POLICE BHAVAN KALABURAGI

POLICE BHAVAN KALABURAGI

04 June 2013

GULBARGA DISTRICT REPORTED CRIMES

ಹುಡಗ ಕಾಣೆಯಾದ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ, ಬಸಣಗೌಡ ತಂದೆ ಸಿದ್ರಾಮಪ್ಪಾ ಬೋರೆಡ್ಡಿ ಸಾ; ಪೊಲೀಸ್ ಕ್ವಾಟರ್ಸ ಕೆ.ಎಸ್.ಆರ್.ಪಿ. ಕ್ಯಾಂಪ್ ತಾಜ ಸುಲ್ತಾನಪೂರ ಗುಲಬರ್ಗಾರವರು ನನ್ನ ಮಗನಾದ ದೇವಗೌಡ ಬೋರಡ್ಡಿ  ವಯಾ| 12 ವರ್ಷ ಇತನು ದಿನಾಂಕ.28-5-2013 ರಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಹೋರಗಡೆ ಆಟವಾಡಿ ಬರುತ್ತೇನೆ ಅಂತಾ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವದಿಲ್ಲಾ ನಮ್ಮ ಸಮ್ಮಂದಿಕರು  ಮತ್ತು ಅವನ ಗೆಳೆಯರೆಲ್ಲರ ಹತ್ತಿರ ವಿಚಾಸಿದರೂ ಪತ್ತೆಯಾಗಿರುವುದಿಲ್ಲಾ. ಆತನ ಚಹರೆ ಪಟ್ಟಿ ಎತ್ತರ 4 5’’ಮೈಕಟ್ಟು, ತಳ್ಳನೆಯ ಮೈಕಟ್ಟು, ಸಾಧಗಪ್ಪು ಮೈಬಣ್ಣ, ಉದ್ದನೆಯ ಮೂಗು,ಅಗಲವಾದ ಹಣೆ, ಮುಂದಿನ ಮೇಲಿನ ಹಲ್ಲು ಸ್ವಲ್ಪ ಮುಂದೆ  ಉದ್ದವಾಗಿರುತ್ತವೆ. 7ನೇತರಗತಿಯಲ್ಲಿ ವಿಧ್ಯಾಬ್ಯಾಸ ಮಾಡುತ್ತಿದ್ದಾನೆ. ಬಿಸ್ಕಿಟ ಕಲರ ಚೌಕಡಿ ಚಕ್ಸ ಶರ್ಟ,ಆಕಾಶ ಕಲರ ನೀಲಿ ಪ್ಯಾಂಟ ಧರಿಸಿರುತ್ತಾನೆ. ಕನ್ನಡ ಮತ್ತು ಹಿಂದಿ ಬಲ್ಲವನಾಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 281/2013 ಕಲಂ, ಹುಡಗ ಕಾಣೆಯಾದ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ದೂರವಾಣಿ ಸಂ: 08472-263631 ಅಥವಾ ಕಂಟ್ರೋಲ್ ರೂಮ್ ಗುಲಬರ್ಗಾ 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
24 ವರ್ಷದ ಹುಡಗನಿಗೆ ಹಾವು ಕಡಿತದಿಂದ ಸಾವು:

ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:02/06/2013 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಊಟ ಮಾಡಿಕೊಂಡು ನಾನು ಮತ್ತು  ಅಜೇಯ ತಂದೆ ರಾಮಪ್ರಸಾದ  ವಯಾ||18 ವರ್ಷ ಸಾ:ರಾಮನಗರ ತಾ;ಜಿ:ಸೀಪೂಲ ಬಿಹಾರ ರಾಜ್ಯ ಹಾ::ಬೇಲೂರ ಕ್ರಾಸ ಸುಗುರೇಶ್ವರ ದಾಲ ಮಿಲ್ ಗುಲಬರ್ಗಾ ಇತನು ಅಲ್ಲದೆ ಇತರೆ ಸುಗುರೇಶ್ವರ ದಾಲ ಮಿಲ್ಲದಲ್ಲಿ ಕೆಲಸ ಮಾಡುವವರು  ಸುಗುರೇಶ್ವರ ದಾಲ ಮಿಲದ ಗೇಟಿನ ಹೊರಗಡೆ ಇರುವ ರೂಮಿನಲ್ಲಿ ಮಲಗಿಕೊಂಡಿದ್ದಾಗ ಅಜೇಯ ಇತನು ಒಮ್ಮೇಲೆ ಚೀರಾಡುತ್ತಾ ಹಾವು ಕಚ್ಚಿದೆ ಅಂತಾ ಚಿರಾಡುತ್ತಿರುವಾಗ ಎಲ್ಲರೂ ಎದ್ದು ನೋಡಲು ಅಜೇಯ ಇತನಿಗೆ ಎಡಗೈ ಹಸ್ತದ ಮಣಿ ಕಟ್ಟಿಗೆ ಹಾವು ಕಚ್ಚಿದ್ದು ಹಾಗೆ ಇದ್ದು ಎಲ್ಲರೂ ಅಜೇಯನಿಗೆ ಕೈಜಾಡಿಸಲು ಹೇಳಿದಾಗ ಅಜೇಯ ಇತನು ಕೈಜಾಡಿಸಿದಾಗ ಹಾವು ಕೆಳಗೆ ಬಿದ್ದು  ಕೋಣೆಯಿಂದ ಹೊರಗಡೆ ಹೋಯಿತು ಮಿಲ್ಲ ಮಾಲಿಕರಿಗೆ ಪೋನಮಾಡಿ ಅವರ ಕಾರಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ  ಅಜೇಯ ಇತನ ಸ್ಥಿತಿ ಸಿರಿಯಸ್ಸ್‌ ಆಗಿದ್ದರಿಂದ ಅವನಿಗೆ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಬಂದು ಸೇರಿಕೆ ಮಾಡಿದಾಗ ವೈಧ್ಯರು ಆತನಿಗೆ ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾನೆ ಅಂತ ತಿಳಿಸಿದರು, ಅಜೇಯ ಇತನು ಹಾವು ಕಚ್ಚಿ ಮೃತಪಟ್ಟಿರುವದರಿಂದ ಶ್ರೀ ರಮೇಶಕುಮಾರ ತಂದೆ ಶ್ರೀಲಾಲ ಮುಖಿಯ್ಯಾ ವಯಾ 18 ವರ್ಷ ಸಾ: ಸದಾನಂದಪುರ ತಾ;ಜಿ:ಸೀಪೂಲ ಬಿಹಾರ ರಾಜ್ಯ ಇತನು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯುಡಿಆರ್‌ ನಂ:15/2013 ಕಲಂ 174 ಸಿಆರ್‌ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

03 June 2013

GULBARGA DISTRICT REPORTED CRIME

ಹಲ್ಲೆ ಪ್ರಕರಣ:

ಸೇಡಂ ಪೊಲೀಸ್ ಠಾಣೆ:ದಿನಾಂಕ:02-06-2013 ರಂದು ಬೆಳಗ್ಗೆ 7-30 ಗಂಟೆ ಸುಮಾರಿಗೆ ಮನೆಯಿಂದ ನಮ್ಮೂರ ಬಸಣ್ಣ ದೇವರ ಗುಡಿಗೆ ಹೊರಟಿದ್ದಾಗ ಗುಡಿಯ ಹತ್ತಿರ ಕುಳಿತ್ತಿರುವ  ಜಗಪ್ಪ ತಂದೆ ಸಂಗಣ್ಣಾ ಬುಸನೂರ ಇವರು ಕರೆದು ಮಾತನಾಡಿಸುತ್ತಿರುವಾಗ ಪಕ್ಕದಲ್ಲಿಯೇ ಇದ್ದ ಭೀಮರಾಯ ಪಾಂಪೊರ ಇತನು ನನಗೆ ವಾರೆ ಗಣ್ಣಿನಿಂದ ನೋಡುತ್ತಿದ್ದನು. ಆಗ ನಾನು ಹೀಗೇಕೆ ನೋಡುತ್ತಿದ್ದಿ ಅಂತ ಕೇಳಿದಕ್ಕೆ ಅವನು ಅವಾಚ್ಯವಾಗಿ ಬೈದು ನೀನು ಕಾಂಗ್ರೇಸ್ ದವನು ನಾನು ಬಿ.ಜೆ.ಪಿ. ದವವನು ನಮಗೆ ಯ್ಯಾಕೆ ಮಾತಾಡುತ್ತಿ ಅಂತ ಬೈದು ಕೈಯಿಂದ ಹೊಡೆದು ಜಗಳ ಮಾಡುತ್ತಿದ್ದನು. ಅಷ್ಟರಲ್ಲಿ ಅಲ್ಲಿಯೇ ಪಕ್ಕದಲ್ಲಿಯೇ ಇದ್ದ ಆತನ ಮಕ್ಕಳಾದ ಹಣಮಂತ ತಂದೆ ಭೀಮರಾಯ ಪಾಂಪೊರ ಮತ್ತು ನರಸಪ್ಪ ತಂದೆ ಭೀಮರಾಯ ಪಾಂಪೊರ ರವರು ಬಂದು ಹೊಡೆದು ರಕ್ತ ಹಾಗೂ ಗುಪ್ತಗಾಯ ಮಾಡಿರುತ್ತಾರೆ ಅಂತ ಶ್ರೀ.ಜೀಕಪ್ಪ ತಂದೆ ಬಸಣ್ಣಾ ಗುಳ್ಳೇರ, ಸಾ:ನಾಚವಾರ ಗ್ರಾಮ ಇವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:138/2013 ಕಲಂ, 341, 323, 324, 504 ಸಂಗಡ 34 ಐಪಿಸಿ ಪ್ರಕಾರಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ನಾನು ಮತ್ತು ನನ್ನ ಮಗ ನಿಂಗಪ್ಪಾ ಇಬ್ಬರು ದಿನಾಂಕ: 01-6-2013 ರಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ನಮ್ಮೂರಿಗೆ ಹೋಗುವ ಸಲುವಾಗಿ ಫಿರೋಜಾಬಾದ ಗ್ರಾಮದಿಂದ ಶಾಹಾಬಾದ ಕ್ರಾಸಿಗೆ ಬಂದು ಜೇವರ್ಗಿ ಕಡೆಯಿಂದ ವಾಡಿಗೆ ಹೋಗುತ್ತಿರುವ ಕೆಎ-32 ಬಿ- 1769 ಕ್ರೊಜರ ಜೀಪ ಬಂದಿದ್ದು, ಅದರಲ್ಲಿ ಕುಳಿತುಕೊಂಡು ಶಾಹಾಬಾದ ಮಾರ್ಗವಾಗಿ ವಾಡಿಗೆ ಹೊರಟ್ಟಿದ್ದೆವು  ಜೀಪಿನಲ್ಲಿ ಡ್ರೈವರ ಮತ್ತು ಅವನ ಸಂಗಡ ಇನ್ನೊಬ್ಬನಿದ್ದನು. ಎರಡು ಕಿಲೋಮಿಟರ್ ನಂತರ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಪಲ್ಟಿ ಮಾಡಿದ್ದರಿಂದ ನನಗೆ ಭಾರಿ ಗುಪ್ತಗಾಯ ಆಗಿರುತ್ತದೆ. ನನ್ನ ಮಗ ನಿಂಗಪ್ಪನಿಗೆ ಬಲಗೈ ಮುಂಡಿಗೆ ತೆರಚಿದ ಗಾಯವಾಗಿದ್ದು ಇರುತ್ತದೆ. ಜೀಪಿನ ಚಾಲಕನಿಗೆ ಮತ್ತು ಅವನ ಜೊತೆ ಇದ್ದವನಿಗೆ ಇಬ್ಬರಿಗೂ ತೆರಚಿದ ರಕ್ತಗಾಯಗಾಳಾಗಿರುತ್ತವೆ. ನನಗೆ ಮತ್ತು ನನ್ನ ಮಗ ನಿಂಗಪ್ಪನು ಇತನಿಗೆ ಜೇವರ್ಗಿ ಸರಕಾರಿ ಆಸ್ಪತ್ರೆ ಉಪಚಾರಕ್ಕೆ ತಗೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾದ ಕಾಮರಡ್ಡಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ದೊಡ್ಡಮ್ಮ ಗಂಡ ಸಂಜಿವೇಪ್ಪಾ ಯರಗೋಳ ಸಾ|| ಯರಗೋಳ ತಾ:ಜಿ: ಯಾದಗಿರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 77/2013 ಕಲಂ:  279, 337, 338 ಐಪಿಸಿ & 187 ಐಎಂವಿ ಆಕ್ಟ್   ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ದಿನಾಂಕ 21-05-2013 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ರೋಜಾ ಗೋಸ್ ಮಾರ್ಕೆಟ ಎದರುಗಡೆ ರೋಡಿನ ಮೇಲೆ ಉಮ್ಮೆ ಸುವೇಬಾ, ವಯಾ||6 ವರ್ಷ, ಇವಳು ನಡೆದುಕೊಂಡು ಹೋಗುತ್ತಿದ್ದಾಗ ಅರ್ಮದಾ ಜೀಪ ನಂ. ಎಮ್.ಎಚ್ 12 ವೈ.ಎ 6469 ನೇದ್ದರ ಚಾಲಕ ತನ್ನ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ಕು. ಉಮ್ಮೆ ಸುವೇಬಾ ಇವಳಿಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ತನ್ನ ಜೀಪ ಸಮೇತ ಓಡಿ ಹೋಗಿರುತ್ತಾನೆ ಅಂತಾ ಶ್ರೀ ಅಶ್ರಫ ಅಲಿಖಾನ ತಂದೆ ಅಬ್ದುಲ ಅಜೀಜಖಾನ, ಸಾಃ ಚೋಟಾ ದೌಡಿ ಚೋಟಾ ರೋಜಾ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:32/2013 ಕಲಂ 279,338 ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ: ನಾನು ದಿನಾಂಕ:02/06/2013 ರಂದು ಸಾಯಂಕಾಲ 5-40 ಗಂಟೆ ಸುಮಾರಿಗೆ ಅಫಜಲಪೂರದಿಂದ ಗುಲಬರ್ಗಾ ಶಾಂತಿನಗರ ನನ್ನ ಮನೆಗೆ ಬಂದು ನೋಡಲು ಕಂಪೌಂಡ ಗೇಟಿಗೆ ಬಾಗಿಲ ಕೊಂಡಿ ಮುರಿದಿರುತ್ತದೆ. ಒಳಗೆ ಹೋಗಿ ನೋಡಲು ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಂದಿದ್ದು ಅಲಮಾರಿ ತೆರೆದಿದ್ದು ದಿನಾಂಕ:30/05/2013 ರಿಂದ 02/06/2013 ರ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಮನೆಯ ಬಾಗಿಲ ಕೀಲಿ ಮುರಿದು ಅಲಮಾರಿಯಲ್ಲಿಟ್ಟಿದ್ದ ನಗದು ಹಣ 30,000/- ಬಂಗಾರದ ಜುಮಕಿ ಹೂ. ಹೀಗೆ ಒಟ್ಟು 15,000/- ರೂ ಬೇಲೆ ಬಾಳುವುದು ಹೀಗೆ ಒಟ್ಟು 45,000/- ರೂಪಾಯಿಗಳದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಅಫ್ತಾಬ ತಂದೆ ಅಬ್ದುಲ್ ರಜಾಕ ಪಟೇಲ ಸಾ: ಎಲ್.ಐ.ಜಿ 165 ಶಾಂತಿ ನಗರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಠಾಣೆ ಗುನ್ನೆ ನಂ. 89/2013 ಕಲಂ. 454,457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡಿರುತ್ತಾರೆ.