POLICE BHAVAN KALABURAGI

POLICE BHAVAN KALABURAGI

30 June 2011

GULBARGA DISTRICT REPORTED CRIMES

ಹಲ್ಲೆ ಪ್ರಕರಣ :

ಸ್ಟೇಶನ ಬಜಾರ ಠಾಣೆ : ಶ್ರೀ ಮಿರ್ಜಾ ಬೇಗ್ ತಂದೆ ಮಿರ್ಜಾ ಹಸನ್ ಬೇಗ ಸಾ|| ಜೈನ್ ಹಾಸ್ಟೆಲ್ ಹಿಂದುಗಡೆ ಶಹಬಾಜ ಕಾಲೋನಿ ಗುಲಬರ್ಗಾ ರವರು ರಾತ್ರಿ ತಮ್ಮ ರೆಡಿಮೆಡ್ ಅಂಗಡಿ ಮುಚ್ಚಿಕೊಂಡು ರಹಿಮತ ನಗರದಿಂದ ಹೊರಟಾಗ ಅಜರ ರಹೆಮತ ನಗರ ಇತನು ನನಗೆ ನಿನ್ನ ಅಂಗಡಿಗೆ ಬಂದರೆ ಮರ್ಯಾದೆ ಕೊಡುವದಿಲ್ಲ ಅಂತಾ ಅವಾಚ್ಯವಾಗಿ ಬೈದು ಬ್ಲೇಡನಿಂದ ದೇಹದ ಭಾಗದ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಬೆಂಕಿ ಅಪಘಾತ ಪ್ರಕರಣ :

ಬ್ರಹ್ಮಪೂರ ಠಾಣೆ : ಶ್ರೀ ರವಿಂದ್ರನಾಥ .ಬಿ.ನಾಡಗೌಡ ಶ್ರೀಸಿದ್ದೇಶ್ವರ ಪೇಂಟ್ಸ ಹಾಗು ಹಾರ್ಡವೇರ ದರ್ಶನ ಎಡಿಶನ್ ಕಾಂಪ್ಲೇಕ್ಸ ಜಗತ ಗುಲಬರ್ಗಾ ರವರು ನಮ್ಮ ಅಂಗಡಿಗೆ ದಿನಾಂಕ: 28-06-2011 ರಂದು ರಾತ್ರಿ ಅಂಗಡಿಗೆ ಬೆಂಕಿ ಬಿದ್ದು ಅಂಗಡಿಯಲ್ಲಿದ್ದ ಪೇಂಟ್ ಸಾಮಾನುಗಳು, ಕಂಪ್ಯೂಟರ್ ಯಂತ್ರಗಳು ಹಾಗು ವಿದ್ಯುತ್ ಮೀಟರ ಮೀರಟಗಳು ಹೀಗೆ ಒಟ್ಟು 5,26,000-00 ಕಿಮ್ಮತ್ತಿನ ಮೌಲ್ಯದ್ದು ಆಕಸ್ಮಿಕವಾಗಿ ಸುಟ್ಟು ಕರಲಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

GULBARGA DISTIRCT REPORTED CRIMES

ಕಳ್ಳತನ ಪ್ರಕರಣ

ರೋಜಾ ಠಾಣೆ
: ಶ್ರೀ ಸುಧೀರ ತಂದೆ ಮಲ್ಲಿಕಾರ್ಜುನ ಅವಟೆ ಸಾ|| ಗಂಜ ಕಾಲೋನಿ ಗುಲಬರ್ಗಾ ರವರು ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಬಾಗಿಲದ ಕೊಂಡಿ ಮುರಿದು ಅಡಿಗೆ ಮನೆಯಲ್ಲಿಟ್ಟದ್ದ 4 ತಾಮ್ರದ ಹಾಂಡೆ, ತಾಮ್ರದ ಕೊಡಗಳು , ತಾಮ್ರದ ಪೂಜಾ ಸಾಮಾನುಗಳು, ನಗದು ಹಣ 4700/-ರೂ. ಹೀಗೆ ಒಟ್ಟು ಅ.ಕಿ.19700/-ರೂಪಾಯಿ ಬೆಲೆ ಬಾಳುವದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಸುಲೇಪೇಟ ಠಾಣೆ : ಶ್ರೀ ಅಶೊಕರಡ್ಡಿ ತಂದೆ
ಬಸವಂತರೆಡ್ಡಿ ಹಸರಗುಂಡಗಿ ಸಾ||
ಪರದರ ಮೊತಕಪಳ್ಳಿ ರವರು ನನ್ನ ಮಗಳು ರೇಖಾ ಮತ್ತು ಇತರ ಹುಡಗ ಹುಡಗಿಯವರು ನಮ್ಮೂರಿನಿಂದ
ಗರಗಪಳ್ಳಿ
ಗ್ರಾಮಕ್ಕೆ ಶಾಲೆಗೆ ಹೊಗುತ್ತಿರುವಾಗ ಮೊತಕಪಳ್ಳಿ ಗ್ರಾಮದ ಹತ್ತಿರ
ರೊಡಿನಲ್ಲಿ ಎದುರಿನಿಂದ ಗುಡ್ಸ ಆಟೊ
ನಂ
ಕೆ.-32 ಬಿ-4267 ನೇದ್ದರ ಚಾಲಕ
ನಬಿಪಟೇಲ ತಂದೆ
ಫತ್ರು ಪಟೇಲ
ಸಾ||
ದಸ್ತಾಪೂರ
ಇತನು ತನ್ನ ವಾಹನವನ್ನು ಅತಿವೇಗ ಮತ್ತು
ಅಜಾಗರೂಕತೆಯಿಂದ
ಚಲಾಯಿಸಿ ಕೊಂಡು ಬಂದು ತನ್ನ
ಮಗಳು ರೇಖಾ ಇವಳಿಗೆ ಡಿಕ್ಕಿ ಹೊಡೆದಿದ್ದರಿಂದ ರೇಖಾ ಇವಳಿಗೆ ತಲೆಗೆ ಮತ್ತು ದೇಹದ
ಇತರೆ ಭಾಗಗಳಿಗೆ ರಕ್ತಗಾಯಗಳಾಗಿದ್ದು, ಉಪಚಾರ ಕುರಿತು ಚಿಂಚೋಳಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ರೇಖಾ
ಇವಳು ಮೃತ ಪಟ್ಟಿರುತ್ತಾಳೆ
ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಜಾತಿ ನಿಂದನೆ ಪ್ರಕರಣ :

ಚೌಕ ಠಾಣೆ :
ಶ್ರೀ ಮಂಜುನಾಥ ತಂದೆ ಚಂದ್ರಶಾ ಮದನಕರ ಸಾಃ ತಾಜಸುಲ್ತಾನಪೂರ ಗುಲಬರ್ಗಾ ರವರು ನಾನು ದಿನಾಂಕ 29.06.2011 ರಂದು ಮದ್ಯಾಹ್ನ ಪ್ರಿಯಾ ಬಾರನಿಂದ ನನ್ನ ಗೆಳೆಯರಾದ ಪ್ರಕಾಶ ಮತ್ತು ಹಣಮಂತ ರವರು ಕೂಡಿಕೊಂಡು ಬಾರಿನಿಂದ ಹೊರಗಡೆಗೆ ಬರುತಿದ್ದಾಗ ಬಾರ ಮ್ಯಾನೇಜರನಾದ ಬಸವರಾಜ ಹಡಗಿಲ ಇತನು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

29 June 2011

GULBARGA DISTIRICT REPORTED CRIMES

ಕಳ್ಳತನ ಪ್ರರಕಣ :
ಅಶೋಕ ನಗರ ಠಾಣೆ : ಡಾ: ಮುರುಗೇಶ ತಂದೆ ಗುರುಶಾಂತಪ್ಪ ಪಸ್ತಾಪುರ ಸಾ|| ಭಗವತಿ ನಗರ ಗುಲಬರ್ಗಾ ರವರು ನಮ್ಮ ಪಸ್ತಾಫೂರ ದವಾಖಾನೆಯ ಜನರೇಟರ್ ಕೋಣೆಯ ಬಾಗಿಲ ಕೀಲಿ ಮುರಿದು ಜನರೇಟರ ಬ್ಯಾಟರಿ ನಂ. 95ಇ01612204ಸಿ10449 ನೇದ್ದು ಅ.ಕಿ. 10,000/- ರೂ ಕಿಮ್ಮತ್ತಿನದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಅಪಘಾತ ಪ್ರರಕಣ :

ಗ್ರಾಮೀಣ ಠಾಣೆ : ಶ್ರೀ ಶ್ರೀನಿವಾಸ ತಂದೆ ಸೂರ್ಯಕಾಂತ ಚವ್ಹಾಣ ಸಾ|| ಐಯರವಾಡಿ ಹುಮನಾಬಾದ ಬೆಸ ಹತ್ತಿರ ಗುಲಬರ್ಗಾ ರವರು ನಾನು ಮತ್ತು ನಮ್ಮ ತಂದೆ ನನ್ನ ಪರಿಚಯದವರಾದ ಸಿದ್ದಾರೋಡ ಅರಳಿಮರ ಎಲ್ಲರು ಕೂಡಿಕೊಂಡು ಸ್ವಾಮಿ ಸಮರ್ಥ ಮಂದಿರಕ್ಕೆ ಹೋಗುವ ಕುರಿತು ಆಟೋದಲ್ಲಿ ಹುಮನಾಬಾದ ರಿಂಗ ರೋಡಿಗೆ ಬಂದು ಅಲ್ಲಿ ಸೋಮಶೇಖರ ದುತ್ತರಗಿ ಹಾಗೂ ಸಿದ್ದಾರೋಡ ಅರಳಿಮರ ಇವರು ನಿಂತಿದ್ದು ಅವರ ಹತ್ತಿರ ಹೋಗುವ ಕುರಿತು ರೋಡ ದಾಟಲು ಹೋಗುವಾಗ ನಮ್ಮ ತಂದೆಗೆ ಲಾರಿ ನಂ ಕೆಎ 32 ಎ-4218 ಲಾರಿ ಚಾಲಕ ಕಾಶಪ್ಪಾ ಅಲ್ದಿಹಾಳ ಇತನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ತಂದೆಗೆ ಡಿಕ್ಕಿ ಪಡಿಸಿದ್ದು, ಡಿಕ್ಕಿ ಪಡಿಸಿದ್ದರ ಪರಿಣಾಮ ಭಾರಿ ರಕ್ತಗಾಯವಾಗಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಸಿದ್ದು ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.