POLICE BHAVAN KALABURAGI

POLICE BHAVAN KALABURAGI

03 January 2013

GULBARGA DISTRICT REPORTED CRIME


ಕಳ್ಳತನ ಪ್ರಕರಣ:

ಚೌಕ ಪೊಲೀಸ್ ಠಾಣೆ:ಶ್ರೀ ಶಶಿಕಾಂತ ತಂದೆ ಚಂದ್ರಕಾಂತ ಶೆಟ್ಟಿ ಮಹಾಜನ ಉ|| ವ್ಯಾಪಾರ ಸಾ|| ಬ್ಯಾಂಕ್ ಕಾಲೋನಿ ಗುಲಬರ್ಗಾರವರು ನಾನು ಟ್ರೇಡಿಂಗ್ ಕಂಪನಿಯ ಪಾರ್ಟಿಗಳಿಗೆ ಹಣ ಕೊಡುವ ಸಲುವಾಗಿ ಅಡಿತಿಯ ಲಾಕರದಲ್ಲಿ ನಗದು ಹಣ 95,000/- ರೂಪಾಯಿಗಳು ಇಟ್ಟು ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು, ದಿನಾಂಕ: 03-01-2013 ರಂದು ಬೆಳಿಗ್ಗೆ 10-00 ಗಂಟೆಗೆ ಅಡತಿಗೆ ಬಂದು ನೋಡಲು ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲ್ಲದೇ ಅಂಗಡಿಯ ಮೇಲಿನ ಪತ್ರಾ ಕತ್ತರಿಸಿ ಆಲಮಾರಿ ಒಡೆದು ಅದರಲ್ಲಿರುವ 95,000/- ರೂಪಾಯಿಗಳು ಕಳ್ಳತನವಾಗಿದ್ದು, ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಮಾನ್ಯ ಎಸ್‌.ಪಿ ಸಾಹೇಬ ಗುಲಬರ್ಗಾರವರ ಆದೇಶ ಮೇರೆಗೆ ನಾನು ಪಿಎಸ್‌ಐ ಫರತಾಬಾದ ಮತ್ತು ನನ್ನ ಜೊತೆ ಹೇಮಂತಕುಮಾರ ಪಿಎಸ್‌ಐ ಹಾಗೂ ಸಿಬ್ಬಂದಿಯೊಂದಿಗೆ ಶಹಾಬಾದಲ್ಲಿ ಜೂಜಾಟ ನಡೆದಿದೆ ಎಂದು ಬಾತ್ಮಿ ಬಂದ ಮೇರೆಗೆ ಮಾನ್ಯ ಡಿವೈಎಸ್‌ಪಿ ಸಾಹೇಬ ಶಹಾಬಾದರವರ ನೇತೃತ್ವದಲ್ಲಿ ಶಹಾಬಾದದ ಭೀಮಾಶಂಕರ ವಡ್ಡರರವರ ಮನೆಯ  ಮೇಲೆ ದಾಳಿ ಮಾಡಿ 6 ಜನ ಆರೋಪಿತರು ಮತ್ತು ನಗದು ಹಣ 50,170/- ರೂ ಹಾಗೂ ದ್ವಿ-ಚಕ್ರ ವಾಹನಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ವರದಿ ಸಲ್ಲಿಸಿದ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ:01/2013 ಕಲಂ:79,80 ಕೆಪಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಧನು ತಂದೆ ಡೊಂಗ್ರು ಪವಾರ ವ:23 ಸಾ:ಬಾಲುನಾಯಕ ತಾಂಡಾ  ಮುಗಳನಾಗಾಂ ರವರು ನಾನು ದಿನಾಂಕ:02/01/2013 ರಂದು ರಾತ್ರಿ 8.00 ಗಂಟೆ ಸುಮಾರಿಗೆ ಶಹಾಬಾದ ಬಸ ನಿಲ್ದಾಣದಿಂದ ಟಂಟಂ ನಂ:ಕೆಎ-32/ಬಿ-7160 ನೇದ್ದರಲ್ಲಿ ಕುಳಿತುಕೊಂಡು ಹೋಗುತ್ತಿರುವಾಗ ಶಾಂತನಗರ ಮಜೀದ ಹತ್ತಿರವಿರುವ ಸಣ್ಣ ಬ್ರೀಡ್ಜ ಹತ್ತಿರ ಎದರುಗಡೆಯಿಂದ ಒಂದು ಟಂ ಟಂ ಅಫೇ ಮೀನಿಗೂಡ್ಸ್‌ ನಂ.ಕೆಎ-32 ಬಿ-1650 ನೇದ್ದರ ಚಾಲಕ ರಮೇಶ ತಂದೆ ಸಿದ್ರಾಮಪ್ಪ ಇತನು ತನ್ನ ಟಂಟಂ ನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ನನಗೆ ತಲೆಗೆಟೊಂಕಕ್ಕೆಬಲಗಾಲ ಮೋಳಕಾಲಿಗೆ ತರಚಿದ ರಕ್ತಗಾಯ ಮತ್ತು ಬೆನ್ನಿಗೆ ಒಳಪೆಟ್ಟು ಆಗಿರುತ್ತದೆ. ಮತ್ತು ನಮಗೆ ಡಿಕ್ಕಿ ಪಡಿಸಿದ ಟಂಟಂದಲ್ಲಿ ಕುಳಿತಿದ್ದ ಶರಣ ತಂದೆ ಲಕ್ಷ್ಮಣ ಇತನಿಗೆ ಗಾಯಗಳಾಗಿರುತ್ತವೆ. ಚಾಲಕರಿಗೆ ಯಾವುದೆ ಗಾಯಗಳಾಗಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2013 ಕಲಂ:279,337  ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

02 January 2013

GULBARGA DISTRICT


:: ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ ::
ಅಂತರರಾಜ್ಯ ಟವೇರಾ ವಾಹನ ಕಳ್ಳರ ಬಂಧನ,  
ಬಂಧಿತರಿಂದ  20 ಲಕ್ಷ  ಬೆಲೆ ಬಾಳುವ ವಾಹನಗಳು ವಶ.

ಗುಲಬರ್ಗಾ ನಗರದ ಶಾಂತಿ ನಗರ ಬಡಾವಣೆಯಲ್ಲಿ ದಿನಾಂಕ:13/12/2012 ರಂದು  ಶ್ರೀ. ಬಸವರಾಜ ತಂದೆ ಚಂದ್ರಕಾಂತ ಪಾಟೀಲ ಮಾಹಾಲಕ್ಷ್ಮಿ ಲೇಔಟ ಗುಲಬರ್ಗಾ ರವರ ಟವೇರಾ ವಾಹನ ಸಂ. ಕೆ.ಎ-32 ಎ.ಎಂ.-4376 ವಾಹನ ಕಳ್ಳತನ ಆಗಿದ್ದು ಅಲ್ಲದೆ ದಿನಾಂಕ:20/12/2012 ರಂದು ಜೇವರ್ಗಿ ರೋಡ ಎನ್.ಜಿ.ಓ ಕಾಲೋನಿಯಲ್ಲಿ ಶ್ರೀ ಭದ್ರಿ ನಾರಾಯಣ ಮುಜದಾರ ರವರ ಮನೆಯ ಹತ್ತಿರ ಟವೇರಾ ವಾಹನ ನಂ. ಕೆ.ಎ-25 ಸಿ-7572  ಕಳ್ಳತನ ಆಗಿದ್ದು ಈ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿರುತ್ತವೆ. ಇದುಲ್ಲದೆ ಗುಲಬರ್ಗಾ ನಗರದ ಒಕ್ಕಲಗೇರಾ ಗಂಜ ಏರಿಯಾದಲ್ಲಿ ಶ್ರೀ ಸೈಯದ ಇಸ್ತಿಯಾರ ಅಹ್ಮದ ರವರ ಟವೇರಾ ವಾಹನ ನಂ. ಕೆ.ಎ-03 ಎಮ್.ಎಮ್ -6968 ಕಳ್ಳತನ ಆಗಿದ್ದು ಈ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
         ಹೀಗೆ ಗುಲಬರ್ಗಾ ನಗರದಲ್ಲಿ ವಾಹನ ಕಳ್ಳತನ ಆಗುತ್ತಿದ್ದರಿಂದ ಶ್ರೀ ಎನ್.ಸತೀಶಕುಮಾರ ಐಪಿಎಸ್‌ ಜಿಲ್ಲಾ ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮತ್ತು ಶ್ರೀ  ಭೂಷಣ ಬೊರಸೆ ಐಪಿಎಸ್‌  ಎ.ಎಸ್‌.ಪಿ (ಎ) ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಟಿ.ಹೆಚ್.ಕರೀಕಲ್ ಪಿ.ಐ, ಸುರೇಶಕುಮಾರ ಪಿ.ಸಿ. 534 (1150), ಉಮ್ಮಣ್ಣ ಪಿ.ಸಿ. 998 (118), ಯೊಗೇಂದ್ರ ಪಿ.ಸಿ. 606 (1258), ಉಮೇಶ ಪಿ.ಸಿ. 882(30), ಶ್ರೀನಿವಾಸ ಪಿ.ಸಿ. 638 (49),  ರವರನ್ನು ಒಳಗೊಂಡ ತಂಡವನ್ನು ರಚಿಸಿ ಹೈದ್ರಾಬಾದಕ್ಕೆ ಕಳುಹಿಸಲಾಗಿತ್ತು.
              ಈ ತಂಡವು ಆಂದ್ರ ಪ್ರದೇಶ ರಾಜ್ಯದ ಹೈದ್ರಾಬಾದ, ರಂಗಾರೆಡ್ಡಿ ಜಿಲ್ಲೆಯ ಹಯಾತ ನಗರ, ವನಸ್ತಲಿಪೂರಂ. ಹಾಗು ತಿರುಪತಿ ಹತ್ತಿರದ ಪಿಲೆಯರು, ಕಡಪಾ, ಕರ್ನೂಲ್ ವಿವಿಧ ಕಡೆಯಲ್ಲಿ ಟವೇರಾ ವಾಹನ ಕಳ್ಳತನ ಮಾಡುವ ಬಗ್ಗೆ ಮಾಹಿತಿ ಕಲೆ ಹಾಕಿ ಗುಲಬರ್ಗಾ ನಗರದಲ್ಲಿ ಟವೇರಾ ವಾಹನ ಕಳ್ಳತನ ಮಾಡಿದ ಅಂತರಾಜ್ಯ ಟವೇರಾ ಇನ್ನಿತರೆ ವಾಹನ ಕಳ್ಳತನ ಮಾಡುವ 1)  ಮುನಿಶೇಖರ ರೆಡ್ಡಿ ತಂದೆ ಮುನಿರೆಡ್ಡಿ ವ-25 ವರ್ಷ ಉ-ಡ್ರೈವರ ಕೆಲಸ ಸಾ: ಕುರಪರ್ತಿವಾರೆಪಲ್ಲಿ ಮಂಡಲ ರೂಂಪಿಚರ್ಲ ತಾ: ಪಿಲೆಯ ಜಿ:ಚಿತ್ತುರ ಹಾ:ವ: ಸೀತಾರಾಮಪೂರ ಪೇಸ ನಂ 2 ಕಾಲೋನಿ ಹಯಾತ ನಗರ ಹೈದ್ರಾಬಾದ  2) ಸಂದೀಪ ತಂದೆ ಗೋರೆಲಾಲ ಗುಪ್ತಾ ವ-24 ವರ್ಷಜಾ:ಗುಪ್ತಾ ಉ-ಸ್ಯಾಪ್ಪ ವ್ಯಾಪಾರ ಸಾ: ಲಾಲ ಬಜಾರ ಕಾನಪೂರ ಉತ್ತರ ಪ್ರದೇಶ ರಾಜ್ಯ ಹಾ;ವ: ಕಳನಗರ ಅಂಬರಪೇಠ ಸೈಬರಬಾದ ಜಿ: ರಂಗಾರೆಡ್ಡಿ 3) ಲಿಂಗಾ ಸ್ವಾಮಿ ತಂದೆ ಅಂಜಯ ರಾಮಲಂ ವ-23 ವರ್ಷ ಜಾ:ಪಿಚ್ಯಾಗುಟ್ಆ ಕೊಂಚಿಕೊರವೆರ ಉ=ಆಟೋ ಚಾಲಕ ಸಾ: ಜಾನಪಲ್ಲಿ ಮಂಡಲ ರಾಮಪೆಠ ಜಿ:ನೆಲಗೊಂಡ ಸದ್ಯ ಜಾಫರಗೂಡಾ ಮಂಡಲ ಹಯಾತ ನಗರ ಜಿ: ರಂಗಾ ರೆಡ್ಡಿ (ಎ.ಪಿ ) ರವರನ್ನು ದಸ್ತಗಿರಿ ಮಾಡಿ ಇವರಿಂದ ಗುಲಬರ್ಗಾ ನಗರದಲ್ಲಿ 3 ಕಡೆ ಟವೇರಾ ವಾಹನಗಳು ಮತ್ತು ಆಂದ್ರ ಪ್ರದೇಶದ ಜಡಚರಲ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು ಮಾಡಿದ ಟಾಟಾ ಇಂಡಿಕಾ ವಾಹನವನ್ನು ಪತ್ತೆ ಮಾಡಿ ಒಟ್ಟು 20 ಲಕ್ಷ ರೂ ಬೇಲೆ ಬಾಳುವ ವಾಹನಗಳನ್ನು ವಶಪಡಿಸಿಕೊಂಡು ಗುಲಬರ್ಗಾಕ್ಕೆ ತಂದಿರುತ್ತಾರೆ.
          ಈ ಅಂತರಾಜ್ಯ ಕಳ್ಳರಾದ ಮುನಿಶೇಖರ ರೆಡ್ಡಿ ಇತನು ಹೈದ್ರಾಬಾದಲ್ಲಿ ಹಲುವಾರು ವಾಹನ ಕಳ್ಳತನ ಮಾಡಿದ ಹಳೆ ಗುನ್ನೆಗಾರನಿದ್ದು ಅಲ್ಲದೆ ಆಂದ್ರಪ್ರದೇಶ, ಕರ್ನಾಟಕ, ಇನ್ನಿತರೆ ರಾಜ್ಯಗಳಲ್ಲಿ ವಾಹನ ಕಳ್ಳತನ ಮಾಡುವ ಪ್ರವೃತ್ತಿ ಉಳ್ಳವನಿದ್ದು ಕುಖ್ಯಾತ ಟವೇರಾ ವಾಹನ ಕಳ್ಳನಿಗೆ ಸಿನಿಮಿಯ ರೀತಿಯಿಂದ ದಸ್ತಗಿರಿ ಮಾಡಿಕೊಂಡು ತರಲಾಗಿದೆ. ಈ ಕಾರ್ಯ ಮಾಡಿದ ತಂಡಕ್ಕೆ ಮಾನ್ಯ ಐಜಿಪಿ ಈಶಾನ್ಯ ವಲಯ ಗುಲಬರ್ಗಾ, ಎಸ್.ಪಿ ಗುಲಬರ್ಗಾ, ಎ.ಎಸ್.ಪಿ (ಎ) ಉಪ ವಿಭಾಗ ಗುಲಬರ್ಗಾ ರವರು ಶ್ಲಾಘಿಸಿರುತ್ತಾರೆ.