POLICE BHAVAN KALABURAGI

POLICE BHAVAN KALABURAGI

25 August 2020

KALABURAGI DISTRICT REPORTED CRIMES

 ರಸ್ತೆ ಅಪಘಾತ ಮರಣಾಂತಿಕ:-

ನರೋಣಾ ಠಾಣೆ 

           ದಿನಾಂಕ:24/08/2020 ರಂದು ಫಿರ್ಯಾದಿ ಶ್ರೀ ಸಂಜುಕುಮಾರ ತಂದೆ ಶಿವಪುತ್ರಪ್ಪಾ ವಗ್ಗಿ ಸಾ:ಬೋದನ ಇವರು ಠಾಣೆಗೆ ಇವರು ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ:23/08/2020 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಮಲ್ಲಿಕಾರ್ಜುನ ಸುರೇಶ ಈತನು ಮೊಟಾರ್ ಸೈಕಲ್ ನಂ ಕೆಎ-33, ಕ್ಯೂ-0729 ನೇದ್ದರ ಮೇಲೆ ಮಲ್ಲಿಕಾರ್ಜುನ, ಬಾಬು ಮತ್ತು ಸುರೇಶ ಮೂರು ಜನರು ಕೂಡಿಕೊಂಡು ಬೋದನದಿಂದ ನರೋಣಾಕ್ಕೆ ಹೋಗುತ್ತಿರುವಾಗ ಬೋದನ ಕ್ರಾಸ ಹತ್ತಿರ ಹೋಗುತ್ತಿದ್ದಂತೆ ಎದುರುನಿಂದ ಯಾವುದೋ ಒಂದು ಕ್ರೂಜರ್ ಚಾಲಕನು ತನ್ನ ವಶದಲ್ಲಿರುವ ಕ್ರೂಜರನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿಕೊಂಡು ಬಂದು ಮುಂದಿನಿಂದ ಜೋರಾಗಿ ಡಿಕ್ಕಿ ಹೊಡೆದು ಅಪಘಾತಗೊಳಿಸಿ ನಿಲ್ಲದೇ ತನ್ನ ಕ್ರೂಜರ್ ಸಮೇತ ಬೋದನ ಗ್ರಾಮದ ಕಡೆಗೆ ಹೋಗಿದ್ದರಿಂದ ಮೋ.ಸೈಕಲ ಚಲಾಯಿಸುತ್ತಿದ್ದ ಮಲ್ಲಿಕಾರ್ಜುನನಿಗೆ ಮತ್ತು ಮೋ.ಸೈಕಲ ಹಿಂದೆ ಕುಳಿತ ಸುರೇಶ ಗಾಜರೆ ವಯಸ್ಸು:27 ವರ್ಷ, ಮತ್ತು ಬಾಬು ಜಾದವ್ ವಯಾ:29 ವರ್ಷ ಇವರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು. ಮಲ್ಲಿಕಾರ್ಜುನನು ಬೇಹೊಷ ಆಗಿದ್ದರಿಂದ  ಉಪಚಾರ ಕುರಿತು 108  ಅಂಬೂಲೆನ್ಸ್ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಆಸ್ಪತ್ರೆಗೆ ತರುವಾಗ ಮಾರ್ಗ ಮದ್ಯ ಕಲಬುರಗಿ ಸುಲ್ತಾನಪೂರ ಕ್ರಾಸ್ ಹತ್ತಿರ ಮಲ್ಲಿಕಾರ್ಜುನನು ಮೃತಪಟ್ಟಿದ್ದರಿಂದ ಈ ಬಗ್ಗೆ ಅಪರಿಚಿತ ಕ್ರೋಜರ ಜೀಪ ಮತ್ತು ಅದರ ಚಾಲಕನ ಮೇಲೆ ನರೋಣಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

 ಕೊಲೆಗೆ ಪ್ರಯತ್ನ :-

ಅಫಜಲಪೂರ ಠಾಣೆ :

                    ದಿನಾಂಕ: 24-08-2020 ರಂದು ಫಿರ್ಯಾದಿ ಶ್ರೀ ಶಿವುಕುಮಾರ ತಂದೆ ಮಲಕಪ್ಪ ನಾಟಿಕಾರ ರಾಜ್ಯ ಕಾರ್ಯದರ್ಶಿಗಳು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕಾಂಗ್ರೇಸ್ ಮುಖಂಡರು ಸಾ|| ಹವಳಗಾ ತಾ|| ಅಫಜಲಪೂರ ಇವರು ನೀಡಿದ ಫಿರ್ಯಾದು ಸಾರಾಂಶವೆನೆಂದರೆ, ನನ್ನ ರಾಜಕಿಯ ವಿಷಯದಲ್ಲಿ ನಮ್ಮೂರಿನ ಮಾಳಪ್ಪ ತಂದೆ ಸಂಗಪ್ಪ @ ಸಿದ್ರಾಮಪ್ಪ  ಜಗಲಗೊಂಡ ಈತನು  ನನಗೆ ವಿರೋದ ಮಾಡಿ ನನ್ನ ಮೇಲೆ ದ್ವೇಷ ಸಾಧಿಸಿಕೊಂಡು ಈಗ ಸುಮಾರು 02 ತಿಂಗಳ ಹಿಂದೆ ಸದರಿ ಮಾಳಪ್ಪನು ನನಗೆ ನಿನ್ನನ್ನು ಒಂದು ಕೈ ನೋಡಿಕೊಳ್ಳುತ್ತೇನೆ. ನನ್ನ ಬೆನ್ನ ಹಿಂದೆ ರಾಜಕೀಯ ಮುಖಂಡರು ಇದ್ದಾರೆ ಎಂದು ಜೀವ ಬೆದರಿಕೆ ಹಾಕುತ್ತಾ ಬಂದಿರುತ್ತಾನೆ.  ದಿನಾಂಕ 24-08-2020 ರಂದು ಮದ್ಯ ರಾತ್ರಿ ಅಂದಾಜು 01:00 ಗಂಟೆ ಸುಮಾರಿಗೆ ನಮ್ಮೂರಿನ ಮಾಳಪ್ಪ ತಂದೆ ಸಂಗಪ್ಪ @ ಸಿದ್ರಾಮಪ್ಪ ಜಗಲಗೊಂಡ ಮತ್ತು ಇನ್ನು 3 ಜನ ಅಫರಿಚಿತರು ನಮ್ಮ ಮನೆಯ ಕಂಪೌಂಡ ಒಳಗೆ ಬಂದು ನಮ್ಮ ಇನೊವಾ ಕಾರಿನ ಮುಂಭಾಗದ ಗ್ಲಾಸಿನ ಮೇಲೆ ಕಲ್ಲು ಎತ್ತಿ ಹಾಕಿದರು. ಮಾಳಪ್ಪನು ತನ್ನ ಕೈಯಲ್ಲಿ ಪಿಸ್ತೂಲು ಹಿಡಿದುಕೊಂಡಿದ್ದನು. ಆಗ ನನ್ನ ತಾಯಿ ಮತ್ತು ತಮ್ಮ ಶ್ರೀಶೈಲ ಇಬ್ಬರು ಚೀರಿದಾಗ ನಾಲ್ಕು ಜನರು ಕಂಪೌಂಡ್ ಗೋಡೆ ಹಾರಿ ಹೋಗಿರುತ್ತಾರೆ. ಮಾಳಪ್ಪನು ಕಂಪೌಂಡ್ ಗೋಡೆ ಹಾರುತ್ತಿದ್ದಾಗ ಅವನ ಕೈಯಲ್ಲಿದ್ದ ಪಿಸ್ತೂಲು ಕೆಳಗೆ ಬಿದ್ದಿರುತ್ತದೆ ಸದರಿ ಪಿಸ್ತೂಲು ಇನ್ನು ಸ್ಥಳದಲ್ಲಿಯೆ ಇರುತ್ತದೆ. ನಮ್ಮೂರಿನ ಮಾಳಪ್ಪ ತಂದೆ ಸಂಗಪ್ಪ @ ಸಿದ್ರಾಮಪ್ಪ ಜಗಲಗೊಂಡ ಈತನು ದ್ವೇ಼ಷದಿಂದ ಹಾಗೂ ಬೇರೆಯವರ ಕುಮ್ಮಕ್ಕಿನಿಂದ ನನ್ನನ್ನು ಕೊಲೆ ಮಾಡಬೆಕೆಂದು ತನ್ನ ಕೈಯಲ್ಲಿ ಪಿಸ್ತೂಲು ಹಿಡಿದುಕೊಂಡು ನಮ್ಮ ಮನೆಯ ಕಂಪೌಂಡ ಒಳಗೆ ಪ್ರವೇಶ ಮಾಡಿ, ನಾನು ಸಿಗದೆ ಇದ್ದರಿಂದ ನನ್ನ ಕಾರ ನಂ ಕೆಎ-32 ಎಎ-8055 ನೇದ್ದರ ಗ್ಲಾಸ ಒಡೆದು ಹಾನಿ ಮಾಡಿದ್ದರಿಂದ ಮಾಳಪ್ಪ ಜಗಲಗೊಂಡ ಹಾಗೂ ಆತನ 03 ಜನ ಸಹಚರರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

19 August 2020

Kalaburagi District Press Note for Ganesh Festival

: ಪತ್ರಿಕಾ ಪ್ರಕಟಣೆ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರಿಂದ ದಿನಾಂಕ 19-08-2020:

          ಶ್ರೀ ಗಣೇಶ ಚತುರ್ಥಿ ಹಬ್ಬವು ದಿನಾಂಕ 22-08-2020 ರಂದು ಆಚರಣೆಗೆ ಬರಲಿದೆ. ಈ ಹಬ್ಬವನ್ನು ಜಿಲ್ಲೆಯಲ್ಲಿ ಪಾರಂಪರಿಕವಾಗಿ ಪ್ರತಿ ವರ್ಷವೂ ವಿಜೃಂಬಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡಿರುವುದರಿಂದ ಶ್ರೀ ಗಣೇಶ ಉತ್ಸವ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ರಾಜ್ಯ ಸರ್ಕಾರದ ಮಾರ್ಗ ಸೂಚಿ ಅನ್ವಯ ಆಚರಿಸಬೇಕಾಗಿರುತ್ತದೆ. ಹಿಗಿದ್ದು ಜಿಲ್ಲೆಯಲ್ಲಿ ಸಾರ್ವಜನಿಕರು ಸರ್ಕಾರದ ಈ ಕೆಳಕಂಡ ನಿಯಮಗಳನ್ನು ಪಾಲಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

 1.       ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ದೇವಸ್ಥಾನದೊಳಗೆ ತಮ್ಮ ಮನೆಗಳಲ್ಲಿ ಆಥವಾ ಸರ್ಕಾರಿ/ಖಾಸಗಿ/ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬಹುದು.

 2.   ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವವರು ಗಣೇಶ ಮೂರ್ತಿಯನ್ನು ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ ಎರಡು ಅಡಿ ಮೀರದಂತೆ ಪ್ರತಿಷ್ಠಾಪಿಸುವುದು.

 3.  ಪಾರಂಪರಿಕ ಗಣೇಶೋತ್ಸವಕ್ಕಾಗಿ, ಗಣೇಶೋತ್ಸವ ಸಮೀತಿಗಳು/ ಮಂಡಳಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಮುನಿಸಿಪಲ್ ಕಾರ್ಪೋರೇಷನ/ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯನ್ನು ಪಡೆಯತಕ್ಕದ್ದು. ಒಂದು ವಾರ್ಡಗೆ / ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶೋತ್ಸವವನ್ನು ಮಾತ್ರ ಆಚರಿಸಲು ಪ್ರೋತ್ಸಾಹಿಸುವುದು.

 4.   ಇಂತಹ ಸ್ಥಳಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸುವುದು. ಒಮ್ಮೆಲೆ 20ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾದಿಗಳಿಗೆ ಅನುವು ಮಾಡುವುದು.

 5.  ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ/ಸಂಗೀತ/ನೃತ್ಯ ಇನ್ನೀತರೆ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವದಿಲ್ಲ.

 6.  ಶ್ರೀ ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿರ್ಸಜಿಸುವಾಗ ಯಾವುದೇ ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭಗಳಲ್ಲಿ ಯಾವುದೇ ರೀತಿಯ ಮೆರವಣಿಗೆಯನ್ನು ಹೊರಡಿಸತಕ್ಕದಲ್ಲ / ಮಾಡತಕ್ಕದ್ದಲ್ಲ ಇದನ್ನು ಸಂಪೂರ್ಣವಾಗಿ ನಿರ್ಬಂದಿಸಿದೆ

 7.     ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸುವುದು ಮತ್ತು ಸರ್ಕಾರಿ/ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಅತಿ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಮಹಾನಗರ ಪಾಲಿಕೆ/ ಜಿಲ್ಲಾಡಳಿತ /ಹತ್ತಿರದ ಸ್ಥಳೀಯ ಸಂಸ್ಥೆಗಳ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಮೋಬೈಲ್ ಟ್ಯಾಂಕಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರಗಳಲ್ಲಿ ವಿಸರ್ಜಿಸುವುದು.

 8. ಶ್ರೀ ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನ/ಸಾರ್ವಜನಿಕ ಸ್ಥಳಗಳಲ್ಲಿ ದಿನನಿತ್ಯ ನ್ಯಾನಿಟೈಸೇಷನ್ ಮಾಡುವುದು ಹಾಗೂ ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾದಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ ವ್ಯವಸ್ಥೆಯನ್ನು ಕಲ್ಪಿಸುವುದು.

 9.  ದರ್ಶನಕ್ಕಾಗಿ ಬರುವ ಭಕ್ತರಿಗೆ ಕನಿಷ್ಟ 6 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು ಹಾಗೂ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳತಕ್ಕದ್ದು.

 10.     ಭಕ್ತಾದಿಗಳು ಮತ್ತು ಸಾರ್ವನಿಕರು ಕಡ್ಡಾಯವಾಗಿ ಮುಖಗವಸು ಧರಿಸತಕ್ಕದ್ದು.

 11.   ಕೋವಿಡ್-19 ಸಾಂಕ್ರಾಮಿಕ ಸೊಂಕು ಹರಡುವಿಕೆಯನ್ನು ತಡಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೆ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಅಲ್ಲದೆ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಎಲ್ಲಾ ಇಲಾಖೆಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಸಹ ಕಡ್ಡಾಯವಾಗಿ ಪಾಲಿಸತಕ್ಕದ್ದು.

 12.  ಶ್ರೀ ಗಣೇಶೋತ್ಸವ ಆಚರಣೆ ಕಾಲಕ್ಕೆ ಸಂದರ್ಭಕ್ಕನುಗುಣವಾಗಿ ಸರ್ಕಾರ, ಜಿಲ್ಲಾಡಳಿತ ಪೊಲೀಸ್, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆ/ಪ್ರಾಧೀಕಾರಗಳಿಂದ ಹೊರಡಿಸಲಾದ ಎಲ್ಲಾ ಆದೇಶ/ ನಿರ್ದೇಶನ ಹಾಗೂ ಸೂಚನೆಗಳನ್ನು ಸಹ ಕಡ್ಡಾಯವಾಗಿ ಪಾಲಿಸತಕ್ಕದ್ದು.

 13. ಹಬ್ಬ-ಹರಿದಿನಗಳು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮತ್ತು ಸಾಮರಸ್ಯಗಳು ಉಂಟಾಗಲು ಪೂರಕವಾಗಿರುವುದರಿಂದ ಶ್ರೀ ಗಣೇಶೋತ್ಸವ ಹಬ್ಬವನ್ನು ಅದೇ ರೀತಿಯಿಂದಲೆ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಕಾಪಾಡುವುದು. 

 14.  ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ/ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005 ಭಾರತೀಯ ದಂಡ ಸಂಹಿತೆ ಕಲಂ 188ರ ಅಡಿಯಲ್ಲಿ ಶಿಸ್ತಿನ/ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪ-ಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು.

                                                                                                                 ಪೊಲೀಸ್ ಅಧೀಕ್ಷಕರು

                                                                                             ಕಲಬುರಗಿ ಜಿಲ್ಲೆ

 ಗೆ,

ಸಂಪಾದಕರು

ಕಲಬುರಗಿ ಜಿಲ್ಲಾ/ನಗರದ ಎಲ್ಲಾ ಪತ್ರಿಕೆಗಳು.


19 June 2020

KALABURAGI DISTRICT PRESS NOTE

                                                                   ಪೊಲೀಸ್ಅಧೀಕ್ಷಕರವರ ಕಛೇರಿ
                                                                         ದಿನಾಂಕ:19/06/2020
ಪತ್ರಿಕಾ ಪ್ರಕಟಣೆ
        ಮೂಲಕ ಕಲಬುರಗಿ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ತಿಳಿಯಪಡಿಸುವದೆನೆಂದರೆ, ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಕುರಿತು ಆರೋಗ್ಯ ಇಲಾಖೆಯಿಂದ ಶಂಕಿತ ವ್ಯಕ್ತಿಗಳಿಂದ ಮಾದರಿ (ಸ್ಯಾಂಪಲ್)‌ ನ್ನು ಸಂಗ್ರಹಿಸಿ ಕಳುಹಿಸಲಾಗುತ್ತದೆ. ಅದರ ವರದಿಯು ಪಾಸಿಟಿವ್ಅಂತಾ ಬಂದ ತಕ್ಷಣ ಅಂತಹ ವ್ಯಕ್ತಿಗಳನ್ನು ನಿಗದಿತ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಕಳಹಿಸಿಕೊಡಲಾಗುತ್ತಿದೆ. ಆದರೇ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಕೊರೊನಾ ಪಾಸಿಟಿವ್ಇರುವಂತಹ ವ್ಯಕ್ತಿಗಳನ್ನು ಅವರ ವಾಸಸ್ಥಾನ ದಿಂದ  ಆಸ್ಪತ್ರೆಗೆ ಕಳುಹಿಸುವ ಸಮಯದಲ್ಲಿ ಕೆಲವು ಪಾಸಿಟಿವ್ಇರುವಂತಹ ವ್ಯಕ್ತಿಗಳು ಚಿಕಿತ್ಸೆ ಕುರಿತು ಹೋಗಲು ಒಪ್ಪದೆ ಮೊಂಡುತನ ಪ್ರದರ್ಶೀಸುವದು ಮತ್ತು ಆರೋಗ್ಯ ಇಲಾಖೆ ಹಾಗೂ ಪೊಲೀಸ್ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರರ್ತವ್ಯಕ್ಕೆ ಅಡಚಣೆ ಮಾಡಿದ್ದು ಇರುತ್ತದೆ.

        ಸದರಿ ಪಾಸಿಟಿವ್ಬಂದಂತಹ ವ್ಯಕ್ತಿಗಳನ್ನು ಆಸ್ಪತ್ರೆಗೆ ಕಳುಹಿಸುವದರ ಉದ್ದೇಶ ಅವರ ಆರೋಗ್ಯ ಕಾಪಾಡಲು ಮತ್ತು ಕೊರೊನಾ ವೈರಸನ್ನು ಇನ್ನೋಬ್ಬರಿಗೆ ಹರಡುವದನ್ನು ತಡೆಯುವದಾಗಿರುತ್ತದೆ. ಇದನ್ನು ಅರಿಯದೇ ಅದಕ್ಕಾಗಿ ಕೆಲಸ ಮಾಡುವಂತಹ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ರ್ತವ್ಯಕ್ಕೆ ಅಡ್ಡಿಪಡಿಸುವದನ್ನು ಇಲಾಖೆಯು ಗಂಭಿರವಾಗಿ ಪರಿಗಣಿಸಿರುತ್ತದೆ. ಇನ್ನೂ ಮುಂದೆ ಜಿಲ್ಲೆಯ ಯಾವುದೇ ಸ್ಥಳಗಳಲ್ಲಿ ಕೊರೊನಾ ಪಾಸಿಟಿವ್ಬಂದಂತಹ ವ್ಯಕ್ತಿಗಳು ಆರೋಗ್ಯ ಇಲಾಖೆಯಿಂದ ನೀಡುವ ಸೂಚನೆಗಳನ್ನು ಪಾಲಿಸಿ ಸಹಕರಿಸಲು ವಿನಂತಿಕೊಳ್ಳಲಾಗಿದೆ. ಒಂದು ವೇಳೆ  ಇದಕ್ಕೆ ವಿರೋಧ ವ್ಯಕ್ತಪಡಿಸಿದಲ್ಲಿ ಪೊಲೀಸ್ಇಲಾಖೆಯಿಂದ ಅಂತಹ ವ್ಯಕ್ತಿಗಳ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಲಾಗುವದು.
                                                                                 ಸಹಿ/-
                                                                         ಪೊಲೀಸ್ಅಧೀಕ್ಷಕರು
                                                                            ಕಲಬುರಗಿ ಜಿಲ್ಲೆ