POLICE BHAVAN KALABURAGI

POLICE BHAVAN KALABURAGI

24 January 2018

KALABURAGI DISTRICT REPORTED CRIMES

ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ  : ದಿನಾಂಕ 23-01-2018 ರಂದು ಸಾಯಂಕಾಲ  ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ ಬಡಾವಣೆಯ ಹನುಮಾನ ದೇವರ ಗುಡಿಯ ಹಿಂದೆ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರದ ಹನುಮಾನ ದೇವರ ಗುಡಿಯ ಹಿಂದುಗಡೆ ಹೋಗಿ ಜೀಪ ನಿಲ್ಲಿಸಿ ನಂತರ ನಾವು ಜೀಪಿನಿಂದ ಇಳಿದು ನಡೆದುಕೊಂಡು ಸ್ವಲ್ಪ ಮುಂದೆ ಹೋಗಿ ಮರೆಯಿಲ್ಲಿ ನಿಂತು ನೋಡಲು ಹನುಮಾನ ದೇವರ ಗುಡಿಯ ಹಿಂದುಗಡೆ ಇರುವ ಮನೆಯ ಮುಂದೆ ಒಬ್ಬ ಗಂಡು ಮನುಷ್ಯ ಮತ್ತು ಒಬ್ಬ ಹೆಣ್ಣು ಮಗಳು ಕೂಡಿಕೊಂಡು ಒಂದು ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಲು ಹೆಣ್ಣು ಮಗಳು ಓಡಿ ಹೋಗಿದ್ದು, ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡು ಸದರಿಯವನು ತನ್ನ ಹೆಸರು ಸುರೇಶ ತಂದೆ ಪ್ರಕಾಶ ಬಮ್ಮನಳ್ಳಿ ಸಾ: ಹನುಮಾನ ದೇವರ ಗುಡಿ ಹತ್ತಿರ ಗಂಗಾ ನಗರ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಓಡಿ ಹೊದವಳ ಹೆಸರು ವಿಚಾರಸಲು ಓಡಿ ಹೊದವಳ ಹೆಸರು ಲಲಿತಾಬಾಯಿ ಗಂಡ ಪ್ರಭು ಕೂಡಿ ಅಂತ ತಿಳಿಸಿದ್ದು ಇರುತ್ತದೆ. ನಂತರ ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 260/- ರೂ ದೊರೆತಿದ್ದು ಮತ್ತು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಸ್ಥಳದಲ್ಲಿ ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 80 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 28.ರೂ 13 ಪೈಸೆ. ಒಟ್ಟು ಕಿಮ್ಮತ್ತು 2250. ರೂ 40 ಪೈಸೆ. ಇವಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಾಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಭವಾನಿಸಿಂಗ್ ತಂದೆ ರಾಮಚಂದ್ರ ರಾಠೋಡ ಸಾ||ಬಳೂರ್ಗಿ ತಾಂಡಾ ತಾ||ಅಫಜಲಪೂರ ರವರು  ದೇವಲ ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆ ಅಂತ ಕರ್ತವ್ಯ ನಿರ್ವಯಿಸುತ್ತಿದ್ದು  ದಿನಾಂಕ 22-01-2018 ರಂದು ಮದ್ಯಾಹ್ನ ದೇವಲ ಗಾಣಗಾಪೂರ ಪೊಲೀಸ್ ಠಾಣೆ ಗುನ್ನೆ ನಂ 04/2018 ನೇದ್ದರ ಪ್ರರಕಣದ ಕಾಣೆಯಾದ ವ್ಯಕ್ತಿಯ ಪತ್ತೆ ಕಾರ್ಯ ಕುರಿತು ನನಗೆ ನೇಮಕ ಮಾಡಿದ್ದು ನಾನು ನಮ್ಮ ಮೋಟಾರ ಸೈಕಲ್ ನಂ ಕೆಎ-32 ಇಪಿ-7120 ನೇದ್ದರ ಮೇಲೆ ಠಾಣೆಯಿಂದ ಹೊರಟು ಚವಡಾಪೂರ, ಸ್ವೇಷನ ಗಾಣಗಾಪೂರ, ದುದನಿ ಗ್ರಾಮಗಳಿಗೆ ಬೇಟಿಕೊಟ್ಟು ಸದರಿ ಪ್ರರಕಣದ ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಮರಳಿ ಅಫಜಲಪೂರ ಮಾರ್ಗವಾಗಿ ದೇವಲ ಗಾಣಗಾಪೂರಕ್ಕೆ ಹೋಗುತಿದ್ದಾಗ ಅಂದಾಜು ಸಮಯ 7.30 ಪಿಎಮ್ ಸುಮಾರಿಗೆ ಅಫಜಲಪೂರ ಬಸ ಡಿಪೋ ಹತ್ತಿರ ಮುಖ್ಯ ರಸ್ತೆಯ ಮೇಲೆ ಹೋಗುತಿದ್ದಾಗ ನನ್ನ ಹಿಂದಿನಿಂದ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿದ್ದು ನಾನು ಜೋರಾಗಿ ಕೆಳಗೆ ಬಿದ್ದೆನು ನನ್ನ ಹಣೆಗೆ ಭಾರಿ ರಕ್ತಗಾಯ ಹಾಗು ಎಡ ಎದೆಗೆ ಭಾರಿ ಗುಪ್ತಗಾಯ ವಾಗಿದ್ದು ಸದರಿ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು ಟ್ರ್ಯಾಕ್ಟರ ನಂಬರ ನೋಡಲಾಗಿ ಮಹೇಂದ್ರ ಅರ್ಜುನ ಕಂಪನಿಯ ಇದ್ದು ಅದರ ನಂಬರ ಕೆಎ-32 ಟಿಬಿ-0397 ಅಂತ ಇರುತ್ತದೆ. ನಾನು ಚಾಲಕನಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆ ಅವನ ಹೇಸರು ವಿಳಾಸ ನನಗೆ ಗೊತ್ತಾಗಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪರಶುರಾಮ ತಂದೆ ತುಕಾರಾಮ ಉಗಾಡೆ ಸಾ||ಬಂಕಲಗಾ ಹಾ||ಶಿವಬಾಳ ನಗರ ತಾ||ಅಫಜಲಪೂರ ರವರು  ದಿನಾಂಕ 22-01-2018 ರಂದು ಬೆಳಿಗ್ಗೆ ನನ್ನ ಗೆಳೆಯನಾದ ಶರಣಪ್ಪ ಹೊಸ್ಮನಿ ಈತನ ಮೋಟಾರ್ ಸೈಕಲ್ ಕೆಎ-53 ಇಇ-0453 ನೇದ್ದರ ಮೇಲೆ ನಾನು ಹಾಗು ನನ್ನ ಇನ್ನೊಬ್ಬ ಗೆಳೆಯನಾದ ಪ್ರದೀಪ ತಂದೆ ಶರಣಪ್ಪ ಹೊಸ್ಮನಿ ಇಬ್ಬರು ಕೂಡಿಕೊಂಡು ಯಂಕಂಚಿ ಗ್ರಾಮದ ದವಲಮಲ್ಲಿಕ ಜಾತ್ರೆಗೆ ಹೋಗಿ ಮರಳಿ ನಮ್ಮ ಗ್ರಾಮಕ್ಕೆ ಹೋಗುತಿದ್ದಾಗ ಶಿವೂರ ಕ್ರಾಸ ಹತ್ತಿರ ಇದ್ದಾಗ ನಮ್ಮ ಎದುರಿನಿಂದ ಬುಲೇರೊ ವಾಹನದ ಚಾಲಕ ಸದರಿ ಬುಲೇರೊ ಅತಿವೇಗ ಹಾಗು ನಿನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಾನು ನಡೆಸುತಿದ್ದ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿ ಪಡಿಸಿದಾಗ ನಾವಿಬ್ಬರು ಕೆಳಗೆ ಬಿದ್ದೇವು ಸದರಿ ಬುಲೇರೊ ಚಾಲಕನು ತನ್ನ ವಾಹನ ನಿಲ್ಲಿಸದೆ ಹಾಗೇಯೆ ವಾಹನ ಸಮೇತ ಹೋದನು ನಾವು ಸದರಿ ವಾಹನದ ಹಿಂದಿನಿಂದ ನಂಬರ ನೋಡಲಾಗಿ ಕೆಎ-32 ಎನ್-1638 ಅಂತ ಇರುತ್ತದೆ. ಸದರಿ ಘಟನೆಯಿಂದ ನನಗೆ ಬಲಗಾಲಿನ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದಿದ್ದು, ತಲೆಗೆ, ಮುಖಕ್ಕೆ ಭಾರಿ ರಕ್ತ ಗಾಯವಾಗಿರುತ್ತವೆ ಪ್ರದೀಪನಿಗೆ ಕೈಕಾಲಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

23 January 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಗುರುಶರಣ ತಂದೆ ಭೀಮರಾವ ಶಿರವಾಳ ಸಾ : ಜವಳಿ (ಡಿ) ತಾ:ಆಳಂದ  ಜಿ: ಕಲಬುರಗಿ ರವರು  ದಿನಾಂಕ. 22-01-2018 ರಂದು ತನ್ನ ಖಾಸಗಿ ಕೆಲಸದ ನಿಮಿತ್ಯ ಜವಳಗಿಯಿಂದ ನಾನು ಕಲಬುರಗಿಗೆ ಬಂದಿರುತ್ತೇನೆ ನನ್ನ ಮಗ ವಿನೋದ ಶಿರವಾಳ ಕೂಡಾ ಕಲಬುರಗಿಯಲ್ಲಿದ್ದನ್ನು  ಸಂಜೆ ನನ್ನ ಮಗ ವಿನೋದನು ಜವಳಗಾಕ್ಕೆ ಹೋಗುತ್ತೆನೆ ಅಂತಾ 7-00 ಗಂಟೆ ಸುಮಾರಿಗೆ  ತನ್ನ ಯಮಹಾ ಎಫ್.ಝಡ್  ನಂ.ಕೆ.ಎ.32 ಇಡಿ.5816 ನೆದ್ದರ ಮೇಲೆ ದೇವಿನಗರನ ಮನೆಯಿಂದ ಒಬ್ಬನೆ ಹೋದನು ರಾತ್ರಿ 7-45 ಪಿ.ಎಂ.ದ ಸುಮಾರಿಗೆ ನಾನು ಮನೆಯಲ್ಲಿರುವಾಗ  ಶರಣಬಸಪ್ಪಾ ನರೋಣಿ ಎಂಬುವವರು ನನಗೆ ಫೋನ ಮಾಡಿ ತಿಳಿಸಿದ್ದು ಏನೆಂದರೆ   ವಿಶ್ವರಾಧ್ಯ ಗುಡಿಯನಂತರ ರೈಲ್ವೆ  ಬ್ರಿಡ್ಜ ನಂತರ ಉತಾರಿಗೆ ನನ್ನ ಮಗ ವಿನೋದ ಶಿರವಾಳ ಇತನಿಗೆ ಮೋಟಾರ ಸೈಕಲ್ ಡಿಕ್ಕಿ ಹೊಡೆದಿದ್ದರಿಂದ ಭಾರಿಗಾಯವಾಗಿರುತ್ತದೆ ಬೇಗನೆ ಸ್ಥಳಕ್ಕೆ ಬರುವಂತೆ ಹೇಳಿದರು ಆಗ ನಾನು ಗಾಬರಿಗೊಂಡು ನಾನು ಮತ್ತು ನಮ್ಮ ಸಮ್ಮಂದಿಕರಾದ ಮಚೇಂದ್ರ ತಂದೆ  ಕರಬಸ್ಸಪ್ಪಾ ನರೋಣಿ ಹಾಗೂ ಶರಣಬಸ್ಸಪ್ಪಾ ತಂದೆ ಬಸವರಾಜ ಭೂಸನೂರ ಎಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಹಕೀಕತ್ ನಿಜವಿದ್ದು  ನನ್ನ ಮಗ ವಿನೋದ ಶಿರವಾಳ ಇತನಿಗೆ  ನೋಡಲಾಗಿ ತಲೆಯ ಎಡಬಾಗದಲ್ಲಿ , ಮೆಲಕಿಗೆ ಭಾರಿ ಪೆಟ್ಟಾಗಿ ರಕ್ತಗಾಯ ಮತ್ತು ಎಡಕಿವಿಯಿಂದ ಬಾಯಿಯಿಂದ ರಕ್ತಸ್ರಾವವಾಗತಿತ್ತು .ಎಡಗೈಭುಜಕ್ಕೆ ಮೋಳಕೈಗೆ ಭಾರಿ  ಪೆಟ್ಟಾಗಿತ್ತು ಆಗ ಅಲ್ಲಿಯೇ ಹಾಜರಿದ್ದ ಶರಣಬಸ್ಸಪ್ಪ ನರೋಣಿ ಮತ್ತು ಚಿದಾನಂದ ಡೊಳ್ಳಿ ಎಂಬುವವರಿಗೆ ವಿಚಾರಿಸಲಾಗಿ 7-30 ಪಿ.ಎಂ.ದ ಸುಮಾರಿಗೆ ಆಳಂದರೋಡಿನ ವಿಶ್ವರಾಧ್ಯ ಗುಡಿಯ ನಂತರ ರೈಲ್ವೆ ಬ್ರಿಡ್ಜ ಉತಾರಿಗೆ ಸ್ವಲ್ಪ ಅಂತರದಲ್ಲಿ ತಮ್ಮಿಂದ ಮುಂದೆ ನನ್ನ ಮಗ ವಿನೋದನು ತನ್ನ ಮೋಟಾರ ಸೈಕಲ್ ಮೇಲೆ ಆಳಂದ ಕಡೆಗೆ ಹೋಗುತ್ತಿರುವಾಗ  ಅದೇ ವೇಳಗೆ ಆಳಂದ ಕಡೆಯಿಂದ ಒಂದು ಮೋಟರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾ ದಿಡ್ಡಿಯಾಗಿ ಓಡಿಸಿಕೊಂಡು ಬಂದು ವಿನೋದನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ವಿನೋದನು ಜೋರಾಗಿ ಕೆಳಗೆ ಬಿದ್ದು ತಲೆಗೆ , ಮೆಲಕಿಗೆ ಬಾರಿಗಾಯಗೊಂಡಿದ್ದು ಇರುತ್ತದೆ ಅಂತಾ ತಿಳಿಸಿದ್ದರು  ಆಗ ರೋಡಿಗೆ ಹೋಗುವ ವಾಹನಗಳ ಬೆಳಕಿನಲ್ಲಿ ಡಿಕ್ಕಿ ಹೊಡೆದ ಮೋಟಾರ ಸೈಕಲ್ ನಂಬರ ನೋಡಲಾಗಿ ಹೀರೋ ಸ್ಪ್ಲೆಂಡರ ನಂ.ಕೆ.ಎ.39 ಜೆ. 0733 ನೆದ್ದು  ಅದರ ಚಾಲಕನು ಕೂಡಾ ಗಾಯಗೊಂಡು ಸೈಡಿಗೆ ಕುಳಿತಿದ್ದು ಆತನ ವಿಚಾರಿಸಲಾಗಿ ಸೈಬಣ್ಣಾ ತಂದೆ ಗುಂಡಪ್ಪಾ ಆಳಂದ ಸಾಚ ದುತ್ತರಗಾಂವ ತಾ/ಆಳಂದ  ಅಂತಾ ತಿಳಿಸಿದು ಅವನಿಗೆ ಹಣೆಯ ಮೇಲೆ ರಕ್ತಗಾಯ, ಬಲಗಣ್ಣಿ ಪಕ್ಕದಲ್ಲಿ ರಕ್ತಗಾಯ , ತುಟಿಯ ಕೆಳಗೆ ಗದಕ್ಕೆ ರಕ್ತಗಾಯ, ಬಲಗೈ ಮೋಳಕಯಗೆ ಗುಪ್ತ ಪೆಟ್ಟಾಗಿದ್ದು ಎಡಗಾಲು ಮೋಳಕಾಲು ಕೆಳಗೆ ರಕ್ತಗಾಯವಾಗಿರುತ್ತದೆ. ನಂತರ ಯಾರೋ ಅಂಬುಲೆನ್ಸಿಗೆ ಫೋನ ಮಾಡಿದರಿಂದ ಸ್ವಲ್ಪ ಹೊತ್ತಿನಲ್ಲಿ 108 ಅಂಬುಲೆನ್ಸ ಬಂದಿದ್ದು ಅವರು ವಿನೋದನನ್ನು ಪರೀಶಿಲಿಸಲಾಗಿ ಮೃತ ಪಟ್ಟಿರುವದಾಗಿ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.         
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 22.01.18 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಮೃತ ಶರಣಪ್ಪಾ ಇತನು ಮೋಟಾರ ಸೈಕಲ ನಂ ಕೆಎ-32-ಇಎ-5109 ನೇದ್ದನ್ನು ಚಲಾಯಿಸಿಕೊಂಡು ವೆಂಕಟೇಶ್ವರ ನಗರದೊಳಗಡೆಯಿಂದ ಹೋಗುವಾಗ ಗುರುನಾಥ ಇತನು ಮೋಟಾರ ಸೈಕಲ ನಂ ಕೆಎ-32-ವಾಯ್-2496 ನೇದ್ದನ್ನು ಎಸವಿಪಿ ಸರ್ಕಲ ಕಡೆಯಿಂದ ಕೇಂದ್ರ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ ಶರಣಪ್ಪ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಶರಣಪ್ಪ ಇತನು ಭಾರಿಗಾಯ ಹೊಂದಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಇರುತ್ತದೆ ಅಂತಾ ಶ್ರೀಮತಿ ಶಂಕುತಾಲ ಗಂಡ ಶರಣಪ್ಪಾ ಕೋಲಾರ ವ: 58 ವರ್ಷ ಉ: ಮನೆ ಕೆಲಸ ಸಾ: ಸಕರ್ಾರಿ ಕಾಲೇಜ್ ಹಿಂದುಗಡೆ ವೆಂಕಟೇಶ ನಗರ  ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಕೇದಾರನಾಥ ತಂದೆ ಶರಣಬಸಪ್ಪಾ ಪಾಟೀಲ ಸಾಃ ಕೋರಳ್ಳಿ ಗ್ರಾಮ ತಾಃ ಆಳಂದ ಹಾಃವಾಃ ಗದಲೆಗಾಂವ್ ಕಲ್ಯಾಣ ಮಂಟಪದ ಹತ್ತಿರ ಕೈಲಾಸ ನಗರ ಕಲಬುರಗಿ ರವರು ದಿನಾಂಕ  21.01.2018 ರಂದು ತನ್ನ ವಯಕ್ತಿಕ ಕೆಲಸದ ಸಲುವಾಗಿ ನಾನು ನನ್ನ ಟವೇರಾ ವಾಹನ ನಂ ಕೆಎ17 ಎಂ8439 ನೇದ್ದನ್ನು ತೆಗೆದುಕೊಂಡು ಊರಲ್ಲಿ ಕಬ್ಬು ಹಚ್ಚಿದ ಲೇಬರಗಳ & ರಸಗೊಬ್ಬರ ಇತ್ಯಾದಿ ಸಲುವಾಗಿ ಸಂಬಳ ಮಾಡಬೇಕಾಗಿದ್ದರಿಂದ ನಾನು ಮನೆಯಿಂದ 2,50,000/- ನಗದು ಹಣವನ್ನು ನನ್ನ ಬಳಿ ಇದ್ದ ನೀಲಿ ಬಣ್ಣದ ಬ್ಯಾಗಿನಲ್ಲಿ ಹಾಕಿಕೊಂಡು ಸದರಿ ಬ್ಯಾಗನ್ನು ಟವೇರಾ ವಾಹನದಲ್ಲಿನ ಬಾಕ್ಸಿನಲ್ಲಿ ಹಾಕಿಕೊಂಡು ಮಧ್ಯಾಹ್ನ ಅಂದಾಜು 2.30 ಗಂಟೆ ಸುಮಾರಿಗೆ ಮನೆಯಿಂದ ಬಂದು, ಸೂಪರ ಮಾರ್ಕೆಟದಲ್ಲಿ ನನ್ನ ಗೆಳೆಯನಾದ ಸಿದ್ದಲಿಂಗ ಡೊಲೆ ಇವರಿಗೆ ಭೇಟಿ ಮಾಡುವ ಸಲುವಾಗಿ ನನ್ನ ವಾಹನವನ್ನು ಹೆಡ್ ಪೋಸ್ಟ ಆಫೀಸ್ ಹತ್ತಿರ ನಿಲ್ಲಿಸಿ ನನ್ನ ವಾಹನಕ್ಕೆ ಲಾಕ್ ಮಾಡಿ ಹೋಗಿದ್ದು, ನಂತರ ಕೆಲಸ ಮುಗಿಸಿಕೊಂಡು ಸಾಯಂಕಾಲ 4.00 ಗಂಟೆ ಸುಮಾರಿಗೆ ಮರಳಿ ನಾನು ಕಾರ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ, ನನ್ನ ಕಾರಿನ್ ಡೋರ್ ಒಪನ್ ಆಗಿದ್ದು, ಪರೀಶಿಲಿಸಿ ನೋಡಿದಾಗ ಕಾರಿನಲ್ಲಿದ್ದ ಬಾಕ್ಸಿನ ಲಾಕ್ ಮುರಿದ್ದು, ಬಾಕ್ಸಿನಲ್ಲಿಟ್ಟ 2,50,000/- ಹಣದ ಬ್ಯಾಗ್ ಇರಲಿಲ್ಲಾ. ನಾನು ಗಾಭರಿಯಾಗಿ ಕೂಡಲೆ ಈ ವಿಷಯವನ್ನು ನನ್ನ ಗೆಳೆಯಂದಿರಾದ ಸಿದ್ದಲಿಂಗ್ ಡೋಲೆ, ಗುರಪ್ಪಾ ನೀಲಾ, ಮಹೇಶ ಹೂಲಸೂರಕರ್ ಇವರಗಳಿಗೆ ಫೋನ ಮಾಡಿ ವಿಷಯ ತಿಳಿಸಿದ್ದು ಅವರು ಸಹಃ ನಾನು ಕಾರ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಹಃ ಹಣದ ಬ್ಯಾಗ್ ಪತ್ತೆ ಆಗಿರುವುದಿಲ್ಲಾ  ನಿನ್ನೆ ದಿಃ 21.01.2018 ರಂದು ಮಧ್ಯಾಹ್ನ 2.30 ರಿಂದ 4.00 ಗಂಟೆಯ ಅವಧಿಯಲ್ಲಿ ಹೆಡ್ ಪೋಸ್ಟ ಆಫೀಸ್ ಹತ್ತಿರ ನನ್ನ ಟವೇರಾ ವಾಹನ ನಂ ಕೆಎ17 ಎಂ8439 ನೇದ್ದನ್ನು ನಿಲ್ಲಿಸಿದ್ದು, ಆ ಕಾರಿನ ಬಾಕ್ಸಿನಲ್ಲಿಟ್ಟಿದ 2,50,000/- ಹಣದ ಬ್ಯಾಗ್ನ್ನು ಯಾರೋ ಕಳ್ಳರು ಕಾರಿನ ಡೋರ್ ಲಾಕನ್ನು ತೆಗೆದು ಕಾರಿನಲ್ಲಿಟ್ಟ ಬಾಕ್ಸಿನ ಲಾಕ್ ಮುರಿದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ: 21/01/2018 ರಂದು ಮಾಹಾಗಾಂವ ಠಾಣಾ ಹದ್ದಿಯ ಸಿರಗಾಪೂರ ಸಿಮಾಂತರದ ಬಬಲಾದಕ್ಕೆ ಹೊಗುವ ರಸ್ತೆ ಬದಿ 500 ಮೀಟರ ಅಂತರದಲ್ಲಿ ಸರಕಾರಿ ಗೈರಾಣಿ ಹೊಲದಲ್ಲಿನ ಮರದ ಕೆಳಗೆ ಇಸ್ಪೀಟ ಜೂಜಾಟ ಆಡುತ್ತಿದ್ದರೆ ಅಂತಾ ಬಾತ್ಮಿ ಮೇರೆಗೆ ಪಿ.ಎಸ್.ಐ. ಮಾಹಾಗಾಂವ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 6 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಗೈರೆ ವಿಚಾರಿಸಲು 1) ರೇವಣಸಿದ್ದಪ್ಪ ತಂದೆ ಮಲ್ಲಿಕಾರ್ಜುನ ಅಂಬಲಿ ಸಾ: ಕುರಿಕೊಟಾ 2) ಗುರುನಾಥ ತಂದೆ ಶರಣಪ್ಪ ಸಿಂಗೆ ಸಾ|| ಡೊಂಗರಗಾಂವ 3) ಸಾಯಿಬಣ್ಣ ತಂದೆ ಮೈಲಾರಿ ಹೊಳಕುಂದಾ ಸಾ|| ಜಗತ ಕಲಬುರಗಿ 4) ರವಿಂದ್ರ ತಂದೆ ಅಣ್ಣಪ್ಪ ಪಾಟೀಲ್ ಸಾ|| ಉದಯ ನಗರ ಕಲಬುರಗಿ 5) ಮಲ್ಲಿಕಾರ್ಜುನ ತಂದೆ ಶರಣಪ್ಪ ಸಾಗರ ಸಾ|| ಭಾಗ್ಯ ನಗರ ಕಲಬುರಗಿ 6) ಸಾಯಿಬಣ್ಣ ತಂದೆ ಅಣ್ಣಪ್ಪ ಮಿಂಚನಾಕರ ಸಾ|| ಎಸ್.ಬಿ. ಕಾಲೇಜ ಹತ್ತಿರ ರಾಮನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 52  ಇಸ್ಪೀಟ ಎಲೆಗಳು ನಗದು ಹಣ 10120-00 ರೂ. ಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.                                         

20 January 2018

KALABURAGI DISTRICT REPORTED CRIMES

ವರದಕ್ಷಣೆ ಹಣಕ್ಕೆ  ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ  ಮುತ್ತಮ್ಮ ಗಂಡ ಭೀಮರಾಯ ಆನೆಕ್ಕಿ ಸಾ: ಸೋಮನಾಥ ಹಳ್ಳಿ ರವರು ಮಗಳಾದ ಮಂಜುಳಾ ಇವಳಿಗೆ ಮೂರು ವರ್ಷಗಳ ಹಿಂದೆ ಭಂಕೂರ ಗ್ರಾಮದ ಸಾಯಿಬಣ್ಣ ತಂದೆ ಶರಣಪ್ಪ ಹೊಸಮನಿ ಇತನಿಗೆ ಕೊಟ್ಟು ಮದುವೆ ಮಾಡಿದ್ದು ಮದುವೆಯಲ್ಲಿ 50 ಸಾವಿರ ರೂಪಾಯಿ ಮತ್ತು 5 ತೊಲೆ ಬಂಗಾರ ಹಾಗೂ ಇತರೆ ಗೃಹ ಬಳಿಕೆ ಸಾಮಾನುಗಳು ಕೊಟ್ಟು ಮದುವೆ ಮಾಡಿಕೊಟ್ಟಿದ್ದು. ನಂತರ ದಿನಗಳಲ್ಲಿ ನನ್ನ ಮಗಳ ಗಂಡನ ಮನೆಯವರಾದ ಗಂಡ ಸಾಯಿಬಣ್ಣ 2) ಮಹಾದೇವಿ ಗಂಡ ಶರಣಪ್ಪ  3) ಶೀಲಮ್ಮ ಗಂಡ ಕುಪ್ಪಣ್ಣ ಹೊಸಮನಿ 4) ಮಲ್ಲಪ್ಪ ತಂದೆ ಶರಣಪ್ಪ ಹೊಸಮನಿ 5) ರೇವಸಿದ್ದಪ್ಪ ಅವರಾದಿ 6) ಚಂದಮ್ಮ ಗಂಡ ರೇವಣಸಿದ್ದಪ್ಪ ಅವರಾದಿ 7) ಕಾಶಿಬಾಯಿ ಗಂಡ ಶರಣಪ್ಪ ಹೊಸಮನಿ 8) ಮಹಾದೇವ ತಂದೆ ಬಸಣ್ಣ 9) ರಾಚಮ್ಮ ಗಂಡ ಮಹಾದೇವ ನಾಟಿಕರ 10) ಶ್ರೀದೇವಿ ಗಂಡ ಮಲ್ಲಪ್ಪ ಹೊಸಮನಿ 11) ಕುಪ್ಪಣ್ಣ ತಂದೆ ಶರಣಪ್ಪ ಹೊಸಮನಿ ರವರೆಲ್ಲಾರೂ ಸೇರಿ ನನ್ನ ಮಗಳಿಗೆ ಬೈಯುವುದು ಮತ್ತು ಮಾನಸಿಕವಾಗಿ , ದೈಹಿಕವಾಗಿ ಹಿಂಸೆ ನೀಡುತಿರುವುದು. ಮಾಡುತ್ತಿದ್ದು ನಾನು ನಮ್ಮ ಸಂಬಂಧಿಕರು ಈ ರೀತಿ ನನ್ನ ಮಗಳಿಗೆ ಕಿರಿಕಿರಿ ಮಾಡುವುದು ಸರಿ ಅಲ್ಲ ಅಂತಾ ತಿಳಿ ಹೇಳಿದ್ದು ಇರುತ್ತದೆ. ಅಲ್ಲದೆ ನನ್ನ ಮಗಳ ಕುಪ್ಪಾಸ ಕಾರ್ಯಕ್ರಮದಲ್ಲಿ ಒಂದು ತೊಲೆ ಬಂಗಾರ ಕೊಟ್ಟಿರುತ್ತೇನೆ. ಅದರೂ ಸಹ ನನ್ನ ಮಗಳಿಗೆ ವರದಕ್ಷಿಣೆ ಹಣ ತರಬೇಕು ಅಂತಾ ಕಿರುಕುಳ ಕೊಡುತ್ತಿದರಿಂದ ನನ್ನ ಮಗಳು ಮಂಜುಳಾ ಇವಳು ಒಂದು ವರ್ಷಗಳ ಕಾಲ ನಮ್ಮ ಮನೆಗೆ ಕರೆದುಕೊಂಡು ಹೋಗಿರುತ್ತೇನೆ. ಹೀಗಿದ್ದು ದಿನಾಂಕ: 17/01/2018 ರಂದು ನನ್ನ ಅಳಿಯ ಸಾಯಿಬಣ್ಣ ಸೋಮನಾಥ ಹಳ್ಳಿಗೆ ಬಂದು ನನ್ನ ಮಗಳಿಗೆ ಮಗಳು ಮಂಜುಳಯೊಂದಿಗೆ ಬೇರೆ ಮನೆಮಾಡಿಕೊಡು ಚನ್ನಾಗಿ ಸಂಸಾರ ಮಾಡಿಕೊಂಡಿರುತ್ತೇನೆ ಅಂತಾ ಹೇಳಿ ಕರೆದುಕೊಂಡು ಹೋಗಿದ್ದನು ದಿನಾಂಕ: 19/01/2018 ರಂದು ಮುಂಜಾನೆ 7-00 ನನ್ನ ಅಳಿಯ ಸಾಯಿಬಣ್ಣ ಪೋನ ಮಾಡಿ ನಾನು ಸಂಡಾಸಕ್ಕೆ ಹೋಗಿ ಬರುವಷ್ಟರಲ್ಲಿ ಮಂಜುಳಾ ಇವಳು ಊರಲು ಹಾಕಿಕೊಂಡಿದ್ದಾಳೆ ಎಂದು ತಿಳಿಸಿದನು ಆಸ್ಪತ್ರೆ ಕರೆದುಕೊಂಡು ಹೋಗುತ್ತಿದೇವೆ  ಜಿ ಜಿ ಹೆಚ್ ಕಲಬುರಗಿಗೆ ಬರಲು ತಿಳಿಸಿದರಿಂದ ನಾನು ನನ್ನ ಮಗ ಚಂದ್ರಶೇಖರ , ನಮ್ಮ ಅಣ್ಣತಮ್ಮಕೀಯ ನಾಗಮ್ಮ ಆನೇಕ್ಕಿ , ಕಮಲಾಬಾಯಿ ಆನೆಕ್ಕಿ , ಗುರು ಆನೆಕ್ಕಿ , ಶಾಮರಾಜ ಆನೆಕ್ಕಿ ರವರು ಕೂಡಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗಳು ಮೃತ ಪಟ್ಟಿದಳು . ನನ್ನ ಮಗಳಿಗೆ ಅಳಿಯ ಸಾಯಿಬಣ್ಣ ಮತ್ತು ಸಂಗಡ 10 ಜನರು ಸೇರಿ ವರದಕ್ಷಿಣೆ ಹಣ ತರಬೇಕು ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ನೇಣು ಹಾಕಿ ಕೊಲೆ ಮಾಡಿದ್ದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಮಹ್ಮದ ಅಜೀಮ್ ತಂದೆ ಮಹ್ಮದ ಯೂಸೂಫ್ ಜಮಾದಾರ ಸಾ: ಸಡಕ ಕಿಣ್ಣಿ ತಾ:ಜಿ: ಕಲಬುರಗಿ ಹಾ:ವ: ಇಸ್ಲಾಂಬಾದ ಕಾಲನಿ ಕಲಬುರಗಿ ಇವರು ಹುಮನಾಬಾದ ರಿಂಗ ರೋಡನಲ್ಲಿ ನಿಂತ ತನಗೆ ಪರಿಚಯದ ಶ್ರೀಮತಿ ರಹೇಮತಬೀ ಲದಾಫ ಇವಳಿಗೆ ತನ್ನ ಮೋಟಾರ ಸೈಕಲ ನಂ ಕೆಎ 33 ಜೆ 1497 ನೇದ್ದರ ಹಿಂದೆ ಕೂಡಿಸಿಕೊಂಡು ಅವರಾದ ಗ್ರಾಮಕ್ಕೆ ಬಿಡಲು ಹೊರಟಾಗ ಸಂಜೆ 07-30 ಗಂಟೆ ಸುಮಾರಿಗೆ ಉಪಳಾಂವ ಸೀಮಾಂತರದಲ್ಲಿ ಇರುವ ಬಿರಾದಾರ ಪೆಟ್ರೋಲ ಪಂಪ ದಾಟಿ ಇರುವ ಒಂದು ಬ್ರೀಡ್ಜ ಹತ್ತಿರ ಬಂದಾಗ ಆಗ ಎದುರುನಿಂದ ಅಂದರೆ ಹುಮನಾಬಾದ ರೋಡ ಕಡೆಯಿಂದ ಒಂದು ನೀಲಿ ಬಣ್ಣದ ಕಾರು ಚಾಲಕನು ತನ್ನ ವಶದಲ್ಲಿದ್ದ ಕಾರನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ತನ್ನ ಸೈಡಿಗೆ ಹೋಗದೇ ಫಿರ್ಯಾದಿ ಸೈಡಿಗೆ ಬಂದು ಅವನ ಮೋಟಾರ ಸೈಕಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದನು. ಇದರಿಂದಾಗಿ ಫಿರ್ಯಾದಿ ಮತ್ತು ಹಿಂದೆ ಕುಳಿತ ರಹೇಮತಬೀ ಇಬ್ಬರು ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದಿದ್ದದ್ದು, ಫಿರ್ಯಾದಿ ಮತ್ತು ರಹೇಮತಬೀ ಇವರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ರಹೇಮತಬೀ ಇವಳಿಗೆ ತಲೆ ಭಾರಿ ಒಳಪೆಟ್ಟಾಗಿ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದು. ಅವರಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಯಲ್ಲಿ ಹಾಕಿಕೊಂಡು ರಾತ್ರಿ 08-30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದಾಗ ವೈದ್ಯರು ರಹೇಮತಬೀ ಇವಳಿಗೆ ನೋಡಿ ಈಗಾಗಲೇ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ. . ಸದರಿ ಅಪಘಾತವು ಈ ಮೇಲೆ ಹೇಳಿದಂತೆ ಕಾರ  ಕೆಎ 32 ಎನ್ 2086 ಚಾಲಕನ ತಪ್ಪಿನಿಂದ ಅಪಘಾತ ಸಂಭವಿಸಿದ್ದರಿಂದ ಅವನ  ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 19/01/2018 ರಂದು ಸುಧಾರಿತ ಗಸ್ತು ಸಂ 23 ಕರಜಗಿ ಗ್ರಾಮದ ಬೀಟ್ ಸಿಬ್ಬಂದಿಯಾದ ಸಂತೋಷ ಸಿಪಿಸಿ-657 ರವರು ಕರಜಗಿ ಗ್ರಾಮದ ಖ್ವಾಜಾ ಸೈಫನ್ ಮುಲ್ಕ ದರ್ಗಾ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ್ದು  ಪಿಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕರಜಗಿ ಗ್ರಾಮದ ಖ್ವಾಜಾ ಸೈಫನ್ ಮುಲ್ಕ ದರ್ಗಾ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ದರ್ಗಾ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ನಾಗಪ್ಪ ತಂದೆ ಶರಣಪ್ಪ ನಾದ ಸಾ||ಕರಜಗಿ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 800/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.