POLICE BHAVAN KALABURAGI

POLICE BHAVAN KALABURAGI

25 May 2019

KALABURAGI DISTRICT REPORTED CRIMES

ಮೊಸ ಮಾಡಿ ಸರಕಾರದ ಹಣ ದುರುಪಯೋಗಪಡಿಸಿಕೊಂಡ ಪ್ರಕರಣ :
ರಾಘವೇಂದ್ರ ನಗರ ಠಾಣೆ : ನಿರ್ಮತಿ ಕೇಂದ್ರವು ಒಂದು ನೊಂದಾಯಿತ ಸಂಸ್ಥೆಯಾಗಿದ್ದು ಇದರ ಅಧ್ಯಕ್ಷರು ಮಾನ್ಯ ಜಿಲ್ಲಾಧಿಕಾರಿಗಳಾಗಿರುತ್ತಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ನಿರ್ಮಿತಿ ಕೇಂದ್ರಕ್ಕೆ ಕಟ್ಟಡ ಮತ್ತು ಇತರೆ ಕಾಮಗಾರಿಗಳನ್ನು ನಿರ್ವಹಿಸಿಕೊಂಡುತ್ತಾರೆ. ಅದರೆಂತೆ ಮಾನ್ಯ ಕಾರ್ಯಾದರ್ಶಿಗಳು ಹೈ.ಕ.ಪ್ರ.ಅ.ಮಂ ಕಲಬುರಗಿ ರವರು ವಿವಿಧ ಕಾಮಗಾರಿಗಳನ್ನು ನಿರ್ಮಿತಿಕೇಂದ್ರಕ್ಕೆ ವಹಿಸಿಕೊಟ್ಟಿರುತ್ತಾರೆ. ವಿವರಗಳನ್ನು ಅನುಬಂದ ಅ ದಲ್ಲಿ ಕಾಣಬಹುದು ಅ ಅನುಬಂದದಲ್ಲಿ ವಿವರಿಸಿದ ಕಾಮಗಾರಿಗಳನ್ನು  ನಿರ್ಮಿತಿ ಕೇಂದ್ರ ಕಲಬುರಗಿ ಯೋಜಾನ ವವ್ಯಾಸ್ದಾಪಕರಿಂದ ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ನಿರ್ಮಿತಿ  ಕೇಂದ್ರ ಕಲಬುರಗಿ ರವರಿಗೆ ವಹಿಸಿಕೊಡಲಾಗಿದೆ. ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ನಿರ್ಮಿತಿ ಕೇಂದ್ರ ಕಲಬುರಗಿ ರವರಿಗೆ ಒಟ್ಟು ಕಾಮಗಾರಿಗಳಲ್ಲಿ (33) ಸುಮಾರು ರೂ 1,52,58,430 ರೂ ( ಒಂದು ಕೋಟಿ ಐವತ್ತೆರಡು ಲಕ್ಷ ಐವತ್ತೆಂಟು ಸಾವಿರದ ನಾಲ್ಕನೂರಾ ಮುವತ್ತು ರೂ) ಹೆಚ್ಚಿನ ಹಣವನ್ನು ಸಾಮಾಗ್ರಿಗಳ ಖರೀದಿ ಮತ್ತು ಕೂಲಿ  ಕಾರ್ಮಿಕರ ಓಚರಗಳನ್ನು ಸಲ್ಲಿಸಿ ಹಣ ಸಂದಾಯಿಸಿದೆ ಆದರೆ ಕಾಮಗಾರಿ ಪೋರ್ಣಗೊಂಡಿಲ್ಲಿ ಸದರಿ ಕಾಮಗಾರಿಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಡಿಎಂಎಫ್ ಕೋಶದ ತಾಂತ್ರಿಕ ಸಲಹೆಗಾರರು ಮತ್ತು ತಾಂತ್ರಿಕ ಅಧಿಕಾರಿಗಳಿಂದ ಖುದ್ದಾಗಿ ಪರಿಶೀಲಿಸಲಾಗಿದೆ. ಸಂಬಂದಿಸಿದ ಕಾಮಗಾರಿಗಳಿಗೆ ತಾಂತ್ರಿಕ ಅಧಿಕಾರಿಗಳೊಂದಿಗೆ ಶ್ರೀ ಶಿವಯೋಗಿ ಯಳವಾರರವರಿಗೆ ಸ್ಥಳಗಳಿಗೆ ಹೋಗಲು ಸೂಚಿಲಾಗಿತ್ತು. ಅದರಂತೆ ಶ್ರೀವಯೋಗಿ ಮೇಲ್ವಿಚಾರಿಕರಿಗೆ ಕೆಲವು ಸ್ಥಳಗಳಿಗೆ ಹೋಗಿರುತ್ತಾರೆ. ತಾಂತ್ರಿಕ ಸಲಹೆಗಾರರು ಮತ್ತು ತಾಂತ್ರಿಕ ಅಧಿಕಾರಿಗಳು ಪರಿಶೀಲಿಸಿಕೊಟ್ಟಿರುವ ವರದಿ ಪರಿಶೀಲಿಸಲಾಗಿ ಕಾಮಾಗಾರಿ ಪರೆಬಾರಿಯವರು ಕೈಕೊಂಡ ಕಾಮಗಾರಿಗಳು ಹಾಗೂ ನಿರ್ಮಿತಿ ಕೇಂದ್ರದಿಂದ ಸಂದಾಯಿಸಿದ ಮೊತ್ತಕ್ಕೂ ಬಹಾಳಷ್ಟು ವ್ಯತ್ಯಾಸ ಇರುತ್ತದೆ. ಆದುದ್ದರಿಂದ ಮಾನ್ಯ ಕಾರ್ಯಾದರ್ಶಿಗಳು ಹೈ.ಕ.ಪ್ರ.ಅ.ಮಂ ಕಲಬುರಗಿ ರವರು ಸದರಿ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ಹಣ ವಸೂಲಿ (ರಿಕವರಿ)  ಮಾಡಲು ಆದೇಶಿಸುರುತ್ತಾರೆ. ಇದರೊಂದಿಗೆ ಲಗತ್ತಿಸಿದ ಅನುಂಬದದಲ್ಲಿನ ಕಾಮಗಾರಿಗಳನು ಪೂರ್ಣಗೋಳ್ಳಿಸಲು ಸಾಕಷ್ಟು ಸಲ ಸೂಚಿಸಿದರು ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ಕಾಮಗಾರಿಗಳನ್ನು ಪೂರ್ಣಗೋಳಸಿರುವದಿಲ್ಲ ಮತ್ತು ಸಂದಾಯಿಸಿರುವ  ಹಣ ಮರುಪಾವತಿಸಿರುವದಿಲ್ಲ. ಇದರಿಂದ ಸರ್ಕಾರದಹಣ ದುರ್ಬಳಿಕೆ ಮಾಡಿಕೊಂಡಂತಾಗಿದ್ದು ಬ್ರೀಚ್ ಆಪ್ ಟ್ರಸ್ಟ್  ಕೂಡಾ ಆಗಿರುತ್ತದೆ. ಮಾನ್ಯ ಕಾರ್ಯಾದರ್ಶಿಗಳು ಹೈ.ಕ.ಪ್ರ.ಅ.ಮಂ ಕಲಬುರಗಿ ರವರು ಉಲ್ಲೇಖಿತ ಪತ್ರದ ಮೂಲಕ ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ನಿರ್ಮಿತಿ ಕೇಂದ್ರ ರವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಲು ಮತ್ತು ಕೋಟ್ಯಾಂತರ ಹಣ ಮರುಪಾವತಿಸಿ ಕೋಳ್ಳಲು ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ರವರಿಗೆ ಸೂಚಿಸಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಅಧ್ಯಕ್ಷರು ನಿರ್ಮಿತಿ ಕೇಂದ್ರ ಕಲಬುರಗಿರವರು ನಿರ್ಮತಿ ಕೇಂದ್ರ ಕಡತದಲ್ಲಿ ಸದರಿ ಶಿವಯೋಗಿ ಯಳವಾರ ಮೇಲ್ವಿಚಾರಕರು ಇವರ ವಿರುದ್ಧ ಕ್ರೀಮಿನಲ್ ಪ್ರಕರಣವನ್ನು ದಾಖಲಿಸಲು ಮತ್ತು ಹಣ ವಸೂಲಿ ಕ್ರಮ ಕೈಕೋಳ್ಳಲು ಆದೇಶಿಸುರುತ್ತಾರೆ. ಆದದ್ದರಿಂದ ದಯಾ ಮಾಡಿ ಶ್ರೀ ಶಿವಯೋಗಿ ಯಳವಾರ ಮೇಲ್ವಿಚಾರಕರು ನಿರ್ಮಿತಿ ಕೇಂದ್ರ ಕಲಬುರಗಿ ರವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಕೋಳ್ಳಬೇಕು ಅಂತಾ  ಶ್ರೀ ವಾಮನರಾವ ತಂದೆ ಮಾಣಿಕರಾವ ದೇಶಪಾಂಡೆ ಉಃ ಇಂಜನಿಯರ  ನಿರ್ಮಿತಿ ಕೇಂದ್ರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 24-05-2019 ರಂದು ಸೊನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಬಳೂಂಡಗಿ ಮಾರ್ಗವಾಗಿ ಕರಜಗಿ ರೋಡಿನ ಕಡೆಗೆ ಬರುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ, ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಕರಜಗಿ ರೋಡಿಗೆ ಹೋಗುತ್ತಿದ್ದಾಗ ಅಳ್ಳಗಿ (ಕೆ) ಕ್ರಾಸ ದಾಟಿ ಮುಂದೆ ಇರುವ ಕ್ಯಾನಾಲ ರೋಡಿಗೆ ಬಳೂಂಡಗಿ ಕಡೆಯಿಂದ ಒಂದು ಟ್ರ್ಯಾಕ್ಟರ ಬರುತ್ತಿತ್ತು, ಆಗ ಸದರಿ ಟ್ರ್ಯಾಕ್ಟರನ್ನು ಬ್ರೀಜ್ ಹತ್ತಿರ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು, ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು ಅರ್ಜುನ ಮಹೇಂದ್ರಾ ಕಂಪನಿಯ ಟ್ಯಾಕ್ಟರ ಇದ್ದು ಅದರ ಟ್ರ್ಯಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿತ್ತು, ಟ್ಯಾಕ್ಟರ ಮೇಲೆ ನಂಬರ ಕೆಎ-32 ಟಿಎ-4575 ಅಂತಾ ಬರೆದಿದ್ದು, ಸದರಿ ಟ್ಯಾಕ್ಟರ ಇಂಜೆನ್ ನಂಬರ ಚೆಕ್ ಮಾಡಲಾಗಿ ಅದರ Engine NO :- NJCU3835 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಇದ್ದಿರುವುದಿಲ್ಲ. ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ .ಕಿ 3000/- ರೂ ಇರಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ 07:00 ಎಎಮ್ ದಿಂದ 08:00 ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 02 : ದಿನಾಂಕ-24/05/2019 ರಂದು ಬೆಳಿಗ್ಗೆ ಜಿಜಿಹೆಚ್ ಸರ್ಕಲ ದಿಂದ ಸೇಡಂ ರಿಂಗ್ ರೋಡ ನಲ್ಲಿ ಬರುವ ಬಸವೇಶ್ವರ ಆಸ್ಪತ್ರೆ ಎದುರಿನ ರೋಡ ಬದಿಯಲ್ಲಿ ಶ್ರೀ ಮಹಮ್ಮದ ರಫೀಕ ತಂದೆ ಮಹ್ಮದ ಖಾಸಿಂ ಸಾ ಉಮರ ಕಾಲೋನಿ ಅಜಾದಪೂರ ರೋಡ ಕಲಬುರಗಿ ರವರ ಹೆಂಡತ್ತಿಯಾದ ಸುಲ್ತಾನಾ ಬೇಗಂ ಇವರು ತನ್ನ ಮಗಳಾದ ಇನಶೀರಾ ಮಹ್ಮದಿ ವ: 4 ತಿಂಗಳು ಇವಳಿಗೆ ಎತ್ತಿಕೊಂಡು  ಮೆಡಿಕಲಗೆ ಹೋಗಿ ಮಾತ್ರೆ ತೆಗೆದುಕೊಂಡು ಫಿರ್ಯಾಧಿ ನಿಲ್ಲಿಸಿದ ಮೋಟಾರ ಸೈಕಲ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ  ಆರ್.ಟಿ.ಓ ಕ್ರಾಸ್ ಕಡೆಯಿಂದ ಮಹಾನಗರ ಪಾಲಿಕೆಯ ಟ್ರಕ್ ನಂ ಕೆಎ-32 ಸಿ-5692 ನೇದ್ದರ ಚಾಲಕ  ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿ ಹೆಂಡತ್ತಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸುಲ್ತಾನಾ ಬೇಗಂ ಇವಳ ತೆಲೆಯ ಮೇಲಿಂದ ಹಿಂದಿನ ಟೈರ್ ಹಾಯಿಸಿ ಫಿರ್ಯಾಧಿ ಮಗಳ ತೆಲೆಗೆ ಭಾರಿಗಾಯಗೊಳಿಸಿ ಹಾಗೆ ಟ್ರಕ್ ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ಫಿರ್ಯಾಧಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಫಿರ್ಯಾಧಿ ಮಗಳಾದ ಸಾಯಮಾ ನಾಜಾ ಇವಳಿಗೆ ಭಾರಿಗಾಯಗೊಳಿಸಿದ್ದು ಸದರ ಘಟನೆಯಿಂದ ಸುಲ್ತಾನಾ ಬೇಗಂ ಇವರ ತೆಲೆಗೆ ಮತ್ತು ಮುಖಕ್ಕೆ ಭಾರಿ ಪೆಟ್ಟಾಗಿ ತೆಲೆಯಿಂದ ಮೆದಳು ಹೋರಗೆ ಬಂದು ಸ್ಥಳದಲ್ಲಿ ಮೃತ ಪಟ್ಟಿದ್ದು ಅವರ ಮಗಳಾದ ಇನಿಶೀರಾ ಮಹ್ಮದಿ ಇವಳ ತೆಲೆಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಟ್ರಕ್ ಚಾಲಕ ತನ್ನ ವಾಹನ ಅಲ್ಲಿಯೇ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 : ದಿನಾಂಕ 24-05-2019 ರಂದು ಮುಂಜಾನೆ  ನಾನು ಮತ್ತು ನನ್ನ ಅಣ್ಣನ ಮಗನಾದ ರಾಹುಲ ಇಬ್ಬರೂ ಮನೆಯಿಂದ ಪಬ್ಲಿಕ ಗಾರ್ಡನನಲ್ಲಿ  ವಾಕಿಂಗ ಮಾಡಲು ನಮ್ಮ ಬಡಾವಣೆಯ ರಸ್ತೆಯಿಂದ ಏಷಿಯನ ಮಹಲ ಕಡೆಗೆ ಹೋಗುವ ರಸ್ತೆಯ ಎಡಬದಿಯಿಂದ ನಡೆದುಕೊಂಡು ಹೋಗುವಾಗ ಹಿಂದಿನಿಂದ ಎನಫಿಲ್ಡ್ ಮೋಟಾರ ಸೈಕಲ ನಂ ಕೆಎ-32/ಇಎನ್-2636 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ರಾಹುಲ ಇತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಚಂದ್ರಶೇಖರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀ ಆಕಾಶ ತಂದೆ ಧೂಳಪ್ಪ ಹಂಚನಾಳ ಸಾ: ಖುದ್ದಿ ಹೋಟೆಲ ಹಿಂದುಗಡೆ ಶಿವಾಜಿ ನಗರ ಕಲಬುರಗಿ ಈ  ಮೇಲ್ಕಾಣಿಸಿದ ವಿಳಾಸದ ನಿವಾಸಿತನಿದ್ದು ಸಂದೀಪ ಇವನು ನಮ್ಮ ಶಿವಾಜಿನಗರದಲ್ಲಿ ವಾಸವಾಗಿದ್ದು ಈತನ ಪರಿಚಯ ಇರುತ್ತದೆ ಈತನ ಗೆಳೆಯರಾಗಿರುವ ಅಜೇಯ ಅನ್ನುವನು ಸಂದೀಪ ಈತನಿಗೆ ಮೊಬೈಲದಲ್ಲಿ ಫೋಟೋ ಹಾಕಿ ಸ್ಟೇಟಸ್ ಇಟ್ಟುಕೊಂಡಿದ್ದು ಈ ವಿಷಯದಲ್ಲಿ ಸಂದೀಪ ಈತನೊಂದಿಗೆ ತಕರಾರು ಆಗಿರುತ್ತದೆ. ದಿನಾಂಕ: 24.05.2019 ರಂದು ಸಾಯಂಕಾಲ ನಾನು ಮನೆಯಿಂದ ಬಂದು ಶಿವಾಜಿ ನಗರದ ಮಸೂದಿಯ ಹತ್ತಿರ ಇರುವ ಶಾಂತು ಹೋಟೆಲ ಎದುರುಗಡೆ ನಿಂತಾಗ ಆ ವೇಳೆಯಲ್ಲಿ ಅಜೇಯ ಮತ್ತು ಅಭಿ ಇಬ್ಬರೂ ಬಂದವರೆ ನಿಂತಿದ್ದ ನನಗೆ ಅಜೇಯ ಈತನು ನನಗೆ ಬಾ ಅಂತಾ ಕರೆದನು ಅದಕ್ಕೆ ನಾನು ಯಾಕೇ ಅಂತಾ ಕೇಳಿದೆನು ನೀನು ಸಂದೀಪ ಈತನಿಗೆ ಸ್ಟೇಟಸ್ ಹಾಕಿದ್ದರಿಂದ ಅವನಿಗೆ ಯಾಕೆ ಬೈದಿರುವಿ ಅಂತಾ ಕೇಳಿದ್ದು ಅದಕ್ಕೆ ನಾನು ಯಾರಿಗೂ ಕೂಡಾ ಬೈದಿಲ್ಲ ಅಂತಾ ಹೇಳಿದೆ ಅದಕ್ಕೆ ಅಜೇಯ ಮತ್ತು ಅಭಿ @ ಅಭ್ಯಾ ಇಬ್ಬರೂ ನಿನಗೆ ಶಿವು ಅಣ್ಣ ಕರೆಯುತ್ತಿದ್ದಾನೆ ಅವನ ಹತ್ತಿರ ನಡೆ ಅಂತಾ ಹೇಳಿದ್ದರಿಂದ ನಾನು ಸದರಿ ಶಾಂತು ಈತನ ಹೋಟೆಲ ಎದುರುಗಡೆಯಿಂದ ಅವರ ಜೊತೆಯಲ್ಲಿಯೇ ರಾಜೀವ ಗಾಂಧಿನಗರ ಹತ್ತಿರ ಇರುವ ನೀರಿನ ಟಾಕಿಯ ಖುಲ್ಲಾ ಜಾಗೆಯಲ್ಲಿ ಹೋಗಿದ್ದು ಅಲ್ಲಿ ಆಗಲೇ ಸೈನಿಕ, ಶಿವು, ಲಚ್ಯಾ @ ಲಕ್ಷ್ಮಿಕಾಂತ, ಇಸ್ಮಾಯಿಲ್, ಇತರ ಜನರು ಗ್ರೌಂಡದಲ್ಲಿ ಕೈಯಲ್ಲಿ ಬ್ಯಾಟ, ಸ್ಟಂಪ, ಬಡಿಗೆ, ಹಿಡಿದುಕೊಂಡು ನಿಂತಿದ್ದು ನಾನು ಅಲ್ಲಿ ಹೋದ ಕೂಡಲೆ ಲಚ್ಯಾ @ ಲಕ್ಷ್ಮಿಕಾಂತ ಈತನು ಕೈಯಿಂದ ನನ್ನ ಬಲ ಕಣ್ಣಿನ ಹುಬ್ಬಿನ ಮೇಲೆ ಮುಷ್ಟಿ ಮಾಡಿ ಜೋರಾಗಿ ಹೊಡೆದನು ಮತ್ತು ತನ್ನ ಕೈಯಲ್ಲಿದ್ದ ಬ್ಯಾಟಿನಿಂದ ಬೆನ್ನಿಗೆ ಹೊಡೆದನು ನಂತರ ಶಿವು ಈತನು ರಂಡಿ ಮಗನೇ ನಿನಗೆ ಬಹಳ ಸೊಕ್ಕು ಬಂದಿದೆ ಮಗನೇ ನೀನು ಸಂದೀಪ ಈತನಿಗೆ ಅಂಜಿಸುತ್ತಿ ಸೂಳೆ ಮಗನೇ ಅಂತಾ ಅಂದವನೆ ಅವನ ಕೈಯಲ್ಲಿ ಇದ್ದ ಬಡಿಗೆಯಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದು ರಕ್ತಗಾಯ ಮಾಡಿದನು ಸೈನಿಕ ಈತನು ಕೈಯಿಂದ ಹೊಟ್ಟೆಯಲ್ಲಿ ಮತ್ತು ಬೆನ್ನಿನ ಮೇಲೆ ಮುಷ್ಟಿಮಾಡಿ ಹೊಡೆದನು ಇಸ್ಮಾಯಿಲ್ ಈತನು ಸ್ಟಂಪದಿಂದ ನನ್ನ ಎಡಗಾಲಿನ ತೊಡೆಯ ಮೇಲೆ ಹೊಡೆದು ಭಾರಿ ಗುಪ್ತಗಾಯ ಪಡಿಸಿದ್ದು ಇದರಿಂದ ಒಮ್ಮೇಲೆ ನನ್ನ ಕಾಲಿಗೆ ಬಾವು ಬಂದಿದೆ ನಂತರ ಇನ್ನುಳಿದ 8-10 ಜನ ಹುಡುಗರು ಎಲ್ಲರೂ ಸೇರಿಕೊಂಡು ಕೈಯಿಂದ ಕಾಲಿನಿಂದ ನನಗೆ ನೆಲಕ್ಕೆ ಕೆಡವಿ ಹಾಕಿ ಸಿಕ್ಕಾ ಪಟ್ಟೆಯಾಗಿ ಹೊಡೆ-ಬಡೆ ಮಾಡಿದ್ದು ಇವರೆಲ್ಲರೂ ನನಗೆ ಸುತ್ತುಗಟ್ಟಿ ಹೊಡೆಯುವುದನ್ನು ಕಂಡು ನನ್ನ ಗೆಳೆಯನಾದ ಸಾಗರ ತಂದೆ ಪ್ರಭಾಕರ ಹಾಗೂ ಅಲ್ಲಿಂದ ಬರುತ್ತಿದ್ದ ಅನೀಲ ತಂದೆ ಶಿವಾನಂದ ಎನ್ನುವವರು ಓಡಿ ಬಂದು ಜಗಳ ಬಿಡಿಸಿರುತ್ತಾರೆ ಇಲ್ಲದಿದ್ದರೆ ಅವರು ನನಗೆ ಇನ್ನೂ ಹೆಚ್ಚಿಗೆ ಹೊಡೆಯುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 May 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಸಂತೋಷ ತಂದೆ ಮಡಿವಾಳಪ್ಪ ತುಪ್ಪದ ಸಾ|| ಯಡ್ರಾಮಿ ರವರು ದಿನಾಂಕ 16-04-2019 ರಂದು ಬೆಳಿಗ್ಗೆ ನಾನು ಜೇವರ್ಗಿಗೆ ಕೆಲಸದ ನಿಮಿತ್ಯ ನಮ್ಮೂರ ಶ್ರೀಕಾಂತ ತಂದೆ ಗುರುಲಿಂಗಪ್ಪ ಸಾತಿಹಾಳ ರವರ ಸ್ವಿಫ್ಟ್ ಕಾರ ನಂ ಕೆ.-27/ಎಮ್-2979 ನೇದ್ದರಲ್ಲಿ ಕುಳಿತು ಜೇವರ್ಗಿಗೆ ಹೋಗುತ್ತಿದ್ದೇವು, ಕಾರನ್ನು ಶ್ರೀಕಾಂತ ಇವನು ಚಲಾಯಿಸುತ್ತಿದ್ದನು,ನಂತರ 08;30 .ಎಂ ಸುಮಾರಿಗೆ ಕುಕ್ಕನೂರ ಕ್ರಾಸ್ ದಾಟಿ ಹೋಗುತ್ತಿದ್ದಾಗ ಕರಕಿಹಳ್ಳಿ ಗ್ರಾಮದ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾಬರುತ್ತಿದ್ದನು, ನಂತರ ರೋಡಿನ ಬಲಗಡೆ ಒಂದು ಮಣ್ಣಿನ ಡಿಬ್ಬಿ ಇದ್ದಿದ್ದರಿಂದ ಲಾರಿ ಚಾಲಕನು ಲಾರಿಯನ್ನು ಒಮ್ಮಲೆ ನಮ್ಮ ಮೈ ಮೇಲೆ ತಂದಿದ್ದರಿಂದ ನಾವು ನಮ್ಮ ಕಾರನ್ನು ಎಡಕ್ಕೆ ತಿರುವಿದಾಗ ಲಾರಿ ಚಾಲಕನು ನಮ್ಮ ಕಾರಿನ ಬಲಗಡೆ ಹಿಂದೆ ಡಿಕ್ಕಿ ಹೊಡೆದನು, ಆಗ ನಮ್ಮ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಲಾರಿ ಹಿಂದೆ ಬರುತ್ತಿದ್ದ ಮೋಟರ ಸೈಕಲ ಮೇಲೆ ನಮ್ಮ ಕಾರು ಬಿದ್ದು ನಂತರ ಎರಡು ಪಲ್ಟಿಯಾಗಿ ತೆಗ್ಗಿನಲ್ಲಿ ಬಿದ್ದಿತು, ನಂತರ ನಾನು ಕಾರಿನಿಂದ ಹೊರಗೆ ಬಂದು ನೋಡಿದಾಗ ನನ್ನ ಎಡಗಾಲಿನ ಮೊಳಕಾಲ ಕೆಳಗೆ ತರಚಿದಗಾಯ, ಬಲಮೊಳಕೈಗೆ ಮತ್ತು ಎದೆಗೆ ಒಳಪೆಟ್ಟಾಗಿತ್ತು, ಶ್ರೀಕಾಂತನಿಗೆ ಬಲಕಿವಿ ಹಿಂದೆ, ಬಲರಟ್ಟೆಗೆ ಮತ್ತು ಬಲತೊಡೆಗೆ ಒಳಪೆಟ್ಟಾಗಿರುತ್ತವೆ, ನಂತರ ಮೋಟರ ಸೈಕಲ್ ನೋಡಲಾಗಿ ಅದರ ನಂಬರ ಕೆ.-22/.ಎಮ್-7112 ನೇದ್ದು ಇತ್ತು, ಮೋಟರ ಸೈಕಲ್ ಮೇಲಿದ್ದ ವ್ಯಕ್ತಿಯನ್ನು ನೋಡಲಾಗಿ ಅವನು ಅಲ್ಲೆ ರೋಡಿನ ಬಲಗಡೆ ಬಿದ್ದಿದ್ದು, ಅವನ ಬಲತೊಡೆಗೆ ಭಾರಿ ಒಳಪೆಟ್ಟಾಗಿರುತ್ತದೆ, ತಲೆಗೆ ಭಾರಿ ಒಳಪೆಟ್ಟಾಗಿ ರಕ್ತಗಾಯವಾಗಿರುತ್ತದೆ, ಗದ್ದಕ್ಕೆ ಭಾರಿ ರಕ್ತಗಾಯವಾಗಿರುತ್ತದೆ, ಬಳಭುಜಕ್ಕೆ, ಮತ್ತು ಮೈಮೇಲೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ, ನಂತರ ಮೋಟರಸೈಕಲ್ ಸವಾರನಿಗೆ ವಿಚಾರಿಸಲಾಗಿ ಅವನು ತನ್ನ ಹೆಸರು ಮಡಿವಾಳಪ್ಪ ತಂದೆ ಪೀರಪ್ಪ ಹೊಸಮನಿ ಸಾ|| ಗೊಬ್ಬರಡಗಿ ಅಂತಾ ಹೇಳಿದನು, ನಮಗೆ ಡಿಕ್ಕಿ ಪಡಿಸಿದ ಲಾರಿ ನೋಡಲಾಗಿ ಅಲ್ಲೆ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಅದರ ಚಾಲಕ ಓಡಿ ಹೋಗಿದ್ದನು, ಲಾರಿ ನಂಬರ ನೋಡಲಾಗಿ ಕೆ.-32/ಬಿ-3110 ನೇದ್ದು ಇತ್ತು, ನಂತರ ನಮ್ಮ ಸಂಬಂಧಿಕಾನ ಶಾಂತಕುಮಾರ ತಂದೆ ಸಂಗಣ್ಣ ಹೆರೂರ ರವರಿಗೆ ಪೋನ ಮಾಡಿ ಕರೆಯಿಸಿದೆನು, ಅಷ್ಟರಲ್ಲಿ ವಿಷಯ ತಿಳಿದು ಮಡಿವಾಳಪ್ಪನ ಸಂಬಂಧಿಕರಾದ ನಿಂಗಣ್ಣ ತಂದೆ ಭೀಮರಾಯ ಗಂಗಾಕರ ಸಾ|| ಹರನಾಳ ರವರು ಸ್ಥಳಕ್ಕೆ ಬಂದು ಮಡಿವಾಳಪ್ಪನಿಗೆ 108 ಅಂಬೂಲೆನ್ಸಲ್ಲಿ ಹಾಕಿ ಉಪಚಾರ ಕುರಿತು ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ತೆಗೆದುಕೊಂಡು ಹೋದರು, ನಂತರ ಶ್ರೀಕಾಂತನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿ ಕಲಬುರಗಿಯ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ,  ರಸ್ತೆ ಅಪಘಾತದಲ್ಲಿ ಗಾಯಹೊಂದಿದ ಮಡಿವಾಳಪ್ಪ ತಂದೆ ಪೀರಪ್ಪ ಹೊಸಮನಿ ಸಾ|| ಗೊಬರಡಗಿ ರವರು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ದಿನಾಂಕ 20-05-2019 ರಂದು 10;35 ಪಿ.ಎಂ ಕ್ಕೆ ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಈಶ್ವರ ತಂದೆ ಚಿದಾನಂದ ಹೊನ್ನಕಿರಣಗಿ ಸಾ|| ಕೃಷ್ಣಾನಗರ ಕಲಬುರಗಿ ರವರು ದಿನಾಂಕ; 20/05/2019 ರಂದು 2;30 ಪಿ.ಎಮ್ ಸುಮಾರಿಗೆ ನಾನು ಹಾಗು  ನಮ್ಮ ಮವನಾದ ಖುಷಿರಾಜ ಇಟಗಿ ಇಬ್ಬರು ಕೂಡಿಕೊಂಡು ಮಾತನಾಡುತ್ತಾ ನಮ್ಮ ಮನೆಯ ಕಡೆಗೆ ಹೊಗುತ್ತಿದ್ದಾಗ ನಮ್ಮ ತಮ್ಮನಾದ ಯಲ್ಲಪ್ಪ ಇತನು ಬಂದವನೆ ನಮ್ಮ ಮನೆಯಲ್ಲಿ ಸರಿಯಾಗಿ ಪಾಲ ಕೊಡುತ್ತಿಲ್ಲ ಮಗನೇ ಅಂದವನೆ ನನಗೆ ತಡೆದು ಕೈಯಿಂದ ಮನಸ್ಸಿಗೆಬಂದಂಗೆ ನನ್ನ ಮೈ ಕೈಗೆ ಹೊಡೆಯ ಹತ್ತಿದನು. ಆಗ ನಾನು ಯಾಕೆ ಹೊಡೆಯುತ್ತಿಯಾ ನಿನಗೆ ಕೊಡಬೇಕಾದ ಪಾಲ ಸರಿಯಾಗಿ ಹಂಚಿಕೊಟ್ಟಿದೆಯಲ್ಲ ಅಂದಾಗ ಮಗನ್ಯಾ ಮತ್ತೆ ಎದುರು ಮಾತನಡುತ್ತಿಯಾ ನಿನಗೆ ಜೀವಸಹಿತ ಬಿಡುವದಿಲ್ಲ ಅಂತಾ ಬೈಯುತ್ತಾ ಕೈಯಿಂದ ಹೊಡಯುತ್ತಾ ಕಾಲಿನಿಂದ ಒದೆಯುತ್ತಿದ್ದಾಗ ಅಲ್ಲಿಯೇ ಇದ್ದ ನಮ್ಮ ಮಾವನಾದ ಖುಷಿರಾಜ ಇಟಗಿ ಮತ್ತು ನನ್ನ ಹೆಂಡತಿ ಸುಮಿತ್ರಾ ಇವರುಗಳು ಜಗಳ ಬಿಡಿಸಿಕೊಂಡರು. ಕಾರಣ ನಮ್ಮ ತಮ್ಮನಾದ ಯಲ್ಲಪ್ಪ ಇತನು ಸುಮ್ಮಸುಮ್ಮನೆ ಮನೆಯಲ್ಲಿ ಪಾಲ ಸರಿಯಾಗಿ ಕೊಟ್ಟಿರುವದಿಲ್ಲ ಅಂತಾ ಜಗಳ ತೆಗೆದು ಅವಚ್ಯವಾಗಿಬೈದು ಜೀವಬೆದರಿಕೆ ಹಾಕಿ ಕೈಯಿಂದ ನನ್ನ ಮೈಕೈಗೆಹೊಡೆಬಡಿ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರಾಘವೇಂದ್ರ ನಗರ ಠಾಣೆ : ಶ್ರೀ ಯಲ್ಲಪ್ಪ ತಂದೆ ಚಿದಾನಂದ ಹೊನ್ನಕಿರಣಗಿ ಸಾ|| ಕೃಷ್ಣಾನಗರ ಕಲಬುರಗಿ ರವರು ದಿನಾಂಕ; 20/05/2019 ರಂದು 2;30 ಪಿಎಮ್ ಸುಮಾರಿಗೆ ನಾನು ನಮ್ಮ ಮನೆಯ ಮುಂದಿನ ಅಂಗಳದಲ್ಲಿದ್ದಾಗ ನಮ್ಮ ಅಣ್ಣನಾದ ಈಶ್ವರ ಹಾಗು ನಮ್ಮ ಮಾವನಾದ ಖುಷಿರಾಜ ಇಟಗಿ ಇಬ್ಬರು ಕೂಡಿಕೊಂಡು ಮತನಾಡುತ್ತಾ ನಮ್ಮ ಮನೆಯ ಕಡೆಗೆ ಬರುತ್ತಿದ್ದರು ಆಗ ನಮ್ಮ ಅಣ್ಣನಾದ ಈಶ್ವರ ಇತನಿಗೆ ನಮ್ಮ ಮನೆಯಲ್ಲಿ ಸರಿಯಾಗಿ ಪಾಲ ಕೊಡುತ್ತಿಲ್ಲ ತಂದೆ ತಾಯಿಯವರು ಎಲ್ಲಿರಬೇಕು ಅಂತಾ ಕೇಳಿದೆ ಅದಕ್ಕೆ ನಮ್ಮ ಅಣ್ಣ ಈಶ್ವರ ಇತನು ನನಗೆ ಏ ಬೋಸಡಿ ಮಗನೆ ನಿನಗೆ ಕೊಡಬೇಕಾದ ಪಾಲ ಕೊಡಲಾಗಿದೆ ಮತ್ತೆ ಪಾಲ ಕೇಳುತ್ತಿರಯಾ ಅಂತಾ ಕೈಯಿಂದ ಮನಸ್ಸಿಗೆಬಂದಂಗೆ ನನ್ನ ಮೈಕೈಗೆಹೊಡೆಯಹತ್ತಿದನು. ಆಗ ನಾನು ಯಾಕೆ ಹೊಡೆಯುತ್ತಿಯಾ ನನಗೆ ಕೊಡಬೇಕಾದ ಪಾಲ ಸರಿಯಾಗಿ ಹಂಚಿಕೊಡು ಅಂತಾ ಅಂದಾಗ ಮಗನ್ಯಾ ಮತ್ತೆ ಎದುರು ಮತನಡುತ್ತಿಯಾ ನಿನಗೆ ಜೀವಸಹಿತ ಬಿಡುವದಿಲ್ಲ ಅಂತಾ ಬೈಯುತ್ತಾ ಕೈಯಿಂದ ಹೊಡಯುತ್ತಾ ಕಾಲಿನಿಂದ ಒದೆಯುತ್ತಿದ್ದಾಗ ನಮ್ಮ ಮಾವನಾದ ಖುಷಿರಾಜ ಇಟಗಿ ಇತನು ಸಹ ನನಗೆ ಈ ಮಗನಿಗೆ ಬಿಡಬೇಡ ಅಂತಾ ಬೈದು ಕೈಯಿಂದ ಹೋಡೆಯ ಹತ್ತಿದನು ಆಗ ನಮ್ಮ ತಾಯಿ ಕಸ್ತೂರಿಬಾಯಿ ಹಾಗೂ ಅಕ್ಕಳಾದ ಮಹಾದೇವಿ ಇವರು ಬಿಡಿಸಲು ಬಂದರೆ ಅವರಿಗೂ ದಬ್ಬಿಸಿಕೊಟ್ಟು ಹೊಡೆಬಡೆ ಮಾಡಿರುತ್ತಾರೆ ಅಂತಾ ಸಲ್ಲಿ ಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಪಾಂಡುರಂಗ ತಂದೆ ಬೀಮರಾವ ಕುಲಕರ್ಣಿ ಸಾ: ವೀರಭದ್ರೇಶ್ವರ ಕಾಲೋನಿ ಪ್ಲಾಟ ನಂ 185 ಉದನೂರ ಕ್ರಾಸ್  ಅತಿಥಿ ಬಾರ ಹಿಂದುಗಡೆ ಕಲಬುರಗಿ ರವರು ದ್ವಿ-ಚಕ್ರವಾಹನ ಟಿವಿಎಸ್ ಎಕ್ಸಲ್  ವಾಹನ ಸಂಖ್ಯೆ ಕೆಎ 32  ಇಕೆ 6203 ನೆದ್ದನ್ನು 3 ವರ್ಷಗಳ ಹಿಂದೆ ಖರೀಧಿಸಿದ್ದು ಅದನ್ನು ಇಲ್ಲಿಯವರೆಗೆ ನಾನೇ ಉಪಯೋಗಿಸಿಕೊಂಡು ಬಂದಿದ್ದು ಇರುತ್ತದೆ.  ವಾಹನದ ಸಂಖ್ಯೆ ಕೆಎ 32  ಇಕೆ 6203 ಚೆಸ್ಸಿ ನಂ MD621BD15F2K14976, ಇಂಜಿನ ನಂ 0D1KF1581229  ಅಂದಾಜು ಕಿಮ್ಮತ್ತು  25000/- ರೂ ಈ ರೀತಿ ವಿವರವನ್ನೊಳ ಗೊಂಡ ಈ ನನ್ನ ವಾಹನವನ್ನು ನಾನು ಕೆಲಸದ ನಿಮಿತ್ಯ ದಿನಾಂಕ 11.05.2019 ರಂದು ಮದ್ಯಾಹ್ನ 12.30 ಗಂಟೆಯ ಸುಮಾರಿಗೆ ಎಲ್.ಐ.ಸಿ ಆಪೀಸ್ದಲ್ಲಿ ಸಾಲ ಪಡೆದ ಹಣ ತುಂಬಲು ಹೋದಾಗ ನನ್ನ ವಾನವನ್ನು ಹೆಡ್ ಪೋಷ್ಟ ಆಫೀಸ್ ಮುಂದುಗಡೆ ಗೇಟ ಹತ್ತಿರದಲ್ಲಿ ನಿಲ್ಲಿಸಿ ಆಫೀಸದಲ್ಲಿ ಹೋಗಿ ಹಣ ತುಂಬಿದ ನಂತರ ಅಲ್ಲಿಯೇ ಇರುವ ಮಾರ್ಕೇಟದಿಂದ ಸಂತೆ ಮಾಡಿಕೊಂಡು ಬಂದು ನೋಡುವಷ್ಟರಲ್ಲಿ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿ-ಚಕ್ರ ವಾಹನ ಇರಲಿಲ್ಲ ನಾನು ಹತ್ತಿರದಲ್ಲಿ ಎಲ್ಲ ಕಡೆಗೆ ಹುಡುಕಾಡಲಾಗಿ ಎಲ್ಲಿಯೂ ಇರಲಿಲ್ಲ ಆಗ ನಾನು ನನ್ನ ಗೆಳೆಯರಾದ ಉದಯಕುಮಾರ ಕುಲಕರ್ಣಿ ಮತ್ತು ಜಯತೀರ್ಥ ಸಾವಳಗಿ ಇವರಿಗೆ ನನ್ನ ಮೋಟರ ಸೈಕಲ ಕಳುವು ಆಗಿರುತ್ತದೆ ಅಂತಾ ತಿಳಿಸಿದ್ದು ಆಗ ಅವರೂ ಕೂಡಾ ಅಲ್ಲಿಗೆ ಬಂದು ನನ್ನ ವಾಹನ ಇಲ್ಲದ್ದನ್ನು ನೋಡಿದ್ದು ನಂತರ ನಾವೆಲ್ಲರೂ ಕೂಡಿಕೊಂಡು ಅಲ್ಲಿಂದ ಇಲ್ಲಿಯವರೆಗೆ ಹುಡುಕಾಡಿದ್ದು ಅದು ಸಿಕ್ಕಿರುವುದಿಲ್ಲ. ಇಲ್ಲಿಯವರೆಗೆ ಎಲ್ಲಿಯಾದರೊ ನನ್ನ ಮೋಟರ ಸೈಕಲ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 May 2019

KALABURAGI DIST REPORTED CRIMES


ನರೋಣಾ ಪೊಲೀಸ್ ಠಾಣೆ:
ಕೊಲೆ ಪ್ರಕರಣ:ದಿನಾಂಕ:19/05/2019 ರಂದು ಜಿ.ಜಿ.ಹೆಚ್ ಕಲಬುರಗಿಯಿಂದ ಡೆತ್ ಎಂ.ಎಲ್.ಸಿ ವಸೂಲಾದ ಮೇರೆಗೆ ಜಿ.ಜಿ.ಹೆಚ್ ಕಲಬುರಗಿಗೆ ಭೇಟಿಕೊಟ್ಟು ವಿಚಾರಿಸಲಾಗಿ ಮೃತ ಕಾಶಿಬಾಯಿ ಇವಳ ಮಗನಾದ ಶರಣಬಸ್ಪಪಾ ತಂದೆ ಬೀರಣ್ಣಾ ಖಟೆಗೆ ಸಾ:ಮುನ್ನಳ್ಳಿ ಲಿಖಿತ ದೂರು ಸಲ್ಲಿಸಿದ್ದು ಅದರಲ್ಲಿ  ದಿನಾಂಕ:18/05/2019 ರಂದು  ರಾತ್ರಿ ಸುಮಾರು 10-00 ಗಂಟೆಗೆ ನಾವೆಲ್ಲರೂ ಊಟಮಾಡಿ ನಾನು ಮಗಲಗಿಕೊಳ್ಳಲು ಮನೆಯೆ ಹತ್ತಿರ ಇರುವ ಕುರಿ ದೊಡ್ಡಿ ಪ್ಲಾಟಿಗೆ ಹೋಗಿದ್ದು. ರಾತ್ರಿ  ಅಂದಾಜು 01-30 ಎ.ಎಂ ಗಂಟೆ ಸುಮಾರಿಗೆ ನಮ್ಮ ಮನಯ ಹತ್ತಿರ ಚಿರಾಡುವ ಸಪ್ಪಳ ಕೇಳಿ ನಾನು ಗಾಬರಿಯಾಗಿ ಹೋಗಿ ನೋಡಲಾಗಿ ನನ್ನ ತಾಯಿ ಕಾಶಿಬಾಯಿಗೆ ಬೆಂಕಿ ತಗುಲಿ ಚೀರಾಡುತ್ತಿದ್ದು . ಇದನ್ನು ನೋಡಿ ಗುಂಡಪ್ಪಾ ನಮ್ಮ ಕಾಕಾ ರೇವಣಸಿದ್ದಪ್ಪಾ ರಾಜಾ, ಚಂದ್ರಕಲಾ ಹಾಗೂ ನಮ್ಮ ಸಂಬಂಧಿಕರಾದ ಗುರುಬಾಯಿ ಶ್ರೀದೇವಿ ಎಲ್ಲರೂ ಆರಿಸಿ ನನ್ನ ತಾಯಿಯ ಉಪಚಾರ ಸಲುವಾಗಿ ಒಂದು ಖಾಸಗಿ ವಾಹನದಲ್ಲಿ ಆಳಂದದ ಡಾ||ಪಿ.ಎನ್.ಶಾ ಆಸ್ಪತ್ರೆಗೆ ಒಯ್ದು ಅಲ್ಲಿಂದ ಅದೇ ಕಾರಿನಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಸೇರಿಮಾಡಿರುತ್ತೇವೆ. ಈ ಬಗ್ಗೆ ನನ್ನ ತಾಯಿಗೆ ವಿಚಾರಿಸಿದಾಗ ತಾನು ಮತ್ತು ಗುಂಡಪ್ಪಾ ಇಬ್ಬರು ಮನೆಯ ಮುಂದಿನ ಫತ್ರಾ ಖೊಲ್ಲಿಯಲ್ಲಿ ಮಲಗಿದ್ದಾಗ ರಾತ್ರಿ ಯಾರೋ ಬಂದು ನನ್ನ ಮೈಮೇಲೆ ಗಾಸ್ಲೇಟ್ ಎಣ್ಣೆ ಸುರಿದು ಬೆಂಕಿ ಹಚ್ಚಿ ಓಡಿ ಹೋದರು ಅಂತಾ ತಿಳಿಸಿದ್ದು. ನನ್ನ ತಾಯಿಯವರು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಹೊಂದುತ್ತಾ ದಿನಾಂಕ:19/05/2019 ರಂದು ಬೆಳಿಗ್ಗೆ 0700 ಗಂಟೆಗೆ ಮೃತ ಪಟ್ಟಿರುತ್ತಾಳೆ. ನನ್ನ ತಾಯಿಗೆ ಯಾರೋ ದುರುದ್ದೇಶದಿಂದ ಮೈಮೇಲೆ ಸೀಮೆ ಎಣ್ಣೆ ಸುರಿದ ಮೈಗೆ ಬೆಂಕಿ ಹಚ್ಚಿದ್ದು . ನನ್ನ ತಾಯಿ ಭಾರಿ ಸುಟ್ಟಗಾಯಗಳಿಂದ ಮೃತಪಟ್ಟಿರುತ್ತಾಳೆ ಕಾರಣ ತಾವು ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನರೋಣಾ ಪೊಲೀಸ್ ಠಾಣೆ:
ಅಪಘಾತ ಪ್ರಕರಣ: ದಿನಾಂಕ:19/05/2019 ರಂದು 2ಶ್ರೀ ಸೂರ್ಯಕಾಂತ ತಂ ಸಿದ್ರಾಮಪ್ಪ ಸಾ: ಬೆಳಮಗಿ 1ರವರು ಠಾಣೆಗೆ ಹಾಜರಾಗಿ ನನ್ನ ಮಗ ಶರಣಬಸಪ್ಪನು ನಮ್ಮೂರಿನಲ್ಲಿ ಕಿರಾಣಿ ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ:19/05/2019 ರಂದು ಸಾಯಂಕಾ 7-00 ಗಂಟೆ ಸುಮಾರಿಗೆ ವ್ಹಿ.ಕೆ ಸಲಗರ ಗ್ರಾಮದಲ್ಲಿ ಕೆಲಸವಿದೆ ಅಂತಾ ನಮಗೆ ಹೇಳಿ ಮೊಟಾರ್ ಸೈಕಲ್ ನಂಬರ್ ಕೆಎ32-ಇಡಿ3280 ನೇದ್ದರ ಮೇಲೆ ತನ್ನ ಗೆಳೆಯನಾದ ಶೌಕತಲಿ ತಂದೆ ಲಾಲಸಬ ನಾಗೂರೆ ಇವರ ಸಂಗಡ ಹೋಗಿದ್ದು. ಸಾಯಂಕಾಲ 7-20 ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಸಿದ್ರಾಮಪ್ಪಾ ತಳಕೇರಿ ಹಾಗೂ ನಾಗಯ್ಯ ತಂದೆ ರೇವಣಸಿದ್ದಯ್ಯ ಜಂಗಿನಮಠ ಇವರು ನನ್ನ ಮೊಬೈಲಗೆ ಫೋನ ಮಾಡಿ ನಮ್ಮೂರಿನ ನಂದುಸ್ವಾಮಿ ಹೊಲದ ಹತ್ತಿರ ವ್ಹಿ.ಕೆ ಸಲಗರ ಕಡೆ ಹೋಗುವ ರೋಡಿನ ಮೇಲೆ ಶರಣಬಸಪ್ಪಾ ಹಾಗೂ ಶಾಕತಲಿ ಇಬ್ಬರಿಗೂ ಅಪಘಾತವಾಗಿದೆ ಅಂತಾ ತಿಳಿಸಿದ ಮೇರೆಗೆ ನಾನು ಹಾಗೂ ನಮ್ಮೂರಿನ ರಾಮು ಡೋಲೆ, ಚಂದ್ರಕಾಂತ ಹೇಡೆ, ಸಾಯಬಣ್ಣಾ ಡೋಲೆ, ಶೌಕತಲಿ ತಂದೆಯಾದ ಲಾಲಸಾಬ ನಾಗೂರೆ, ವಸೀಮ್ ನಾಗೂರೆ ಎಲ್ಲರೂ ಸೇರಿ ಒಂದು ಖಾಸಗಿ ಜೀಪನಲ್ಲಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನಾದ ಶರಣಪ್ಪ @ ಶರಣಬಸಪ್ಪನಿಗೆ ತಲೆಗೆ ಬಾರಿಒಳಪೆಟ್ಟಾಗಿ ಮೂಗಿನಿಂದ ಕಿವಿಯಿಂದ ಬಾಯಿ ಯಿಂದ ರಕ್ತ ಹೋಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.  ಹಾಗೂ ಶೌಕತಲಿ ಇತನಿಗೆ  ತೆಲೆಗೆ ಭಾರಿ ರಕ್ತಗಾಯ  ಮತ್ತು ಗುಪ್ತಗಾಯ ಹಾಗೂ ಎರಡು ಕಾಳುಗಳಿಗೆ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು ಅವನಿಗೆ ಆತನ ತಂದೆ ಲಾಲಸಾಬ ನಾಗೂರೆ ವಸೀಮ್ ಜಾಗಿರದಾರ ಇವರು ಒಂದು ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಉಮರ್ಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ಸದರಿ ಘಟನೆಯ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ನಮ್ಮೂರಿನ ಸಿದ್ರಾಮಪ್ಪಾ ತಳಕೇರಿ ಹಾಗೂ ನಾಗಯ್ಯ ಜಂಗಿನಮಠ ಇವರಿಗೆ ವಿಚಾರಿಸಲಾಗಿ ವ್ಹಿ.ಕೆ ಸಲಗರ ಗ್ರಾಮದಿಂದ ಬೆಳಮಗಿ ಗ್ರಾಮದ ಕಡೆಗೆ ಬರುವಾಗ ಒಂದು ಕ್ರೂಸರ್ ವಾಹನ ಚಾಲಕನು ತನ್ನ ವಾಹನವನ್ನು ಅತೀವೆಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸುತ್ತಾ ಬೆಳಮಗಿ ಕಡೆಗೆ ಹೊರಟು ನಂದುಸ್ವಾಮಿ ಹೊಲದ ಹತ್ತಿರ ಬೆಳಮಗಿ ಕಡೆಯಿಂದ ಮೊಟಾರ್ ಸೈಕಲ್ ನಂಬರ್ ಕೆಎ32ಇಡಿ3280 ನೇದ್ದಕ್ಕೆ ಅಪಘಾತ ಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನೋಡಿದಾಗ ಮೊಟಾರ್ ಸೈಕಲ್ ಸವಾರ ಶರಣಬಸಪ್ಪನಿಗೆ ತಲೆಗೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಹಿಂಬದಿ ಸವಾರನಾದ ಶೌಕತಲಿ ತಲೆಗೆ ಹಾಗೂ ಎರಡು ಕಾಲುಗಳಿಗೆ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯವಾದ ಬಗ್ಗೆ ತಿಳಿಸಿತ್ತಾರೆ. ಅಪಘಾತ ಪಡಿಸಿದ ಕ್ರೂಜರ್ ವಾಹನ ಸ್ಥಳದಲ್ಲಿಯೆ ಇದ್ದು ಅದರ ನಂಬರ್ ಪರಿಶೀಲಿಸಲಾಗಿ ಕೆಎ05-ಎಂಬಿ-9646 ಇದ್ದು ಅದರ ಚಾಲಕನು ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೊತ್ತಿರುವುದಿಲ್ಲ ಕಾರಣ ಅಪಘಾತ ಪಡಿಸಿದ ಕ್ರೂಜರ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಚೌಕ ಪೊಲೀಸ್ ಠಾಣೆ:
ವಾಹನ ಕಳುವು ಪ್ರಕರಣ:ದಿನಾಂಕಃ 18.05.2019 ರಂದು ಶ್ರೀ ಪಾಂಡುರಂಗ ತಂದೆ ಬೀಮರಾವ ಸಾ: ವೀರಭದ್ರೇಶ್ವರ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ  ತನ್ನ ದ್ವಿ-ಚಕ್ರವಾಹನ ಟಿವಿಎಸ್ ಎಕ್ಸ.ಎಲ್  ವಾಹನ ಸಂಖ್ಯೆ ಕೆ.ಎ32ಇಕೆ6203 ನೇದ್ದನ್ನು ದಿನಾಂಕ 11.05.2019 ರಂದು ಮದ್ಯಾಹ್ನ ಹೆಡ್ ಪೋಷ್ಟ ಆಫೀಸ್ ಮುಂದುಗಡೆ ಗೇಟ ಹತ್ತಿರದಲ್ಲಿ ನಿಲ್ಲಿಸಿ ಆಫೀಸದಲ್ಲಿ ಹೋಗಿ ಹಣ ತುಂಬಿದ ನಂತರ ಬಂದು ನೋಡುವಷ್ಟರಲ್ಲಿ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿ-ಚಕ್ರ ವಾಹನ ಇರಲಿಲ್ಲ ನಾನು ಹತ್ತಿರದಲ್ಲಿ ಎಲ್ಲ ಕಡೆಗೆ ಹುಡುಕಾಡಲಾಗಿ ಎಲ್ಲಿಯೂ ಇರಲಿಲ್ಲ ನನ್ನ ಮೋಟರ ಸೈಕಲ ಕಳುವು ಆಗಿರುತ್ತದೆ. ತಾವುಗಳು ಕಳುವಾದ ನನ್ನ ವಾಹನವನ್ನು ಪತ್ತೆ ಮಾಡಿಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ