POLICE BHAVAN KALABURAGI

POLICE BHAVAN KALABURAGI

30 January 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಫರತಾಬಾದ ಠಾಣೆ :  ದಿನಾಂಕ 29/01/18 ರಂದು ಈರಣ್ಣಾ ತಂದೆ ದೇವಿಂದ್ರ ಮಮ್ಮಾಣಿ ಸಾ; ಪಿರೋಜಾಬಾದ ತಾ: ಜಿ: ಕಲಬುರಗಿ  ಇತನು ಪಿರೋಜಾಬಾದ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆ ದುಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಫರಥಾಬಾದ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಸದರಿಯವನ್ನನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 2200/-ರೂ ಹಾಗೂ ಒಂದು ಬಾಲ ಪೆನ್ನ, 2 ಮಟಕಾ ಚೀಟಿ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ಧಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ: 28/01/18 ರಂದು ಮೃತ ರಾಘವೇಂದ್ರ ಈತನು ಸರಡಗಿ (ಬಿ) ಗ್ರಾಮದ ಬ್ರೀಡ್ಜ ಕಮ್ ಬ್ಯಾರೇಜಗೆ ಮೃತ ರಾಘವೇಂದ್ರ ಹಾಗೂ ಆತನ ಸೇಹ್ನಿತರು ಇಜಾಡಲು ಹೋದಾಗ ರಾಘವೇಂದ್ರ ಈತನು ಇಜಾಡುತ್ತಾ ನೀರಿನಲ್ಲಿ ಮುಳಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾನೆ ಸದರಿಯವನ ಸಾವಿನಲ್ಲಿ ಯಾರ ಮೇಲೆ ಸಂಶಯ  ಇರುವುದಿಲ್ಲಾ ಅಂತ  ಶ್ರೀಮತಿ ಸುವರ್ಣ ಗಂಡ ದಿ: ರಾಜು ಮಡಿವಾಳ ಸಾ; ಬಿದ್ದಾಪೂರ ಕಾಲನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ರಮೇಶ ತಂದೆ ಭೀಮಸಿಂಗ ಚವ್ಹಾಣ  ಸಾ: ಕೆರೂರ ತಾಂಡಾ ತಾಜಿ/ಕಲಬುರಗಿ  ಇವರು ದಿನಾಂಕ. 11-01-2018 ರಂದು ಬೆಳಗ್ಗೆ ನಮ್ಮ ಗ್ರಾಮದ ಕೇರೂರ ಬಸ್ಸಸ್ಟ್ಯಾಂಡ ಹತ್ತಿರ ಅನೀಲ್ ಪವಾರ ಇವರ ಹೋಟೆಲ ಎದರುಗಡೆ  ನಾನು ಮತ್ತು ನಮ್ಮ ಗ್ರಾಮದ ಮೂಸಾಖಾನ ಇಬ್ಬರು ಮಾತಾಡುತ್ತಾ ನಿಂತಿರುವಾಗ  ಅದೇ ವೇಳಗೆ ನಮ್ಮ ಗ್ರಾಮದ ಮೂಸಾಖಾನ ಇವರ ಅಣ್ಣನ ಮಗ ನಯಿಮಖಾನ ತಂದೆ ಸರದಾರ ಖಾನ  ಇತನು ನಮ್ಮ ಹತ್ತಿರ ಬಂದು ,, ಏನೋ ಲಮಾಣಿ ಸೂಳೆ ಮಗನೆ ನಮ್ಮ ಕಾಕನಿಗೆ ಏನು ಚುಗಲಿ ಹೇಳುತೀ ಅಂತಾ ಅವಾಚ್ಯ ಶಬ್ದಗಳಿಂದ ಜ್ಯಾತಿ ನಿಂದನೆ ಮಾಡಿ ಬೈಯ್ದನು ಆಗ ನಾನು ಬೇರೆ ವಿಷಯ ಮಾತಾಡುತಿದ್ದೇವೆ ನಿನಗ್ಯಾಕೆ ಬೇಕು ಅಂತಾ ಕೇಳಿದ್ದಕ್ಕೆ ನನನ್ನು ತಡೆದು  ಎದೆಯ ಮೇಲಿನ ಅಂಗಿ ಹಿಡಿದು  ಲಮಾಣಿ ರಾಂಡಕೆ  ಚಿನಾಲಕೆ  ಬಹುತ ಹುವಾ ತೇರಾ  ಅಂತಾ ಜ್ಯಾತಿ ನಿಂದನೆ ಮಾಡಿ ಕೈಯಿಂದ ಕಪಾಳಕ್ಕೆ ಹೊಡೆದನು  ಅಷ್ಟರಲ್ಲಿ ಅಲ್ಲಿಯೇ ಇದ್ದ ಸುಭಾಶ ತಂದೆ ಲೋಬು ಚವ್ಹಾಣ, ಉಮೇಶ ರಾಠೋಡ ,ವಿಯಕುಮಾರ ಚವ್ಹಾಣ ,ಮನೋಹರ ರಾಠೋಡ  ಬೀರಪ್ಪಾ ಪೂಜಾರಿ ಹಾಗೂ ಮೂಸಾಖಾನ ಇವರು ಬಂದು ಜಗಳ ಬಿಡಿಸಿಕೊಂಡಿರುತ್ತಾರೆ. ಆಗ ನಯಿಮಖಾನ ಇತನು ನನಗೆ ಅಡಿಜಂಗಲಿ ಸೂಳೆ ಮಗನೆ ಲಮಾಣ್ಯ ಇನ್ನೊಂದು ಬಾರಿ ನಮ್ಮ ವಿಷಯದಲ್ಲಿ ಅಡ್ಡ ಬಂದರೆ ಖಲಾಸ ಮಾಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 January 2018

KALABURAGI DISTRICT REPORTED CRIMES

ಮಧ್ಯ ಪ್ರದೇಶದಿಂದ ನಾಡ ಪಿಸ್ತೂಲ್  ಮತ್ತು ಗುಂಡುಗಳು ಮಾರಾಟ ಮಾಡಲು ಬಂದ ಕುಖ್ಯಾತಿ ವ್ಯಕ್ತಿಯ ಬಂಧನ
ಗ್ರಾಮೀಣ ಠಾಣೆ : ದಿನಾಂಕ 27/01/18 ರಂದು ಬೆಳಗಿನ ಸಮಯದಲ್ಲಿ ಆಳಂದ ರೋಡಿಗೆ ಇರುವ ವಿಶ್ವರಾಧ್ಯ ಗುಡಿ ದಾಟಿ ರೇಲ್ವೆ ಬ್ರೀಡ್ಜ ಹತ್ತಿರ ಒಬ್ಬ ವ್ಯಕ್ತಿ ಅಕ್ರಮವಾಗಿ ಆಯುಧ ಇಟ್ಟುಕೊಂಡು ತಿರುಗಾಡುತ್ತಿದ್ದಾನೆ ಎಂಬ ಖಚಿತ ಬಾತ್ಮಿ ಮೇರೆಗೆ ಮಾನ್ಯ ಶ್ರೀ ಎಸ್. ಶಶಿಕುಮಾರ ಐ.ಪಿ.ಎಸ್. ಪೊಲೀಸ ಅಧೀಕ್ಷಕರು ಕಲಬುರಗಿ,  ಮಾನ್ಯ ಶ್ರೀ ಜಯಪ್ರಕಾಶ ಕೆ.ಎಸ್.ಪಿ.ಎಸ್. ಅಪರ ಜಿಲ್ಲಾ  ಪೊಲೀಸ ಅಧೀಕ್ಷಕರು ಕಲಬುರಗಿ, ಮಾನ್ಯ ಶ್ರೀ ಎಸ್.ಎಸ್. ಹುಲ್ಲೂರು ಡಿ.ಎಸ್.ಪಿ.(ಗ್ರಾ) ಉಪವಿಭಾಗ ಕಲಬರುಗಿ, ಮಾನ್ಯ ಶ್ರೀ ಎ. ವಾಜೀದ ಪಟೇಲ್ ಸಿ.ಪಿ.ಐ. ವೃತ್ತ ಕಲಬುರಗಿ  ರವರ ಮಾರ್ಗದರ್ಶನದಲ್ಲಿ  ಶ್ರೀ ಚಂದ್ರಶೇಖರ ಪಿ.ಎಸ್.ಐ. (ಕಾ.ಸು.) ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ, ಮತ್ತು ಶ್ರೀ ಶ್ರೀಶೈಲ್ ಪ್ರೊ. ಪಿ.ಎಸ್.ಐ. ಹಾಗೂ  ಅವರ ಸಿಬ್ಬಂದಿಯವರಾದ ಹುಸೇನಬಾಷಾ, ರಾಜಕುಮಾರ, ಅಂಬಾಜಿ,  ಕುಶಣ್ಣಾ, ಶಾಂತಕುಮಾರ, ಶಿವಶರಣಪ್ಪ, ಶಿವಶರಣಪ್ಪ. ಈರಣ್ಣಾ, ಶರಣಗೌಡ,  ಶರಣು ಸಲಗರ, ಚನ್ನಬಸಯ್ಯ    ಇವರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ ವಿಶ್ವರಾಧ್ಯ ಗುಡಿ ದಾಟಿ ರೇಲ್ವೆ ಬ್ರೀಡ್ಜ ಹತ್ತಿರ ತಿರುಗಾಡುತ್ತಿದ್ದ ಸಿಕಂದರ ತಂದೆ  ಗುಲಾಬಸಿಂಗ ಡಾವರ ವ:20 ವರ್ಷ  ಸಾ: ಬಾರಿಯಾ ತಾ: ಮುನಾವರ  ಜಿಲ್ಲಾ ಧಾರ ಮಧ್ಯಪ್ರದೇಶ ರಾಜ್ಯ ಇತನಿಗೆ ಹಿಡಿದು ಅವನಿಂದ ಮಾರಾಟ ಮಾಡಲು ತಂದಿದ್ದ ಎರಡು ನಾಡಪಿಸ್ತೂಲಗಳು ಮತ್ತು 15 ಜೀವಂತ ಗುಂಡುಗಳು ಜಪ್ತ ಪಡಿಸಿಕೊಂಡಿದ್ದು, ಅವುಗಳನ್ನು ಯಾತಕ್ಕಾಗಿ ತಂದಿರುವಿ ಅಂತಾ ವಿಚಾರಿಸಿದಾಗ ಅವನ ಗೆಳೆಯರಾದ 2) ಬಚನಸಿಂಗ ತಂದೆ ಭೀಮಸಿಂಗ  3) ಸರವಣಸಿಂಗ ತಂದೆ ಇಂದ್ರಸಿಂಗ 4) ಈಶ್ವರಸಿಂಗ ತಂದೆ ಪ್ರಧಾನಸಿಂಗ ಸಾ: ಎಲ್ಲರೂ ವರ್ಷ  ಸಾ: ಬಾರಿಯಾ ತಾ: ಮುನಾವರ  ಜಿಲ್ಲಾ ಧಾರ ಮಧ್ಯಪ್ರದೇಶ ರಾಜ್ಯ ಮತ್ತು ಇನ್ನೂ ಇತರರು ಸಮಾನ ಉದ್ದೇಶದಿಂದ  ಹಣ ಗಳಿಸುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಆಯುಧಗಳು ಮಾರಾಟ ಮಾಡಲು  ಕಳುಹಿಸಿಕೊಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ.  ಸದರಿಯವನಿಗೆ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡುತ್ತಿದ್ದು, ಇನ್ನುಳಿದ ಆರೋಪಿ ದಸ್ತಗಿರಿ ಕುರಿತು ತಂಡವನ್ನು ರಚನೆ ಮಾಡಿ ದಸ್ತಗಿರಿ ಕುರಿತು ಜಾಲವನ್ನು ಬೀಸಿದ್ದು ಇರುತ್ತದೆ. ಆಕ್ರಮ ಆಯುಧ ಮತ್ತು ಗುಂಡುಗಳು ಮಾರಾಟ ಮಾಡಲು ಬಂದವವನ್ನು ಪತ್ತೆ ಹಚ್ಚಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು  ನಮ್ಮ ಮೇಲಾಧಿಕಾರಿಯವರು ಮೆಚ್ಚುಗೆ ವ್ಯಕ್ತ ಪಡಿಸಿರುತ್ತಾರೆ. 
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಬ್ರಹ್ಮಪೂರ ಠಾಣೆ : ಶ್ರೀ. ಕಪೀಲದೇವ ಪಿ.ಐ ಡಿ.ಸಿ.ಬಿ ಘಟಕ ಕಲಬುರಗಿ ರವರು ದಿನಾಂಕ: 26/01/2018 ರಂದು ತಮ್ಮ ಸಿಬ್ಬಂದಿಯವರಾದ ಸೂರ್ಯಕಾಂತ ಎ.ಎಸ್.ಐ, ದೇವೆಂದ್ರ ಹೆಚಸಿ-186, ಅಶೋಕ ಪಿ.ಸಿ-1045, ಶಿವಪ್ರಕಾಶ ಪಿ.ಸಿ-615, ಸುರೇಶ ಪಿ.ಸಿ-455, ಮಲಕಪ್ಪ ಬಿ.ಎನ್. ಪಿ.ಸಿ 442 ಮತ್ತು ಶ್ರೀ. ಎಸ.ಎಮ್.ಯಾಳಗಿ ಪಿ.ಐ, ಶ್ರೀ. ಬಸಲಿಂಗಪ್ಪ ಪ್ರೋ. ಪಿ.ಎಸ.ಐ ರವರು ಬ್ರಹ್ಮಪೂರ ಪೊಲೀಸ ಠಾಣೆಯಲ್ಲಿದ್ದಾಗ ಬ್ರಹ್ಮಪೂರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಗಾಜಿಪೂರ ಬಡಾವಣೆಯ ಸುಖ ಸಾಗರ ಲಾಡ್ಜ ಹತ್ತಿರ ಇರುವ ಗೌಡಪ್ಪಗೌಡ ಪಾಟೀಲ ಇವರ 2ನೇ ಮಹಡಿಯಲ್ಲಿರುವ ಮಹಾಲಕ್ಷ್ಮೀ ಫೈನಾನ್ಸದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ  ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ, ಮಾನ್ಯ ಅಪರ್ ಎಸ.ಪಿ ಸಾಹೇಬರು ಕಲಬುರಗಿ ರವರ ಮಾರ್ಗದರ್ಶನದಲ್ಲಿ ಮಾನ್ಯ ಎ.ಎಸ.ಪಿ ಎ ಉಪವಿಭಾಗ ಕಲಬುರಗಿ ರವರಿಂದ ದಾಳಿ ಮಾಡಲು ಅನಮತಿ ಪಡೆದುಕೊಂಡು ಮಾನ್ಯ ಮಿಥುನ್ ಕುಮಾರ ಜಿ.ಕೆ ಐ.ಪಿ.ಎಸ್  ಪ್ರೋ. ಎ.ಎಸ್.ಪಿ ಇವರ ನೇತೃತ್ವದಲ್ಲಿ ಸೂಪರ ಮಾರ್ಕೆಟ ಟೀನಾ ಎಂಟರಪ್ರೈಜೇಸ್ ಅಂಗಡಿ ಎದುರುಗಡೆಯಿಂದ ಹೋಗಿ ಹಳೆ ಕೆ.ಎಸ್.ಆರ್.ಪಿ ಗ್ರೌಂಡ ಹತ್ತಿರ ಜೀಪಗಳನ್ನು ನಿಲ್ಲಿಸಿ ನಾವು ಜೀಪನಿಂದ ಇಳಿದು ನಡೆಯುತ್ತಾ ಸದರಿ ಸ್ಥಳಕ್ಕೆ ಫೈನಾನ್ಸ ಕಟ್ಟಡದ ಸಿಡಿಯ ಮರೆಯಲ್ಲಿ ನಿಂತು ನೋಡಲು ಮಹಾಲಕ್ಷ್ಮಿ ಪೈನಾನ್ಸ ಒಳಗಡೆ ಲೈಟಿನ ಬೆಳಕಿನಲ್ಲಿ 20 ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ 100 ರೂಪಾಯಿ ಬಾಹರ 100 ರೂಪಾಯಿ ಅಂತಾ ಇಸ್ಪೇಟ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಮಾನ್ಯ ಮಿಥುನ್ ಕುಮಾರ ಜಿ.ಕೆ ಐ.ಪಿ.ಎಸ್ ಪ್ರೋ. ಎ.ಎಸ್.ಪಿ ರವರ ನೇತೃತ್ವದಲ್ಲಿ ನಾವು ದಾಳಿ ಮಾಡಿ 20 ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಲು ತಮ್ಮ ಹೆಸರುಗಳು 1) ರೇವಣಸಿದ್ದಪ್ಪ ತಂದೆ ಸಂಗಣ್ಣಾ ಪಾಟೀಲ ಸಾಃ ಪಾಳಾ ತಾಃಜಿಃ ಕಲಬುರಗಿ 2) ಮಹ್ಮದ ರಫೀಕ ತಂದೆ ಅಹ್ಮದ ಷಾ ಸಾಃ ಪೇಠ ಶಿರೂರ ತಾಃ ಚಿತ್ತಾಪೂರ 3) ಸುಧೀರ ತಂದೆ ಶಿವಶರಣಪ್ಪ ಮರಾಠಾ ಸಾಃ ಪೇಠಶಿರೂರ ತಾಃ ಚಿತ್ತಾಪೂರ ಜಿಃ ಕಲಬರಗಿ 4) ಸಂತೋಷ ತಂದೆ ಹಣಮಂತರಾಯ ಬಿರಾದಾರ ಸಾಃ ತಾರಾಪೂರ ತಾಃಸಿಂದಗಿ ಜಿಃ ವಿಜಯಪೂರ 5) ಗೌಡಪ್ಪ ತಂದೆ ಯಶ್ವಂತರಾಯ ಮಾಲಿಪಾಟೀಲ ಸಾಃ ಪಾಳಾ ತಾಃ ಜಿಃ ಕಲಬುರಗಿ 6) ಶರಣಸಿಂಗ ತಂದೆ ಸುಭಾಶ್ಚಂದ್ರ ರಜಪೂತ ಸಾಃ ಖಾಜಾಕೋಟನೂರ ತಾಃಜಿಃ ಕಲಬುರಗಿ 7) ಮಳಿಸ್ವಾಮಿ ತಂದೆ ರೇವಣಸಿದ್ದಯ್ಯ ಹಿರೇಮಠ ಸಾಃ ಪಾಳಾ ತಾಃಜಿಃ ಕಲಬುರಗಿ 8) ಸಿದ್ದರಾಮ ತಂದೆ ಶಿವಶರಣಪ್ಪ ಗೂಡುರ ಸಾಃ ಪೇಠಶಿರೂರ ತಾಃ ಚಿತ್ತಾಪೂರ ಜಿಃ ಕಲಬುರಗಿ 9) ಶರಣಬಸಪ್ಪ ತಂದೆ ಅಪ್ಪಾರಾವ ಪೂಜಾರಿ ಸಾಃ ಪೇಠಶಿರೂರ ತಾಃ ಚಿತ್ತಾಪೂರ ಜಿಃ ಕಲಬುರಗಿ 10) ಯೂನೂಸ ತಂದೆ ನದಿಮಸಾಬ ಮುಲ್ಲಾ ನಾಯಕ ಸಾಃ ಪೇಠಶಿರೂರ ತಾಃ ಚಿತ್ತಾಪೂರ ಜಿಃ ಕಲಬುರಗಿ 11) ಕಿಶನ ತಂದೆ ಭೀಮಲಾ ರಾಠೋಡ ಸಾಃ ನಂದೂರ 12) ಸುನೀತ ತಂದೆ ಸಿದ್ದು ಪಾಟೀಲ ಸಾಃ ಜಯನಗರ  ಕಲಬುರಗಿ 13) ಪ್ರಭುಲಿಂಗ ತಂದೆ ಸಿದ್ದಣ್ಣಾ ನಿಂಗಶೆಟ್ಟಿ ಸಾಃ ನೌಬಾದ ಬೀದರ 14) ಗಣೇಶ ತಂದೆ ಪಾಂಡು ಪವ್ಹಾರ ಸಾಃ ತಿಲಕ ನಗರ ಕಲಬುರಗಿ 15) ಕಲ್ಯಾಣಸಿಂಗ ತಂದೆ ಲಕ್ಷ್ಮಣಸಿಂಗ ರಜಪೂತ ಸಾಃ ಪೇಠಶಿರೂರ ತಾಃ ಚಿತ್ತಾಪೂರ 16) ಬಸವರಾಜ ತಂದೆ ಶೀವರಾಜ ಪಾಳಾ ಸಾಃ ಪಾಳಾ ತಾಃಜಿಃ ಕಲಬುರಗಿ 17) ಕಾಶೀನಾಥ ತಂದೆ ಶಂಕ್ರೇಪ್ಪ ಗೌಡ ಮಾಲಿಪಾಟೀಲ ಸಾಃ ಬಸವೇಶ್ವರ ಕಾಲನಿ ಕಲಬುರಗಿ 18) ಶರಣಬಸಪ್ಪ ತಂದೆ ರೇವಣಸಿದ್ದಪ್ಪ ಬಿಲಗುಂದಿ ಸಾಃ ಧರ್ಮಾಪೂರ ಕಲಬುರಗಿ 19) ಗುರುರಾಜ ತಂದೆ ಚನ್ನಣ್ಣಾ ರಾವೂರ ಸಾಃ ಜೇವರಗಿ ಜಿಃ ಕಲಬುರಗಿ 20) ಶರಣು ತಂದೆ ಶಿವಾನಂದ ಉಪ್ಪಿನ ಸಾಃ ಎನ್.ಆರ್ ಕಾಲನಿ ಕಲಬುರಗಿ ಹೀಗೆ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 91,770/- ರೂ ಹಾಗೂ 52 ಇಸ್ಪೆಟ್ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಬ್ರಹ್ಮಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಹೋದವರ್ಷ ಮೊಹರಮ್ಮ ಹಬ್ಬದ ಮಜ್ಮಾ ಸಂದರ್ಭದಲ್ಲಿ ನಮ್ಮೂರಿನ ಮೊಹಾನಂದ ತಂದೆ ಹಣಮಂತ ನಡುಕರ ನಾಗರಾಜ ತಂದ ಹಣಮಂತ ಕಾಂಬಳೆ ಹಾಗೂ ಶ್ರೀಕಾಂತ ತಂದೆ ಬಸಣ್ಣ ಹೊಸಮನಿ ರವರುಗಳು ಕೂಡಿ ಮಜ್ಮಾದಲ್ಲಿ ಡ್ಯಾನ್ಸ ಮಾಡುವ ವಿಷಯವಾಗಿ ನನ್ನೊಂದಿಗೆ ತಕರಾರು ಮಾಡಿರುತ್ತಾರೆ. ಅವಾಗಿನಿಂದ ಸದರಿಯವರು ನನ್ನ ಮೇಲೆ ದ್ವೇಷ ಬೆಳೆಸಿಕೊಂಡು ನನ್ನನ್ನು ಗುರಾಯಿಸಿ  ನೋಡುವುದು ಮಾಡುತ್ತಿದ್ದರು. ಹೀಗಿದ್ದು ಮೊನ್ನೆ ದಿನಾಂಕ:25/01/2018 ರಂದು ಸಂಜೆ ನಾನು ವೈಯಕ್ತಿಕ ಕೆಲಸಕ್ಕಾಗಿ ನಮ್ಮೂರಿನಿಂದ ಶ್ರೀಚಂದ ಗ್ರಾಮಕ್ಕೆ ಹೋಗಿ ವಾಪಸ್ಸು ನಮ್ಮೂರಿಗೆ ನನ್ನ ಮೊಟಾರ್ ಸೈಕಲ್ ಸಂ ಕೆಎ25-ಎಸ್4981 ನೇದ್ದರ ಮೇಲೆ ಹೋಗುವಾಗ ಶ್ರೀಚಂದ ಹಳ್ಳದ ಹತ್ತಿರದಲ್ಲಿದ್ದಾಗ ನಮ್ಮೂರಿನ ಮೊಹಾನಂದ, ನಾಗರಾಜ ಮತ್ತು ಶ್ರೀಕಾಂತರವರುಗಳು ಕೂಡಿ ನನ್ನ ಮೊಟಾರ್ ಸೈಕಲಗೆ ಅಡ್ಡಗಟ್ಟಿ ನಿಲ್ಲಿಸಿ ನನ್ನನ್ನು ಮೊಟಾರ್ ಸೈಕಲ್ ಮೇಲಿಂದಾ ಕೆಳಗೆ ಇಳಿಸಿ ಭೊಸಡಿ ಮಗನೆ ಹೋದವರ್ಷ ಮೊರಂ ಹಬ್ಬದಲ್ಲಿ ಮಜ್ಮಾ ವೇಳೆಯಲ್ಲಿ ಕುಣಿಯುತ್ತಿರುವಾಗ ನಮ್ಮೊಂದಿಗೆ ಜಗಳ ಮಾಡಿದ್ದು ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮೊಹಾನಂದನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಬೆನ್ನ ಮೇಲೆ ಹೊಡೆದನು. ನಾಗರಾಜನು ಸಹ ಕಬ್ಬಿಣದ ರಾಡಿನಿಂದ ನನ್ನ ಎಡಗಾಲು ತೊಡೆಗೆ ಹೊಡೆದನು ಮತ್ತು ಶ್ರೀಕಾಂತನು ಬಡಿಗೆಯಿಂದ ನನ್ನ ಎಡಗಡೆ ಮಗ್ಗಲಿಗೆ ಹೊಡೆದನು. ಇದರಿಂದ ಕಂದು ಗಟ್ಟಿದ ಗಾಯಗಳು ಆಗಿರುತ್ತವೆ. ಅಲ್ಲದೇ 3ಜನ ಕೂಡಿ ನನಗೆ ಕೈಮುಷ್ಠಿಮಾಡಿ ಮುಖದ ಮೇಲೆ ಹಾಗೂ ಹೊಟ್ಟೆಗೆ ಗುದ್ದಿರುತ್ತಾರೆ. ನಾನು ಅವರಿಂದ ಬಿಡಿಸಿಕೊಂಡು ನನ್ನ ಮೊಟಾರ್ ಸೈಕಲ್ ತಗೆದುಕೊಂಡು ನಮ್ಮೂರಿಗೆ ಬಂದು ವಿಷಯವನ್ನು ನಮ್ಮ ತಂದೆಯಾದ ಮೊದೀನಸಾಬ ತಾಯಿಯಾದ ಖಾಜಾಬಿ ರವರುಗಳು ಸದರಿ ವಿಷಯ ತಿಳಿಸಿ ನನಗೆ ಆದ ಗಾಯಗಳನ್ನು ತೋರಿಸಿದ್ದು ನನ್ನ ತಂದೆಯವರು ಮತ್ತು ನಾನು ಕೂಡಿ ನನ್ನ ಮೊಟಾರ್ ಸೈಕಲ್ ಮೇಲೆ ಅದೇ ದಿವಸ ಮದ್ಯರಾತ್ರಿ ಜಿಲ್ಲಾ ರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ಸೇರಿಕೆಯಾಗಿ ಉಪಚಾರ ಹೊಂದುತ್ತಿದ್ದೇನೆ. ಅಂತಾ ಶ್ರೀ ಇಸ್ಮಾಯಿಲ ತಂದೆ ಮೊದೀನಸಾಬ ಬೀದರ ಸಾ||ಅಪಚಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು
ಗ್ರಾಮೀಣ ಠಾಣೆ : ದಿನಾಂಕ 25/01/2018 ರಂದು ಮೃತ ರಾಜಶೇಖರ ಚವ್ಹಾಣ ಇತನು ತನ್ನ ಎವೆಂಜರ 150 ಸಿಸಿ ಮೋಟಾರ ಸೈಕಲ KA 32 EL 3283 ಮೇಲೆ ಒಬ್ಬನೇ ಕುಳಿತುಕೊಂಡು ಕಲಬುರಗಿಯಿಂದ ಕೇರೂರ ಗ್ರಾಮಕ್ಕೆ ಎಡ ರೋಡ ಬದಿಯಿಂದ ಮೋಟಾರ ಸೈಕಲ ನಡೆಸುತ್ತಾ ಹೊರಟಾಗ ಅವನ ಹಿಂದಿನಿಂದ ಕಾರ ನಂ  KA 28 N   0863 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಮೃತನ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಮೋಟಾರ ಸಮೇತ ರೋಡಿನ ಮೇಲೆ ಬಿದ್ದಾಗ ಅವನ ತಲೆಗೆ, ಬಲಗಣ್ನಿನ ಕೆಳೆಗೆ, ಎಡಗಣ್ಣಿಗೆ ಕೆಳೆಗೆ, ಬಲಗೈ ಮುಂಗೈಗೆ, ಬಲ ಅಂಗೈಗೆ, ಎಡಗೈ ತೋರು ಬೆರಳು  ಎಡಗಾಲು ಮೊಳಕಾಲಿಗೆ, ಪಾದದ ಹತ್ತಿರ, ಹಾಗೂ ಎದೆಯ ಮೇಲೆ,  ಬಲಗೈ ರಟ್ಟೆ ಹತ್ತಿರ, ರಕ್ತಗಾಯ ಮತ್ತು ತರಚಿದ ಗಾಯವಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಬಂದು ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದು, ಅದೇ ದಾರಿಯಿಂದ ಬರುತ್ತಿದ್ದ ಅದೇ ಗ್ರಾಮದ ಅನಿಲಕುಮಾರ ಇತನು ನೋಡಿ ಮೃತನ ತಂದೆಗೆ ಪೋನ ಮಾಡಿ ವಿಷಯ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ಮೃತನಿಗೆ ಯಾವುದೋ ಕ್ರೋಜರನಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಅಸ್ಪತ್ರೆ ಕಲಬುರಗಿಗೆ ತಂದಾಗ ವೈದ್ಯರು ನೋಡಿ ಈಗಾಗಲೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದ್ದು ಇರುತ್ತದೆ. ಸದರ ಚಾಲಕನು ಅಪಘಾತಪಡಿಸಿ ಹಾಗೇ ಓಡಿಸಿಕೊಂಡು ಹೋಗಿದ್ದು, ಕಾರ ಚಾಲಕನಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆಂದು ಅನಿಲಕುಮಾರನಿಂದ ಕೇಳಿ ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಗೌಸಪಾಕ ತಂದೆ ದಾವಲಸಾಬ ಸಾ||ಚೌದ್ರಿ ಗಲ್ಲಿ ಅಫಜಲಪೂರ ರವರು ದಿನಾಂಕ 23/01/2018 ರಂದು ನಾನು ಪಾಲದಿಂದ ಮಾಡಿದ ಕರಜಗಿ ರೋಡಿಗೆ ಇರುವ ಹೊಲಕ್ಕೆ ಹೋಗಿದ್ದು ಮದ್ಯಾಹ್ಮ ಒಂದು ಗಂಟೆ ಸುಮಾರಿಗೆ ನಡೆದುಕೊಂಡು ಹೊಗುತಿದ್ದಾಗ ರೌಫ ಪಟೇಲ ಹೊಲದ ಸಮೀಪ ಹಿಂದುಗಡೆಯಿಂದ ಒಂದು ಟ್ರ್ಯಾಕ್ಟರ ಚಾಲಕನು ಅತಿವೇಗ ಹಾಗು ಅಲಕ್ಷತನದಿಂದ ಓವರಟೇಕ ಮಾಡಲು ಹೋಗಿ ನನಗೆ ಹಿಂದಿನಿಂದ ಬಂದು ಡಿಕ್ಕಿ ಪಡಿಸಿದ್ದು ನಾನು ಕೆಳಗೆ ಬಿದ್ದೆನು ಎದ್ದು ನೋಡಲು ನನಗೆ ಬೆನ್ನಿಗೆ ಟೊಂಕಕ್ಕೆ ಭಾರಿ ಒಳಪೆಟ್ಟು ಗಾಯಗಳಾಗಿದ್ದು ಅಲ್ಲೆ ಇದ್ದ ಉಸ್ಮಾನಸಾಬ ತಂದೆ ದಸ್ತಗಿರಸಾಬ ಇವರು ಬಂದು ಟ್ರ್ಯಾಕ್ಟರ ನಂಬರ ನೋಡಲು ಕೆಎ-32 ಟಿಬಿ-2574 ನೇದ್ದು ಇದ್ದು ಚಾಲಕನ ಹೆಸರು ಸೊಂದುಸಾಬ ತಂದೆ ಅಲಿಸಾಬ ಜೋಗುರ ಸಾ||ಅಫಜಲಪೂರ ಇದ್ದು ಟ್ರ್ಯಾಕ್ಟರ ಚಾಲಕ ಹಾಗು ನನ್ನ ತಂದೆ ದಾವಲಸಾಬ ಇವರು ಖಾಸಗಿ ಜೀಪನಲ್ಲಿ  ಕಲಬುರಗಿಯ ಪಿಜಿ ಶಹಾ ದಾವಖಾನೆಗೆ ತಂದು ಸೇರಿಕೆ ಮಾಡಿದ್ದು ಉಪಚಾರ ಪಡೆಯುತಿದ್ದೆನೆ.ಸದರಿ ಟ್ರ್ಯಾಕ್ಟರ ನಂ ಕೆಎ-32 ಟಿಬಿ-2574 ನೇದ್ದರ ಚಾಲಕನು ನನಗೆ ಅಫಘಾತ ಪಡಿಸಿ ಟೊಂಕಕ್ಕೆ ಭಾರಿ ಗುಪ್ತ ಪೆಟ್ಟು ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ನಾಗೇಂದ್ರ ತಂದೆ ಗುರುಶಾಂತಪ್ಪ ವೀರಶೆಟ್ಟಿ ಸಾ: ಶರಣ ನಗರ ಶಹಾಬಾದ ಇವರು ಠಾಣೆಗೆ ಬಂದು ಪಿರ್ಯಾದಿ ಅರ್ಜಿ ನೀಡಿದ್ದು ಅದರ ಸಾರಂಶವೆನೆಂದರೆ ತನ್ನ ಹೆಂಡತಿಯಾದ ವಿಜಯಲಕ್ಷ್ಮಿ ಇವಳು ಅಂಗವಿಕಲಳಾಗಿದ್ದರಿಂದ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲಿಕರಣ ಇಲಾಖೆ ಕಲಬುರಗಿ ರವರು ಸರಕಾರದ ವತಿಯಿಂದ ಉಚಿತವಾಗಿ ಮೂರು ಚಕ್ರದ ಮೋಟಾರ ಸೈಕಲ ಕೊಡುತ್ತಿದ್ದರಿಂದ ನಾನು ಮತ್ತು ನನ್ನ ಹೆಂಡತಿ ಕೂಡಿ ದಿನಾಂಕ: 15/12/2017 ರಂದು ಮುಂಜಾನೆ ಹೋಗಿ ಮೊಟಾರ ಸೈಕಲ ತೆಗೆದುಕೊಂಡು ಮರಳಿ ಶಹಾಬಾದಕ್ಕೆ ಬರುವಾಗ ನನ್ನಹೆಂಡತಿಯ ಮೊಟಾರ ಸೈಕಲ ಚಲಾಯಿಸುತ್ತಿದ್ದು ಅವಳು ದೇವನ ತೆಗನೂರ ಗ್ರಾಮ ದಾಟಿ ಬಸವಣ್ಣ ಗುಡಿ ದಾಟಿ ರೋಡಿನಲ್ಲಿ ನನ್ನ ಹೆಂಡತಿಯು ಮೋಟಾರ ಸೈಕಲ ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ಮೋಟಾರ ಸೈಕಲದೊಂದಿಗೆ ಕೆಳಗಿ ಬಿದ್ದರಿಂದ ನನಗೆ ಎರಡು ಕೈಗಳಿಗೆ ಮತ್ತು ಬಲ ಮುಂಡಿಗೆ ಒಳಪೆಟ್ಟಾಗಿ ಗಾಯಾಪೆಟ್ಟಾಗಿರುತ್ತದೆ. ಮತ್ತು ಪಿರ್ಯಾದಿ ಹೆಂಡತಿಗೆ ಅವಳ ಬಲ ಗಾಲಿಗೆ ಮತ್ತು ತಲೆಗೆ ಬಾಯಿ ಹತ್ತಿರ ಗಾಯಾ ಪೆಟ್ಟಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 24.01.2018 ರಂದು 12-30 ಎ.ಎಮ ಸುಮಾರಿಗೆ ಮೃತ ನಾಸೀರ ಇತನು ಮೋಟಾರ ಸೈಕಲ ನಂ ಕೆಎ-32-ಇಎ-8060 ನೇದ್ದನ್ನು ಚಲಾಯಿಸಿಕೊಂಡು ಕಣ್ಣಿ ಮಾಕರ್ೆಟ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡಬಲ ಕಟ್ ಹೊಡೆಯುತ್ತಾ ಹೋಗಿ ಹೀರಾಪೂರ ರಿಂಗ ರೋಡ ಹತ್ತೀರ ಬರುವ ಸಿದ್ದಾರ್ಥ ನಗರದ ಕನರ್ಾಟಕ ಹೈಸ್ಕೂಲ ಎದುರಿನ ರೋಡಿನ ಮೇಲೆ ಒಮ್ಮಲೇ ಬ್ರೇಕ ಹಾಕಿ ಮೋಟಾರ ಸ್ಕಿಡ್ ಮಾಡಿ ಅಪಘಾತ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಬಿದ್ದು ಭಾರಿ ಗಾಯಹೊಂದಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿದ್ದು ನಾಸೀರ ಇತನು ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 25.01.2018 ರಂದು ಬೆಳಿಗ್ಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ.  ಅಂಆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

25 January 2018

KALABURAGI DISTRICT REPORTED CRIMES


ಕಳವು ಪ್ರಕರಣಗಳೂ :
ಸ್ಟೇಷನ ಬಜಾರ ಠಾಣೆ : ಶ್ರೀಮತಿ ವೈ. ಅರುಂಧತಿ ಗಂಡ ನಾಗಮೂರ್ತಿ ಶೀಲವಂತ ಸಾ: ಮನೆ ನಂ. 175/ಬಿ ಎಮ್.ಐ.ಜಿ ಕೆ.ಎಚ್.ಬಿ ಕಾಲೋನಿ ಗಾರ್ಡನ ಹತ್ತಿರ ಕಲಬುರಗಿ ರವರು ದಿನಾಂಕ 24/01/2018 ರಂದು 9-15 ಎ.ಎಂ.ಕ್ಕೆ ನನ್ನ ಗಂಡನಾದ ನಾಗಮೂರ್ತಿ ರವರು ಕೆಲಸಕ್ಕೆ ಹೋಗಿರುತ್ತಾರೆ. ನಾನು ನನ್ನ ಮನೆಯಲ್ಲಿ ಕೆಲಸ ಮುಗಿಸಿಕೊಂಡು 12 ಪಿ.ಎಂ ಸುಮಾರಿಗೆ ನ್ಯಾಯಾಲಯ ಕೆಲಸ ಕುರಿತು ಹೋಗುವಾಗ ನನ್ನ ತಮ್ಮನಾದ ಚಿದಾನಂದ ತಂದೆ ಯಲ್ಲಪ್ಪ ಇತನಿಗೆ ಮನೆಯಲ್ಲಿ ಬಿಟ್ಟು ಹೋಗಿರುತ್ತೇನೆ. ನನ್ನ ತಮ್ಮನಾದ ಚಿದಾನಂದ ಇತನು ನನ್ನ ಮಕ್ಕಳನ್ನು ಕರೆದುಕೊಂಡು ಬರಲು 3 ಪಿ.ಎಂ.ಕ್ಕೆ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ನನ್ನ ಗಂಡ ಕೆಲಸ ಮಾಡುವ ಪಿಡಬ್ಲೂಡಿ ಕಚೇರಿ ಹೋಗಿ ಗಂಡನ ಹತ್ತಿರ ಕಾರ ತೆಗೆದುಕೊಂಡು ಸ್ಕೂಲಿಗೆ ಹೋಗಿ ನನ್ನ ಮಕ್ಕಳನ್ನು ಕರೆದುಕೊಂಡು 4:30 ಪಿ.ಎಂ.ಕ್ಕೆ ಮನೆಗೆ ಬಂದು ನೋಡಿ ವಿಷಯ ತಿಳಿಸಿದ್ದೇನೆಂದರೆ ಮನೆ ಬಾಗಿಲಿಗೆ ಹಾಕಿದ ಕೀಲಿ ಮುರಿದು ಯಾರೋ ಕಳ್ಳರು ಪ್ರವೇಶ ಮಾಡಿ ಮನೆಯಲ್ಲಿರುವ ಅಲಮಾರಿ ಒಡೆದು ಅದರಲ್ಲಿನ ಸಾಮಾನುಗಳನ್ನು ಚೆಲ್ಲಾಪಿಲ್ಲಾ ಮಾಡಿರುತ್ತಾರೆ. ಅಂತಾ ತಿಳಿಸಿದಾಗ ನಂತರ ನನ್ನ ತಮ್ಮನು ನನ್ನ ಗಂಡನಿಗೆ ತಿಳಿಸಿದಾಗ ನನ್ನ ಗಂಡನು ಮನೆಗೆ ಬಂದು ನೋಡಲು ಮನೆಯ ಬಾಗಿಲು ಕೀಲಿ ಮುರಿದಿದ್ದು ಅಷ್ಟರಲ್ಲಿ ನನಗೆ ಪೋನ ವಿಷಯ ತಿಳಿಸಿದಾಗ ನಾನು ಕೂಡಾ ಮನೆಗೆ ಬಂದು ನೋಡಲಾಗಿ ಮನೆಯ ಅಲಮಾರಿಯಲ್ಲಿಟ್ಟಿರುವ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ವಾಚ ಮತ್ತು ನಗದು ಹಣ  ಹೀಗೆ ಒಟ್ಟು 6,81,000/- ರೂ ನೇದ್ದವುಗಳನ್ನು  ಯಾರೋ ಕಳ್ಳರು ಬಾಗಿಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ನಿಜಲಿಂಗಪ್ಪ ತಂದೆ ಶರಣಪ್ಪ ಹಳಿಮನಿ ಸಾ: ಜೆ.ಆರ್. ನಗರ ಜಿಡಿಎ ಕಾಲೋನಿ ಪ್ಲಾಟ ನಂ 31 ಶೇಖ ರೋಜಾ ಕಲಬುರಗಿ ಇವರು  ದಿನಾಂಕ 24.01.2018 ರಂದು ಕಾಲೇಜಗೆ ರಜೆ ಹಾಕಿ ನಾನು ನಮ್ಮ  ಸ್ವಂತ ಗ್ರಾಮವಾದ ನಿಂಬರ್ಗಾಕ್ಕೆ ಬೆಳ್ಳಿಗ್ಗೆ 11:00 ಗಂಟೆಗೆ ಹೋಗಿದ್ದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಾನು ನಮ್ಮ ಗ್ರಾಮ ಬಿಟ್ಟು ಮರಳಿ ಕಲಬುರಗಿ ಕಡೆಗೆ ಬರುತ್ತಿದ್ದು ನಾನು ಮಾರ್ಗ ಮಧ್ಯದಲ್ಲಿದ್ದಾಗ ಸಾಯಂಕಾಲ 5 ಗಂಟೆಯ ಸುಮಾರಿಗೆ ನಮ್ಮ ಮನೆಯ ಪಕ್ಕದವರಾದ ಶ್ರೀ ಮಹಾಂತೇಶ ಸಂಗೋಳಗಿ ಇವರು ನನಗೆ ಪೋನ ಮಾಡಿ ನಿಮ್ಮ ಮನೆ ಕಳ್ಳತನವಾಗಿದೆ ಅಂತ ತಿಳಿಸಿದ್ದು ಆಗ ನಾನು ಗಾಬರಿಗೊಂಡು ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯ ಮುಖ್ಯ ಬಾಗೀಲ ಕೊಂಡಿ ಮೂರಿದಿದ್ದು ಮನೆಯಲ್ಲಿದ್ದ ನನ್ನ ಹೆಂಡತಿಗೆ ವಿಚಾರಿಸಲು ಅವಳು ನನಗೆ ತಿಳಿಸಿದ್ದೆನೆಂದರೆ, ಮಧ್ಯಾನ 1:30 ಗಂಟೆಯ ಸುಮಾರಿಗೆ ಮನೆಯ ಬಾಗೀಲ ಬಂದ ಮಾಡಿ ಕೀಲಿ ಹಾಕಿಕೊಂಡು ಪಕ್ಕದಲ್ಲಿರುವ ತಂಗಿಯಾದ ಬಸಮ್ಮ ಗಂಡ ಬಾಬುರಾವ ಇವರ ಮನೆಗೆ ಹೋಗಿದ್ದು ಸಾಯಂಕಾಲ 4 ಗಂಟೆಯ ಸುಮಾರಿಗೆ ಬಂದು ನೋಡಲು ಮನೆಯ ಬಾಗಿಲಗೆ ಹಾಕಿದ ಕೀಲಿ ಹಾಗೇ ಇದ್ದು ಬಾಗಿಲ ಕೊಂಡಿ ಮುರಿದ್ದು ಗಾಬರಿಗೊಂಡು ಮನೆಯ ಒಳಗೆ ಹೋಗಿ ನೋಡಲು ಒಳಮನೆಯಲಿದ್ದ ಅಲಮಾರ ಕೀಲಿ ಮುರಿದಿದ್ದು ಅಲಮಾರಿಯಲ್ಲಿದ್ದ 1ಬಂಗಾರದ ಬೆಳ್ಳಿಯ ಆಭರಣಗಳು ಮತ್ತು  ನಗದು ಹಣ ಹೀಗೆ ಒಟ್ಟು 1 ಲಕ್ಷ 77 ಸಾವೀರ ರೂಪಾಯಿಯ ಬಂಗಾರದ ಆಭರಣ, ದಿನಾಂಕ 24.01.2018 ರಂದು ಮಧ್ಯಾನ 1:30 ಗಂಟೆಯಿಂದ ಸಾಯಂಕಾಲ 4 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗೀಲ ಕೊಂಡಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿ ಅಲಮಾರಿ ಕೀಲಿ ಅಲಮಾರಿಯಲ್ಲಿ  ಇಟ್ಟಿದ 1 ಲಕ್ಷ 77 ಸಾವೀರ ರೂಪಾಯಿಯ ಬಂಗಾರದ ಆಭರಣ, ಬೆಳ್ಳಿ ಸಾಮಾನುಗಳು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ  ಶಿವಾನಂದ ತಂದೆ ಶಂಕರ ಇರಗೊಂಡ ಸಾ|| ಮಾಶಾಳ ಇವರು ದಿನಾಂಕ 14-01-2018 ರಂದು ನನ್ನ ಹೆಂಡತಿ ತನ್ನ ತವರು ಮನೆಗೆ ಹೋಗಿರುತ್ತಾಳೆ. ರಾತ್ರಿ 9:00 ಗಂಟೆಗೆ ಊಟ ಮಾಡಿ ನಾನು ಮತ್ತು ನನ್ನ ತಾಯಿ ಹಾಗೂ ನನ್ನ ಮಗಳು ಮೂರು ಜನರು ನಮ್ಮ ಮನೆಯಲ್ಲಿ ಮೇಲಿನ ಅಂತಸ್ತಿನಲ್ಲಿ ಮಲಗಿಕೊಂಡಿರುತ್ತೇವೆ. ಎಂದಿನಂತೆ ಬೆಳಿಗ್ಗೆ 06:00 ಗಂಟೆಗೆ ಎದ್ದು ಕೆಳಗೆ ಬರಲಾಗಿ ನಮ್ಮ ಮನೆಯ ಬಾಗಿಲು ತೆರೆದಿದ್ದು, ಮನೆಯ ಕೋಣೆಯಲ್ಲಿದ್ದ ಟ್ರಜರಿಯ ಬಾಗಿಲು ಸಹ ತೆರೆದಿದ್ದು, ಟ್ರಜರಿಯಲ್ಲಿನ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿದ್ದವು. ಆಗ ನಾವು ಟ್ರಜರಿಯನ್ನು ಚೆಕ್ ಮಾಡಲಾಗಿ ಟ್ರಜರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ ಹೀಗೆ ಒಟ್ಟು 1,85,000/- ರೂ ಕಿಮ್ಮತ್ತಿನವುಗಳನ್ನು ದಿನಾಂಕ 14-01-2018 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 15-01-2018 ರಂದು ಬೆಳಿಗ್ಗೆ 06:00 ಗಂಟೆಯ ಮದ್ಯದ ಅವದಿಯಲ್ಲಿ ಯಾರೊ ಕಳ್ಳರು ಮಾಶಾಳ ಗ್ರಾಮದಲ್ಲಿರುವ ನಮ್ಮ ಮನೆಯ ಬಾಗಿಲ ಕೊಂಡಿಯನ್ನು ಮುರಿದು ಒಳಗೆ ಬಂದು, ಮನೆಯ ಕೋಣೆಯಲ್ಲಿ ಇಟ್ಟಿದ್ದ ಟ್ರಜರಿಯ ಬಾಗಿಲನ್ನು ಬೆಂಡ್ ಮಾಡಿ, ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಮುಧೋಳ ಠಾಣೆ : ಮುಧೋಳ ಠಾಣೆ : ಶ್ರೀ  ಸಯ್ಯದ್ ಯುನಸ್ ತಂದೆ ಯದುಲ್ಲಾ ಹುಸೇನ ಸಯ್ಯದ ಸಾ|| ಪರಿಗಿ ತಾ|| ಪರಿಗಿ ಜೀ|| ವಿಕರಾಬಾದ ರಾಜ್ಯ ತೆಲಂಗಾಣ ಇವರು ಸುಮಾರು 15-20 ವರ್ಷಳಿಂದ ಲಾರಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು ಈಗ ಸುಮಾರು 2 ವರ್ಷಗಳಿಂದ ಚಿತ್ತಪೂರದ ಓರಿಯಂಟಲ ಸಿಮೇಂಟ ಕಂಪನಿಯಲ್ಲಿ ನನ್ನ ಲಾರಿಯನ್ನು ಬಿಟ್ಟಿದ್ದು, ದಿನಾಲು ಅಲ್ಲಿಂದ ಸಿಮೆಂಟನ್ನು ಲೋಡ ಮಾಡಿಕೊಂಡು ಹೈದ್ರಾಬಾದಕ್ಕೆ ಹೋಗಿ ಅಲ್ಲಿ ಖಾಲಿ ಮಾಡಿ, ಅಲ್ಲಿಂದ ಬರುವಾಗ ಮಣ್ಣನ್ನು ತುಂಬಿಕೊಂಡು ಓರಿಯಂಟಲ ಕಂಪನಿಯಲ್ಲಿ ಖಾಲಿ ಮಾಡುತ್ತೇವೆ. ಎಂದಿನಂತೆ ದಿನಾಂಕ 19-01-2018 ರಂದು ಬೆಳಗ್ಗೆ 1-30 ಗಂಟೆಯ ಸುಮಾರಿಗೆ ನನ್ನ ಲಾರಿಯಲ್ಲಿ ಓರಿಯಂಟಲ್ ಸಿಮೇಂಟ ಕಂಪನಿಯಿಂದ ಸಿಮೇಂಟ ಚೀಲಗಳನ್ನು ತುಂಬಿಕೊಂಡು ಹೈದ್ರಾಬಾದಕ್ಕೆ ಹೊರಟಿದ್ದು, ಲಾರಿಯನ್ನು ನಾನು ನಡೆಸುತ್ತಿದ್ದು ಕ್ಲೀನರ ಆಗಿ ಸದರಿ ಇರ್ಫಾನ ಇದ್ದನು. ನಾನು ನನ್ನ ಸಿಮೇಂಟ ತುಂಬಿದ ಲಾರಿಯನ್ನು ಚಲಾಯಿಸಿಕೊಂಡು ಸೇಡಂ,ಕೊಡಂಗಲ ಮಾರ್ಗವಾಗಿ ಹೈದ್ರಾಬಾದಕ್ಕೆ ಹೋಗುತ್ತಿದ್ದಾಗ ಬೆಳಗ್ಗಿನ ಜಾವ 3-00 ಗಂಟೆಯ ಸುಮಾರಿಗೆ ಮುಧೋಳ ಮೇನ ಗೇಟ ಹತ್ತೀರ ಮುಖ್ಯರಸ್ತೆಯ ಮೇಲೆ ರೋಡ ಹಂಪ್ಸ ಹಾಕಿದ್ದು ನಾನು ನನ್ನ ಲಾರಿಯನ್ನು ನಿಧಾನಮಾಡಿದಾಗ ನಮ್ಮ ಲಾರಿಯ ಹಿಂದಿನಿಂದ ಒಂದು ಮೋಟಾರ ಸೈಕಲ ಮೇಲೆ 4 ಜನರು ಬಂದು ನಮ್ಮ ಲಾರಿಯ ಮುಂದೆ ನಿಲ್ಲಿಸಿ ಅದರಲ್ಲಿ ಇಬ್ಬರೂ ನನ್ನ ಕಡೆಯಿಂದ ಮತ್ತೇ ಒಬ್ಬನೂ ಕ್ಲೀನರ ಕಡೆಯಿಂದ ಲಾರಿಯನ್ನು ಏರಿದ್ದು, ಇನ್ನೋಬ್ಬನು ತಾವು ತಂದ ಮೋಟಾರ ಸೈಕಲ್ಲ ಮೇಲೆ ಕುಳಿತು ಅದನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೊಗಿದ್ದು, ಲಾರಿಯಲ್ಲಿ ಏರಿದ 3 ಜನರು ತಮ್ಮಲ್ಲಿದ್ದ ಚಾಕುಗಳನ್ನು ತೆಗೆದುಕೊಂಡು ನನಗೆ ಮತ್ತು ನಮ್ಮ ಲಾರಿ ಕ್ಲೀನರ ಇರ್ಫಾನನ ಕುತ್ತಿಗೆಯ ಹತ್ತೀರ ಹಿಡಿದುಕೊಂಡು ಹಿಂದಿ ಭಾಷೆಯಲ್ಲಿ, ಅವಾಜ್ ಮಾಡಿದರೇ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಹೇಳುತ್ತಾ, ನಿಮ್ಮಲ್ಲಿದ್ದ ಎಲ್ಲಾ ಹಣವನ್ನು ಕೋಡಿರಿ, ಇಲ್ಲಾ ಅಂದರೇ ನಿಮಗೆ ಜೀವ ಸಹೀತ ಬಿಡುವದಿಲ್ಲಾ ಅಂತಾ ಹೆದರಿಸಿ ಒಬ್ಬ ವ್ಯಕ್ತಿಯು ತನ್ನಲ್ಲಿದ್ದ ಚಾಕುವಿನಿಂದ ನನ್ನ ಎಡಗೈ ಮುಂಗೈ ಹತ್ತೀರ ಕುಯಿದಿದ್ದರಿಂದ ನನ್ನ ಎಡಗೈಗೆ ಸ್ವಲ್ಪ ರಕ್ತಗಾಯವಾಗಿದ್ದು, ನಂತರ ಅವರುಗಳು ನನ್ನ ಜೇಬಿನಲ್ಲಿದ್ದ  4000 ರೂ ನಗದು ಹಣ ಮತ್ತು ಒಂದು ಒಪ್ಪೋ ಕಂಪನಿಯ ಮೋಬೈಲನ್ನು ಕಸಿದುಕೊಂಡಿದ್ದು ಇರುತ್ತದೆ. ನಂತರ ನಮ್ಮ ಕ್ಲೀನರ ಹತ್ತೀರ ಅವರುಗಳು ಚೆಕ್ ಮಾಡಿ ಅವನ ಹತ್ತೀರ ಇದ್ದ ಒಂದು ಸ್ಯಾಮಸಾಂಗ ಕಂಪನಿಯ ಮೋಬೈಲನ್ನು ಕಸೀದುಕೊಂಡು ನಂತರ ಅದರಲ್ಲಿ ಒಬ್ಬ ವ್ಯಕ್ತಿಯು ನಮ್ಮ ಲಾರಿಯನ್ನು ಚಲಾಯಿಸಿಕೊಂಡು ಸುಮಾರು 20 ಮೀಟರ ದೂರ ಹೋಗಿ ರಸ್ತೇಯ ಬದಿಯಲ್ಲಿ ನಿಲ್ಲಿಸಿ ಅವರುಗಳು ನಮ್ಮ ಲಾರಿಯಿಂದ ಕೆಳಗಡೆ ಇಳಿದು ತಾವು ತೆಗೆದುಕೊಂಡು ಬಂದ ಮೊಟಾರ ಸೈಕಲ್ಲ ಮೇಲೆ ವಾಪಾಸ ಸೇಡಂ ಕಡೆಗೆ ನಾಲ್ಕು ಜನರು ಹೋಗಿದ್ದು ಇರುತ್ತದೆ. ಸದರಿಯವರು ಹಿಂದಿ ಬಾಷೆಯನ್ನು ಮಾತನಾಡುತ್ತಿದ್ದು ಅವರ ಹೆಸರು ಹೆಸರು ವಿಳಾಸ ಗೊತ್ತಿರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ನಾಗರಡ್ಡಿ ತಂದೆ ನರಸರಡ್ಡಿ ಹಾ:ವ: ಕಲಬುರಗಿ ರವರು ದಿನಾಂಕ: 17/01/2018 ರಂದು ಮದ್ಯಾಹ್ನ 1-   ಗಂಟೆಗೆ ತನ್ನ ಮೋಟಾರ ಸೈಕಲ ನಂಬರ ಕೆ.ಎ. 39 ಕ್ಯೂ 3010 ನೇದ್ದರ ಮೇಲೆ ತನ್ನ ಗೆಳೆಯನಾದ ರಾಮರಡ್ಡಿ ಇತನಿಗೆ ಕೂಡಿಕೊಂಡು ನಂದೂರ ಹತ್ತಿರ ಸೈಟಿಗೆ ಬಂದು ನಂತರ ಮರತೂರ ಗ್ರಾಮದ ವಿಜ್ಞಾನೇಶ್ವರ ಗುಡಿ ನೋಡಲು ಬಂದು ಮೋಟಾರ ಸೈಕಲ ನಿಲ್ಲಿಸಿ ಗುಡಿಯೊಳಗೆ ಹೋಗಿ ಮರಳಿ ಮದ್ಯಾಹ್ನ 2- 00 ಗಂಟೆಗೆ ಬಂದು ನೋಡಲಾಗಿ ನಾನು ನಿಲ್ಲಿಸಿದ ಮೋಟಾರ ಸೈಕಲ ಇರಲಿಲ್ಲಾ ಗಾಬರಿಯಾಗಿ ಎಲ್ಲಾ ಕಡೆಗೆ ಹುಡುಕಾಡಿದರೂ ಯಾರೋ ಕಳ್ಳರು ನನ್ನ ಮೊಟಾರ ಸೈಕಲ ನಂಬರ ಕೆ.ಎ. 39 ಕ್ಯೂ 3010 ಅ.ಕಿ 35000-  ರೂ ಕಿಮ್ಮಿತ್ತಿನ ಮೋಟಾರ ಸೈಕಲ ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.