POLICE BHAVAN KALABURAGI

POLICE BHAVAN KALABURAGI

17 April 2018

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 16-04-2018 ರಂದು ಮಣುರ ಗ್ರಾಮದ ಶ್ರೀ ಯಲ್ಲಮ್ಮಾ ದೇವಿಯ ಗುಡಿಯ ಹತ್ತಿರ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೊಡಲು ಮಣುರ ಗ್ರಾಮದ ಶ್ರೀ ಯಲ್ಲಮ್ಮಾ ದೇವಿಯ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಡುತಿದ್ದ  ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಶರಣು @ ಶರಣಬಸಪ್ಪ ತಂದೆ ನೀಲಕಂಠ ಮೋಸಲಗಿ 2) ಸುರೇಶ ತಂದೆ ಆನಂದಪ್ಪ ತೋಳನೂರ 3) ಮಹೇಶ ತಂದೆ ಸಂಗಪ್ಪ ಕುಂಬಾರ 4) ಅನೀಲ ತಂದೆ ಕಾಶೀನಾಥ ಜೀಪೂರ ಸಾ|| ಎಲ್ಲರು  ಮಣೂರ ಗ್ರಾಮ  ಅಂತ ತಿಳಿಸಿದ್ದು  ಸದರಿಯವರಿಂದ  ಒಟ್ಟು 12390/- ರೂ ನಗದು ಹಣವನ್ನು ಮತ್ತು 52 ಇಸ್ಪೆಟ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ
ಅಫಜಲಪೂರ ಠಾಣೆ : ದಿನಾಂಕ 16/04/2018 ರಂದು ಅಫಜಲಪೂರ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೊಡಲು  ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು  ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಪುಲೇಪ್ಪ @ ಶಿವಾನಂದ ತಂದೆ ದೇವರಾಯ ಕೋರಳ್ಳಿ ಸಾ|| ಮಣೂರ ಗ್ರಾಮ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1610/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಮೊಸಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಕುಮಾರಿ ಇವರು 2 ವರ್ಷಗಳ ಹಿಂದೆ ಜೇವರ್ಗಿ ಸರಕಾರಿ ಪದವಿ ಕಾಲೇಜಿನಲ್ಲಿ ಬಿ.ಎ ವಿದ್ಯಾಭ್ಯಾಸ ಮಾಡುತ್ತಿದ್ದೆನು,  ಆ ಸಮಯದಲ್ಲಿ ಆಲುರ ಗ್ರಾಮದ ಹಮೀದ ತಂದೆ ಬಂದೇನವಾಜ ಹರನೂರ ಎಂಬುವನು ನನಗೆ ಪರಿಚಯಮಾಡಿಕೊಂಡನು, ಅವನು ಸಹ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ನಂತರ ನಾವಿಬ್ಬರು ಪರಸ್ಪರ ಪ್ರಿತಿಸುತ್ತಿದ್ದೇವು, ಹಮೀದ ಇವನು ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಅನ್ನುತ್ತಾ ಬಂದಿದ್ದನು, ದಿನಾಂಕ 09-07-2015 ರಂದು ನಾನು ಮನೆಯಲ್ಲಿದ್ದಾಗ ಹಮೀದ ಇವನು ನಮ್ಮ ಮನೆಗೆ ಬಂದಿದ್ದನು, ಆಗ ನಮ್ಮ ಮನೆಯಲ್ಲಿ ಯಾರು ಇರಲಿಲ್ಲಾ. ನಂತರ ಹಮೀ ಇವನು ನನಗೆ ಪುಸಲಾಯಿಸಿ ಮುಂದೆ ನಾವು ಹೇಗಾದರು ಮದುವೆಯಾಗುವುದು ಖಚಿತ ಇದೆ ಅಂತಾ ಮನ ಒಲಿಸಿ ಸಂಭೋಗಕ್ಕೆ ಒತ್ತಾಯಿಸಿದನು, ಆಗ ನಾನು ಮದುವೆಯಾದ ನಂತರ ಸೇರೋಣಾ ಅಂತಾ ಹೇಳಿದರು ಕೇಳದೆ ಬಲವಂತವಾಗಿ ನಮ್ಮ ಮನೆಯಲ್ಲಿ ನನಗೆ ಸಂಭೋಗ ಮಾಡಿರುತ್ತಾನೆ, ಈ ವಿಷಯ ಯಾರಿಗು ಹೇಳಬೇಡಾ ಅಂತಾ ಹೇಳಿ ಹೋದನು. ನಂತರ ಆಗಾಗ ನಮ್ಮ ಮನೆಯಲ್ಲಿ ಯಾರು ಇರಲಾರದನ್ನು ಗಮನಿಸಿ ಹಮೀದ ಇವನು ನಮ್ಮ ಮನೆಗೆ ಬಂದು ನನ್ನೊಂದಿಗೆ ಸುಮಾರು ಸಲ ಬಲವಂತವಾಗಿ ಸಂಭೋಗ ಮಾಡಿರುತ್ತಾನೆ, ನಾವಿಬ್ಬರು ಪ್ರಿತಿಸುವ ವಿಷ ನಮ್ಮ ಮನೆಯಲ್ಲಿ ಗೊತ್ತಾಗಿ ನಂತರ ನಮ್ಮ ಮನೆಯವರು ಸೇರಿಕೊಂಡು ಆಲೂರ ಗ್ರಾಮದ ಹಮೀದ ರವರ ಮನೆಗೆ ಹೋಗಿ ವಿಷಯ ಹೇಳಿದರು. ಹಮೀದ ಇವನು ಬೆಂಗಳೂರು ಸಿ..ಆರ್ ಪೋಲಿಸ ನೇಮಕಾತಿಯಾಗಿದ್ದನು, ನಮ್ಮ ಮನೆಯವರು, ಹಮೀದನಿಗೆ ಹಾಗು ಅವರ ಮನೆಯವರಿಗೆ  ಪೊಲೀಸ ಟ್ರೇನಿಂಗ ಹೊಗುವ ಮುಂಚೆನೆ ಮದುವೆ ಮಾಡಿಬಿಡೋಣಾ ಅಂತಾ ಹೇಳಿದಾಗ ಹಮೀದ ರವರ ಮನೆಯವರು ಪೊಲೀಸ ಟ್ರೇನಿಂಗ ಮುಗಿದ ನಂತರ ಮದುವೆ ಮಾಡೋಣಾ ಸದ್ಯ ನಿಶ್ಚಿತಾರ್ಥ ಮಾಡೋಣಾ ಅಂತಾ ಹೇಳಿದರು. ದಿನಾಂಕ 26-10-2016 ರಂದು ನಮ್ಮೂರ ಇಸ್ಲಾಂ ಕಮೀಟಿ ಅಧ್ಯಕ್ಷರಾದ ಇಬ್ರಾಹಿಮಸಾಬ ಉಸ್ತಾದ, ರಜಾಕ ಮನಿಯಾರ, ಅಲ್ಲಾಪಟೇಲ ಚಿಂಚೋಳಿ, ಇಸ್ಮಾಯಿಲ್ ನಾಯ್ಕೋಡಿ, ಮಹಿಬೂಬಪಟೇಲ ಚಿಂಚೋಳಿ, ಶಿವಲಿಂಗ ಸುಂಕದ, ಚಂದ್ರಶೇಖರ ಪುರಾಣಿಕ, ಮಲ್ಲಿಕಾರ್ಜುನ ಹಲಕಟ್ಟಿ, ಕೆ. ವಿರೇಶಗೌಡ ಹಾಗು ನಮ್ಮ ಮತ್ತು ಹಮೀದ ರವರ ಸಂಬಂಧಿಕರ ಸಮಕ್ಷಮದಲ್ಲಿ ನಮ್ಮ ಮನೆಯಲ್ಲಿ ನಿಶ್ಚಿತಾರ್ಥ (ರಸಂ) ಮಾಡಿರುತ್ತಾರೆ, ನಂತರ ಹಮೀದ ಇವನು ನನ್ನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದನು, ಈಗ 5-6 ತಿಂಗಳಿಂದ ಹಮೀದ ಇವನು ನನಗೆ ಸರಿಯಾಗಿ ಮಾತನಾಡದೆ ನೀನು ಸರಿಯಾಗಿಲ್ಲಾ, ನಿನ್ನ ಕ್ಯಾರಕ್ಟರ್ ಸರಿ ಇಲ್ಲಾ ಅಂತಾ ಅನ್ನುತ್ತಾ ನನ್ನಿಂದ ದೂರ ಇರಲು ಪ್ರಾರಂಭೀಸಿದನು, ನಂತರ ಈ ವಿಷಯ ನಮ್ಮ ಮನೆಯವರಿಗೆ ಹೇಳಿದಾಗ ನಮ್ಮ ತಂದೆ ಇಮಾಮಖಾಸಿಂ, ತಾಯಿ ಮಮತಾಜ ಹಾಗು ಮೇಲ್ಕಂಡ ಜಮಾತ ಮಂದಿ ಕೂಡಿಕೊಂಡು ಆಲೂರ ಗ್ರಾಮಕ್ಕೆ 3-4 ಸಲ ಹೋಗಿ ಹಮೀದನ ತಂದೆ ತಾಯಿಗೆ ತೆಳವಳಿಕೆ ಹೇಳಿ ಮದುವೆ ಮಾಡೋಣಾ ಅಂತಾ ಹೇಳಿದರು ಅವರು ಒಪ್ಪದೆ ನಮ್ಮ ತಂದೆ ತಾಯಿಗೆ ಬಾಯಿಗೆ ಬಂದಂತೆ ಮಾತನಾಡಿ ನಾವು ನಮ್ಮ ಮನಗ ಮದುವೆ ನಿಮ್ಮ ಮಗಳೊಂದಿಗೆ ಮಾಡುವುದಿಲ್ಲಾ ಏನು ಮಾಡಕೋತಿರಿ ಮಾಡಕೋರಿ ಅಂತಾ ಅಂದರು, ಆಗ ನಮ್ಮ ತಂದೆಯವರು ಈ ಬಗ್ಗೆ ಪೊಲೀಸ ಕಂಪ್ಲೆಂಟ ಕೊಡುತ್ತೇವೆ ಅಂತಾ ಅಂದಾಗ ಪೊಲೀಸ ಕಂಪ್ಲೆಂಟ ಕೊಟ್ಟರೆ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಜೀವ ಭಯ ಹಾಕಿರುತ್ತಾರೆ. ಕಾರಣ ಹಮೀದ ತಂದೆ ಬಂದೇನವಾಜ ಹರನೂರ ಸಾ|| ಆಲೂರ ಈತನು ನನ್ನೊಂದಿಗೆ ಪ್ರಿತಿಸಿದಂತೆ ವರ್ತಿಸಿ ಮದುವೆಯಾಗುತ್ತೇನೆ ಅಂತಾ ನಂಬಿಸಿ ನನ್ನನ್ನು ಪುಸಲಾಯಿಸಿ ಸುಮಾರು ಸಲ ಬಲಾತಕಾರದಿಂದ ನಮ್ಮ ಮನೆಯಲ್ಲಿ ಸಂಭೋಗ ಮಾಡಿ ನನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಸದ್ಯ ನನಗೆ ಮದುವೆ ಯಾಗದೆ ಮೋಸ ಮಾಡಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಆರೀಫಖಾನ ತಂದೆ ನಿಜಾಮಖಾನ ಸಾ|| ಪ್ಲಾಟ ನಂ; 48 ವಿಶ್ವರಾದ್ಯ ಕಾಲೋನಿ ಆಳಂದ ರೋಡ ಕಲಬುರಗಿ ಇವರು ಮ್ಮ ಬಡಾವಣೆಯಲ್ಲಿ ವಾಸವಾಗಿರುವ ಹೈದರ ತಂದೆ ಜಿಲಾನಿ, ಆರೀಫ್ ತಂದೆ ಸಲಿಂ, ಮುಭೀನ್ ತಂದೆ ಖಯುಂ, ಫಯಾಝ ಹಾಗು ಪ್ರಶಾಂತ ಇವರು ವಿನಾಕಾರಣ ನನ್ನ ಸಂಗಡ ವೈರತ್ವ ಬೇಳೆಯಿಸಿಕೊಂಡು ಬಂದಿದ್ದು ಇರುತ್ತದೆ. ನಾನು ಅವರ ಸಂಗಡ ತಿರುಗಾಡಲು ಹೋಗದಕ್ಕೆ ಸದರಿಯವರು ನನ್ನ ಮೇಲೆ ಹಗೆತನ ಬೇಳೆಯಿಸಿಕೊಂಡು ಬಂದಿದ್ದು ದಿನಾಂಕ 12/04/2018 ರಂದು ರಾತ್ರಿ 10.15 ಪಿ.ಎಂ ಸುಮಾರಿಗೆ ನಾನು ನಮ್ಮ ಮನೆಯಿಂದ ಅವಟೆ ಹಾಸ್ಪೆಟಲ್ ಕಡೆಗೆ ಹೊಗುವ ಕುರಿತು ಎಸ್ ಬಿ ಟ್ರೇಡರ್ಸ ಅಂಗಡಿಯ ಮುಂದಿನ ರಸ್ತಯ ಮೇಲೆ ನಡೆದುಕೊಂಡು ಹೊಗುತ್ತಿದ್ದು ಅದೆ ವೇಳೆಗೆ ನನ್ನ ಎದುರಗಡೆ ಹೈದರ ತಂದೆ ಜಿಲಾನಿ, ಆರೀಫ್ ತಂದೆ ಸಲಿಂ, ಮುಭೀನ್ ತಂದೆ ಖಯುಂ, ಫಯಾಝ ಹಾಗು ಪ್ರಶಾಂತ ಇವರೆಲ್ಲರೂ ಕೋಡಿಕೊಂಡು ಬಂದವರೆ ನನ್ನನ್ನು ತಡೆದು ಅವರಲ್ಲಿ ಹೈದರ ತಂದೆ ಜಿಲಾನಿ ಇತನು ರಂಡಿ ಮಗನೆ ನನ್ನ ಎದರು ಗಾಡಿಮೇಲೆ ದಿಮಾಕ ಮಾಡಿಕೊಂಡು ಹೊಗುತ್ತಿಯಾ ನಿನ್ನ ತಿಂಡಿ ಬಹಳ ಇದೆ ಬೋಸಡಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ಸದರಿಯವನಿಗೆ ಯಾಕೆ ನನಗೆ ಬೈಯುತ್ತಿ ಅಂತ ಕೇಳಿದಾಗ ಸದರಿಯವನು ತನ್ನ ಕೈಯಿಂದ ನನ್ನ ಎದೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು,  ಆರೀಫ್ ತಂದೆ ಸಲಿಂ ಇತನು ನಮಗೆ ಎದರು ಮಾತನಾಡುತ್ತಿಯಾ ಬೋಸಡಿಕ್ಯಾ ಅಂತಾ ಬೈದು ಅಲ್ಲೆ ಬಿದ್ದಿದ್ದ ಡ್ರ್ಯಾನೆಜ್ ಪೈಪು ತೆಗೆದುಕೊಂಡು ನನ್ನ ತಲೆಯ ಮೇಲೆ ಹೊಡದು ರಕ್ತಗಾಯ ಪಡಿಸಿದ್ದು. ಮುಭೀನ್ ತಂದೆ ಖಯುಂ ಕೈಮುಷ್ಟಿಮಾಡಿ ನನ್ನ ತಲೆಯ ಹಿಂಬಾಗ, ಮೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು, ಫಯಾಜ ಇತನು ಕೈಯಿಂದ ನನ್ನ ಹೊಟ್ಟೆಗೆ ಹೊಡೆದನು. ಪ್ರಶಾಂತ ಇತನು ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 April 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 13.04.2018 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಕೈಲಾಸ ನಗರ ಗದಲೇಗಾವ ಕಲ್ಯಾಣ ಮಂಟಪಕ್ಕೆ ಹೊಗುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿದ್ದು ಬಾತ್ಮಿ ಮೇರೆಗೆ ಶ್ರೀ ಎ.ಪೌಲ ಎ.ಎಸ್‌‌.ಐ  ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಹಾಬಜಾರ ನಾಕಾದಿಂದ ನಡೆದುಕೊಂಡು ಗದಲೇಗಾವ ಕಲ್ಯಾಣ ಮಂಟಪ ಕಡೆಗೆ ಹೋಗುವ ರಸ್ತೆಯ ಹತ್ತಿರ ಹೋಗಿ ಮರೇಯಲ್ಲಿ ನಿಂತುಕೊಂಡು ಕಲ್ಯಾಣ ಮಂಟಪಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ರೇವಣಸಿದ್ದಪ್ಪ ತಂದೆ ಹಣಮಂತ್ರಾವ ಬೇಲೂರ ಸಾ: ಅಪಚಂದ ತಾ: ಆಳಂದ ಜಿ: ಕಲಬುರಗಿ ಹಾ:ವ: ಸುಭಾಶ ನಗರ ಶಹಾಬಜಾರ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1150/- ರೂ 2) 2 ಮಟಕಾ ಬರೇದ ಚೀಟಿಗಳು ಅ:ಕಿ: 00 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 13/04/2018 ರಂದು ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯದ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ತಹಸಿ ಕಾರ್ಯಾಲಯದ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ತಹಸಿಲ ಕಾರ್ಯಾಲಯದ  ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅರ್ಜುನ ತಂದೆ ಕಲ್ಲಪ್ಪ ವಾಲಿಕರ ಸಾ||ಸೊನ್ನ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1650/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ವಶಕ್ಕೆ ಪಡೆದು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 13-04-2018 ರಂದು ಕೆರಕನಹಳ್ಳಿ ಗ್ರಾಮದ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ . ಅಫಜಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೆರಕನಹಳ್ಳಿ ಗ್ರಾಮಕ್ಕೆ  ಹೋಗಿ, ಗ್ರಾಮದ ಅಗಸಿಯಿಂದ ಸ್ವಲ್ಪ ದೂರ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸದರಿ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು  ಹೋಗಿ ಬರುವ ಜನರಿಗೆ ಸಾರಾಯಿ ಮಾರಾಟ ಮಾಡುತ್ತಿದ್ದನು. ಆಗ ನಾವು ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ನಿಂಗಪ್ಪ ತಂದೆ ಸಿದ್ದಪ್ಪ ಚಿಂಚೋಳಿ ಸಾ||ಕೆರಕನಹಳ್ಳಿ ತಾ|| ಅಫಜಲಪೂರ ಅಂತ ತಿಳಿಸಿದನು. ನಂತರ ಸದರಿಯವನ ವಶದಲ್ಲಿದ್ದ ರಟ್ಟಿನ್ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸದಲ್ಲಿ Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ 92 ರಟ್ಟಿನ ಪೌಚಗಳು ಅಕಿ- 2576/- ರೂ ಕಿಮ್ಮತ್ತಿನವುಗಳು ಇದ್ದವು.  ಹಾಗೂ ಮದ್ಯ ಮಾರಾಟ ಮಾಡಿದ 210/- ರೂ ನಗದು ಹಣ ದೊರೆತವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು  ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 92 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ಮತ್ತು ನಗದು ಹಣ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

13 April 2018

KALABURAGI DISTRICT REPORTED CRIMES

ಪೊಲೀಸ ಅಧೀಕಾರಿಗಳ ಮೇಲೆ ಹಲ್ಲೆ ಮಾಡಿದವರ ಮೇಲೆ ಆತ್ಮರಕ್ಷಣೆಗೊಸ್ಕರ ಗುಂಡಿನ ದಾಳಿ :
ಗ್ರಾಮೀಣ ಠಾಣೆ : ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ ರವರ ಆದೇಶದಂತೆ ಇತ್ತೀತ್ತಲಾಗಿ ಕಲಬುರಗಿ ನಗರದ ವಿವಿಧ ಠಾಣಾ ಸರಹದ್ದಿನಲ್ಲಿ ಸುಲಿಗೆ  ಪ್ರಕರಣಗಳು ದಾಖಲಾಗಿದ್ದು, ಆ ಪ್ರಕರಣಗಳಲ್ಲಿಯ ಆರೋಪಿತರ ಪತ್ತೆ ಕುರಿತು ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ ರವರ ಆದೇಶದಂತೆ ಮಾನ್ಯ ಎ.ಎಸ್.ಪಿ. (ಎ) ಉಪವಿಭಾಗ ಕಲಬುರಗಿ ರವರ ಮೇಲು ಉಸ್ತುವಾರಿಯಲ್ಲಿ  ಒಟ್ಟು 06 ತಂಡಗಳು ರಚನೆ ಮಾಡಿದ್ದು. ಸದರಿ 06 ತಂಡಗಳಲ್ಲಿ  ನನ್ನ ನೇತೃತ್ವದಲ್ಲಿ ಹುಸೇನಬಾಷಾ ಸಿ.ಹೆಚ.ಸಿ.224, ಬಂದೇನವಾಜ ಸಿ.ಹೆಚ.ಸಿ. 546, ಭೀಮನಾಯಕ ಸಿಪಿಸಿ 855 ಇವರುಗಳು ಇದ್ದು, ಪಿ.ಎಸ್.ಐ. ವನಂಜಕರ ರವರ ನೇತೃತ್ವದಲ್ಲಿ  ರಾಜಕುಮಾರ ಸಿಪಿಸಿ 1100 ಸ್ಟೇಷನ ಬಜಾರ ಠಾಣೆ ಕಲಬುರಗಿ, ತೌಸೀಫ ಸಿಪಿಸಿ 1265 ಸ್ಟೇಷನ ಬಜಾರ ಠಾಣೆ ಕಲಬುರಗಿ, ಮತ್ತು ಸಿಪಿಸಿ 108 ನಿಂಗಪ್ಪ ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ ಇವರುಗಳಿರುತ್ತಾರೆ. ಈ ಮೇಲ್ಕಂಡ ಎರಡು ತಂಡಗಳೊಂದಿಗೆ  ಕಲಬುರಗಿ ನಗರದಲ್ಲಿ ವಿಶೇಷ ಗಸ್ತು ಮತ್ತು ಆರೋಪಿತರ ಪತ್ತೆ ಕಾರ್ಯದಲ್ಲಿದ್ದಾಗ  ಬೆಳಗಿನ 03-45  ಗಂಟೆ ಸುಮಾರಿಗೆ ಶಹಾಬಾದ ರಿಂಗ ರೋಡಿನ ವಿ.ಟಿ.ಯು. ಕಾಲೇಜ ಹತ್ತಿರ ಯಾರೋ ಅಪರಿಚಿತ ನಾಲ್ಕು ಜನರು ಹೊಂಡಾ ಎಕ್ಟಿವ್ ಮತ್ತು ಹೊಂಡಾ ಡಿಯೋ ಮೋಟಾರ ಸೈಕಲಗಳ ಮೇಲೆ ಬಂದು  ಅದೇ ದಾರಿಯಿಂದ ಹೋಗುತ್ತಿದ್ದ ಒಬ್ಬ ಮೋಟಾರ ಸೈಕಲ ಸವಾರನಿಗೆ ಅಡ್ಡಗಟ್ಟಿ  ಅವನ ಮೋಟಾರ ಸೈಕಲ ಮತ್ತು ಮೋಬಾಯಿಲ ಕಸಿದುಕೊಂಡು ಹೋಗಿರುತ್ತಾರೆ ಎಂದು ಕಂಟ್ರೋಲ ರೂಮಿನಿಂದ ಮಾಹಿತಿ ತಿಳಿದು ಬಂದ ಮೇರೆಗೆ ವಿಟಿಯು ಕಾಲೇ ಹತ್ತಿರ ಹೋಗಿ ಘಟನಾ ಸ್ಥಳ ಪರಿಶೀಲಿಸುತ್ತಿರುವಾಗ ಬೆಳಗಿನ 04-30 ಗಂಟೆ ಸುಮಾರಿಗೆ ಮತ್ತೆ ಕಂಟ್ರೋಲ ರೂಮಿನವರು ಹೀರಾಪೂರ ಕ್ರಾಸ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವ್ಯಕ್ತಿಗೆ ನಾಲ್ಕು ಜನ ಅಪರಿಚಿತರು  ಹೊಂಡಾ ಎಕ್ಟಿವ್ ಮತ್ತು ಹೊಂಡಾ ಡಿಯೋ ಮೋಟಾರ ಸೈಕಲಗಳ  ಮೇಲೆ ಬಂದು ತಡೆದು ನಿಲ್ಲಿಸಿ ಆತನ ಹತ್ತಿರ ಲ್ಯಾಪಟ್ಯಾಪ, ಮೋಬಾಯಿಲ್, ನಗದುಹಣ  ಕಸಿದುಕೊಂಡು ಹೋಗಿರುತ್ತಾರೆ ಎಂದು ಮಾಹಿತಿ ಮೇರೆಗೆ ಪುನ:ಹ ನಾನು ಮತ್ತು ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರು ಹಾಗೂ ಪಿ.ಎಸ್.ಐ. ವನಂಜಕರ ಹಾಗೂ ಅವರ ಜೊತೆಯಲ್ಲಿದ್ದ ಸಿಬ್ಬಂದಿಯವರು ಕೂಡಿಕೊಂಡು ಹೀರಾಪೂರ ಕ್ರಾಸ ಕಡೆಗೆ ಬಂದು ಪರಿಶೀಲಿಸಿ  ನಂತರ ಆರೋಪಿತರ ಪತ್ತೆ ಕುರಿತು ಪಿ.ಎಸ್.ಐ. ವನಂಜಕರ ಮತ್ತು ಸಿಬ್ಬಂದಿಯವರು  ಬಿದ್ದಾಪೂರ ಕಾಲನಿ, ಹೈ ಕೋರ್ಟ, ಉದನೂರ ರಿಂಗ ರೋಡ ಕಡೆಗೆ ಹೋಗಿದ್ದು. ನಾನು ಮತ್ತು ಸಿಬ್ಬಂದಿಯವರು ಹೀರಾಪೂರ,  ಮಿಜಾಬ ನಗರ, ಡಬರಾಬಾದ, ಕಡೆಗಳಲ್ಲಿ ಹೋಗಿದ್ದು, ಸದರಿ  ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿದಾಗ ಬೆಳಗಿನ 06-30 ಗಂಟೆ ಸುಮಾರಿಗೆ ರೇಲ್ವೆ ಬ್ರೀಡ್ಜ ದಾಟಿ ಇರುವ ಡಬರಾಬಾದ ಸೀಮಾಂತರದಲ್ಲಿ ಇರುವ ಆಶ್ರಯ ಕಾಲನಿಯಲ್ಲಿ ಇರುವ ಹಾಳು ಬಿದ್ದ ಮನೆಯಲ್ಲಿ ಈ ಮೇಲೆ ಹೇಳಿದ ಸ್ಥಳಗಳಲ್ಲಿ ಸುಲಿಗೆ ಮಾಡಿದ ಅರೋಪಿತರು ಅಡಗಿ ಕುಳಿತುಕೊಂಡಿದ್ದಾರೆ ಎಂಬ ಬಾತ್ಮಿ ಮೇರೆಗೆ  ಹೈ ಕೋರ್ಟ ಕಡೆಗೆ ಹೋದ ಪಿ.ಎಸ್.ಐ. ವನಂಜಕರ ಮತ್ತು ಸಿಬ್ಬಂದಿಯವರಿಗೆ ಡಬರಾಬಾದ ರೇಲ್ವೆ ಬ್ರೀಡ್ಜ ಹತ್ತಿರ ಬರುವಂತೆ ಹೇಳಿದ ಪ್ರಕಾರ ಅವರು ಅಲ್ಲಿಗೆ ಬಂದಾಗ ನಾವೆಲ್ಲರೂ ಕೂಡಿಕೊಂಡು ಆರೋಪಿತರನ್ನು ಹಿಡಿಯಲು ಹಾಳು ಬಿದ್ದ ಡಬರಾಬಾದ ಆಶ್ರಯ ಕಾಲನಿಯ ಹತ್ತಿರ ಬೆಳಿಗ್ಗೆ 07-00 ಗಂಟೆ ಸುಮಾರಿಗೆ ಹೋದಾಗ ಒಂದು ಹಾಳು ಬಿದ್ದ ಮನೆ ಹತ್ತಿರ ಒಂದು ಹೊಂಡಾ ಎಕ್ಟೀವ್ ಮತ್ತು ಹೊಂಡಾ ಡಿಯೋ ಗಾಡಿ ನಿಂತಿದಿದ್ದು ನೋಡಿ ಸುಲಿಗೆ ಮಾಡಿದ ಆರೋಪಿತರು ಇಲ್ಲೇ ಅಡಗಿ ಕುಳಿತಿದ್ದಾರೆ ಎಂದು ಖಚಿತವಾದ ಮೇರೆಗೆ ಅವರನ್ನು ಹಿಡಿಯಲು ಸದರಿ ಮನೆಯ ಹತ್ತಿರ ಹೋದಾಗ ಒಳಗಡೆ ಇದ್ದ ನಾಲ್ಕು ಜನರು ಪೊಲೀಸ ಸಮವಸ್ತ್ರ ನೋಡಿ ನಮ್ಮ ಮೇಲೆ ಬಿಯರ ಬಾಟಲಿಗಳು ಎಸೆದಾಗ ಅದನ್ನು ಕಂಡು ನಾನು ಮತ್ತು  ಪಿ.ಎಸ್.ಐ. ವನಂಜಕರ ಹಾಗೂ ಸಿಬ್ಬಂದಿಯವರು ಅವರಿಗೆ ಬಿಯರ ಬಾಟಲಿ ಎಸೆಯಬೇಡಿರಿ ಶರಣಾಗಿರಿ ನಾವು ಪೊಲೀಸರಿದ್ದೆವೆ ಎಂದು ತಿಳಿ ಹೇಳಿದಾಗ ಅವರು ನಮ್ಮ ಮಾತಿಗೆ ಬೆಲೆ ಕೊಡದೇ  ಇದ್ದಾಗ ಅವರನ್ನು ಹಿಡಿಯಲು ಹೋದಾಗ ಒಳಗಡೆ ಇದ್ದ ಇಬ್ಬರು ತಮ್ಮ ತಮ್ಮ ಕೈಯಲ್ಲಿ ಜಂಭಾ ಹಿಡಿದುಕೊಂಡು  ರೂಮಿನಿಂದ ಹೊರಗಡೆ ಬಂದು ನನ್ನ ಮತ್ತು ಜೊತೆಗಿದ್ದ ಸಿಬ್ಬಂದಿಯವರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಅವರಿಗೆ ಶರಣಾಗಿರಿ ಪೊಲೀಸರ ಮೇಲೆ ಹಲ್ಲೆ ಮಾಡುವುದು ಸರಿ ಅಲ್ಲಾ ಎಂದು ತಿಳಿ ಹೇಳಿದರೂ ಕೂಡಾ  ಅವರಲ್ಲಿ ಒಬ್ಬನು ತನ್ನ ಕೈಯಲ್ಲಿದ್ದ ಜಂಭೆಯಿಂದ  ಬಂದೇನವಾಜ ಹೆಚಸಿ ಇವರಿಗೆ ಕೊಲೆ ಮಾಡುವ ಉದ್ದೇಶದಿಂದ ಅವರ ಬಲ ಕುತ್ತಿಗೆಯ ಮೇಲೆ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ರಕ್ತಗಾಯಗೊಳಿಸಿದನು. ನಾನು ಮತ್ತು ಪಿ.ಎಸ್.ಐ. ವನಂಜಕರ ಹಾಗೂ ಸಿಬ್ಬಂದಿಯವರು  ಹಲ್ಲೆ ಮಾಡಬೇಡಿರಿ ಶರಣಾಗಿರಿ ಎಂದು ಹೇಳಿ ಮತ್ತೆ ಅವರಿಗೆ ಹಿಡಿಯಲು ಹೋದಾಗ  ಅವರುಗಳು ಮತ್ತೆ ನಮ್ಮ ಮೇಲೆ ಜಂಭೆಯಿಂದ ಹಲ್ಲೆ ಮಾಡಲು ಮುಂದಾದಾಗ ನಾನು ಆತ್ಮ ರಕ್ಷಣೆಗಾಗಿ ಮತ್ತು ಜೊತೆಯಲ್ಲಿದ್ದ ಸಿಬ್ಬಂದಿಯವರ ಆತ್ಮ ರಕ್ಷಣೆಗಾಗಿ ನನ್ನ ಸರ್ವಿಸ ಪಿಸ್ತೂಲನಿಂದ  ಒಂದು ಸುತ್ತು ಗುಂಡು ಗಾಳಿಯಲ್ಲಿ ಹಾರಿಸಿ ಶರಣಗಾಗಿರಿ ಎಂದು ಎಚ್ಚರಿಕೆ ನೀಡಿದರೂ ಇನ್ನೊಬ್ಬ ತನ್ನ ಕೈಯಲ್ಲಿದ್ದ ಜಂಭೆಯಿಂದ  ಭೀಮನಾಯಕ ಸಿಪಿಸಿ ರವರ  ಬಲಭಜುದ ಮೇಲೆ ಮರಣಾಂತಿಕ ಹಲ್ಲೆ ಮಾಡಿದಾಗ ನಾನು ಆತ್ಮ ರಕ್ಷಣೆಗಾಗಿ ಮತ್ತು ಸ್ಥಳದಲ್ಲಿ ಹಾಜರಿದ್ದ ಸಿಬ್ಬಂದಿಯವರ ಪ್ರಾಣ  ರಕ್ಷಣೆಗಾಗಿ ಸರ್ವಿಸ ಪಿಸ್ತೂಲನಿಂದ ಭೀಮನಾಯಕನಿಗೆ  ಹಲ್ಲೆ ಮಾಡಿದ ವ್ಯಕ್ತಿಯ ಎಡಗಾಲಿಗೆ ಒಂದು ಸುತ್ತು ಗುಂಡು ಹೊಡೆದನು. ಅದನ್ನು ನೋಡಿ ಅವನ ಜೊತೆಯಲ್ಲಿದ್ದ ಬಂದೇನವಾಜನಿಗೆ ಹಲ್ಲೆ ಮಾಡಿದವನು ಮತ್ತೆ ಜಂಭೆದಿಂದ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದಾಗ ನನ್ನ ಆತ್ಮ ರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಆತನ ಎಡಗಾಲ ಮೇಲೆ ಹೊಡೆದನು. ಅದರಿಂದ ಇಬ್ಬರು ಸ್ಥಳದಲ್ಲಿ ಕುಸಿದು ಬಿದ್ದರು. ರೂಮಿನಲ್ಲಿದ್ದ ಇನ್ನಿಬ್ಬರು ಅಲ್ಲಿಂದ ಓಡಿ ಹೋದರು.  ಬಂದೇನವಾಜನಿಗೆ ಹಲ್ಲೆ ಮಾಡಿದವನ ಹತ್ತಿರ ಹೋಗಿ ಅವನ ಹೆಸರು ಕೇಳಲಾಗಿ ಶೇಖರ @ ಶೇಖು ತಂದೆ ಹಣಮಂತ ಖೇತ್ರಿ ಸಾ: ರಾಮ ತೀರ್ಥ ನಗರ ಕಲಬುರಗಿ ಅಂತಾ ಗೊತ್ತಾಯಿತು. ಮತ್ತು ಭೀಮನಾಯಕನ ಮೇಲೆ  ಹಲ್ಲೆ ಮಾಡಿದವನ ಹೆಸರು ಕೇಳಲಾಗಿ ಅಜೀಂಖಾನ  ತಂದೆ ರಹೇಮಾನಖಾನ ಖಾನಸಾಬ ಸಾ: ಆದರ್ಶ ನಗರ ಕಲಬುರಗಿ  ಅಂತಾ ಗೊತ್ತಾಯಿತು. ನಂತರ ಶೇಖರ ಮತ್ತು ಅಜೀಂ ಇಬ್ಬರಿಗೆ ಓಡಿ ಹೋದವರ ಹೆಸರು  ವಿಳಾಸ ಕೇಳಲಾಗಿ  3)ಅಮರ 4) ಸಾಗರ  ಅಂತಾ ಗೊತ್ತಾಯಿತು. ಈ ವಿಷಯ ಪೊಲೀಸ ಕಂಟ್ರೋಲ್ ರೂಮಿಗೆ ಮಾಹಿತಿ ತಿಳಿಸಿ ನಮ್ಮ ಮೇಲಾಧಿಕಾರಿಯವರಿಗೆ ತಿಳಿಸುವಂತೆ ಹೇಳಿದನು. ಅಲ್ಲದೇ ದು:ಖಾಪತಗೊಂಡು ಬಂದೇನವಾಜ ಮತ್ತು ಭೀಮಾನಾಯ್ಕ  ಹಾಗೂ ಶೇಖರ, ಅಜೀಂಖಾನ ಇವರಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಗೆ ಪೋನ ಮಾಡಲು ಕಂಟ್ರೋಲ ರೂಮಿಗೆ ತಿಳಿಸಿದೆನು. ಶೇಖರ ಮತ್ತು ಅಜೀಂಖಾನ ಇವರಿಗೆ ಭಾರಿ ರಕ್ತಗಾಯಗಳಾಗಿದ್ದರಿಂದ 108 ಅಂಬುಲೈನ್ಸ ಗಾಡಿ ಬರಲು ತಡವಾಗುತ್ತಿದ್ದರಿಂದ, ಮತ್ತು ಗಾಯಗೊಂಡ ಸಿಬ್ಬಂದಿಯವರ ಜೊತೆಯಲ್ಲಿ ಪಿ.ಎಸ್.ಐ. ವನಂಜಕರ ಮತ್ತು ಅವರ ಸಿಬ್ಬಂದಿಯವರನ್ನು ಬಿಟ್ಟು  ಶೇಖರ ಮತ್ತು ಅಜೀಂಖಾನ ಇವರಿಗೆ ರಕ್ತಸ್ರಾವ ಆಗುತ್ತಿದ್ದರಿಂದ ಪ್ರಾಣ ರಕ್ಷಣೆಗಾಗಿ  ನಾನು ಮತ್ತು ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರು ಜೀಪು ನಂಬರ ಕೆಎ 32 ಜಿ 295 ರಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ಅಂತಾ ಶ್ರೀ ವಾಹೇದ್ ಹೆಚ.ಕೋತ್ವಾಲ್ ಪಿ.ಎಸ್.ಐ. ಫರತಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 12-04-2018 ರಂದು  ಹಿಂಚಗೇರಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ  ಸಿ.ಪಿ.ಐ ಅಫಜಲಪೂರ ರವರು  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಹಿಂಚಗೇರಾ ಗ್ರಾಮಕ್ಕೆ  ಹೋಗಿ, ಹಿಂಚಗೇರಾ ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರ ನಮ್ಮ ವಾಹನವನ್ನು ನಿಲ್ಲಿಸಿ, ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸದರಿ ಬಸ್ ನಿಲ್ದಾಣ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಚೀಲ ಇಟ್ಟುಕೊಂಡು  ಹೋಗಿ ಬರುವ ಜನರಿಗೆ ಸಾರಾಯಿ ಮಾರಾಟ ಮಾಡುತ್ತಿದ್ದನು. ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶಿವಶರಣ ತಂದೆ ಸಿದ್ದಪ್ಪ ಕುಂಬಾರ ಸಾ|| ಹಿಂಚಗೇರಾ ಗ್ರಾಮ ತಾ|| ಅಫಜಲಪೂರ ಅಂತ ತಿಳಿಸಿದನು. ನಂತರ ಸದರಿಯವನ ವಶದಲ್ಲಿದ್ದ ಚೀಲವನ್ನು ಚೆಕ್ ಮಾಡಲಾಗಿ, ಸದರಿ ಚೀಲದಲ್ಲಿ Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ 64 ರಟ್ಟಿನ ಪೌಚಗಳು ಅಕಿ- 1800/- ರೂ ಕಿಮ್ಮತ್ತಿನವುಗಳು ಇದ್ದವು.  ಹಾಗೂ ಮದ್ಯ ಮಾರಾಟ ಮಾಡಿದ 200/- ರೂ ನಗದು ಹಣ ದೊರೆತವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 64 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ವಶಕ್ಕೆ ಪಡೆದುಕೊಂಡೆನು, ಉಳಿದ ಪೌಚಗಳನ್ನು ಹಾಗೂ ಮದ್ಯ ಮಾರಾಟ ಮಾಡಿದ 200/- ರೂ ನಗದು ಹಣವನ್ನು  ವಶಪಡಿಸಿಕೊಂಡು ಸದರಿಯವನೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಾಗಿದೆ.