POLICE BHAVAN KALABURAGI

POLICE BHAVAN KALABURAGI

18 October 2014

Gulbarga District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ,ರಾಜು ತಂದೆ ಸಂಗಣ್ಣಾ ಮದರಿ, ಸಾ|| ಸಿಂದಗಿ(ಬಿ) ತಾ|| ಜಿ|| ಗುಲಬರ್ಗಾ ರವರು ದಿನಾಂಕ: 14/10/2014 ರಂದು ಬೆಳಗ್ಗೆ 10-00 ಗಂಟೆಗೆ ತಹಸೀಲ ಆಫೀಸ್  ಎದುರುಗಡೆ ತನ್ನ ಹೀರೊ ಹೊಂಡಾ ಸ್ಪ್ಲೇಂಡರ್ ಪ್ಲಸ್  ನಂ: ಕೆಎ 32 ಡಬ್ಲ್ಯೂ-6971 ಅ||ಕಿ|| 40,000/- ನೇದ್ದನ್ನು ನಿಲ್ಲಿಸಿ ತಹಸೀಲ ಆಫಿಸ್ ಒಳಗಡೆ ಹೋಗಿ ಮರಳಿ ಬರುವದರ ಒಳಗಾಗಿ ನನ್ನ ವಾಹನ ಕಳುವು ಆಗಿದ್ದು  ಇಲ್ಲಿಯತನಕ ಎಷ್ಟು ಹುಡಕಾಡಿದರು ಸಿಕ್ಕರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

17 October 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 17/10/2014 ರಂದು ರಾತ್ರಿ ನಾಗಾರ್ಜುನ ಲಾಡ್ಜದಲ್ಲಿರುವ ರೂಮ್ ನಂಬರ 205 ರಲ್ಲಿ ಸುಮಾರು 6-7 ಜನರು ಕುಳಿತುಕೊಂಡು ಇಸ್ಪಿಟ ಎಲೆಗಳ ಸಹಾಯದಿಂದ ಅಂದರ ಬಹಾರ ಎಂಬ ಇಸ್ಪಿಟ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇಲೆಗೆ ಪಿ.ಐ ಸಾಹೇಬರು ಹಾಗು ರಾತ್ರಿ ಗಸ್ತಿನ ಸಿಬ್ಬಂದಿಯವರಾದ ಉದಂಡಪ್ಪಾ ಎ.ಎಸ್.ಐ, ಪಿಸಿ 632 ವಿಜಯ ಕುಮಾರ ಮಾನೆ, ಪಿಸಿ 619 ಮಲ್ಲನಗೌಡ, ಪಿಸಿ 369 ಹಮೀಮೊದ್ದೀನ, ಪಿಸಿ 1070 ವಿರೇಶ ಹಾಗು ಜೀಪ ಚಾಲಕ ನದಾಫ ಹೀಗೆ ಕೂಡಿಕೊಂಡು ಮಾನ್ಯ ಡಿ.ಎಸ್.ಪಿ ಸಾಹೇಬ '' ಉಪ ವಿಭಾಗ ಗುಲಬರ್ಗಾರವರ ನೇತೃತ್ವದಲ್ಲಿ ಹೋಗಿ ನಾಗಾರ್ಜುನ ಲಾಡ್ಜ ರೂಮ್ 205 ನೇದ್ದರಲ್ಲಿ ಹೋಗಿ ನೋಡಿ ಖಚೀತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಜೂಜಾಟ ಆಟಕ್ಕೆ ಉಪಯೋಗಿಸಿದ ನಗದು ಹಣ 1,14,900/-ರೂ ಹಾಗು 6 ಮೊಬೈಲ ಗಳು ಅ.ಕಿ 21,000/-ರೂ ಹಾಗು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿದ್ದು ಇರುತ್ತದೆ ಮತ್ತು ಸದರಿ ನಾಗಾರ್ಜುನ ಲಾಡ್ಜಿನ ಮಾಲಕರು ಈ ಅಂದರ ಬಾಹರ ಜೂಜಾಟಕ್ಕೆ ಅನುಕುಲ ಮಾಡಿಕೊಟ್ಟಿದ್ದು ಸದರಿ ಆಪಾದಿತರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 16/10/2014 ರಂದು ನಿಂಬರ್ಗಾ ಗ್ರಾಮದ ಅಂಬೇಡ್ಕರ ಸರ್ಕಲ ಹತ್ತಿರ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಬಾತ್ಮಿ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ನಿಂಬರ್ಗಾ ಗ್ರಾಮದ ಅಂಬೇಡ್ಕರ ಸರ್ಕಲ ಹತ್ತಿರ ಹೋಗಿ ಮರೆಯಲ್ಲಿ ನಿಂತು  ನೋಡಲಾಗಿ ಅಂಬೇಡ್ಕರ ಸರ್ಕಲ ಹತ್ತಿರ ರೋಡಿನ ಮೇಲೆ ಸಾರ್ವಜನಿಕ  ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ದಶರಥ ತಂದೆ ಮೈಲಾರಿ ಮೂಲಿಮನಿ ಸಾ|| ನಿಂಬರ್ಗಾ ಅಂತ ತಿಳಿಸಿದ್ದು  ಸದಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 1170/-,  ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ,  ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡಿ ಸದಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಪ್ರೇಮಾ ಗಂಡ ರಾಜಾ ರಾಠೋಡ  ಸಾ:  ಭೀಮ ನಗರ ಕಾಕಡೆ ಚೌಕ ರಿಂಗ ರೋಡ ಗುಲಬರ್ಗಾ  ರವರಿಗೆ ರಾಜಾ ತಂದೆ ರತ್ನಸಿಂಗ ರಾಠೋಡ ಇವನೊಂದಿಗೆ ಸಂಪ್ರದಾಯದ ಪ್ರಕಾರ ಭವಾನಿ ನಗರದಲ್ಲಿ ಇರುವ ಭವಾನಿ ದೇವಸ್ಥಾನದಲ್ಲಿ ಮದುವೆಯಾಗಿದ್ದು ನಂತರ ಗುಲಬರ್ಗಾ ಸಬ್ ರಿಜಿಸ್ಟರ ಆಫೀಸನಲ್ಲಿ ಕೂಡಾ ರಜಿಸ್ಟರ ಮ್ಯಾರೇಜ ಮಾಡಿಕೊಂಡು ಗಂಡನೊಂದಿಗೆ ಸಂಸಾರ ಮಾಡುತ್ತಾ ಬಂದಿದ್ದು. ಮದುವೆಯಾದ ಕೆಲವು ದಿವಸಗಳ ವರೆಗೆ ಗಂಡ ಮತ್ತು ಗಂಡನ ಮನೆಯವರು ಫಿರ್ಯಾದಿರಾಳಿಗೆ ಸರಿಯಾಗಿ ನೋಡಿಕೊಂಡಿದ್ದು, ಮುಂದೆ  2) ಚಂದುಬಾಯಿ ಗಂಡ ರತ್ನಸಿಂಗ ರಾಠೋಡ  3)ತಾರಾಬಾಯಿ ಗಂಡ ರತ್ನಸಿಂಗ ರಾಠೋಡ  4)ವಿಜಯಕುಮಾರ ತಂದೆ ರತ್ನಸಿಂಗ ರಾಠೋಡ 5)ಶಶಿಕಲಾ ಗಂಡ ವಿಜಯಕುಮಾರ ರಾಠೋಡ  6) ಕಿಶನ ತಂದೆ ರತ್ನಸಿಂಗ ರಾಠೋಡ 7)ಶ್ರೀದೇವಿ ಗಂಡ ಕಿಶನ ರಾಠೋಡ 8)ಸತೀಷ ತಂದೆ ರತ್ನಸಿಂಗ ರಾಠೋಡ 9) ಶಕುಂತಲಾ ತಂದೆ ರತ್ನಸಿಂಗ ರಾಠೋಡ 10) ಸುನಿತಾ ತಂದೆ ರತ್ನಸಿಂಗ ರಾಠೋಡ ಸಾ: ಎಲ್ಲರೂ  ಮುನೀಮ ಸಂಘ ಗಂಜ ರೋಡ ಗುಲಬರ್ಗಾ ಕೇರಾಫ ಬ್ರೇಕ್ಸ ಫ್ಯಾಕ್ಟರಿ ಭೀಮ ನಗರ ಕಾಕಡೇ ಚೌಕ ರಿಂಗ ರೋಡ  ಗುಲಬರ್ಗಾ ಎಲ್ಲರು   ಫಿರ್ಯಾದಿದಾರಳಿಗೆ ವಿನಾಕಾರಣ ಅವಾಚ್ಯವಾಗಿ ಬೈಯ್ಯುತ್ತಾ  ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡಲು ಪ್ರಾರಂಭಿಸಿ ತವರು ಮನೆಯಿಂದ ವರದಕ್ಷಿಣೆಯಲ್ಲಿ ರೂಪದಲ್ಲಿ ಹಣ ಮತ್ತು ಬಂಗಾರ ಆಭರಣಗಳು ತರುವಂತೆ  ಪೀಡಿಸುತ್ತಾ ಬಂದು  ದಿನಾಂಕ 01-09-14 ರಂದು  ಎಲ್ಲಾ ಆರೋಪಿತರು ಸದರಿಯವಳಿಗೆ ಊಟ ಹಾಕದೇ  ಹೊಡೆ ಬಡಿ ಮಾಡಿ ಮಾನಸಿಕ ಹಿಂಸೆ ಕೊಟ್ಟಿದ್ದರಿಂದ ಅವಳು  ಹಿಂಸೆ ತಾಳಲಾರದೇ ತವರು ಮನೆಯಲ್ಲಿ ಉಳಿದುಕೊಂಡಿದ್ದು, ಆದರೂ ಕೂಡಾ ಗಂಡ ಫಿರ್ಯಾದಿರಾಳಿಗೆ ಅಪಹರಣ ಮಾಡುವ ಬಗ್ಗೆ ಬೆದರಿಕೆ ಹಾಕುತ್ತಿದ್ದಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಾನಂದ ತಂದೆ ಲಕ್ಷ್ಮಣ ಭೀಮಳ್ಳಿ ಸಾಃ ಓಂ ನಗರ ಗುಲಬರ್ಗಾ ಇವರ ಮಗನಾದ ಸುರೇಶ ತಂದೆ ಯೋಗಪ್ಪಾ ವಯಃ 14 ವರ್ಷ ಈತನು  ದಿನಾಂಕ: 13/10/2014 ರಂದು ಬೆಳಗ್ಗೆ 04:00 ಎ.ಎಂ. ದಿಂದ 05:00 ಎ.ಎಂ. ಅವಧಿಯಲ್ಲಿ ನನ್ನ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾನೆ. ನಮ್ಮ ಸಂಬಂಧಿಕರಲ್ಲಿ ಹಾಗು ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

15 October 2014

Gulbarga District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಿಳ್ಳಿ  ಸಾ:ಶ್ರೀನಿವಾಸ ಸರಡಗಿ ತಾ;ಜಿ:ಗುಲಬರ್ಗಾ  ಇವರ ಮಗಳಾದ  ಮಲ್ಲಮ್ಮಾ ಇವಳಿಗೆ  ಲಗ್ನವಾಗಿ 10 ವರ್ಷ ಕಳೆದಿದ್ದು, ಆಕೆಯ ಗಂಡ ಲಕ್ಕಪ್ಪ ಕುಡಿತ ಚಟಕ್ಕೆ ಬಲಿಯಾಗಿ ಎನು ಕೆಲಸ ಮಾಡದೇ ತವರು ಮನೆಯಿಂದ ಸಂಸಾರದ ಖರ್ಚಿಗೆ ಹಣ ತೆಗೆದುಕೊಂಡು ಬಾ ಅಂತಾ ಹೇಳಿ ಹೊಡೆ ಬಡಿ ಮಾಡುತ್ತಾ ಬಂದಿರುತ್ತಾರೆ. ಅಲ್ಲದೇ ಈಗ ಒಂದು ತಿಂಗಳ ಹಿಂದೆ ನಮ್ಮ ಭಾವ ನಮ್ಮ ಅಕ್ಕಳಿಗೆ ಮತ್ತೆ ತವರು ಮನೆಯಿಂದ ಖರ್ಚಿಗೆ  ಹತ್ತು ಸಾವಿರ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ  ಹೇಳಿ ಹೊಡೆ ಬಡಿ ಮಾಡಿದ್ದು. ಇಂದು ದಿನಾಂಕ 15-10-14 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ನನ್ನ ಚಿಕ್ಕಪ್ಪ ಹಣಮಂತ ಇವರ ಪೋನಿಗೆ ಪಟ್ಟಣ ಗ್ರಾಮದ ದತ್ತು ಪಾಟೀಲ ಇವರು ಪೋನ ಮಾಡಿ ನಮ್ಮ ಅಕ್ಕ ಸತ್ತಿರುತ್ತಾಳೆ ಅಂತಾ ತಿಳಿಸಿದ್ದು, ವಿಷಯ ಕೇಳಿ ನಾನು ಮತ್ತು ಚಿಕ್ಕಪ್ಪ ಹಣಮಂತ, ತಾಯಿ ನಾಗಮ್ಮಾ ಮತ್ತು  ಊರಿನ ಇತರೇ ಜನರು ಪಟ್ಟಣ ಗ್ರಾಮಕ್ಕೆ ಹೋಗಿ ನೋಡಲಾಗಿ ಅಕ್ಕಳ ಶವ ನೆಲದ ಮೇಲೆ  ಮಲಗಿಸಿದ್ದು, ಅವಳ ಕುತ್ತಿಗಿಗೆ ನೇಣು ಹಾಕಿದ ಗಾಯದ ಗುರುತು ಇಂಡು ಬಂದಿರುತ್ತದೆ. ನಮ್ಮ ಅಕ್ಕ ಇವಳಿಗೆ ಆಕೆಯ ಗಂಡ ಲಕ್ಕಪ್ಪ, ಮೈದನ ರವಿ ಅತ್ತೆ ಹೀರಾಬಾಯಿ ಮೂವರು ಕೂಡಿ ಒಂದು ತಿಂಗಳ ಹಿಂದೆ ಹತ್ತು ಸಾವಿರ ರೂ. ಹಣ ಕೊಡಲಾರದ್ದಕ್ಕೆ ಅದೇ ದ್ವೇಷದಿಂದ ನಮ್ಮ ಅಕ್ಕಳಿಗೆ  ಓಡನಿ ಬಟ್ಟೆಯಿಂದ ಕುತ್ತಿಗಿಗೆ ಬಿಗಿದು ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 15-10-2014 ರಂದು ಅಫಜಲಪೂರ ಪಟ್ಟಣದ ಕಾರ್ಯದ ದೇವಿಯ ಗುಡಿಯ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ದೇವಿಯ ಗುಡಿಯಿಂದ ಸ್ವಲ್ಪ ದೂರದಲ್ಲಿ ನಮ್ಮ ಜೀಪ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ದೇವಿಯ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶಿವಾಜಿ ತಂದೆ ನರ್ಸಪ್ಪ ಜಮಾದಾರ ಸಾ|| ಕರಜಗಿ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 270/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸಂದೀಪ ತಂದೆ ಬಾನುದಾಸರಾವ ಪಾಟೀಲ ಸಾ: ಗೋದುತಾಯಿ ನಗರ ಗುಲಬರ್ಗಾ ಇವರು ದಿನಾಂಕ 02/10/2014 ರಂದು ಮುಂಜಾನೆ 10-35 ಗಂಟೆ ಸುಮಾರಿಗೆ ನನ್ನ ಸ್ವಗ್ರಾಮಕ್ಕೆ ಹೊಗುವ ಸಲುವಾಗಿ ಲ್ಯಾಪಟಾಪ ಬ್ಯಾಗಿನಲ್ಲಿ ಹೆಚ್‌.ಪಿ ಲ್ಯಾಪಟಾಪ, ಒಂದು ಡಾಟಾ ಕಾರ್ಡ, ಪೇನ ಡ್ರೈವ, 2 ವರ್ಕ ಡ್ರೈರಿ ಮತ್ತು ಬಟ್ಟೆಗಳನ್ನು ಹಾಕಿಕೊಂಡು ಗುಲಬರ್ಗಾ ಬಸ ನಿಲ್ದಾಣದಲ್ಲಿ ಬಸವಕಲ್ಯಾಣಕ್ಕೆ ಹೊಗುವ ಕೆ.ಎಸ್‌.ಆರ್‌.ಟಿ.ಸಿ ಬಸ್ಸ ನಂ. ಕೆಎ 38-ಎಫ್‌-696 ನೇದ್ದರಲ್ಲಿ ನನ್ನ ಬ್ಯಾಗವನ್ನು ಇಟ್ಟು ನೀರಿನ ಬಾಟಲ ತರಲು ಕ್ಯಾಂಟಿನಿಗೆ ಹೊಗಿ ಬರುವಷ್ಟರಲ್ಲಿ ಯಾರೋ ನನ್ನ ಲ್ಯಾಪಟಾಪವುಳ್ಳ ಬ್ಯಾಗವನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ.  ಕಳುವಾದ ನನ್ನ ಹೆಚ್‌.ಪಿ ಲ್ಯಾಪಟಾಪ ಮತ್ತು ಚಾರ್ಜರ ಇದರ ಬೆಲೆ 30000/- ರೂ  ನೇದ್ದನ್ನು ಪತ್ತೆ ಹಚ್ಚಿಕೊಡಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನಗಳ ವಶ ಮತ್ತು ಬಂಧನ :
ಕಮಲಾಪೂರ ಠಾಣೆ : ದಿನಾಂಕ: 15/10/2014 ರಂದು ಶ್ರೀ,ಗಜಾನನ್  ಪಿ.ಎಸ್.ಐ ಕಮಲಾಪೂರ ಪೊಲೀಸ್ ಠಾಣೆ ರವರು ಮುಂಜಾನೆ 0945 ಗಂಟೆಯ  ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂ.218 ರ ಓಕಳಿ ಕ್ರಾಸ ಹತ್ತೀರ ಬರುತ್ತಿರುವಾಗ ಅಲ್ಲಿ ಇಬ್ಬರು ವ್ಯಕ್ತಿಗಳು ಎರಡು ಮೋಟರ ಸೈಕಲಗಳ ಸಮೇತ  ನಿಂತಿದ್ದು ಅವರು ನಮ್ಮ ಜೀಪನ್ನು ನೋಡಿ ಸಂಶಯಾಸ್ಪದವಾಗಿ ವರ್ತಿಸುತ್ತಾ ಮತ್ತು ತಮ್ಮನ್ನು ಮರಮಾಚುತ್ತಿರುವದನ್ನು ನೋಡಿ ನನ್ನ ಜೋತೆಗೆ ಕರ್ತವ್ಯದಲ್ಲಿದ್ದ ಪಿ.ಸಿ-310 ರವರ ಸಹಾಯದಿಂದ  ಇಬ್ಬರಿಗೆ   ಹಿಡಿದು ಅವರ ಹೆಸರು  ವಿಳಾಸದ ಬಗ್ಗೆ ವಿಚಾರ ಮಾಡಲು ಸರಿಯಾದ ಉತ್ತರ ಕೋಡದೆ ಸಂಶಯಾಸ್ಪದವಾಗಿ ವರ್ತಿಸಿದ್ದು ಮತ್ತು ಅವರ ಹತ್ತೀರವಿದ್ದ ಮೋಟರ  ಸೈಕಲಗಳ ಕಾಗದ ಪತ್ರಗಳು ತೋರಿಸುವಂತೆ ಹೇಳಲು ಯಾವುದೇ  ಸಮಂಜಸವಾದ ಉತ್ತರ ನೀಡಲಿಲ್ಲ ಮತ್ತು ಕಾಗದ ಪತ್ರಗಳು ಹಾಜರ ಪಡಿಸಲಿಲ್ಲ ಸದರಿಯವರು ಹೊಂದಿದ ಮೋಟರ ಸೈಕಲಗಳು ವಾರಸುದಾರರ ಬಗ್ಗೆ ಖಚಿತವಾಗಿ  ತಿಳಿಸದೆ ಇದ್ದರಿಂದ ಸದರಿ ಮೋಟರ .ಸೈಕಲಗಳು ಸಂಶಯಾಸ್ಪದ ಸ್ವತ್ತುಗಳು ಇರುವುದರ ಬಗ್ಗೆ ಬಲವಾದ ಸಂಶಯ ಬಂದಿದ್ದರಿಂದ ಪಂಚರನ್ನು ಬರಮಾಡಿಕೊಂಡು ದಿನಾಂಕ: 15-10-2014 ರ ಮುಂಜಾನೆ 10-00 ಗಂಟೆಯಿಂದ 11-00 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆಯನ್ನು ಬರೆಸಿಕೊಂಡು ಇಬ್ಬರು  ಆರೋಪಿತರನ್ನು ದಸ್ತಗಿರಿ ಮಾಡಿಕೊಂಡು  ಮತ್ತು  ಜಪ್ತಿ ಪಡಿಸಿಕೊಂಡ ಬಜಾಜ್  ಪಲ್ಸರ್ ಮೋ.ಸೈಕಲ್ ನಂ ಕೆ.ಎ-56-ಇ-6141 ಅದರ ಚೆಸ್ಸಿ ನಂ MD2A11CZHDCM78907 ಇಂಜಿನ್ ನಂ DHZPDM71100 ಮತ್ತು ಹಿರೊ ಹೊಂಡಾ ಸ್ಪೇಲಂಡರ ಪ್ರೋ ಮೋ.ಸೈಕಲ್ ನಂ ಕೆಎ-32-ಇಎ-9185 MBLHA10ADCHA5536  ಇಂಜಿನ್ ನಂ HA10EHCHA65608 ನೇದ್ದರ ಸಮೇತ ಠಾಣೆಗೆ ಮರಳಿ ಆರೋಪಿ ಮತ್ತು ಮುದ್ದೇಮಾಲುಗಳೋಂದಿಗೆ ಕಮಲಾಪೂರ ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.