POLICE BHAVAN KALABURAGI

POLICE BHAVAN KALABURAGI

13 April 2020

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ:12/04/2020 ರಂದು ಮಧ್ಯಾಹ್ನ ಮುನ್ನಳ್ಳಿ ಗ್ರಾಮದ ರಾಚಣ್ಣಾ ತಂದೆ ಮಲಕಪ್ಪಾ ಪಟ್ಟಣ ಇವರ ಹೊಲದ ಪಕ್ಕ ಹಳ್ಳದ ದಂಡೆಯ ಮೇಲೆ ಬೆವಿನ ಮರದ ಕೆಳಗೆ ಸುಮರು 8-10 ಜನರು ದುಂಡಾಗಿ ಕುಳಿತು ಇಸ್ಪಿಟ್ ಎಲೆಗಳ ಸಾಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಹಾಗೂ ಸಿಪಿಐ ಸಾಹೇಬರು ಆಳಂದ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ನರೋನಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸರ್ಕಾರಿ  ಜೀಪ್ ನಂ ಕೆಎ32-ಜಿ476 ನೇದ್ದರಲ್ಲಿ ಮುನ್ನಳ್ಳಿ ಗ್ರಾಮ ಸೀಮಾಂತರದಲ್ಲಿ ಹೋಗಿ ವಿಚಾರಿಸುತ್ತಾ, ರಾಚಣ್ಣಾ ತಂದೆ ಮಲಕಪ್ಪಾ ಪಟ್ಟಣ ಇವರ ಹೊಲಕ್ಕೆ ಹೋಗಿ ಹೊಲದ ಬಂದಾರಿಯ ಮರೆಯಲ್ಲಿ ನಿಂತು ನೋಡಿದಾಗ ಹೊಲದ ಪಕ್ಕ ಹಳ್ಳದ ದಂಡೆಯ ಮೇಲೆ ಬೆವಿನ ಮರದ ಕೆಳಗೆ ಸುಮಾರು 9ಜನರು ದುಂಡಾಗಿ ಕುಳಿತು ಇಸ್ಟಿಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಇಟ್ಟು ಅಂದರ ಬಾಹರ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಸುಮಾರು 4ಜನ ಓಡಿ ಹೋಗಿದ್ದು 5ಜನ ಸಿಕ್ಕಿರುತ್ತಾರೆ. ಸದರಿಯವರ ಹೆಸರು ವಿಳಾಸ ವಿಚಾರಿಸಲಾಯಿತು 1)ಶರಣಬಸಯ್ಯ ತಂದೆ ಪರಮೇಶ್ವರಯ್ಯ ಸ್ವಾಮಿ,. 2)ನಾರಾಯಣ ತಂದೆ ಗುಂಡೇರಾವ ಇಂಗಳೆ, 3)ದಿಗಂಬರ ತಂದೆ ಹಣಮಂತರಾವ ಇಂಗಳೆ, 4)ನಂದೇಶ ತಂದೆ ಶಿವಶರಣಪ್ಪಾ ಪಾಟೀಲ್, 5) ಸಂಗಯ್ಯಸ್ವಾಮಿ ತಂದೆ ವಿಶ್ವನಾಥಯ್ಯ ಮಠಪತಿ, ಸಾ: ಎಲ್ಲರು ಮುನ್ನಳ್ಳಿ,  ಅಂತಾ ತಿಳಿಸಿದ್ದು ಓಡಿ ಹೋದವರ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಅವರ ಹೆಸರು 6) ರವೀಂದ್ರ ತಂದೆ ಶಿವಶರಣಪ್ಪಾ ವಾಲಿ, 7) ವೆಂಕಟ್ ತಂದೆ ಮಾಲು ಅವತಾಡೆ, 8) ಲಿಂಗರಾಜ ತಂದೆ ಮಾಹಾದೇವ ಜಾನೆ, 9)ಸಂಜು ತಂದೆ ಮಲ್ಲೇಶಪ್ಪಾ ಕೊಳ್ಳಿ, ಸಾ:ಮುನ್ನಳ್ಳಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 2640/- ರೂ ನಗದು ಹಣ 52 ಇಸ್ಪೀಟ ಎಲೆಗಳು ಮತ್ತು  1)ಒಂದು ನೀಲಿ ಮತ್ತು ಕಪ್ಪು ಬಣ್ಣದ ಸ್ಪ್ಲೈಂಡರ್ ಪ್ಲಸ್ ಮೊಟಾರ್ ಸೈಕಲ್ ನಂ ಕೆಎ 32 ಇ-ಎಂ 6761 ಅಂದಾಜು ಕಿಮ್ಮತ್ತು 30000/- ಸಾವಿರ, 2)ಒಂದು ನೀಲಿ ಮತ್ತು ಕಪ್ಪು ಬಣ್ಣದ ಹೀರೊಹೊಂಡಾ ಸ್ಪ್ಲೈಂಡರ್ ಪ್ರೋ ಮೊಟಾರ್ ಸೈಕಲ್ ನಂ ಕೆಎ32-ವೈ8781 ಅಂದಾಜು ಕಿಮ್ಮತ್ತು 40000/- ಸಾವಿರ, 3)ಒಂದು ಕೆಂಪು ಮತ್ತು ಕಪ್ಪು ಬಣ್ಣದ ಹೊಂಡಾ ಡ್ರೀಮ್ ಮೊ.ಸೈ ನಂ ಕೆಎ32-ಇಎನ್0062 ಅಂ.ಕಿ ರೂ 50000/- 4)ಕೆಂಪು ಬಣ್ಣದ ಫ್ಯಾಷನ್ ಪ್ರೋ ಮೊ.ಸೈ ನಂ ಕೆಎ32-ಇಇ5358 ಅಂದಾಜ ಕಿಮ್ಮತ್ತ 25000/- ಸಾವಿರ, 5)ಕಪ್ಪು ಬಣ್ಣದ ಹಿರೋ ಸ್ಪೆಲೆಂಡರ್ ಮೊ.ಸೈ ನಂಬರ್ ಇರುವುದಿಲ್ಲ ಚೆಸ್ಸಿ ನಂಬರ್ ಪರೀಶೀಲಿಸಿದಾಗ MBLHAR0805JHG31010 ಅಂದಾಜು ಕಿಮ್ಮತ್ತ 65000/- ಹೀಗೆ 52 ಇಸ್ಟಿಪ್ ಎಲೆಗಳು 2640/- ನಗದು ಹಣ 5 ಮೊಬೈಲ್ ಹಾಗೂ 5 ಮೊಟಾರ್ ಸೈಕಲಗಳು ಇವೆಲ್ಲವುಗಳನ್ನು ಜಪ್ತಿ ಮಾಡಿಕೊಂಡು  ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು  ಪ್ರಕರಣ ದಾಖಲಿಸಲಾಗಿದೆ. 
ಆಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಧ್ಯ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 12-04-2020 ರಂದು ಕೊರೊನಾ ವೈರಸ್ ಕೋವಿಡ-19 ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ರಾಜ್ಯದ್ಯಂತ ಹಾಗೂ ರಾಷ್ಟ್ರಾಧ್ಯಂತ ಕಲಂ:133, 144 ಸಿಆರ್.ಪಿಸಿ ಪ್ರಕಾರ ಲಾಕ್ ಡೌನ ಘೊಷಿಸಿದ್ದು ಇರುತ್ತದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಾ ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತೀರ ಇದ್ದಾಗ ಚಿಂಚೋಳಿ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮೋಟಾರ ಸೈಕಲ ಮೇಲೆ ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಬಾದ-ರೇವೂರ ಮುಖ್ಯ ರೋಡಿಗೆ ಹೊಂದಿಕೊಂಡಿರುವ ಚಿಂಚೋಳಿ ಕ್ರಾಸ ಹತ್ತೀರ ಹೋಗುತ್ತಿದ್ದಂತೆ ನಮ್ಮ ಜೀಪ ಎದುರುಗಡೆ ಒಬ್ಬ ವ್ಯಕ್ತಿ ಮೋಟಾರ ಸೈಕಲ ಮೇಲೆ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು ಬಂದಿದ್ದು ನಮಗೆ ಸಂಶಯ ಬಂದು ಅದನ್ನು ನಿಲ್ಲಿಸುವಂತೆ ಕೈ ಸೂಚನೆ ಕೊಟ್ಟಾಗ ಆ ವ್ಯಕ್ತಿ ಮೋಟಾರ ಸೈಕಲ ನಿಲ್ಲಿಸಿ ನಮಗೆ ನೋಡಿ ಮೋಟಾರ ಸೈಕಲ ಮೇಲೆ ಇಳಿದು ಮೋಟಾರ ಸೈಕಲ ಬಿಟ್ಟು ಹಿಂದಕ್ಕೆ ಸರಿದನು  ಆಗ ನಾವು ಪಂಚರ ಸಮಕ್ಷಮ ಮೋಟಾರ ಸೈಕಲ ಹತ್ತಿರ ಹೋಗಿ ರಟ್ಟಿನ ಡಬ್ಬಿ ನೋಡಲಾಗಿ ಅದರಲ್ಲಿ ಮಧ್ಯದ ಬಾಟಲಿಗಳು ಇದ್ದವು ಆಗ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಲು ಹೋದಾಗ ಸದರಿ ಓಡಿ ಹೊದನು  ಆಗ ನಾವು ಸದರಿಯವನನ್ನು ಬೆನ್ನಟ್ಟಿದರೂ ಸಹ ನಮಗೆ ಸಿಗಲಿಲ್ಲ ಸದರಿ ವ್ಯಕ್ತಿ  ಸ್ಥಳದಲ್ಲಿ ಬಿಟ್ಟು ಹೋದ ಮೋಟಾರ ಸೈಕಲ ನಂಬರ ಮತ್ತು ರಟ್ಟಿನ ಬಾಕ್ಸನ್ನು ಪರಿಶೀಲಿಸಿ ನೋಡಲು ಮೋಟಾರ ಸೈಕಲ ನಂಬರ ಕೆ,ಎ-32 ಈಕ್ಯೂ-5483 ಅಂತ ಇರುತ್ತದೆ ಮತ್ತು ರಟ್ಟಿನ ಬಾಕ್ಸದಲ್ಲಿದ್ದ ಮಧ್ಯದ ಬಾಟಲಿಗಳನ್ನು ನೋಡಲು (01)ದೇಶಿ ದಾರು ಅಂತ ಬರೆದ 180 ಎಮ್,ಎಲ್.ಅಳತೆಯ 15 ಬಾಟಲಗಳು ಅ||ಕಿ||780 ನಂತರ ನಮ್ಮಿಂದ ತಪ್ಪಿಸಿಕೊಂಡು ಓಡಿ ಹೊದ ವ್ಯಕ್ತಿಯ ಹೆಸರು ಬಾತ್ಮಿದಾರರಿಗೆ ವಿಚಾರಿಸಿ ತಿಳಿದುಕೊಳ್ಳಲಾಗಿ 1)ಸಿದ್ದಪ್ಪ ತಂದೆ ವಿಠಲ ಪೂಜಾರಿ  ಸಾ||ಚಿಂಚೋಳಿ ಎಂದು ಗೊತ್ತಾಗಿರುತ್ತದೆ. ಸದರಿಯವುಗಳನ್ನು ಮತ್ತು ಮೋಟಾರ ಸೈಕಲ ಜಪ್ತಿ ಮಾಡಿಕೊಂಡು  ಅಫಜಲಪೂರ ಠಾಣೆಗೆ ಭಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ನೀಡಿದ್ದರಿಂದ ಹೇನಿನಪುಡಿ ವಿಷ ಕುಡಿದು ಮೃತಪಟ್ಟ ಪ್ರಕರಣ  :
ಜೇವರಗಿ ಠಾಣೆ : ಶ್ರೀಮತಿ ಕುತಿಜಾಬೇಗಂ ಗಂಡ ಮೈಹಿಬೂಬ  ಪಟೇಲ ಸಾ: ಬಿರಾಳ (ಬಿ),  ತಾ: ಜೇವರಗಿ ರವರ ಮಗಳಾದ ನೂರಜಾಬೇಗಂ ಇವಳಿಗೆ ಈಗ ಸುಮಾರು 4 ವರ್ಷದ ಹಿಂದೆ ಗೂಡೂರ  (ಎಸ್..) ಗ್ರಾಮದ ಮುಸ್ತಾಫ ತೇಲಿ  ಇತನ್ನೊಂದಿಗೆ ಜೇವರಗಿಯಲ್ಲಿ  ಮೈಹಿಬೂಬ ಪಂಕ್ಷನ ಹಾಲನಲ್ಲಿ  ಹಿರಿಯ ಸಮಕ್ಷಮದಲ್ಲಿ ಮದುವೆ ಮಾಡಿಕೊಟ್ಟಿರುತ್ತೆವೆ.  ಮದುವೆ ಮುಂಚಿತವಾಗಿ ಮಾತುಕತೆ ಆಡಿದಂತೆ ಮದುವೆ ಕಾಲಕ್ಕೆ ಎರಡು ತೊಲಿ ಬಂಗಾರ,  11000/- ರೂಪಾಯಿ ಹುಂಡಾ, ಮಂಚ ಗಾದಿ ಕಬ್ಬಿಣದ ಅಲಮಾರಿ ಅಡುಗೆ ಮಾಡುವ ಮನೆ ಬಳಕೆ ಹಾಂಡೆ ಬಾಂಡೆ  ತಾಮ್ರ ಕೊಡ  ವಸ್ತಗಳು ನನ್ನ ಅಳಿಯನಿಗೆ ಕೊಟ್ಟಿರುತ್ತೆವೆ.  ನನ್ನ ಮಗಳು  ನೂರಜಾಬೇಗಂ ಇವಳು ಮದುವೆಯಾದ ನಂತರ ತನ್ನ ಗಂಡನ್ನೊಂದಿಗೆ ಗೂಡುರ (ಎಸ್.ಎ) ಗ್ರಾಮದಲ್ಲಿ ತನ್ನ ಗಂಡನ ಮನೇಯಲ್ಲಿಯೇ ವಾಸವಾಗಿದ್ದಳು. ಅವಳಿಗೆ ಮೇಹಾರಬೇಗಂ,  ಮೈನ್ನೊದ್ದೀನ ಅಂತಾ ಇಬ್ಬರೂ ಮಕ್ಕಳಿರುತ್ತಾರೆ.  ಮದುವೆಯಾದ  ಸುಮಾರು 2-3  ವರ್ಷಗಳವರೆಗೆ ಅವಳ ಗಂಡ ಮತ್ತು ಗಂಡನ ಮನೆಯವರು ಅವಳಿಗೆ  ಸರಿಯಾಗಿಯೇ ನೊಡಿಕೊಂಡು ಬಂದಿರುತ್ತಾರೆ.  ನಂತರ ನನ್ನ ಮಗಳಿಗೆ ಅವಳ ಗಂಡ ಮತ್ತು ಅವಳ ಗಂಡನ ಮನೆಯವರು ವಿನಾಕಾರಣವಾಗಿ ಅವಳಿಗೆ ತೊಂದರೆ ಕೊಡುತ್ತಾ ಬಂದಿರುತ್ತಾರೆ.  ಮತ್ತು ನನ್ನ ಮಗಳು ನಮ್ಮ ಮನೆಗೆ ಬಂದಾಗ ನನಗೆ  ನನ್ನ ಗಂಡ ಮತ್ತು ಅತ್ತೆ ಬಾವಂದಿರು ಕೂಡಿಕೊಂಡು ನೀನಗೆ ಮನೆ ಕೆಲಸ, ಮತ್ತು ಅಡುಗೆ  ಸರಿಯಾಗಿ ಮಾಡಲು ಬರುವುದಿಲ್ಲಾ ಮತ್ತು ನೀನ್ನ ತವರು ಮನೆಯವರು ಮದುವೆ ಕಾಲಕ್ಕೆ ಇನ್ನೂ ಬಂಗಾರ ಕೊಡಬೇಕಾಗಿತ್ತು ಕೊಟ್ಟಿಲ್ಲಾ ನೀನ್ನ ತವರು  ಮನೆಯಿಂದ  ಬಂಗಾರ  ತೆಗೆದುಕೊಂಡು ಬಾ ಎಂದು ನನ್ನ ಸಂಗಡ ಜಗಳ ಮಾಡಿ ಹೊಡೆ ಬಡೆ  ಮಾಡಿ ಮಾನಸೀಕ ಮತ್ತು ದೈಹಿಕ  ತೊಂದರೆ  ಕೊಡುತ್ತಿದ್ದಾರೆ . ಎಂದು ನಮ್ಮ ಮುಂದೆ ಹೇಳಿದರಿಂದ ನನಗೆ  ಗೊತ್ತಾಗಿರುತ್ತದೆ.   ಅದಕ್ಕೆ . ನಾನು ಮತ್ತು ನನ್ನ ಗಂಡ ಇಬ್ಬರೂ ಗೂಡರ ಗ್ರಾಮಕ್ಕೆ  ಹೋಗಿ ನನ್ನ ಅಳಿಯನಿಗೆ ಮತ್ತು ಅವರ  ಮನೆಯವರಿಗೆ ಬುದ್ದಿ ಮಾತು ಹೇಳಿ ಬಂದಿರುತ್ತೆವೆ. ಆದರೂ ಕೂಡಾ ನನ್ನ ಮಗಳಿಗೆ ಅವಳ ಗಂಡ ಮತ್ತು ಅತ್ತೆ ಮಾವ ಬಾವಂದಿರರು ಕೂಡಿಕೊಂಡು  ಅವಳಿಗೆ ಬೈಯುವುದು ಹೊಡೆಯುವುದು ಮಾಡಿ ಮಾನಸೀಕ ಮತ್ತು ದೈಹಿಕ ಕಿರಕುಳ ಕೊಡುತಾ ಬಂದಿರುತ್ತಾರೆ. ನನ್ನ ಮಗಳು ಮನೆಯ ಮರ್ಯಾದೆಗೆ ಅಂಜಿ ಮತ್ತು ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ  ಯೋಚಿಸಿ ಅವರು ಕೊಡುವ ತೊಂದರೆ  ತಾಳುತ್ತಾ ಬಂದಿರುತ್ತಾಳೆ. ದಿನಾಂಕ 10/04/2020 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ ನನ್ನಅಳಿಯ ಇಮಾಮಸಾಬ  ಈತನು ನನಗೆ  ಹೇಳಿದ್ದನೆಂದೆನೆಂದರೆ ಗೂಡೂರ (ಎಸ್.ಎ) ಗ್ರಾಮದಿಂದ ಮುಸ್ತಾಫ ಈತನು  ಪೊನ ಮಾಡಿ  ನೂರಜಾಬೇಗಂ ಇವಳು ಮನೆಯಲ್ಲಿ ಸುಸ್ತಾಗಿ  ಬಿದ್ದಿರುತ್ತಾಳೆ.  ಅವಳಿಗೆ  ಜೇವರಗಿ ಸರಕಾರಿ ಆಸ್ಪತ್ರೆಗೆ  ತೆಗೆದುಕೊಂಡು ಬರುತ್ತಿದ್ದೆವೆ ಎಂದು  ಹೇಳಿರುತ್ತಾನೆ.  ಎಂದು ತಿಳಿಸಿದರಿಂದ   ನಾನು ಮತ್ತು ನನ್ನ ಮಗಳು  ಶಹಾಜಾಬೇಗಂ ಅವಳ ಗಂಡ ಇಮಾಮಸಾಬ ಮೂವರು  ಜೇವರಗಿ ಆಸ್ಪತ್ರೆಗೆ  ಹೋಗಿ ನೋಡಲು ನಮ್ಮ ಮಗಳು ಸತ್ತಿದ್ದಳು.  ನನ್ನ ಅಳಿಯನಿಗೆ ಕೇಳಲು ಅವನು  ಹೇಳಿದ್ದೆನೆಂದರೆ ರಾತ್ರಿ 9.೦೦ ಗಂಟೆಯ ಸುಮಾರಿಗೆ   ಮನೆಯಲ್ಲಿ ನೂರಜಾಬೇಗಂ ಇವಳು ಮನೆಯಲ್ಲಿದ್ದ ಹೇನಿನ ಪುಡಿ ಕುಡಿದು ಸುತ್ತಾಗಿ ಬಿದ್ದಾಗ,  ಅವಳಿಗೆ ಅಸ್ಪತ್ರೆ ತಂದಿರುತ್ತೆವೆ ಅವಳು ಸತ್ತಿರುತ್ತಾಳೆ ಎಂದು ಹೇಳಿ  ಹಾಗೇನೆ ತರಾತುರಿಯಲ್ಲಿ  ನನ್ನ ಮಗಳ ಹೆಣ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಗೂಡರ (ಎಸ್.ಎ) ಗ್ರಾಮಕ್ಕೆ  ತೆಗೆದುಕೊಂಡು ಹೋಗಿ ಮನೆಯಲ್ಲಿ ಹಾಕಿರುತ್ತಾರೆ. ರಾತ್ರಿಯಾಗಿದ್ದರಿಂದ  ನಮಗೇನು ಗೊತ್ತಾಗದಕ್ಕೆ  ನಾನು ನನ್ನ ಗಂಡನಿಗೆ ಮತ್ತು ನಮ್ಮ ಸಂಭಂಧಿಕರಿಗೆ  ವಿಷಯ  ತಿಳಿಸಿದೆನು.  ಇಂದು ದಿ 11/04/2020 ರಂದು ಮುಂಜಾನೆ ನಾನು ಮತ್ತು ನನ್ನ ಗಂಡ ಮೈಹಿಬೂಬ ಪಟೇಲ ಇನ್ನೊಬಳು ಮಗಳಾದ ಶಹಾಜಾಬೇಗಂ, ಹಾಗೂ ಅವಳ ಗಂಡ ಇಮಾಮಸಾಬ ತಂದೆ  ಹುಸೇನಸಾಬ ಇನಾಮ್ದಾರ, ನನ್ನ ತಂಗ್ಗಿ ರೇಷ್ಮಾ ಗಂಡ ಇಸ್ಮಾಯಿಲ್ ಅತ್ತಾರ ಎಲ್ಲರೂ ಕೂಡಿಕೊಂಡು ಗುಡೂರ (ಎಸ್.ಎ) ಗ್ರಾಮಕ್ಕೆ ಹೋಗಿ ನೋಡಿ ನನ್ನ ಮಗಳಿಗೆ ಅವಳ ಗಂಡ ಮತ್ತು ಗಂಡನ ಮನೆಯವರು ತೊಂದರೆ ಕೊಟ್ಟಿದ್ದರಿಂದ  ಅವರು ಕೊಟ್ಟ ಕಿರಕುಳ ತಾಳಲಾರದೆ ಮನೆಯಲ್ಲಿದ್ದ ಹೆನಿನಪುಡಿ ಧಿ  ಕುಡಿದು ಸತ್ತ ಬಗ್ಗೆ ಗೊತ್ತಾಗಿ  ಅವರ ಮೇಲೆ ಕೇಸು ಮಾಡಬೇಕೆಂದು ವಿಚಾರ ಮಾಡಿ  ನೂರಜಾಬೇಗಂ ಇವಳ ಹೆಣ ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಹಾಕಿರುತ್ತೆವೆ. ನನ್ನ ಮಗಳಾದ ನೂರಾಜ ಬೇಗಂ ಇವಳಿಗೆ ಅವಳ ಗಂಡ 1)  ಮುಸ್ತಾಫಾ   ತಂದೆ  ಅಹ್ಮದ್ ಹುಸೇನ ತೇಲಿ, ಅವಳ ಬಾವಂದಿರಾದ 2) ನಸೀರೊದ್ದೀನ ತಂದೆ ಅಹ್ಮದ್ ಹುಸೇನ ತೇಲಿ, 3) ಹಜರತಲಿ @ ಅಜ್ಜು  ತಂದೆ ಅಹೇಮದ್ ಹುಸೇನ ತೇಲಿ,  ಅತ್ತೆಯಾದ 4) ಚಾಂದಬೀ ಗಂಡ ಅಹೇಮದ್ದ ಹುಸೇನ್ ತೇಲಿ, ಸಾ: ಗೂಡೂರ ( ಎಸ್.ಎ) ಇವರೆಲ್ಲರೂ ಕೂಡಿಕೊಂಡು ನನ್ನ ಮಗಳಿಗೆ ಅಡುಗೆ ಸರಿಯಾಗಿ ಮಾಡಲು ಬರುವುದಿಲ್ಲಾ ಮತ್ತು ತವರು ಮನೆಯಿಂದ ಬಂಗಾರ ತೆಗೆದುಕೊಂಡು ಬಾ ಎಂದು ಅವಾಚ್ಯವಾಗಿ ಬೈಯುವುದು  ಹೊಡೆಯುವುದು ಮಾಡಿ ಮಾನಸೀಕ ಮತ್ತು ದೈಹಿಕ ಕಿರಕುಳ ನೀಡಿದರಿಂದ ಅವಳು ಮನನೊಂದು  ದಿನಾಂಕ 10/04/2020 ರಂದು ರಾತ್ರಿ 9.00 ಗಂಟೆಯ ಸುಮಾರಿಗೆ  ಮನೆಯಲ್ಲಿ ಹೇನಿನಪುಡಿ ವಿಷ ಕುಡಿದು ಸತ್ತಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

06 April 2020

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ದರೆಪ್ಪ ಸಿ.ಹೆಚ್.ಸಿ. 254 ಜೇವರಗಿ ಠಾಣೆ ರವರು ಕಲಬುರಗಿ ಯುನೈಟೇಡ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಮೈಹಿಬೂಬ ಇತನಿಗೆ ವಿಚಾರಿಸಿದಾಗ ಅವನು ಮಾತನಾಡುವ ಸ್ಥಿತಿಯಲ್ಲಿ ಇರದೆ ಇದ್ದರಿಂದ ಗಾಯಾಳುವಿನ ತಮ್ಮ ನಾದ  ಇಮಾಮ ಈತನು ಕೊಟ್ಟ ಪೀರ್ಯಾದಿ ಅರ್ಜಿ ಸ್ವೀಕೃತ ಮಾಡಿಕೊಂಡು ಮರಳಿ ಠಾಣೆಗೆ ತಂದು ಹಾಜರಪಡಿಸಿದ್ದು ಸದರಿ ಪೀರ್ಯಾದಿ ಸಾರಾಂಶವೆನೆಂದರೆ “ನಾನು
ಶ್ರೀ ಇಮಾಮ ತಂದೆ ಹುಸೇನಭಾಷ  ಮುಲ್ಲಾ ಸಾ// ಶಾಸ್ರ್ತೀ ಚೌಕ ಜೇವರಗಿ ರವರ ಅಣ್ಣ ಮಹಿಬೂಬ ಹುಸೇನಭಾಷ  ಮುಲ್ಲಾ ಇತನು ರಿಲಾಯನ್ಸ ಪೆಟ್ರೋಲ್ ಬಂಕ ಹತ್ತಿರ ಇರುವ  ಬಾಬಾ ತಂದೆ ನಜೀರ ಅಹ್ಮದ ಇನಾಮದಾರ ಇವರ ಪಂಚರ ತೆಗೆಯುವ ಅಂಗಡಿಯಲ್ಲಿ ಪಂಚರ ತೆಗೆಯುವ ಕೂಲಿ ಕೆಲಸ ಮಾಡುತ್ತಿದ್ದಾನೆ. ದಿನಾಂಕ 04.04.2020 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ನನ್ನ ಅಣ್ಣ ಮಹಿಬೂಬ ಇತನು ಸತ್ತಾರ ಸಾಬ ಪೆಟ್ರೋಲ ಬಂಕಗೆ ಹೋಗಿ ಮೋಟಾರ ಸೈಕಲ್ ಗೆ ಪೆಟ್ರೋಲ್ ಹಾಕಿಕೊಂಡು ಬರುತ್ತೇನೆ ಅಂತಾ ಹೇಳಿ ಮನೆಯಿಂದ ಮೋಟಾರ ಸೈಕಲ್ ನಂ KA-32 EN-9857  ನೇದ್ದರ ಮೇಲೆ ಹೋಗಿರುತ್ತಾನೆ. ನಂತರ ಸಾಯಂಕಾಲ 5-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನಮ್ಮೂರಿನ  ಜಾಕೀರ ತಂದೆ ಅಬ್ದುಲ್ ಜಾಫರ ವಡಗೇರಿ ಇತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ಜೇವರಗಿ-ಶಹಾಪೂರ ರೋಡಿಗೆ ಇರುವ ಮಿರ್ಚಿ ವೇ ಬ್ರೀಡ್ಜ ಹತ್ತಿರ ರೊಡಿನಲ್ಲಿ  ನೀನ್ನ ಅಣ್ಣನ ಮೊಟಾರ್ ಸೈಕಲಕ್ಕೆ ಟ್ರ್ಯಾಕ್ಟರ್  ಡಿಕ್ಕಿಯಾಗಿ ಅಫಘಾತವಾಗಿರುತ್ತದೆ ಎಂದು ತಿಳಿಸಿದನು. ವಿಷಯ ಗೊತ್ತಾದ ಕೂಡಲೆ ನಾನು ಗಾಬರಿಯಾಗಿ ಮತ್ತು ನನ್ನ ಗೆಳೆಯನಾದ ಮೊಯಿದ್ದಿನ ಇನಾಮದಾರ ಇಬ್ಬರು ಕೂಡಿಕೊಂಡು ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣನ ಮೋಟಾರ ಸೈಕಲ ನಂ  KA-32-EN-9857 ಬಿದ್ದಿದ್ದು ಮತ್ತು ಒಂದು ಕೆಂಪು ಬಣ್ಣದ MASSEY  FERGUSON  ಟ್ರಾಕ್ಟರ ನಿಂತಿತ್ತು.  ನನ್ನ  ಅಣ್ಣನಿಗೆ ಚಿಕಿತ್ಸೆ ಕುರಿತು ಜೇವರಗಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಎಂದು ಗೊತ್ತಾಗಿ ನಾವು  ಜೇವರಗಿ ಸರಕಾರಿ ಆಸ್ಪತ್ರೆಗೆ ಹೋಗಿ  ನೋಡಲಾಗಿ ನನ್ನ ಅಣ್ಣ ಮಹಿಬೂಬ ಇತನು ಚಿಕಿತ್ಸೆಯಲ್ಲಿದ್ದು ಅವನ ತಲೆಗೆ ಮತ್ತು ಎಡಗೈಗೆ ಭಾರಿ ರಕ್ತಗಾಯವಾಗಿದ್ದು ಅವನು ಮಾತನಾಡುವ  ಸ್ಥತಿಯಲ್ಲಿ  ಇರಲಿಲ್ಲ.  ಅಲ್ಲಿಯೇ ಇದ್ದ ಜಾಕೀರ ತಂದೆ ಅಬ್ದುಲ್ ಜಾಫರವಡಗೇರಿ ಇತನು ತಿಸಿದ್ದೆನೆಂದರೆ ನಿನ್ನ ಅಣ್ಣ ಮಹಿಬೂಬ ಇತನು ಮೋಟಾರ ಸೈಕಲ್ ನಂ  KA-32-EN-9857 ನೇದ್ದರ ಮೆಲೆ  ಜೇವರಗಿ ಕಡೆಯಿಂದ ಸಾಯಂಕಾಲ ಶಹಾಪೂರ ರೋಡಿಗೆ ಇರುವ  ಸತ್ತಾರಸಾಬ ಪೆಟ್ರೋಲ್ ಬಂಕ ಕಡೆಗೆ ಹೋಗುತ್ತೀರುವಾಗ ಎದುರಿನಿಂದ ಅಂದರೆ ಶಹಾಪೂರ ಕಡೆಯಿಂದ ಒಂದು ಟ್ರಾಕ್ಟರ ಚಾಲಕ ತನ್ನ ವಶದಲ್ಲಿರುವ ಟ್ರಾಕ್ಟರನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು  ಯಾವುದೇ ಸಂಚಾರಿ ನಿಯಮ ಪಾಲಿಸದೆ (ಇಂಡಿಕೇಟರ ಹಾಕದೆ )ಎಕಾಎಕಿಯಾಗಿ  ಒಮ್ಮೆಲೆ ತನ್ನ ಟ್ರಾಕ್ಟರನ್ನು ರೋಡಿನ ಬಲಬದಿಗೆ ಇರುವ ಮಿರ್ಚಿ ವೇ.  ಬ್ರಿಡ್ಜ ಕಡೆಗೆ ತಿರಿವಿ ಮಹಿಬೂಬ  ಈತನ ಮೊಟಾರ್ ಸೈಕಲಕ್ಕೆ  ಡಿಕ್ಕಿಪಡಿಸಿದನು.  ಈ ಘಟನೆಯ ನಂತರ ಸದರಿ ಟ್ರಾಕ್ಟರ  ಚಾಲಕ ಟ್ರಾಕ್ಟರನ್ನು  ಸ್ಥಳದಲ್ಲಿಯೇ  ಬಿಟ್ಟು ಓಡಿ ಹೋಗಿರುತ್ತಾನೆ ಅವನ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲಾ ಮುಂದೆ ಅವನಿಗೆ ನೋಡಿದರೆ ಗುರುತಿಸುತ್ತೇನೆ ನಂತರ ಮೈಹಿಬೂಬ  ಈತನಿಗೆ  ನಾನು ಮತ್ತು ಶಬ್ಬಿರ  ಇಬ್ಬರು ಕೂಡಿಕೊಂಡು 108 ಅಂಬುಲೇನ್ಸ್ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಜೇವರಗಿ ಆಸ್ಪತ್ರೆಗೆ ತಂದಿರುತ್ತೆವೆ ಎಂದು ತಿಳಿಸಿದ್ದರಿಂದ ನನಗೆ ಗೊತ್ತಾಗಿರುತ್ತದೆ. ನಂತರ ನಾನು ನನ್ನ ಗೆಳೆಯರಾದ ಮೋಯಿದ್ದೀನ ಇನಾಮದಾರ ,ಅಮೀನಸಾಬ ಮುಜಾವರ, ಶಬ್ಬೀರ ಇನಾಮದಾರ ಮೂವರು ಕೂಡಿ ನನ್ನ ಅಣ್ಣನಿಗೆ ಹೆಚ್ಚಿನ ಚಿಕಿತ್ಸೆಗಾಗಿ108 ಅಂಬುಲೇನ್ಸ ವಹಾನದಲ್ಲಿ ಹಾಕಿಕೊಂಡು ಜೇವರಗಿ ಆಸ್ಪತ್ರೆಯಿಂದ ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇವೆ.  ಅವನು ಸದ್ಯ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ಮೇಲೆ ನಮೂದಿಸಿದ ಟ್ರಾಕ್ಟರ ಇಂಜಿನ ನಂಬರ JHS337A99010 ಚೆಸ್ಸಿನಂ. MEA661E5JH2161201 ನೇದ್ದರ  ಚಾಲಕನು ಯಾವುದೇ ಸಂಚಾರಿ ನಿಯಮ ಪಾಲಿಸದೆ (ಇಂಡಿಕೇಟರ ಹಾಕದೆ ) ಎಕಾಎಕಿಯಾಗಿ  ಒಮ್ಮೆಲೆ ತನ್ನ ಟ್ರಾಕ್ಟರನ್ನು ರೋಡಿನ ಬಲಬದಿಗೆ ಇರುವ  ಮಿರ್ಚಿ ವೇ.  ಬ್ರಿಡ್ಜ  ಕಡೆಗೆ ತಿರಿವಿ  ನನ್ನ ಅಣ್ಣನ ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿದರಿಂದ ಈ ರಸ್ತೆ ಅಫಘಾತ ಜರುಗಿರುತ್ತದೆ. ನನ್ನ ಅಣ್ಣ ಮಹಿಬೂಬ ಹುಸೇನಭಾಷ  ಮುಲ್ಲಾ ಈತನು ದಿನಾಂಕ 04.04.2020 ರಂದು ಸಾಯಂಕಾಲ 5.00  ಗಂಟೆಯ ಸುಮಾರಿಗೆ ಜೇವರಗಿ- ಶಹಾಪೂರ ರೋಡ ಸತ್ತಾರ ಸಾಬ ಪೆಟ್ರೋಲ ರೊಡಿನಲ್ಲಿ ಹೋಗುವಾಗ ನಮ್ಮ ಅಣ್ಣನ  ಮೋಟಾರ ಸೈಕಲ್ ನಂ KA-32 EN-9857  ನೇದ್ದಕ್ಕೆ  MASSEY  FERGUSON  ಟ್ರಾಕ್ಟರ ಇಂಜಿನ ನಂಬರ JHS337A99010 ಚೆಸ್ಸಿನಂ. MEA661E5JH2161201 ನೇದ್ದರ ಚಾಲಕನು ಅತೀವೇಗವಾಗಿ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದರಿಂದ ನನ್ನ ಅಣ್ಣನಿಗೆ ಬಾರಿಗಾಯವಾಗಿ ಬೇವೊಸ್ ಆಗಿದ್ದರಿಂದ ಅವನಿಗೆ ಕಲಬುರಗಿ ಯುನೈಟೇಡ್ ಆಸ್ಪತ್ರೆಯಲ್ಲಿ ಸಿರಿಕೆ ಮಾಡಿದ್ದು ಅವನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಾ ಅಘಘಾತದಲ್ಲಿ ಆದ ಗಾಯದಿಂದ ಗುಣಮುಖ ಹೊಂದದೆ ಇಂದು ದಿನಾಂಕ 05/04/2020 ರಂದು ಮದ್ಯಾಹ್ನ 12.45  ಗಂಟೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀಮತಿ ಶ್ರೀಮತಿ ಗುಂಡಮ್ಮ ಗಂಡ ಚಂದ್ರಕಾಂತ ಕುಂಬಾರ, ಸಾ:ಭೈರಮಡಗಿ ಗ್ರಾಮ, ತಾ:ಅಫಜಲಪೂರ ರವರ ಗಂಡನಾದ ಚಂದ್ರಕಾಂತ ತಂದೆ ವಿಠಲ್ ಕುಂಬಾರ ಇವರು ದಿನಾಂಕ: 27/03/2020 ರಂದು ನನ್ನ ತವರು ಮನೆ ಬೋದನ ಗ್ರಾಮದಲ್ಲಿ ಕೆಲಸವಿದೆ ಅಂತಾ ಹೇಳಿ ಹೋಗಿರುತ್ತಾನೆ. ದಿನಾಂಕ:28/03/2020 ರಂದು ಬೆಳಿಗ್ಗೆ 10-00 ಗಂಟೆಗೆ ನನಗೆ ನನ್ನ ಅಣ್ಣನಾದ ಉಮೇಶ ತಂದೆ ಶಿವರುಧ್ರಪ್ಪಾ ಕುಂಬಾರ ಇವರು ನನ್ನ ಮೊಬೈಲಗೆ ಫೋನಮಾಡಿ ನಿನ್ನೆ ನಾನು ಹಾಗೂ ನನ್ನ ಗಂಡನಾದ ಚಂದ್ರಕಾಂತ ಇಬ್ಬರು ಕಡಗಂಚಿ ಯಿಂದ ಬೋದನ ಗ್ರಾಮಕ್ಕೆ ಬರುವಾಗ ನರೋಣಾ ಮತ್ತು ಬೋದನ ಗ್ರಾಮದ ಮದ್ಯ ಇರುವ ಫೂಲಿನ ಹತ್ತಿರ ಜಂಪನಲ್ಲಿ ಮೊಟಾರ್ ಸೈಕಲ್ ನಾನು ಚಲಾಯಿಸುತ್ತಿದ್ದಾಗ ಚಂದ್ರಕಾಂತನು ಹಿಂದೆ ಕುಳಿತ್ತಿದ್ದನು ಜಂಪಾಗಿ ಮೊಟಾರ್ ಸೈಕಲನಿಂದ ಕೆಳಗೆ ಬಿದ್ದಿರುತ್ತಾನೆ. ಆತನ ತಲೆಗೆ ಸ್ವಲ್ಪ ರಕ್ತಗಾಯವಾಗಿದ್ದು ಮತ್ತೆ ಇಬ್ಬರು ಅದೇ ಮೊಟಾರ್ ಸೈಕಲ್ ಮೇಲೆ ಊರಿಗೆ ಬಂದಿದ್ದು ಇಂದು ಬೆಳಿಗ್ಗೆ ಚಂದ್ರಕಾಂತನು ಗಾಯದ ಬಾದೆ ಹೆಚ್ಚಾಗಿ ಹಾಸಿಗೆ ಹಿಡಿದಿರುತ್ತಾನೆ. ಅವನಿಗೆ ಉಪಚಾರಕ್ಕಾಗಿ ಕಲಬುರಗಿಗೆ ಒಯ್ಯುತ್ತಿದ್ದೇವೆ. ನೀವು ಕಲಬುರಗಿಗೆ ಬಾಅಂತ ತಿಳಿಸಿದ್ದು. ನಾನು ದಿನಾಂಕ:28/03/2020 ರಂದು ಕಲಬುರಗಿಗೆ ಬಂದು ಮೊಹಾನರಾಜ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದಾಗ ನನ್ನ ಗಂಡನಿಗೆ ನೋಡಿದಾಗ ಆತನ ತಲೆಯ ಹಿಂಭಾಗಗಕ್ಕೆ ಭಾರಿ ರಕ್ತಗಾಯವಾಗಿದ್ದು ಆತನು ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ ಇದರ ಬಗ್ಗೆ ನನ್ನ ಅಣ್ಣನಾದ ಉಮೇಶನಿಗೆ ವಿಚಾರಿಸಿದಾಗ ದಿನಾಂಕ:27/03/2020 ರಂದು ರಾತ್ರಿ 8-30 ಗಂಟೆಗೆ ಚಂದ್ರಕಾಂತನು ಕಡಗಂಚಿಯಲ್ಲಿದ್ದು, ಬೋದನ ಕಡೆಗೆ ಯಾವುದೇ ವಾಹನದ ಸೌಕರ್ಯ ಇಲ್ಲದ ಕಾರಣ ಇಲ್ಲೆ ನಿಂತಿರುತ್ತೇನೆ ಅಂತಾ ತಿಳಿಸಿದಾಗ ನಾನು ಆತನಿಗೆ ಕರೆದುಕೊಂಡು ಬರಲು ಮೊಟಾರ್ ಸೈಕಲ್ ನಂ ಕೆಎ32-ಇಕೆ-0765 ನೇದ್ದನ್ನು ತಗೆದುಕೊಂಡು ಕಡಗಂಚಿಗೆ ಹೋಗಿ ಇಬ್ಬರು ಸೇರಿ ಮರಳಿ ಬೋದನ ಕಡೆಗೆ ಬರುವಾಗ ನಾನು ಮೊಟಾರ್ ಸೈಕಲ್ ನಡೆಸುತ್ತಿದ್ದು. ರಾತ್ರಿ 9-30 ಗಂಟೆಗೆ ನರೋಣಾ ಮತ್ತು ಬೋದನ ಮದ್ಯ ಇರುವ ಫೋಲ ಹತ್ತಿರ ಜಂಪಿನಲ್ಲಿ ಒಮ್ಮಲೇ ಮೊಟಾರ್ ಸೈಕಲ್ ಬ್ಯಾಲೆನ್ಸ್ ತಪ್ಪಿದ್ದರಿಂದ ಕುಳಿತ್ತಿದ್ದ ಚಂದ್ರಕಾಂತನು ಕೆಳಗೆ ಬಿದ್ದಿರುತ್ತಾನೆ. ಆತನಿಗೆ ರಕ್ತಗಾಯ ಆಗಿದ್ದರಿಂದ ಆತನ ತಲೆಗೆ ಸುಣ್ಣ ವತ್ತಿ ಮತ್ತೆ ಮೊಟಾರ್ ಸೈಕಲ್ ಮೇಲೆ ಕುಳಿತುಕೊಂಡು ಬೋದನ ಗ್ರಾಮಕ್ಕೆ ಕರೆದುಕೊಂಡು ಹೋಗಿರುತ್ತೇನೆ. ದಿನಾಂಕ:28/03/2020ರ ಬೆಳಿಗ್ಗೆವರೆಗೆ ಚನ್ನಾಗಿದ್ದು ಆನಂತರ ಹಾಸಿಗೆ ಹಿಡಿದಿರುತ್ತಾನೆ ಅಂತಾ ತಿಳಿಸಿರುತ್ತಾನೆ. ಅದೇ ದಿನ ನಾವು ನನ್ನ ಗಂಡನಿಗೆ ಹೆಚ್ಚಿನ ಉಪಚಾರಕ್ಕಾಗಿ ಧನ್ವಂತ್ರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ನನ್ನ ಅಣ್ಣನಾದ ಉಮೇಶನು ಮೊಟಾರ್ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿದ್ದರಿಂದ ನನ್ನ ಗಂಡನು ಮೊಟಾರ್ ಸೈಕಲ ಮೇಲಿಂದಾ ಬಿದ್ದಿರುತ್ತಾನೆ. ತಾವು ಉಮೇಶ ತಂದೆ ಶಿವರುಧ್ರಪ್ಪಾ ಕುಂಬಾರ ಸಾ:ಬೋದನ ಈತನು ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

01 April 2020

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಮಲ್ಲಪ್ಪ ತಂದೆ ಕಾಳಪ್ಪ ದೊಡ್ಡಮನಿ ಸಾ: ಜಮಖಂಡಿ ತಾ: ಜೇವರಗಿ  ರವರ ಮಕ್ಕಳಾದ  ಅಯ್ಯಪ್ಪ ಮತ್ತು ಅವನ ಹೆಂಡತಿ ಮಕ್ಕಳು, ಮತ್ತು ಪರಶುರಾಮ, ಶಿವಪುತ್ರ ಇವರೆಲ್ಲರೂ ಬೆಂಗಳೂರದಲ್ಲಿ ಕೂಲಿ ಕೆಲಸಕ್ಕೆ  ಹೊಗಿ ಅಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು,  ನನ್ನ ಮಗ ಶಿವಪುತ್ರನು  ನೆಲಮಂಗಲದಲ್ಲಿನ ಭಾರತ ಪೈನಾನ್ಸಿಯಲ್ ಇನಕ್ಲೂಜನ್ ಲಿಮಿಟೆಡ್ ಖಾಸಗಿ ಕಂಪನಿಯಲ್ಲಿ ಫೀಲ್ಡ ಅಸಿಸ್ಟಂಟ  ಅಂತಾ   ಕೆಲಸ ಮಾಡುತ್ತಿದ್ದನು.  ಈಗ ಕರೊನಾ  ವೈರಸ್ ಹರಡುತ್ತಿದ್ದರಿಂದ  ಲಾಕ್ ಡೌನ ಆದ ಪ್ರಯುಕ್ತ ಕೆಲಸ ಇಲ್ಲದ ಕಾರಣ  ನಮ್ಮ ಮಕ್ಕಳಾದ   ಅಯ್ಯಪ್ಪ  ಮತ್ತು ಅವನ ಹೆಂಡತಿ ಮಕ್ಕಳು, ಮತ್ತು ಪರಶುರಾಮ ಎಲ್ಲರೂ  ಬೆಂಗಳೂರದಿಂದ ಬಸ್ಸಿನಲ್ಲಿ ಕುಳಿತು ನಮ್ಮೂರಿಗೆ ದಿನಾಂಕ 25/03/2020 ರಂದು ಮುಂಜಾನೆ ಬಂದಿರುತ್ತಾರೆ.  ಮಗ ಅಯ್ಯಪ್ಪ ಈತನು ಹೇಳಿದ್ದನೆಂದರೆ ಲಾಕಡೌನ್  ಸಲುವಾಗಿ ಶಿವಪುತ್ರ ಈತನ ಆಫೀಸ್ ಕೂಡಾ ರಜೆ ಇದ್ದು  ಅವನೂ ಕೂಡಾ  ತನ್ನ ಗೆಳೆಯ ಅವಿನಾಶ ಸಾ: ಮಂಗಲಗಿ ಇತನ್ನೊಂದಿಗೆ ನಮ್ಮ ಮೊಟಾರ್ ಸೈಕಲ್ ನಂ ಕೆಎ-02-ಕೆಡಿ-5628 ನೇದ್ದರ ಮೇಲೆ ಕುಳಿತುಕೊಂಡು ಬೆಂಗಳೂರದಿಂದ ಬರುತ್ತಿದ್ದಾರೆ ಎಂದು ಹೇಳಿರುತ್ತಾನೆ. ದಿನಾಂಕ 25/03/2020 ರಂದು ಅವನ ಮೊಬೈಲಕ್ಕೆ ಕರೆ ಮಾಡಲಾಗಿ ಮೊಬೈಲ ರಿಂಗ್ ಆಗಿರುತ್ತದೆ.  ಆದರೆ ಅವನು ಮೊಬೈಲ್ ಎತ್ತಿರುವುದಿಲ್ಲಾ. ಆ ದಿವಸ ರಾತ್ರಿಯಾದರೂ ಶಿವಪುತ್ರನು ಮನೆಗೆ ಬರಲಿಲ್ಲಾ ಪೊನಿನಲ್ಲಿ ಸಹ ಸಿಕ್ಕಿರುವುದಿಲ್ಲಾ, ನನ್ನ ಮಗನ ಸಂಗಡ ಬೆಂಗಳೂರದಿಂದ ಬಂದ ಅವಿನಾಶ ಈತನ ಮೊಬೈಲಕ್ಕೆ  ಪೊನ ಮಾಡಿ ಕೇಳಲಾಗಿ ಅವನು  ಹೇಳಿದ್ದೆನೆಂದರೆ  ನಾನು ಮತ್ತು ಶಿವಪುತ್ರ ಇಬ್ಬರೂ ಮೊಟಾರ್ ಸೈಕಲ ಮೇಲೆ ಬೆಂಗಳೂರದಿಂದ ಕಲಬುರಗಿಗೆ ದಿನಾಂಕ 25/03/2020 ರಂದು ಮುಂಜಾನೆ  ಬಂದಿರುತ್ತೆವೆ.   ಮುಂಜಾನೆ  7.00 ಗಂಟೆಯ ಸುಮಾರಿಗೆ  ಶಿವಪುತ್ರನು ನನಗೆ ಕಲಬುರಗಿ ಹುಮನಾಬಾದ ರಿಂಗ್ ರೊಡ ಹತ್ತಿರ ಬಿಟ್ಟು  ಊರಿಗೆ ಹೋಗುತ್ತೆನೆಂದು  ಹೇಳಿ ತನ್ನ ಮೊಟಾರ್ ಸೈಕಲ್ ನಂ ಕೆಎ-02-ಕೆಡಿ-5628 ನೇದ್ದರ ಮೇಲೆ ಕುಳಿತುಕೊಂಡು  ಹೋಗಿರುತ್ತಾನೆ.  ನಾನು ನಮ್ಮೂರಿಗೆ ಬಂದಿರುತ್ತೆನೆ  ಎಂದು ತಿಳಿಸಿದನು. ನಮ್ಮ ಮಗನು ಮನೆಗೆ ಬರಲಾರದಕ್ಕೆ ನಾವು ಕಲಬುರಗಿಗೆ ಹೋಗಿ ಹುಡುಕಾಡಿದೇವು ಮತ್ತು ಅವನ ಗೆಳೆಯರಿಗೆ  ಹಾಗೂ ನಮ್ಮಸಂಭಂದಿಕರಿಗೆ  ಪೊನ ಮಾಡಿ ಕೇಳಲಾಗಿ ನಮ್ಮ ಮಗನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ  ಪತ್ತೆ ಸಹ ಹತ್ತಿರುವುದಿಲ್ಲಾ.  ನಮ್ಮ ಮಗ ಶಿವಪುತ್ರನು ಮನೆಗೆ ಬರಲಾರದಕ್ಕೆ  ಮತ್ತುಅವನು ಪತ್ತೆ ಹತ್ತಲಾರದಕ್ಕೆ ನಾನು ಮತ್ತು  ನಮ್ಮೂರ  ಭೀಮಣ್ಣಗೌಡ ತಂದೆ ಗುರುಲಿಂಗಪ್ಪಗೌಡ  ಮಾಲಿಗೌಡರ  ಬೀರಪ್ಪ ತಂದೆ ಅಯ್ಯಪ್ಪ ಪೂಜಾರಿ,  ಕೂಡಿಕೊಂಡು ಇಂದು ದಿ 31/03/2020 ರಂದು ಮುಂಜಾನೆ ಕಲಬುರಗಿಗೆ ಗ್ರಾಮೀಣ ಪೊಲೀಸ್ ಠಾಣೆಗೆ ಕೇಸು ಕೊಡಲು ಹೊದಾಗ  ಪೊಲೀಸರು ನಮ್ಮ ಮಗನ ಮೊಬೈಲ್  ನಂಬರ ಕಾಲ ಡಿಟೈಲ್ಸ ತೆಗೆದು ನೊಡಿ ನೀಮ್ಮ ಮಗ ಜೇವರಗಿ  ತಾಲೂಕಿನ  ರೇವನೂರ ಕಡೆಗೆ ಹೋದ ಬಗ್ಗೆ ಮಾಹಿತಿ ಇರುತ್ತದೆ ಎಂದು  ಹೇಳಿದಾಗ,  ನಾವು ಮೂವರು ಕೂಡಿಕೊಂಡು ಜೇವರಗಿ-ವಿಜಯಪೂರ ರೋಡ ರೇವನೂರ ಸೀಮಾಂತರ ಹೇಲಿಪ್ಯಾಡ ಹತ್ತಿರ ರೊಡಿನ ಪಕ್ಕದಲ್ಲಿ ಹುಡುಕಾಡುತ್ತಾ ಹೋದಾಗ  ರೇವನೂರ ಸೀಮಾಂತರದ ರೋಡಿನ ಪಕ್ಕದ ತಗ್ಗಿನಲ್ಲಿ   ನಮ್ಮ ಮೊಟಾರ್ ಸೈಕಲ್ ನಂ ಕೆಎ-02-ಕೆಡಿ-5628 ನೇದ್ದು ಬಿದ್ದಿತ್ತು ಅಲ್ಲಿಯೇ ಹೇಲ್ಮೇಟ್ ಸಹ ಇತ್ತು. ಮತ್ತು ಕೇನಾಲ್ ನೀರಿನ ತೆಗ್ಗಿನಲ್ಲಿ  ಒಬ್ಬ ಮನುಷ್ಯನ ಹೆಣ ಬಿದ್ದಿದ್ದು ಇತ್ತು. ಸಮೀಪ ಹೋಗಿ ನೋಡಲಾಗಿ ಆ ಹೆಣ ನನ್ನ ಮಗ ಶಿವಪುತ್ರನೆ  ಇತ್ತು. ಅವನ ತಲೆಯಲ್ಲಿನ ಉದ್ದನೆ ಕೂದಲು,  ಮತ್ತು  ಮೈ ಮೇಲಿನ ಬಟ್ಟೆ ಮತ್ತು ಅವನ ಕಾಲಿನ ಚಪ್ಪಲಿ ಹಾಗೂ ಅವನ ಬ್ಯಾಗನಲ್ಲಿನ ಕಾಗದ ಪತ್ರಗಳು ಇದ್ದಿರುವುದು ನೋಡಿ  ಗುರುತಿಸಿರುತ್ತೆನೆ.  ಅವನ ಹೊಟ್ಟೆಯಿಂದ ಕೇಳಗಿನ ಬಾಗ ಹುಳ ತಿಂದು ಕೊಳೆತಿದ್ದು ಮೊಳಕಾಲಿನವರೆಗೆ  ಎಲುಬು ಮಾತ್ರ ಇತ್ತು ಮತ್ತು ಕಣ್ಣು, ಕಿವಿ, ಮೂಗು, ಬಾಯಿ, ಕುತ್ತಿಗೆ ಬಾಗ, ಎದೆಯ ಬಾಗ ಹುಳಗಳು ತಿಂದು ಕೊಳೆತಿದ್ದು ಇತ್ತು ಮತ್ತು ಹೊಟ್ಟೆ ಬಾಗವು ಸಹ ಪೂರ್ತಿ ಕೊಳೆತಿರುತ್ತದೆ. ಅಡವಿಯಲ್ಲಿನಪ್ರಾಣಿಗಳು  ಮೈಮೇಲಿನ ಮಾಂಶ ಖಂಡ ತಿಂದಿದಂತೆ  ಇತ್ತು.  ಅಲ್ಲಿಯೇ  ರೋಡಿನಸೈಡಿನಲ್ಲಿ ಒಂದುಬೇವಿನ ಗೀಡ ಇದ್ದು ಗಿಡದಬಡ್ಡಗೆ ಮೊಟಾರ್ ಸೈಕಲ್ ಡಿಕ್ಕಿಯಾದಂತೆ ಬಡ್ಡೇಯ ತೊಗಟಿ ಕಿತ್ತಿದಂತೆ ಆಗಿತ್ತು.  ಅಲ್ಲಿ ಸ್ಥಳದಲ್ಲಿ  ನೊಡಿದರೆ ನಮ್ಮ ಮಗನಾದ ಶಿವಪುತ್ರನು ತನ್ನ ಮೊಟಾರ್ ಸೈಕಲ್ ನಂ ಕೆಎ-02-ಕೆಡಿ-5628 ನೇದ್ದರ ಮೇಲೆ ತನ್ನ ಗೆಳೆಯ ಅವಿನಾಶನ್ನೊಂದಿಗೆ  ಬೆಂಗಳೂರದಿಂದ ಕಲಬುರಗಿಗೆ ಬಂದು ಅವನ ಗೆಳೆಯನಿಗೆ ಕಲಬುರಗಿಯಲ್ಲಿ ಬಿಟ್ಟು ಕಲಬುರಗಿಯಿಂದ ನಮ್ಮೂರಿಗೆ ಬರಲು ಜೇವರಗಿ ವಿಜಯಪೂರ ರೋಡಿನಲ್ಲಿ ತನ್ನ ಮೊಟಾರ್ ಸೈಕಲ್ ಮೇಲೆ ದಿನಾಂಕ 25/03/2020 ರಂದು ಮುಂಜಾನೆ  09-30 ಗಂಟೆಯಿಂದ ಮದ್ಯಾಹ್ನ 12.00 ಗಂಟೆಯ ಮದ್ಯದಲ್ಲಿ ನಮ್ಮೂರಿಗೆ ಬರುತ್ತಿದ್ದಾಗ ತನ್ನ ವಶದಲ್ಲಿರುವ ಮೋಟಾರ ಸೈಕಲ್ ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ತಾನೆ  ರೋಡಿನ ಸೈಡಿನಲ್ಲಿ ಬೇವಿನಗಿಡಕ್ಕೆ ಮೊಟಾರ್ ಸೈಕಲ್  ಡಿಕ್ಕಿಪಡಿಸಿದರಿಂದ ಅವನ  ತಲೆ  ಮೇಲಕಿಗೆ  ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಕರೋನಾ ವೈರಸ್ ದಿಂದ  ಹೊರಗಡೆ ಯಾರು ಹೆಚ್ಚಿಗೆ ರೊಡಿನಲ್ಲಿ ಜನರು ಓಡಾಡದೆ ಇದ್ದರಿಂದ ನನ್ನ ಮಗನು ಮೃತ ಪಟ್ಟ  ಬಗ್ಗೆ ಯಾರಿಗು ಗೊತ್ತಾಗಿರುವುದಿಲ್ಲಾ.  ಕಾರಣ ಮಾನ್ಯರು ಈ ಬಗ್ಗೆ  ಸೂಕ್ತ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.