಹೋಗಿ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆ, ಚಾಕು, ತಲವಾರು ಹಾಗು ಕೈಗಳಿಗೆ ಹೊಡೆ ಬಡೆ ಮಾಡಿ ಎಡಗಣ್ಣಿನ ಮೇಲೆ, ಬಲ ಕಪಾಳದ ಮೇಲೆ, ಬಲಗಾಲಿನ ಮೊಳಕಾಲಿನ ಕೆಳಗೆ ಹೊಡೆದು ಭಾರಿ ರಕ್ತಗಾಯ ಹಾಗು ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 06-12-2014 ರಂದು ಅಂದಾಜು ರಾತ್ರಿ ಶ್ರೀ ಶಂಕರ ತಂದೆ ಗುರುಪಾದಪ್ಪಾ ಪಸಾರೆ ಸಾ ಅಫಜಲಪೂರ ರವರಿಗೆ  ಯಾರೊ ಪೋನ ಮಾಡಿ ನಿಮ್ಮ ತಮ್ಮ ಭೀಮರಾಯ ಈತನು ಸೂರ್ಯಕಾಂತ ತಂದೆ ಗಂಗಣ್ಣ ಗುಣಾರಿ ಈತನು ನಡೆಸುತ್ತಿದ್ದ ಮೋ/ಸೈ ಮೇಲೆ ಅವನೊಂದಿಗೆ ಅಫಜಲಪೂರದ ಬಸವೇಶ್ವರ ಸರ್ಕಲ ಹತ್ತಿರ ಬರುತ್ತಿದ್ದಾಗ ಎಕ್ಸಿಡೆಂಟ ಆಗಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ತಮ್ಮ ಭೀಮರಾಯ ಹಾಗೂ ಸೂರ್ಯಕಾಂತ ಗುಣಾರಿ ಇಬ್ಬರು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲದ ಶ್ರೀ ಭಾಗ್ಯವಂತಿ ಕಾಮಾನದಿಂದ ಘತ್ತರಗಿ ರೋಡಿನ ಕಡೆಗೆ ಅಂದಾಜು 50 ಪೀಟ ಅಂತರದಲ್ಲಿ ರೋಡಿನ ಮೇಲೆ ಇಬ್ಬರ ಶವಗಳು ಬಿದ್ದಿದ್ದನ್ನು ನೋಡಿ ಗುರುತಿಸಿದೆನು, ನನ್ನ ತಮ್ಮನ ತಲೆಗೆ ಬಾರಿ ಪೆಟ್ಟಾಗಿ ಪೂರ್ತಿ ಜಜ್ಜಿದಂತೆ ಆಗಿ ಬಾರಿ ರಕ್ತಗಾಯವಾಗಿತ್ತು. ಹಾಗೂ ಸೂರ್ಯಕಾಂತ ಈತನ ಎದೆಗೆ ಹಾಗೂ ಹೊಟ್ಟೆಗೆ ಬಾರಿ ಒಳಪೆಟ್ಟುಗಳು ಆಗಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದರು, ಅವರ ಪಕ್ಕದಲ್ಲಿಯೆ ಇಬ್ಬರು ಕುಳಿತುಕೊಂಡು ಬರುತ್ತಿದ್ದ ಮೋ/ಸೈ ಬಿದ್ದಿದ್ದು ಅದರ ಕೆಎ-28 ಹೆಚ್- 7305 ಇರುತ್ತದೆ. ನನ್ನ ತಮ್ಮ ಮತ್ತು ಸೂರ್ಯಕಾಂತ ಗುಣಾರಿ ಇಬ್ಬರು ಘತ್ತರಗಿ ರೋಡಿನ ಕಡೆಯಿಂದ ಬಸವೇಶ್ವರ ಸರ್ಕಲ ಕಡೆಗೆ ಕಮಾನ ಹತ್ತಿರ ಬರುತ್ತಿದ್ದಾಗ ಎದುರುಗಡೆಯಿಂದ ಯಾವುದೊ ಒಂದು ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನನ್ನ ತಮ್ಮ ಹಾಗೂ ಸೂರ್ಯಕಾಂತ ಇವರು ಬರುತ್ತಿದ್ದ ಮೋ/ಸೈ ಕ್ಕೆ ಡಿಕ್ಕಿ ಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಧನಶೆಟ್ಟಿ ತಂದೆ ಶರಣಪ್ಪಾ ಕೋರೆ ಸಾಃ ಮನೆ ನಂ. ಇ.ಡಬ್ಲೂ.ಎಸ್ 29, ಗುಬ್ಬಿ ಕಾಲೋನಿ ಸೇಡಂ ರೋಡ್ ಕಲಬುರಗಿ ರವರು ದಿನಾಂಕ : 08/12/2014 ರಂದು ಖಾಸಗಿ ಕೆಲಸದ ನಿಮಿತ್ಯ ನಾನು ಮತ್ತು ನನ್ನ ಮಗನಾದ ಮಲ್ಲಿಕಾರ್ಜುನ ಇಬ್ಬರು ಓಂ ನಗರ ಗೇಟಿನ ಎದುರುಗಡೆ ರೋಡಿನ ಮೇಲೆ ಹೋಗುತ್ತಿರುವಾಗ ಸೇಡಂ ರಿಂಗ್ ರೋಡ್ ಕಡೆಯಿಂದ ಹಿಂದಿನಿಂದ ಆಟೋ ನಂ. ಕೆ.ಎ 32 ಬಿ 0285 ನೇದ್ದರ ಚಾಲಕನು ತನ್ನ ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ನನ್ನ ಬಲಭಾಗದ ಟೊಂಕದ ಕೆಳಗೆ ಜೋರಾಗಿ ಡಿಕ್ಕಿ ಪಡಿಸಿದರ ಪರಿಣಾಮ ನಾನು ರೋಡಿನ ಮೇಲೆ ಬಿದ್ದೆನು. ನನ್ನ ಬಲಭಾಗದ ಟೊಂಕದ ಹತ್ತಿರ ಭಾರಿ ಒಳಪೆಟ್ಟಾಗಿರುತ್ತದೆ. ನಂತರ ಆಟೋ ಚಾಲಕ ತನ್ನ ಆಟೋವನ್ನು ಹಾಗೇ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ದ್ವೀಚಕ್ರ ವಾಹನ ಕಳವು ಪ್ರಕರಣ :ಅಶೋಕ ನಗರ ಠಾಣೆ : ಶ್ರೀ ಬಸವರಾಜ ತಂದೆ ಶರಣಪ್ಪ ಹತ್ತಿ ಸಾ: ಮನೆ ನಂ. 2/2-87 ಹನುಮಾನ ಗುಡಿಯ ಹತ್ತಿರ ಹತ್ಯಾನಗಲ್ಲಿ ಆಳಂದ ಹಾ.ವ: ಹಾಲಪ್ಪ ನಿವಾಸ ಕೊಬಾ ಪ್ಲಾಟ ಇವರ ಮನೆಯಲ್ಲಿ ಬಾಡಿಗೆ ಕಲಬುರಗಿ ರವರು ದಿನಾಂಕ 22/11/2014 ರಂದು ನನ್ನ ಕೆಲಸದ ನಿಮಿತ್ಯ ಮೋಟಾರ ಸೈಕಲ್ ಮೇಲೆ ಬಂದು ಕೇಂದ್ರ ಬಸ್ ನಿಲ್ದಾಣದ ಆಟೋ ಸ್ಟ್ಯಾಂಡ ಹತ್ತಿರ ನಿಲ್ಲಿಸಿ ಆಳಂದ ಗ್ರಾಮಕ್ಕೆ ಬಸ್ಸಿನಿಂದ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ರಾತ್ರಿ 9-30 ಪಿ.ಎಂ.ಕ್ಕೆ ಬಂದು ನೋಡಲಾಗಿ ಸ್ಥಳದಲ್ಲಿಯೆ ಇಟ್ಟ ನನ್ನ ಮೋಟಾರ ಸೈಕಲ್ ಇರಲಿಲ್ಲಾ. ಈ ಬಗ್ಗೆ ನಾನು ಇತರೆ ಸ್ಥಳ ಎಲ್ಲಾ ಕಡೆ ಹುಡುಕಾಡಿದ್ದು ನನ್ನ ಮೋಟಾರ ಸೈಕಲ್ ಪತ್ತೆಯಾಗಿರುವುದಿಲ್ಲಾ  ಪೊಲೀಸ್ ಠಾಣೆಗೆ ಮಾಹಿತಿ ಸಹ ನೀಡಿರುತ್ತೇನೆ. ನನ್ನ ಮೋಟಾರ ಸೈಕಲ್ ನಂ. ಕೆ.ಎ-32 ವಿ-6971 ನೇದ್ದರ ಇಂಜನ್ ನಂ. HA10EA9HF99767 ಚೆಸ್ಸಿ ನಂ. MBLHA10EJ9HF51395 ರ ಮಾಡಲ್ ನಂ. 2009 ಬ್ಲ್ಯಾಕ್ ಬಣ್ಣದ್ದು  ಅ.ಕಿ. 25,000/- ರೂ ಬೇಲೆ ಬಾಳುವುದು ಯಾರೋ ಕಳ್ಳರು   ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರಿಮತಿ ಭೃಮರಾಂಭೆ ಗಂಡ ಸಂಗ್ರಾಮ ಉಚ್ಛೇದ ಸಾ|| ಆಂಜನೆಯ ನಗರ ಹಳೇ ಆರ್.ಟಿ. ಕ್ರಾಸ್ ಕಲಬುರಗಿ ಇವರನ್ನು ಹಿರಿಯರೆಲ್ಲರೂ ಕೂಡಿ ಸಂಗ್ರಾಮ ಉಚ್ಛೇದ  ಇವರೊಂದಿಗೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ ವರದಕ್ಷಿಣಿ ಅಂತಾ 1.05.000/- ಮತ್ತು 2 ತೋಲಾ ಬಂಗಾರ ಹಾಗೂ ಗೃಹಪಯೋಗಿ ಸಾಮಾನುಗಳು ಕೋಟ್ಟಿರುತ್ತಾರೆ ಮದುವೆ ಆದ 1 ತಿಂಗಳು ನಂತರ ವ್ಯಾಸಾಂಗ ಕುರಿತು ಕಲಬುರಗಿಯ ಆಂಜನೆಯ ನಗರದಲ್ಲಿ ಬಾಡಿಗೆ ಮನೆಮಾಡಿಕೊಂಡು ವಾಸವಾಗಿರುತ್ತೇವೆ. ಕೇವಲ 15 ದಿನಗಳವರೆಗೆ ನನ್ನೊಂದಿಗೆ ಸರಿಯಾಗಿದ್ದು ನಂತರ ತನ್ನ ಮನೆಯವರ ಮಾತು ಕೇಳಿ ನೀನು ನನಗೆ ಇಷ್ಟವಿಲ್ಲ ಅಂತಾ ಹೊಡೆಯುವುದು ಕಿರುಕುಳ ಕೊಡುವುದು ಮತ್ತು ನಿನ್ನ ಮತ್ತು ಮನೆಯ ಜವಾಬ್ದಾರಿ ಹೊರಲು ನನಗೆ ಸಾದ್ಯವಿಲ್ಲ ನಿನ್ನ ತಂದೆ ನಿವ್ರತ್ತನಾಗಿದ್ದಾನೆ ಅವರ ಹತ್ತಿರ ಸಾಕಷ್ಟು ಹಣವಿದೆ ಅವರಿಂದ 5 ಲಕ್ಷ ರೂಪಾಯಿ ತೆಗೆದುಕೊಂಡು ಬಂದರೆ ಮಾತ್ರ ನಿನ್ನೊಂದಿಗೆ ಜೀವನ ಮಾಡುತ್ತೇನೆ ಇಲ್ಲವಾದರೆ ನಿನಗೆ ಮತ್ತು ನಿಮ್ಮ ತಂದೆಯವರಿಗೆ ಜೀವ ಸಹಿತ ಉಳಿಸುವದಿಲ್ಲ ಅಂತಾ ಹೆದರಿಸುತ್ತಿದ್ದನು ವಿಷಯ ಬಗ್ಗೆ ನಮ್ಮ ತಂದೆ ಹಿರಿಯರ ಸಮ್ಮುಖದಲ್ಲಿ ತಿಳಿಸಿ ಹೇಳಿದಾಗ ಕೂಡ ತನ್ನ ಚಟವನ್ನೆ ಮುಂದುವರೆಸಿಕೊಂಡು ಬಂದಿರುತ್ತಾನೆ. ನನ್ನ ಪತಿಯ ತಾಯಿ ಕಲಾವತಿ ನನ್ನ ಚಿಕ್ಕ ಅತ್ತೆ ದುಶಿಲಾ ಮೈದುನರಾದ ರಮೇಶ,ಉಮೇಶ ಮತ್ತ್ತು ಸಂಬಂದಿಕನಾದ ಶೇಖಪ್ಪಾ ಕೋಡದೂರ ಇವರೆಲ್ಲರೂ ನಾನು ಊರೊಗೆ ಹೋದಾಗ ರಂಡಿ,ಬೋಸಡಿ ಅಂತಾ ಕೂದಲು ಹಿಡಿದು ಎಳದಾಡಿ ಹೊಡೆದು ಮನೆಯಿಂದ ಹೊರಗೆ ದಬ್ಬಿ ನಿನ್ನ ತವರು ಮನೆಯಿಂದ 5 ಲಕ್ಷ ರೂಗಳು ತೆಗೆದುಕೊಂಡರೆ ನಮ್ಮ ಮನೆಗೆ ಬಾ ಇಲ್ಲದಿದ್ದರೆ ನಮ್ಮ ಮನೆಗೆ ಬರಬೇಡ ಅಂತಾ ಬೈದಿರುತ್ತಾರೆ, ದಿನಾಂಕ 14.11.2014 ರಂದು ಬೆಳಗ್ಗೆ 7 ಗಂಟೆಗೆ ನನ್ನ ಗಂಡ ಸಂಗ್ರಾಮ ಸೂಳಿ, ಚೀನಾಲಿ, ರಂಡಿ ಅಂತಾ ಬೈದು ಹೊಡೆದು ಓಡಿ ಹೋಗಿರುತ್ತಾನೆ ಆದ್ದರಿಂದ ದಯಾಳುಗಾಳದ ತಾವುಗಳು ನನಗೆ ಕ್ರೂರವಾಗಿ ಹಿಂಸೆ ಕೊಟ್ಟ ನನ್ನ ಗಂಡ ಅತ್ತೆ, ಅತ್ತೆಯ ತಂಗಿ, ಮೈದುನರು ಮತ್ತು ಸಂಬಂದಿಕರು ಹಾಗೂ ನನ್ನ ಗಂಡನ ಸ್ನೇಹಿತ ವಿರೇಶ ಪಾಟೀಲ ಇವರು ದೈಹಿಕ ಹಾಗು ಮಾನಸಿಕ ಹಿಂಸೆ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06 December 2014

Kalaburagi District Reported Crimes

ಜಾತಿ ನಿಂದನೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ರಾಜಶೇಖರ ತಂದೆ ಯಲ್ಲಪ್ಪಾ ಭೊಸಗಾ ಸಾ|| ಅಫಜಲಪೂರ ಇವರು ದಿನಾಂಕ 04/12/2014 ರಂದು ಬೆಳಿಗ್ಗೆ ಹತ್ತು ಗಂಟೆಗೆ ನಾನು ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿ ಪರೀಕ್ಷೆ ಕೋಣೆಯಲ್ಲಿ ಬ್ರೆಂಚಿನ ಮೇಲೆ ಕುಳಿತುಕೊಂಡಾಗ ನನ್ನ ಪಕ್ಕದ ಬ್ರೇಂಚಿನಲ್ಲಿ ಕ್ಲಾಸಮೆಂಟನಾದ ರವಿಕಾಂತ ಬೂಜರಿ ಇವನು ನನಗೆ ತಾಗುವತ್ತೆ ತನ್ನ ಕಾಲು ಚಾಚಿ ಕುಲಿತು ಕೊಂಡಿದ್ದು ಆಗ ನಾನು ರವಿಕಾಂತನಿಗೆ ಕಾಲ ತಗೆ ಅಂತ ಹೇಳಿದಕ್ಕೆ ಅವನಿಗೆ ನನಗು ಜಗಳವಾಗಿರುತ್ತದೆ ಆಗ ರವಿಕಾಂತ ವನು ನನಗೆ ನೋಡಿಕೊಳ್ಳತ್ತೆನೆ ಅಂತ ಹೇಳಿರುತ್ತಾನೆ ನಂತರ 12.30 ಪಿಎಮ್ ಸುಮಾರಿಗೆ ಪರಿಕ್ಷೆ ಮುಗಿಸಿಕೊಂಡು ಮನೆ ಮುಂದೆ ಬಂದಾಗ ರವಿಕಾಂತ ಬೂಜರಿ ಇತನು ಅನಿಲ ಕುಮಾರ ಚಲಗೇರಿ ಇತನೊಂದಿಗೆ ಬಂದು ನನಗೆ ನಿಲ್ಲಿಸಿ ಏನೋ ಹೊಲೆಯ ಸುಳೆಮಗನೆ ಕಾಲೇಜಿನಲ್ಲಿ ನನ್ನ ಜೊತೆಗೆ ಜಗಳ ತಗೆತಿಯಾ ಅಂತ  ಇಬ್ಬರು ನನಗೆ ನನ್ನ ಕೂತ್ತಿಗೆ ಇತ್ತಿ ಹಿಡಿದ್ದು ಕೈಯಿಂದ ಹೊಟ್ಟೆಯ ಮೇಲೆ ಗುದ್ದಿ ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ:-05/12/2014 ರಂದು ಮಧ್ಯಾಹ್ನ 1510 ಗಂಟೆ ಶ್ರೀನಿವಾಸ ಕಲ್ಯಾಣರಾವ ಕುಲಕರ್ಣಿ ಈತನು ತನ್ನ ಮನೆಗೆ ಹೋಗುವ ಸಂಬಂಧ ಹುಮ್ನಾಬಾದ ರಿಂಗ ರೋಡ ಆಳಂದ ಚೆಕ್ ಪೋಸ್ಟದ ಮಧ್ಯದ ರಾಮ ನಗರ ಕಾಕಡೆ ಚೌಕ ಮಧ್ಯೆ ತನ್ನ ಮೋಟಾರ್ ಸೈಕಲ್ ನಂ: ಕೆಎ-32ಇಎ-1725 ನೇದ್ದನ್ನು  ತೆಗೆದುಕೊಂಡು ಹೋಗುವಾಗ ಅದೆ ಸಮಯಕ್ಕೆ ಯಾವುದೋ ಒಂದು ಟೀಪ್ಪರ್ ಚಾಲಕನು ಅತಿ ವೇಗ & ನಿಸ್ಕಾಳಜಿತನದಿಂದ ಚಲಾಯಿಸಿ ಶ್ರೀನಿವಾಸನಿಗೆ ಡಿಕ್ಕಿ ಹೊಡೆದಿದ್ದರಿಂದ ತಲೆಗೆ ಹಾಗೂ ಹಣೆಗೆ ಹೊಟ್ಟೆಗೆ ಇತರೆ ಭಾಗಕ್ಕೆ ಭಾರಿ ರಕ್ತಗಾಯ ಮತ್ತು ಒಳಪೇಟ್ಟಾಗಿ ಎಡಕಿವಿಯಿಂದ ರಕ್ತಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಗುರುರಾಜ ತಂದೆ ಕಲ್ಯಾಣರಾವ ಕುಲಕರ್ಣಿ ಸಾ : ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಗ್ರಾಮೀಣ ಠಾಣೆ : ದಿನಾಂಕ 5-12-2014 ರಂದು 10-30 ಪಿ.ಎಂಶ್ರೀಮತಿ        ಜಬಿನಾ ಬೇಗಂ ಗಂಡ ಮಹಮ್ಮದ ರಹಿಮೊದ್ದಿನ ಸಾ; ಆಶೀಫ ನಗರ ಜರಾಬಡಿ ಮಜೀದ ಹತ್ತಿರ ಹೈದ್ರಾಬಾದ ಇವರು ದಿನಾಂಕ. 05-12-2014 ರಂದು ಬೆಳಗ್ಗೆ ಕಲಬುರಗಿ ಕೆ.ಬಿ.ಎನ್. ಖಾಜಾ ಬಂದೇನವಾಜ ದೇವರ ದರ್ಶನ ಮಾಡುವ ಕುರಿತು 9-00.ಎಂ.ದಸುಮಾರಿಗೆ ನನ್ನ ಗಂಡ  ಪರಿಚಯದವರಾದ ರವೂಫ ಇವರ ಕ್ವಾಲೀಸ್ ನಂ..ಪಿ.10.ಆರ್. 5796 ನೆದ್ದರಲ್ಲಿ ನಾನು ಮತ್ತು ನನ್ನ ಗಂಡ ಮಹಮ್ಮದ ರಹಿಮೊದ್ದಿನ . ಮೈದುನ  ಮಹಮ್ಮದ ಜಲೀಲ್ , ನಮ್ಮ ತಾಯ ಖದರುನಿಸ್ ತಂದೆ ಮಹಮ್ಮದ ಎಕ್ಬಾಲ್ , ಮಗಳು ಅಲಿಯಾಬೇಗಂ ವಯ;7 ವರ್ಷ ಮತ್ತು ನನ್ನ ಗಂಡನ ಗೆಳೆಯ ಗೋರಾಬಾಯಿ ಕುಳಿತುಕೊಂಡು  ಹೈದ್ರಬಾದದಿಂದ ಕಲಬುರಗಿಗೆ ಹೊರಟಿದ್ದು ಮದ್ಯಾನ 3-00 ಗಂಟೆಯ ಸುಮಾರಿಗೆ ಅವರಾದ  ಗ್ರಾಮ ದಾಟಿ ಎಸ್.ಬಿ. ಪಾಟೀಲ್ ಸಾವಳ ಫ್ಯಾಕ್ಟರಿ ಹತ್ತಿರ ಬಂದಾಗ ಚಾಲಕ ರವೂಫೆ ಇವರು ಗಾಡಿ ಇಂಜಿನ ಗರಮ ಆಗಿದೆ ತಣ್ಣ ಗಾದನಂತರ ಹೋಗೋಣ ಅಂತಾ ಹೇಳಿ ರೋಡಿನ ಬದಿಯಲ್ಲಿ  ತನ್ನ ಕ್ವಾಲಿಸ್ ನಿಲ್ಲಿಸಿದನು , ಗಾಡಿಯಲ್ಲಿ ಕುಳಿತಿದ್ದ ನಾವೆಲ್ಲ ಇಳಿದು ರೋಡಿನ ಬದಿಗೆ ನಿಂತಿದ್ದು  ಅದರಂತೆ ಮಗಳು  ಅಲಿಯಾ ಬೇಗಂ ವಯ;7 ವರ್ಷ ಇವಳು  ರೋಡ ಬದಿಯಲ್ಲಿ ನಿಂತಿದ್ದು  ಅದೇಸಮಯಕ್ಕೆ ಕಲಬುರಗಿ ಕಡೆಯಿಂದ ಒಂದು ಬಿಳಿ ಬಣ್ಣ ಬುಲೆರೋ ಜೀಪ ಚಾಲಕನು ತನ್ನ ವಶದಲ್ಲಿಇದ್ದ ಬುಲೆರೋ ಜೀಪನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದವನೆ ರೋಡ ಬದಿ ನಿಂತ ನನ್ನ ಮಗಳು ಅಲಿಯಾಬೇಗಂ ಇವಳಿಗೆ  ಡಿಕ್ಕಿ ಹೊಡೆದು  ಅಪಘಾತ ಪಡಿಸಿ ಸ್ವಲ್ಪ ಮುಂದೆ ಹೋಗಿ  ತನ್ನ ವಾಹನ ನಿಲ್ಲಿಸಿದನು ಬುಲೇರೋ ವಾಹನ ನಂಬರ ನೋಡಲಾಗಿ ಎಂ.ಹೆಚ. 13 .ಎನ್.  7632 ನೆದ್ದು ಇತ್ತು ನಂತರ ಬುಲೇರೋ ಚಾಲಕ ತನ್ನ ವಾಹನವನ್ನು ಹಾಗೇ ಓಡಿಸಿಕೊಂಡು ಹೊದನು , ನನ್ನ ಮಗಳು ರೋಡಿನ ಮೇಲೆ ಬಿದ್ದಿದ್ದು  , ಅವಳಿಗೆ ನೋಡಲಾಗಿ  ತೆಲಗೆ ಭಾರಿ ರಕ್ತಗಾಯವಾಗಿ , ಬೇಹೋಶ  ಆಗಿದ್ದು  ನನ್ನ ಗಂಡ ಮಹಮ್ಮದ  ರಹಮೊದ್ದಿನ   ಇವರು ದಾರಿಗೆ ಹೊರಟ ಯಾವುದೇ ಮೋಟಾರ ಸೈಕಲ ಮೇಲೆ ಮಗಳಿಗೆ ಕೂಡಿಸಿಕೊಂಡು ಉಪಚಾರ ಕುರಿತು ಜಿಲ್ಲಾ  ಆಸ್ಪತ್ರೆ ಗುಲಬರ್ಗಾಕ್ಕೆ ತಂದಾಗ ವೈದ್ಯರು  ನೋಡಿ  ನನ್ನ ಮಗಳು ಮೃತ ಪಟ್ಟಿರುತ್ತಾಳೆ  ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 05-12-2014 ರಂದು ಶ್ರೀ ಮಹ್ಮದ ಉಸ್ಮಾನ ತಂದೆ ಶೇಖ ಮಂಜಿಲಿ ಸಾಬ ಸಾಃ ಮದಿನಾ ಕಾಲೂನಿ ಶಹಾಜಿಲಾನಿ ದರ್ಗಾ ಹತ್ತಿರ ಕಲಬುರಗಿ ರವರು ತನ್ನ ಅಟೋರಿಕ್ಷ ನಂ. ಕೆ.ಎ 32 ಎ 3541ನೇದ್ದರಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕಡೆಯಿಂದ ಆರ್.ಟಿ.ಓ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಆರ್.ಟಿ.ಓ ಕ್ರಾಸ್ ಹತ್ತಿರ ಇರುವ ನಾಲಾ ಹತ್ತಿರ ಹಿಂದಿನಿಂದ ಯಾವುದೊ ಒಂದು ಕಾರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಟೋರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಮಾಡಿ ತನ್ನಕಾರ ಸಮೇತ ಓಡಿ ಹೋಗಿದ್ದು ಅಪಘಾತದಲ್ಲಿ ಫಿರ್ಯಾದಿ ಎಡಗಾಲು ಹಿಮ್ಮಡಿಯ ಹತ್ತಿರ ರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯ ಮಾಳಿಗೆ ಕುಸಿದು ಸಾವು ಪ್ರಕರಣ :
ಮುಧೋಳ ಠಾಣೆ : ದಿನಾಂಕ: 06-12-14 ರಂದು 2 ಎ ಎಮ್ ಕ್ಕೆ ಶ್ರೀ  ಫೀರ ಅಹಮ್ಮದ ತಂದೆ ಮಹಮ್ಮದ ಹುಸೇನ ಚಾಂದವಾಲೆ ಸಾ|| ರಾಮಬೊಡ ಏರೀಯಾ ಮುಧೋಳ ಇವರು ನಿವೃತ್ತ ನೌಕರನಾಗಿರುತ್ತೇನೆ ಈಗ ಸುಮಾರು 5 ವರ್ಷಗಳ ಹಿಂದ ನಾನು ಮನೆಯನ್ನು ಕಟ್ಟಿ ಮನೆಯ ಛಾವಣೆಯು ಕಟ್ಟಿಗೆಯ ಭೀಮಹಾಕಿ ಅದರ ಮೇಲೆ ಕಟ್ಟಿಗೆಗಳು ಜಂತಿಗಳು ಹಾಕಿ ಮೇಲೆ ಪರಶೀ ಕಲ್ಲುಗಳು ಹಾಕಿ ಮಾಡಿರುತ್ತೆನೆ. ದಿನಾಂಕ: 05-12-14 ರಂದು ರಾತ್ರಿ 10 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ  ಹಮೀದಾಬೇಗಂ ಗಂಡ ಫೀರಅಹಮ್ಮದ ಹಾಗೂ ನನ್ನ ಮಕ್ಕಳಾದ, ಕುಮಾರಿ ಸಮೀನಾ ತಂದೆ ಫೀರಅಹಮ್ಮದ, ನಾಜೀಯಾ ತಂದೆ ಫೀರಅಹಮ್ಮದ, ರೇಷ್ಮಾ ತಂದೆ ಫೀರಅಹಮ್ಮದ ಇವರೆಲ್ಲರೂ ಕೂಡಿ ಊಟ ಮಾಡಿ ಮಲಗಿಕೊಂಡಿದ್ದೇವು ಎಲ್ಲರಿಗೂ ನಿದ್ರೆ ಹತ್ತಿದ್ದು ದಿನಾಂಕ: 05-12-14 ರಂದು ರಾತ್ರಿ 11:15 ಗಂಟೆ ಸುಮಾರಿಗೆ ನಮ್ಮ ಮನೆಯ ಮೇಲಿನ ಕಟ್ಟಿಗೆಗಳು ಹಾಗೂ ಪರಶೀ ಕಲ್ಲಿನ ಛಾವಣಿಗಳು ಒಮ್ಮೇಲೆ ಆಕಸ್ಮಿಕವಾಗಿ ಕುಸೀದು ಬಿದ್ದು  ಮನೆಯಲ್ಲಿ ಮಲಗಿ ಕೊಂಡಿದ್ದ 5 ಜನರ ಮೇಲೆ ಬಿದ್ದಿದ್ದು  ಇದರ ಆವಾಜ ಕೇಳೆ ಆಜು ಬಾಜು ಜನರು ಸ್ಥಳಕ್ಕೆ ಬಂದು ನಮ್ಮ ಮೈಮೇಲೆ ಬಿದ್ದ ಪರಶೀ ಕಲ್ಲುಗಳು ಹಾಗೂ ಕಟ್ಟಿಗೆಗಳು ಸರಸಿ ನಮಗೆ ಅಲ್ಲಿಂದ ಹೊರಗೆ ತೆಗೆದರು. ಈ ಘಟನೆಯಲ್ಲಿ ನನಗೆ ಮತ್ತು ನನ್ನ ಹೆಂಡತಿಯಾದ ಹಮೀದಾಬೇಗಂ ಇವಳಿಗೆ ಗಾಯಗಳು ಆಗಿರುತ್ತವೆ. ಮತ್ತು ನನ್ನ ಮಗಳಾದ ಕುಮಾರಿ ಸಮೀನಾ ಇವಳಿಗೆ ಭಾರಿ ಗಾಯಗಳಾಗಿರುತ್ತವೆ. ಹಾಗೂ ನನ್ನ ಮಕ್ಕಳಾದ ನಾಜೀಯಾ ವ|| 21 ವರ್ಷ, ರೇಷ್ಮಾ ವ|| 18 ವರ್ಷ ಇವರುಗಳಿಗೆ ಭಾರಿ ಗಾಯಗಳಾಗಿ ಬೇವೂಷ ಆಗಿ ಬಿದ್ದಿರುವುದನ್ನು ನೊಡಿ ಸ್ಥಳಕ್ಕೆ ಅಂಬ್ಯುಲೇನ್ಸ ತರಸಿ ಅದರಲ್ಲಿ ಇವರಿಬ್ಬರಿಗೂ ಹಾಕಿಕೊಂಡು ಮುಧೋಳ ಸರ್ಕಾರಿ ಆಸ್ಪತ್ರೆಗೆ ತರುವ ಕಾಲಕ್ಕೆ ಧಾರಿಯಲ್ಲಿ ಮೃತಪಟ್ಟಿರುತ್ತಾರೆ. ಈ ಘಟನೆಯು ಆಕಸ್ಮಿಕವಾಗಿ ಜರೂಗಿರುತ್ತದೆ ಮತ್ತು ಮನೆಯ ಛಾವಣಿಯು ಒಮ್ಮೇಲೆ ಕುಸಿದು ಕೆಳಗೆ ಬಿದ್ದಿದ್ದರಿಂದ ಈ ಘಟನೆ ಸಂಬಂವಿಸಲು ಕಾರಣವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಮಾದನ ಹಿಪ್ಪರಗಾ ಠಾಣೆ : ಶ್ರೀ.ಗುರುಶರಣ ತಂದೆ ಶಿವಲಿಂಗಪ್ಪ ಪೊಲೀಸ್ ಪಾಟೀಲ ಸಾ:ಝಳಕಿ(ಕೆ) ತಾ:ಆಳಂದ ಜಿ: ಕಲಬುರಗಿ ರವರು  ದಿನಾಂಕ 05/12/2014 ರಂದು ಮದ್ಯಾಹ್ನ ಮನೆಯಲ್ಲಿ ಇದ್ದಾಗ ನಮ್ಮೂರಿನ ಬಸವರಾಜ ತಂದೆ ಕಾಮಣ್ಣಾ ಚವಾಡಪೂರ ಇವರು ಬಂದು ತಿಳಿಸಿದೆನೆಂದರೆ ನಮ್ಮೂರಿನ ಭೀಮಾಶಂಕರ ದೇವಸ್ಥಾನದ ಹತ್ತಿರ ಇರುವ ಸರ್ಕಾರಿ ಭಾವಿಯ ನೀರಿನಲ್ಲಿ ಒಂದು ಗಂಡಸಿನ ಶವ ತೇಲುತ್ತಿದ್ದು ಅವನ ವಯಸ್ಸು ಸುಮಾರು 25-30 ವರ್ಷ ವುಳ್ಳವನಾಗಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನಮ್ಮೂರಿನ ಪ್ರಮುಖ ಗ್ರಾಮಸ್ಥರು ಕೂಡಿಕೊಂಡು ಹೋಗಿ ನೋಡಲಾಗಿ ಒಂದು ಗಂಡಸಿನ ಮೃತದೇಹ ತೇಲುತ್ತಿದ್ದು ಮೃತನ ಮೈಮೇಲೆ ಚಾಕ್ಲೇಟ್ ಬಿಳಿ ಕೆಂಪು ಪಟ್ಟಿಯ ಡಿಜೈನವುಳ್ಳ ಹಾಫ್ ತೋಳಿನ ಟೀ ಶರ್ಟ ಇರುತ್ತದೆ & ಕೇಂಪು ಬನಿಯನ್ ಕಂಡುಬರುತ್ತದೆ. ಹಾಗೂ ಕಪ್ಪು ಬಣ್ಣಿನ ಜೀನ್ಸ್ ಪ್ಯಾಂಟಿನಂತೆ ಕಂಡು ಬರುತ್ತದೆ. ಮೃತನು ಅಂದಾಜು ಎತ್ತರ 5 ಫೀಟ್ 6 ಇಂಚು, ದುಂಡು ಮುಖ ಸದೃಡ ಶರೀರ ಸಾದಾ ಕಪ್ಪು ಬಣ್ಣವುಳ್ಳವನಾಗಿರುತ್ತಾನೆ. ಮೃತನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ ಮೃತನು 2 -3 ದಿವಸಗಳ ಹಿಂದೆ ನೀರಿನಲ್ಲಿ ಬಿದ್ದು ಸತ್ತಂತೆ ಕಂಡುಬರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.