POLICE BHAVAN KALABURAGI

POLICE BHAVAN KALABURAGI

23 October 2011

GULBARGA DIST REPORTED CRIMES

ಗ್ರಾಮೀಣ ಠಾಣೆ : ಶ್ರೀ ಮಹ್ಮದ ಅಲಿ ತಂದೆ ಲಾಡ್ಲೆಸಾಬ ವಗ್ದರಗಿ ಸಾ:ಜಾಫರಾಬಾದ ತಾ:ಜಿ:ಗುಲ್ಬರ್ಗಾ ರವರು,ನಮ್ಮ ಮನೆಯಲ್ಲಿ ಹೈನು ಮತ್ತು ಮನೆಯ ಉಪಯೋಗಕ್ಕಾಗಿ ಎರಡು ಎಮ್ಮೆಗಳನ್ನು ಸಾಕಿದ್ದು ಸದರಿ ಎಮ್ಮೆ ಗಳು ನಾಲು ಬೆಳಿಗ್ಗೆ ಮೇಯಿಸುವ ಮನುಷ್ಯ ಬಂದು ಮೇಯಿಸಲು ಹೊಡೆದುಕೊಂಡು ಹೋಗಿ ಸಾಯಂ ಕಾಲ ಮನೆಗೆ ತಂದು ಬಿಡುತ್ತಿದ್ದು ಅದೇ ರೀತಿ ದಿ: 9-10-11 ರಂದು ರಾತ್ರಿ ನಾವು ಊಟ ಮಾಡಿ 11 ಗಂಟೆ ಯವರೆಗೆ ಮಲಗುವಾಗ ನೋಡಲಾಗಿ ಮನೆಯ ಮುಂದೆ ಕಟ್ಟಿದ್ದು ಇದ್ದವು ಬೆಳಿಗ್ಗೆ 6 ಗಂಟೆಗೆ ಎದ್ದು ನೋಡಲಾಗಿ ನಮ್ಮ ಮನೆಯಲ್ಲಿ ಕಟ್ಟಿದ್ದ ಎರಡು ಎಮ್ಮೆಗಳು ಇರದೆ ಬಿಚ್ಚುಕೊಂಡು ಹೋಗಿರಬಹುದೆಂದು ಎಲ್ಲ ಕಡೆಗೆ ಹುಡುಕಾಡಲಾಗಿ ಸದರಿ ನಮ್ಮ ಎಮ್ಮೆಗಳು ಸಿಗಲಿಲ್ಲ. ಸದರಿ ನಮ್ಮ ಎರಡು ಎಮ್ಮೆಗಳ ಅಂದಾಜು ಕಿಮ್ಮತ್ತು ಒಟ್ಟು 40000/- ರೂ. ಎರಡು ಎಮ್ಮೆಗಳು ದಿ: 9-10-11 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ. 308/2011 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ : ಶ್ರೀ ಬಸವರಾಜ ತಂದೆ ಶಾಂತಪ್ಪ ಪಾಟೀಲ ಸಾ: ರೇವಣಸಿದ್ದೇಶ್ವರ ಕಾಲನಿ ಗುಲಬರ್ಗಾ ರವರು, ದಿ: 21-10-11 ರಂದು ರಾತ್ರಿ 8 ಗಂಟೆಗೆ ನನ್ನ ಕೆಲಸದಿಂದ ಮರಳಿ ಮನೆಗೆ ಬಂದು ನನ್ನ ಕಾರ ಕೆಎ 32 ಎಮ್‌‌ 9897 ಮನೆಯ ಮುಂದೆ ನಿಲ್ಲಿಸಿರುತ್ತೇನೆ. ದಿನಾಂಕ 22/10/11 ರಂದು ಮುಂಜಾನೆ 5:30 ಗಂಟೆಗೆ ಎದ್ದು ನೋಡಿದ್ದಾಗ ನನ್ನ ಕಾರು ಮನೆಯ ಮುಂದೆ ಇರಲಿಲ್ಲ. ಅದನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳವು ಮಾಡಿ ಕೊಂಡು ಹೋಗಿರುತ್ತಾರೆ. ಎಲ್ಲಾ ಕಡೆ ಹುಡುಕಾಡಿದರೂ ಕಾರು ಸಿಕ್ಕಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ 309/11 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ಆಳಂದ ಠಾಣೆ : ಶ್ರೀ ಕುತಬೋದ್ದಿನ್ ತಂದೆ ಅಬ್ದುಲ ರಹಮನ್ ಬುಡ ಸಾ: ಬಂದರವಾಡ ಗಲ್ಲಿ ನಾನು ದಿ: 21-10-11 ರಂದು ಸಾಯಂಕಾಲ 5.30 ಪಿಎಮ್ ಕ್ಕೆ ನಮ್ಮ ಓಣಿಯಲ್ಲಿರುವ ಮೌಲಾನ ದರ್ಗಾದ ಒಳಗಡೆ ಕಂಪೌಂಡನಲ್ಲಿರುವ ಕಟ್ಟೆಯ ಮೇಲೆ ನಾನು ಮಲಗಿಕೊಂಡು ಮಾತಾಡುತ್ತಿದಾಗ ಅನ್ಸರ ಸಾಬ ಇವರ ಮಗ ಉಮರ್ ಅಲೀ ಇತನು ಬಂದು ಎಲ್ಲರಿಗೂ ಬೈಯುತ್ತ ನನ್ನ ಗಲ್ಲಕ್ಕೆ ಹೊಡೆದನು. ನನಗೆ ಯಾಕೆ ಹೊಡೆಯುತ್ತಿ? ಅಂತಾ ಕೇಳಿದ್ದಕ್ಕೆ ಮತ್ತೆ ಅವಾಚ್ಯ ಶಬ್ದಗಳಿಂದ ಬೈಯ್ದು ಕಲ್ಲಿನಿಂದ ಹೊಡೆಬಡೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಗುನ್ನೆ ನಂ. 246/2011 ಕಲಂ 323.324.504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

22 October 2011

GULBARGA DIST REPORTED CRIMES

ಅಶೋಕ ನಗರ ಠಾಣೆ : ಶ್ರೀ ಶಂಕರ ತಂದೆ ವೀರಣ್ಣಾ ಪೂಜಾರಿ ಉ: ಬಸ ಕಂಡಕ್ಟರ ಡಿ.ಸಿ ನಂ. 164 ಬಸ ಘಟಕ ನಂ.3 ಗುಲಬರ್ಗಾ ಸಾ: ಬೊರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾ ರವರು, ದಿನಾಂಕ 21-10/2011 ರಂದು ಮದ್ಯಾಹ್ನ 1:30 ಗಂಟೆಗೆ ಸುಪರ ಮಾರ್ಕೆಟ ಬಸ ಸ್ಟ್ಯಾಂಡದಲ್ಲಿ ಸಿತನೂರಕ್ಕೆ ಹೊಗಲು ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಂ. ಕೆಎ 32-ಎಫ್‌-1319 ನೇದ್ದನ್ನು ನಿಲ್ಲಿಸಿದಾಗ ಒಬ್ಬ ಪ್ರಯಾಣಿಕ ಮಹಿಳೆಯರ ಸೀಟ ಮೇಲೆ ಕುಳಿತಿರುವಾಗ ಬೇರೆ ಸೀಟಿನ ಮೇಲೆ ಹೊಗುವಂತೆ ಹೇಳಿದಾಗ ಆ ವ್ಯಕ್ತಿ ನನ್ನೊಂದಿಗೆ ತಕರಾರು ಮಾಡಿದನು. ಆಗ ಅಲ್ಲಿ ಪೊಲೀಸರು ಇದ್ದುದ್ದರಿಂದ ಕೆಳಗಡೆ ಇಳಿದನು. ಬಸ್ಸಿನಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಸಿತನೂರಕ್ಕೆ ಹೊಗಿ, ಮರಳಿ ಸುಪರ ಮಾರ್ಕೆಟಕ್ಕೆ ಬರುತ್ತಿರುವಾಗ ಮದ್ಯಾಹ್ನ 2:45 ಗಂಟೆ ಸುಮಾರಿಗೆ ಕರುಣೇಶ್ವರ ನಗರ ಬಸ ಸ್ಟಾಪ್‌ ಹತ್ತಿರ 5 ಜನ ಪ್ರಯಾಣಿಕರು ಕೈ ಮಾಡಿದ್ದರಿಂದ ಬಸ ಡ್ರೈವರ ರವಿ ರವರು ಬಸ ನಿಲ್ಲಿಸಿದ್ದು ಆಗ ಆ 5 ಜನ ಪ್ರಯಾಣಿಕರು ಒಮ್ಮೇಲೆ ನನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಈ ಕಂಡಕ್ಟರ ನನಗೆ ಮಾರ್ಕೆಟದಲ್ಲಿ ಬಸ್ಸಿನಿಂದ ಇಳಿಸಿದಾನೆ ಅಂತಾ ಹೇಳಿ ಮಾರ್ಕೆಟ ಬಸಸ್ಟ್ಯಾಂಡದಲ್ಲಿ ತಕರಾರು ಮಾಡಿದ ವ್ಯಕ್ತಿ ನನ್ನ ಎದೆಯ ಮೇಲಿನ ಸಮವಸ್ತ್ರ ಹಿಡಿದು ಮತ್ತು ಜೊತೆಗಿದ್ದ 4 ಜನ ಹೊಡೆಬಡೆ ಮಾಡಿರುತ್ತಾರೆ. ಆಗ ನಮ್ಮ ಬಸ ಚಾಲಕ ರವಿ ಹಾಗು ಕೆಲವು ಪ್ರಯಾಣಿಕರು ಜಗಳ ಬಿಡಿಸಿರುತ್ತಾರೆ. ಪಾಣೆಗಾಂವದವರು ಎಂದು ತಿಳಿದು ಬಂದಿದ್ದು ಓಡಿ ಹೊಗಿರುತ್ತಾರೆ. ನನಗೆ ಗಾಯಗಳಾಗಿರುತ್ತವೆ. ಸದರಿ ಜಗಳದಲ್ಲಿ ನನ್ನ ಹತ್ತಿರ ಇದ್ದ ಬಸ ಟಿಕೇಟ ಹಣ 535/- ರೂಪಾಯಿ ಎಲ್ಲೊ ಬಿದ್ದು ಕಳೆದಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಗುನ್ನೆ ನಂ:ನ 113/2011 ಕಲಂ:323, 353, 504 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಲಕ್ಷ್ಮೀ ಗಂಡ ಶಂಕರ ಕಾಂಬಳೆ ಸಾತಿಲಕ ನಗರ ಜಿಡಿಎ ಕಾಲನಿ ಗುಲಬರ್ಗಾ ರವರು,ನನ್ನ ಮಗನಾದ ಜಗನ್ನಾಥ ತಂದೆ ಶಂಕರ ಕಾಂಬಳೆ ವಯ ಇತನು ಇನಾಮದಾರ ಪ್ರೀ.ಯುನಿವರ್ಸಿಟಿ ಕಾಲೇಜನಲ್ಲಿ ಪಿ.ಯು.ಸಿ ಪ್ರಥಮ ವರ್ಷ ಸೈನ್ಸ ಓದುತ್ತಿದ್ದು. ದಿನಾಂಕ 15-10-2011 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಮನೆಯಿಂದ ಕೈಯಲ್ಲಿ ಒಂದು ಕಾಪಿ ಹಿಡಿದುಕೊಂಡು ಹೋದವನು ಸಾಯಂಕಾಲವಾದರೂ ಮನಗೆ ಬರದೆ ಇದ್ದುದರಿಂದ ಇಲ್ಲಿಯವರೆಗೆ ನಮ್ಮ ಸಂಭಂದಿಕರಿಗೆ ಮತ್ತು ಆತನ ಮಿತ್ರರಿಗೆ ವಿಚಾರಿಸಿದರು ಮತ್ತು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲಾ. ಕಾರಣ ಕಾಣೆಯಾದ ನನ್ನ ಮಗ ಜಗನ್ನಾಥನನ್ನು ಪತ್ತೆ ಹಚ್ಚಿ ಕೊಡಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆ ಗುನ್ನೆ ನಂ. 240/2011 ಕಲಂ. ಹುಡುಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.    

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪುಟ್ಟ ಸ್ವಾಮಿ ತಂದೆ ರಂಗ ಸ್ವಾಮಿ ಸಾ: ಹೌಸಿಂಗ ಬೋರ್ಡ ಕಾಲೋನಿ ಹಳೆ ಜೇವರ್ಗಿ ಕಾಲೋನಿ ಗುಲಬರ್ಗಾ ರವರು, ದಿನಾಂಕ 21.10.11 ರಂದು ನಾನುಬ ನಂ ಕೆ.ಎ 34 ಹೆಚ 2549 ನೇದ್ದರ ಮೇಲೆ ಹಳೇ ಜೇವರ್ಗಿ ರೋಡಿನಲ್ಲಿ ಬರುವ ಮೇಡಿಪ್ಲಸ್ ಅಂಗಡಿ ಎದುರುಗಡೆ ರೋಡಿನ ಮೇಲೆ ಜೇವರ್ಗಿ ರಿಂಗ ರೋಡ ಕಡೆ ಹೋಗುತ್ತಿದಾಗ ಮೋಟರ್ ಸೈಕಲ್ ನಂ ಕೆ.ಎ 32 ಎಸ 1812 ನೇದ್ದರ ಚಾಲಕ ಅಕ್ಬರ ಇತನು ರೇಲ್ವೆ ಅಂಡರ ಬ್ರೀಜ ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನನ್ನ ವಾಹನಕ್ಕೆ ಅಪಘಾತ ಪಡಿಸಿ ಗಾಯಗೂಳಿಸಿ ತನ್ನ ಮೋಟಾರ ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಗುನ್ನೆ ನಂ. 134/11 ಕಲಂ: 279, 337 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST REPORTED CRIMES

ನಿಂಬರ್ಗಾ ಠಾಣೆ :ಶ್ರೀ ರಾಜಕುಮಾರ ತಂದೆ ಗುಂಡಪ್ಪ ಆಳಂದ ಸಾ|| ದುತ್ತರಗಾಂವ ರವರು, ದಿನಾಂಕ 20/10/11 ರಂದು ನಾನು ಮತ್ತು ನಮ್ಮ ಗ್ರಾಮದ ಸಿದ್ದಾರಾಮ ಹತ್ತರಕಿ ಮತ್ತು ವೀರಣ್ಣಾ ಶಿರೂರ ಇವರು ಮಂಗಾಣೆಯವರ ಹೊಲ ಸರ್ವೆ ನಂ. 59/03 ನೇದ್ದರಲ್ಲಿ ಜೋಳ ಬಿತ್ತಣೆ ಮಾಡಿ ಅದೆ ಹೊಲದಲ್ಲಿ ಇನ್ನು ಬಿತ್ತನೆ ಮಾಡಬೇಕಾಗಿದ್ದರಿಂದ ರಾತ್ರಿ ಅದೆ ಹೊಲದಲ್ಲಿ ಎಲ್ಲರೂ ಮಲಗಿಕೊಂಡಾಗ ಮಧ್ಯ ರಾತ್ರಿ 01.00 ಗಂಟೆ ಸುಮಾರಿಗೆ ಎಲ್ಲರೂ ನಿದ್ರೆಯಲ್ಲಿದ್ದಾಗ ನನಗೆ ಯಾರೋ ಬಡಿಗೆಯಿಂದ ಹೊಡೆದಿದ್ದರಿಂದ ಚೀರಾಡುವಷ್ಟರಲ್ಲಿ ಪಕ್ಕದಲ್ಲಿ ಮಲಗಿದ್ದ ಎರಡು ಜನರು ಎದ್ದು ನೋಡಲು ಯಾರೋ 3 ಜನರಿದ್ದು ಅವರು ಬಡಿಗೆಯಿಂದ, ಸಿದ್ದಾರಾಮ ಹತ್ತರಕಿ ಮತ್ತು ಬೀರಣ್ಣಾ ಇವರಿಗೂ ಹೊಡೆದು ಒಳಪೆಟ್ಟು ಮಾಡಿದ್ದು, ಅವರಿಗೆ ನೀವು ಯಾರು ಇದ್ದೀರಿ ಅಂತ ಮಾಡನಾಡಿಸಿದರೂ ಸಹ ಅವರು ಮಾತನಾಡಿರುವದಿಲ್ಲಾ, ಅವರ ಹೊಡೆತಕ್ಕೆ ತಾಳದೆ ಒಂದೆ ಸವನೆ ಚೀರಾಡುತ್ತಿರುವಾಗ ಅಲ್ಲಿಂದ ಅವರು ಓಡಿಹೋದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆ ಗುನ್ನೆ ನಂ. 116/2011 ಕಲಂ 324, 34 ಐಪಿಸಿ. ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.