POLICE BHAVAN KALABURAGI

POLICE BHAVAN KALABURAGI

01 November 2018

KALABURAGI DISTRICT REPORTED CRIMES

ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಬೇಬಿಬಾಯಿ  ಗಂಡ ದತ್ತು ಪವಾರ ಸಾ|| ಬಳೂರ್ಗಿ ರವರು ಸುಮಾರು 20 ವರ್ಷಗಳ ಹಿಂದೆ ಗೋಬ್ಬುರವಾಡಿ ತಾಂಡಾದ ದತ್ತು ತಂದೆ ಧನಸಿಂಗ ಪವಾರ ಇವರ ಜೋತೆ ಬಳೂರ್ಗಿಯಲ್ಲಿ ಮದುವೆಯಾಗಿದ್ದು ಇರುತ್ತದೆ. ನನ್ನ ಗಂಡನಾದ ದತ್ತು ರವರು ಸೇಡಂ ನಲ್ಲಿ ಪ್ರಾಥಮಿಕ ಶಾಲೆ ಶೀಕ್ಷಕ ಅಂತ ಕೆಲಸ ಮಾಡುತ್ತಾರೆ. ನನ್ನ ಗಂಡ ನಾಲ್ಕು ವರ್ಷ ನನ್ನ ಜೋತೆಗೆ ಸರಿಯಾಗಿ ಸಂಸಾರ ಮಾಡಿ ನಂತರ ಕಿರುಕುಳ ಕೊಡಲಿಕ್ಕೆ ಪ್ರಾರಂಬ ಮಾಡಿರುತ್ತಾರೆ. ಆಗಾಗ್ಗೆ ವರದಕ್ಷೀಣೆ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ನ್ಯಾಯ ಪಂಚಾಯತಿ ಮಾಡಿದರೂ ಕೇಳಿರುವುದಿಲ್ಲ. ನಂತರ ನಾನು ನನ್ನ ತವರು ಮನೆಯಲ್ಲಿ ಮಕ್ಕಳ ಜೋತೆಗೆ ಇದ್ದಿರುತ್ತೆನೆ . ನನ್ನ ಗಂಡನು ಸುಮಾರು 8 ವರ್ಷದ ಹಿಂದೆ ನನ್ನನ್ನು ಬಿಟ್ಟು ಇನ್ನೊಂಧು ಲಗ್ನ ಮಾಡಕೊಂಡಿರುತ್ತಾನೆ. ಇನ್ನೊಂದು ಲಗ್ನ ಮಾಡಿಕೊಂಡ ಬಗ್ಗೆ ಕೋರ್ಟಿನಲ್ಲಿ ಖಾಸಗಿ ದೂರು ಮಾಡಿರುತ್ತೇನೆ. ದಿನಾಂಕ 27-10-2018 ರಂದು ಅಫಜಲಪೂರದ ನ್ಯಾಯಾಲಯದಲ್ಲಿ ಕೇಸಿನ ಹಾಜರಿ ಇದ್ದರಿಂದ ನ್ಯಾಯಾಲಯಕ್ಕೆ ಬಂದಿರುತ್ತೇನೆ. ನಾನು ಹಾಗೂ ನನ್ನ ಮಗನಾದ ಬಸವರಾಜ ಇಬ್ಬರೂ ಕೋರ್ಟಿಗೆ ಹೋಗಿ ಹಾಜರಿ ಕೊಟ್ಟು ಹೊರಗೆ ಬರುತ್ತಿದ್ದಾಗ ಮದ್ಯಾಹ್ನ 2:35 ಗಂಟೆ ಸುಮಾರಿಗೆ ಕೋರ್ಟ ಎದುರುಗಡೆ ಸಿಸಿ ರಸ್ತೆಯ ಮೇಲೆ ನನ್ನ ಗಂಡ ಹಾಗೂ ಸುಬಾಷ ತಂದೆ ಜೋಕಲು, ಅಶೋಕ ತಂದೆ ಗುರುನಾಥ ಪವಾರ, ಲಿಂಬಾಜಿ ತಂದೆ ಧನಸಿಂಗ್ ಪವಾರ, ಗುರುನಾಥ ತಂದೆ ಧನಸಿಂಗ್ ಪವಾರ, ತಾರ್ಯಾ ತಂದೆ ಸೆವ್ಯಾ ರಾಠೋಡ, ಅಂಬ್ರುಬಾಯಿ ಗಂಡ ತಾರ್ಯಾ, ಶಾಂತಾಬಾಯಿ ಗಂಡ ದತ್ತು ದತ್ತು (ಎರಡನೆ ಹೆಂಡತ) ಇವರೆಲ್ಲರೂ ಇದ್ದಾಗ, ಸುಬಾಷ ತಂದೆ ಜೋಕಲು ಇವರು ನನ್ನ ಗಂಡನಿಗೆ ನಿನ್ನ ಹೆಂಡತಿಗೆ ನೀನು ಹೋಡಿತಿ ಇಲ್ಲಾ ನಾನು ಹೊಡಿಲಿ ಅಂತಾ ಹೇಳಿದ್ದರಿಂದ ನನ್ನ ಗಂಡನು ನನ್ನ ತಲೆಯ ಕೂದಲು ಹಿಡಿದು ನೆಲಕ್ಕೆ ತಲೆ ಬಡಿದು ಹಣೆಗೆ ರಕ್ತಗಾಯ ಪಡಿಸಿದ್ದು, ಅಶೋಕನು ನನ್ನ ಮಗನಾದ ಬಸವರಾಜನಿಗೆ ಕೈಯಿಂದ ಕಾಲಿನಿಂದ ದ್ದು ಒಳಪೆಟ್ಟು ಪಡಿಸಿರುತ್ತಾನೆ. ಅಲ್ಲಿ ನೆರೆದ ಜನರು ಜಗಳ ಬಿಡಿಸಿರುತ್ತಾರೆ. ಗುಂಡಾ ವರ್ತನೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಭೀಮು ತಂದೆ ಮಹಾಧೇವ ರಾಠೋಡ ಸಾ|| ಮಾದಾಬಾಳ ತಾಂಡಾ ರವರು ದಿನಾಂಕ 31-10-218 ರಂದು ನಾನು ಮತ್ತು ನನ್ನ ಹೆಂಡತಿ ಮಕ್ಕಳು ನಮ್ಮ ಮನೆಯಲ್ಲಿದ್ದಾಗ, ನಮ್ಮ ತಾಂಡಾದ ಬಾಜು ಹೊಲದಲ್ಲಿ ದುಡಿಯಲಿಕ್ಕೆ ಇದ್ದ ರಮೇಶ ಸಮಗಾರ ಈತನು ನಮ್ಮ ಹತ್ತಿರ ಬಂದು ನನ್ನ ಮಗ ಮಹೇಶನಿಗೆ ರಾತ್ರಿ ಕರೆಂಟ ಬರುತ್ತವೆ. ಕರೆಂಟ ಬಂದಾಗ ನೀರು ಬಿಡುತ್ತಾ ಹೊಲಕ್ಕೆ ಗೊಬ್ಬರ ಹಾಕುವುದಿದೆ ಅಫಜಲಪೂರಕ್ಕೆ ಹೋಗಿ ಗೋಬ್ಬರ ತಗೆದುಕೊಂಡು ಬರೋಣ ನನಗೆ ಮೋಟರ ಸೈಕಲ ನಡೆಸಲು ಬರುವುದಿಲ್ಲ ನೀನು ಬಾ ಎಂದು ಕೇಳಿದ ಮೇರೆಗೆ ನನ್ನ ಮಗ ಅವರ ಹಿರೊ ಹೊಂಡಾ ಪ್ಯಾಶನ್ ಪ್ರೋ ಮೋಟರ ಸೈಕಲ ನಂ ಕೆಎ-32 ವಿ-7599 ನೇದ್ದರ ಮೇಲೆ ರಮೇಶ ಸಮಗಾರ ಈತನನ್ನು ಕೂಡಿಸಿಕೊಂಡು ಅಫಜಲಪೂರಕ್ಕೆ ಹೋಗಿರುತ್ತಾನೆ. ನನ್ನ ಮಗ ಹೋದ 15-20 ನಿಮಿಷಕ್ಕೆ ನಮ್ಮ ತಾಂಡಾದ ಸುರೇಶ ತಂದೆ ಚಂದು ರಾಠೋಡ ಈತನು ನನ್ನ ಮಗ ಪರಶುರಾಮನಿಗೆ ಪೋನ ಮಾಡಿ ನಿನ್ನ ತಮ್ಮನಿಗೆ ಬಸ್ ಡೀಪೊ ಹತ್ತಿರ ಎಕ್ಸಿಡೆಂಟ ಆಗಿದೆ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಮಕ್ಕಳು ಹಾಗೂ ನಮ್ಮ ತಾಂಡಾದವರಾದ ರಮೇಶ ಜಾಧವ, ಶ್ರೀಧರ ರಾಠೋಡ ಇನ್ನು ಕೆಲವು ಜನರು ಕೂಡಿ ಸ್ಥಳಕ್ಕೆ ಹೋಗಿ ನೋಡಲು ನನ್ನ ಮಗನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದನು. ಮೋಟರ ಸೈಕಲ ಮೇಲೆ ಹಿಂದೆ ಕುಳಿತಿದ್ದ ರಮೇಶ ಸಮಗಾರ ಈತನಿಗೂ ಸಹ ಭಾರಿ ರಕ್ತಗಾಯಗಳು ಹಾಗೂ ಗುಪ್ತಗಾಯಗಳು ಆಗಿದ್ದವು. ಸೇರಿದ ಜನರು ರಮೇಶ ಸಮಗಾರನನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ನಂತರ ಅಲ್ಲೆ ಇದ್ದ ಸುರೇಶ ರಾಠೋಡನಿಗೆ ವಿಚಾರಿಸಲಾಗಿ ಅವನು ತಿಳಿಸಿದ್ದೆನೆಂದರೆ, ನಾನು ನನ್ನ ಟಂ ಟಂ ನಡೆಸಿಕೊಂಡು ತಾಂಡಾಕ್ಕೆ  ಬರುತ್ತಿದ್ದಾಗ  ನನ್ನ ಟಂ ಟಂ ಗೆ  ಟ್ಯಾಕ್ಟರ ಚಾಲಕನು  ಟ್ಯಾಕ್ಟರನ್ನು ಸೈಡ ಹೊಡೆದುಕೊಂಡು ಹೋಗಿ ಮುಂದೆ ಡೀಪೊ ಹತ್ತಿರ ಟ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಮಹೇಶನ ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿರುತ್ತಾನೆ ಎಂದು ತಿಳಿಸಿದನು. ನನ್ನ ಮಗನಿಗೆ ಅಫಘಾತ ಪಡಿಸಿದ ಟ್ಯಾಕ್ಟರ ನಂಬರ ನೋಡಲು ಮಹೇಂದ್ರಾ ಅರ್ಜುನ ಕಂಪನಿಯ ಟ್ಯಾಕ್ಟರ ಇದ್ದು ನಂ ಕೆಎ-32 ಟಿಎ-4630 ಇರುತ್ತದೆ. ಸದರಿ ಟ್ಯಾಕ್ಟರ ಚಾಲಕ ಘಟನೆ ನಂತರ ಟ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಶಂಕರ ತಂದೆ ಶಿವಪುತ್ರ ಕವಲಗಾ ಸಾ||ಹುಲ್ಲುರ ತಾ||ಜೆವರ್ಗಿ ರವರ ಅಣ್ಣನಾದ ಸುರೇಶ ಈತನು ಟ್ರ್ಯಾಕ್ಟರ ಚಾಲಕ ಕೆಲಸ ಮಾಡಿಕೊಂಡಿರುತ್ತಾನೆ. ಇಂದು ದಿನಾಂಕ 31/10/2018 ರಂದು ಮದ್ಯಾಹ್ನ 2.00 ಗಂಟೆ ಸುಮಾರಿಗೆ ನಾನು ಮನೆಯಲಿದ್ದಾಗ ನಮ್ಮ ಅಣ್ಣ ಸುರೇಶನು ತಿಳಿಸಿದ್ದೆನೆಂದರೆ ನಾನು ಹಾಗು ಮಲ್ಲಿಕಾರ್ಜುನ ಬಾಣಿ ಇಬ್ಬರು ಕಬ್ಬಿನ ಟೋಳಿ ಸಲುವಾಗಿ ಅಫಜಪೂರಕ್ಕೆ ಮಲ್ಲಿಕಾರ್ಜುನ ರವರ ಮೋಟಾರ ಸೈಕಲ್ ನಂ ಕೆಎ-32 ಇಬಿ-7838 ನೇದ್ದರ ಮೇಲೆ ಹೋಗಿ ಬರುತ್ತೇವೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ.     ರಾತ್ರಿ 9.00 ಗಂಟೆ ಸುಮಾರಿಗೆ ನನಗೆ ಪರಿಚಯಸ್ಥರಾದ ಘತ್ತರಗಾ ಗ್ರಾಮದ ಮಲ್ಲಿಕಾರ್ಜುನ ತಂದೆ ಗುರಪ್ಪಾ ಕುರಿ ರವರು ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ನಮ್ಮ ಮೋಟಾರ್ ಸೈಕಲ ಮೇಲೆ 8.30 ಪಿಎಮ್ ಗಂಟೆ ಸುಮಾರಿಗೆ ಅಫಜಲಪೂರದಿಂದ ನಮ್ಮ ಘತ್ತರಗಾ ಗ್ರಾಮಕ್ಕೆ ಹೋಗುತಿದ್ದಾಗ ಇಂಗಳಗಾ(ಕೆ) ಗ್ರಾಮ ದಾಟಿ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ ಸಮೀಪ ಇದ್ದಾಗ .ನನ್ನ ಮೋಟಾರ್ ಸೈಕಲ ಮುಂದೆ ಒಂದು ಮೋಟಾರ್ ಸೈಕಲ್ ಮೇಲೆ ಇಬ್ಬರು ಅತಿವೇಗ ಹಾಗು ನಿಸ್ಕಾಳಜಿತನದಿಂದ ಘತ್ತರಗಾ ಕಡೆಗೆ ಹಾಗು ಘತ್ತರಗಾ ಕಡೆಯಿಂದ ಅಫಜಲಪೂರ ಕಡೆಗೆ ಒಂದು ಮೋಟಾರ ಸೈಕಲ್ ಮೇಲೆ ಇಬ್ಬರು ಅತಿವೇಗ ಹಾಗು ನಿಸ್ಕಾಳಜಿತನದಿಂದ ತಮ್ಮ ಮೋಟಾರ ಸೈಕಲನ್ನು ಚಲಾಯಿಸಿಕೊಂಡು ಬಂದು  ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಡಿಕ್ಕಿ ಪಡಿಸಿ ರೋಡಿನ ಮೇಲೆ ಬಿದ್ದರು ಆಗ ನಾನು ನನ್ನ ಮೋಟಾರ್ ಸೈಕಲ ನಿಲ್ಲಿಸಿ ಹೋಗಿ ನೋಡಲಾಗಿ ಮೋಟಾರ ಸೈಕಲ ನಂ ಕೆಎ-32 ಇಬಿ-7838 ನೇದ್ದರ ಹಿಂದೆ ಕುಳಿತಿದ್ದವನು ನಿಮ್ಮ ಅಣ್ಣ ಸುರೇಶ ಇರುತ್ತಾನೆ ತಲೆಗೆ ಭಾರಿ ಒಳಪೆಟ್ಟುಗಳಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮೋಟಾರ್  ಸೈಕಲ  ಸವಾರನ  ಹೆಸರು  ಗೊತ್ತಿರುವುದಿಲ್ಲ  ಅವನಿಗೂ  ತಲೆಗೆ  ಮೈ  ಕೈ ಗೆ ರಕ್ತಗಾಯಗಳಾಗಿರುತ್ತವೆ ಹಾಗು ಎದುರಿನ ಮೋಟಾರ್ ಸೈಕಲ ಸವಾರನಿಗೂ ಹಿಂದೆ ಕುಳಿತಿದ್ದವನಿಗೂ ತಲೆಗೆ ಕಾಲಿಗೆ ಹಾಗು ಮೈ ಕೈಗಳಿಗೆ ಭಾರಿ ಸಾದಾ ರಕ್ತಗಾಯಗಳಾಗಿರುತ್ತವೆ ಸದರಿ ಘಟನೆ ಹವಳಗಾ ಸಕ್ಕರೆ ಕಾರ್ಖಾನೆ ಸಮೀಪ ಇಂಗಳಗಾ (ಕೆ) ಗ್ರಾಮದ ಮಲ್ಲಯ್ಯ ತಂದೆ ಸಿದ್ದಯ್ಯ ಹಿರೇಮಠ ರವರ ಹೊಲ ಹತ್ತಿರ ಜರುಗಿರುತ್ತದೆ ಅಂತ ತಿಳಿಸಿದನು. ನಂತರ ನಾನು ವಿಷಯವನ್ನು  ನಮ್ಮ ಕಾಕನ ಮಗನಾದ ಬಸವಂತ್ರಾಯ ಕವಲಗಾ ಹಾಗು ನಮ್ಮ ಗ್ರಾಮದ ಶ್ರೀಶೈಲ ತಂದೆ ಈರಪ್ಪಾ ಬಾಣಿ, ಭೀಮಾಶಂಕರ ತಂದೆ ಬೈಲಪ್ಪ ಸರಡಗಿ, ಅಣ್ಣರಾಯ ತಂದೆ ಬಸವರಾಜ ಪರಗೊಂಡ, ಮಾಳಪ್ಪ ತಂದೆ ಬಾಗಪ್ಪ ಇಂಗಳಗಿ  ತಿಳಿಸಿ ಎಲ್ಲರು ಕೂಡಿಕೊಂಡು ಹವಳಗಾ ಕಾರ್ಖಾನೆ ಹತ್ತಿರ ಘಟನೆ  ಸ್ಥಳಕ್ಕೆ ಹೋಗಿ ನೋಡಲಾಗಿ  ನಮ್ಮ ಅಣ್ಣ ಸುರೇಶ ಈತನು ಸ್ಥಳದಲ್ಲಿಯೇ ಮೃತಪಟ್ಟಿದ್ದು ತಲೆಗೆ ಭಾರಿ ಒಳಪೆಟ್ಟುಗಳಾಗಿ ಮೂಗಿನಿಂದ  ಮತ್ತು ಕಿವಿಯಿಂದ  ರಕ್ತ ಸೋರಿ ಮೃತ ಪಟ್ಟಿದ್ದು ಇರುತ್ತದೆ. ಮೋಟಾರ್ ಸೈಕಲ್ ಸವಾರನಾದ ನಮ್ಮ ಗ್ರಾಮದ ಮಲ್ಲಿಕಾರ್ಜುನ ತಂದೆ ಸಿದ್ದರಾಮಪ್ಪ ಬಾಣಿ ಇತನಿಗೆ ತಲೆಗೆ ಕೈ ಕಾಲುಗಳಿಗೆ ಭಾರಿ ರಕ್ತಗಾಯಗಳಾಗಿರುತ್ತವೆ. ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಮೋಟಾರ್ ಸೈಕಲ್ ನೋಡಲಾಗಿ ಕಪ್ಪು ಬಣ್ಣದ ಪ್ಯಾಶನ್ ಪ್ರೋ ಮೋಟಾರ್ ಸೈಕಲ ಇದ್ದು ಅದರ ಮೇಲೆ ನೊಂದಣಿ ನಂಬರ ಇರುವುದಿಲ್ಲ ಅದರ ಚೆಸ್ಸಿ ನಂ MBLH10EWBGB0460 ಅಂತ ಇರುತ್ತದೆ ಸದರಿ ಮೋಟಾರ ಸೈಕಲ ಸವಾರ ಹಾಗು ಹಿಂದೆ ಕುಳಿತಿದ್ದವರಿಗೆ ಅವರ ಕಡೆಯವರು ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಆಸ್ಪತ್ರೆ ಕರೆದುಕೊಂಡು ಹೋಗಿರುತ್ತಾರೆ ಪ್ಯಾಶನ್ ಪ್ರೋ ಮೊಟಾರ ಸೈಕಲ್ ಸವಾರನ ಹೆಸರು ಗೊಲ್ಲಾಳಪ್ಪ ತಂದೆ ಆನಂದ ಬಿರಾದಾರ ಅಂತ ನನಗೆ ಅಲ್ಲಿದ್ದ ಜನರು ಮಾತನಾಡುವದರಿಂದ ಗೊತ್ತಾಗಿರುತ್ತದೆ ಸದರಿ ಮೊಟಾರ ಸೈಕಲ್ ಹಿಂದೆ ಕುಳಿತವನ ಹೆಸರು ಗೊತ್ತಿರುವುದಿಲ್ಲ ನಾವು ಮ್ಮಲ್ಲಿಕಾರ್ಜುನನಿಗೆ ಅಂಬ್ಯೂಲೆನ್ಸ್ ದಲ್ಲಿ ಹಾಕಿ ಚಿಕಿತ್ಸೆ ಕುರಿತು ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಗೆ ಕಳುಯಿಸಿ ನಮ್ಮ ಅಣ್ಣನ ಮೃತ ಸುರೇಶನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರೆ ಬಂದು ಶವಗಾರದಲ್ಲಿ ನಮ್ಮ ಅಣ್ಣನ ಮೃತ ದೇಹವನ್ನು ಹಾಕಿ ಠಾಣೆಗೆ ಬಂದಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.          
ಫರತಾಬಾದ ಠಾಣೆ : ದಿನಾಂಕ 30/10/18 ರಂದು ರಾಷ್ಟ್ರೀಯ ಹೆದ್ದಾರಿ 218ರ ನಂದಿಕುರ ತಾಂಡಾದ ಹತ್ತಿರ ರೋಡಿನ ಮೇಲೆ ಇನ್ನೊವಾ ಕಾರ ನಂ ಕೆಎ-34 ಎನ್-0566 ನೇದ್ದರ ಚಾಲಕ  ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶ್ರೀ.ಶ್ರೀಶೈಲ ತಂದೆ ಅಣ್ಣಪ್ಪ ಸಾಃ ಇಕ್ಕಳಕಿ ತಾಃ ಆಳಂದ ರವರ  ಮೋಟಾರ ಸೈಕಲ ನಂ ಕೆಎ-2 ಇ.ಹೆಚ್-3296 ನೇದ್ದಕ್ಕೆ ಅಪಘಾತ ಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ್ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.            
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ  ಶಿವಾನಂದ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು,, ಹೊಲದಲ್ಲಿ ಬೆಳೆ ಸರಿಯಾಗಿ ಬೆಳೆಯದ ಕಾರಣ ಬ್ಯಾಂಕಿನಲ್ಲಿ & ವಯಕ್ತಿಕ ಸಾಲ ಮಾಡಿಕೊಂಡಿದ್ದು, ಸಾಲ ಹೇಗೆ ತಿರಿಸಬೇಕು ಅಂತಾ ಚಿಂತಿಸುತ್ತಾ,  ದಿನಾಂಕ 30/10/18 ರಂದು 9.00 ಪಿ.ಎಮ ದಿಂದ ದಿನಾಂಕ 31/10/2018 ರಂದು 6.00 ಎ.ಎಮ ಅವಧಿಯಲ್ಲಿ ಗರೂರು(ಬಿ) ಗ್ರಾಮದ ಸಿಮಾಂತರದ ಹೊಲದಲ್ಲಿನ ಬೇವಿನ ಮರಕ್ಕೆ ತನ್ನ ಲುಂಗಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಯಾವುದೇ ಸಂಶಯ ಇರುವುದಿಲ್ಲ  ಅಂತಾ ಶ್ರೀಮತಿ ಪಾರ್ವತಿ  ಗಂಡ ಶರಣಪ್ಪಾ ಕಾಂತಾ ಸಾಃ ಹಾವನೂರ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

31 October 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 29-10-2018 ರಂದು ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ. ಹಾಗೂ ಮಟಕಾದಲ್ಲಿ ಗೆದ್ದ ಜನರಿಗೆ ಯಾವುದೆ ಹಣ ಕೊಡದೆ ಮೋಸ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಿಕಾರ್ಜುನ ಚೌಕದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಮಲ್ಲಿಕಾರ್ಜುನ ಚೌಕದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಹಾಗೂ ಮಟಕಾದಲ್ಲಿ ಹಣ ಗೆದ್ದಂತ ಜನರು ಸದರಿ ವ್ಯಕ್ತಿಗೆ ಹಣ ಕೇಳುತ್ತಿದ್ದರು, ಆಗ ಸದರಿ ವ್ಯಕ್ತಿ ಯಾವ ಹಣ ನೀನು ಬರೆಸಿದ ನಂಬರ ಬಂದಿಲ್ಲ ಎಂದು ಜನರಿಗೆ ಗೆದ್ದಂತ ಹಣ ಕೊಡದೆ ಮೋಸ ಮಾಡುತ್ತಿದ್ದನು. ಆಗ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಇಮಾಮ ತಂದೆ ಅಮೀನಸಾಬ ಶೇಖ್ ಸಾ|| ವಿಕೆಜಿ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2450/-  ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಹಾಗೂ ಕಾರ್ಬನ್ ಕೆ9 ಮೊಬೈಲ ಪೋನ್ ಅಕಿ-100/- ರೂ ದೊರೆತವು  ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಾಗಿಸಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಅಣವೀರ ತಂದೆ ಪ್ರಕಾಶ ಹರಸೂರ ಸಾ:ಚಿಂಚನಸೂರ ತಾ:ಆಳಂದ ಹಾ:ವ:ಮಲ್ಲಿಕಾರ್ಜುನ ಅರಳಗುಂಡಗಿರವರ ಮನೆಯಲ್ಲಿ ಬಾಡಿಗೆ ವಾಸ ಕೈಲಾಸ ನಗರ ಕಲಬುರಗಿರವರು ದಿನಾಂಕ:29/10/2018 ರಂದು 10.30 ಪಿ.ಎಂ ಸುಮಾರಿಗೆ ನಾನು ಹಾಗೂ ನನ್ನ ತಾಯಿ ಶ್ರೀಮತಿ ರಾಜೇಶ್ವರಿ ಇಬ್ಬರೂ ಕೂಡಿಕೊಂಡು ಸಂಜನಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವ ನಮ್ಮ ಅಕ್ಕಳಾದ ಪ್ರಿಯಾಂಕಾ ಇವರಿಗೆ ಊಟ ತೆಗೆದುಕೊಂಡು ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದು ದಿನಾಂಕ:30/10/2018 ರಂದು 7.30 ಎ.ಎಂಗೆ ಮರಳಿ ಮನೆಗೆ ಬಂದು ನೋಡಲಾಗಿ ಬಾಗಿಲ ಕೀಲಿ ಮುರಿದಿದ್ದು ಅಲಮಾರಿಯಲ್ಲಿ ಇಟ್ಟಿದ್ದ ಬಂಗಾರದ ಆಭರಣ ಮತ್ತು  ನಗದು ಹಣ ಹೀಗೆ ಒಟ್ಟು 1,80,000/-ರೂ ಕಿಮ್ಮತ್ತಿನ ಬಂಗಾರ ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ ಗರ್ಭಿಣಿಯಾಗಿಸಿದ ಪ್ರಕರಣ :
ಯಡ್ರಾಮಿ ಠಾಣೆ : ಕುಮಾರಿ ರವರ ತಂದೆ ತಾಯಿಯವರು ಎಲ್ಲಿ ಕೆಸಲ ಸಿಗುತ್ತದೆಯೋ ಆ ಊರಿಗೆ ಹೋಗಿ ಕೆಲಸ ಮಾಡುತ್ತಾರೆ. ದಿ: 19-10-18 ರಂದು ನಾನು ನನ್ನ ತಾಯಿ ತಂದೆಯೊಂದಿಗೆ ಕೆಲಸಕ್ಕಾಗಿ ಕರಡಕ್ಕೆ ಹೋರಟಾಗ ನನಗೆ ರಸ್ತೆಯ ಮಧ್ಯ ವಾಂತಿಯಾಗತೊಡಗಿತ್ತು. ನಾವು ಕರಾಡ ಮುಟ್ಟಿದಾಗ ನಮ್ಮ ತಂದೆ ತಾಯಿಯವರು ಪೆಟ್ರೊಲ ಪಂಪ ಹತ್ತಿರವಿದ್ದ ವೈಧ್ಯರ ಶ್ರೀ ಜಾಧವ ಇವರ ಹತ್ತಿರ ಕರೆದುಕೊಂಡು ಹೋಗಿ ವಾಂತಿ ಆಗುತ್ತಿರುವ ಬಗ್ಗೆ ತಿಳಿಸಿದೇವು. ಅವರು ನನಗೆ ತಪಾಸಣೆ ಮಾಡಿ ಡಾ: ಜಾಧವ ರವರು ಅವರು ನಮಗೆ ವಾಂತಿ ಬಗ್ಗೆ ಔಷಧಿ ಕೊಟ್ಟರು ಕಾರಣ ನಾವು ಝಂಡಾ ಚೌಕ ಕರಾಡ ಎಂಬಲ್ಲಿ ಮುಕ್ಕಾಮ ಮಾಡಿದೇವು. ಆದರೆ ನನಗೆ ವಾಂತಿಯ ಬಗ್ಗೆ ತ್ರಾಸ ನಿಲ್ಲಲಿಲ್ಲ. ಪುನ ಎರಡನೆ ದಿನ ದಿ: 20-10-18 ರಂದು ಡಾ: ಜಾಧವ ಇವರ ಹತ್ತಿರ ಉಪಚಾರ ಕುರಿತು ನನ್ನ ತಂದೆ ತಾಯಿ ಕರೆದುಕೊಂಡು ಹೋದರು. ವೈಧ್ಯರು ನನ್ನ ಮೂತ್ರ ತಪಾಸಣೆ ಮಾಡಿಸುವ ಕುರಿತು ದತ್ತಾ ಲ್ಯಾಬರೇಟರಿ ಎಂಬಲ್ಲಿಗೆ ಕಳುಹಿಸಿದರು ದತ್ತಾ ಲ್ಯಾಬರೇಟರಿಯಲ್ಲಿ ನನ್ನ ಮೂತ್ರ ತಪಾಸಣೆ ಮಾಡಿ ವರದಿ ಕೊಟ್ಟರು . ಅದನ್ನು ನಾವು ಡಾ: ಜಾಧವ ಇವರಿಗೆ ತೋರಿಸಿದೇವು. ಅವರು ನಾನು ಗರ್ಭಿಣಿಯಾದ ಬಗ್ಗೆ ನನ್ನ ತಂದೆ ತಾಯಿಗೆ ಮಾಹಿತಿ ನೀಡಿದರು. ಮತ್ತು ಮುಂದಿನ ಉಪಚಾರ ಕುರಿತು ಕೃಷ್ಣಾ ಆಸ್ಪತ್ರೆ ಕರಾಡ ಎಂಬಲ್ಲಿಗೆ ಹೋಗಲು ಸೂಚಿಸಿದರು. ಇಂದು ದಿ: 23-10-18 ರಂದು ಬೆಳಿಗ್ಗೆ ಕೃಷ್ಣಾ ಆಸ್ಪತ್ರೆ ಮಲ್ಕಾಪೂರ ಕರಾಡ ಎಂಬಲ್ಲಿಗೆ ನನ್ನ ತಂದೆ ತಾಯಿ ಕರೆದುಕೊಂಡು ಬಂದರು. ಅಲ್ಲಿಯ ವೈಧ್ಯರು ನನ್ನ ವರದಿ ನೋಡಿ ಕೃಷ್ಣಾ ಆಸ್ಪತ್ರೆಯವರು ಉಪಚಾರ ಕುರಿತು ಪ್ರಸೂತಿ ವಾರ್ಡ ನಂ:12 ರಲ್ಲಿ ದಾಖಲೆ ಮಾಡಿದರು. ನಾನು ಎರಡು ತಿಂಗಳು ಗರ್ಭಿಣಿ ಎಂದು ತಿಳಿಸಿದರು. ಆ ಬಗ್ಗೆ ನಾನು ಹೇಳುವುದೆನೇಂದರೆ, ನಾನು ವಾಸವಾಗಿರುವ ಅರಳಗುಂಡಗಿ ಗ್ರಾಮದಲ್ಲಿ ನಮ್ಮ ನೆರೆಯ ಮನೆಯ ಸುನೀಲ ತಂ ಮರಳಪ್ಪ ಕಡಿ ಈತನು ವಾಸವಾಗಿರುವನು. ಆತನು ನನಗೆ ಪರಿಚಯದವನಿದ್ದ ಕಾರಣ ಸುಮಾರು 2 ವರ್ಷಗಳಿಂದ ಒಂದಿಲ್ಲ ಒಂದು ಕಾರಣದಿಂದ ನನ್ನ ಸಮೀಪಕ್ಕೆ ಬರತೊಡಗಿದನು. ಮತ್ತು ನನ್ನ ಶರಿರಕ್ಕೆ ತನ್ನ ಅಂಗಗಳನ್ನು ಹಚ್ಚತೊಡಗಿದನು. ನನ್ನ ಶರೀರಕ್ಕೆ ಆತನು ಆಗಾಗ ಬೇಡವಾದ ಅಂಗಗಳಿಗೆ ಸ್ಪರ್ಶ ಮಾಡುತ್ತಿದ್ದನು. ಸಪ್ಟೇಂಬರ 2018 ಎರಡನೆ ವಾರದಲ್ಲಿ ( ನಿಖರವಾದ ದಿನಾಂಕ ಸಮಯ ಗೊತ್ತಿಲ್ಲ ) ನಾನು ನಮ್ಮ ಮನೆಯಲ್ಲಿ ಒಬ್ಬಳೆ ಇದ್ದಾಗ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುನೀಲ ಮರಳಪ್ಪ ಕಡಿ ಇತನು ನನ್ನ ಮನೆಗೆ ಬಂದು ಬಾಗೀಲನ್ನು ಒಳಗಿನಿಂದ ಕೊಂಡಿ ಹಾಕಿಕೊಂಡು ನಂತರ ಆತನು ನನಗೆ ಹಿಂದಿನಿಂದ ಬಂದು ಹಿಡಿದುಕೊಂಡು ನನಗೆ ಬಲಪೂರ್ವಕ ಮುತ್ತುಕೊಟ್ಟನು. ನಾನು ಅದಕ್ಕೆ ವಿರೋಧ ಮಾಡಿದೇನು ಆದರೆ ಆತನು ನನ್ನ ಸಹಮತ ಇಲ್ಲದೆ ಬಲಪೂರ್ವಕ ನನ್ನೊಂದಿಗೆ ಶರೀರ ಸಂಬಂಧ ಬೆಳಿಸಿದನು. ನಂತರ ಆತನು ನನಗೆ ನೀನು ಯಾರಿಗೂ ಹೇಳಬೇಡ ಇಲ್ಲವಾದರೆ ನಿನ್ನ ಹೆಸರನ್ನು ಗ್ರಾಮಸ್ಥರಲ್ಲಿ ಸಮ್ಮುಖದಲ್ಲಿ ಅಪವಾದ ಮಾಡುತ್ತೇನೆ ಎಂದು ಬೆದರಿಕೆ ಹಾಕಿದನು ಆದ್ದರಿಂದ ನಾನು ನನ್ನ ಮರಿಯಾದಿಗೆ ಅಂಜಿ ಯಾರಿಗೂ ಹೇಳಲಿಲ್ಲ. ತದ ನಂತರ ಎರಡನೆ ಮತ್ತು ಮೂರನೆ ದಿವಸವು ಕೂಡಾ ನಾನು ಮನೆಯಲ್ಲಿ ಒಂಟಿಯಾಗಿದ್ದಾಗ ಆತನು ಇದೆ ಪದ್ದತ್ತಿಯಲ್ಲಿ ನನ್ನ ಜೋತೆಗೆ ಶರೀರ ಸಂಬಂದ ಬೆಳಿಸಿದನು. ಆದರೆ ನಾನು ಅಂಜಿಕೆಯಿಂದಾಗಿ ಯಾರಿಗೂ ಏನು ಹೆಳಲಿಲ್ಲ. ಸಪ್ಟೇಂಬರ 2018 ರ ಎರಡನೆ ವಾರದಲ್ಲಿ ( ನಿಖರ ದಿನಾಂಕ ಸಮಯ ನೆನಪಿಲ್ಲ ) ಮತ್ತು ಅನುಕ್ರಮವಾಗಿ ಮುಂದಿನ ಎರಡನೆ ಮತ್ತು ಮೂರನೆ ದಿವಸವು ಕೂಡಾ ಮಧ್ಯಾಹ್ನ ಸುಮಾರ 1 ಗಂಟೆಗೆ ಅರಳಗುಂಡಗಿ ಗ್ರಾಮ ತಾ:ಜೇವರಗಿ ಜಿ: ಕಲಬುರಗಿ ಕರ್ನಾಟಕ ಎಂಬಲ್ಲಿ ನಮ್ಮ ಮನೆಯಲ್ಲಿ ನಾನು ಒಬ್ಬಂಟಿಯಾಗಿದ್ದಾಗ ಆತನು ನನ್ನ ಮನೆಗೆ ಬಂದು ಒಳಗಿನಿಂದ ಬಾಗಿಲ ಕೊಂಡಿ ಹಾಕಿಕೊಂಡು ನನಗೆ ಹಿಂದಿನಿಂದ ಹಿಡಿದುಕೊಂಡು ನನಗೆ ಮುತ್ತುಕೊಡುತ್ತಾ ಬಲಪೂರ್ವಕವಾಗಿ ನಾನು ವಿರೋಧ ವ್ಯಕ್ತಪಡಿಸಿದರು ಕೂಡಾ ನನ್ನ ಸಮ್ಮತಿ ಇಲ್ಲದೆ ಆತನು ಮೇಲಿಂದ ಮೇಲೆ ನನ್ನ ಜೋತೆಗೆ ಶರೀರ ಸಂಬಂಧ ಬೆಳಿಸಿದನು. ಮತ್ತು ನನಗೆ 8 ವಾರಗಳ ಗರ್ಭೀಣಿಯಾಗುವದಕ್ಕೆ ಆತನೇ ಕಾರಣ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 October 2018

KALABURGI DISTRICT REPORTED CRIMES

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 26-10-2018 ರಂದು ಬಳೂರ್ಗಿ ಗ್ರಾಮದ ಹೊರವಲಯದಲ್ಲಿ ದುಧನಿ ರೋಡಿಗೆ ಇರುವ ಡಾಬಾದ ಮುಂದೆ ಒಬ್ಬ ವ್ಯೆಕ್ತಿ ಅನದಿಕೃತವಾಗಿ ಮದ್ಯವನ್ನು ಮಾರಾಟ ಮಾಡಿ,  ಡಾಬಾದಲ್ಲಿ ಮದ್ಯವನ್ನು ಸೆವನೆ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದಾನೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಳೂರ್ಗಿ ಗ್ರಾಮದ ಹೊರವಲಯದಲ್ಲಿ ದುಧನಿ ರೋಡಿಗೆ ಇರುವ ಡಾಬಾದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ನೋಡಲು ಡಾಬಾದ ಮುಂದೆ ಒಬ್ಬ ವ್ಯೆಕ್ತಿ ಜನರಿಂದ ಹಣವನ್ನು ಪಡೆದು ತನ್ನ ಹತ್ತಿರವಿದ್ದ ಚೀಲದಲ್ಲಿ ಕೈ ಹಾಕಿ ಜನರಿಗೆ ಮದ್ಯ ವನ್ನು ಮಾರಾಟ ಮಾಡಿ ಮದ್ಯ ಖರಿದಿ ಮಾಡಿದ ಜನರಿಗೆ ಡಾಬಾದ ಒಳಗೆ ಕುಳಿತುಕೊಂಡು ಕುಡಿಯಿರಿ ಎಂದು ಜನರಿಗೆ ಹೇಳುತ್ತಿದ್ದನು. ಆಗ ನಾವು ಡಾಬಾದ ಕಡೆಗೆ ಹೋಗುತ್ತಿದ್ದಾಗ ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿ ಡಾಬಾದ ಮುಂದಿನ ಬೆಳಕಿನಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಡಾಬಾದ ಹಿಂದಿನ ಹೊಲದಲ್ಲಿ ಕತ್ತಲಲ್ಲಿ ಓಡಿ ಹೊದನು, ಆಗ ನಾವು ಸದರಿ ವ್ಯೆಕ್ತಿಯನ್ನು ಬೆನ್ನಟ್ಟಿದರೂ ನಮ್ಮಿಂದ ತಪ್ಪಿಸಿಕೊಂಡು ಹೋಗಿರುತ್ತಾನೆ. ಡಾಬಾದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಜನರು ಸಹ ನಮ್ಮನ್ನು ನೋಡಿ ಓಡಿ ಹೋಗಿರುತ್ತಾರೆ. ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿ ಸ್ಥಳದಲ್ಲಿ ಬಿಟ್ಟು ಹೋದ ಚೀಲವನ್ನು ಪರಿಶೀಲಿಸಿ ನೋಡಲು ಚೀಲದಲ್ಲಿ 1) 180 ಎಮ್ ಎಲ್ ಅಳತೆಯ BAGPIPER WHISKY  ಕಂಪನಿಯ ಒಟ್ಟು 13 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 1170/- ರೂ 2)  180 ಎಮ್ ಎಲ್ ಅಳತೆಯ OLD  TAVERN  WHISKY ಕಂಪನಿಯ ಒಟ್ಟು 09 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 666/- ರೂ 3) 180 ಎಮ್ ಎಲ್ ಅಳತೆಯ Officers Choice Special Whisky  ಕಂಪನಿಯ ಒಟ್ಟು 09 ಬಾಟಲಗಳು ಇದ್ದವು, ಅಂದಾಜು ಕಿಮ್ಮತ್ತು 810/- ರೂ ನಂತರ ಬಾತ್ಮಿದಾರರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಮತ್ತು ಡಾಬಾದ ಮಾಲಿಕನ ಹೆಸರು ವಿಳಾಸ ವಿಚಾರಿಸಲು, ಮದ್ಯ ಮಾರಾಟ ಮಾಡುತ್ತಿದ್ದವನ ಹೆಸರು ವಿಳಾಸ 1) ಪ್ರಕಾಶ ತಂದೆ ಶರಣಪ್ಪ ದೋಡ್ಡಮನಿ ಸಾ|| ಬಳೂರ್ಗಿ ತಾ|| ಅಫಜಲಪೂರ ಅಂತಾ ಹಾಗೂ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಂತಹ ಡಾಬಾದ ಮಾಲಿಕನ ಹೆಸರು ವಿಳಾಸ 2) ಜೈಭೀಮ ತಂದೆ ಶರಣಪ್ಪ ದೋಡ್ಡಮನಿ ಸಾ|| ಬಳೂರ್ಗಿ ತಾ|| ಅಫಜಲಪೂರ ಎಂದು ಗೊತ್ತಾಗಿರುತ್ತದೆ.  ನಂತರ ಸದರಿ ಒಟ್ಟು 2646/- ರೂ ಕಿಮ್ಮತ್ತಿನ ಒಟ್ಟು 31 ಮದ್ಯದ ಪೌಚಗಳನ್ನು / ಬಾಟಲಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಫರತಾಬಾದ ಠಾಣೆ : ದಿನಾಂಕ 27/10/18 ರಂದು ಟಿಪ್ಪರ ಮೂಲಕ ಆಕ್ರಮವಾಗಿ ಮರಳು ಸಾಗಿಸುತ್ತಿದ್ದು ಶ್ರೀ ಸೂರ್ಯಕಾಂತ ಎ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ಟಿಪ್ಪರ ನಂ ಕೆಎ-35 ಬಿ-6364 ನೇದ್ದರ ಮಾಲಿಕ & ಚಾಲಕರು ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮರಳು ಕಳ್ಳತನ ಮಾಡಿ ಸಾಗಾಣೆ ಮಾಡುವ ಕಾಲಕ್ಕೆ ಜಪ್ತಿ ಟಿಪ್ಪರ & ಮರಳು ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮ ಜರೂಗಿಸುವ ಕುರಿತು ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ತಸ್ಲೀಮ್‌ ಆರೀಫ ತಂದೆ ಶೇಖ ಯೂಸುಫ ಸಾ:ಮನೆ.ನಂ.1041/9/3/8 ಇಕ್ಬಾಲ್‌ ಕಾಲೋನಿ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ರವರ ತಂದೆ-ತಾಯಿಯವರು ಮೈಸೂರಿಗೆ ಹೋಗಿದ್ದು ನಾನು ದಿನಾಂಕ:23/10/2018 ರಂದು ಉಸ್ಮಾನಾಬಾದಕ್ಕೆ ಹೋಗಿದ್ದು ದಿನಾಂಕ:25/10/2018 ರಂದು 4.00 ಪಿ.ಎಂಕ್ಕೆ ನಮ್ಮ ಸಹೋದರಿಯಾದ ಶ್ರೀಮತಿ ಸಲ್ಮಾ ಬೇಗಂ ಗಂಡ ಅಬ್ದುಲ ಹಮೀದ್‌ ಇವರು ನಮ್ಮ ಮನೆಯಲ್ಲಿ ಇದ್ದು ಕೀಲಿ ಹಾಕಿಕೊಂಡು ಹೋಗಿದ್ದು ನಾನು ದಿನಾಂಕ:26/10/2018 ರಂದು 12.00 ಪಿ.ಎಂ ಸುಮಾರಿಗೆ ನನ್ನ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲ ಕೀಲಿ ಮುರಿದಿದ್ದು ನಾನು ಮನೆಯಲ್ಲಿ ಹೋಗಿ ಪರಿಶೀಲಿಸಿ ನೋಡಲಾಗಿ ಮನೆಯ ಅಲಮಾರಿದಲ್ಲಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ  ಒಟ್ಟು 93000/-ರೂ ಬೆಲೆ ಬಾಳುವ ಚಿನ್ನದ ಆಭರಣ, ಮೊಬೈಲ್‌, ನಗದು ಹಣ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುರಿ ಕಳವು ಪ್ರಕರಣ :
ನರೋಣಾ ಠಾಣೆ : ದಿನಾಂಕ:27/10/2018 ರಂದು ಶ್ರೀಗುರುಶರಣ ತಂದೆ ಧರ್ಮರಾವ ಮಾಲಿಪಾಟೀಲ್ ಸಾ||ದಣ್ಣೂರ ಗ್ರಾಮ ರವರು ತಮ್ಮ ಕುರಿ ಕಾಯಲು ನಮ್ಮೂರಿನ ಯಲ್ಲಪ್ಪ ತಂದೆ ದಸರತ ಕಾಂಬಳೆ ಇವರಿಗೆ ಕೆಲಸಕ್ಕೆ ಇಟ್ಟಿಕೊಂಡಿದ್ದು ಪ್ರತಿ ದಿವಸ ಮುಂಜಾನೆ ನಮ್ಮ ದೊಡ್ಡಿಯಿಂದ ಕುರಿಗಳನ್ನು ಹೊಡೆದುಕೊಂಡು ಸಯಂಕಾಲ 6-00 ಗಂಟೆ ಸುಮಾರಿಗೆ ವಾಪಸ್ಸು ಮನೆಗೆ ತಂದು ಕಟ್ಟುತ್ತಾನೆ. ದಿನಾಂಕ: 26/10/2018 ರಂದು ಮುಂಜಾನೆ 08-00 ಗಂಟೆ ಸುಮಾರಿಗೆ ಯಲ್ಲಪ್ಪಾ ತಂದೆ ದಶರಥ ಕಾಂಬಳೆ ಈತನು ನಮ್ಮ 12 ಕುರಿಗಳನ್ನು ಮೆಯಸಿಕೊಂಡು ಬರಲು ಮನೆಯಿಂದ ಹೊಡೆದುಕೊಂಡು ಹೋಗಿ ವಾಪಸ್ಸು ಸಂಜೆ 6-00 ಗಂಟೆಗೆ ಬಂದು ಕುರಿಗಳನ್ನು ನಮ್ಮ ಹೊಸ ಮನೆಯ ಪಕ್ಕದಲ್ಲಿ ಕಟ್ಟಿ ಮನೆಗೆ ಹೊಗಿರುತ್ತಾನೆ. ನಾನು ಹಳೆ ಮನೆಯಲ್ಲಿ ಮಲಗಿರುವಾಗ ಮದ್ಯರಾತ್ರಿ 1-30 ಗಂಟೆ ಸುಮಾರಿಗೆ ನಮ್ಮ ಹೊಸಮನೆಯ ಪಕ್ಕದಲ್ಲಿ ವಾಸವಿರುವ ನಮ್ಮೂರಿನ ಕಮಲಾಕರ ತಂದೆ ಶಿವಲಿಂಗಪ್ಪ ಮೂಲಗೆ ಇವರು ಬಂದು ನಮ್ಮ ಹೊಸಮನೆಯ ಪಕ್ಕದಲ್ಲಿ ಕಟ್ಟಿರುವ 12 ಕುರಿಗಳಲ್ಲಿ 11 ಕುರಿಗಳನ್ನು  ಯಾರೋ ಕಳವು ಮಾಡಕೊಂಡು ಹೋಗಿರುತ್ತಾರೆ ಎಂದು ತಿಳಿಸಿದ ಮೇರೆಗೆ ನಾನು ತಕ್ಷಣವೆ ಹೊಸಮನೆಗೆ ಬಂದು ನನ್ನ ತಾಯಿಗೆ ವಿಚಾರಿಸಲು ರಾತ್ರಿ 10 ಗಂಟೆಗೆ ಕೊನೆಯದಾಗಿ ಕುರಿಗಳಿಗೆ ನೀರು ಕುಡಿಸಿ ಮನೆಯಲ್ಲಿ ಮಲಗಿದ್ದು, ಆನಂತರ ಮದ್ಯರಾತ್ರಿ 01-00 ಗಂಟೆ ಸುಮಾರಿಗೆ ಕುರಿ ವಳ್ಳುವ ಶಬ್ದಕೇಳಿ ಹೊರೆಗೆ ಬಂದು ನೋಡಲಾಗಿ 11 ಕುರಿಗಳನ್ನು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿದ್ದು ಒಂದು ಕುರಿ ಮಾತ್ರ ಇರುವ ಬಗ್ಗೆ ತಿಳಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 26/10/18 ರಂದು ರಾಷ್ಟ್ರೀಯ ಹೇದ್ದಾರಿ 218ರ ಬ್ಲೂ ಸ್ಟಾರ ದಾಬಾದ ಹತ್ತಿರ ಟವೇರಾ ನಂ ಕೆಎ-32 ಎನ್-5628 ನೇದ್ದರ ಚಾಲಕ ವೀರಯ್ಯಾ ಹೆರೇಮಠ ಇವನು ತನ್ನ ಟವೇರಾ ವಾಹನವನ್ನು  ಅಲಕ್ಷ್ಯತನದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ವಾಹನ ಪಲ್ಟಿ ಆಗಿ ಶ್ರೀ  ಚಂದ್ರಕಾಂತ ತಂದೆ ಗುರುಬಸಪ್ಪ ಸಾಃ ಜೇವರಗಿ ಮತ್ತು  ಮಗಳಿಗೆ & ಹೆಂಡತಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.