POLICE BHAVAN KALABURAGI

POLICE BHAVAN KALABURAGI

09 February 2014

GULBARGA DIST REPORTED CRIMES

ಅಪಘಾತ ಪ್ರಕರಣಗಳು:
ಕಾಳಗಿ ಪೊಲೀಸ್ ಠಾಣೆ : ದಿನಾಂಕ 07-02-2014 ರಂದು ಶ್ರೀ  ರೀಯಾಜ ತಂದೆ ಮೋದಿನಸಾಬ ಚಾಂದನವಾಲ್ ಸಾ:ಕಾಳಗಿ ಇವರು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ 07-02-2014 1-45 ಪಿ,ಎಂ ಸುಮಾರಿಗೆ ನಾನು ಪ್ರತಿ ಶುಕ್ರವಾರದಂತೆ ನಮಾಜ್ ಮಾಡಲು ನನ್ನ ಹಣ್ಣಿನ ಅಂಗಡಿಯ ಸಮೀಪ ಇವರು ಮಜೀದ ಕಡೆಗೆ ಹೋಗುವಾಗ ಊರೊಳಗಿನಿಂದ ಬರುತ್ತಿದ್ದ ಟ್ರಾಕ್ಟರನ ಡ್ರೈವರನು ಅತಿವೇಗ ಹಾಗೂ ನೀಷ್ಕಾಳಜೀತನದಿಂದ ಚಲಾಯಿಸುತ್ತಾ ಹಿಂದುಗಡೆಯಿಂದ ಅಪಘಾತಪಡಿಸಿ ಟ್ಯಾಕ್ಟ್ರತನ್ನು ಅಲ್ಲಿಯೆ ಬಿಟ್ಟು ಓಡಿ ಹೋಗಿದ್ದು. ಅಪಘಾತದಿಂದ ತನ್ನ ಟೋಂಕಕ್ಕೆ ಒಳಪೆಟ್ಟು ಮತ್ತು ಎಡಗೈಗೆ ತರಚಿದ ಗಾಯಾವಾಗಿದ್ದು. ಟ್ರಾಕ್ಟರ ನಂಬರ ಕೆ.ಎ-32, ಟಿ.ಎ-6685/86 ಇರುತ್ತದೆ. ಅಪಘಾತಪಡಿಸಿದ್ದನ್ನು ಗ್ರಾಮದ 1) ಬಾಬು ತಂದೆ ಅಬ್ಬಾಸಲಿ 2) ಸಂತೋಷ ತಂದೆ ಭಗವಾನ ನೋಡಿರುತ್ತಾರೆ. ಕಾರಣ ಅಪಘಾತ ಮಾಡಿ ಓಡಿ ಹೋದ ಟ್ರಾಕ್ಟರ ಡ್ರೈವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 08/02/2014 ರಂದು ಶ್ರೀ ಮಲ್ಲಪ್ಪ ತಂದೆ ವಿಠ್ಠಲ ಕಾಂಬಳೆ ಸಾ|| ಮಾದನ ಹಿಪ್ಪರಗಾ ಇವರು ಠಾಣೆಗೆ ಹಾಜರಾಗಿ ದಿನಾಂಕ 30/01/2014 ರಂದು ತನ್ನ ತಂಗಿ  ಹೀರಾಬಾಯಿ ಇವಳು ನೀಲೂರ ದರ್ಗಾಕ್ಕೆ ಟಮಟಮದಲ್ಲಿ ಹೋಗುತ್ತಿರುವಾಗ ಸ್ಟೇಶನ ಗಾಣಗಾಪೂರದ ಕಂಕರ ಮಶೀನ ಹತ್ತಿರ ಎದುರುಗಡೆಯಿಂದ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಟಮ ಟಮ ನಲ್ಲಿ ಕುಳಿತಂತಹ ಹೀರಾಬಾಯಿ ಇವಳ ಹೊಟ್ಟೆಗೆ ಗುದ್ದಿ ನಿಲ್ಲಿಸದೆ ಹೋಗಿದ್ದು ಉಪಚಾರ ಕುರಿತು  ಸರ್ಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರ್ಪಡೆ ಮಾಡಿದ್ದು ಅಪಘಾತದಲ್ಲಿ ಅವಳಿಗೆ ಆದ ಗಂಭೀರ ಸ್ವರೂಪದ ಗಾಯದಿಂದಾಗಿ ಅವಳು ದಿನಾಂಕ 08/02/2014 ರಂದು  ಸರ್ಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಮೃತಪಟ್ಟಿದ್ದು ಸದರಿ ಮೋಟಾರ ಸೈಕಲ ಸವಾರನ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಕಳವು ಪ್ರಕರಣಗಳು:
ಅಶೋಕ ನಗರ ಪೊಲೀಸ್ ಠಾಣೆ : ದಿನಾಂಕ:08/02/2014 ರಂದು ಶ್ರೀ  ಸೋಮಶೇಖರ ತಂದೆ ಗಂಗಪ್ಪ ನಡಕಟ್ಟಿ ಸಾ: ಮೃತ್ಯುಂಜಯ ಟ್ರೇಡರ್ಸ ಎಲ್.8 ಉದ್ದಿಮೇ ವಸಹಾತು ಎಮ್.ಎಸ್.ಕೆ.ಮಿಲ್ ರಸ್ತೆ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ದಿನಾಂಕ  :31/01/2014 ರಂದು ಶುಕ್ರವಾರ ಬೆಳಿಗ್ಗೆ 9:30 ಗಂಟೆ  ಸುಮಾರಿಗೆ ತಾನು ಎಮ್.ಎಸ್.ಕೆ.ಮಿಲ್ ಮಾರುಕಟ್ಟೆಯಲ್ಲಿ ಕಾಯಿಪಲ್ಲೆ ತರಲು ಹೋಗಿದ್ದಾಗ ಮಾರುಕಟ್ಟೆಯ ಮುಖ್ಯ ರಸ್ತೆ ಬಿದಿ ಬದಿಯಲ್ಲಿ ನಿಲ್ಲಿಸಿದ್ದ ತನ್ನ ಬಣ್ಣ: ತಿಳಿನೀಲಿ ಬಣ್ಣದ ಬಜಾಜ ಸ್ಕೂಟರ ಸಂಖ್ಯೆ CTP 4803 ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು .  ಕಾರಣ ನ್ನ ಸ್ಕೂಟರ ಕಳ್ಳತನವಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸ್ಟೇಷನ ಬಜಾರ ಪೊಲೀಸ ಠಾಣೆ:  ದಿನಾಂಕ. 08.02.2014 ರಂದು ಶ್ರೀ ಲಿಂಗರಾಜ ತಂದೆ ಶರಣಪ್ಪಾ ಮಲಕಪ್ಪನವರ  ಸಾ|| ಪ್ಲಾಟ ನಂ.50 ವಕಿಲರ ಕಾಲೂನಿ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ದಿನಾಂಕ. 07.02.2014 ರಂದು ಬೆಳಿಗ್ಗೆ 11.30 ಗಂಟೆಗೆ ತಾವು ತಮ್ಮ ಮನೆಗೆ ಕೀಲಿ ಹಾಕಿಕೊಂಡು ಹೋಗಿ ಸಾಯಾಂಕಾಲ 5.30 ಗಂಟೆಗೆ ಮರಳಿ ಮನೆಗೆ ಬಂದು ನೋಡಿದಾಗ ಮನೆಯ ಕೀಲಿ ಮುರಿದು ಅಲ್ಮೆರಾದಲ್ಲಿಯ 1) 1) 25 ಗ್ರಾಂ ತೂಕದ ಒಂದು ಬಂಗಾರದ ಸಿಂಗಾರ ಕರಿಮಣಿ ಅ.ಕಿ|| 75000/-, 2) 50 ಗ್ರಾಂ ಬಂಗಾರದ 4 ಎಳಿ ಸರ್ ಅ.ಕಿ|| 1,50,000/- ರೂ, 3) 5ಗ್ರಾಂ ತೂಕದ ಬಂಗಾರದ ಜುಮಕಿ ಹ್ಯೂ ಅ.ಕಿ|| 15,000/- ರೂ,4) 15 ತೊಲೆ ಬೆಳ್ಳಿಯ ಮೂರು ಜೊತೆ ಚೈನ್ ಅ.ಕಿ|| 7,500 ರೂ, 5) 40 ಗ್ರಾಂ ಬೆಳ್ಳಿಯ ಹಾಲಗಡಗ ಅ.ಕಿ|| 2,000/-, 6) 2 ಗ್ರಾಂ ಬಂಗಾರದ ಒಂದು ಜೊತೆ ಮುರು ಅ.ಕಿ|| 6,000/-, 7) 5 ಗ್ರಾಂ ಬಂಗಾರದ ವಂಕಿ ಉಂಗುರ ಅ.ಕಿ|| 15,000/-ರೂ, 8) ಒಂದು ಸ್ಯಾಮಸಂಗ್ ಮೊಬೈಲ ಅ.ಕಿ|| 6,200/- ರೂ 9) ನಗದು ಹಣ 3,200/- ರೂ ಹೀಗೆ ಒಟ್ಟು 2,79,900 ರೂ ಬೆಲೆಬಾಳುವ ವಸ್ತುಗಳು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು  ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರೂಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸ್ಟೇಷನ್ ಬಜಾರ ಪೊಲೀಸ್ ಠಾಣೆ: ದಿನಾಂಕ. 07.02.2014 ರಂದು ಗೆ ಶ್ರೀ ವಿಲಾಸ ತಂದೆ ಮೋಹನ ಚಂದ್ರ ಬಸ್ತಾಳಕರ ಉ|| ಬ್ಲೂಡಾರ್ಟ ಎಕ್ಸಪ್ರೆಸ್ ಲಿಮಿಟೆಡನಲ್ಲಿ ಎಕ್ಸಕಿಟಿವ್  ಸಾ|| ಹೊನ್ನಕಿರಣಗಿ ಇವರು ತಮ್ಮ ಬ್ಲೂಡಾರ್ಟ ಎಕ್ಸಪ್ರೆಸ್ ಆಪೀಸನಲ್ಲಿ ಸಂಬಂದ ಪಟ್ಟ ಗ್ರಾಹಕರಿಗೆ ವಿತರಣೆಗಾಗಿ ಇಟ್ಟಿದ್ದ ಸುಮಾರು 8,13,717/- ರೂ ಬೆಲೆಬಾಳುವ  ಆನ್ ಲೈನ ಶಾಪಿಂಗ ದಿಂದ ಬಂದ ಮೋಬೈಲ್. ಲ್ಯಾಪಟಾಪ. ಬಟ್ಟೆಗಳು, ದಿನಾಂಕ; 16/01/2014 ರಂದು 5 ಪಿ ಎಮ್‌ ದಿಂದ ದಿನಾಂಕ; 17/01/20148;40 ಎಎಮ್ ಅವದಿಯಲ್ಲಿ ಕಳವು ಆಗಿರುತ್ತವೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣಗಳು :
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ 08/02/2014 ರಂದು  ಶ್ರೀ ಶರಣಯ್ಯಾ ತಂದೆ ಬಸಲಿಂಗಯ್ಯಾ ಕಲ್ಲಮಠ ಸಾ: ಪ್ಲಾಟ ನಂ. 12 ಸಂತೊಷ ಕಾಲೋನಿ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ದಿನಾಂಕ 06/02/2014 ರಂದು ಮುಂಜಾನೆ 11-00ಗಂಟೆ ಸುಮಾರಿಗೆ ತಾನು ಸಂತೋಷ ಕಾಲೋನಿಯ ಶಾಂಗ್ರಿಲಾ ಅರ್ಪಾಟಮೆಂಟ ಹತ್ತಿರ ಇದ್ದಾಗ ಎಸ್.ಎಸ್. ಹಿರೇಮಠ  ಮತ್ತು ಕರಣು ರವರಿಗೆ 1 ಲಕ್ಷ ರೂಪಾಯಿ ಚಕ್ಕಿನ ಬಗ್ಗೆ ಕೇಳಿದಕ್ಕೆ ‘’ ಯಾವ ದುಂಡು ಕೊಡಬೇಕಲೇ ರಂಡೆ ಮಗನೇ ಬೋಸಡಿ ಮಗನೇ ‘’ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನನಗೆ ತಡೆದು ನಿಲ್ಲಿಸಿ ಕರಣನು ಕೈಯಿಂದ ಕಪಾಳಕ್ಕೆ ಕಣ್ಣಿನ ಹತ್ತಿರ ಹೊಡೆದಿದ್ದು . ಎಸ್.ಎಸ್. ಹಿರೇಮಠನು ಜಗಳ ಬಿಡಿಸದಂತೆ ಮಾಡಿ ಕೈಯಿಂದ ಹೊಡೆದು ತೆಕ್ಕೆ ಕುಸ್ತಿಗೆ ಬಿದ್ದಿರುತ್ತಾನೆ. ಅಷ್ಠರಲ್ಲಿ ನನ್ನ ಪರಿಚಯದವರಾದ ಮಲ್ಲಯ್ಯಾ ಮಠ ಮತ್ತು ಕರಣಪ್ಪ ನಾಶಿ ಎನ್ನುವವರು ಜಗಳ ಬಿಡಿಸಲು ಬರುತ್ತಿರುವುದನ್ನು ನೋಡಿ ಮಗನೇ ನಿನಗೆ ಬಿಡುವುದಿಲ್ಲಾ.ಖಲಾಸ ಮಾಡುವುದಾಗಿ ಜೀವದ ಬೆದರಿಕೆ ಹಾಕಿದ್ದು. ಅಂದು ತನ್ನ ಕಣ್ಣಿಗೆ ಗಾಯವಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ ಕಾರಣ ಸದರಿಯವರ ಮೇಲೆ ಕಾನೂನಿನ ರೀತಿಯ ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮಹ್ಮದ ಮುದ್ದಾಸೀರ್‌ ತಂದೆ ಮಹ್ಮದ ಮಕ್ಬೂಲಖಾನ ಕಡಗಂಚಿ ಸಾ:ಹುಸೇನಿ ಗಾರ್ಡನ ಎಂ.ಎಸ್‌‌.ಕೆ ಮೀಲ್‌ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ದಿನಾಂಕ:07/07/2014 ರಂದು ರಾತ್ರಿ 8.30 ಗಂಟೆ ಸುಮಾರಿಗೆ ನಾನು ನಮಾಜ ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ನಮ್ಮ ಬಡಾವಣೆಯಲ್ಲಿ 5ನೇ ಕ್ರಾಸ ಹತ್ತಿರ ನಿಂತಿದ್ದ ನಮ್ಮ ಬಡಾವಣೆಯ ಅಲ್ತಾಪನು ತನ್ನ ಜೊತೆಯಲ್ಲಿ 3 ಜನರೊಂದಿಗೆ ಬಂದವನೆ ನನಗೆ ತಡೆದು ಏ ರಾಂಡ ಕೆ ಬೇಟೆ ಅಂತಾ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಎದೆಯ ಮೇಲಿನ ಅಂಗಿ ಹಿಡಿದು ಕೈ ಮುಷ್ಠಿಮಾಡಿ ನನ್ನ ಹೊಟ್ಟೆಗೆ ಹೊಡೆದಿರುತ್ತಾನೆ. ಮತ್ತು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾನೆ ಆತನ ಜೊತೆಯಲ್ಲಿದ್ದ 3 ಜನರು ನನಗೆ ನೆಲಕ್ಕೆ ಕೆಡವಿ ಕೈಯಿಂದ ಬೆನ್ನಿನ ಮೇಲೆ ಹೊಡೆಯುತ್ತಾ ಕಾಲಿನಿಂದ ಒದಿಯುತ್ತಿದ್ದರು ಇದನ್ನು ನೋಡಿ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಸೋಹಿಲ ಮತ್ತು ಖಲೀಲ ಇವರು ಬಿಡಿಸಿರುತ್ತಾರೆ ನನಗೆ ಗುಪ್ತಗಾಯವಾಗಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿ ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮಹ್ಮದ ಅಲ್ತಾಫ ಖಾನ ತಂದೆ ಮಹ್ಮದ ಇಬ್ರಾಹಿಂ ಖಾನ ಸಾ|| ಹುಸೇನಿ ಗಾರ್ಡ ಎಂ.ಎಸ್.ಕೆ ಮಿಲ್ ಗುಲಬರ್ಗಾ ಈತನು ದಿನಾಂಕ|| 07/02/14 ರಂದು ಸಾಯಂಕಾಲ 05-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಾಯಿ ಖುರ್ಷಿದ ಬೇಗಂ ಇಬ್ಬರು ಒಟ್ಟಿಗೆ ಸೇರಿ ನಮಾಜ ಮುಗಿಸಿಕೊಂಡು ಮನೆಗೆ ಹೊಗುತ್ತಿರುವಾಗ ಓಣಿಯ ಮುದಾಸಿರ ತಂದೆ ಮಹ್ಮದ ಮಕ್ಬುಲ ಖಾನ ಕಡಗಂಚಿ ತನ್ನ ಹೀರೊ ಹೊಂಡಾ ಮೋಟಾರ ಸೈಕಲ ನಂ ಕೆಎ-02-ಎಚ್ಎಂ-931 ನೇದ್ದನ್ನು ಅತೀವೇಗ ದಿಂದ ಚಲಾಯಿಸುತ್ತ ಬಂದು ನನ್ನ ತಾಯಿ ಖುರ್ಷಿದ ಬೇಗಂ ಇವಳಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ನೆಲಕ್ಕೆ ಬಿದ್ದು ನನ್ನ ತಾಯಿಗೆ ತಲೆಯ ಹಿಂಭಾಗಕ್ಕೆ ಒಳಪೆಟ್ಟಾಗಿದ್ದು  ಆಗ ನಾನು ನನ್ನ ತಾಯಿಗೆ ಎಬ್ಬಿಸಿ ಮುದಾಸಿರನಿಗೆ ಸ್ವಲ್ಪ ನಿಧಾನವಾಗಿ ಮೋಟಾರ ಸೈಕಲ ನಡೆಸಬೇಕು ಅಂತಾ ಹೇಳಿ ನ್ನ ತಾಯಿಯ ಕೈಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುವಾಗ ಮುದಾಸಿರನು ನಗೆ ತಡೆದು ಏ ರಾಂಡ ಕೇ ಬೇಟೆ ತೂಮ್ ರಸ್ತೆ ಛೋಡ ಕೇ ಚಲನಾ ಅಂತಾ ಅಂದು ಕೈಯಿಂದ ನನ್ನ ಎದೆಯ ಮೇಲೆ ಹೊಟ್ಟೆಯ ಮೇಲೆ ಹೊಡೆದಿರುತ್ತಾನೆ ಮತ್ತು ಆತನ ಕಾಕಾ ಬಂದು ಏ ಬೋಸಡಿ ಕೇ ಹಮಾರೆ ಬೇಟೆ ಕೊ ಕ್ಯೂವು ಗಾಲೀ ದಿಯಾ ಅಂತಾ ಅಲ್ಲೆ ಬಿದ್ದ ಒಂದು ಕಲ್ಲು ತೆಗೆದುಕೊಂಡು ಕಲ್ಲಿನಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಆತನ ಜೊತೆಯಿದ್ದ ಸುಹೇಲ್ ಈತನು  ನನಗೆ ಕಾಲಿನಿಂದ ಹೊಟ್ಟೆಯ ಮೇಲೆ ಒದೆಯ ಹತ್ತಿದನು ಇದನ್ನು ನೋಡಿ ನಮ್ಮ ಬಡಾವಣೆಯ ಜಾಗಿರದಾರ ಮತ್ತು ಜಾಗಿರದಾರನ ವಾಹನ ಚಾಲಕ ಖದೀರ ಇವರು ಬಂದು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ ನಂತರ ನನ್ನ ತಾಯಿಗೆ ಗುಪ್ತಗಾಯವಾಗಿದ್ದರಿಂದ ಉಪಚಾರ ಕುರಿತು ನಾನು ಗುಲಬರ್ಗಾ ನಗರದ ಚೀರಾಯಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೆನೆ ವಾಹನ ಅಪಘಾತದ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ನನಗೆ ಗುಪ್ತಗಾಯ ಆಗಿ  ಮೈ ನೋವು ಆಗುತ್ತಿರುವದರಿಂದ ಉಪಚಾರ ಕುರಿತು ನಾನು ಇಂದು ದಿನಾಂಕ 08/02/14 ರಂದು  ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಆಗಿರುತ್ತೆನೆ  ಕಾರಣ ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

08 February 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 07-02-2014 ರಂದು ಠಾಣೆಯ ಜೀಪ ನಂ. ಕೆ.ಎ 32, ಎಮ 1760 ನೇದ್ದರಲ್ಲಿ ನಾನು ಹಾಗೂ ಠಾಣೆಯ ಸಿಬ್ಬಂಧಿಯವರಾದ ಶ್ರೀ ಸತೀಶ ಸಿಪಿಸಿ 851 ರವರೊಂದಿಗೆ 1830 ಗಂಟೆ ಸುಮಾರಿಗೆ ನಿಂಬರ್ಗಾ ಗ್ರಾಮದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಶ್ರೀ ದತ್ತಾತ್ರೇಯ ಎ.ಎಸ್.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರು ಫೊನ ಮುಖಾಂತರ ತಿಳಿಸಿದ್ದೇನೆಂದರೆ ನಿಂಬರ್ಗಾ ಗ್ರಾಮದಲ್ಲಿನ ಮೌಲಾ ನಗರದಲ್ಲಿಯ ಅಂಬೇಡ್ಕರ ಶಾಲೆಯ ಹಿಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಕೊಟ್ಟ ಮೇರೆಗೆ ಕೂಡಲೇ ನಾವಿಬ್ಬರು ಗ್ರಾಮದ ಅಂಬೇಡ್ಕರ ಸರ್ಕಲ ಹತ್ತಿರ ಜೀಪ ನಿಲ್ಲಿಸಿದ್ದು ಡಿ.ಸಿ.ಐ.ಬಿ ಘಟಕದ ಶ್ರೀ ದತ್ತಾತ್ರೇಯ ಎ.ಎಸ್.ಐ, ಶ್ರೀ ಶಿವಯೋಗಿ ಹೆಚ್.ಸಿ 220ಶ್ರೀ ಪ್ರಕಾಶ ಹೆಚ್.ಸಿ 370, ಅಂಬಾರಾಯ ಹೆಚ್.ಸಿ 54,ಮಲ್ಲಿಕಾರ್ಜುನ ಸಿ.ಹೆಚ್.ಸಿ 58, ಚಂದ್ರಕಾಂತ ಹೆಚ್.ಸಿ 78 ನಮ್ಮನ್ನು ಬಂದು ಸೇರಿಕೊಂಡರು ಆಗ ಇಬ್ಬರು ಪಂಚರನ್ನು ಬರಮಾಡಿಕೊಂಡು ಶ್ರೀ ಯು.ಶರಣಪ್ಪ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಪಂಚರು ಹಾಗೂ ಸಿಬ್ಬಂಧಿಯೊಂದಿಗೆ ಬಾತ್ಮಿ ಬಂದ ಸ್ಥಳವಾದ ನಿಂಬರ್ಗಾ ಗ್ರಾಮದ ಮೌಲಾ ನಗರದಲ್ಲಿರುವ ಅಂಬೇಡ್ಕರ ಶಾಲೆಯ ಹಿಂದೆ ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಬೀದಿ ದೀಪದ ಬೆಳಕಿನಲ್ಲಿ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವ ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂಧಿ ಜನರು ಕೂಡಿ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ನೂರಂದ ತಂದೆ ಸೈಬಣ್ಣ ಟಪ್ಪಾ  ಸಾ|| ನಿಂಬರ್ಗಾ ಗ್ರಾಮ ದವನನ್ನು ದಸ್ತಗೀರ ಮಾಡಿ ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01. ನಗದು ಹಣ 3620/-02. ಎರಡು ಮಟಕಾ ಅಂಕಿ ಸಂಖ್ಯೆ ಹಾಳೆ03. ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ವಿಲಾಸ ತಂದೆ ಮೋಹನ ಚಂದ್ರ ಬಸ್ತಾಳಕರ ಸಾ|| ಹೊನ್ನಕಿರಣಗಿ ತಾ|| ಜಿ|| ಗುಲಬರ್ಗಾ ಇದ್ದು  ನಮ್ಮ ಬ್ಲೂಡಾರ್ಟ ಎಕ್ಸಪ್ರೆಸ್ ಆಪೀಸದಿಂದ ಸುಮಾರು 8,13,717/- ರೂ ಬೆಲೆಬಾಳುವ  ಆನ್ ಲೈನ ಶಾಪಿಂಗ ದಿಂದ ಮೋಬೈಲ್. ಲ್ಯಾಪಟಾಪ. ಬಟ್ಟೆಗಳು, ಬಂದಿದ್ದು ಅವುಗಳನ್ನು ವಿತರಣೆಗಾಗಿ ಇಟ್ಟಿದ್ದವುಗಳು ದಿನಾಂಕ; 16-01-2014 ರಂದು 5 ಪಿ ಎಮ್‌ ದಿಂದ ದಿನಾಂಕ; 17-01-20148;40 ಎಎಮ್ ಅವದಿಯಲ್ಲಿ ಯಾರೋ ಕಳ್ಳರು ಶಟರ್ ತೆಗೆದು ನಮ್ಮ ಆಫೀಸದಿಂದ ಕಳ್ಳತನ ಮಾಡಿಕೊಂಡು ಹೊಗಿದ್ದು ಅದೆ ಕಾರಣ ಈ ಬಗ್ಗೆ ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಕ್ರಮ ಜರುಗಿಸಿ ನಮ್ಮ ಆಫೀಸದಿಂದ ಕಳ್ಳತನವಾದ ಆನ್ ಲೈನ ಶಾಪಿಂಗದಿಂದ ಬಂದಂತಹ 8,13,717/- ರೂ ಬೆಲೆಬಾಳುವ ವಸ್ತುಗಳನ್ನು ಮರಳಿ ಕೊಡಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ವಿಜಯಕುಮಾರ ತಂ ಪ್ರಭು ಚವ್ಹಾಣ ಸಾ|| ಮಹಾಗಾಂವ ತಾಂಡ ರವರ ಮಗಳಾದ ಮಮೀತಾ ಇವಳು ದಿನಾಂಕ 07-02-2014 ರಂದು ಮಮೀತಾ ಇವಳು ಶಾಲೆಗೆ ಹೋಗಿ ಮನೆಗೆ ಬಂದಿದ್ದು ಅವಳು ನಮ್ಮ ಮನೆಯ ಪಕ್ಕದಲ್ಲಿದ್ದ ವಿಠಲ ಚೋಕಲಾ ಇತನ ಮನೆಯ ಹಿಂದೆ ರಸ್ತೆಯ ಮೇಲೆ ಆಟ ಆಡುತ್ತಿದ್ದಳು ಅಲ್ಲೆ ರಸ್ತೆಯ ಪಕ್ಕ ತಾನು ಹಾಗೂ ತನ್ನ ತಾಂಡಾದ ಭೀಮಶ್ಯಾ ತಂ ಸಿತಾರಾಮ ಚವ್ಹಾಣ ಮಾತಾಡುತ್ತಾ ನಿಂತ್ತಿದ್ದು ಸೂಮಾರು 4.45 ಪಿ,ಎಮ್,ಕ್ಕೆ ಮಹಾಗಾಂವ ಕ್ರಾಸ ಕಡೆಯಿಂದ ಒಂದು ಪಿಯಾಗೋ ಎಪ್ ಟಂಟಂ ಗೂಡ್ಸ ವಾಹನದ ಚಾಲಕನು ತನ್ನ ವಶದಲ್ಲಿದ್ದ ವಾಹನವನ್ನು ಅತಿವೇಗ ಮತ್ತು ಅಲಕ್ಷತನಿದಂದ ಚಲಾಯಿಸಿಕೊಂಡು ಬಂದವನೆ ರಸ್ತೆಯ ಮೇಲೆ ಆಟ ಆಡುತಿದ್ದ ತನ್ನ ಮಗಳಾದ ಮಮೀತಾ ಇವಳಿಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೋಡೆದು ಅಪಘಾತ ಪಡಿಸಿದ್ದರಿಂದ ತನ್ನ ಮಗಳು ಚೀರಾಡಿ ಕುಸಿದು ಕೆಳಗೆ ಬಿದ್ದಾಗ ತಾನು ಹಾಗೂ ಬೀಮಶ್ಯಾ ಇಬ್ಬರೂ ಓಡಿ ಹೋಗಿ ನೋಡಲಾಗಿ ಮಮೀತಾಳ ಮೂಗಿನಿಂದ ರಕ್ತ ಬಂದಿದ್ದು ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು ಮಮೀತಾ ಮಾತನಾಡಲಿಲ್ಲಾ ತಲೆಗೆ ಆದ ಭಾರಿ ರಕ್ತಗಾಯ ಮತ್ತು ಒಳಪೆಟ್ಟಿನಿಂದ ಅವಳು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾಳೆ ಟಂಟಂ ನಂ ನೋಡಲಾಗಿ ಅದು ಪಿಯಾಗೋ ಎಪ್, ಕಂಪನೀಯ ಗೂಡ್ಸ ಟಂಟಂ ನಂ ಕೆ,ಎ, 32 ಎ, 9507 ಅಂತಾ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವೀರಭದ್ರಪ್ಪ ತಂದೆ ಮಲಕಣ್ಣಾ ಬಾಳದ  ಸಾ:ಟೆಂಗಳಿ ತಾ:ಚಿತ್ತಾಪೂರ ಹಾ:ವ: ದೇವಿ ನಗರ ಗುಲಬರ್ಗಾ ರವರು  ದಿನಾಂಕ 17-02-2014  ರಂದು ಮಧ್ಯಾಹ್ನ 2=15 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ವಾಯಿ 8340 ನೆದ್ದರ ಮೇಲೆ ಎಲ್.ಐ.ಸಿ.ಆಫೀಸ್ ನಿಂದ ಶಹಾಬಜಾರ ನಾಕಾ ಮುಖಾಂತರ ನಿಧಾನವಾಗಿ ಮೋ/ಸೈಕಲ್ ಚಲಾಯಿಸಿಕೊಂಡು ದೇವಿನಗರ ಕಡೆಗೆ ಹೋಗುವಾಗ ಖಾದ್ರಿ ಚೌಕ ದಾಟಿ ಸಂತೋಷ ಕಾಲೋನಿ ಕ್ರಾಸ್ ಹತ್ತಿರ ಅಟೋರೀಕ್ಷಾ ನಂ: ಕೆಎ 32 ಬಿ 5423 ರ ಚಾಲಕನ ಅತಿವೇಗವಾಗಿ ಮತ್ತು ಅಲಕ್ಷತನದಿಂದ ರಾಂಗ ಸೈಡಿನಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಪೆಟ್ಟುಗೊಳಿಸಿ ತನ್ನ ಅಟೋರೀಕ್ಷಾ ಅಲ್ಲೇ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 February 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 06-02-2014 ರಂದು ಹಿತ್ತಲ ಶಿರೂರ ಗ್ರಾಮದ ಹರಿಜನವಾಡಾದಲ್ಲಿರುವ ಸಮುದಾಯ ಭವನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಹಾರ ಎಂಬ ಇಸ್ಪೀಟ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೆರೆಗೆ ನಾನು ಸಿಬ್ಬಂಧಿ ಹಾಗು ಪಂಚರೋಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ಜೂಜಾಟದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಮೂರಜನರನ್ನು ಹಿಡಿದಿದ್ದು 1. ಪಾಂಡುರಂಗ ತಂದೆ ಪ್ರಭು ಕಾಮನಕರ 2. ಶಿವಲಿಂಗ ತಂದೆ ಶಿವಪ್ಪ ಚಿಕಣಿ   3. ಸಂಜು ತಂದೆ ಮೌಲಪ್ಪ ಕಾಮನಕರ ಸಾ|| ಎಲ್ಲರು ಹಿತ್ತಲ ಶಿರೂರ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಿಸಿದ 52 ಇಸ್ಪೀಟ ಎಲೆಗಳನ್ನು ಮತ್ತು ನಗದು ಹಣ 615/- ಜಪ್ತಿಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 06.02.2014  ರಂದು ಬೆಳಿಗ್ಗೆ 1030 ಗಂಟೆಗೆ ಟ್ರ್ಯಾಕ್ಟರ ನಂ ಕೆ.ಎ.32ಟಿ.ಎ.5429,5430 ನೇದ್ದರ ಚಾಲಕನಾದ ರಾಯಪ್ಪ ಈತನು ತಾನ ಚಲಾಯಿಸುತ್ತಿದ್ದ ಟ್ರ್ಯಾಕ್ಟರನ್ನು ಹುಮನಾಬಾದ ಬೇಸ್ ಕಡೆಯಿಂದ ರೋಡಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾರ ನಂಬರ ಕೆ.ಎ.32 ಎಮ್ 4152 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಕಾರ ಅಟೋರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುತ್ತದೆ ಅಪಘಾತದಲ್ಲಿ ಅಟೋರಿಕ್ಷಾಕ್ಕೆ ಹಿಂಬದಿಯಲ್ಲಿ ನೆಗ್ಗಿದ್ದು ಮತ್ತು ಕಾರಿನ ಹಿಂಬದಿ ನೆಗ್ಗಿದ್ದು ಹಿಂಬದಿಯ ಪೂರ್ನಗ್ಲಾಸ್ ಒಡೆದು ಹೋಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ05-02-14 ರಂದು  ರಾತ್ರಿ 07-30 ಸುಮಾರಿಗೆ ದಿನಸಿ[ಕೆ] ತಾಂಡಾದಲ್ಲಿ  ನಳದ  ನೀರು ಬಿಟ್ಟಿದ್ದುಠಕ್ಕಾಬಾಯಿ ಗಂಡ ಮೋತಿರಾಮ ರಾಠೋಡ ಸಾ;ದಿನಸಿ[ಕೆ] ತಾಂಡಾ ತಾ;ಜಿ: ಗುಲಬರ್ಗಾ ರವರು ನೀರು ತುಂಬಿಕೊಂಡು ಹೋಗಿ  ಪಾಳಿಯಲ್ಲಿ ನಿಂತುಕೊಂಡಾಗ ಕವಿತಾ ಗಂಡ ಬಸವರಾಜ  ರಾಠೋಡ ಸಂಗಡ ಇಬ್ಬರೂ ಸಾ;ಎಲ್ಲರೂ ದಿನಸಿ[ಕೆ] ತಾಂಢಾ  ತಾ;ಜಿ: ಗುಲಬರ್ಗಾ  ಪಾಳಿಯಲ್ಲಿ ನಿಲ್ಲದೇ ನೀರು   ತುಂಬಿಕೊಂಡು   ಹೋರಟಾಗ  ನಾನು ಕೇಳಿದ್ದಕ್ಕೆ  ಫೀರ್ಯಾದಿಗೆ ಹೊಡೆ ಬಡೆ ಮಾಡಿ ಅವಾಚ್ಯ  ಬೈಯ್ದು  ಜೀವದ  ಬೆದರಿಕೆ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕಮಲಾಪೂರ ಠಢಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ನರೋಣಾ ಠಾಣೆ : ಶ್ರೀ ಹೂವಪ್ಪಾ ತಂದೆ ದಾನಪ್ಪಾ @ ದಾನನೂರ ನಿಗ್ಗಡಗಿ ಸಾ :ಜವಳಗಾ ಬಿ ರವರ ಹೆಂಡತಿಯಾದ ಮಹಾನಂದ ಗಂಡ ದಾನಸೂರ @ ದಾನಪ್ಪ ನಿಗ್ಗುಡಗಿ ವಯ;23 ವರ್ಷ ಇವಳನ್ನು ದಿನಾಂಕ 31-01-2014 ರಂದು ರಾತ್ರ 9 ಗಂಟೆಯ ಸುಮಾರಿಗೆ ಮಹೇಶ ತಂದೆ ಚಂದ್ರಶಾ ಹೊಳ್ಕರ ಇವನು ತನ್ನ ಜೀಪ ನಂ ಎಪಿ 01 ಟಿ 6677 ನೇದ್ದರಲ್ಲಿ ಜಬರದಸ್ತಿ ಎಳೆದುಕೊಂಡು ಹೋಗುವಾಗ ನಾನು ಮತ್ತು ನನ್ನ ತ್ತಮ ಅಣ್ಣ ಹಾಗು ಅಣ್ಣನ ಹೆಂಡತಿ ಬಿಡಿಸಿಕೊಳ್ಳು ಹೋದರೆ ನಮಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ನನ್ನ ಹೆಂಡತಿಯನ್ನು ಜಬರದಸ್ತಿ  ಎಳೆದುಕೊಂಡು ಜೀಪನಲ್ಲಿ ಹಾಕಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.