POLICE BHAVAN KALABURAGI

POLICE BHAVAN KALABURAGI

14 March 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 11-03-2018 ರಂದು  ನನ್ನ ಅಣ್ಣ ನಭಿಲಾಲ ಮತ್ತು ನಮ್ಮ ಓಣಿಯ ಗೌಸೋದ್ದಿನ್ ತಂದೆ ಇಸ್ಮಾಯಿಲ್ ಭಾಗವಾನ ಹಾಗೂ ರೀಯಾನ ಬೇಗಂ ಗಂಡ ಇಸ್ಮಾಯಿಲ್ ಭಾಗವಾನ ರವರೇಲ್ಲರೂ ಭೋಗನಳ್ಳಿ ಗ್ರಾಮದ ಆಸೀಫ್ ತಂದೆ ಜೈನೋದ್ದಿನ್ ಗಿರಣಿ ಎಂಬಾತನು ನಡೆಸುವ ಕಾರ ನಂ ಕೆಎ-05-ಎಮ್.ಸಿ-6064 ನೇದ್ದರಲ್ಲಿ ಮಾಶಾಳ ಗ್ರಾಮಕ್ಕೆ ದೇವರು ಕೇಳಲು ಮನೆಯಿಂದ ಆಸೀಪ್ ಗಿರಣಿ ಎಂಬಾತನೊಂದಿಗೆ ಹೋಗಿದ್ದು ಕಾರನ್ನು ಆಸೀಫನೆ ನಡೆಸಿಕೊಂಡು ಹೋಗಿರುತ್ತಾನೆ. ಬೆಳಿಗ್ಗೆ 09:40 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಮಾತೋಳಿ ಗ್ರಾಮದ ಯಾರೋ ಒಬ್ಬರು ನನ್ನ ಮೋಬಾಯಿಲ್ ಫೋನ್ ಗೆ ಕರೆ ಮಾಡಿ ತಿಳಿಸಿದ್ದೇನೆಂದರೆ ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ಕಲಬುರಗಿ-ಅಫಜಲಪೂರ ರೋಡಿನ ಮೇಲೆ ಮಾತೋಳಿ ಗ್ರಾಮ ದಾಟಿ ಸ್ವಲ್ಪ ಮುಂದೆ ಹೋದ ನಂತರ ನಿಮ್ಮ ಅಣ್ಣ ನಭಿಲಾಲ ಮತ್ತು ಗೌಸೋದ್ದಿನ್ ಭಾಗವಾನ ಹಾಗೂ ರೀಯಾನಾ ಬೇಗಂ ರವರು ಕುಳಿತು ಹೊರಟಿದ್ದ ಕಾರ ನಂ ಕೆಎ-05-ಎಮ್.ಸಿ-6064 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ನಡೆಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ರೋಡಿನ ಪಕ್ಕದ ದಕ್ಷಿಣ ದಿಕ್ಕಿನಲ್ಲಿರುವ ತಗ್ಗಿನಲ್ಲಿ ಪಲ್ಟಿ ಯಾಗಿ ಬಿದ್ದಿರುತ್ತದೆ. ಘಟನೆ ಸಂಭವಿಸಿದ ನಂತರ ಕಾರಿನ ಚಾಲಕನು ಓಡಿ ಹೋಗಿರುತ್ತಾನೆ. ಸದರಿ ಘಟನೆಯಲ್ಲಿ ನಿಮ್ಮ ಅಣ್ಣ ನಭಿಲಾಲನ ಎದೆಗೆ,  ಭಾರಿ ಒಳ ಪೆಟ್ಟಾಗಿದ್ದರಿಂದ ಪ್ರಜ್ಞಾಹಿನ ಸ್ಥಿತಿಯಲ್ಲಿ ಇರುತ್ತಾನೆ. ಗೌಸೋದ್ದಿನ್ ಭಾಗವಾನ ಮತ್ತು ರೀಯಾನಾ ಬೇಗಂ ರವರಿಗೆ ಕೈ, ಕಾಲುಗಳಿಗೆ ಮತ್ತು ಶರೀರದ  ಕೆಲವು ಭಾಗಗಳಲ್ಲಿ ಭಾರಿ ರಕ್ತಗಾಯ ಮತ್ತು ಒಳ ಪೆಟ್ಟುಗಳು ಆಗಿರುತ್ತವೆ ಅಂತಾ ತಿಳಿಸಿದನು ಕೂಡಲೇ ನಾನು ನಮ್ಮೂರಿನಿಂದ ಹೊರಟು ಘಟನೆ ಸ್ಥಳಕ್ಕೆ ಬಂದಿದ್ದು ನಾನು ಬರುವಷ್ಟರಲ್ಲಿ ಯಾರೋ ವ್ಯಕ್ತಿಗಳು 108 ವಾಹನಕ್ಕೆ ಫೋನ್ ಮಾಡಿದ್ದರಿಂದ ಸ್ಥಳಕ್ಕೆ 108 ವಾಹನ ಬಂದು ನಿಂತಿದ್ದರಿಂದ ನಾನು ಮತ್ತು ಘಟನೆ ಸ್ಥಳದಲ್ಲಿ ನೆರದ ಜನರೆಲ್ಲರೂ ನನ್ನ ಅಣ್ಣ ಮತ್ತು ಗೌಸೋದ್ದಿನ್ ಹಾಗೂ ರೀಯಾನಾ ಬೇಗಂ ರವರಿಗೆ 108 ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಕಲಬುರಗಿ ಕರೆದುಕೊಂಡು  ಹೋಗಿ ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋದಾಗ ನನ್ನ ಅಣ್ಣನನ್ನು ಪರೀಕ್ಷಿಸಿದ ವೈಧ್ಯರು ಸದರಿಯವನು ಆಗಲೇ ಮಾರ್ಗ ಮಧ್ಯದಲ್ಲಿ ಸುಮಾರು ½ ಗಂಟೆಯ ಹಿಂದೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ಅಂತಾ ಶ್ರೀ ಅಸ್ಪಾಕ ತಂದೆ ಮದರಸಾಬ ಖುರೇಸಿ ಸಾ: ಅತನೂರ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ:12/03/2018 ರಂದು 06-00 ಪಿಎಂ ಸುಮಾರಿಗೆ ಗಾಯಾಳು ಶಂಕರ ಬಾಚಾ ಇವರು ಕಲಬುರಗಿ ಹುಮನಾಬಾದ ರೋಡಿನ ಶರಣಪ್ಪಾ ಹೊಟೇಲ ಹತ್ತಿರ ಸಾಕ್ಷಿದಾರನಾದ ಶಿವಕುಮಾರ ಗೊಬ್ಬುರವಾಡಿ ಇವರು ಬರುವದನ್ನು ಕಾಯುತ್ತಾ ನಿಂತಾಗ ಕಲಬುರಗಿ ಕಡೆಯಿಂದ ಬೊಲೇರೊ ಜೀಪ ನಂ. ಕೆಎ:29 ಎಂ: 4415 ನೇದ್ದರ ಚಾಲಕತನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಗಾಯಾಳು ಶಂಕರ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದರಿಂದ ಶಂಕರನಿಗೆ ಎದೆಗೆ ಮತ್ತು ತಲೆಗೆ ಭಾರಿ ಗುಪ್ತಗಾಯವಾಗಿರುತ್ತದೆ ಅಂತಾ ರಾಜಕುಮಾರ ತಂದೆ ಶಂಕರ ಬಾಚಾ ಸಾ: ಮಹಾಗಾಂವ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ರಫೀಕ ತಂದೆ ಬುಡೆನ ಸಾಬ ಖುರೇಷಿ ಸಾ: ಶಾಸ್ತ್ರಿ ಚೌಕ ಶಹಾಬಾದ ರವರು ದಿನಾಂಕ: 12/03/2018 ರಂದು ರಾತ್ರಿ 8-30 ಗಂಟೆಗೆ ತಾನು ದಾಬಾ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಹೊರಗಡೆ ನಿಂತಾಗ ನಮ್ಮ ಓಣಿಯ ಪ್ರಧಿಪ ತಂದೆ ದೇವಿದಾಗ ಪವಾರ , ನೇತಾಜಿ , ಜೈನತ ಸಂಗಡ 5-6 ಜನರು ಕೈಯಿಲ್ಲಿ ಬಡಿಗೆ ರಾಡು ಹಿಡಿದುಕೊಂಡು ಬಂದವರೆ ನನಗೆ ಏ ರಂಡಿ ಮಗನೆ ಓಣಿಯಲ್ಲಿ ನಿಂತುಕೊಂಡು ನಮಗೆ ದಿಟ್ಟಿಸಿ ನೋಡತಿ ರಂಡಿ ಮಗನೆ ಅಂತಾ ಬೈದು  ನನಗೆ ಜಗಳ ತೆಗೆದು ಎದೆಯ ಮೇಲಿನ ಅಂಗಿ ಹಿಡಿದು ರಾಂಡಕೆ ಬಚ್ಚೆ ಹಮಾರೆ ಸಾಮನೆ ಆಕಡತೇ ಬೋಸಡಿಕೆ ಅಂತಾ ಬೈಯ್ದು ಕಾಲಿನಿಂದ ಹೊಟ್ಟೆಗೆ ಒದ್ದು ಗುಪ್ತ ಪೆಟ್ಟು ಮಾಡಿದರು ಆಗ ನಾನು ಹೆದರಿ ಮನೆ ಒಳಗೆ ಓಡಿ ಹೋದರು ಕೂಡ ನನ್ನ ಮನೆಯಲ್ಲಿ ಆಕ್ರಮ ಪ್ರವೇಶ ಮಾಡಿ ಬಂದು ನನಗೆ ಹಿಡಿದುಕೊಂಡು ಮನೆಯ ಹೊರಗೆ ಎಳೆದುಕೊಂಡು ಬಂದು ನನಗೆ ಕೊಲೆ ಮಾಡುವ ಉದ್ದೇಶದಿಂದ ಪ್ರದೀಪ ಇತನು ತನ್ನ ಕೈಯಲ್ಲಿದ್ದ ರಾಡಿನಿಂದ ನ್ನ ತಲೆಗೆ ಹೊಡೆದು ಭಾರಿ ರಕ್ತಗಾಯಾ ಮಾಡಿದನು ಮತ್ತು ಜಗಳ ಬಿಡಿಸಲು ಬಂದ ನನ್ನ ತಮ್ಮ ಅನ್ವರನಿಗೂ ಮೈ ಕೈಗೆ ಹೊಡೆದು ಗುಪ್ತ ಗಾಯಾ ಮಾಡಿರುತ್ತಾರೆ ಜಗಳದಲ್ಲಿ ನನಗೆ ಬಲಕೈಗೆ ಒಳಪೆಟ್ಟಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 March 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 10/03/2018 ರಂದು ಸಂಜೆ ಪಟ್ಟಣ ಗ್ರಾಮದ ಹಳ್ಳದ ಬ್ರೀಡ್ಜ  ರೋಡಿನ ಮೇಲೆ ಟ್ಯಾಕ್ಟ್ರರ ಚಾಲಕ ತನ್ನ ಟ್ಯಾಕ್ಟ್ರರ ಇಂಜನ KA 39 T 2243  ಮತ್ತು ಟ್ರಾಲಿ ನಂಬರ KA 39 T 2244  ನೇದ್ದು ಮಾನವನ ಜೀವಕ್ಕೆ ಅಪಾಯವಾಗುವ ಮತ್ತು ಸಂಚಾರಕ್ಕೆ ಅಡೆ ತಡೆಯಾಗುವ ರೀತಿಯಲ್ಲಿ ಹಾಗೂ ಯಾವುದೇ ಮುನ್ಸೂಚನೇ ಮತ್ತು ಇಂಡಿಕೇಟರ ಹಾಕದೇ ನಿಲ್ಲಿಸಿದ್ದರಿಂದ ಮತ್ತು ನನ್ನ ತಮ್ಮ ಮಲ್ಲಿಕಾರ್ಜುನ ತಂದೆ ಶಾಂತಪ್ಪ  ನಾಟೀಕರ ಇತನು ತನ್ನ ವಶದಲ್ಲಿದ್ದ ಹಿರೋ ಹೊಂಡಾ ಸಿಡಿ 100 KA 05 X 3352 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ಬಂದು ಟ್ಯಾಕ್ಟ್ರರದ ಟ್ರಾಲಿಯ ಹಿಂದುಗಡೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಅವನಿಗೆ ಎಡತಲೆಯ ಮೇಲೆ ಭಾರಿ ರಕ್ತಗಾಯ ಮತ್ತು ಬಲತಲೆಯ ಮೇಲೆ ಹರಿದ ಭಾರಿ ರಕ್ತಗಾಯ, ಮೂಗಿನಿಂದ ರಕ್ತ ಸೋರಿದ್ದು. ಎಡರಟ್ಟೆಯ ಮೇಲೆ ಅಲ್ಲಿಲ್ಲಿ ರಕ್ತಗಾಯ, ಬಲಭುಜದ ಮೇಲೆ ರಕ್ತಗಾಯ, ಎಡಮೊಳಕಾಲ ಮೇಲೆ ತರಚಿದ ರಕ್ತಗಾಯ ಮತ್ತು ಕೆಳೆಗೆ ತರಚಿದ ಗಾಯಗಳಾಗಿ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದು ಅವನಿಗೆ ಉಪಚಾರ ಕುರಿತು ಗಂಗಾ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದಾಗ ಇತನಿಗೆ ಆದ ಭಾರಿ ರಕ್ತಗಾಯಗಳಿಂದ ವೈದ್ಯರು ಉಪಚರಿಸುತ್ತಿರುವ ಕಾಲಕ್ಕೆ  ಗುಣ ಮುಖ ಹೊಂದದೇ ದಿನಾಂಕ 10/03/2018 ರಂದು ರಾತ್ರಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಈರಣ್ಣಾ ತಂದೆ ಶಾಂತಪ್ಪಾ ನಾಟೀಕರ ಸಾ : ಪಟ್ಟಣ  ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 10/03/2018 ರಂದು ಮೃತ ಸೋಫಾನರಾವ ಇತನು ಯಾವುದೋ ಕೆಲಸದ ನಿಮತ್ಯಾ ಆಳಂದ ಕಡೆಗೆ ಹೋಗಿ ಮರಳಿ ಕಲಬುರಗಿಗೆ ಬರುವಾಗ ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನಂ KA-32 EE-1169  ನೇದ್ದನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ರಾತ್ರಿ ಸುಮಾರಿಗೆ ಕೇರಿ ಭೋಸಗಾ ಕ್ರಾಸ ಹತ್ತಿರ ಇರುವ ಪೆಟ್ರೋಲ್ ಪಂಪದ ಎದರುಗಡೆ ರೋಡ ಜಂಪನಲ್ಲಿ ಮುಂದೆ ಹೋಗುತ್ತಿದ್ದ ಯಾವುದೋ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಯಾವುದೇ ಇಂಡಿಕೇಟರ್ ವಗೈರೇ ಮತ್ತು ಯಾವುದೇ ಸೂಚನೆ ನೀಡದೇ ಹೋಗು ಬರುವ ವಾಹನ ಚಾಲಕರಿಗೆ ಅಪಾಯವಾಗುವ ರೀತಿಯಲ್ಲಿ ಕಾರನ್ನು ಒಮ್ಮಲೇ ರೋಡಿನ ಮೇಲೆ ನಿಲ್ಲಿಸಿದಾಗ ಮೃತ ಸೋಪನರಾವ ಇತನು ತನ್ನ ಮೋಟಾರ ಸೈಕಲ್  ಸದರಿ ಕಾರಿನ ಹಿಂದುಗಡೆ ಅಪಘಾತ ಪಡಿಸಿದ್ದರಿಂದ್ದ ಮೃತನ  ಹಣೆಗೆ ಮತ್ತು ಕುತ್ತಿಗಿಗೆ ಭಾರಿ ರಕ್ತಗಾಯವಾಗಿ ಮತ್ತು ಇತರೇ ಕಡೆಗಳಲ್ಲಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಸುನೀತಾ ಗಂಡ ಸೋಫಾನರಾವ ಸೂರ್ಯವಂಶಿ ಸಾ : ಆಶ್ರಯ ಕಾಲೋನಿ ರಾಣೇಶಪೀರ ದರ್ಗಾ ಹತ್ತಿರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ದಿನಾಂಕ: 08-03-18 ರಂದು ಮೊಟಾರ ಸೈಕಲ್ ನಂ. ಕೆಎ32ಇಕ್ಯೂ1564 ನೆದ್ದರ ಮೇಲೆ ಗಂಡ ನಾಗೇಂದ್ರಪ್ಪ ಇಬ್ಬರೂ ಕೂಡಿಕೊಂಡು ಕುರಕುಂಟಾ ಗ್ರಾಮದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ವಾಪಾಸು ಹೋಗುವಾಗ ಬಟಗೇರಾ(ಕೆ) ಗೇಟ ಹತ್ತಿರ ಕುರಕುಂಟಾ ಕ್ರಾಸ ಹತ್ತಿರ ಒಬ್ಬ ಮೊಟಾರ ಸೈಕಲ್ ನಂ.ಕೆಎ32ಇಆರ್3186 ನೆದ್ದರ ಚಾಲಕನು ಅತಿ ವೇಗದಿಂದ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಗಂಡ ಚಲಾಯಿಸುತ್ತಿದ್ದ ಮೊಟಾರ ಸೈಕಲ್ ಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿ, ಮೊಟಾರ ಸೈಕಲ್ ಸಮೇತ ಆರೋಪಿತನು ಓಡಿ ಹೋಗಿರುತ್ತಾನೆ ಅಂತಾ ಶ್ರೀಮತಿ ಸುನಂದಾ ಗಂಡ ನಾಗೇಂದ್ರಪ್ಪ ರಾಜಾಪೂರ ಸಾ|| ಸಣ್ಣ ಅಗಸಿ ಸೇಡಂ, ಹಾ.ವ|| ವಿ.ಸಿ.ಎಫ್ ಕಾಲೋನಿ ಸೇಡಂ, ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 10-03-2018 ರಂದು ಅಫಜಲಪೂರ ಪಟ್ಟಣದ ದುಧನಿ ರಸ್ತೆಗೆ ಇರುವ ಸಾಮ್ರಾಟ ಪೇಟ್ರೊಲ ಪಂಪ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಾಮ್ರಾಟ ಪೇಟ್ರೊಲ ಪಂಪ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಪೆಟ್ರೊಲ ಪಂಪ ಪಕ್ಕದ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 04 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ 04 ಜನರನ್ನು ಹಿಡಿದು  ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮಾಳಪ್ಪ ತಂದೆ ಚಂದ್ರಾಮ ಹುಲ್ಲೂರ ಸಾ|| ಅಮೋಗಸಿದ್ದ ಗುಡಿ ಹತ್ತಿರ ಅಫಜಲಪೂರ 2) ತುಕಾರಾಮ ತಂದೆ ಲಕ್ಷ್ಮಣ ಬಂಗಿ ಸಾ|| ಅಫಜಲಪೂರ 3) ಸುರೇಶ ತಂದೆ ದುಂಡಪ್ಪ ಹಿಂಚಗೇರಾ ವಯ|| 52 ವರ್ಷ ಜಾ|| ಕುರುಬ || ಲಾರಿ ಚಾಲಕ ಸಾ|| ಅಫಜಲಪೂರ 4) ಬಸವರಾಜ ತಂದೆ ತುಳುಜಪ್ಪ ಕುಮಸಗಿ ಸಾ|| ಅಫಜಲಪೂರ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 5620/- ರೂ ಹಾಗು 52 ಇಸ್ಪೇಟ  ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಜಾತಿ ನಿಂದನೆ ಮಾಡಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಲಕ್ಷ್ಮಮ್ಮ ಗಂಡ ಕಾಶಪ್ಪ ಕೊಲಕುಂದಾ, ಸಾ|| ಭೂತಪೂರ, ತಾ|| ಸೇಡಂ, ಜಿ|| ಕಲಬುರಗಿ.
ರವರು ದಿನಾಂಕ: 09-03-2018 ರಂದು ಸಿಂಧನಮಡು ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಪಿ.ಡಿ.ಓ ರಾಮಪ್ಪ ಇವರು ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಚೆಕ್ಗಳ ಮೇಲೆ ಮತ್ತು ಮನೆ ಹಂಚಿಕೆಯ ದಾಖಲಾತಿಗಳ ಮೇಲೆ ಸಹಿ ಮಾಡಲು ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮಮ್ಮ ಇವರಿಗೆ ಹೇಳಿದಾಗ, ಆಗ ಫಿರ್ಯಾದಿದಾರರು ನನಗೆ ಓದು ಬರಹ ಬರುವುದಿಲ್ಲ, ಓದಿ ಬರಹ ಬಲ್ಲವರಿಗೆ ಕೇಳಿ ವಿಷಯ ತಿಳಿದುಕೊಂಡು ಸಹಿ ಮಾಡುವುದಾಗಿ ಹೇಳಿದ್ದು, ಅದಕ್ಕೆ ಪಿ.ಡಿ.ಓ ರವರು ಫಿರ್ಯಾದಿಗೆ ನೀನು ಮುದುಕಿ ಆಗಿದ್ದಿ, ನಿನಗೆ ಕೆಲಸ ಬರುವುದಿಲ್ಲ ಅಂದರೆ ರಾಜಿನಾಮೆ ಕೊಟ್ಟು ಹೋಗು, ನಿನ್ನಿಂದ ಈ ಕೆಲಸ ಆಗುವುದಿಲ್ಲ ಅಂತಾ ಏಕ ವಚನದಲ್ಲಿ ಬೈಯ್ದು, ಮಾದೀಗ ಜನಾಂಗದವರಿಗೆ ಯಾಕೆ ಅಧ್ಯಕ್ಷ ಕೊಟ್ಟಿರುತ್ತಾರೆ ಅಂತಾ ಬೈಯ್ದಿದ್ದು, ಸದರಿ ಪಿ.ಡಿ.ಓ ರಾಮಪ್ಪ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾನಿ ಮಾಡಿದ ಪ್ರಕರಣ :
ಸೇಡಂ ಠಾಣೆ : ದಿನಾಂಕ: 07-03-18 ರಂದು 04:00 ಪಿ.ಎಮ್ ಕ್ಕೆ ಶ್ರೀ ಸಿಮೆಂಟ ಫ್ಯಾಕ್ಟರಿ ಕೊಡ್ಲಾ-ಬೆನಕನಳ್ಳಿಯಲ್ಲಿನ ಕಾಖರ್ಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕನಾದ ಮಹ್ಮದ ಮುನೀಫ್ ಸಾ|| ಮುಜಫರಪುರ ಬಿಹಾರ ಇತನು ಕೆಲಸ ಮಾಡುವ ಸಮಯದಲ್ಲಿ ಅವನ ತಲೆಯ ಮೇಲೆ ರಾಡಗಳು ಬಿದ್ದು ತಲೆಗೆ ಭಾರಿ ರಕ್ತಗಾಯಗಳಾಗಿ ಉಪಚಾರ ಕುರಿತು ಕಲಬುರಗಿಯ ಎ.ಎಸ್.ಎಮ್ ಆಸ್ಪತ್ರೆಯಲ್ಲಿ ಹೋಗಿದ್ದು, ಆ ವೇಳೆಯಲ್ಲಿ ವೈದ್ಯರು ಪರಿಶೀಲಿಸಿ ಮೃತಪಟ್ಟಿದ್ದ ಬಗ್ಗೆ ತಿಳಿಸಿದ್ದು, ಈ ವಿಷಯವನ್ನು ಇಟ್ಟಿಕೊಂಡು ದಿನಾಂಕ: 08-03-18 ರಂದು 08:20 ಎ.ಎಮ್ ಸುಮಾರಿಗೆ ಮೇ|| ಪೆಟ್ರಾನ್ ಕಂಪನಿಯ ಸಬ್ ಕಾಂಟ್ರಾಕ್ಟರರಾದ ಸುನೀಲಕುಮಾರ ವಿ. ಕಾಂಟ್ರಕ್ಟರ್ ಹತ್ತಿರ ಕೆಲಸ ಮಾಡುವ ಸುಭೋದಕುಮಾರ ಹಾಗು  ಇತರೆ ಗುತ್ತಿಗೆ ಕಾರ್ಮಿಕರು ಸುಮಾರು 45-50 ಜನ ಕಾರ್ಮಿಕರು ಪೂರ್ವದ ಗೇಟನಿಂದ ಪೆಟ್ರಾನ್ ಆಫೀಸ್ ಕಡೆಗೆ ನುಗ್ಗಿ, ನಂತರ ಫ್ಯಾಕ್ಟರಿಯ ಟಿ ಜಂಕ್ಷನ್ ಹತ್ತಿರ ನಿಂತಿದ್ದ ಹೊಸ ಬಸ್ಸಿಗೆ ಕಲ್ಲುಗಳಿಂದ ಹೊಡೆದು ಅದರ ಎಲ್ಲಾ ಗಾಜುಗಳನ್ನು ಒಡೆದು ಬಸ್ಸಿಗೆ ಹಾನಿ ಮಾಡಿ ನಂತರ ಪೆಟ್ರಾನ್ ಕಂಪನಿ ಹತ್ತಿರ ಇದ್ದ ಎರಡು ವಾಹನಗಳಿಗೆ ಕಲ್ಲುಗಳಿಂದ ಹೊಡೆದು ಹಾನಿ ಪಡಿಸಿರುತ್ತಾರೆ ಅಂತಾ ಶ್ರೀ ಮನೋಜಕುಮಾರ ಬಗೋರಿಯಾ ಎಡಿ.ಜಿ.ಎಮ್ ಶ್ರೀ ಸಿಮೆಂಟ ಫ್ಯಾಕ್ಟರಿ ಕೊಡ್ಲಾ-ಬೆನಕನಳ್ಳಿ, ತಾ|| ಸೇಡಂ, ಜಿ|| ಕಲಬುರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 March 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 07.03.2018 ರಂದು ಸಾಯಂಕಾಲ ಚಿಂಚೋಳ್ಳಿ ಲೇಔಟದಲ್ಲಿ ಇರುವ ಎಸ್.ಬಿ.ಹೆಚ್ ಬ್ಯಾಂಕ ಪಕ್ಕದಲ್ಲಿರುವ ರಸ್ತೆಯಲ್ಲಿ  ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಚಿಂಚೋಳ್ಳಿ ಲೇಔಟದಲ್ಲಿ ಇರುವ ಎಸ್.ಬಿ.ಹೆಚ್ ಬ್ಯಾಂಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಬ್ಯಾಂಕ ಪಕ್ಕದಲ್ಲಿರುವ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ  ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವರನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಲಕ್ಷ್ಮಿಕಾಂತ ತಂದೆ ರಾಚಣ್ಣ ರಾಯಗೊಂಡ ಸಾ: ಪಟ್ಟಣ ತಾ:ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1620/- ರೂ 2) 4 ಮಟಕಾ ಬರೇದ ಚೀಟಿಗಳು ಅ:ಕಿ: 00 3) ಒಂದು ಬಾಲ ಪೇನ್  ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ 06/03/2018 ರಂದು ಸಾಯಂಕಾಲ ನಮ್ಮೂರಿನ ಶ್ರೀನಾಥ ನಾಕಮನ ಇತನು ನನಗೆ ಪೋನ್ ಮಾಡಿ ತಿಳಿಸಿದೆನೆಂದರೆ ನಾನು ಮತ್ತು ಸಿದ್ರಾಮ ಕಗ್ಗನಮಡ್ಡಿ  ಇಬ್ಬರು ಕೂಡಿಕೊಂಡು ನಮ್ಮೂರಿನಿಂದ ಸಿರಗಾಪೂರ ಕ್ರಾಸನ್ ಕಡೆಗೆ ಹೋಗುತ್ತಿದ್ದಾಗ ನಮ್ಮ ಹಿಂದಿನಿಂದ ಒಂದು ಇನೊವಾ ಕಾರ ಚಾಲಕನು ತನ್ನ ಕಾರನ್ನು ಅತೀ ವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮಗೆ  ಸೈಡ ಹೊಡೆದು ಮುಂದೆ ಹೋಗಿ ಭೂಸಣಗಿ ಸಿಮಾಂತರ ಚನ್ನಬಸಪ್ಪ ಮಹಾಜನ ಇವರ ಹೊಲದ ಹತ್ತಿರ ರೋಡಿನ ಬದಿಗೆ ತಗ್ಗಿನಲ್ಲಿ ತನ್ನ ಕಾರನ್ನು ಪಲ್ಟಿ ಮಾಡಿ ಅಪಘಾತ ಪಡಿಸಿದ್ದು ಆಗ ಹಿಂದಿನಿಂದ ಬರುತ್ತಿದ ನಾನು ಮತ್ತು ಸಿದ್ರಾಮ ಕಗ್ಗನಮಡಿ ಇಬ್ಬುರು ಸಮೀಪ ಹೋಗಿ ನೊಡಲಾಗಿ ಅಪಘಾತಕಿಡಾದ ಇನೊವಾ ಕಾರನಲ್ಲಿ ನಮ್ಮೂರ ತುಳಜಪ್ಪ ತಂದೆ ಮರಗಪ್ಪ ನಾಕಮನ ಮತ್ತು ಕಲಹಂಗರಗಾ ಗ್ರಾಮದ ಲಕ್ಷ್ಮಣ ತಂದೆ ತಿಮ್ಮಯ್ಯ ಮಂಜಾಳಕರ ಇವರು ಇದ್ದು ತುಳಜಪ್ಪ ಇತನಿಗೆ ತಲೆ ಹಿಂದೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಲಕ್ಷ್ಮಣ ತಂದೆ ತಿಮ್ಮಯ್ಯ ಇತನಿಗೆ ಹಣೆಯ ಮೇಲೆ ಕಣ್ಣಿನ ಮೇಲೆ ತಲೆಯ ಹಿಂದೆ ಮತ್ತು ಕುತ್ತಿಗೆ ಸಾದ ಮತ್ತು ಭಾರಿ ರಕ್ತಗಾಯವಾಗಿದ್ದು ನಾವಿಬ್ಬರು ಕೂಡಿಕೊಂಡು ತುಳಜಪ್ಪಾ ಮತ್ತು ಲಕ್ಷ್ಮಣ ಇವರನ್ನು ಕಾರಿನಿಂದ ಹೊರಗೆ ತೆಗೆದೇವು ಕಾರು ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಸಿದ್ದಬಸವ ತಂದೆ ಶ್ರೀಮಂತ ಕಣ್ಣೂರ ಸಾ|| ಬಬಲಾದ (ಐ.ಕೆ) ಅಂತ ಹೇಳಿರುತ್ತಾನೆ ಅಂತ ನನಗೆ ತಿಳಿಸಿದ್ದು ಆಗ ನಾನು ಮತ್ತು ನಮ್ಮೂರಿನ ಇತರರು ಕೂಡಿಕೊಂಡು ಬಬಲಾದದಿಂದ ಬೂಸಣಗಿ ಸಿಮಾಂತರದ ಚನ್ನಬಸಪ್ಪ ಮಹಾಜನ ಇವರ ಹೊಲದ ಹತ್ತಿರ ಹೋಗಿ ನೊಡಲಾಗಿ ಶ್ರೀನಾಥ ನಾಕಮನ ಇವನು ಹೇಳಿದಂತೆ ಘಟನೆ ಜರುಗಿದ್ದು ನಾವೇಲ್ಲರು ಬಂದಿರುವುದನ್ನು ನೋಡಿ ಕಾರ ಚಾಲಕ ಸಿದ್ದಬಸವನು ತನ್ನ ಕಾರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ .ಇನೊವಾ ಕಾರ ನಂ ಕೆ.ಎ-32 ಎಂ.ಬಿ-8001 ನೇದರ ಚಾಲಕ ಸಿದ್ದಬಸವ ತಂದೆ ಶ್ರೀಮಂತ ಸಾ|| ಬಬಲಾದ (ಐ.ಕೆ)  ಇತನ ಮೇಲೆ ಕಾನೂನು ಕ್ರಮ ಕೈಗೊಳಬೇಕು ಅಂತಾಶ್ರೀ ಭವಾನಿ ತಂದೆ ಮರಗಪ್ಪ ನಾಕಮನ  ಸಾ :| ಬಬಲಾದ ಐಕೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ  ಮಲ್ಲಿಕಾರ್ಜುನ ಶಿರಗಾಪೂರ ಸಾ||ಲಿಂಗನವಾಡಿ ಇವರ ತಂದೆ-ತಾಯಿಗೆ ನಾನು ಮತ್ತು ಮಹಾದೇವಪ್ಪಾ ಅಂತಾ ಇಬ್ಬರು ಗಂಡು ಮಕ್ಕಳಿದ್ದು ನಮ್ಮ ತಂದೆ-ತಾಯಿ ಇಬ್ಬರು ಮೃತಪಟ್ಟಿದ್ದು ಪಿತ್ರಾರ್ಜಿತ ಜಮೀನು ಹಂಚಿಕೊಂಡಿರುತ್ತೇವೆ. ಸದರಿ ಜಮೀನು ಸರ್ವೆಗಾಗಿ ಅರ್ಜಿ ಸಲ್ಲಿದ್ದು ಅದಂತೆ ಈಗ 2-3 ದಿವಸಗಳ ಹಿಂದೆ ಸರ್ವೇಮಾಡಿದ್ದು ಸದರಿ ಸರ್ವೆೇ ಕಾಲಕ್ಕೆ ಸರಪಳಿ ಹಿಡಿಯುವ ವಿಷಯವಾಗಿ ನಮ್ಮ ಅಣ್ಣನ ಮಗನಾದ ಗಿರಿಯಪ್ಪ ಈತನು ತನ್ನೊಂದಿಗೆ ತಕರಾರು ಮಾಡಿದ್ದು ಅವಾಗಿನಿಂದ ನಮ್ಮ ಅಣ್ಣ ಹಾಗೂ ಅವರ ಪರಿವಾರದವರು ನಮ್ಮ ಮೇಲೆ ಧ್ವೇಷ ಸಾದಿಸುತ್ತಿದ್ದು ದಿನಾಂಕ:06-03-2018 ರಂದು ಮುಂಜಾನೆ ನಾನು ನನ್ನ ಮಗನಾದ ಸಿದ್ರಾಮಪ್ಪಾ ಹಾಗೂ ನನ್ನ ಹೆಂಡತಿಯಾದ ಸುಮಂಗಲಾಬಾಯಿ ರವರು ಮಾತನಾಡುತ್ತಾ ನಮ್ಮ ಮನೆಯ ಮುಂದೆ ನಿಂತಿರುವಾಗ 1)ಮಹಾದೇವಪ್ಪ ತಂದೆ ಬೀಮಶ್ಯಾ ಶಿರಗಾಪುರ, 2)ಗಿರೇಪ್ಪ ತಂದೆ ಮಹಾದೇವಪ್ಪಾ ಶಿರಗಾಪೂರ 3)ಶಿವಪ್ಪ @ ಶಿವಕುಮಾರ ತಂದೆ ಮಹಾದೇವಪ್ಪಾ ಶಿರಗಾಪೂರ, 4)ವಿಜಯಕುಮಾರ ತಂದೆ ಮಹಾದೇವಪ್ಪ ಶಿರಗಾಪೂರ, 5)ಸವಿತಾಬಾಯಿ ಗಂಡ ಮಹಾದೇವಪ್ಪ ಶಿರಗಾಪೂರ, 6)ಜಗದೇವಿ ಗಂಡ ಗಿರೇಪ್ಪ ಶಿರಗಾಪೂರ ಮತ್ತು 7)ಶರಣಮ್ಮ ಗಂಡ ಶಿವಪ್ಪ ಶಿರಗಾಪೂರ ರವರುಗಳು ಎಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಮನೆಯ ಮುಂದೆ ನಿಂತು ನನಗೆ ಏ ಸೋಳೆ ಮಗನಾ ಸರ್ವೇ ಮಾಡುವ ಕಾಲಕ್ಕೆ ನನಗೆ ಬೈದಿದ್ದಿಯ್ಯಾ ಎಂದು ಗಿರೇಪ್ಪ ಇತನು ಅವಾಚ್ಯವಾಗಿ ಬೈಯ್ಯುತ್ತಿರುವಾಗ ನಾನು ಮತ್ತು ನನ್ನ ಮಗ ಸಿದ್ರಾಮಪ್ಪಾ ಹಾಗೂ ನನ್ನ ಹೆಂಡತಿ ಸುಮಂಗಲಾಬಾಯಿ ರವರುಗಳು ಕೂಡಿ ಅವರ ಹತ್ತಿರ ಹೋಗಿ ವಿಚಾರಿಸುತ್ತಿರುವಾಗ ಮಹಾದೇವಪ್ಪ ಮತ್ತು ಗಿರೇಪ್ಪ ಇವರುಗಳು ಬಡೆಗೆಯಿಂದ ನನ್ನ ಎಡಗಡೆ ಕಿವಿಗೆ ಹಾಗೂ ಹಣೆಗೆ ಹೊಡೆದ್ದಿದ್ದರಿಂದ ಕಿವಿಗೆ ಭಾರಿಗಾಯವಾಗಿ ಹರಿದಂತೆ ಕಂಡುಬರುತ್ತಿದೆ. ಅಷ್ಟರಲ್ಲಿಯೇ ನನ್ನ ಮಗನಾದ ಸಿದ್ರಾಮಪ್ಪಾ ಈತನು ಜಗಳ ಬಿಡಿಸಲು ಬಂದಾಗ ಶಿವಪ್ಪ ಮತ್ತು ವಿಜಯಕುಮಾರ ಇವರುಗಳು ಬಡಿಗೆಯಿಂದ ನನ್ನ ಮಗನ ತಲೆಗೆ ಬೆನ್ನಿಗೆ ಎಡಗಾಲ ತೊಡೆಗೆ ಹೊಡೆದ್ದಿದ್ದರಿಂದ ಒಳಪೆಟ್ಟಾಗಿದೆ ಸುಮಿತ್ರಾಬಾಯಿ ಜಗದೇವಿ ಶರಣಮ್ಮ ರವರುಗಳು ಕೂಡಿ ನನಗೆ ನೆಲಕ್ಕೆ ಕೆಡವಿ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ಅಷ್ಟರಲ್ಲಿಯೇ ಅಲ್ಲಿಯೇ ಇದ್ದ ನನ್ನ ಹೆಂಡತಿಯಾದ ಸುಮಂಗಲಾಬಾಯಿ ಹಾಗೂ ನಮ್ಮ ಗ್ರಾಮದ ಮಲ್ಲಣ್ಣ ತಂದೆ ಚನ್ನಬಸಪ್ಪ ಇಂಡಿ ಮತ್ತು ಮಹಾದೇವಪ್ಪ ತಂದೆ ಸಿದ್ರಾಮಪ್ಪ ಇಂಡಿ ರವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ಗಿರೇಪ್ಪ ಹಾಗೂ ಶಿವಪ್ಪ ನನಗೆ ಹಾಗೂ ನನ್ನ ಮಗನಿಗೆ ಇವತ್ತು ನೀವು ಉಳಿದ್ದಿದ್ದಿ ಮಕ್ಕಳ್ಳೆ ಮುಂದೆ ಒಂದ್ದಾಲ್ಲ ಒಂದು ದಿವಸ ನಿಮಗೆ ಖಲಾಸ ಮಾಡುತ್ತೇವೆ ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.