POLICE BHAVAN KALABURAGI

POLICE BHAVAN KALABURAGI

29 October 2018

KALABURGI DISTRICT REPORTED CRIMES

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 26-10-2018 ರಂದು ಬಳೂರ್ಗಿ ಗ್ರಾಮದ ಹೊರವಲಯದಲ್ಲಿ ದುಧನಿ ರೋಡಿಗೆ ಇರುವ ಡಾಬಾದ ಮುಂದೆ ಒಬ್ಬ ವ್ಯೆಕ್ತಿ ಅನದಿಕೃತವಾಗಿ ಮದ್ಯವನ್ನು ಮಾರಾಟ ಮಾಡಿ,  ಡಾಬಾದಲ್ಲಿ ಮದ್ಯವನ್ನು ಸೆವನೆ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದಾನೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಳೂರ್ಗಿ ಗ್ರಾಮದ ಹೊರವಲಯದಲ್ಲಿ ದುಧನಿ ರೋಡಿಗೆ ಇರುವ ಡಾಬಾದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ನೋಡಲು ಡಾಬಾದ ಮುಂದೆ ಒಬ್ಬ ವ್ಯೆಕ್ತಿ ಜನರಿಂದ ಹಣವನ್ನು ಪಡೆದು ತನ್ನ ಹತ್ತಿರವಿದ್ದ ಚೀಲದಲ್ಲಿ ಕೈ ಹಾಕಿ ಜನರಿಗೆ ಮದ್ಯ ವನ್ನು ಮಾರಾಟ ಮಾಡಿ ಮದ್ಯ ಖರಿದಿ ಮಾಡಿದ ಜನರಿಗೆ ಡಾಬಾದ ಒಳಗೆ ಕುಳಿತುಕೊಂಡು ಕುಡಿಯಿರಿ ಎಂದು ಜನರಿಗೆ ಹೇಳುತ್ತಿದ್ದನು. ಆಗ ನಾವು ಡಾಬಾದ ಕಡೆಗೆ ಹೋಗುತ್ತಿದ್ದಾಗ ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿ ಡಾಬಾದ ಮುಂದಿನ ಬೆಳಕಿನಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಡಾಬಾದ ಹಿಂದಿನ ಹೊಲದಲ್ಲಿ ಕತ್ತಲಲ್ಲಿ ಓಡಿ ಹೊದನು, ಆಗ ನಾವು ಸದರಿ ವ್ಯೆಕ್ತಿಯನ್ನು ಬೆನ್ನಟ್ಟಿದರೂ ನಮ್ಮಿಂದ ತಪ್ಪಿಸಿಕೊಂಡು ಹೋಗಿರುತ್ತಾನೆ. ಡಾಬಾದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಜನರು ಸಹ ನಮ್ಮನ್ನು ನೋಡಿ ಓಡಿ ಹೋಗಿರುತ್ತಾರೆ. ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿ ಸ್ಥಳದಲ್ಲಿ ಬಿಟ್ಟು ಹೋದ ಚೀಲವನ್ನು ಪರಿಶೀಲಿಸಿ ನೋಡಲು ಚೀಲದಲ್ಲಿ 1) 180 ಎಮ್ ಎಲ್ ಅಳತೆಯ BAGPIPER WHISKY  ಕಂಪನಿಯ ಒಟ್ಟು 13 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 1170/- ರೂ 2)  180 ಎಮ್ ಎಲ್ ಅಳತೆಯ OLD  TAVERN  WHISKY ಕಂಪನಿಯ ಒಟ್ಟು 09 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 666/- ರೂ 3) 180 ಎಮ್ ಎಲ್ ಅಳತೆಯ Officers Choice Special Whisky  ಕಂಪನಿಯ ಒಟ್ಟು 09 ಬಾಟಲಗಳು ಇದ್ದವು, ಅಂದಾಜು ಕಿಮ್ಮತ್ತು 810/- ರೂ ನಂತರ ಬಾತ್ಮಿದಾರರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಮತ್ತು ಡಾಬಾದ ಮಾಲಿಕನ ಹೆಸರು ವಿಳಾಸ ವಿಚಾರಿಸಲು, ಮದ್ಯ ಮಾರಾಟ ಮಾಡುತ್ತಿದ್ದವನ ಹೆಸರು ವಿಳಾಸ 1) ಪ್ರಕಾಶ ತಂದೆ ಶರಣಪ್ಪ ದೋಡ್ಡಮನಿ ಸಾ|| ಬಳೂರ್ಗಿ ತಾ|| ಅಫಜಲಪೂರ ಅಂತಾ ಹಾಗೂ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಂತಹ ಡಾಬಾದ ಮಾಲಿಕನ ಹೆಸರು ವಿಳಾಸ 2) ಜೈಭೀಮ ತಂದೆ ಶರಣಪ್ಪ ದೋಡ್ಡಮನಿ ಸಾ|| ಬಳೂರ್ಗಿ ತಾ|| ಅಫಜಲಪೂರ ಎಂದು ಗೊತ್ತಾಗಿರುತ್ತದೆ.  ನಂತರ ಸದರಿ ಒಟ್ಟು 2646/- ರೂ ಕಿಮ್ಮತ್ತಿನ ಒಟ್ಟು 31 ಮದ್ಯದ ಪೌಚಗಳನ್ನು / ಬಾಟಲಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಫರತಾಬಾದ ಠಾಣೆ : ದಿನಾಂಕ 27/10/18 ರಂದು ಟಿಪ್ಪರ ಮೂಲಕ ಆಕ್ರಮವಾಗಿ ಮರಳು ಸಾಗಿಸುತ್ತಿದ್ದು ಶ್ರೀ ಸೂರ್ಯಕಾಂತ ಎ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ಟಿಪ್ಪರ ನಂ ಕೆಎ-35 ಬಿ-6364 ನೇದ್ದರ ಮಾಲಿಕ & ಚಾಲಕರು ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮರಳು ಕಳ್ಳತನ ಮಾಡಿ ಸಾಗಾಣೆ ಮಾಡುವ ಕಾಲಕ್ಕೆ ಜಪ್ತಿ ಟಿಪ್ಪರ & ಮರಳು ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮ ಜರೂಗಿಸುವ ಕುರಿತು ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ತಸ್ಲೀಮ್‌ ಆರೀಫ ತಂದೆ ಶೇಖ ಯೂಸುಫ ಸಾ:ಮನೆ.ನಂ.1041/9/3/8 ಇಕ್ಬಾಲ್‌ ಕಾಲೋನಿ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ರವರ ತಂದೆ-ತಾಯಿಯವರು ಮೈಸೂರಿಗೆ ಹೋಗಿದ್ದು ನಾನು ದಿನಾಂಕ:23/10/2018 ರಂದು ಉಸ್ಮಾನಾಬಾದಕ್ಕೆ ಹೋಗಿದ್ದು ದಿನಾಂಕ:25/10/2018 ರಂದು 4.00 ಪಿ.ಎಂಕ್ಕೆ ನಮ್ಮ ಸಹೋದರಿಯಾದ ಶ್ರೀಮತಿ ಸಲ್ಮಾ ಬೇಗಂ ಗಂಡ ಅಬ್ದುಲ ಹಮೀದ್‌ ಇವರು ನಮ್ಮ ಮನೆಯಲ್ಲಿ ಇದ್ದು ಕೀಲಿ ಹಾಕಿಕೊಂಡು ಹೋಗಿದ್ದು ನಾನು ದಿನಾಂಕ:26/10/2018 ರಂದು 12.00 ಪಿ.ಎಂ ಸುಮಾರಿಗೆ ನನ್ನ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲ ಕೀಲಿ ಮುರಿದಿದ್ದು ನಾನು ಮನೆಯಲ್ಲಿ ಹೋಗಿ ಪರಿಶೀಲಿಸಿ ನೋಡಲಾಗಿ ಮನೆಯ ಅಲಮಾರಿದಲ್ಲಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ  ಒಟ್ಟು 93000/-ರೂ ಬೆಲೆ ಬಾಳುವ ಚಿನ್ನದ ಆಭರಣ, ಮೊಬೈಲ್‌, ನಗದು ಹಣ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುರಿ ಕಳವು ಪ್ರಕರಣ :
ನರೋಣಾ ಠಾಣೆ : ದಿನಾಂಕ:27/10/2018 ರಂದು ಶ್ರೀಗುರುಶರಣ ತಂದೆ ಧರ್ಮರಾವ ಮಾಲಿಪಾಟೀಲ್ ಸಾ||ದಣ್ಣೂರ ಗ್ರಾಮ ರವರು ತಮ್ಮ ಕುರಿ ಕಾಯಲು ನಮ್ಮೂರಿನ ಯಲ್ಲಪ್ಪ ತಂದೆ ದಸರತ ಕಾಂಬಳೆ ಇವರಿಗೆ ಕೆಲಸಕ್ಕೆ ಇಟ್ಟಿಕೊಂಡಿದ್ದು ಪ್ರತಿ ದಿವಸ ಮುಂಜಾನೆ ನಮ್ಮ ದೊಡ್ಡಿಯಿಂದ ಕುರಿಗಳನ್ನು ಹೊಡೆದುಕೊಂಡು ಸಯಂಕಾಲ 6-00 ಗಂಟೆ ಸುಮಾರಿಗೆ ವಾಪಸ್ಸು ಮನೆಗೆ ತಂದು ಕಟ್ಟುತ್ತಾನೆ. ದಿನಾಂಕ: 26/10/2018 ರಂದು ಮುಂಜಾನೆ 08-00 ಗಂಟೆ ಸುಮಾರಿಗೆ ಯಲ್ಲಪ್ಪಾ ತಂದೆ ದಶರಥ ಕಾಂಬಳೆ ಈತನು ನಮ್ಮ 12 ಕುರಿಗಳನ್ನು ಮೆಯಸಿಕೊಂಡು ಬರಲು ಮನೆಯಿಂದ ಹೊಡೆದುಕೊಂಡು ಹೋಗಿ ವಾಪಸ್ಸು ಸಂಜೆ 6-00 ಗಂಟೆಗೆ ಬಂದು ಕುರಿಗಳನ್ನು ನಮ್ಮ ಹೊಸ ಮನೆಯ ಪಕ್ಕದಲ್ಲಿ ಕಟ್ಟಿ ಮನೆಗೆ ಹೊಗಿರುತ್ತಾನೆ. ನಾನು ಹಳೆ ಮನೆಯಲ್ಲಿ ಮಲಗಿರುವಾಗ ಮದ್ಯರಾತ್ರಿ 1-30 ಗಂಟೆ ಸುಮಾರಿಗೆ ನಮ್ಮ ಹೊಸಮನೆಯ ಪಕ್ಕದಲ್ಲಿ ವಾಸವಿರುವ ನಮ್ಮೂರಿನ ಕಮಲಾಕರ ತಂದೆ ಶಿವಲಿಂಗಪ್ಪ ಮೂಲಗೆ ಇವರು ಬಂದು ನಮ್ಮ ಹೊಸಮನೆಯ ಪಕ್ಕದಲ್ಲಿ ಕಟ್ಟಿರುವ 12 ಕುರಿಗಳಲ್ಲಿ 11 ಕುರಿಗಳನ್ನು  ಯಾರೋ ಕಳವು ಮಾಡಕೊಂಡು ಹೋಗಿರುತ್ತಾರೆ ಎಂದು ತಿಳಿಸಿದ ಮೇರೆಗೆ ನಾನು ತಕ್ಷಣವೆ ಹೊಸಮನೆಗೆ ಬಂದು ನನ್ನ ತಾಯಿಗೆ ವಿಚಾರಿಸಲು ರಾತ್ರಿ 10 ಗಂಟೆಗೆ ಕೊನೆಯದಾಗಿ ಕುರಿಗಳಿಗೆ ನೀರು ಕುಡಿಸಿ ಮನೆಯಲ್ಲಿ ಮಲಗಿದ್ದು, ಆನಂತರ ಮದ್ಯರಾತ್ರಿ 01-00 ಗಂಟೆ ಸುಮಾರಿಗೆ ಕುರಿ ವಳ್ಳುವ ಶಬ್ದಕೇಳಿ ಹೊರೆಗೆ ಬಂದು ನೋಡಲಾಗಿ 11 ಕುರಿಗಳನ್ನು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿದ್ದು ಒಂದು ಕುರಿ ಮಾತ್ರ ಇರುವ ಬಗ್ಗೆ ತಿಳಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 26/10/18 ರಂದು ರಾಷ್ಟ್ರೀಯ ಹೇದ್ದಾರಿ 218ರ ಬ್ಲೂ ಸ್ಟಾರ ದಾಬಾದ ಹತ್ತಿರ ಟವೇರಾ ನಂ ಕೆಎ-32 ಎನ್-5628 ನೇದ್ದರ ಚಾಲಕ ವೀರಯ್ಯಾ ಹೆರೇಮಠ ಇವನು ತನ್ನ ಟವೇರಾ ವಾಹನವನ್ನು  ಅಲಕ್ಷ್ಯತನದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ವಾಹನ ಪಲ್ಟಿ ಆಗಿ ಶ್ರೀ  ಚಂದ್ರಕಾಂತ ತಂದೆ ಗುರುಬಸಪ್ಪ ಸಾಃ ಜೇವರಗಿ ಮತ್ತು  ಮಗಳಿಗೆ & ಹೆಂಡತಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 October 2018

KALABURAGI DISTRICT REPORTED CRIMES

ಕೊಲೆ ಮಾಡಿ ದರೋಡೆ ಮಾಡಿದ ಪ್ರಕರಣ :
ಮುಧೋಳ ಠಾಣೆ : ಶ್ರೀ ವೆಂಕಟೇಶ ತಂದೆ ಬಸವರಾಜ ತಲ್ಕಾಪಲ್ಲಿ ಸಾ|| ಮುನಕನಪಲ್ಲಿ ಗ್ರಾಮ ತಾ|| ಸೇಡಂ, ರವರ ತಂದೆಯಾದ ಬಸವರಾಜ ಇವರು ಈಗ 7-8 ವರ್ಷಗಳ ಹಿಂದೆ ಬೆಂಗಳೂರಿನಿಂದ ನಮ್ಮೂರಿಗೆ ಬಂದು ನಮ್ಮೂರ ಊರ ಹೊರಗಡೆ ನಮ್ಮ ಹೊಲದಲ್ಲಿ ಒಂದು ಮನೆಯ ಕಟ್ಟಿಸಿ, ಒಕ್ಕಲುತನ ಕೆಲಸ ಮಾಡಿಕೊಂಡಿದ್ದರು. ನಾನು ನಮ್ಮ ತಾಯಿಯಾದ ದೇವಕ್ಕಮ್ಮ ಮತ್ತು ನಮ್ಮ ತಮ್ಮ ಹಾಗು ತಂಗಿ ನಾವು 04 ಜನರು ಬೆಂಗಳೂರಿನಲ್ಲಿ ಇದ್ದೇವು. ನನಗೆ ಈಗ 2 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರು ತೆಲಂಗಾಣಾದ ಪರಗಿ ಹತ್ತಿರ ಇರುವ ರೂಪಕಾನಪೇಟ ಗ್ರಾಮದ ಸವಿತಾ ತಂದೆ ಕಿಷ್ಟಪ್ಪ ಇವರೊಂದಿಗೆ ಮದುವೆ ಮಾಡಿದ್ದು, ನಾನು ನನ್ನ ಹೆಂಡತಿಯೊಂದಿಗೆ ನಮ್ಮೂರಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಇದ್ದೇನು. ನಮ್ಮ ತಾಯಿ ದೇವಕ್ಕಮ್ಮ ಮತ್ತು ನಮ್ಮ ತಮ್ಮ ಅಶೋಕ ನಮ್ಮ ತಂಗಿ ಸವಿತಾ ಇವರು ತಲಘಟಪೂರ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿರುತ್ತಾರೆ. ಇಲ್ಲಿ ನಮ್ಮೂರಲ್ಲಿ ನಾನು ಹಾಗು ನನ್ನ ಹೆಂಡತಿ ಸವಿತಾ ಮತ್ತು ನಮ್ಮ ತಂದೆ ಬಸವರಾಜ ಹಾಗು ತಂದೆಯ ತಾಯಿ(ಅಜ್ಜಿ) ಬಾಲಮ್ಮ ಗಂಡ ಆಶಪ್ಪ ನಾವು 4 ಜನರು ಇರುತ್ತೇವೆ. ದಿನಾಂಕ: 24-10-2018 ರಂದು ರಾತ್ರಿ ನಾನು ನಮ್ಮ ತಂದೆ ಎಲ್ಲರೂ ಮನೆಯಲ್ಲಿ ಊಟ ಮಾಡಿ ನಾನು ಹಾಗು ನನ್ನ ಹೆಂಡತಿಯಾದ ಸವಿತಾ ಇಬ್ಬರು ಮನೆಯೋಳಗೆ ಬೇಡ ರೂಮನಲ್ಲಿ ಮಲಗಿಕೊಂಡಿದ್ದು, ನಮ್ಮ ಅಜ್ಜಿಯಾದ ಬಾಲಮ್ಮ ಮತ್ತು ನಮ್ಮ ಚಿಕ್ಕಪ್ಪನ ಮಗನಾದ ರವಿ ತಂದೆ ಹಣಮಂತು ಮುನಕನಪಲ್ಲಿ ಇವರಿಬ್ಬರು ನಮ್ಮ ಮನೆಯ ಹಾಲನಲ್ಲಿ ಮಲಗಿಕೊಂಡಿದ್ದು, ನಮ್ಮ ಬಂದೆ ಬಸವರಾಜ ತಂದೆ ಆಶಪ್ಪ ಇವರು ನಮ್ಮ ಮನೆಯ ಮುಂದುಗಡೆ ಮಂಚದ ಮೇಲೆ ಮಲಗಿಕೊಂಡಿದ್ದರು, ನಾವು ಮನೆಯಲ್ಲಿ ಮಲಗಿಕೊಂಡಿದ್ದಾಗ ರಾತ್ರಿ ದಿನಾಂಕ: 25-10-2018 ರಂದು 1200 ಗಂಟೆ ಸುಮಾರಿಗೆ ಹೊರಗಡೆ ನಮ್ಮ ತಂದೆ ಚೀರಿದ ಸಪ್ಪಳ ಕೇಳಿಬಂದು ಆಗ ಮನೆಯ ಹಾಲನಲ್ಲಿ ಮಲಗಿಕೊಂಡಿದ್ದ ನಮ್ಮ ಚಿಕ್ಕಪ್ಪನ ಮಗನಾದ ರವಿ ಇತನು ಮನೆಯ ಬಾಗಿಲು ತೆರೆದಾಗ, ಹೊರಗಡೆಯಿಂದ ಯಾರೋ 3 ಜನ ಕೈಯಲ್ಲಿ ಬಡಿಗೆ ಹಿಡಿದುಕೊಂಡು, ತಲೆಗೆ ಹಾಗು ಮುಖಕ್ಕೆ ಟೋಪಿ ಹಾಕಿಕೊಂಡು, ಮನೆಯೋಳಗೆ ಬಂದು, ನಮಗೆ ಏನು ಮಾತನಾಡದೆ, ಓಮ್ಮೇಲೆ ನಮ್ಮ ತಮ್ಮನಾದ ರವಿ ಇತನಿಗೆ ಬಡಿಗೆಯಿಂದ ಹೊಡೆಯ ಹತ್ತಿದರು, ಆಗ ನಾನು ಮತ್ತು ನಮ್ಮ ಅಜ್ಜಿಯಾದ ಬಾಲಮ್ಮ ಬಿಡಿಸಲು ಹೋದಾಗ ಈ 3  ಜನರು ನನಗು ಹಾಗು ನಮ್ಮ ಅಜ್ಜಿಯಾದ ಬಾಲಮ್ಮ ಇವರಿಗೆ ಕಟ್ಟಿಗೆಯಿಂದ ಹೊಡೆದು, ಅವಳ ಕೊರಳಲ್ಲಿದ್ದ ಒಂದು ತೊಲೆ ಬಂಗಾರ ಸಣ್ಣ ಗುಂಡಿನ ಸರವನ್ನು ಕಿತ್ತಿಕೊಂಡಿದ್ದು, ಇದು ಅರ್ದ ತುಂಡಾಗಿ ಮನೆಯಲ್ಲಿ ಬಿದಿದ್ದು ಇರುತ್ತದೆ. ನಂತರ ಇವರು ಮನೆಯಲ್ಲಿದ್ದ ನನ್ನ ಹೆಂಡತಿಯಾದ ಸವಿತಾ ಇವಳ ಹತ್ತಿರ ಹೋಗಿ ನನ್ನ 07 ತಿಂಗಳ ಗಂಡು ಮಗುವಿಗೆ ಕಸಿದುಕೊಳ್ಳಲು ಹೋದಾಗ, ನನ್ನ ಹೆಂಡತಿಯು ನನ್ನ ಮಗುವಿಗೆ ಏನು ಮಾಡಬೇಡಿರಿ ಕಾಲು ಬಿಳುತ್ತೇನೆ ಅಂತಾ ಬೇಡಿಕೊಂಡಳು, ಆಗ ನಾವು ಚೀರಾಡುತ್ತಿದ್ದಾಗ, ಸದರಿಯವರು ಮನೆಯಿಂದ ಹೊರೆ ಬಂದರು, ನಂತರ ನಾವು ಹೊರಗಡೆ ಬಂದು ನೋಡಲಾಗಿ ಅವರ ಜೋತೆಯಲ್ಲಿ ಬಂದಿದ್ದ ಇನ್ನು ಇಬ್ಬರು ವ್ಯಕ್ತಿಗಳು ಹೊರಗಡೆಯಿಂದ ಯಾರು ಬರದಂತೆ ನೋಡುತ್ತಾ ನಿಂತಿದ್ದರು. ನಾನು ಹೇದರಿಕೊಂಡು ಮನೆಯಿಂದ ಊರೋಳಗೆ ಓಡಿ ಹೋಗಿ ಅಲ್ಲೇ ಮನೆಯ ಸಮೀಪದಲ್ಲಿರುವ ದಯಾನಂದ ಸ್ವಾಮಿ, ರಾಜಾ ಅಹೇಮದ್ ತಂದೆ ಲಾಲ ಅಹೇಮದ್ ಇತರರಿಗೆ ಕರೆದುಕೊಂಡು ಬಂದಿದ್ದು, ಅಷ್ಟರಲ್ಲಿ ಅವರು ಮನೆಯಿಂದ ಓಡಿಹೋಗಿದ್ದು ಇರುತ್ತದೆ. ನಂತರ ನೋಡಲಾಗಿ ಮನೆಯ ಹೊರಗಡೆ ಮಲಗಿದ ನಮ್ಮ ತಂದೆ ಬಸವರಾಜ ಇತನಿಗೆ ಬಲಗಡೆ ಕಿವಿಯ ಹತ್ತಿರ ರಕ್ತಗಾಯವಾಗಿ ಇವರು ಮಲಗಿದಲ್ಲೇ ಮೃತ ಪಟ್ಟಿದ್ದು ಇರುತ್ತದೆ. ನನಗೆ ಸದರಿಯವರು ಕಟ್ಟಿಗೆಯಿಂದ ಹೊಡದಿದ್ದರಿಂದ ನನ್ನ ತಲೆಗೆ ಮುಂದುಗಡೆ ಹಣೆಗೆ ಹಾಗು ಸೊಂಟಕ್ಕೆ, ಎಡಗೈ ಮೊಣಕೈ ಹತ್ತಿರ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ನಮ್ಮ ಅಜ್ಜಿಯಾದ ಬಾಲಮ್ಮ ಇವಳಿಗೆ ಹಣೆಗೆ ಹಾಗು ಕಣ್ಣಿಗೆ ಹಾಗು ಮುಖಕ್ಕೆ ಇತರೆ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು, ಮತ್ತು ನಮ್ಮ ಚಿಕ್ಕಪ್ಪನ ಮಗನಾದ ರವಿ ಇತನ ಮುಖಕ್ಕೆ, ಕಣ್ಣಿನ ಹತ್ತಿರ ಹಾಗು ಇತರೆ ಕಟ್ಟಿಗೆಯಿಂದ ಹೊಡೆದು ಭಾರಿಗಾಯ ಪಡಿಸಿದ್ದು ಇದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 25.10.2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ನ್ಯೂ ರಾಘವೇಂದ್ರ ಕಾಲೋನಿಯ ಮೊರೆ ಕಾಂಪ್ಲೇಕ್ಸ ಹತ್ತಿರ ಇರುವ ಅಟೊ ಸ್ಟಾಂಡದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮೊರೆ ಕಾಂಪ್ಲೇಕ್ಸ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತುಕೊಂಡು ನೋಡಲು ಮೊರೆ ಕಾಂಪ್ಲೇಕ್ಸ ಮುಂದಿ ಅಟೊ ಸ್ಟಾಂಡದಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವರನ್ನು ನಾನು ಮತ್ತು ಸಿಬ್ಬಂದಿಯವರು ಕೂಡಿ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯರು ತಮ್ಮ ಹೆಸರು 1. ಯಲ್ಲಾಲಿಂಗ ತಂದೆ ಸುಭಾಷ ಚಿನ್ನಪಳ್ಳಿ ಸಾ: ಗಂಗಾನಗರ ಹನುಮಾನ ದೇವರ ಗುಡಿ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದು ಹಣ 650/-ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು. 2. ಬಾಬು ತಂದೆ ದತ್ತು ಗಾಣಗಾಪೂರ ಸಾ: ಯಲ್ಲಮ್ಮ ಗುಡಿ ಹತ್ತಿರ ಗಂಗಾನಗರ ಕಲಬುರಗಿ ಇತನ ಹತ್ತಿರ ನಗದು ಹಣ 550/- ರೂ 1 ಮಟಕಾ ಚೀಟಿ ಮತ್ತು ಒಂದು ಬಾಲ ಪೇನ್ ದೊರೆತಿದ್ದು ಒಟ್ಟು ನಗದು ಹಣ 1200/- ರೂಪಾಯಿ 2 ಮಟಕಾ ಚೀಟಿ ಮತ್ತು 2 ಬಾಲ ಪೇನ್ನುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ದ್ವಿಚಕ್ರ ವಾಹನ ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ನಾಗರಾಜ ತಂದೆ ಹಣಮಂತಪ್ಪ ಹಡಪದ ಮು:ಕಮಲಾಪೂರ ತಾ:ಜಿ:ಕಲಬುರಗಿ ರವರು ದಿನಾಂಕ:22.10.2018 ರಂದು ಮದ್ಯಾಹ್ನದ ವೇಳೆಯಲ್ಲಿ ಕಮಲಾಪೂರನಲ್ಲಿರುವ ಮಾಣಿಕೇಶ್ವರ ಶೋರೂಮನಿಂದ ಹೋಸದಾಗಿ ಕಪ್ಪು ಬಣ್ಣದ ಹಿರೊ ಸ್ಪ್ಲೆಂಡರ ಪ್ಲಸ್ ಮೋಟರಸೈಕಲ ನೇದ್ದು ಖರಿದಿ ಮಾಡಿದ್ದು. ಅದರ ಟಿ.ಪಿ. ನಂಬರ- KA/32TMP/2018/10299 ಮತ್ತು ಅದರ ಇಂಜಿನ ನಂಬರ HA10AGJHH11308 ಹಾಗೂ ಅದರ ಚೆಸ್ಸಿ ನಂಬರ- MBLHAR086JHH03621 ಇದ್ದು. ಇನ್ನೂ ನನ್ನ ಹೆಸರಿಗೆ ಕಾಗದ ಪತ್ರಗಳು ನೊಂದಣಿ ಆಗಿರುವುದಿಲ್ಲ. ಹೀಗಿದ್ದು ದಿನಾಂಕ:22-10-2018 ರಂದು ಸಾಯಂಕಾಲ 07.15 ಗಂಟೆಯ ಸೂಮಾರಿಗೆ ನಾನು ಮೇಲ್ಕಂಡ ನನ್ನ ಮೋಟರ ಸೈಕಲ ಮೇಲೆ ಕಮಲಾಪೂರನ ಕೃಷ್ಣಾ ಗ್ರಾಮೀಣ ಬ್ಯಾಂಕನ ಪಕ್ಕದಲ್ಲಿರುವ ಬಸವೇಶ್ವರ ಫೈನಾನ್ಸಲ್ಲಿ ಕೆಲಸ ಮಾಡುತ್ತಿರುವ ನನ್ನ ಹಿರಿಯ ಮಗನಾದ ಆಕಾಶ ಹಡಪದ ಈತನಿಗೆ ಭೇಟಿಯಾಗಲು ಹೋಗಿದ್ದು. ಮೋಟರ ಸೈಕಲನ್ನು ಫೈನಾನ್ಸನ ಹೋರಗಡೆ ನಿಲ್ಲಿಸಿ ನಾನು ಫೈನಾನ್ಸನ ಒಳಗಡೆ ನನ್ನ ಮಗನಿಗೆ ಭೇಟಿಯಾಗಲು ಹೋಗಿ ವಾಪಸ್ಸ ಅಂದೇ 07.30 ಪಿ.ಎಮ್.ಕ್ಕೆ ನಾನು ಫೈನಾನ್ಸ ಒಳಗಿನಿಂದ ಹೋರಗಡೆ ಬಂದು ನೋಡಲು ಮೇಲ್ಕಂಡ ನನ್ನ ಮೋಟರೆಸೈಕಲ ನಾನು ಇಟ್ಟ ಜಾಗದಲ್ಲಿ ಇರಲಿಲ್ಲ. ನಂತರ ನಾನು ಗಾಬರಿಗೊಂಡು ಸದರಿ ವಿಷಯವನ್ನು ನನ್ನ ಮಗ ಆಕಾಶ ಹಡಪದ ಮತ್ತು ಶಿವಕುಮಾರ ತಂದೆ ಗುಂಡಪ್ಪ ಟೆಂಗಳಿ ಇವರಿಗೆ ತಿಳಿಸಿದು. ನಂತರ ನಾವೇಲ್ಲರೂ ಕೂಡಿ ಅಂದಿನಿಂದ ಇಂದಿನ ವರೆಗೆ ಕಮಲಾಪೂರ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೋಗಿ ಮೇಲ್ಕಂಡ ನನ್ನ ಮೋಟರ ಸೈಕಲನ್ನು ಹುಡುಕಾಡಿದರು ನನ್ನ ಮೋಟರಸೈಕಲ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 October 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 24.10.2018 ರಂದು ರಾತ್ರಿ ಮೃತ ಮಗದೂಮ ಅಲಿ ಇತನು ತನ್ನ ಮೋ/ಸೈಕಲ್ ನಂ: ಕೆಎ-33/ಜೆ-103 ನೇದ್ದನ್ನು ಕಾಮತ ಹೊಟೆಲ ಕಡೆಯಿಂದ ಜಗತ ಸರ್ಕಲ ಕಡೆಗೆ ಹೋಗುವ ಕುರಿತು ರೋಡ ಡಿವೈಡರ ಹತ್ತೀರ ಬಂದು ಮೋಟಾರ ಸೈಕಲ ತಿರುಗಿಸಿಕೊಂಡು ಜಗತ ಸರ್ಕಲ ಕಡೆಗೆ ಹೋಗುವಾಗ ದೇವಾನಂದ ಅಂಗಡಿ ಮತ್ತು ಓರಿಯಂಟಲ ಬ್ಯಾಂಕ ಆಫ್ ಕಾಮರ್ಸ ಎದುರು ರೋಡ ಮೇಲೆ ಟ್ಯಾಂಕರ ಲಾರಿ ನಂ ಕೆಎ-33-7809 ನೇದ್ದರ ಚಾಲಕ ಜೈ ಭೀಮ ಇತನು ಚೌಕ ಸರ್ಕಲ ಕಡೆಯಿಂದ ಜಗತ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಗದೂಮ ಅಲಿ ಇವರ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಮಗದೂಮ ಅಲಿ ಇವರು ಕೆಳಗಡೆ ಬಿದ್ದಾಗ ಚಾಲಕನು ಅವರ ಮೇಲೆ ಲಾರಿಯ ಗಾಲಿಯನ್ನು ಹಾಯಿಸಿ ಅವರಿಗೆ ಭಾರಿಗಾಯಗೊಳಿಸಿದ್ದರಿಂದ ಮಗದೂಮ ಅಲಿ ಇವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ  ಶ್ರೀ ವಾಹೀದಮಿಯಾ ತಂದೆ ಮಗದೂಮ ಅಲಿ  ಸಾ: ಶಹಾ ಜಿಲಾನಿ ಹೈಸ್ಕೂಲ ಹಿಂದುಗಡೆ ದಿಲದಾರ ಕಾಲೋನಿ  ಎಮ್.ಎಸ್.ಕೆ ಮಿಲ್ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 21-10-2018 ರಂದು ಮದ್ಯಾಹ್ನ ನಾನು ನನ್ನ ವಯಕ್ತಿಕ ಕೆಲಸಕ್ಕಾಗಿ ಅಫಜಲಪೂರಕ್ಕೆ ಬಂದಿದ್ದೆನು. ನನ್ನ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗಬೇಕು ಅಂತಾ ಅಫಜಲಪೂರ – ಉಡಚಣ ಬಸ್ಸಿನಲ್ಲಿ ಬಾಗಿಲು ಎದುರಿನ ಸೀಟಿನಲ್ಲಿ ಕುಳಿತಿದ್ದೆನು. ಆಗ ನನ್ನ ತಂಗಿಯ ಗಂಡನಾದ ಶೇಖರ ತಂದೆ ಬಸಪ್ಪ ಹೊನ್ನಕೇರಿ ಸಾ|| ಭೋಸಗಾ ಹಾ|| ವ|| ಸೋಲ್ಲಾಪೂರ  ಈತನು ಸಹ ಕರಜಗಿಯ ಅಶೋಕ ನಗರಕ್ಕೆ ಹೋಗಲು ಅದೆ ಬಸ್ಸಿನಲ್ಲಿ ಬಂದು ನನ್ನ ಪಕ್ಕದಲ್ಲಿ ಕುಳಿತುಕೊಂಡನು. ಇಬ್ಬರು ಮಾತಾಡುತ್ತಾ ಕರಜಗಿ ಕಡೆಗೆ ಹೊರಟೆವು. ನಮ್ಮಂತೆ ಬಸ್ಸಿನಲ್ಲಿ ಇನ್ನು ಅನೇಕ ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ನಮ್ಮೂರಿನವರಾದ ಕಾಶೀನಾಥ ಯಾದವ, ರಾಮಣ್ಣ ಹಲಸಂಗಿ, ಮಹಾಧೇವ ಸಿರನಾಳ ಇವರು ಸಹ ಸದರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ಸಿನ ಕಂಡೆಕ್ಟರನು ಬಾಗಿಲು ಮುಚ್ಚದೆ ಹಾಗೆ ಕುಳಿತಿದ್ದನು. ಬಸ್ಸು ಅಶೋಕ ನಗರದ ಸಮೀಪ ಹೋಗುತ್ತಿದ್ದಂತೆ ಸದರಿ ಬಸ್ಸಿನ ಚಾಲಕನು ಬಸ್ಸನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿ ಒಮ್ಮೇಲೆ ಕಟ್ ಹೊಡೆದಿದ್ದರಿಂದ ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ತಂಗಿಯ ಗಂಡನಾದ ಶೇಖರನು ಬಾಗಿಲಿನಿಂದ ಹೊರಗೆ ಬಿದ್ದನು. ಆಗ ನಾನು ಮತ್ತು ಬಸ್ಸಿನಲ್ಲಿದ್ದವರು ಕೂಗಿದ್ದರಿಂದ ಬಸ್ಸಿನ ಚಾಲಕನು ಸ್ವಲ್ಪ ಮುಂದೆ ಹೋದ ನಂತರ ಬಸ್ಸ ನಿಲ್ಲಿಸಿದನು. ನಾವು ಕೆಳಗೆ ಇಳಿದು ನೊಡಲು ನನ್ನ ತಂಗಿಯ ಗಂಡನ ತಲೆಯ ಹಿಂಬಾಗದಲ್ಲಿ ಭಾರಿ ಒಳಪೆಟ್ಟು ಮತ್ತು ರಕ್ತಗಾಯಗಳಾಗಿ ಪ್ರಜ್ಞೆ ಹೀನ ಸ್ಥಿತಿಯಲ್ಲಿದ್ದನು. ಸದರಿ ಬಸ್ ನಂ ಕೆಎ-32 ಎಫ್-1920 ಇದ್ದು. ಚಾಲಕ ಮತ್ತು ಕಂಡೆಕ್ಟರ ರವರಿಗೆ ಅವರ ಹೆಸರು ವಿಚಾರಿಸಲು ಚಾಲಕನು ತನ್ನ ಹೆಸರು ರಾವುತಪ್ಪ ತಂದೆ ಯಲ್ಲಪ್ಪ ಗಂಗನಳ್ಳಿ ಅಂತ ಮತ್ತು ಕಂಡೆಕ್ಟರನು ತನ್ನ ಹೆಸರು ಕಾಮಣ್ಣ ತಂದೆ ಜಟ್ಟೆಪ್ಪ ಕತನಳ್ಳಿ ಅಂತ ತಿಳಿಸಿದನು. ಸದರಿ ಬಸ್ಸು ಅಫಜಲಪೂರ ಡಿಪೊದು ಇರುತ್ತದೆ. ನಂತರ ನಾನು ಮತ್ತು ಬಸ್ಸಿನ ಡ್ರೈವರ-ಕಂಡೆಕ್ಟರ್ ಹಾಗೂ  ಬಸ್ಸಿನಲ್ಲಿದ್ದ ನಮ್ಮೂರಿನ ಕಾಶೀನಾಥ ಯಾದವ, ರಾಮಣ್ಣ ಹಲಸಂಗಿ, ಮಹಾಧೇವ ಸಿರನಾಳ ರವರೆಲ್ಲರೂ  ನನ್ನ ತಂಗಿಯ ಗಂಡನನ್ನು ಒಂದು ಖಾಸಗಿ ವಾಹನದಲ್ಲಿ ನನ್ನ ತಂಗಿಯ ಗಂಡನಿಗೆ ಚಿಕಿತ್ಸೆಗಾಗಿ ಅಫಜಲಪೂರಕ್ಕೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮದ್ಯ ಸಿರವಾಳ ಹತ್ತಿರ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಪಾಂಡುರಂಗ ತಂದೆ ಪ್ರಲ್ಹಾದ ಸಿರನಾಳ ಸಾ|| ಶೇಷಗಿರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಮೇಹರಬಾನು ಗಂಡ ಅಹಮದ್ ಹುಸೇನ್ ಮನಸೂರ ಸಾ|| ಮನೆ ನಂ; 11-1410/34/ಎಫ್3 ಗಾಲಿಭ ಕಾಲೋನಿ 2 ನೇ ಕ್ರಾಸ್ ಮಹ್ಮದಿ ಚೌಕ್ ಜಿಲಾನಾಬಾದ ಕಲಬುರಗಿ ರವರ ಗಂಡ ಅಹಮದ್ ಹುಸೇನ್ ಮನಸೂರ ಇತನು ಗಾಜೀಪೂರ ಮಾರ್ಕೇಟನಲ್ಲಿ ಮ್ಯಾಟ್ರೇಡಸ್ ಚಪ್ಪಲ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾರೆ. ನಮ್ಮದು ಸರದಾರ ಪಟೇಲ್ ವೃತ್ತದ್ದಲಿ ಎರಡು ಸೆಟರ್ ಅಂಗಡಿಗಳು ಇದ್ದು ಅವುಗಳು ನಮಗೆ ಪರಿಚಯದವನಾದ ಮುಷ್ತಾಫ@ಬಾಬಾ ತಂದೆ ನಜೀರ ಸಹಮದ್ ಸಾ|| ಬಸವೇಶ್ವರ ಕಾಲೋನಿ ಕಲಬುರಗಿ ಇತನಿಗೆ ಆ ಎರಡು ಸೆಟರ್ ಅಂಗಡಿಗಳು 5 ವರ್ಷಗಳ ಹಿಂದೆ 20 ಲಕ್ಷಕ್ಕೆ ಮಾರಾಟ ಮಾಡಿದ್ದು. ಅದರಲ್ಲಿ 10 ಲಕ್ಷ ಆತನು ನಮಗೆ ಕೊಟ್ಟಿದ್ದು ನಂತರ ಕೆಲವೆ ದಿನಗಳಲ್ಲಿ ಆ ಸೆಟರ್ ಅಂಗಡಿಗಳು ಮಾಸ್ಟರ್ ಪ್ಲಾನನಲ್ಲಿ ಕಾರ್ಪೊರೆಷನನವರು ಒಡೆದು ಹಾಕಿದ್ದು ಇರುತ್ತದೆ. ಆಗ ಮುಷ್ತಾಫ@ಬಾಬಾ ಇತನು ನಮಗೆ ಮರಳಿ ಹಣ ಕೊಡುವಂತೆ ಕೆಳಿದ್ದು ಅದಕ್ಕಾಗಿ ನಾವು ಮರಳಿ 5 ಲಕ್ಷ ಕೊಟ್ಟಿದ್ದು ಇನ್ನೂ 5 ಲಕ್ಷ ಕೊಡುವದು ಬಾಕಿ ಇರುತ್ತದೆ ಆದರೆ ಮುಷ್ತಾಫ@ಬಾಬಾ ಇತನು ದಿನಾಲು ನಮ್ಮ ಮನೆಗೆ ಹಾಗು ನಮ್ಮ ಚಪ್ಪಲ್ ಅಂಗಡಿಗೆ ಹೋಗಿ ನಮ್ಮ ಪತಿ ಹಾಗು ಮಕ್ಕಳಿಗೆ  ಹಣ ಕೊಡುವಂತೆ ಕೇಳುವದು ಜಗಳ ಮಾಡುವದು ಮಾಡುತ್ತಾ ಬಂದಿರುತ್ತಾನೆ. ಹಿಗಿದ್ದು ಇಂದು ದಿನಾಂಕ; 23/10/2018 ರಂದು 2 ಪಿಎಮ್ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಮುಷ್ತಾಫ@ಬಾಬಾ ಇತನು ನಮ್ಮ ಮನೆಯ ಮುಂದೆ ರಸ್ತೆಯಲ್ಲಿ ಬಂದು ನನ್ನ ಗಂಡನ ಹೆಸರು ಒದರಿದನು ಆಗ ನಾನು ಹೊರಗಡೆ ಹೊದಾಗ ಮುಷ್ತಾಫ@ಬಾಬಾ ಇತನು ಅಹಮದ್ ಹುಸೇನ್ ಎಲ್ಲಿದ್ದಾನೆ ಅಂತಾ ಕೇಳಿದನು ಆಗ ನಾನು ಅವರು ಮನೆಯಲ್ಲಿ ಇಲ್ಲ ಅಂತಾ ಅಂದಾಗ ನನಗೆ ಕೊಡಬೇಕಾದ  5 ಲಕ್ಷ ರೂಪಾಯಿ ನನಗೆ ಬೇಕು ಅಂತಾ ಅಂದನು ಆಗ ನಾನು ಸದ್ಯ ನಮ್ಮಲ್ಲಿ ಹಣ ಇಲ್ಲ ನಮ್ಮ ಮನೆ ಮಾರಿ ಹಣ ಕೊಡುತ್ತೇವೆ ಅಂತಾ ಹೇಳಿದೇನು ಆಗ ಆತನು ನಿನ್ನ ಗಂಡ ನನಗೆ ಕೊಡಬೇಕಾದ ಹಣ ಕೊಡದಿದ್ದರೆ ಭೋಸಡಿ ಮಕ್ಕಳೆ ನಿಮಗೆ ಜೀವಸಹಿತ ಬಿಡುವದಿಲ್ಲ ಅಂತಾ ಅವಾಚ್ಯವಾಗಿ ಬೈದು ನನಗೆ ದಬ್ಬಿಸಿಕೊಟ್ಟನು ಆಗ ಅಲ್ಲೆ ಇದ್ದ ಸುರಯಾ ಬೆಗಂ ಗಂಡ ಅಬ್ದುಲ್ ನಬಿ ಹಾಗು ನಮ್ಮ ಮಗ ಮಿಸ್ಫರ್ ಹುಸೇನ ಇವರು ಹೆಣ್ಣಮಗಳ ಜೊತೆ ಯಾಕೆ ಜಗಳಮಾಡುತ್ತಿರಿ ಅಂತಾ ಅಂದಾಗ ನನ್ನೊಂದಿಗೆ ಜಗಳ ಮಡುವದು ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ