POLICE BHAVAN KALABURAGI

POLICE BHAVAN KALABURAGI

14 August 2017

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ಸುಭಾನ ಕಂದಾಯ ನಿರೀಕ್ಷಕರು ಶಹಾಬಾದ ರವರು ದಿನಾಂಕ: 13/08/2017 ರಂದು ಮರತೂರ ಗ್ರಾಮಕ್ಕೆ ಕೆಲಸದ ನಿಮಿತ್ಯ ನಾನು ಮತ್ತು ಸಂಗಡ ಗೊಳಾ ಗ್ರಾಮ ಸಹಾಯಕ ಮರಲಿಂಗ ರವರನ್ನು ಕರೆದುಕೊಂಡು ಹೋದಾಗ ಮದ್ಯಾಹ್ನ 3-00 ಗಂಟೆಗೆ ಭಂಕೂರ ಸೀಮಾಂತರದ ಕಾಗಿಣಾ ನದಿಯಿಂದ ಟ್ರಾಕ್ಟರನಲ್ಲಿ ಮರಳು ತುಂಬಿಕೊಂಡು ಮರತೂರ ಕಡೆಗೆ ಸಾಗಣೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಗ್ರಾಮ ಸಹಾಯಕ ಕೂಡಿ ಮರತೂರ ಗ್ರಾಮದ ನಬಿ ಹೊಟೇಲ ಹತ್ತಿರ ಹೋದಾಗ ಶಹಾಬಾದ ಕಡೆಯಿಂದ ಒಂದು ಮರಳು ತುಂಬಿದ ಟ್ರಾಕ್ಟರ ಬರುತ್ತಿದ್ದು ಟ್ರಾಕ್ಟರ ಚಾಲಕನು ನಮಗೆ ನೋಡಿ ಟ್ರಾಕ್ಟರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು  ಸದರಿ ಮರಳು ತುಂಬಿದ ಟ್ರಾಕ್ಟರ ಪರಿಶೀಲಿಸಿ ನೋಡಲು ಅದರ  ನಂಬರ ಕೆ.ಎ 32 ಟಿ.ಬಿ 1986 ಮಶಿ ಫರಗೂಷನ ಕಂಪನಿಯದ್ದು ಇರುತ್ತದೆ  ಅದರ ಅ.ಕಿ 100000-00 ರೂ ಅದರಲ್ಲಿಯ ಮರಳು ಅ.ಕಿ 1000-00 ರೂ ಸದರಿ ಟ್ರಾಕ್ಟರ ಚಾಲಕನು ಓಡಿ ಹೋಗಿದ್ದರಿಂದ  ನಾನು ಬೇರೆಯವರ ಸಹಾಯದಿಂದ ಸದರಿ ಮರಳು ತುಂಬಿದ ಟ್ರಾಕ್ಟರ ಪೊಲೀಸ ಠಾಣೆಗೆ ಟ್ರಾಕ್ಟರ ಚಾಲಕ ಮತ್ತು ಮಾಲಿಕ ಸೇರಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿಣಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟ್ರಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಕಮಲಾಬಾಯಿ ಗಂಡ ಕುಪೇಂದ್ರ ಚವ್ಹಾಣ ಸಾ: ನಂದಿಕೂರ ತಾಂಡಾ  ತಾ: ಜಿ: ಕಲಬುರಗಿ  ರವರಿಗೆ 1) ಜಯಶ್ರೀ 2) ರಾಜಶ್ರೀ 3) ಪೂಜಾ 4) ಪೂನಂ 5) ಸುಸಮಿತಾ 6) ಪ್ರಿಯಂಕಾ  7) ರೇಣುಕಾ ಅಂತಾ 7 ಜನ ಹೆಣ್ಣು ಮಕ್ಕಳಿದ್ದು ಗಂಡು ಮಕ್ಕಳು ಇರುವುದಿಲ್ಲಾ  ಇದರಲ್ಲಿ ಜಯಶ್ರೀ  ಈಕೆಗೆ ಮದುವೆ  ಮಾಡಿಕೊಟ್ಟಿದ್ದು  ಉಳಿದ ಮಕ್ಕಳೊಡನೆ  ನಾವೆಲ್ಲರೂ  ಇರುತ್ತೇವೆ  ನನ್ನ ಗಂಡ ಈಗ ಸುಮಾರು ವರ್ಷಗಳಿಂದ ನಮಗೆ ಗಂಡು ಮಕ್ಕಳು ಇರುವು ದಿಲ್ಲಾ ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಲು ಸರಾಯಿ ಕುಡಿಯುವ ಚಟಕ್ಕೆ ಬಿದ್ದು ದಿನಾಲು ಮನೆಗೆ ಸರಾಯಿ ಕುಡಿದು ಬರುತಿದ್ದು ನಾನು ಗಂಡನಿಗೆ ಸಮಾದಾನ ಹೇಳಿದರು ಸಹ ಹಾಗೇ ಸರಾಯಿ ಕುಡಿಯುತ್ತಾ ಬಂದಿರುತ್ತಾನೆ.  ಹೀಗಿದ್ದು ದಿನಾಂಕ 11/08/2017 ರಂದು ರಾತ್ರಿ 10:30 ಗಂಟೆ ಸುಮಾರಿಗೆ ನಾನು ಮಕ್ಕಳೋಡನೆ  ಮನೆಯಲ್ಲಿದ್ದಾಗ  ಅದೇ ಸಮಯಕ್ಕೆ ನನ್ನ ಗಂಡ ವಿಪರೀತ ಸರಾಯಿ ಕುಡಿದು ಮನೆಗೆ ಬಂದು ಮನೆ ಯಲ್ಲಿ ಒಂದು ರೂಮಿನಲ್ಲಿ ಹೋಗಿ ಬಾಗಿಲು ಮುಚ್ಚಿದನು ಆಗ ನಾನು ಬಾಗಿಲು ತೆಗೆಯಲು ಹೇಳಿದಾಗ  ಗಂಡ ಚೀರಾಡುತ್ತಾ ಬಾಗಿಲು  ತೆಗೆದನು ಆತನ ಪೂರ್ತಿ ಮೈಗೆ ಬೆಂಕಿ ಹತ್ತಿ ಉರಿಯುತ್ತಿರುವಾಗ ನಾನು ಹಾಗೂ ಮಕ್ಕಳು ಕೂಡಿ  ಬೆಂಕಿ ಆರಿಸಿರು ತ್ತೇವೆ ಇದರಿಂದ ನನ್ನ ಗಂಡನ ಮೈ ಪೂರ್ತಿ ಸುಟ್ಟು ಕಪ್ಪಾಗಿ  ಅಲ್ಲಲ್ಲಿ  ಚರ್ಮ ಸುಲಿದು ಬೆಳ್ಳಗಾಗಿದ್ದರಿಂದ ಗಂಡನಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಗಂಡ ಉಪ ಚಾರದಲ್ಲಿ ಗುಣ ಮುಖವಾಗದೇ ನಿನ್ನೆ ದಿನಾಂಕ 12/08/2017 ರಂದು ರಾತ್ರಿ 11:30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿ ಅತ್ಮಹತ್ಯೆಗೆ ಪ್ರಚೋದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ತಹಶೀನ ಗಂಡ ಗೌಸಪಟೇಲ ಮಾಲಿಪಟೇಲ್ ಸಾ : ಹಡಗಿಲ್ ಹಾರುತಿ ಹಾ.ವ. ರಾಜ ಫಂಕ್ಷನ ಹಾಲ ಹಿಂದುಗಡೆ ಡಬರಾಬಾದ ರೋಡ ಕಲಬುರಗಿ ರವರನ್ನು ಕಳೆದ 4 ವರ್ಷಗಳ ಹಿಂದೆ ನನ್ನಮದುವೆಯು ಹಡಗಿಲ ಹಾರುತಿಯ  ಉಸ್ಮಾನ ಪಟೇಲ್ ಇವರ ಮಗ ಗೌಸಪಟೇಲ್ ಇವರೊಂದಗಿ ಆಗಿರುತ್ತದೆ. ನನ್ನ ತವರು ಮನೆ ಜೇವರ್ಗಿ ತಾಲೂಕಿನ ಯಳವಾರ ಗ್ರಾಮ ಇರುತ್ತದೆ. ನನಗೆ ಈಗ  ಒಂದು ಹೆಣ್ಣು ಮಗಳು ಶೀಫಾ 2 ½ ವರ್ಷ , ಒಂದು ಗಂಡು ಮಗು ಅರಮಾನ ವಯ; 1 ವರ್ಷ ದವನಿರುತ್ತಾನೆ.ನನ್ನ ಮದುವೆಯಾದಾಗಿನಿಂದ ನನ್ನ ಗಂಡ ಗೌಸ ಪಟೇಲ್ ಮತ್ತು ನನ್ನ ಅತ್ತೆ ಉಮೇರಾಬೇಗಂ  ಇವರು ಮತ್ತು ನಾದನಿಯವರಾದ ಹೀನಾ , ನಲೂ @ ನಿಲೋಫರ ಹಾಗೂ ಶಮಾ ಇವರೆಲ್ಲರೂ ನನಗೆ ತುಮ ಅಚ್ಚಿ ನಹಿ ಹೈ , ಹಮಾರಿ ಘರಕೂ ಲಾಯಕ್ ನಹಿ ಹೈ , ಕಾಮ ದಂದಾ ಕರನೇ ನಹಿ ಆತಾ ಅಂತಾ ವಿನಾಕಾರಣ  ನನಗೆ ಅವಾಚ್ಯ ಶಬ್ದಗಳಿಂದ ಬೈಯುವದು ಹೊಡೆಬಡಿ ಮಾಡುತಾ ಮಾನಸಿಕ ಹಾಗೂ ದೈಹಿಕವಾಗಿ ಕಿರಕುಳ ಕೊಟ್ಟಿರುವಾಗ 2 ವರ್ಷಗಳ ಹಿಂದೆ ನಮ್ಮ ತಂದೆ ತಾಯಿಯವರಿಗೆ ಹೇಳಿದಾಗ ಅವರು ಕಲಬುರಗಿಗೆ ಬಂದು ನನ್ನ ಗಂಡ ಅತ್ತೆಯವರಿಗೆ ತಿಳಿ ಹೇಳಿ ನನಗೆ ಸಮಜಾಯಿಸಿ ಹೋಗಿದ್ದು ಇರುತ್ತದೆ.  ಆದಾಗ್ಯೂ ಕೂಡಾ ನನಗೆ ಒಂದಿಲ್ಲಾ ಒಂದು ಕಾರಣದಿಂದ ನನಗೆ ಹಿಂಸೆ ಕೋಡುತ್ತಾ ಬಂದಿರುತ್ತಾರೆ.  ನನ್ನ ನಾದನಿ  ಹೀನಾ ಇವಳ ಗಂಡ ತೀರಿಕೊಂಡಿದ್ದು  ಅವಳು ನಮ್ಮ ಮನೆಯಲ್ಲಿರುತ್ತಾಳೆ ,  ಮತ್ತು ನಿಲಾ@ ನಿಲೋಫರ  ಗಂಡ ಸಿರಾಜ ಪಟೇಲ್ ಹಾಗು ಶಮಾ ಗಂಡ ಸೈಯದ ಪಟೇಲ್ ಇವರು  1 ½ ತಿಂಗಳಿಂದ ನಮ್ಮಲ್ಲಿಯೇ ಇರುತ್ತಾರೆ. ದಿನಾಂಕ. 12-8-2017 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ನನ್ನ ಗಂಡ ಕೆಲಸಕ್ಕೆ ಹೋಗಿದ್ದು  ಮನೆಯಲ್ಲಿ ನನ್ನ ಅತ್ತೆ ಉಮೇಗಾ ಬೇಗಂ. ನಾದನಿಯರಾದ ಹೀನಾ , ನೀಲೋಫರ , ಹಾಗೂ ಶಮಾ ಇವರು ನಾಲ್ಕು ಜನರಿದ್ದು  ಇವರೆಲ್ಲರು ನನಗೆ ರಾಂಡ ಕಾಮ ಜಲ್ದಿ ಜಲ್ದಿ ಕರನೇ ನಹಿ ಆತಾ,  ಅಂತಾ ಅವಾಚ್ಯ ಶಬ್ದಗಳಿ ಬೈಯ್ದು ನನ್ನ ಅತ್ತೆ ಯು  ರಂಡಿ ನಮ್ಮ ಮನಗೆ ನೀನು ಲಾಯಕ್ ಇಲ್ಲಾ  ನಿನಗೆ ಏನು ತಿಳಿಯುವದಿಲ್ಲಾ ಹುಚ್ಚರಿಂಡಿ ಮನೆ ಬಿಟ್ಟು ಎಲ್ಲಿಯಾದರೂ ಹೋಗು  ಇಲ್ಲದಿದ್ದರೆ ನಿನಗೆ ಮನಯಲ್ಲಿ ಇಟ್ಟುಕೊಳ್ಳುವದಿಲ್ಲಾ ಎಂದು ಬೆದರಿಕೆ ಹಾಕಿದರು ಇದರಿಂದ ನಾನು  ಹೆದರಿ ಜೀವನದಲ್ಲಿ ನೊಂದು  ಮದ್ಯಾನ 3-00 ಗಂಟೆಯ ಸುಮಾರಿಗೆ ನಾನು  ನಮ್ಮ ಬೆಡರೂಮಿನಲ್ಲಿ  ಸೀಮೆ ಎಣ್ಣಿ ನನ್ನ ಮೈ ಮೇಲೆ ಹಾಕಿಕೊಂಡು ಬೆಂಕಿಕಡ್ಡಿಯನ್ನು ಕೊರೆದು ಮೈಗೆ ಬೆಂಕಿ ಹಚ್ಚಿಕೊಂಡಿದ್ದು ನನ್ನ ಮೈಗೆ ಹತ್ತಿ ಉರಿಯುತಿದ್ದಾಗ ನಾನು ಚೀರಾಡುವಾಗ ನನ್ನ ಅತ್ತೆ  ಉಮೇರಾಬೇಗಂ , ನಾದನಿಯವರಾದ ನಿಲೋಫರ ಹಾಗೂ  ನಾದನಿಯ ಮಗ  ಜಾವೇದ  ಇವರು ಬಂದು ನನಗೆ ಹತ್ತಿರುವ ಬೆಂಕಿ ಆರಿಸಿ ನಂತರ 108 ಅಂಬುಲೆನ್ಸನ್ನು ಕರೆಯಿಸಿ ನನಗೆ ಉಪಚಾರ ಕುರಿತು ಕಲಬುರಗಿಯ ಜಿಲ್ಲಾ ಸರಕಾರಿ  ಆಸ್ಪತ್ರೆಯಲ್ಲಿ ಸೇರಿಕೆಮಾಡಿರುತ್ತಾರೆ. ಆದುದರಿಂದ ನನ್ನ ಗಂಡ ಮಹಮ್ಮದ ಗೌಶ , ನನ್ನ ಅತ್ತೆ  ಉಮೇರಾಬೇಗಂ , ನಾದನಿಯವರಾದ ನಿಲಾ @ ನಿಲೋಫರರ,  ಶಮಾ ಗಂಡ ಸೈಯ್ಯದ್ ಇವರೆಲ್ಲರೂ ನನಗೆ ಅಡುಗೆ ಸರಿಯಾಗಿ ಮಾಡುವದಿಲ್ಲಾ , ವಿಳಂಬ ಮಾಡುತ್ತಿ , ನಮ್ಮ ಮನೆಗೆ ಲಾಯಕಿಲ್ಲಾ , ಮನೆಬಿಟ್ಟು ಹೋಗು ರಂಡಿ ಬೋಸಡಿ ಅಂತಾ ಬೈಯುವದು , ಹೊಡೆಬಡಿ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಕೊಟ್ಟ ಕಿರಕುಳ ತಾಳಲಾರದೆ  ಮನಸಿನ ಮೇಲೆ ಪರೀಣಾಮ ಮಾಡಿಕೊಂಡು   ದಿನಾಂಕ. 12-8-2017 ರಂದು ಮದ್ಯಾನ 3-00 ಗಂಟೆಯಸುಮಾರಿಗೆ  ನಮ್ಮ ಮನೆಯಲ್ಲಿ ನಾನು ಮೈಮೇಲೆ ಸೀಮೆ ಎಣ್ಣಿ ಹಾಕಿಕೊಂಡು  ಬೆಂಕಿ ಹಚ್ಚಿಕೊಂಡು ಆತ್ಮ ಹತ್ತೆ ಮಾಡಿಕೊಳ್ಳಲು ನನ್ನ ಗಂಡ ಮಹಮ್ಮದ ಗೌಶ , ನನ್ನ ಅತ್ತೆ  ಉಮೇರಾಬೇಗಂ , ನಾದನಿಯವರಾದ  ಹೀನಾ ಗಂಡ  ಇಮಾಮ ಪಟೇಲ್ ,ನಿಲಾ @ ನಿಲೋಫರರ,  ಶಮಾ ಗಂಡ ಸೈಯ್ಯದ್  ಸಾ; ರಾಜಾಫಕ್ಸನ ಹಾಲ ಹಿಂದುಗಡೆ ಡಬರಾಬಾದ ರೋಡ ಕಲಬುರಗಿ ಇವರೆಲ್ಲರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 August 2017

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 2/08/2017 ರಂದು ರಾತ್ರಿ ನಿಮ್ಮ ಗಂಢನಾದ ನಾಗನಾಥ ಇವರು ಹುಮಾಬಾದ್ ರಿಂಗ್ ರಸ್ತೆ ಕಡೆಯಿಂದ ಹಾಗರಗಾ ಕ್ರಾಸ್ ಕಡೆಗೆ ಹೋಗುವ ರಸ್ತೆಯಲ್ಲಿರುವ ಹೊಂಡಾ ಕಾರ  ಶೋ ರೂಮು ಎದುರುಗಡೆ ರಸ್ತೆ ಬದಿಯಿಂದ ಸೈಕಲ್‌ ತಳ್ಳಿಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂಬದಿಯಿಂದ ಅಂದರೆ ಹುಮನಾಬಾದ ರಿಂಗ ರಸ್ತೆ ಕಡೆಯಿಂದ ಒಬ್ಬ ಆಟೊ ಚಾಲಕನು ತನ್ನ ಆಟೋವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದವನೆ ನನ್ನ ಗಂಡ ನಾಗನಾಥ ಇತನಿಗೆ ಜೋರಾಗಿ ಡಿಕ್ಕಕೊಟ್ಟು ಅಪಘಾತ ಪಡಿಸಿ ಆಟೋವನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ನಿಲ್ಲಿಸದೇ ಹಾಗರಗಾ ಕ್ರಾಸ್ ಕಡೆಗೆ ಓಡಿಸಿಕೊಂಡು ಹೋದನು, ಅಪಘತ ಪಡಿಸಿದ ಆಟೋ ನಂ ಕತ್ತಲಲ್ಲಿ ಸರಿಯಾಗಿ ನೊಡಿರುವುದಿಲ್ಲ ಮತ್ತು ಆಟೋ ಚಾಲಕನ ಹೆಸರು ಗೊತ್ತಿರುವುದಿಲ್ಲ. ಮುಂದೆ ನಾಗನಾಥ ಇವರಿಗೆ 108 ಅಂಬುಲೆನ್ಸ್ ದಲ್ಲಿ ಹಾಕಿಕೊಂಡು ಇಲಾಜ ಕುರಿತು ಸರಕಾರಿ ಆಸ್ಪತ್ರೆಗೆ ಒಯಿದಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಗೊಂಡು ನನ್ನ ಮಗ ಮಹೇಶ ಮತ್ತು ಭಾವನ ಮಗ ಗಂಗಾಧರ ಎಲ್ಲರೂ ಕೂಡಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ನನ್ನ ಗಂಡನಿಗೆ ನೋಡಲಾಗಿ ಆತನಿಗೆ ತಲೆಯ ಹಿಂದೆ ಭಾರಿ ರಕ್ತಗಾಯ ಮುಂದಿನ ತಲೆಗೆ ರಕ್ತಗಾಯ, ನಡು ಹಣೆಗೆ ಗುಪ್ತಗಾಯವಾಗಿದ್ದು ಅವರಿಗೆ ಮಾತನಾಡಿಸಲು ಮಾತಾಡದೇ ಬೇಹೋಸ್‌ ಆಗಿದ್ದರಿಂದ ನಂತರ ದಿನಾಂಕ: 04/08/2017 ರಂದು ನನ್ನ ಗಂಡನಿಗೆ ಹೆಚ್ಚಿನ ಇಲಾಜ್‌ ಕುರಿತು ಸರಕಾರಿ  ಆಸ್ಪತ್ರೆಯಿಂದ ಗಂಗಾ ಆಸ್ಪತ್ರೆ ಕಲಬುರಗಿಯಲ್ಲಿ ಒಯಿದು ಸೇರಿಕೆ ಮಾಡಿದ್ದು ನನ್ನ ಗಂಡನಾದ  ದಿನಾಂಕ: 02/08/2017 ರಂದು ಆದ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರವನ್ನು ದಿನಾಂಕ: 04/08/2017 ರಿಂದ ದಿನಾಂಕ: 11/08/2017 ರ ವರೆಗೆ ಗಂಗಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೆ ಇಂದು ದಿನಾಂಕ: 11/08/2017 ರಂದು ಮದ್ಯಾಹ್ನ 3-30 ಗಂಟೆಗೆ ಮೃತಪಟ್ಟಿರುತ್ತಾನೆ.  ಅಂತಾ ಶ್ರೀಮತಿ ಸರೊಜಾಬಾಯಿ ಗಂಡ ನಾಗನಾಥ ಪಂಚಾಳ ಮು;ಹೋಳಸಮುದ್ರ ತಾಲುಕು ಅವರಾದ ಜಿಲ್ಲಾ ಬಿದರ ಸದ್ಯ ಇಂಡಸ್ಟ್ರಯಲ್ ಎರಿಯಾ ಮೊದಲನೆ ಹಂತ ಕಪನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ :  ದಿನಾಂಕ 11-08-2017 ರಂದು ಗುಡ್ಡೆವಾಡಿ ಗ್ರಾಮದ ಕಡೆಯಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ,  ಜೆ.ಎಚ್. ಇನಾಮದಾರ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದೇಸಾಯಿ ಕಲ್ಲೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಮರಳು ತುಂಬಿದ ಕೊಂಡು ಬರುತ್ತಿದ್ದುದನ್ನು ನೋಡಿ ಟಿಪ್ಪರನ್ನು ನಿಲ್ಲಿಸಿ ಅದರ ಚಾಲಕನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ವಿಜಯಕುಮಾರ ತಂದೆ ಸಾಯಬಣ್ಣ ರಾಂಪೂರ ಸಾ|| ಹಡಗಿಲ್ ತಾ|| ಜಿ|| ಕಲಬುರಗಿ ಅಂತಾ ತಿಳಿಸಿದ್ದು, ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ ಮಾಡಲಾಗಿ, ಟಿಪ್ಪರದಲ್ಲಿ ಮರಳೂ ತುಂಬಿದ್ದು ಇದ್ದು ಅದರ ನಂಬರ ಕೆಎ-34 ಬಿ-3953 ಅಂತಾ ಇರುತ್ತದೆ. ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧಿಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದನು. ಸದರಿ ಟಿಪ್ಪರ ಅಂದಾಜು 10,00,000/- ರೂ ಇದ್ದು, ಅದರಲ್ಲಿದ್ದ ಮರಳು ಅಂದಾಜು 5,000/- ರೂ ಕಿಮ್ಮತ್ತಿನದು ಇರುತ್ತದೆ. ನಂತರ ಸದರಿ ಮರಳು ತುಂಬಿದ ಟಿಪ್ಪರ ಸಮೇತ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ

11 August 2017

Kalaburagi District Reported Crimes

ಹಲ್ಲೆ ಪ್ರಕರಣಗಳು :
ಅಪಜಲಪೂರ ಠಾಣೆ : ಶ್ರೀ ಅಪ್ಪಾರಾವ ತಂದೆ  ಶಿವರಾವ ಪಾಟೀಲ ಸಾ|| ತೇಲ್ಲೂಣಗಿ ಇವರು ದಿನಾಂಕ 09-08-2017 ರಂದು ರಾತ್ರಿ 9:00 ಗಂಟೆಗೆ ತೋಟದ ಮನೆಯಿಂದ ಊರಿಗೆ ಬಂದಿದ್ದು, ನನ್ನನ್ನು ಕಂಡ ಸುಮಾರು 07 ಜನರ ತಂಡ ನಮ್ಮುರಿನ ಅಂಬೇಡ್ಕರ ಸರ್ಕಲದಲ್ಲಿ ಬಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ, ಅಂದರೆ ಆನಂದ ತಂದೆ ಭೀಮಶಾ ಚಿತ್ಪೂರ, ಪ್ರವೀಣಕುಮಾರ  ಚಿತ್ಪೂರ, ಶಿವಾನಂದ ತಂದೆ ಅಣ್ಣಾರಾವ ಚಿತ್ಪೂರ, ನಾಗೇಂದ್ರಪ್ಪ ಚಿತ್ಪೂರ, ಬೈರು ತಂದೆ ಭೀಮಶಾ ಚಿತ್ಪೂರ, ರಾಜು ಬಿ ಚಿತ್ಪೂರ ಪ್ರಮುಖ ಆರೋಪಿ ಸಿದ್ದಾರಾಮ ತಂದೆ ಶ್ರೀಶೈಲ ಚಿತ್ಪೂರ ಇವರೆಲ್ಲರೂ ಕೂಡಿಕೊಂಡು ಬಂದು, ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ನನಗೆ ಈ 07 ಜನರು ಒಮ್ಮಲೆ ನನ್ನ ಮೇಲೆ ಎರಗಿ ಬಂದು ಹೊಡೆದಿದ್ದಾರೆ ಮತ್ತು ನನ್ನ ಕುತ್ತಿಗೆ ಒತ್ತಿ ಹಿಡಿದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ನನ್ನ ಶರ್ಟ ಮತ್ತು ತಲೆಯ ಮೇಲೆ ಅಂಗಾಂಗದ ಮೇಲೆ ಗಾಯಗಳಾಗಿವೆ, ನಂತರ ಊರಿನ ಜನರು ನನ್ನನ್ನು ಈ 07 ಜನರು ಹೊಡೆಯುವುದನ್ನು ಕಂಡು ಓಡಿ ಬಂದು ಬಿಡಿಸಿದರು, ಆದ್ದರಿಂದ ಇವರಿಂದ ಹಲವು ಸಾರಿ ನನಗೆ ಜೀವ ಬೇದರಿಕೆ ಹಾಕದ್ದಾರೆ ಮತ್ತು ನನ್ನ ಜೀವಕ್ಕೆ ಏನಾದರೂ ಆದರೆ ಈ 07 ಜನರೆ ನನ್ನ ಜಿವಕ್ಕೆ ಅಪಾಯವಿದೆ ಆದ್ದರಿಂದ ಇವರಿಗೆ ಕಾನೂನಿನ ಪ್ರಕಾರ ಜರುಗಿಸಬೇಕು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಸಿದ್ದರಾಮ ತಂದೆ ಶ್ರೀಶೈಲ ಚಿತ್ತಪೂರ ಸಾ||ತೆಲ್ಲೂಣಗಿ ತಾ||ಅಫಜಲಪೂರ ರವರ ಊರು ನಂದರ್ಗಾ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವುದರಿಂದ ಗ್ರಾಮಿಣ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಕಾಮಗಾರಿ ಮಂಜೂರಾಗಿದ್ದು ಸದರಿ ಕೆಲಸವನ್ನು ನಮ್ಮ ಗ್ರಾಮದ ಅಪ್ಪಾಶ್ಯಾ ತಂದೆ ಶಿವರಾಮ ಪಾಟೀಲ ರವರು ಗುತ್ತಿಗೆ ಹಿಡಿದಿರುತ್ತಾರೆ. ಸದರಿ ಕಾಮಗಾರಿಯನ್ನು ಸರಿಯಾಗಿ ಮಾಡದಿರುವುದರಿಂದ ನಾನು ನಮ್ಮ ಗ್ರಾಮದಲ್ಲಿ ಸದರಿ ಕೆಲಸದ ಬಗ್ಗೆ ಪ್ರಶ್ನಿಸಿದ್ದು ಇರುತ್ತದೆ. ಸದರಿ ವಿಷಯದ ಬಗ್ಗೆ ಅಪ್ಪಾಶ್ಯಾ ರವರು ನನ್ನ ಮೇಲೆ ದ್ವೇಷ ಕಟ್ಟಿಕೊಂಡು ದಿನಾಂಕ 09/08/2017 ರಂದು ಬೆಳಿಗ್ಗೆ ನಾನು ಹಾಗು ನಮ್ಮ ಗ್ರಾಮದ ಕಲ್ಲಪ್ಪ ತಂದೆ ಧರ್ಮಣ್ಣ ಪುಲಾರಿ,ಚಂದ್ರಕಾಂತ ತಂದೆ ಶಂಕರ ಬನಸೋಡಿ, ರಾಜಕೂಮಾರ ಮಾಂಗ ಎಲ್ಲರು ಕೆಲಸದ ನಿಮಿತ್ಯಾ ಅಫಜಲಪೂರ  ತಹಸಿಲ ಕಾರ್ಯಾಲಯಕ್ಕೆ ಬಂದಿದ್ದು ಇರುತ್ತದೆ ನಮ್ಮಂತೆ ಅಪ್ಪಾಶ್ಯಾ ಪಾಟೀಲ ರವರು ಬಂದಿರುತ್ತಾರೆ ನಾನು ಹಾಗು ಕಲ್ಲಪ್ಪ,ಚಂದ್ರಕಾಂತ, ರಾಜಕೂಮಾರ ನಾಲ್ಕು ಜನರು ಮದ್ಯಾಹ್ನ 1.30 ಪಿಎಮ್ ಸುಮಾರಿಗೆ ತಹಸಿಲ ಕಾರ್ಯಾಲಯದ ಮುಂದಿರುವ ಹೋಟೆಲದಲ್ಲಿ ಚಾಹ ಕುಡಿದು  ಹೋಟೆಲ ಮುಂದೆ ಮಾತನಾಡುತ್ತಾ ನಿಂತಾಗ ಅಪ್ಪಾಶ್ಯಾ ಪಾಟೀಲ ರವರು ನಮ್ಮ ಹತ್ತಿರ ಬಂದು ನನಗೆ ತಡೆದು ನಿಲ್ಲಿಸಿ ರಂಡಿಮಗನೇ ಸಿದ್ದ್ಯಾ ನಾ ಪಂಚಾಯತಿ ಕಡೆದಿಂದ ಮಾಡಿಸಿದ ಕೆಲಸದ ಬಗ್ಗೆ ಕೆಳ್ತಿ ಬೋಸಡಿಗೆ ನೀ ಯಾರ್ಲೆ ಅಂತ ಬೈಯುತಿದ್ದಾಗ ಅಲ್ಲೆ ಇದ್ದ  ಕಲ್ಲಪ್ಪ, ಚಂದ್ರಕಾಂತ ಹಾಗು ರಾಜಕುಮಾರ ಮೂರು ಜನರು ಅಪ್ಪಾಶ್ಯಾ ರವರಿಗೆ ಯಾಕ್ರಿ ಸುಮ್ನೆ ಬೈತಿರಿ ಊರಲ್ಲಿ ಮಾತಾಡೋಣ ಅಂತ ಹೇಳುತಿದ್ದಾಗ ಅಪ್ಪಾಶ್ಯಾ ರವರು ಕೇಳದೆ ನನ್ನ ಎದೆಯ ಮೇಲಿನ ಅಂಗಿ ಹಿಡಿದು ನನ್ನ ಹೊಟ್ಟೆಗೆ, ಎದೆಗೆ ತಮ್ಮ ಕೈ ಮುಷ್ಠಿ ಮಾಡಿ ಹೊಡೆಯುತಿದ್ದಾಗ ಕಲ್ಲಪ್ಪ, ಚಂದ್ರಕಾಂತ, ರಾಜಕುಮಾರ ಬಿಡಿಸಿರುತ್ತಾರೆ ಅಪ್ಪಾಶ್ಯಾ ಇತನು ಅಲ್ಲಿಂದ ಹೋಗುವಾಗ ನನಗೆ ರಂಡಿ ಮಗನೇ ಸಿದ್ದ್ಯಾ ನೀ ಊರಾಗ ಸಿಗು ನಿನ್ನ ಜೀವಾ ಹೊಡಿತಿನಿ ಅಂತ ಅಂದು ಅಲ್ಲಿಂದ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ನಾಗನಾಥ ತಂದೆ ಜಕ್ಕಪ್ಪ ಹಡಪದ ಸಾ: ಸೊಲ್ಲಾಪೂರ ರವರು ದಿನಾಂಕ 10-07-2017 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಾನು ನನ್ನ ಗೆಳೆಯನಾದ ಪಾಂಡು@ಮಲ್ಲನಾಥ ತಂದೆ ಸಿದ್ದಣ್ಣ ಕಾಳೆ ಇಬ್ಬರು ಕೂಡಿ ನಮ್ಮ ಹಿರೋ ಹೊಂಡಾ ಮೋಟಾರ್ ಸೈಕಲ್ ನಂ MH 14 GG-0076 ನೇದ್ದರ ಮೇಲೆ ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರದ ದತ್ತಾತ್ರೇಯ ದರ್ಶನಕ್ಕೆ ಬಂದು ಗಾಣಗಾಪೂರದಲ್ಲಿ ದರ್ಶನ ಮಾಡಿ ಮರಳಿ ನಮ್ಮ ಸೋಲಾಪೂರಕ್ಕೆ ಬರುವಾಗ ಸದರಿ ಮೋಟಾರ್ ಸೈಕಲ್ ನಾನೆ ಚಲಾಯಿಸುತ್ತಾ ಅಫಜಲಪೂರ ಸಮೀಪ ಇರುವ ಆನೂರ ರೋಡಿಗೆ ಇರುವ ಹತ್ತಿ ಮೀಲ್ ಹತ್ತಿರ  ಸಾಯಂಕಾಲ 6.00 ಗಂಟೆ ಸುಮಾರಿಗೆ ಬರುತಿದ್ದಾಗ ನಮ್ಮ ಎದುರಿನಿಂದ ಒಂದು ಟಿಪ್ಪರ ನೇದ್ದರ ಚಾಲಕ ಟಿಪ್ಪರನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ನಾನು ಹಾಗು ಪಾಂಡು@ ಮಲ್ಲಿನಾಥ ಇಬ್ಬರು ಜೋರಾಗಿ ಕೆಳಗೆ ಬಿದ್ದು ನನ್ನ ಬಲಗಾಲು ಸದರಿ ಟಿಪ್ಪರಿನ ಚಕ್ರದದಲ್ಲಿ ಸಿಲುಕಿ ನನ್ನ ಬಲಗಾಲು  ಮೊಳಕಾಲಿನಿಂದ ಕೆಳಗೆ ಪೂರ್ಣವಾಗಿ  ನುಜ್ಜುಗುಜ್ಜಾಗಿರುತ್ತದೆ. ಪಾಂಡು@ ಮಲ್ಲಿನಾಥನಿಗೆ ಮೈಕೈಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿರುತ್ತವೆ. ಸದರಿ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ.ಟಿಪ್ಪರಿನ ನಂಬರ ನೋಡಲಾಗಿ TATA ಕಂಪನಿಯ ಟಿಪ್ಪರ ಇದ್ದು ಅದರ ನಂ KA-28 B-6655 ಅಂತ ಇರುತ್ತದೆ. ನಂತರ  ಅಲ್ಲಿಂದ ಹೋಗುತಿದ್ದ ಜನರು ಹಾಗು ಅಲ್ಲೆ ಹತ್ತಿ ಮಿಲ್ಲ್ ಬಳಿ ಇದ್ದ ಜನರು ನಮ್ಮ ಹತ್ತಿರ ಬಂದು ನಮ್ಮನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಸೇರಿಕೆ ಮಾಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಸೊಮಶೇಖರ ತಂದೆ ಸುಭಾಶ್ಚಂದ್ರ ಆಲೂರ  ಸಾ|| ಗುಂಜ ಬಬಲಾದ ತಾ|| ಆಳಂದ ಜಿ|| ಕಲಬುರಗಿ ರವರು ತನ್ನ ಮೋಟಾರ ಸೈಕಲ್ ನಂ ಕೆ.ಎ-32 ಇ.ಸಿ 6925 Chassis No. MBLHA10AMCHL57788 Engine No HA10EJCHL09552 ಅ.ಕಿ.ರೂ 20,000/- ರೂ ನೇದ್ದನ್ನು ದಿನಾಂಕ 07-08-2017 ರಂದು 7-30 ಪಿಎಮ್ ಸುಮಾರಿಗೆ ಮಾಹಾಗಾಂವ ಕ್ರಾಸಿನ ರಾಕೇಶ ಹೋಟಲ ಮುಂದುಗಡೆ ನಿಲ್ಲಿಸಿ ಚಹಾ ಕುಡಿದು ಮರಳಿ 8-15 ಪಿಎಮ್ ಕ್ಕೆ ಬಂದು ನೋಡಲು ಮೋಟಾರ ಸೈಕಲ್ ಇರಲಿಲ್ಲ ಯಾರೋ ಅಪರಿಚಿತ ಕಳ್ಳರು ನನನ್ನ ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.