POLICE BHAVAN KALABURAGI

POLICE BHAVAN KALABURAGI

22 September 2018

KALABURAGI DISTRICT REPORTED CRIMES

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಬುತುಲ್‌‌ ಫಾತಿಮಾ ಗಂಡ ಸೈಯದ ಜಮೀಲ್‌ ಅಹ್ಮದ ಸಾ:ಆರೀಫ ಕಾಲೋನಿ ಕಲಬುರಗಿ  ರವರ ಗಂಡನಾದ ಸೈಯದ ಜಮೀಲ್ ಇವರು ಸೌಧಿ ಅರಬಿಯಲ್ಲಿ ಕೆಲಸ ಮಾಡುತ್ತಿದ್ದು ನಾನು, ನಮ್ಮ ತಂದೆ ಮತ್ತು ನನ್ನ ನಾಲ್ಕು (4) ಜನ ಮಕ್ಕಳು ಇರುತ್ತೆವೆ ನನ್ನ ತಾಯಿಯವರ ಮನೆಯ ಎಮ್.ಎಸ್.ಕೆ. ಮೀಲ್ ಬಡವಾವಣೆಯ ಮಹ್ಮದಿ ಮಜ್ಜಿದ ಹತ್ತಿರ ಇದ್ದು ನಾನು ಆಗಾಗ ನನ್ನ ತಾಯಿ ಮನೆಗೆ ಹೋಗಿ ಬರುವದು ಮಾಡುತ್ತಾ ಇರುತ್ತೆನೆ.ದಿನಾಂಕ 20.09.2018 ರಂದು ಮೊಹರಮ ಹಬ್ಬ ಇದ್ದ ಪ್ರಯುಕ್ತ ನಾನು, ನನ್ನ ಮಕ್ಕಳು ಹಾಗೂ ನಮ್ಮ ತಂದೆ ಕೂಡಿಕೊಂಡು ಸಾಯಂಕಾಲ 4 ಗಂಟೆಯ ಸುಮಾರಿಗೆ ನಮ್ಮ ಮನೆಯ ಬಾಗಿಲಕ್ಕೆ ಕೀಲಿ ಹಾಕಿ ನಮ್ಮ ತಾಯಿಯ ಮನೆಗೆ ಹೋಗಿ ನಮ್ಮ ತಾಯಿ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದು ಇರುತ್ತದೆ. ಇಂದು ದಿನಾಂಕ 21.09.2018 ರಂದು ಬೆಳ್ಳಿಗ್ಗೆ 11:30 ಗಂಟೆಗೆ ನಾನು ನನ್ನ ಮನೆಗೆ ಬಂದು ನೋಡಲು ನಮ್ಮ ಮನೆಗೆ ಬಂದು ಮನೆಯ ಗೇಟ ಕೀಲಿ ತೆರೆದು ಒಳಗೆ ಹೋಗಿ ನೋಡಲು ನಮ್ಮ ಮನೆಯ ಮುಖ್ಯ ದ್ವಾರದ ಬಾಗೀಲ ಕೊಂಡಿ ಕತ್ತರಿಸಿದ್ದು, ಗಾಬರಿಗೊಂಡು ನಾನು ಒಳಗೆ ಹೋಗಿ ನೋಡಲು ಮನೆಯಲ್ಲಿ ಇದ್ದ ಅಲಮಾರಿಗಳು ತೆರೆದಿದ್ದು ಅದರಲ್ಲಿ ಇದ್ದ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಇರುತ್ತದೆ. ಆಗ ನಾನು ಅಲಮಾರಿಯಲ್ಲಿ ಪರಿಶಿಲಿಸಿ ನೋಡಲು ಅಲಮಾರಿಯಲ್ಲಿ ಇಟ್ಟಿದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ  3,97,000/- ರೂ ಕಿಮ್ಮತ್ತಿನವುಘಳನ್ನು . ದಿನಾಂಕ 20.09.2018 ರಂದು ಸಾಯಂಕಾಲ 4 ಗಂಟೆಯಿಂದ ದಿನಾಂಕ 21.09.2018 ರಂದು ಬೆಳ್ಳಿಗ್ಗೆ 11:30 ಗಂಟೆಯ ಮಧ್ಯದಲ್ಲಿ ಯಾರೊ ಕಳ್ಳರು ನಮ್ಮ ಮನೆಯ ಬಾಗೀಲ ಕೊಂಡಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮೇಲೆ ನಮೂದಿಸಿದ ಬಂಗಾರ, ಬೆಳ್ಳಿ ಆಭರಣಗಳು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮನುಷ್ಯ ಕಾಣೆಯಾದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ವೀಣಾ ಗಂಡ ಬಾಲಾಜಿ ಘನಾತೆ ಸಾ: ವಿಶ್ವರಾಧ್ಯ ಕಾಲೋನಿ ಕಲಬುರಗಿ ರವರು ವಿಶ್ವರಾಧ್ಯ ಕಾಲೋನಿಯ ಶಟ್ಟಿ ಕಾಂಪ್ಲೇಕ್ಸ ಪಕ್ಕದಲ್ಲಿ ನಮ್ಮ ಸ್ವಂತ ಮನೆ ಇದ್ದು ನಮ್ಮ ಮನೆಯ ಕೆಳಗೆ ಶ್ರೀನಿವಾಸ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು ನಮ್ಮ ಅಂಗಡಿಯ ವ್ಯವಹಾರವನ್ನು ನನ್ನ ಗಂಡನೆ ನೋಡಿಕೊಂಡು ಬಂದಿರುತ್ತಾರೆ. ನಮ್ಮ ಅಂಗಡಿಯ ಮೇಲಿನ ಅಂತಸ್ಥಿನಲ್ಲಿ ನಾವು ಮನೆ ಮಾಡಿಕೊಂಡು ವಾಸವಾಗಿರುತ್ತೆವೆ. ನನ್ನ ಗಂಡನಾದ ಶ್ರೀ ಬಾಲಾಜಿ ತಂದೆ ಅಂಬಾಜಿರಾವ ಘನಾತೆ ರವರು ಈಗ ಸುಮಾರು ವರ್ಷಗಳಿಂದ ಬಟ್ಟೆ ವ್ಯಾಪಾರ ಮಾಡಿಕೊಂಡು ಬಂದಿದ್ದು ವ್ಯಾಪಾರ ಸಂಬಂದ ಬ್ಯಾಂಕಿನಲ್ಲಿ ಸಾಲ ಮತ್ತು ನನ್ನ ಗಂಡನಿಗೆ ಪರಿಚಯಸ್ಥರಲ್ಲಿ ವ್ಯಾಪಾರದ ಸಂಬಂದ ಸಾಲ ಮಾಡಿದ್ದು ಇರುತ್ತದೆ. ಹಣ ಮರಳಿಸುವ ಕುರಿತು ಯಾರು ಕೂಡಾ ನನ್ನ ಗಂಡನಿಗೆ ಒತ್ತಾಯ ಮಾಡಿರುವದಿಲ್ಲ. ನನ್ನ ಗಂಡನು ಸಾಲದ ವಿಷಯವಾಗಿ ಪ್ರತಿ ದಿವಸ ಮಧ್ಯ ಸೇವನೆ ಮಾಡುತ್ತಾ ಬಂದಿದ್ದು. ನಾನು, ನಮ್ಮ ಮಾವ ಹಾಗೂ ನಮ್ಮ ಮನೆಯವರು ನನ್ನ ಗಂಡನಿಗೆ ಮಧ್ಯ ಸೇವನೆ ಮಾಡದಂತೆ ತಿಳಿ ಹೇಳಿದರು ಕುಡಾ ನನ್ನ ಗಂಡ ಮಧ್ಯ ಸೇವೆನೆ ಮಾಡುತ್ತಾ ಬಂದಿದ್ದು ಇರುತ್ತದೆ. ಇತಿತ್ತಲಾಗಿ ಹಗಲು ಹೊತ್ತಿನಲ್ಲಿ ಕೂಡಾ ಮಧ್ಯ ಸೇವನೆ ಮಾಡುತ್ತಾ ಬಂದಿದ್ದು ಇರುತ್ತದೆ. ಮೊನ್ನೆ ದಿನಾಂಕ 19.09.2018 ರಂದು ಬೆಳ್ಳಿಗ್ಗೆ 9:30 ಗಂಟೆಯ ಸುಮಾರಿಗೆ ನನ್ನ ಗಂಡನು ನಮ್ಮ ಅಂಗಡಿಯ ಪಕ್ಕದಲ್ಲಿರುವ ಶಟ್ಟಿ ಕಾಂಪ್ಲೇಕ್ಸ ಹತ್ತಿರ ಹೋಗಿ ಬರುತ್ತೆನೆ ಅಂತ ಹೇಳಿ ಹೋಗಿದ್ದು ಬೆಳ್ಳಿಗ್ಗೆ 10:30 ಗಂಟೆಯಾದರು ನನ್ನ ಗಂಡನು ಬರದೆ ಇದ್ದಾಗ ನಾನು ನನ್ನ ಗಂಡನ ಮೊನಂ 8310968774, 9008014351 ನೇದ್ದಕ್ಕೆ ಕರೆ ಮಾಡಿದ್ದು ಆಗ ನನ್ನ ಗಂಡನು ಕರೆ ಸ್ವಿಕರಿಸಿ ಮನೆಗೆ ಬರುತ್ತೆನೆ ಅಂತ ಹೇಳಿದ್ದು ಅದೆ ರೀತಿ ನಾನು ಆಗಾಗ ನನ್ನ ಗಂಡನಿಗೆ ಪೋನ ಮಾಡಿದ್ದು ಮನೆಗೆ ಬರುತ್ತೆನೆ ಅಂತ ಹೇಳುತ್ತಾ ಬಂದಿದ್ದು ಮಧ್ಯಾನ 2 ಗಂಟೆಯ ಸುಮಾರಿಗೆ ಮತ್ತೆ ಪೋನ ಮಾಡಿದಾಗ ನನ್ನ ಗಂಡ ಮನೆಗೆ ಬರುತ್ತಾ ಇದ್ದೆನೆ ಅಂತ ಹೇಳಿದ್ದು ನಂತರ ಅವರ ಪೋನಿಗೆ ಕರೆ ಮಾಡಿದಾಗ ಸ್ವಿಚ್ ಆಪ್ ಅಂತ ಬಂದಿದ್ದು ಇರುತ್ತದೆ. ಸಾಯಂಕಾಲ 5 ಗಂಟೆಯಾದರು ನನ್ನ ಗಂಡನು ಮನೆಗೆ ಬರದೆ ಇದ್ದಾಗ ನಾನು ನಮ್ಮ ಮಾವ ಮತ್ತು ಮನೆಯವರೆಲ್ಲರು ಕೂಡಿಕೊಂಡು ನಮಗೆ ಪರಿಚಯಸ್ಥರಲ್ಲಿ ವಿಚರಿಸಿದ್ದು ಮತ್ತು ಕಲಬುರಗಿ ನಗರದ ಎಲ್ಲಾ ಕಡೆಗೆ ಹುಡುಕಾಡಿದ್ದು ನನ್ನ ಗಂಡನು ಪತ್ತೆಯಾಗಿರುವದಿಲ್ಲ ಮತ್ತು ಇಲ್ಲಿಯವರೆಗೆ ನನ್ನ ಗಂಡನು ಮರಳಿ ನಮ್ಮ ಮನೆಗೆ ಬಂದಿರುವದಿಲ್ಲ. ನಾನು ನನ್ನ ಗಂಡನ ಮೊಬೈಲ ನಂಬರಗಳಿಗೆ ಪದೆ ಪದೆ ಕರೆ ಮಾಡುತ್ತಿದ್ದು ಮೊಬೈಲ್ ಸ್ವಿಚ್ ಆಫ್ ಅಂತ ಬರುತ್ತಿದೆ. ದಿನಾಂಕ 19.09.2018 ರಂದು ಬೆಳ್ಳಿಗ್ಗೆ 9:30 ಗಂಟೆಯಿಂದ ನನ್ನ ಗಂಡನು ಕಾಣೆಯಾಗಿದ್ದು ಇರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ನನ್ನ ಗಂಡನ ಚಹರಾ ಪಟ್ಟಿ ಈ ಕೆಳಗಿನಂತಿರುತ್ತದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:10/08/2018 ರಂದು ಜೇವರ್ಗಿ ತಾಲ್ಲೂಕಿನ ಮುತ್ತಕೋಡ ತಾಂಡಾದಲ್ಲಿಯ ನವಜಾತ ಹೆಣ್ಣುಮಗು ನಮ್ಮ ಶಿಶುಗೃಹದಲ್ಲಿ ಪಾಲನೆ ಪೋಷಣೆಗಾಗಿ ಸೇರ್ಪಡೆಯಾಗಿದ್ದು ಆ ಮಗುವಿಗೆ ಶ್ರಾವ್ಯ ಅಂತಾ ಹೆಸರಿಟ್ಟಿದ್ದು ಸದ್ಯ ಆ ಮಗುವಿಗೆ 40 ದಿವಸವಾಗಿದ್ದು ದಿನಾಂಕ:10/09/2018 ರಂದು ಮಗುವಿಗೆ ಆರೋಗ್ಯ ಸರಿಯಿಲ್ಲದ ಕಾರಣ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು ಸದರಿ ಮಗು ಇಂದು ದಿನಾಂಕ:21/09/2018 ರಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ವೈದ್ಯರ ಸಲಹೆ ಮೇರೆಗೆ ಕೀಡ್ಸ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ಮಗು 4.30 ಪಿ.ಎಂ ಸುಮಾರಿಗೆ ಮೃತ ಪಟ್ಟಿದ್ದು ಸದರಿ ಮಗುವಿನ ಮೃತದೇಹ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿರುತ್ತೇವೆ ಕಾರಣ ಶ್ರಾವ್ಯ 40 ದಿವಸದ ಹೆಣ್ಣುಮಗು ಅನಾರೋಗ್ಯದಿಂದ ಬಳಲಿ ಉಪಚಾರ ಫಲಕಾರಿಯಾಗದೆ ಮೃತ ಪಟ್ಟಿರುತ್ತದೆ ಅಂತಾ ದ್ದು ಈ ಬಗ್ಗೆ ಯಾರ ಮೇಲೆಯೂ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತಾ ಶ್ರೀಮತಿ ಶಿಲ್ಪಾ ಗಂಡ ರಾಜಶೇಖರ ಹಲಕರಣಿ ಮಠ ಉ:ಅಮೂಲ್ಯ ಶಿಶುಗೃಹದ ಅಧೀಕ್ಷಕರು ಸಾ:ವಿಜಯನಗರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ. 23-7-2018  ರಂದು ಮದ್ಯಾನ ನಾನು ಮತ್ತು ನನ್ನ ಹೆಂಡತಿ ನಾಗಮ್ಮ ಇಬ್ಬರು ಕೂಡಿಕೊಂಡು ಮದ್ಯಾನ 1-00 ಗಂಟೆಯ ಸುಮಾರಿಗೆ ನಾವು ಕಣ್ಣಿ ಮಾರ್ಕಟನಲ್ಲಿ ನಮ್ಮ ಬ್ಯಾಗಗಳನ್ನು ಇಟ್ಟು ಹೀರಾಪೂರದಲ್ಲಿರುವ ನಮ್ಮ ಸಮ್ಮಂದಿಕರಿಗೆ ಮಾತಾಡಿಸಿಕೊಂಡು ಬರಲು ನಾವಿಬ್ಬರು ಕೂಡಿಕೊಂಡು ಕಣ್ಣಿ ಮಾರ್ಕೆಟದಿಂದ ಹೀರಾಪೂರಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಮದ್ಯಾನ 1-40 ಗಂಟೆಯ ಸುಮಾರಿಗೆ ಹೀರಾಪೂರ ಸರ್ಕಲದಲ್ಲಿ ರೋಡ ಬದಿಗೆ ನಡೆದುಕೊಂಡು ಹೋಗುತ್ತಿರುವಾಗ ಅದೇ ವೇಳಗೆ ನಮ್ಮ ಹಿಂದಿನಿಂದ ಅಂದರೆ ಬಸ್ಸ ಸ್ಟ್ಯಾಂಡ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ.ಕೆ.ಎ.38 ಎಫ್. 930 ನೆದ್ದರ ಚಾಲಕ ಬಸವರಾಜ ತಂದೆ ಪ್ರಭು ಶಟ್ಟಿ ಇತನು ತನ್ನ ಬಸ್ಸನ್ನು ಅತೀವೇಗ ಮತ್ತು ನಿಸ್ಕಾಳಜಿತನಿಂದ ನಡೆಯಿಸಿಕೊಂಡು ಬಂದು ನನ್ನ ಪಕ್ಕದಲ್ಲಿ ಬರುತಿದ್ದ ನನ್ನ ಹೆಂಡತಿಗೆ ಡಿಕ್ಕಿ ಹೊಡೆದಾಗ ನನ್ನ ಹೆಂಡತಿ ಜೋರಾಗಿ ಕೆಳಗೆ ಬಿದ್ದಳು ಆಗ ಅವಳ ತಲೆಗೆ ಬಾರಿ ಗುಪ್ತ ಪೆಟ್ಟಾಗಿದ್ದು ಅಲಲ್ಲಿ ತರಚಿದ ಗಾಯಗಳಾಗಿದ್ದು,  ಆಗ ಸದರಿ ಬಸ್ಸ ಚಾಲಕ ಬಸವರಾಜ ತಂದೆ ಪ್ರಭು ಶಟ್ಟಿ ಡಿಪೂ ನಂ.1 ಬೀದರ ಹಾಗೂ ಕಂಡಕ್ಟರ ಲಕ್ಷ್ಮಣ ತಂದೆ ವೈನಾಥ ವಗ್ಗೆ ಡಿ.ಪೂನಂ.1 ಬೀದರ ಮೂರು ಜನರು ಕೂಡಿಕೊಂಡು ನನ್ನ  ಹೆಂಡತಿ ಅದೇ ಬಸ್ಸಿನಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ಕಲಬುರಗಿಯ ಗಂಗಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ. ಸದ್ಯ ನನ್ನ ನಾಗಮ್ಮಾ ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲಾ.ಕಾರಣ ಸದರಿ ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ.ಕೆ.ಎ.38 ಎಫ್. 930 ನೆದ್ದರ ಚಾಲಕ ಬಸವರಾಜ ತಂದೆ ಪ್ರಭು ಶಟ್ಟಿ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ್ದು  ನನ್ನ ಹೆಂಡತಿ ನಾಗಮ್ಮ ಇವಳು ದಿನಾಂಕ. 23-7-2018 ರಿಂದ ಇವತ್ತಿನವೆರೆಗೆ ಸದರಿ ಗಂಗಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದು   ಉಪಚಾರದಲ್ಲಿ ಗುಣ ಮುಖಳಾಗದೆ ಇಂದು ದಿನಾಂಕ. 21-8-2018 ರಂದು ಮದ್ಯಾನ 2-00 ಪಿ.ಎಂ.ಕ್ಕೆ. ಗಂಗಾ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ.  ಅಂತಾ  ಕಾರಣ ಮುಂದಿನ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಹಣಮಂತ  ತಂದೆ ಹಿರಗೆಪ್ಪಾ ಮುಗಡಿ ಸಾ/ ತಾವರಗೇರಾ ತಾಜಿ/ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮಹಾಂತೇಶ ತಂದೆ ಗಿರೇಪ್ಪ ಚನ್ನೂರ ಸಾ||ಹಳ್ಯಾಳ ತಾ||ಅಫಜಲಪೂರ ರವರು ದಿನಾಂಕ 18/09/2018 ರಂದು ನಾನು ಹಾಗು ನನ್ನ ತಮ್ಮನಾದ ಸಂತೋಷ ಇಬ್ಬರು ಕೂಡಿಕೊಂಡು ಅಫಜಲಪೂರದ ಬಸಡಿಪೋದಲ್ಲಿ ಮೆಕ್ಯಾನಿಕ್ ಅಂತ ಕೆಲಸ ಮಾಡುತಿದ್ದ ನಮ್ಮೂರ ಪ್ರಕಾಶನಿಗೆ ನಾವಿಬ್ಬರು ಬೇಟಿಯಾಗಿ ಬಸ ಡಿಪೋದಿಂದ ಅಫಜಲಫೂರದ ರೋಡಿನ ಬದಿಗೆ ನಡೆದುಕೊಂಡು ಹೋಗುತಿದ್ದಾಗ ಬಸಡಿಪೋ ಹತ್ತಿರ ಹಿಂದಿನಿಂದ ಒಬ್ಬ ಮೋಟಾರ್ ಸೈಕಲ ಸವಾರನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ತಮ್ಮನಾದ ಸಂತೋಷನಿಗೆ ಡಿಕ್ಕಿಪಡಿಸಿದನು ಎಬ್ಬಿಸಿ ನೋಡಲು ಬಲ ತಲೆಗೆ ಮೆಲಕಿಗೆ ಮುಖದ ಮೇಲೆ ಭಾರಿ ರಕ್ತಗಾಯವಾಗಿದ್ದು ಮೋಟಾರ್ ಸೈಕಲ ಸವಾರನು ಸ್ವಲ್ಪ ಮುಂದೆ ಹೋಗಿ ನಿಂತನು ಸದರಿ ಮೋಟಾರ್ ಸೈಕಲ್ ನಂಬರ ಕೆಎ-32 ಇಆರ್ -5455 ನೇದ್ದು ಇದ್ದು ಸದರಿಯವನಿಗೆ ಹೆಸರು ಕೆಳಲು ತನ್ನ ಹೆಸರನ್ನು ಹೆಳದೆ ಮೋಟಾರ್ ಸೈಕಲ್ ಸಮೇತ ಹೋದನು ಸದರಿಯವನಿಗೆ ನೋಡಿದಲ್ಲಿ ಗುರುತಿಸುತ್ತೇನೆ ನಂತರ ಅಫಜಲಪೂರದ ಖಾಸಗಿ ದವಾಖಾನೆಯಲ್ಲಿ ತೋರಿಸಿ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ  ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀಮತಿ ನಿರ್ಮಲಾ ಗಂಡ ರಮೇಶ ಜಗದಿ ಸಾ: ಚಿಂಚೋಳಿ ಹಾ:: ಅಫಜಲಪೂರ ರವರು ದಿನಾಂಕ 20-09-2018: ರಂದು ತನ್ನ ಮಗಳಾದ ಲಕ್ಷ್ಮಿ ಇವಳನ್ನು ಕರೆದುಕೊಂಡು ಮೋಟಾರ ಸೈಕಲ್ ನಂ ಕೆಎ-33-ಕೆ-3656 ನೇದ್ದರ ಮೇಲೆ ಪ್ರತಿ ದಿನದಂತೆ  ಬಸ್ ನಿಲ್ದಾಣಕ್ಕೆ ಬಿಟ್ಟು ಬರಲು ಹೋಗುತ್ತಿದ್ದಾಗ ಬೆಳಿಗ್ಗೆ 8:30 ಗಂಟೆಗೆಯ ಸುಮಾರಿಗೆ ಮನೆಯಿಂದ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ಸೇವಾ ಗ್ಯಾಸ್ ಎಜನ್ಸಿ ಹತ್ತಿರ ಎಡ ರೋಡಿಗೆ ಇಂಡಿಕಾ ಕಾರ ನಂ ಕೆಎ-29-ಪಿ-500 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಡಿಕ್ಕಿ ಪಡೆಸಿ ವಾಹನ ನಿಲ್ಲಿಸದೇ ಓಡಿ ಹೋಗಿ ಅಫಜಲಪೂರ ಹತ್ತಿರ ಇರುವ ನೀರಾವರಿ ಆಫೀಸ್ ಹತ್ತಿರ ಪಲ್ಟಿ ಮಾಡಿದ್ದು ಇರುತ್ತದೆ. ಸದರಿ ವಾಹನ ಚಾಲಕನ ಮೇಲೆ ಕ್ರಮ ಕೈಕೊಳ್ಳಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ:19/09/2018 ರಂದು ನಾನು ಕೂಲಿಕೆಲಸ ಮೂಗಿಸಿಕೊಂಡು ಸಯಂಕಾಲ ಮನೆಗೆ ಬಂದಿದ್ದು ನಾನು ಮನೆಯಲ್ಲಿದ್ದಾಗ ನಮ್ಮ ಗ್ರಾಮದ ಮಹಾದೇವ ತಂದೆ ನಿಂಗರಾಜ ಸಾವಳಗಿ ಇವರು ನನಗೆ ಫೋನಮಾಡಿ ತಿಳಿಸಿದ್ದೇನಂದರೆ ನಿನ್ನ ಮಗನಾದ ರುತಿಕನು ದೀಪಕ ಖಂಡೊಳ ಇವರ ಮನೆಯ ಮುಂದಿನ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಒಬ್ಬ ಮೊಟಾರ್ ಸೈಕಲ್ ಸವಾರನು ಅತೀವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿಪಡಿಸಿದ್ದರಿಂದ ನಿನ್ನ ಮಗ ರುತಿಕನ ಎಡಗಾಲ ಮೊಳಕಾಲ ಎಡಗಹಣೆಗೆ ತರಚಿದ ರಕ್ತಗಾಯ ಹಾಗೂ ತಲೆಯ ಹಿಂಭಾಗಕ್ಕೆ ಗುಪ್ತಗಾಯವಾಗಿ ಎಡಗ ಕಿವಿಯಿಂದ ರಕ್ತ ಸೊರುತಿದೆ. ಅಂತಾ ತಿಳಿಸಿದ್ದರಿಂದ ನಾನು ಹಾಗೂ ನನ್ನ ಹೆಂಡತಿಯಾದ ಮಹಾದೇವಿ ಇಬ್ಬರು ಕೂಡಿಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನಿಗೆ ಅಪಾಘತವಾಗಿದ್ದು ನಿಜವಿದ್ದು ನನ್ನ ಮಗನ ತಲೆಯ ಹಿಂಭಾಗಗಕ್ಕೆ ಗುಪ್ತಗಾಯವಾಗಿ ಎಡಕಿವಿಯಿಂದ ರಕ್ತ ಬರುತ್ತಿತ್ತು ಹಾಗೂ ಎಡಗಾಲ ಮೊಳಕಾಲಿಗೆ ಎಡಹಣೆಗೆ ತರಚಿದ ರಕ್ತಗಾಯವಾಗಿದ್ದು ಈ ಘಟನೆಯಾದಾಗ ಸಾಯಂಕಾಲ 6-00 ಗಂಟೆ ಆಗಿರುತ್ತದೆ ಅಂತಾ ಮಹಾದೇವನು ತಿಳಿಸಿರುತ್ತಾನೆ. ಅಪಘಾತ ಪಡಿಸಿದ ಮೊ.ಸೈ ನೋಡಲಾಗಿ ಬಜಾಜ್ ಕಂಪನಿಯ ಅವೆಂಜರ್ ನಂಬರ್, ಕೆಎ32-ಇಎಲ್0195 ಕಪ್ಪು ಬಣ್ಣದದಿದ್ದು ಅದರ ಚಾಲಕನು ಅಲ್ಲಿ ಜನರು ಸೇರುವುದನ್ನು ಕಂಡು ಮೊಟಾರ್ ಸೈಕಲ್ ಚಾಲಕನು ವಾಹನವನ್ನು ಅಲ್ಲಿಯೇ ಬಿಟ್ಟಿ ಓಡಿಹೊಗಿರುತ್ತಾನೆ. ಮತ್ತೆ ನೊಡಿದ್ದಲ್ಲಿ ಅವನನ್ನು ಗುರ್ತಿಸುತ್ತೇನೆ. ನನ್ನ ಮಗನಿಗೆ ಉಪಚಾರ ಕುರಿತು ನಾನು ನನ್ನ ಹೆಂಡತಿ ಹಾಗೂ ನಮ್ಮೂರಿನ ಮಹಾದೇವ ಸಾವಳಗಿ ಹಾಗೂ ಅನೀಲ ಹೊಸಮನಿ ಸೇರಿಕೊಂಡು ಬಂದು ಖಾಸಗಿ ವಾಹನದಲ್ಲಿ ಯುನಿಟೇಡ್ ಆಸ್ಪತ್ರೆ ಕಲಬುರಗಿಗೆ ತಂದು ಉಪಚಾರ ಕುರಿತು ಮಾಡಿರುತ್ತೇವೆ. ಕಾರಣ ನನ್ನ ಮಗನಿಗೆ ಅಪಘಾತ ಪಡಿಸಿದ ವಾಹನ ಹಾಗೂ ಅದರ ಚಾಲಕ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಶ್ರೀ ರುತಿಕನ ತಂದೆ  ಹಣಮಂತ ತಂದೆ ಹವಳಪ್ಪಾ ಭಾವಿಕಟ್ಟಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 September 2018

KALABURAGI DISTRICT REPORTED CRIMES

ಅಪಹರಣ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಮಡಿವಾಳಯ್ಯ ತಂದೆ ನಿಂಗಯ್ಯ ನಂದೂರಮಠ  ಸಾಃ ಕೊಳಕೂರ ತಾಃ ಜೇವರಗಿ  ರವರ ಅಪ್ರಾಪ್ತ ವಯಸ್ಸಿನ ಮಗಳಾದ ಭಾಗ್ಯಶ್ರೀ ಇವಳು ನೀರಿಗೆ ಹೋದಾಗ ಮತ್ತು ಬಟ್ಟೆ ತೊಳೆಯಲು ಒಬ್ಬಳೆ ಹೋಗುವಾಗ ದಾರಿಯಲ್ಲಿ ನಮ್ಮೂರ ಸಲೀಮ ತಂದೆ ಕುತ್ಬುದ್ದೀನ ಮುಲ್ಲಾ ಇತನು ನನ್ನ ಮಗಳಿಗೆ ನೋಡಿ ಸೀಳ್ಳೆ ಹೊಡೆಯುವುದು ಕೈ ಸನ್ನೆ ಮಾಡಿ ಕರೆದು ಚುಡಾಯಿಸುತ್ತಿದ್ದ ವಿಷಯ ನನ್ನ ಮಗಳು ಮನೆಯಲ್ಲಿ ಹೇಳಿದಾಗ  ನಾನು ಸಲೀಮ ಇತನ ಮನೆಗೆ ಹೋಗಿ ಅವನಿಗೆ ಮತ್ತು ಅವನ ತಂದೆ-ತಾಯಿಯವರಿಗೆ ತಿಳಿಸಿ ಬುದ್ದಿ ಮಾತು ಹೇಳಿ ಬಂದಿರುತ್ತೆನೆ. ಆದರೂ ಕೂಡಾ ಸಲೀಮ ಇತನು ನಮ್ಮ ಮನೆಯ ಮುಂದೆ ಬಂದು ನಿಲ್ಲುವುದು ನಮ್ಮ ಮನೆಯ ಕಡೆಗೆ ಓಡಾಡುವುದು ಮಾಡುತ್ತಾ ಮತ್ತು ನನ್ನ ಮಗಳಿಗೆ ನೋಡಿ ಸಿಳ್ಳೆ ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆ ನಾವು ಮರ್ಯಾದೆಗೆ ಅಂಜೀ ಸುಮ್ಮನಿದ್ದೆವು ದಿನಾಂಕ 25.08.2018 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ  ನನ್ನ ಮಗಳಾದ ಬಾಗ್ಯಶ್ರೀ ಇವಳು  ಬರ್ಹಿದೇಶಕ್ಕೆ ಹೋಗುತ್ತೆನೆಂದು ಹೇಳಿ ಮನೆಯಿಂದ ಹೋದವಳು ಬಹಳ ಸಮಯ ಆದರೂ ಅವಳು ಮರಳಿ ಮನೆಗೆ ಬರದೆ ಇದ್ದುದರಿಂದ ನನ್ನ ಹೆಂಡತಿ ಜಗದೇವಿ ಇವಳು ನಮ್ಮೂರಲ್ಲಿ ಹೆಣ್ಣುಮಕ್ಕಳು  ಬಹೀರ್ದೇಶಕ್ಕೆ ಹೋಗುವ ಸ್ಥಳದ ಕಡೆಗೆ ಹೋಗಿ ನೋಡಿ ಬಂದು ಬಾಗ್ಯಶ್ರೀ ಅಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲಾ ಎಂದು ಹೇಳಿದಾಗ ನಮ್ಮ ಮಗಳು ಸಿಗದಕ್ಕೆ ನಾನು ಮತ್ತು ನನ್ನ ತಮ್ಮ ಶಿವಶಂಕರಯ್ಯ ನಂದೂರ ಮಠ ಇಬ್ಬರೂ ಕೂಡಿ ನನ್ನ ಮಗಳ ಬಗ್ಗೆ ಅಕ್ಕಪಕ್ಕದ ಮನೆಯವರಿಗೆ ಅವಳ ಗೆಳತಿಯರ ಮನೆಗೆ ಹೋಗಿ ಹುಡುಕಾಣಿದೇವು ಮತ್ತು ಊರಲ್ಲಿ ಹುಡುಕುತ್ತಾ ನಮ್ಮೂರ ಬಸನಿಲ್ದಾಣದಲ್ಲಿ  ಇದ್ದಾಗ ನಮ್ಮ ಸಂಭಂಧಿಕರಾದ ಮಲ್ಲಯ್ಯ ತಂದೆ ಅಂಭರೇಶ ಹಿರೇಮಠ ಇತನು ಎದುರು ಸಿಕ್ಕಾಗ ಅವನಿಗೆ ವಿಷಯ ತಿಳಿಸಿದೇನು. ಮಲ್ಲಯ್ಯ ಇತನು  ಹೇಳಿದ್ದೇನೆಂದರೆ  ಸಾಯಂಕಾಲ 6.30 ಗಂಟೆಯ ಸುಮಾರಿಗೆ ನಮ್ಮೂರ ಸಲೀಮ ತಂದೆ ಕುತ್ಬುದ್ದೀನ ಮುಲ್ಲಾ ಇತನು ಬಾಗ್ಯಶ್ರೀ ಇವಳಿಗೆ ಒಂದು ಮೊಟಾರ್ ಸೈಕಲ ಮೇಲೆ ಕೂಡಿಸಿಕೊಂಡು  ಜೇವರಗಿ ಕಡೆಗೆ ಹೋಗುತ್ತಿದ್ದನು ನಮ್ಮೂರ ಹೊರವಲಯದ ರೋಡಿನಲ್ಲಿ ನೋಡಿರುತ್ತೆನೆ ಬಾಗ್ಯಶ್ರೀ ಚಿರಾಡುತ್ತಾ ಇದ್ದಳು ನಾನು ಕೈ ಮಾಡಿದರೂ  ಮೊಟಾರ್ ಸೈಕಲ ನಿಲ್ಲಿಸದೆ ಹೋಗಿರುತ್ತಾನೆ. ಮೊಟಾರ್ ಸೈಕಲ ನಂಬರ ಸರಿಯಾಗಿ ಕಂಡಿರುವುದಿಲ್ಲಾ ಅದರಿಂದ ಮೊಟಾರ್ ಸೈಕಲ ನಂಬರ ಗೊತ್ತಾಗಿರುವುದಿಲ್ಲಾ  ಎಂದು  ಹೇಳಿದನು.  ನಂತರ  ನಾವು ಸಲೀಮ ಇತನ ಮನೆಗೆ ಹೋಗಿ ಅವರ ತಂದೆ ತಾಯಿಯವರಿಗೆ ವಿಷಯ ತಿಳಿಸಿದಾಗ  ಅವರು ನಮಗೇನು ಗೊತ್ತಿರುವುದಿಲ್ಲಾ ಮತ್ತು ಸಲೀಮ ಮನೆಯಲ್ಲಿ ಇರುವುದಿಲ್ಲಾ ಎಂಧು ಹೇಳಿರುತ್ತಾರೆ. ನಾವು ನಮ್ಮ ಮಗಳ ಬಗ್ಗೆ ಹುಡುಕಾಡಿದರೂ  ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ  ನಾನು ಮರ್ಯಾದೆಗೆ ಅಂಜಿ ಮತ್ತು ನಮ್ಮ ಮಗಳ ಮುಂದಿನ ಭವಿಷ್ಯದ  ಬಗ್ಗೆ ಯೊಚನೆ ಮಾಡಿ  ಸುಮ್ಮನಿದ್ದು,  ಇಲ್ಲಿಯವರೆಗೆ ನಮ್ಮ ಮಗಳಿಗೆ  ಹುಡುಕಾಡಿದರೂ ನಮ್ಮ ಮಗಳು ಸಿಕ್ಕಿರುವುದಿಲ್ಲಾ ನಮೂದಿಸಿದ ಸಲೀಮ ಮುಲ್ಲಾ ಇತನು ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಭಾಗ್ಯಶ್ರೀ ಇವಳಿಗೆ  ಚುಡಾಯಿಸುತ್ತಾ ಬಂದು ದಿನಾಂಕ 25.08.2018 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ನಮ್ಮೂರಲ್ಲಿ ಹೆಣ್ಣುಮಕ್ಕಳು ಬಹಿರ್ದೆಶಕ್ಕೆ ಹೋಗುವ ಸ್ಥಳದಿಂದ ಜಬರದಸ್ತಿಯಿಂದ ತನ್ನ ಮೊಟಾರ್ ಸೈಕಲ ಮೇಲೆ ಕೂಡಿಸಿಕೊಂಡು ಅಪಹರಿಸಿಕೊಂಡು ಹೋಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಶಿವಪ್ಪ ತಂದೆ ಮಲಕಾರಿ ಪೂಜಾರಿ ಸಾ: ಅಫಜಲಪೂರ ರವರು ದಿನಾಂಕ  15-09-2018 ರಂದು ಸಾಯಂಕಾಲ 7:00 ಗಂಟೆಗೆ ಫೀರ್ಯಾದಿದಾರನು ಅಮೋಘಸಿದ್ದ ಗುಡಿಯ ಹತ್ತಿರ ನಿಂತಾಗ ಆರೋಪಿತನಾದ ಮಲ್ಲಪ್ಪ ಹುಲ್ಲೂರ ಇತನು ಮೋಟಾರ ಸೈಕಲ್ ತಂದು ಹಾಯಿಸಿದ್ದು ಆಗ ಫೀರ್ಯಾದಿ ಯಾಕೆ ಹಾಯಿಸಿದ್ದಿ ಅಂತಾ ಕೇಳಿದಕ್ಕೆ ಆರೋಪಿತನು ಫೀರ್ಯಾದಿಗೆ ಪುರಸಭೆ ಚುನಾವಣೆಯಲ್ಲಿ ಸೋತರು ಇನ್ನು ನಿಮಗೆ ಬುದ್ದಿ ಬಂದಿಲ್ಲ  ಅಂತಾ ಅಂದು ಅವಾಚ್ಯಶಬ್ದಗಳಿಂದ ಬೈದಿದ್ದು ಅದಕ್ಕೆ ಫಿರ್ಯಾದಿಯು ಯಾಕೆ ಬೈಯುತ್ತಿ ಅಂತಾ ಕೇಳಿದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಅವಾಚ್ಯಶಬ್ದಗಳಿಂದ ಬೈದು  ಕಲ್ಲು, ಬಡಿಗೆಗಳಿಂದ ಹೊಡೆ ಬಡೆ ಮಾಡಿ ಜೀವ ಭಯ ಪಡೆಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 September 2018

KALABURAGI DISTRICT REPORTED CRIMES

ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶರಣಗೌಡ ತಂದೆ ಮಡಿವಾಳಪ್ಪಗೌಡ ಪಾಟೀಲ ಜಾ; ಬೇಡರ ಸಾ|| ಚಟ್ನಳ್ಳಿ ತಾ|| ಸಿಂದಗಿ ಇವರು 2017 ನೇ ಸಾಲಿನಲ್ಲಿ ನಮ್ಮುರಲ್ಲಿ ಕೆ.ಬಿ,ಜೆ.ಎನ್.ಎಲ್ ಇಲಾಖೆಯಿಂದ ಒಂದು ವಾಲ್ಮಿಕಿ ಭವನ ಮಂಜುರಾಗಿದ್ದು ಇರುತ್ತದೆ, ಇದರ ಸಲುವಾಗಿ ನಮ್ಮ ಊರಿನ ನಮ್ಮ ಸಮಾಜದವರಾಗಿದ್ದ ದೇವಿಂದ್ರಪ್ಪಗೌಡ ತಂದೆ ಚನ್ನಪ್ಪಗೌಡ ಪಾಟೀಲ ಹಾಗು ಇನ್ನಿತರರು ಸೇರಿಕೊಂಡು ವಾಲ್ಮಿಕಿ ಭವನಕ್ಕೆ ಮಂಜುರಾದ ಹಣವನ್ನು ವಾಲ್ಮಿಕಿ ಭವನ ಮಾಡದೆ ಬಸವಣದೇವರ ಗುಡಿ ಕಟ್ಟುತ್ತೇವೆ ಅಂತಾ ಹೇಳುತ್ತಿದ್ದರಿಂದ ಅದಕ್ಕೆ ನಾನು ಅಪೋಜ ಮಾಡಿರುತ್ತೇನೆ, ಅದಕ್ಕೆ ದೇವಿಂದ್ರಪ್ಪಗೌಡ ಮತ್ತು ಇನ್ನಿತರರು ನನ್ನ ವಿರುದ್ದ ಹಗೆ ಸಾಧಿಸುತ್ತಾ ಬರುತ್ತಿದ್ದರು,  ದಿನಾಂಕ 16-09-2018 ರಂದು ರಾತ್ರಿ 9;30 ಸುಮಾರಿಗೆ ನಮ್ಮ ಊರಲ್ಲಿ ದೇವಿಂದ್ರಪ್ಪಗೌಡ ಹಾಗು ಇತರರು ಕೂಡಿಕೊಂಡು ಸೇದಿ ಬಾವಿ ಹತ್ತಿರ ತಕರಾರು ಮಾಡಿರುತ್ತಾರೆ, ಅಲ್ಲಿಂದ ನಾವಿಬ್ಬರು ನನ್ನ ಮೋಟರ ಸೈಕಲ್ ಮೇಲೆ ನನ್ನ ಹೆಂಡತಿ ಊರಾದ ಕುಳಗೇರಿಗೆ ಹೋಗುತ್ತಿದ್ದಾಗ 11;30 ಪಿ.ಎಂ ಕ್ಕೆ ಕುಳಗೇರಿ ಇನ್ನು 3 ಕಿ.ಮಿ ಸಮೀಪ ಕೆನಾಲ ಹತ್ತಿರ ಕೆಲವರು ಮೋಟರ ಸೈಕಲ್ ಮೇಲೆ ಬಂದು ನಮಗೆ ಅಡ್ಡಗಟ್ಟಿ ನಿಲ್ಲಿಸಿದರು, ಆಗ ಮೋಟರ ಸೈಕಲ್ ಮೇಲೆ 1] ದೇವಿಂದ್ರಪ್ಪಗೌಡ ಪಾಟೀಲ, 2] ಪ್ರಬುಗೌಡ ತಂದೆ ಸಾಹೇಬಗೌಡ ಬಿರಾದಾರ, 3] ಲಕ್ಷ್ಮೀಕಾಂತ ತಂದೆ ಬಸಪ್ಪಗೌಡ ಬಿರಾದಾರ, 4] ಅಂಬ್ರೀಷ ತಂದೆ ಅಪ್ಪಾಸಾಹೇಬಗೌಡ ಬಿರಾದಾರ, 5] ಶಂಕರಗೌಡ ತಂದೆ ಬಸವಂತ್ರಾಯಗೌಡ ಬಿರಾದಾರ, 6] ಮಹಾಂತಗೌಡ ತಂದೆ ಬಸವಂತ್ರಾಯಗೌಡ ಬಿರಾದಾರ, 7] ತಿಪ್ಪಣ್ಣ ಪೂಜರಿ ಜಾ; ಹಿಂದು ಕುರುಬರ ಸಾ|| ಕಾಶಿನಕುಂಟಿ ತಾ|| ಮುದ್ದೇಬಿಹಾಳ ಇವರು ನಮ್ಮ ಹತ್ತಿರ ಬಂದರು, ದೇವಿಂದ್ರಪ್ಪಗೌಡ ಪಾಟೀಲ ಮತ್ತು ಪ್ರಭುಗೌಡ ಬಿರಾದಾರ ಇವರಿಬ್ಬರು ನನ್ನ ಕೈ ಹಿಡಿದು ಎಳೆದಾಡಿ ಕಾಲಿನಿಂದ ಬೆನ್ನಿನ ಮೇಲೆ ಒದ್ದರು, ಲಕ್ಷ್ಮೀಕಾಂತಗೌಡ ಬಿರಾದಾರ ಇವನು ಕಲ್ಲು ತೆಗೆದುಕೊಂಡು ನಮ್ಮ ಅಣ್ಣನ ಬಲಹಣೆಗೆ ಹೊಡೆದನು, ಅಂಬ್ರೀಷ ಬಿರಾದಾರ ಹಾಗು ಶಂಕರಗೌಡ ಬಿರಾದಾರ ಇವರು ಇಬ್ಬರು ಕೂಡಿಕೊಂಡು ಬಡಿಗೆಯಿಂದ ಬೆನ್ನಿನ ಮೇಲೆ ಹೊಡೆದರು, ಮಹಾಂತಗೌಡ ಬಿರಾದಾರ ಇವನು ನನಗೆ ಬಂದು ಕೊಲೆ ಮಾಡಬೇಕು ಅಂತಾ ಉದ್ದೇಶ ಇಟ್ಟುಕೊಂಡು ನನ್ನ ತೊಡ್ಡಿನ ಹತ್ತಿರ ಒದ್ದನು, ತಿಪ್ಪನ್ಣ ಪೂಜಾರಿ ಇವನು ಈ ಬ್ಯಾಡ ಸುಳಿಮಗನಿಗೆ ಹೊಡೆದು ಖಲಾಸ ಮಾಡರಿ ಅಂತಾ ಜೋರಾಗಿ ಹೇಳುತ್ತಿದ್ದಾಗ ಅಲ್ಲಿಯ ಬಾಜು ಹೊಲದವರು ಬಂದು ಏ ನಿವು ಯಾರು, ಇಲ್ಲಿಯಾಕ ಜಗಳಾ ಮಾಡುತ್ತಿದ್ದರಿ ಅಂತಾ ಅಂದಾಗ ಅಲ್ಲಿಂದ ಎಲ್ಲರು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ರಾಘವೇಂದ್ರ ತಂದೆ ರಾಜೇಂದ್ರ ಸಾಲೇಗಾಂವ ಸಾ: ಕೋತನ ಹಿಪ್ಪರಗಾ ಹಾ:ವ: ಕಲಬುರಗಿ ರವರದೊಂದು ಸ್ಪೆಂಡರ ಪ್ಲಸ್‌ ಸಿಲವರ್‌ ಬಣ್ಣದ ನಂಬರ ಕೆಎ-32 ಇಬಿ 4591 ಇದ್ದು ದಾಖಲಾತಿಗಳು ನನ್ನ ತಮ್ಮ ಉಮೇಶ ಸಾಲೆಗಾಂವ ರವರ ಹೆಸರಿನಲ್ಲಿ ಇರುತ್ತದೆ.  ದಿನಾಂಕ 10/07/2018 ರಂದು ನಮ್ಮ ಹೊಲಕ್ಕೆ ನಮ್ಮ ತಮ್ಮ ರಮೇಶ ಹಾಗು ನಮ್ಮ ತಂದೆ ರಾಜೇಂದ್ರ ಇಬ್ಬರು ಕೂಡಿಕೊಂಡು ನಮ್ಮ ಹೊಲಕ್ಕೆ ಹೋಗಿ ಹೊಲದ ಬಂದಾರಿ ಹತ್ತಿರ ಮೋಟರ ಸೈಕಲ ನಿಲ್ಲಿಸಿ ಹೊಲದಲ್ಲಿ ಕೆಲಸ ಮಾಡಿ ಮರಳಿ ಮದ್ಯಾಹ್ನ 01:00 ಗಂಟೆ ಸುಮಾರಿಗೆ ಮರಳಿ ಬಂದು ನೋಡುವಷ್ಟರಲ್ಲಿ ಅಲ್ಲಿ ಮೋಟರ ಸೈಕಲ ಇರಲಿಲ್ಲಾ ನಂತರ ಇಲ್ಲೆ ಯಾರಾದರೂ ತೆಗೆದುಕೊಂಡು ಹೋಗಿರಬಹುದು ಅಂತಾ ಗ್ರಾಮದಲ್ಲಿ ಎಲ್ಲಾ ಕಡೆಗೆ ಬಂದೂ ಹುಡುಕಾಡಿದರೂ ಮೋಟರ ಸೈಕಲ ಸಿಕ್ಕಿರುವುದಿಲ್ಲಾ. ಮೋಟರ ಸೈಕಲನ್ನು ದಿನಾಂಕ 10/07/2018 ರ ಬೆಳಿಗ್ಗೆ 11:00 ಗಂಟೆಯಿಂದ ಮದ್ಯಾಹ್ನ 01:00 ಗಂಟೆಯ ಮದ್ಯದಲ್ಲಿ ಯಾರೂ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.