POLICE BHAVAN KALABURAGI

POLICE BHAVAN KALABURAGI

30 November 2014

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ಬಸ್ಸುಗೌಡ ತಂದೆ ಅಮೃತಗೌಡ ಬಿರದಾರ ಸಾ: ಗಂವ್ಹಾರ ದಿನಾಂಕ 10/09/2014 ರಂದು ನಾನು ಮತ್ತು ನನ್ನ ಕಾಕನ ಮಗ ಕರಬಸಣ್ಣ ಬಿರಾದಾರ ಇತನೊಂದಿಗೆ  ಆತನ ವೇತನ ಪಡೆಯಲು ನನ್ನ ಮೋಟಾರ ಸೈಕಲ್ ಮೇಲೆ ಜೇವರ್ಗಿಗೆ ಬರುತ್ತಿದ್ದಾಗ ಮದ್ಯಾಹ್ನ 4-00 ಗಂಟೆಗೆ ಜೇವರ್ಗಿ ಶಾಹಾಪುರ ರಸ್ತೆ ಗಂವ್ಹಾರ ಕ್ರಾಸ್ ಹತ್ತಿರ ಕರಬಸಣ್ಣ ಇತನಿಗೆ ಲಘು ಶಂಕೆ ಮಾಡುವುದಕ್ಕಾಗಿ ಮೋಟಾರ ಸೈಕಲ್ ನಿಲ್ಲಿಸಿದೆನು ಕರಬಸಣ್ಣ ಇತನು ರಸ್ತೆ ದಾಟುವಾಗ ಜೇವರ್ಗಿ ಕಡೆಯಿಂದ ಮೋಟಾರ ಸೈಕಲ್ ನಂ ಕೆಎ-32-ಕೆ-6221 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಕರಬಸಣ್ಣನಿಗೆ ಡಿಕ್ಕಿ ಪಡಿಸಿ ಭಾರಿ ಗಾಯಪಡಿಸಿ ಓಡಿ ಹೋಗಿರುತ್ತಾನೆ ನಂತರ ನಾನು ಖಾಸಗಿ ಅಂಬುಲೇನ್ಸದಲ್ಲಿ ಕರಬಸಣ್ಣನಿಗೆ ಹಾಕಿಕೊಂಡು ಗುಲಬರ್ಗಾದ ಕಾಮರೆಡ್ಡಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದಾಗ ಅಲ್ಲಿನ ವೈಧ್ಯರು ಹೆಚ್ಚಿನ ಉಪಚಾರಕ್ಕಾಗಿ ಸೊಲಾಪುರದ ಗಂಗಾಮಯಿ ಆಸ್ಪತ್ರೆಗೆ ಹೋಗಲು ಹೇಳಿದ್ದರಿಂದ ರಾತ್ರಿಯೇ ಅಂಬುಲೆನ್ಸ ವಾಹನದಲ್ಲಿ ಹಾಕಿಕೊಂಡು ಸದರ ಸೋಲ್ಲಾಪುರ ಗಂಗಾಮಯಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದೇನು ನಂತರ ನನ್ನ ಕಾಕನ ಮಗ ಕರಬಸಪ್ಪ ಇತನಿಗೆ ಉಪಚಾರ ಫಲಕಾರಿಯಾಗದೆ ದಿನಾಂಕ 15/09/2014 ರಂದು ಮದ್ಯಾಹ್ನ 3-00 ಗಂಟೆಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 28/11/2014 ರಂದು ಸಾಯಂಕಾಲ 05-15 ಗಂಟೆ ಸುಮಾರಿಗೆ ನನ್ನ ಗಂಡನಾದ ವಿಜಯಕುಮಾರ ಇತನು ತನ್ನ ಮೋ/ಸೈಕಲ್ ನಂ: ಕೆಎ 32 ಇಇ 3864 ನೆದ್ದನ್ನು ರಾಮ ಮಂದಿರ ರಿಂಗ ರೋಡ ದಿಂದ ಆರ್.ಪಿ.ಸರ್ಕಲ್ ರೋಡಿನಲ್ಲಿ ಬರುವ ವೆಂಕಟಗಿರಿ ಹೊಟೇಲ ಎದುರಿನ ರೋಡ ಮೇಲೆ ವಿಜಯಕುಮಾರ ಇತನು ತನ್ನ ಮೋ/ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಎಡ ಬಲ ಕಟ್ ಹೊಡೆದು ಒಮ್ಮೇಲೆ ಬ್ರೇಕ್ ಹಾಕಿ ಮೋ/ಸೈಕಲ್ ಸ್ಕಿಡ ಮಾಡಿ ತನ್ನಿಂದ ತಾನೆ ಬಿದ್ದು ಎಡಗಡೆ ಹುಬ್ಬಿಗೆ, ಎಡ ಮೆಲಕಿನ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ  ಅಂತಾ ಶ್ರೀಮತಿ ಶಿವಲಿಲಾ ಗಂಡ ವಿಜಯಕಯಮಾರ ಸಾ: ಪಿರೋಜಾಬಾದ ತಾ:  ಕಲಬುರಗಿ ಹಾ;ವ: ಗಾಂಧಿ ನಗರ ಗಂಜ ರೋಡ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವಾದಿರಾಜ ತಂದೆ ಶ್ಯಾಮರಾವ ಬೇಟಗೇರಿ ಸಾ: ಜಮಖಂಡಿ ಹಾ.ವ: ಎನ್.ಜಿ.ಓ ಕಾಲೋನಿ ಬೇಂದ್ರೆ ನಗರ ಕಲಬುರಗಿ ರವರು ದಿನಾಂಕ 23/11/14 ರಂದು ತನ್ನ ಹೆಂಡತಿ ವಿಜಯಶ್ರೀ ಅರವರು ಹುಬ್ಬಳಿಯಲ್ಲಿ ಕಾರ್ಯಕ್ರಮದ  ನಿಮಿತ್ಯ ಹೋಗಿದ್ದು ನಾನು ದಿನಾಂಕ 27/11/2014 ರಂದು ನನ್ನ ಮನೆಗೆ ಕೀಲಿ ಹಾಕಿ ರಾತ್ರಿ 7 ಗಂಟೆಗೆ ಕಲಬುರಗಿದಿಂದ ಹುಬ್ಬಳಿಗೆ ಹೋಗಿ ನಾನು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮ ಮುಗಿಸಿಕೊಂಡು ಇಂದು ದಿನಾಂಕ 29/11/14 ರಂದು ಸಾಯಂಕಾಲ 6-30 ಪಿ.ಎಂ.ಕ್ಕೆ ನಾನು ನನ್ನ ಹೆಂಡತಿ ಕಲಬುರಗಿಗೆ ಬಂದು ನೋಡಲಾಗಿ ನಮ್ಮ ಮನೆಗೆ ಹಾಕಿದ ಮುಖ್ಯ ಬಾಗಿಲದ ಕೀಲಿ ಮುರಿದು ಬಿದ್ದಿದ್ದು ಬಾಗಿಲು ಸ್ವಲ್ಪ ತೆರೆದಿದ್ದು ಗಾಬರಿಗೊಂಡು ಒಳಗೆ ಹೋಗಿ ನೋಡಲಾಗಿ ಬೆಡ್ ರೂಮ್ ಕೊಣೆಯಲ್ಲಿ ಅಲಮಾರಿ ಕೊಂಡಿ ಹಾರಿಸಿ ತೆರೆದು ಲಾಕರದಲ್ಲಿ ಇಟ್ಟ ಬಂಗಾರದ ಆಭರಣಗಳು,  ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 1,77,000/- ರೂ ಬೇಲೆ ಬಾಳುವ  ಆಭರಣಗಳನ್ನು ಯಾರೋ ಕಳ್ಳರು ದಿನಾಂಕ 28/29-11-2014 ರಂದು ಮದ್ಯರಾತ್ರಿ ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಗಂಗುಬಾಯಿ ಗಂಡ ಸುರೇಶ ತಳವಾರ ಸಾ|| ನಿಂಬರ್ಗಾ ಹಾ|||| ಎಸ್,ಎಮ್ ಕೃಷ್ಣಾ ಕಾಲೋನಿ ಕಲಬುರಗಿ ಇವರ ಮಗನಾದ ಪ್ರದೀಪ 12 ವರ್ಷ ಈತನು ದಿನಾಂಕ: 24/11/2014 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ತನ್ನ ಮನೆಯಿಂದ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ, ಕಾಣೆಯಾಗಿದ್ದಾನೋ ಅಥವಾ  ಅಪಹರಣಕ್ಕೀಡಾಗಿದ್ದಾನೋ ಗೋತ್ತಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 November 2014

Kalaburagi District Reported Crimes

ಅಪಹರಣ ಪ್ರಕರಣ :
ಮಳಖೇಡ ಠಾಣೆ : ಶ್ರೀ ಅಶೋಕ ತಂದೆ ಪಾಂಡುರಂಗ ತಳವಾರ ಸಾ: ಕಾಚೂರ ತಾ: ಸೇಡಂ ಇವರು ದಿನಾಂಕ: 09-11-2014 ರಂದು ರವಿವಾರ ಇದ್ದುದ್ದರಿಂದ ನನ್ನ ಮಗನಾದ ಜಗನ್ನಾಥ ಇತನು ಮುಂಜಾನೆ ಮನೆಯಿಂದ ಊಟ ಮಾಡಿಕೊಂಡು ಊರಲ್ಲಿ ಆಟವಾಡಲು ಹೋದನು. ಮುಂಜಾನೆ 10:00 ಗಂಟೆಯವರೆಗೆ ಆಟವಾಡುತ್ತಿದ್ದು ನಂತರ, ಸಾಯಂಕಾಲ 15:00 ಗಂಟೆಯವರೆಗೆ ಊರಲ್ಲಿ ಕ್ರಿಕೇಟ ಆಟವಾಡುತ್ತಿದ್ದನು. ಆಗ ನಾನು ಕೆಲಸದ ನಿಮಿತ್ಯಾ ಹೊಲಕ್ಕೆ ಹೊದೇನು. ನಂತರ ರಾತ್ರಿ ನನ್ನ ಮಗ ಜಗನ್ನಾಥ ಇತನು ಮನೆಗೆ ಬರಲಿಲ್ಲಾ. ನಾನು ಮತ್ತು ನನ್ನ ಹೆಂಡತಿ ಊರಲ್ಲಿ ವಿಚಾರಿಸಲು ನನ್ನ ಮಗನ ಬಗ್ಗೆ ಪತ್ತೆಯಾಗಲಿಲ್ಲಾ. ನನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ನಾನು ಇಲ್ಲಿಯವರೆಗೆ ಎಲ್ಲಾ ಬೀಗರು ನೆಂಟ್ಟರಲ್ಲಿ ವಿಚಾರಣೆ ಮಾಡಲು ನನ್ನ ಮಗನ ಬಗ್ಗೆ ಯಾವುದೆ ಮಾಹಿತಿ ಸಿಗಲಿಲ್ಲಾ. ನನ್ನ ಅಪ್ರಾಪ್ತ ವಯಸ್ಸಿನ ಮಗನಾದ ಜಗನ್ನಾಥ ಇತನು ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಶೋಕ ತಂದೆ ರೇವಪ್ಪ ಶೆಟ್ಟಿ ಸಾ : ಅಫಜಲಪೂರ ರವರು ದಿನಾಂಕ 08-11-2014 ರಂದು ರಾತ್ರಿ 11:30 ಗಂಟೆ ಸುಮಾರಿಗೆ ನಾನು ಅಂಗಡಿಯಿಂದ ನನ್ನ ಮೋ/ಸೈ ನಂಬರ ಕೆಎ-32 ಕೆ-4567 ಅಂತಾ ಇದ್ದು, ಚೆಸ್ಸಿ ನಂಬರ:- 8B536160H  ಇಂಜೆನ ನಂಬರ:- 8B536160H  MOdel No- 1998, ಅಂತಾ ಇದ್ದು, ಕಪ್ಪು ಬಣ್ಣದ್ದು ಇರುತ್ತದೆ. ಅದರ ಅಂದಾಜು 30,000/- ರೂ ಕಿಮ್ಮತ್ತಿನದರ ಮೇಲೆ ನಮ್ಮ ಮನೆಗೆ ಬಂದು ನಮ್ಮ ಅಣ್ಣನ ಮನೆಯ ಮುಂದೆ ಮೋ/ಸೈ ನಿಲ್ಲಿಸಿ ಮನೆಗೆ ಹೊಗಿರುತ್ತೆನೆ, ಸದರಿ ಮೋ/ಸೈ ನಿಲ್ಲಿಸಿದ್ದು ನಮ್ಮ ಮನೆಯ ಮುಂದಿನಿಂದ ಹಾಗೂ ಕಿಡಕಿಯಿಂದ ನೊಡಿದರೆ ಕಾಣುತ್ತದೆ, ಅಂದಾಜು ರಾತ್ರಿ 12:30 ಗಂಟೆ ಸುಮಾರಿಗೆ ನಾನು ಮೂತ್ರ ಮಾಡಲು ಎದ್ದಾಗ ನನ್ನ ಮೋ/ಸೈ ನಾನು ನಿಲ್ಲಿಸಿದ ಸ್ಥಳದಲ್ಲೆ ಇದ್ದು ನಂತರ ಬೆಳಗಿನ ಜಾವ ಸುಮಾರು 05:00 ಗಂಟೆ ಎದ್ದು ಮನೆಯಿಂದ ಹೊರಗೆ ಬಂದು ನೋಡಲಾಗಿ ನನ್ನ ಮೋ/ಸೈ ಇರಲಿಲ್ಲ, ಸದರಿ ನನ್ನ ಮೋ/ಸೈ ನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 November 2014

Kalaburgi District Press Note

ಪತ್ರಿಕಾ ಪ್ರಕಟಣೆ

ಪೊಲೀಸ ಪೇದೆ ಸಿ.ಇ.ಟಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಬಹಿರಂಗ ಪಡಿಸಿದ ಪ್ರಮುಖ ಆರೋಪಿತರ ಪೈಕಿ ಸಿದ್ದಣ್ಣ ದೇವದುರ್ಗ ಬಂಧನ, 73,03,500 ರೂ ಜಪ್ತಿ.
ದಿನಾಂಕ 16/11/2014 ರಂದು ನಡೆದ ಪೊಲೀಸ್ ಪೇದೆಗಳ ನೇಮಕಾತಿ ಸಿ.ಇ.ಟಿ ಪರೀಕ್ಷೆಯಲ್ಲಿಯ ಉತ್ತರಗಳು ಬಹಿರಂಗಗೊಂಡಿದ್ದು, ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಗುನ್ನೆ ನಂ. 290/2014 ಕಲಂ. 420, 120(ಬಿ) ಐ.ಪಿ.ಸಿ ಗುನ್ನೆ ವರದಿಯಾಗಿದ್ದು ಇರುತ್ತದೆ. ಪ್ರಕರಣದಲ್ಲಿ ಮಾನ್ಯ ಐಜಿಪಿ ಈವ ಕಲಬುರಗಿ, ಮಾನ್ಯ ಎಸ್.ಪಿ ಕಲಬುರಗಿ ರವರ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳಿಸಿ ಪ್ರಕರಣದಲ್ಲಿ ಈಗಾಗಲೇ 13 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಕಾಲಕ್ಕೆ ಪ್ರಕರಣದ ಆರೋಪಿತನಾದ ಸಿದ್ದಣ್ಣ ತಂದೆ ಹಣಮಂತರಾಯ ದೇವದುರ್ಗ ವ: 27 ವರ್ಷ ಜಾ: ಉಪ್ಪಾರ ಉ: ಎಸ್.ಡಿ.ಎ ಗ್ರಾಮೀಣ ಅಭಿವ್ರದ್ದಿ, ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತಿ ಕಚೇರಿ ಮಾದಗೊಂಡನಹಳ್ಳಿ ತಾ: ಮಾಗಡಿ ಜಿ: ರಾಮನಗರ ಹಾ.ವ: ಹಂಚನಾಳ (ಎಸ್.ವೈ) ತಾ: ಜೇವರ್ಗಿ ಜಿ: ಕಲಬುರಗಿ ಈತನನ್ನು ನಿನ್ನೆ ದಿನಾಂಕ 26/11/2014 ರಂದು ರಾತ್ರಿ 9:00 ಗಂಟೆಗೆ ಹಿಡಿದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಸದರಿಯವನು ದಿನಾಂಕ 16/11/2014 ರಂದು ನಡೆದ ಪೊಲೀಸ್ ಪೇದೆ ನೇಮಕಾತಿ ಸಿ.ಇ.ಟಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಬೆಂಗಳೂರು ಮೂಲದ 2 ಜನರು ತನಗೆ ನೀಡಿದ್ದು ಅದನ್ನು ತಾನು ಅಶೋಕ ಒಡೆಯರ ಹಾಗು ಇತರರ ಮೂಲಕ ಪೊಲೀಸ ಪೇದೆ ಹುದ್ದೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾರಾಟ ಮಾಡಿ ಅವರಿಂದ ಹಣ ಪಡೆದುಕೊಂಡಿರುವ ಬಗ್ಗೆ ವಿಚಾರಣೆ ಕಾಲಕ್ಕೆ ತಿಳಿಸಿದ್ದು ಸದರಿ ಆರೋಪಿತನಿಂದ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿ ಸಂಗ್ರಹಿಸಿದ ಒಟ್ಟು 73,03,500=00 ರೂಪಾಯಿಗಳನ್ನು ತನಿಖೆ ಕಾಲಕ್ಕೆ ಹಾಜರ ಪಡಿಸಿದ್ದು ಜಪ್ತು ಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನ ವಿಚಾರಣೆ ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ. ಪ್ರಶ್ನೆ ಪತ್ರಿಕೆ ಬಹಿರಂಗ ಪಡಿಸಿದ ಇನ್ನೂ ಕೆಲವು ಪ್ರಮುಖ ಆರೋಪಿತರ ಪತ್ತೆಗಾಗಿ ಜಾಲ ಬೀಸಲಾಗಿದೆ.