POLICE BHAVAN KALABURAGI

POLICE BHAVAN KALABURAGI

29 March 2013

GULBARGA DISTRICT REPORTED CRIMES


ಆಸ್ತಿಗಾಗಿ ತಮ್ಮನ ಕೊಲೆ:
ರೇವೂರ ಪೊಲೀಸ್ ಠಾಣೆ:ಶ್ರೀ, ಬಸವರಾಜ ತಂದೆ ಚನ್ನಬಸಪ್ಪ ಬಣಗಾರ ವ||55 ವರ್ಷ ಜಾ|| ಬಣಗಾರ   || ಎಸ್.ಡಿ.ಎ. ಸಾ|| ಅತನೂರ  ಹಾ|||| ಅಫಜಲಪೂರ  ರವರು ನಾವು 6 ಜನ ಅಣ್ಣ ತಮ್ಮಂದಿರಿದ್ದು 16 ಎಕರೆ ಜಮೀನು ಇರುತ್ತದೆ. ನನ್ನ  4 ನೇ ತಮ್ಮ ಚಂದ್ರಕಾಂತ ತಂದೆ ಚನ್ನಬಸಪ್ಪ ಬಣಗಾರ ವಯಾ||35 ಇತನಿಗೆ ಮದುವೆ ಆಗಿರುವುದಿಲ್ಲ 16 ಎಕರೆ ಜಮೀನಿನಲ್ಲಿ ಎಲ್ಲರು ಪಾಲು ಹಂಚಿಕೊಂಡಿರುತ್ತೆವೆ.  ಶಿವಾನಂದ ಬಣಗಾರನು ವಯಾ|| 35 ವರ್ಷ  ಇತನು ಚಂದ್ರಕಾಂತನ ಪಾಲಿನ ಜಮೀನು ನನಗೆ ಕೊಡು ಅಂತ ಕಳೆದ 4-5 ವರ್ಷಗಳಿಂದ ಜಗಳ ಮಾಡುತ್ತಾ ಬಂದಿರುತ್ತಾನೆ,  ಜಮೀನಿಗೆ ಸಂಬಂಧಿಸಿದಂತೆ ದಿನಾಂಕ: 26-03-2013 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಶಿವಾನಂದ ಇತನು ಚಂದ್ರಕಾಂತ ಇತನ ತಲೆಗೆ ಒನಕೆಯಿಂದ ತಲೆಗೆ ಹೊಡೆದು ನೂಕಿಕೊಟ್ಟಿದ್ದರಿಂದ ತಲೆಗೆ ಬಲವಾದ ಒಳಪೆಟ್ಟಾಗಿ ಮೈಕೈಗಳಿಗೆ ತರಚಿದ ಗಾಯಗಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದರಿಂದ ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಸವೇಶ್ವರ ಆಸ್ಪತ್ರೆ ವೈಧ್ಯಾಧೀಕಾರಿಗಳು ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ದಿನಾಂಕ:28-03-2013 ರಂದು ಬೆಳಿಗಿನ ಜಾವ 3-00 ಗಂಟೆ ಸುಮಾರಿಗೆ ಮಾರ್ಗಮದ್ಯದಲ್ಲಿ ನನ್ನ ತಮ್ಮ ಚಂದ್ರಕಾಂತನು ಮೃತಪಟ್ಟಿರುತ್ತಾನೆ. ಅಂತಾ ಬಸವರಾಜ ರವರು ದೂರು ಸಲ್ಲಿಸಿದರಿಂದ ಠಾಣೆ ಗುನ್ನೆ ನಂ:25/2013 ಕಲಂ, 302 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ವಂಚನೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ. ಜಿ.ಸೆಲ್ವರಂಗಂ ಪ್ರಾದೇಶಿಕ ಆಡಳಿತ ಅಧಿಕಾರಿಗಳು ಟಿ.ಎನ್.ಹಚ್.ಡಬ್ಲೂ.ಯು.ಸಿ.ಎಸ್.ಲಿ.ಕೋ-ಅಪರೇಟಿವ್ ಅಫೇಕ್ಸ ಪ್ರಾದೇಶಿಕ ಕಛೇರಿ ಬೆಂಗಳೂರು ರವರು ಗುಲಬರ್ಗಾ ಟಿ.ಎನ್.ಹಚ್.ಡಬ್ಲೂ.ಯು.ಸಿ.ಎಸ್.ಲಿ.ಕೋ-ಅಪರೇಟಿವ್ ಅಪೆಕ್ಸ ಸರಕು ಅಂಗಡಿ ಸುಪರ ಮಾರ್ಕೆಟ ಗುಲಬರ್ಗಾದಲ್ಲಿ ಸೇಲ್ಸಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಪ್ರವೀಣಕುಮಾರ ಇತನು ದಾಸ್ತಾನು ಸರಕುಗಳಲ್ಲಿ 2012 ನೇ ಸಾಲಿನ ಅಗಸ್ಟ ತಿಂಗಳಿನಿಂದ 2013 ನೇ ಸಾಲಿನ ಪೆಬ್ರುವರಿ ತಿಂಗಳ ವರೆಗೆ ಅಂದಾಜು 12,30,529-25 ರೂಪಾಯಿಯ ಸರಕಿನ ನಿವ್ವಳ ಮೊತ್ತವನ್ನು ಲೇಕ್ಕ ತೋರಿಸದೆ ನಮ್ಮ ಕಂಪನಿಗೆ ನಷ್ಟ ಮಾಡಿ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 39/2013 ಕಲಂ, 406, 408, 420 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀಮತಿ ಲಲೀತಾ ಗಂಡ ಧರ್ಮಣ್ಣ ಮೇದಾರ ಸಾ:ಲಕ್ಷ್ಮೀ ಟಾಕೀಜಿ ಹತ್ತಿರ ಜೇವರ್ಗಿ ರವರು ನನ್ನ ಗಂಡ ಧರ್ಮಣ್ಣ ತನು ದಿನಾಂಕ:27-03-2013 ರಂದು ಮಧ್ಯಾಹ್ನದ ಸಮಯದಲ್ಲಿ ಮತ್ತು ರಾತ್ರಿ 7-00  ಗಂಟೆಯ ಸುಮಾರಿಗೆ ಸರಾಯಿ ಕುಡಿದು ಬಂದು ನನ್ನ ಮಾವ ರೇವಣಸಿದ್ದ ಇತನಿಗೆ ಆಸ್ತಿಯಲ್ಲಿ ಪಾಲು ಕೋಡು ಅಂತ ಕೇಳಿದಕ್ಕೆ ಕೊಡುವುದಿಲ್ಲ ಅಂತ ಅವನ ಸಂಗಡ ಜಗಳ ಮಾಡಿದ್ದನು. ನಾನು ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದು, ನನ್ನ ಗಂಡ ಧರ್ಮಣ್ಣ ಇತನು ಮನೆಯ ಮುಂದೆ ಇರುವ ಪತ್ರಾಸ ಸೇಡಿ ಕೇಳಗೆ ಮಂಚದ ಮೇಲೆ ಮಲಗಿಕೊಂಡಿದ್ದನು. ನಮ್ಮ ಮಾವ ರೇವಣಸಿದ್ದ ಇತನು ನನ್ನ ಗಂಡ ಸರಾಯಿ ಕುಡಿದು ಬಂದು ಆಸ್ತಿಯಲ್ಲಿ ಪಾಲು ಕೇಳಿದಕ್ಕೆ ದಿನಾಂಕ:28-03-2013 ರ ರಾತ್ರಿಯಲ್ಲಿ ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಓಡಿ ಹೋಗಿರುತ್ತಾನೆ ಅಂತಾ ಆತನ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:47/2013 ಕಲಂ, 302 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ;
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ, ಅರ್ಜುನ ತಂದೆ ಬಂಡು ಖರಾತ, ವಃ 48 ವರ್ಷ, ಉಃ ಕುರಿ ಕಾಯುವದು,ಜಾಃಕುರಬರ, ಸಾಃರಾಜನಾಳ, ಹತ್ತರಕಿ ಪೊಸ್ಟ, ತಾಃ ಇಂಡಿ, ಜಿಃ ಬಿಜಾಪೂರರವರು ನಾನು 4-5 ತಿಂಗಳಿಂದ ನಮ್ಮೂರಿನಿಂದ ಕುರಿಗಳನ್ನು ಮೇಯಿಸುತ್ತಾ ಗುಲಬರ್ಗಾಕ್ಕೆ ಬಂದ್ದಿದ್ದು, ದಿನಾಂಕ: 28-03-2013 ರಂದು ಕುರಿಗಳನ್ನು ಪಾಳಾ ಗ್ರಾಮದ ಹತ್ತಿರ ಮೇವು ತಿನ್ನುವದಕ್ಕೆ ಬಿಟ್ಟು  ನಾನು ಮತ್ತು ನನ್ನೊಂದಿಗೆ ಇದ್ದ ಕಾರಭಾರಿ ತಂದೆ ಗೇನಪ್ಪಾ ಇಬ್ಬರು ಕೂಡಿ ಗುಲಬರ್ಗಾಕ್ಕೆ ಕುರಿ ಮಾರಲು ಬಂದು ಸೇಡಂ ರಿಂಗ ರೋಡ ಹತ್ತಿರ ಕುರಿ ಮಾರಿಕೊಂಡು ಬಸವೇಶ್ವರ ಆಸ್ಪತ್ರೆಯ ಹತ್ತಿರ ಮಧ್ಯಾಹ್ನ ರೋಡ ದಾಟುತ್ತಿದ್ದಾಗ ಕಾರ ನಂ. ಕೆಎ-32 ಎಮ್-1499 ನೇದ್ದರ ಚಾಲಕನು ತನ್ನ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನಗೆ ಡಿಕ್ಕಿ ಪಡಿಸಿದ್ದರಿಂದ ನನಗೆ ಬಲಗಾಲು ಹಿಂಬಡಿಗೆ ಭಾರಿ ಗುಪ್ತ ಪೆಟ್ಟಾಗಿ ಪಾದದ ಹತ್ತಿರ ತರಚಿದ ಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದರಿಂದ ಠಾಣೆ ಗುನ್ನೆ ನಂ: 19/2013 ಕಲಂ 279, 338 ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

28 March 2013

GULBARGA DISTRICT REPORTED CRIMES


ಅತ್ಯಾಚಾರ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ:27/03/2013 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಝಳಕಿ (ಕೆ) ಗ್ರಾಮದ 35 ವರ್ಷದ ಗೃಹಿಣಿಯು ಅಣ್ಣಪ್ಪ ಐರೊಡಗಿ ರವರ ಹೊಲದ ಮೆಟಗಿಯ ಹಿಂದುಗಡೆಯಿಂದ ಹೋಗುತ್ತಿದ್ದಾಗ ಶಿವಪ್ಪ ತಂದೆ ಅಣ್ಣಪ್ಪ ಐರೊಡಗಿ ಸಾ:ಹಡಲಗಿ ಇತನು ಬಂದು ಜಬರ ದಸ್ತಿಯಿಂದ ಆ ಗೃಹಿಣೆ ಸಂಗಡ  ತೆಕ್ಕೆ ಕುಸ್ತಿಗೆ ಬಿದ್ದು, ನೆಲಕ್ಕೆ ಕೆಡವಿ  ಜಬರಿ ಸಂಭೋಗ ಮಾಡಿರುತ್ತಾನೆ.ಈ ವಿಷಯ ಯಾರಿಗಾದರೂ ಹೇಳಿದರೆ ನೀನ್ನ ಜೀವ ಸಹಿತ ಬೀಡುವುದಿಲ್ಲಾ ಅಂತಾ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿರುತ್ತಾನೆ ಅಂತಾ ಝಳಕಿ (ಕೆ) ಗ್ರಾಮದ ಅತ್ಯಚಾರಕ್ಕೊಳಗಾದ ಗೃಹಿಣಿಯೊಬ್ಬರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 25/2013 ಕಲಂ: 341,376,504,506 ಐಪಿಸಿ ಮತ್ತು 3 (1) (10) ಎಸಸಿ/ಎಸಸಿ ಪಿಎ ಆಕ್ಟ 1989  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ:ದಿನಾಂಕ:27-03-2013 ರಂದು ಮಧ್ಯಾಹ್ನ 1-30 ಗಂಟೆಗೆ ಸುಮಾರಿಗೆ ನಾನು ಹೋಳಿ ಹಬ್ಬ ಆಚರಣೆ ಮಾಡಿ ಮನೆಗೆ ಹೋಗುತ್ತಿರುವಾಗ  ಕಮಲಾಪೂರ ಗ್ರಾಮದ ನಗರೇಶ್ವರ ಪುಂಡಲಿಕ ಮಾಸ್ತರ, ಮತ್ತು ಭೂನೇಶ್ವರ ರವರು ನನಗೆ ಅವಾಚ್ಯವಾಗಿ  ಬೈದು ಬಡಿಗೆಯಿಂದ ಹೋಡೆ ಬಡೆ ಮಾಡಿ ಹಾಗೂ ಬೀಡಿಸಲು ಬಂದ ಸತೀಷ ಇತನಿಗೂ ಸಹ   ಹೋಡೆ ಬಡೆ ಮಾಡಿರುತ್ತಾರೆ ಅಲ್ಲದೇ ಲಲಿತಾಬಾಯಿ ಇತಳಿಗೆ ಕೂದಲು ಹಿಡಿದು ಎಳೆದಾಡಿ ಹೋಡೆ ಬಡೆ ಮಾಡಿರುತ್ತಾರೆ ಅಂತಾ ನವಿಂದ್ರ ತಂದೆ ಗುಂಡಪ್ಪಾ ದೇವರಮನಿ ಸಾ|| ಕಮಲಾಪೂರ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:25/2013 ಕಲಂ.341.323.324.354.504.506 ಸಂಗಡ 34 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ವಿಜಯಕುಮಾರ ತಂದೆ ಅಮಾಂತಪ್ಪ ನಾಟೀಕಾರ               ಉ:ಇಂಜನಿಯರ್  ಸಾ:ಮಾಣಿಕೇಶ್ವರಿ ಗುಡಿ ಎದುರು ಚೌಡೇಶ್ವರಿ  ಕಾಲೋನಿ ಗುಲಬರ್ಗಾರವರು  ದಿನಾಂಕ: 26-03-2013 ರಂದು  ರಾತ್ರಿ 9=45 ಗಂಟೆಗೆ  ಫಿರ್ಯಾದಿಯು ತನ್ನ ಮೋಟಾರ ಸೈಕಲ್ ನಂ:ಕೆಎ-32 ಎಲ್ 2356 ನೇದ್ದರ ಮೇಲೆ ರೈಲ್ವೆ ಸ್ಟೇಶನಗೆ ಹೋಗುವ  ಕುರಿತು ಲಾಲಗೇರಿ ಕ್ರಾಸ್ ದಿಂದ ಎಸ್.ವಿ.ಪಿ.ಸರ್ಕಲ್ ಕಡೆಗೆ ಬರುತ್ತಿದ್ದಾಗ ಎನ್.ವಿ. ಕಾಲೇಜ್ ಕಾಂಪ್ಲೇಕ್ಸನಲ್ಲಿರುವ ಮೇಗಾ ದರ್ಶನಿ ಹೊಟೇಲ ಎದುರು ರೋಡಿನ ಮೇಲೆ ಹಿಂದಿನಿಂದ ಮೋಟಾರ ಸೈಕಲ್ ನಂ:ಕೆಎ 32 ಇಸಿ  5410 ರ ಸವಾರ ವಿರೇಶ ಇತನು ತನ್ನ ಮೋಟಾರ ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ್ ಕ್ಕೆ   ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಗಾಯಗೊಳಿಸಿ ತಾನು ಗಾಯಹೊಂದ್ದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:21/2013 ಕಲಂ: 279,338  ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ, ವಿಠಲ್ ತಂದೆ ಗುಂಡಪ್ಪಾ ಕೋಹಿರ ಸಾ|| ಐನೊಳ್ಳಿ ತಾ|| ಚಿಂಚೋಳಿ ರವರು ನಾನು ಸೇಂಟ್ರಿಂಗ್ ಕೆಲಸಕ್ಕೆಂದು ಚಿಂಚೋಳಿಗೆ ಬಂದು ಕೆಲಸ ಮುಗಿಸಿಕೊಂಡು ಸಿಮೆಂಟ್ ಲೋಡ ಇರುವ ಲಾರಿ ನಂ. ಎಮ್.ಎಚ-12, ಹೆಚಡಿ-7321 ನೇದ್ದರಲ್ಲಿ ರಾತ್ರಿ 8-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಪರಿಚಯದವನಾದ ಅಕ್ರಮ್ ತಂದೆ ಅಮೀರ ಅಲಿ , ಜಾಫರಖಾನ ಪಠಾಣ, ಖಾಜಾ ಚಿಟಗುಪ್ಪಾ , ಅರ್ಜುನ ಅಣ್ಣಾಜಿ, ಮನೋಜ ಲೊಂಡೆ, ಎಲ್ಲರೂ ಸದರಿ ಲಾರಿ ಕ್ಯಾಬಿನಲ್ಲಿ ಕುಳಿತುಕೊಂಡು ಹೋರಟಿದ್ದು, ಲಾರಿಯು ಚಿಂಚೋಳಿಯ ಹೊಸ ಊರ ಕ್ರಾಸ್ ದಾಟಿದ ನಂತರ ಲಾರಿ ಚಾಲಕನಾದ ಕಾಶಿನಾಥ ತಂದೆ ಮಲ್ಲೇಶಿ ಸೀರೂರ ಎಂಬುವವನು ಅತೀವೇಗದಿಂದ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಪ್ರೀನ್ಸ್ ದಾಬಾ ಸಮೀಪ ಪಲ್ಟಿ ಮಾಡಿದನು. ಓಳಗಡೆ ಕುಳಿತವರಿಗೆ ಹಾಗೂ ಲಾರಿ ಕ್ಲಿನರ ಮತ್ತು ಚಾಲಕನಿಗೆ ಸಾದಾ ಭಾರಿ ರಕ್ತ ಮತ್ತು ಗುಪ್ತಗಾಯಗಳಾಗಿರುತ್ತವೆ. ಅಕ್ರಮ ತಂದೆ ಅಮೀರ ಅಲಿ ಕೂಸಗಿ ವ:40 ವರ್ಷ ಸಾ: ನಾಗಾಯಿದ್ಲಾಯಿ ತಾ:ಚಿಂಚೋಳಿ ಎಂಬುವವನಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೊಗುವಾಗ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ವಿಠಲ್ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 62/2013 ಕಲಂ. 279, 337, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

27 March 2013

GULBARGA DISTRICT REPORTED CRIMES


ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂದನ,
ಒಟ್ಟು 1,50,240 ರೂಪಾಯಿಗಳ ಮೌಲ್ಯದ ಮಧ್ಯ ವಶ
ಬ್ರಹ್ಮಪೂರ ಪೊಲೀಸ್ ಠಾಣೆ:ದಿನಾಂಕ:26/03/2013 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಮಧ್ಯ ಮಾರಾಟ ಆಗುತ್ತಿರುವ ಬಗ್ಗೆ ಭಾತ್ಜಿ ಬಂದ ಮೇರೆಗೆ ಶ್ರಿ, ಎ.ಡಿ ಬಸಣ್ಣವರ್ ಡಿ.ಎಸ್.ಪಿ 'ಬಿ' ಉಪ-ವಿಭಾಗ ಗುಲಬರ್ಗಾ ರವರ ನೇತ್ರತ್ವದಲ್ಲಿ ಶ್ರೀ.ಶರಣಬಸವೇಶ್ವರ ಬಿ ಪೊಲೀಸ ಇನ್ಸಪೆಕ್ಟರ್ ಬ್ರಹ್ಮಪೂರ ಪೊಲೀಸ ಠಾಣೆ ಗುಲಬರ್ಗಾರವರು ಮತ್ತು ಅವರ ಸಿಬ್ಬಂದಿ ಜನರಾದ ಮಾರುತಿ ಎ.ಎಸ್.ಐ, ನಿಜಲಿಂಗಪ್ಪ, ಅಶೋಕ ರವರು ಬಹುಮನಿ ಹೊಟೇಲದಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದ ಶ್ರೀನಿವಾಸ ತಂದೆ ನಾಗೇಂದ್ರ ರಾಸೂರ, ವಯ|| 33, || ಹೊಟೇಲ ಮ್ಯಾನೇಜರ, ಸಾ|| ಬಿದ್ದಾಪೂರ ಕಾಲೋನಿ ಗುಲಬರ್ಗಾ ಇತನಿಂದ ಓರಿಜಿನಲ್ ಚಾಯ್ಸ್ನ ಬಾಟಲಿಗಳು,  ಓಲ್ಡ ಟಾವರಿನ ಬಾಟಲಿಗಳು ಹೀಗೆ ಇತರೆ ಮಧ್ಯದ ಬಾಟಲಿಗಳು  ||ಕಿ|| 1,50,240/- ರೂಪಾಯಿ ಬೆಲೆ ಬಾಳುವುದವುಗಳು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:38/2013 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ ಮತ್ತು 188 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಶೃದ್ದಾನಂದ ತಂದೆ ರೇವಣಸಿದ್ದಪ್ಪ ಕಾಳಗಿ ವ:63 ಜಾ: ಲಿಂಗಾಯತ ಸಾ: ಮನೆ ನಂ. 39 ಜನತಾ ಗೃಹ ನಿರ್ಮಾಣ ಹೌಸಿಂಗ ಸೋಸಾಯಿಟಿ ಕರುಣೇಶ್ವರ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಪತ್ನಿ ದಿನಾಂಕ:25/03/2013  ರಂದು ಬೆಳಿಗ್ಗೆ 8-25 ಕ್ಕೆ ಮನೆಯಿಂದ ಕರುಣೇಶ್ವರ ಬಸ್ ನಿಲ್ದಾಣದಕ್ಕೆ ಆಟೋ ಮೂಲಕ ಹೋಗುವ ಸಲುವಾಗಿ ರಾಮ ಮಂದಿರ ಜೇವರ್ಗಿ ಕಾಲನಿ ಮುಖ್ಯ ರಸ್ತೆಯ ಮುಖಾಂತರ ಹೊರಟಾಗ ಮೋಟಾರ ಸೈಕಲ್ ಮೇಲೆ ಇಬ್ಬರು ಕುಳಿತಿದ್ದು, ಕ್ಷಣಾರ್ಧದಲ್ಲಿ ಹಿಂದೆ ಕುಳಿತಿರುವ ವ್ಯಕ್ತಿ ನನ್ನ ಪತ್ನಿಯ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ್ 15 ಗ್ರಾಂ ಮತ್ತು ಚಿನ್ನದ ಲಾಕೇಟ ಸರ್ 14 ಗ್ರಾಂ  ಕಿತ್ತುಕೊಂಡು ಮೋಟರ ಸೈಕಲ್ ನಂಬರ ನೋಡುವಷ್ಟರಲ್ಲಿ ಅತೀವೇಗದಿಂದ ಮೋಟಾರ ಸೈಕಲ್ ಚಲಾಯಿಸಿದರು.ಬಂಗಾರದ ಒಟ್ಟು ಆಭರಣಗಳ ಕಿಮ್ಮತ್ತು 75,000/- ರೂಪಾಯಿಗಳು ಆಗಬಹುದು ಅಂತಾ ಶೃದ್ದಾನಂದ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 46/2013 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.