POLICE BHAVAN KALABURAGI

POLICE BHAVAN KALABURAGI

03 February 2014

Gulbarga District Reported Crimes

ಆತ್ಮ ಹತ್ಯೆಗೆ ಪ್ರಚೋದನೆ ಮಾಡಿದ ಪ್ರಕರಣ :
ರಟಕಲ್ ಠಾಣೆ : ಬಸ್ಸಪ್ಪ @ ಬಸವರಾಜ ತಂದೆ ಅಪ್ಪಣ್ಣ ಸಂ. 05 ಜನರು ಸಾ||ಎಲ್ಲರೂ ದಸ್ತಾಪೂರ ತಾ||ಚಿಂಚೋಳಿ ಇವರ  ಹೊಲವನ್ನು ಈಗ ಸುಮಾರು 7-8 ವರ್ಷದ ಹಿಂದೆ ಮಲ್ಲಪ್ಪ ತಂದೆ ಬೀರಪ್ಪ ದಂಡೆನೋರ ಸಾ||ಸಾಸರಗಾಂವ ತಾ||ಚಿಂಚೋಳಿ ರವರು ಖರಿದಿಸಿದ್ದು ಅದು ತಮ್ಮ ಹೆಸರಿಗೆ ನೊಂದಣಿ ಮಾಡಿಕೊಡು ನಾವು ದುಡ್ಡು ಕೊಟ್ಟಿರುತ್ತೆವೆ ಅಂತ ಕೇಳುತ್ತಾ ಬಂದರು ನೊಂದಣಿ ಮಾಡಿಕೊಡದೆ ಇಂದು ದಿನಾಂಕ 02.02.2014 ರಂದು 11.00 ಎ.ಎಂಕ್ಕೆ ಪಂಚರ ಎದುರುಗಡೆ ಆರೋಪಿತರು ನಿಮಗೆ ಹೊಲವನ್ನು ಕೊಡುವುದಿಲ್ಲ ನೀವು ಕೊಟ್ಟ ಹಣ ಕೂಡ ವಾಪಸ್ ಕೊಡುವುದಿಲ್ಲ ಅಂದಾಗ ಮೃತನು ನೀವು ಹಾಗೆ ಮಾಡಿದರೆ ನಾನು ಸಾಯುತ್ತೆನೆ ಅಂದರೂ ನೀನು ಸತ್ತರು ನಾವು ಹೊಲವನ್ನು ಕೊಡುವುದಿಲ್ಲ ಹಣನು ಕೊಡುವುದಿಲ್ಲ ಅಂದಿದ್ದಕ್ಕೆ ಹಣ ಮತ್ತು ಹೊಲ ಎರಡು ಕಳಕೊಂಡು ಈಗ ಯಾಕೆ ಬದುಕಬೇಕು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 02.02.2014 ರಂದು 12.30 ಪಿ.ಎಂಕ್ಕೆ ಊರ ಮುಂದಿನ ಮಾವಿನ ಗಿಡದ ಬಾವಿಯಲ್ಲಿ ಬಿದ್ದಾಗ ಈಜು ಬಾರದರಿಂದ ಮೃತಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಬಸವರಾಜ ಗುಡಬಾ ಗಂಗಾನಗರ ಗುಲಬರ್ಗಾ ಇವರ ಮಗನಾದ ಚಂದ್ರಕಾಂತ ತಂದೆ ಬಸವರಾಜ ಗುಡಬಾ ವಯ|| 28 ವರ್ಷ, ಸಾ||  ಗಂಗಾನಗರ  ಇವನು ದಿನಾಂಕ|| 27/01/14 ರಂದು ನನ್ನ, ಸಾಯಂಕಾಲ 06-30 ಗಂಟೆಗೆ ಪ್ರತಿನಿತ್ಯ ಹೊರಗಡೆ ಹೋಗಿ ಬರುವಂತೆ  ಇಂದು ದಿನಾಂಕ|| 27/01/14 ರಂದು ಸಹ ಹೊರಗಡೆ ಹೋಗಿ ಬರುತ್ತೆನೆಂದು ಹೇಳಿ ಹೋಗಿದ್ದು ಇವರ ಮೋಬೈಲ್  ಸಂಖ್ಯೆ 9686549026 ಮರಳೀ ತಡ ರಾತ್ರಿಯಾದರೂ ಬರಲಿಲ್ಲ ಬರದೇ ಕಾರಣ ನನ್ನ ಅಣ್ಣನ ಮಗನಾದ ಬೀಮಾಶಂಕರ ತಂದೆ ಶರಣಪ್ಪಾ ನಾಯಿಕೋಡಿ ಈತನಿಗೆ ವಿಚಾರಿಸಲಾಗಿದ್ದು ಮರಳಿ ಗುಲಬರ್ಗಾಕ್ಕೆ  ಹೋಗಿರುವುದಾಗಿ ತಿಳಿಸಿರುತ್ತಾರೆ ಕಾರಣ ನಾವು ಇನ್ನು ಎಲ್ಲಾ ಸಂಬಂಧಿಕರು ಮತ್ತು ಗೆಳೆಯರಿಗೆ ವಿಚಾರಿಸಿದ ನಂತರ ಎಲ್ಲಿ ಇರುವುದು ಗೋತ್ತಾಗಲಿಲ್ಲ  ಆದರೂ ಸಹ ನಮ್ಮ ಸಂಬಂಧಿಕರು ಸೇರಿ ಇಂದು ದಿನಾಂಕ|| 02/02/14 ರ ವರೆಗೆ ಹುಡುಕಾಡಿದೇವು ಸಿಕ್ಕಿರುವದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠ!ಆಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ರಾಜಶೇಖರ ತಂದೆ ಭೀಮಯ್ಯಾ ಈಳಿಗೇರ ಸಾ|| ಪತ್ತೇಪೂರ ತಾ|| ಚಿಂಚೋಳಿ  ಮಗಳಾದ  ಕು. ಶೋಬಾ ವ|| 18 ವರ್ಷ ಇವಳು  ಪ್ರಸ್ತುತ ಶೈಕ್ಷಣೀಕ ವರ್ಷದಲ್ಲಿ ಪಿ.ಯೂ.ಸಿ ದ್ವಿತಿಯ ವರ್ಷದ ಕಲಾ ವಿಭಾಗದಲ್ಲಿ  ಸರಕಾರಿ ಕನ್ಯಾ ಪ್ರೌಡಾ ಶಾಲೆ ಚಿಂಚೋಳಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾಳೆ, ಹಿಗಿದ್ದು ಮೋನ್ನೆ ದಿವಸ ನಮ್ಮ ಪಕ್ಕದ ಮನೆಯ ಶಿವಕುಮಾರ ತಂದೆ ಬಸ್ಸಪ್ಪಾ ಶಂಭು ಎಂಬುವವನು ನನಗೆ ನಿಮ್ಮ ಹಿರಿಯ ಮಗಳಾದ ಶೋಭಾಳಿಗೆ  ಅಪಹರಣ ಮಾಡಿಕೊಂಡು ಮದುವೆಯಾಗುತ್ತೆನೆ ಅಂತಾ ಅಂದಿದ್ದನು. ಅದಕ್ಕೆ ನಾನು ಅವನಿಗೆ ಆಗೇಲ್ಲಾ ಮಾತನಾಡಬೇಡಾ ನನ್ನ ಮಗಳು ಇನ್ನೂ ಚಿಕ್ಕವಳು ಇದ್ದು ಅವಳಿಗೆ ಇನ್ನೂ ವಿಧ್ಯಾಭ್ಯಾಸ ಮಾಡಿಸಿ ಸರಕಾರಿ ನೌಕರಸ್ತಳನ್ನಾಗಿ ಮಾಡುತ್ತೇನೆ ಅಂತಾ ಅಂದಿದ್ದು  ಹಿಗಿದ್ದು ನಿನ್ನೆ ದಿನಾಂಕ 01.02.2014 ರಂದು ಎಂದಿನಂತೆ ಬೆಳೆಗ್ಗೆ ಎದ್ದು ನನ್ನ ಹಿರಿಯ ಮಗಳಾದ ಕು. ಶೋಭಾಳು  ಕಾಲೇಜಿಗೆ ಬಂದು ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ 12.00 ಗಂಟೆಗೆ ಮರಳಿ ನಮ್ಮೂರಿಗೆ ಬರಲೆಂದು  ಚಿಂಚೋಳಿಯ ಬಸ್ ನಿಲ್ದಾದಲ್ಲಿ ಕುಳಿತುಕೊಂಡಾಗ ನಮ್ಮೂರಿನ ಶಿವಕುಮಾರ ತಂದೆ ಬಸ್ಸಪ್ಪಾ  ಶಂಭು ಎಂಬುವವನು ನನ್ನ ಮಗಳಾದ ಕು.ಶೋಭಾಳಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳೀ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ: 2-2-2014 ರಂದು 8-20 ಎ.ಎಮ್ ಕ್ಕೆ ಯಲ್ಲಪ್ಪ ತಂದೆ ಬಸಪ್ಪ ಚಲುವಾದಿ ಸಾ: ಚಟನಳ್ಳಿ ಇವನು  ನಂಬರ ಇಲ್ಲದ ಹಿರೊ ಮೊಟರ ಸೈಕಲ್ ಇಂಜಿನ ನಂ- ಹೆಚ್.ಪಿ11ಇಎಫ್ ಡಿ9ಎಲ್49711 ನೇದ್ದನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು ಎದುರಿನಿಂದ ಬರುತ್ತಿದ್ದ ಮೊಟರ ಸೈಕಲ ನಂ ಕೆಎ.-32,ವಾಯ: 492 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ಸದರಿ ಆರೊಪಿತನ ಮೊಟರ ಸೈಕಲ್ ಹಿಂದಿನ ಸಿಟನಲ್ಲಿ ಕುಳಿತ ಬಸವರಾಜ ಸಜ್ಜನ ಇತನ ಹಣೆಗೆ ತಿವ್ರ ಸ್ವರೂಪದ ಕತ್ತರಿಸಿದ ರಕ್ತಗಾಯವಾಗಿ ಸ್ಥಳದಲ್ಲೆ ಮೃತ್ತಪಟ್ಟಿದ್ದು ಹಾಗೂ ಸದರಿ ಅಪಘಾತದಲ್ಲಿ ವಿಜಯಕುಮಾರ ಇವರ ಹಣೆಗೆ ತಿವ್ರ ಸ್ವರೂಪದ ಗಾಯ ವಾಗಿದ್ದು ಹಾಗೂ ಸಿದ್ದಪ್ಪಗೌಡ ಇವರಿಗೆ ಸಾದಾ ಗಾಯ ವಾಗಿದ್ದು ಸದರಿಯವರಿಗೆ ಉಪಚಾರ ಕುರಿತು ಸಿಂದಗಿಯಲ್ಲಿಯ ಮನಗೂಳಿ ಆಸ್ಪತ್ರೆಗೆ ತೆಗೆದುಕೊಂಡು ಹೊಗುವಾಗ ವಿಜಯಕುಮಾರ ಇವರು ಮನ್ನಾಪೂರ ಗ್ರಾಮದ ಕ್ಯಾನಾಲ ಹತ್ತಿರದ ರಸ್ತೆಯಲ್ಲಿ ವಿಜಯಕುಮಾರ ಇವರು ಮೃತಪಟ್ಟಿದ್ದು ಸಿದ್ದಪ್ಪಗೌಡ ಇವರಿಗೆ ಉಪಚಾರ ಕುರಿತು ಆಸ್ಪತ್ರೆ ಸೇರಿಕೆ ಮಾಡಿದ್ದು ಸದರಿ ಆರೊಪಿತನು ಅಪಘಾತ ಪಡೆಸಿ ಮೊಟರ ಸೈಕಲ್ ಬಿಟ್ಟು ಓಡಿ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

02 February 2014

Gulbarga District Reported Crimes

ಅಪಹರಣ ಪ್ರಕರಣ :
ಮಳಖೇಡ ಠಾಣೆ : ಶ್ರೀ ಅರ್ಜುನಪ್ಪಾ ತಂದೆ ಕಾಶಪ್ಪಾ ಕೊಳ್ಳಿ ಸಾ: ಹೂಡಾ (ಕೆ) ತಾ: ಸೇಡಂ ರವರು ದಿನಾಂಕ : 31.01.2014 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ನಾನು & ಹೆಂಡತಿ & ಮಕ್ಕಳೊಂದಿಗೆ  ರಾತ್ರಿ ಊಟಮಾಡಿ ಮಲಗಿಕೊಂಡಾಗ ರಾತ್ರಿ 10.00 ಗಂಟೆಗೆ ನನ್ನ ಪೂನಿಗೆ ಒಂದು ಕರೆ ಬಂದಿತು ಆಗ ನನ್ನ ಮಗಳು ಪೋನಿನಲ್ಲಿ ಮಾತಾಡಿ ಪೋನ್ ಇಟ್ಟಳು ನಾವು ಸಹಜವಾಗಿ ಮಲಗಿಕೊಂಡೆವು. ನಂತರ ರಾತ್ರಿ 11.00 ಗಂಟೆಗೆ ನಾನು ಎದ್ದು ನೋಡಲಾಗಿ ನನ್ನ ಮಗಳು ಶ್ರುತಿ ಇರಲಿಲ್ಲ  ನಂತರ ನನ್ನ ಹೆಂಡತಿ ಎಬ್ಬಿಸಿ ಊರಲ್ಲಿ ತಿರುಗಾಡಿದೆವು, ನನ್ನ ಮಗಳುಪತ್ತೆಯಾಗಲಿಲ್ಲ  ನಂತರ ನಾನು ಬೆಳ್ಳಗ್ಗೆ ಊರಲ್ಲಿ ವಿಚಾರ ಮಾಡಲಾಗಿ  ನನ್ನ ಮಗಳಾದ ಶೃತಿ  ವ: 17 ವರ್ಷ ಇವಳೆಗೆ ರಾತ್ರಿ 11.00 ಗಂಟೆಯ ಸಮಯಕ್ಕೆ ನಮ್ಮೂರ ಈಶಪ್ಪಾ ತಂದೆ ಚೆನ್ನಬಸಪ್ಪಾ ಇತನು ನನ್ನ ಮಗಳಿಗೆ  ಮದುವೆ ಮಾಡಿಕೊಳ್ಳುತ್ತೆನೆ. ಅಂತಾ ಪುಸಲಾಯಿಸಿ ಅಪಹರಸಿಕೊಂಡು ಹೋಗಿರುತ್ತಾನೆ. ಅಂತಾ ನನಗೆ ಗೊತ್ತಾಯಿತು ನನ್ನ ಮಗಳಿಗೆ ಈಶಪ್ಪಾ ಇತನು  ಅಪಹರಣ   ಮಾಡಿಕೊಂಡು ಹೊಗಲು ನಮ್ಮೂರ ಭೀಮರಾಯ ತಂದೆ ದೇವಣ್ಣ ಗೋವಿಂದನವರ ಇತನು ತನ್ನ ಮೋಟರ ಸೈಕಲ್ ನಂ ಕೆ.ಎ. 32. ಇ.ಸಿ 5101 ನೇದ್ದರ ಮೇಲೆ ಅಪಹರಿಸಿಕೊಂಡು ಹೊಗಿರಿ ಅಂತಾ ಮೋಟರ ಸೈಕಲ್ ಕೊಟ್ಟಿರುತ್ತಾನೆ & ಬಸವರಾಜ ತಂದೆ ಹಣಮಂತ ಸಾಲಿ ವಿಷ್ಣು ತಂದೆ ದೇವಪ್ಪ ಮೂಡಬೋಳ ಸಾ: ಹೂಡಾ(ಕೆ) ಇವರುಗಳು ಸದರಿ ಈಶಪ್ಪಾ ನವರಿಗೆ ಅಪಹರಿಸಿಕೊಂಡು ಹೋಗಲು ಪ್ರಚೋದನೆ ನೀಡಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಳಖೇಡ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಯ್ಯದ ಮಹಿಬೂಬ ಅಲಿ ತಂದೆ ಸಯ್ಯದ ಅಲಿ ರವರು ದಿನಾಂಕ:  01-02-2014 ರಂದು  ರಾತ್ರಿ 20-45 ಗಂಟೆಗೆ ಶೇಖ ರಪೀಕ್ ಈತನು  ಅಟೋರೀಕ್ಷಾ ನಂ: ಕೆಎ 32 ಎ 16 ನೆದ್ದನ್ನು ಎಸ್.ವಿ.ಪಿ.ಸರ್ಕಲ್ ದಿಂದ ಜಗತ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ರಪೀಕ ಈತನು ಮಿನಿ ವಿಧಾನ ಸೌಧ ಎದುರಿನ ರೋಡಿನ ಮೇಲೆ ಅಟೋರೀಕ್ಷಾ ವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ್ ಹಾಕಿ ಅಟೋರಿಕ್ಷಾ ಪಲ್ಟಿ ಮಾಡಿ ಗಾಯ ಹೊಂದಿ ಅಟೋರೀಕ್ಷಾ ಡಾಮೇಜ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ದೇವಲಗಾಣಗಾಪೂರ ಠಾಣೆ : ದಿನಾಂಕ:31-01-2014ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ಶ್ರೀಮತಿ ಕಸ್ತೂರಬಾಯಿ ಗಂಡ ಶಂಕರ ಆಲಕುಂಟಿ ಸಾ||ಚವಡಾಪುರ ತಾ||ಅಫಜಲಪೂರ ರವರ ತಮ್ಮ ನಾದನಿಯ ಮಗ ಮನೆಗೆ ಬರುವಾಗ ರಸ್ತೆಯ ನೀರಿನಲ್ಲಿ ಬಿದ್ದಿದ್ದಕ್ಕೆ ನಾನು ನೀವು ದಾರಿಯ ಮೇಲೆ ಟಿಪ್ಪರ ನಿಲ್ಲಿಸಿದ್ದರೆ ನಾವು ಹೇಗೆ ತಿರುಗಾಡಬೇಕು ಅಂದಿದ್ದಕ್ಕೆ ಮಲ್ಲು ಮಂಜಳಕರ ಇವರ ರೋಡ ನಿಮ್ಮ ಅಪ್ಪಂದು ಆದ ಏನು ಅಂದಾಗ ತಾನು ನಮ್ಮ ಅಪ್ಪಂದು ಯಾಕ ಇರತಾದ ಈಗ ಹುಡುಗ ನೀರಲ್ಲಿ ಬಿದ್ದಿಲೇನ ಸ್ವಲ್ಪ ಟಿಪ್ಪರ ರಸ್ತೆಯಲ್ಲಿ ತಿರುಗಾಡಲು ಜಾಗ ಬಿಟ್ಟು ನಿಲ್ಲಿಸಿರಿ ಅಂದಾಗ ಮಲ್ಲು ಜಂಜಳಕರ್ ಇವನು ಅವಾಚ್ಯ ಶಭ್ದಗಳಿಂದ ಬೈದು ನನ್ನ  ತಲೆಗೂದಲು ಹಿಡಿದು ಜಗ್ಗಾಡಿ ಬೆನ್ನಾಗ ಕೈಯಿಂದ ಹೊಡೆಯುತ್ತಿದ್ದಾಗ ಹುಲಗೆಮ್ಮ ಬಿಡಿಸಲು ಬಂದರೆ ಅವಳಿಗೆ ಶಾಂತಾಬಾಯಿ ನೀ ಇದರಾಗ್ಯಾಕ ಬರತಿ ಬೋಸಡಿ ಅಂತಾ ಬೈಯ್ದು ಶರಣಪ್ಪನು ಕೈಯಿಂದ ತನ್ನ ಬೆನ್ನಿಗೆ ಹೊಡೆದಿದ್ದುಮಲ್ಲು ಇವನು ಅಲ್ಲೇ ಬಿದ್ದ ಕಟ್ಟಿಗೆಯಿಮದ ಹುಲಗಮ್ಮ ಇವಳಿಗೆ ಎಡಗಾಲು ಕಪಿಗಂಡಿಗೆ ಹೊಡೆದು ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಲಗಾಣಗಾಪೂರ ಠಾಣೆ : ದಿನಾಂಕ:31-01-2014 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ಮಲ್ಲು ತಂದೆ ವೆಂಕಪ್ಪ ಮಂಜಳಕರ ಸಾ||ಚವಡಾಪುರ ತಾ||ಅಫಜಲಪೂರ ಮತ್ತು ನನ್ನ ಹೆಂಡತಿ ಶಾಂತಾಬಾಯಿ ಹಾಗೂ ತಂದೆ ವೆಂಕಪ್ಪ ಎಲ್ಲರೂ ಕೂಡಿ ತಮ್ಮ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಾಗ ತಮ್ಮ ಮನೆಯ ಮುಂದಿನ ಮನೆಯ ಶಂಕರ ತಂದೆ ತಿಪ್ಪಣ್ಣ ಅಲಕುಂಟಿ ಇವನು ತಮ್ಮ ಮನೆಯ ಮುಂದೆ ನಿಂತು ಒದರಾಡುತ್ತಿರುವಾಗ ತಾನು ಶಂಕರ ಇವನಿಗೆ ಈಗ್ಯಾಕ ಒದರಾಡುತ್ತಿದ್ದಿ ನಾಳೆ ಕೇಳಮ್ಮ ಅಂತಾ ಅಂದು ತಾನು ಬಸ್ ಸ್ಟಾಂಡ ಕಡೆಗೆ ಹೋರಟಾಗ ಶಂಕರ ತಂದೆ ತಿಮ್ಮಣ್ಣ ಅಲಕುಂಟಿ, ಹಣಮಂತ ತಂದೆ ಶಂಕರ ಅಲಕುಂಟಿ, ತಿಮ್ಮಣ್ಣ ತಂದೆ ಶಂಕರ ಅಲಕುಂಟಿ, ಲಕ್ಷ್ಮಿಕಾಂತ ಅಲಕುಂಟಿನಾನಾಸಾಬ ಅಲಕುಂಟಿ, ಶಂಕರ ತಂದೆ ಭೀಮಶ್ಯಾ ಅಲಕುಂಟಿ, ದತ್ತಪ್ಪ ಬನಪಟ್ಟಿ, ಮಹಾಂತಪ್ಪ ಬನಪಟ್ಟಿ, ಪಂಡಿತ ಬನಪಟ್ಟಿ, ಮರೆಪ್ಪ ಬನಪಟ್ಟಿ, ಸುನೀಲ ಬನಪಟ್ಟಿ, ಸಾ||ಎಲ್ಲರೂ ಚವಡಾಪುರ ಇವರ ತಮ್ಮ ಕೈಯಲ್ಲಿ ಬಡಿಗೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು  ತೆಕ್ಕಿಕುಸ್ತಿ ಕಟ್ಟಿಗೆಯಿಂದ ತಲೆಗೆ ಹೊಡೆದು ಭಾರಿಗಾಯಗೊಳಿಸಿರುತ್ತಾರೆ  ಜಗಳ ಬಿಡಿಸಲು ಬಂದ ನನ್ನ  ತಂದೆಯ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು ನೂಕಿ ಕೊಟ್ಟಿದ್ದರಿಂದ ತನ್ನ ತಂದೆ ರಸ್ತೆಯ ಮೇಲೆ ಬಿದ್ದು ಎರಡು ಮೋಳಕಾಲುಗಳಿಗೆ ರಕ್ತಗಾಯವಾಗಿರತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

01 February 2014

Gulbarga District Reported Crimes

ಆಕಸ್ಮಿಕ ಬೆಂಕಿ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ.ದೊಂಡಿಬಾ ತಂದೆ ತುಕಾರಾಮ ಜಿಡ್ಡಿಮನಿ ಸಾ:ಮಾದನ ಹಿಪ್ಪರಗಾ ತಾ: ಆಳಂದ ರವರು ದಿನಾಂಕ:31-01-2014 ರಂದು ಬೇಳಗ್ಗೆ 10:30 ಗಂಟೆಯ ಸುಮಾರಿಗೆ ತಮ್ಮ ಹೊಲ ಸರ್ವೆ.ನಂ:332 ವಿಸ್ತಿರ್ಣಿ 3 ಎಕರೆ ಜಮೀನಿನಲ್ಲಿದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಪೂರ್ತಿ ಸುಟ್ಟಿರುತ್ತದೆ ಅದರ ಅಂದಾಜು ಕಿಮ್ಮತ್ತು 5 ಲಕ್ಷ ಮತ್ತು ಸದರಿ ಹೊಲದಲ್ಲಿದ ಡ್ರೀಪ್ ಪೈಪ್ ಗಳು ಸಹ ಸುಟ್ಟಿರುತ್ತವೆ ಅದರ ಅಂದಾಜು ಕಿಮ್ಮತ್ತು 2 ಲಕ್ಷ  ಹೀಗೆ ಒಟ್ಟು 7 ಲಕ್ಷ ರೂಗಳಷ್ಟು ನಷ್ಟವಾಗಿರುತ್ತದೆ. ಸದರಿ ಈ ಘಟನೆಯು ಆಕಸ್ಮಿಕವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ  ಪ್ರಕರಣಗಳು :
ಆಳಂದ ಠಾಣೆ : ಶ್ರೀ ಲಾಯಕ ಅಲಿ ತಂದೆ ಖಾಜಮ ಅಲಿ ಪಟೇಲ್ ಸಾ|| ಹೆಬಳಿ ಗ್ರಾಮದವರು ನಾನು ದಸ್ತಗಿರ ಗುಂಜೋಟಿ ಯವರ ಮಗಳ ಮದುವೆಗೆ ದಿನಾಂಕ 31-01-2014 ರಂದು ಸಮಯ 1 ಗಂಟೆಗೆ ಪಡಸಾವಳಗಿ ಗ್ರಾಮಕ್ಕೆ ಹೋಗಿ ಮದುವೆ ಮುಗಿಸಿಕೊಂಡು ವಾಪಸ ನನ್ನ ಗ್ರಾಮಕ್ಕೆ ಹೊರಟಾಗ ಪಂಚಾಯತಿ ಎದುರುಗಡೆಯಿಂದ ಊರಿಗೆ ಹೊರಟಾಗ ಪಂಚಾಯತಿ ಅಭಿವೃಧ್ಧಿ ಅಧಿಕಾರಿಯಾದ ಮನ್ಮಥ ತಂದೆ ಶಿವರಾಯ ಇವರು & ಇತರ ಸಂಗಡಿಗರಾದ 1) ಹಣಮಂತ ತಂದೆ ಭೀಮಶಾ ಗಾಯಕವಾಡ 2) ಸುವಾಸ ತಂದೆ ವಿರೇಶ ಸಿಂಗೆ 3) ಮುಬಾರಕ ತಂದೆ ರಾಜಾಭೈ ಮೂಲಗೆ 4) ಶ್ರೀಶೈಲ ತಂದೆ ರೇವಣಸಿದ್ದಪ್ಪಾ ಘಾಳೆ 5) ಅಪ್ಪಾರಾಯ ತಂದೆ ರೇವಣಸಿದ್ದಪ್ಪಾ ಘಾಳೆ 6) ಮಾದಣ್ಣಾ ತಂದೆ ಈರಪ್ಪಾ ಜಾಧವ 7) ಸಿದ್ದಪ್ಪಾ ತಂದೆ ಈರಪ್ಪಾ ಜಾಧವ 8) ಈರಪ್ಪಾ ಜಾಧವ (ಪೋಮಣ್ಣಾ) ಇವರೆಲ್ಲರೂ ಸೇರಿ ನನ್ನನ್ನು ಮನ್ಮಥ ಏ ಮಗನೆ ಇಲ್ಲಿ ಏಕೆ ಬಂದಿದ್ದಿ ಎಲ್ಲರೂ ಇವನನ್ನು ಖಲಾಸ ಮಾಡಿರಿ ಮಗಾ ಬಹಾಳ ಕುಣಿಲಿಕತ್ತಾನ ಎಂದು ನನ್ನನ್ನು ಮನ್ಮಥ ಒಂದು ರಾಡಿನಿಂದ ನನ್ನ ಬೆನ್ನಿಗೆ ಹೊಡೆದನು, ಸಂಗಡಿಗರೆಲ್ಲರೂ ಸೇರಿ ನನಗೆ ಹೊಡೆ ಬಡೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀಮತಿ ರೇಖಾ ಗಂಡ ಹಣಮಂತ ಗಾಯಕವಾಡ ಸಾ|| ಪಡಸಾವಳಿ ರವರು  ಗ್ರಾಂಪಂಚಾಯತಿ ಅಧ್ಯಕ್ಷೆಯಾಗಿರುತ್ತೇನೆ, ದಿನಾಂಕ 31-01-2014 ರಂದು ಮಧ್ಯಾಹ್ನ 2.30 ಗಂಟೆಗೆ ಗ್ರಾಮ ಸಭೆ ನಡೆದಾಗ ಸಮಸ್ಯೆಗಳು ಜನರು ಕೇಳುತ್ತಾ ಇದ್ದರು ಗಲಾಟೆ ನಡೆದಾಗ ನನ್ನ ಪತಿ ಮಧ್ಯದಲ್ಲಿ ಬಂದು ಶಾಂತ ರೀತಿಯಿಂದ ಇರಲು ಹೇಳಿದರು, ಕುಡಾ ಮಲ್ಲಿನಾಥ ತಂದೆ ವಿಶ್ವನಾಥ ಬಿರಾದಾರ ಸಂ 17 ಜನರು ಸಾ|| ಪಡಸಾವಳಗಿ ರವರು ಬಂದು ಹೊಡೆಬಡೆ ಮಾಡಿ ಜಾತಿನಿಂದನೆ ಮಾಡಿ  ನಿಮಗೆ ಊರಲ್ಲಿ ಇರಗೊಡಲ್ಲಾ ಅಧಿಕಾರ ಮಾಡಿಲು ಬಿಡುವುದಿಲ್ಲಾ  ಎಂದು ಹೊಡೆಯುತ್ತಿದ್ದರು ಆವಾಗ ನನ್ನ ಗಂಡನಿಗೆ ಹೊಡೆದು ಕೊರಳಲ್ಲಿರುವ ಒಂದು ತೋಲೆ ಬಂಗಾರದ ಲಾಕಿಟ್ 5000 ರೂಪಾಯಿ & ನನ್ನ ಕೊರಳಲ್ಲಿರುವ ಒಂದು ತೋಲೆ ಬಂಗಾರದ ಸರ ಕಸಿದುಕೊಂಡಿರುತ್ತಾರೆ, ಇವರಿಂದ ನನಗೆ ನನ್ನ ಗಂಡನಿಗೆ ಜೀವ ಬೆದರಿಕೆ ಇರುತ್ತದೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಸುಭಾಷ ತಂದೆ ವೀರೇಶ ಸಿಂಗೆ ಸಾ|| ಪಡಸಾವಳಗಿ ನಮ್ಮ ಊರ ಗ್ರಾಮ ಸಭೆ ನಡೆದಾಗ ಅದರಲ್ಲಿ ಗಲಾಟೆ ಮಾಡಿದ್ದರಿಂದ ನಾನು ಮಧ್ಯ ಹೋಗಿ ಶಾಂತವಿರಲು ಹೇಳಿದ್ದರಿಂದ ನನ್ನ ಮೈಮೇಲೆ ಒಮ್ಮೇಲೆ ಮಲ್ಲಿನಾಥ ಬಿರಾಜದಾರ, ವಿಶ್ವನಾಥ ಬಿರಾಜದಾರ ಹಾಗೂ ಅವರ ಅಣ್ಣತಮ್ಮಂದಿರು ಅವರ ಸಂಗಡಿಗರಾದ ಈ ಕೇಳಗೆ ತೋರಿಸಿದ ವ್ಯಕ್ತಿಗಳು ನನ್ನ ಮೇಲೆ ಬಂದು ಮನಸ್ಸಿಗೆ ಬಂದಂತೆ ಕೈಯಿಂದ ಮುಷ್ಟಿಯಿಂದ ಕಾಲಿನಿಂದ ಒದ್ದು ಹೊಡೆಬಡೆ ಮಾಡಿ ಜಾತಿನಿಂದನೆ ಮಾಡಿರುತ್ತಾರೆ ಇವರಿಂದ ನಮಗೆ ಜೀವ ಭಯ ಇರುತ್ತದೆ, & ನನ್ನ ಜೀವಕ್ಕೆನಾದರೂ ಆದರೆ ಈ ಕೆಳಗೆ ತೋರಿಸಿದ 10 ಜನರು ಕಾರಣರಾಗಿರುತ್ತಾರೆ. ಎಂದು ತಿಳೀಸಿರುತ್ತೇನೆ, 1) ಮಲ್ಲಿನಾಥ ವಿಶ್ವನಾಥ ಬಿರಾಜದಾರ 2) ವಿಶ್ವನಾಥ ತಂದೆ ಶ್ರೀಮಂತ ಬಿರಾಜದಾರ 3) ಶಿವಲಿಂಗಪ್ಪಾ ಸಂಗಪ್ಪಾ ಚಾರೆ 4) ಗುರುಲಿಂಗಪ್ಪಾ ಸಿದ್ದಣ ಬಿರಾಜದಾರ 5) ಭೋಗೇಶ ಸಿದ್ದಣ್ಣ ಬಿರಾಜದಾರ 6) ಶಿವಕಿರಣ ತಂದೆ ಶ್ರಿಮಂತ ಪಾಟೀಲ್ 7) ರೇವಣಸಿದ್ದಪ್ಪಾ ಬಾಬು ಉಡಚಣ 8) ಕೇದಾರನಾಥ ಕಾಶಿನಾಥ ಬಿರಾಜದಾರ 9) ವೈಜನಾಥ ಕಾಶಿನಾಥ ಬಿರಾಜದಾರ 10) ಶ್ರೀದೇವಿ ವಿಶ್ವನಾಥ ಬಿರಾಜದಾರ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಹಣಮಂತ ತಂದೆ ಭೀಮಶಾ ಗಾಯಕವಾಡ ಸಾ|| ಪಡಸಾವಲಿ ನಿವಾಸಿಯಾಗಿದ್ದು ದಿನಾಂಕ 31/01/2014 ರಂದು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಸಮಯ 2.30 ಗಂಟೆಗೆ ಗ್ರಾಮ ಸಭೆ ನಡೆದಿತ್ತು ಅದರಲ್ಲಿ ನನ್ನ ಹೆಂಡತಿಯಾದ ರೇಖಾ ಗಂಡ ಹಣಮಂತ ಗಾಯಕವಾಡ ಅಧ್ಯಕ್ಷೆಯಾಗಿರುತ್ತಾಳೆ, ವಿನಾಕಾರಣವಾಗಿ ಮಲ್ಲಿನಾಥ ವಿಶ್ವನಾಥ ಬಿರಾಜದಾರ ಇವರು ಬಂದು ಪಿಡಿಓ ರವರಿಗೆ ಅಡ್ಡಾದಿಡ್ಡಿ ಮಾತನಾಡಿದ್ದರಿಂದ ನಾನು ಆತನನ್ನು ಸಮಾಧಾನ ಮಾಡಲು ಹೋದೆ ಆವಾಗ ಮಲ್ಲಿನಾಥ ತಂದೆ ವಿಶ್ವನಾಥ ಬಿರಾಜದಾರ ಇವರು ನನಗೆ ಜಾತಿ ನಿಂದನೆ ಮಾಡಿರುತ್ತಾರೆ 1) ಮಲ್ಲಿನಾಥ ತಂದೆ ವಿಶ್ವನಾಥ ಬಿರಾಜದಾರ 2) ವಿಶ್ವನಾಥ ತಂದೆ ಶ್ರೀಮಂತ ಬಿರಾಜದಾರ 3) ಶಿವಲಿಂಗಪ್ಪಾ ತಂದೆ ಸಂಗಣ್ಣಾ ಚಾರೆ  4) ಗುರುಲಿಂಗಪ್ಪಾ ತಂದೆ ಸಿದ್ದಣ್ಣಾ ಬಿರಾಜದಾರ 5) ಭೋಗೇಶ ತಂದೆ ಸಿದ್ದಣ್ಣಾ ಬಿರಾಜದಾರ 6) ಶಿವಕಿರಣ ತಂದೆ ಶ್ರೀಮಂತ ಪಾಟೀಲ್ 7) ರೇವಣಸಿದ್ದಪ್ಪಾ ತಂದೆ ಬಾಬು ಉಡಚಣ 8) ವಿಶ್ವನಾಥ ತಂದೆ ಕಲ್ಯಣಿ ಜಮಾದಾರ 9) ಲಕ್ಷ್ಮಣ ತಂದೆ ಕಲ್ಯಣಿ ಜಮಾದಾರ 10) ಕಾಶಿನಾಥ ತಂದ ಶ್ರೀಮಂತ ಬಿರಾಜದಾರ 11) ಕೇದಾರನಾಥ ತಂದೆ ಕಾಶಿನಾಥ ಬಿರಾಜದಾರ  12) ಅಶೋಕ ತಂದೆ ಹೊನ್ನಪ್ಪಾ ಜಮಾದಾರ 13) ವೈಜನಾಥ ತಂದೆ ಕಾಶಿನಾಥ ಬಿರಾಜದಾರ 14) ಶ್ರೀದೆವಿ ಗಂಡ ವಿಶ್ವನಾಥ ಬಿರಾಜದಾರ  15) ನಿರ್ಮಲಾ ಗಂಡ ಕಾಸಿನಾಥ ಬಿರಾಜದಾರ 16) ನಿಲಮ್ಮಾ ಗಂಡ ಬಸವರಾಜ ಬಿರಾಜದಾರ 17) ಪುತಳಾಬಾಯಿ ಗಂಡ ಶಿವಪುತ್ರಪ್ಪಾ ಬಿರಾದಾರ 18) ಮಲ್ಲಿನಾಥ ತಂದೆ ಕಲ್ಯಾಣಿ ಬೇತಾಳೆ 19) ಪಾರ್ವತಿ ಗಂಡ ಗುರುಲಿಂಗಪ್ಪಾ ಬಿರಾಜದಾರ 20) ರತ್ನಾಬಾಯಿ ಗಂಡ ಬೋಗೇಶ ಬಿರಾಜದಾರ 21) ಚೀದಾನಂದ ತಂದೆ ವೀರಭದ್ರಯ್ಯಾ ಸ್ವಾಮಿ ಇವರೆಲ್ಲರು ನನಗೆ ಹೊಡೆದು ಜಾತಿ ನಿಂದನೆ ಮಾಡಿ ಜೀವ ಹೊಡೆಯಲು ಹೊಂಚು ಹಾಕಿರುತ್ತಾರೆ, ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಅಪ್ಪಾರಾಯ ತಂದೆ ರೇವಣಸಿದ್ದಪ್ಪಾ ಘಾಳೆ ಸಾ|| ಪಡಸಾವಳಿ ದಿನಾಂಕ 31/01/2014 ರಂದು ಮಧ್ಯಾಹ್ನ 3.15 ನಿಮಿಷಕ್ಕೆ ಯೋಗಿರಾಜ ಪಾನಶಾಪ ಎದುರು ನಿಂತಿದ್ದ ಗ್ರಾಮ ಸಭೆ ನಡೆದಿತ್ತು ನನ್ನ ಹತ್ತಿರ ಬಂದು ಜಾತಿ ನಿಂದನೆ ಮಾಡಿದ್ದು  ಶಿವಲಿಂಗಪ್ಪಾ ಚಾರೆ ಬಂದು ಸಮಗಾರ ಇದ್ದಿರಿ ಜಾತಿ ಎಂದರೆ ನಿಮಗೇನು ಆಗುತ್ತೆ ಎಂದು ಅವರು ಅಂದರು ಅವರಿಬ್ಬರು ಮತ್ತು ನನ್ನ ನಡುವೆ ವಾದವಿವಾದವಾಯಿತು ಅವರು ನಾನು ಗಪ್ಪಾದಾಗ ನಿಮಗೆ ಓಟ ಹಾಕಬಾರದಿತ್ತು ನಿಮಗೆ ಊರಲ್ಲಿ ಇರಬಾಡದಿತ್ತು ಊರ ಹೊರಗೆ ಇಡಬೇಕಿತ್ತು & ನಿಮಗೆ ಖಲಾಸ ಮಾಡತೆವಿ ನಿಮದು ಬಹಳ ನಡೆದಿದೆ, ಜೀವ ಹೊಡೆಯುತ್ತೇವೆ ಎಂದು ಜಾತಿ ಎತ್ತಿ ಬೈದು ಇಬ್ಬರೂ ಎದೆಯ ಮೇಲಿನ ಅಂಗಿ ಹಿಡಿದು ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿರೇಶ ತಂದೆ ರಮಾನಂದ ಗಲಗಲಿ ರವರು ದಿನಾಂಕ: 31/01/2014 ರಂದು ರಾತ್ರಿ 10=30 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ಇಡಿ 8187 ನೆದ್ದರ ಮೇಲೆ ಗೋವಾ ಹೊಟೇಲ ದಿಂದ ಎಸ್.ಟಿ.ಬಿ.ಟಿ. ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಟಂಟಂ ನಂ:ಕೆಎ 32  7014 ರ ಚಾಲಕನು ಅತಿವೇಗವಾಗಿ ಮತ್ತು ಆಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಗಾಯಗೊಳಿಸಿ ವಾಹನ ಅಲ್ಲೆ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.