POLICE BHAVAN KALABURAGI

POLICE BHAVAN KALABURAGI

12 August 2017

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 2/08/2017 ರಂದು ರಾತ್ರಿ ನಿಮ್ಮ ಗಂಢನಾದ ನಾಗನಾಥ ಇವರು ಹುಮಾಬಾದ್ ರಿಂಗ್ ರಸ್ತೆ ಕಡೆಯಿಂದ ಹಾಗರಗಾ ಕ್ರಾಸ್ ಕಡೆಗೆ ಹೋಗುವ ರಸ್ತೆಯಲ್ಲಿರುವ ಹೊಂಡಾ ಕಾರ  ಶೋ ರೂಮು ಎದುರುಗಡೆ ರಸ್ತೆ ಬದಿಯಿಂದ ಸೈಕಲ್‌ ತಳ್ಳಿಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂಬದಿಯಿಂದ ಅಂದರೆ ಹುಮನಾಬಾದ ರಿಂಗ ರಸ್ತೆ ಕಡೆಯಿಂದ ಒಬ್ಬ ಆಟೊ ಚಾಲಕನು ತನ್ನ ಆಟೋವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದವನೆ ನನ್ನ ಗಂಡ ನಾಗನಾಥ ಇತನಿಗೆ ಜೋರಾಗಿ ಡಿಕ್ಕಕೊಟ್ಟು ಅಪಘಾತ ಪಡಿಸಿ ಆಟೋವನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ನಿಲ್ಲಿಸದೇ ಹಾಗರಗಾ ಕ್ರಾಸ್ ಕಡೆಗೆ ಓಡಿಸಿಕೊಂಡು ಹೋದನು, ಅಪಘತ ಪಡಿಸಿದ ಆಟೋ ನಂ ಕತ್ತಲಲ್ಲಿ ಸರಿಯಾಗಿ ನೊಡಿರುವುದಿಲ್ಲ ಮತ್ತು ಆಟೋ ಚಾಲಕನ ಹೆಸರು ಗೊತ್ತಿರುವುದಿಲ್ಲ. ಮುಂದೆ ನಾಗನಾಥ ಇವರಿಗೆ 108 ಅಂಬುಲೆನ್ಸ್ ದಲ್ಲಿ ಹಾಕಿಕೊಂಡು ಇಲಾಜ ಕುರಿತು ಸರಕಾರಿ ಆಸ್ಪತ್ರೆಗೆ ಒಯಿದಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಗೊಂಡು ನನ್ನ ಮಗ ಮಹೇಶ ಮತ್ತು ಭಾವನ ಮಗ ಗಂಗಾಧರ ಎಲ್ಲರೂ ಕೂಡಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ನನ್ನ ಗಂಡನಿಗೆ ನೋಡಲಾಗಿ ಆತನಿಗೆ ತಲೆಯ ಹಿಂದೆ ಭಾರಿ ರಕ್ತಗಾಯ ಮುಂದಿನ ತಲೆಗೆ ರಕ್ತಗಾಯ, ನಡು ಹಣೆಗೆ ಗುಪ್ತಗಾಯವಾಗಿದ್ದು ಅವರಿಗೆ ಮಾತನಾಡಿಸಲು ಮಾತಾಡದೇ ಬೇಹೋಸ್‌ ಆಗಿದ್ದರಿಂದ ನಂತರ ದಿನಾಂಕ: 04/08/2017 ರಂದು ನನ್ನ ಗಂಡನಿಗೆ ಹೆಚ್ಚಿನ ಇಲಾಜ್‌ ಕುರಿತು ಸರಕಾರಿ  ಆಸ್ಪತ್ರೆಯಿಂದ ಗಂಗಾ ಆಸ್ಪತ್ರೆ ಕಲಬುರಗಿಯಲ್ಲಿ ಒಯಿದು ಸೇರಿಕೆ ಮಾಡಿದ್ದು ನನ್ನ ಗಂಡನಾದ  ದಿನಾಂಕ: 02/08/2017 ರಂದು ಆದ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರವನ್ನು ದಿನಾಂಕ: 04/08/2017 ರಿಂದ ದಿನಾಂಕ: 11/08/2017 ರ ವರೆಗೆ ಗಂಗಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೆ ಇಂದು ದಿನಾಂಕ: 11/08/2017 ರಂದು ಮದ್ಯಾಹ್ನ 3-30 ಗಂಟೆಗೆ ಮೃತಪಟ್ಟಿರುತ್ತಾನೆ.  ಅಂತಾ ಶ್ರೀಮತಿ ಸರೊಜಾಬಾಯಿ ಗಂಡ ನಾಗನಾಥ ಪಂಚಾಳ ಮು;ಹೋಳಸಮುದ್ರ ತಾಲುಕು ಅವರಾದ ಜಿಲ್ಲಾ ಬಿದರ ಸದ್ಯ ಇಂಡಸ್ಟ್ರಯಲ್ ಎರಿಯಾ ಮೊದಲನೆ ಹಂತ ಕಪನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ :  ದಿನಾಂಕ 11-08-2017 ರಂದು ಗುಡ್ಡೆವಾಡಿ ಗ್ರಾಮದ ಕಡೆಯಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ,  ಜೆ.ಎಚ್. ಇನಾಮದಾರ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದೇಸಾಯಿ ಕಲ್ಲೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಮರಳು ತುಂಬಿದ ಕೊಂಡು ಬರುತ್ತಿದ್ದುದನ್ನು ನೋಡಿ ಟಿಪ್ಪರನ್ನು ನಿಲ್ಲಿಸಿ ಅದರ ಚಾಲಕನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ವಿಜಯಕುಮಾರ ತಂದೆ ಸಾಯಬಣ್ಣ ರಾಂಪೂರ ಸಾ|| ಹಡಗಿಲ್ ತಾ|| ಜಿ|| ಕಲಬುರಗಿ ಅಂತಾ ತಿಳಿಸಿದ್ದು, ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ ಮಾಡಲಾಗಿ, ಟಿಪ್ಪರದಲ್ಲಿ ಮರಳೂ ತುಂಬಿದ್ದು ಇದ್ದು ಅದರ ನಂಬರ ಕೆಎ-34 ಬಿ-3953 ಅಂತಾ ಇರುತ್ತದೆ. ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧಿಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದನು. ಸದರಿ ಟಿಪ್ಪರ ಅಂದಾಜು 10,00,000/- ರೂ ಇದ್ದು, ಅದರಲ್ಲಿದ್ದ ಮರಳು ಅಂದಾಜು 5,000/- ರೂ ಕಿಮ್ಮತ್ತಿನದು ಇರುತ್ತದೆ. ನಂತರ ಸದರಿ ಮರಳು ತುಂಬಿದ ಟಿಪ್ಪರ ಸಮೇತ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ

11 August 2017

Kalaburagi District Reported Crimes

ಹಲ್ಲೆ ಪ್ರಕರಣಗಳು :
ಅಪಜಲಪೂರ ಠಾಣೆ : ಶ್ರೀ ಅಪ್ಪಾರಾವ ತಂದೆ  ಶಿವರಾವ ಪಾಟೀಲ ಸಾ|| ತೇಲ್ಲೂಣಗಿ ಇವರು ದಿನಾಂಕ 09-08-2017 ರಂದು ರಾತ್ರಿ 9:00 ಗಂಟೆಗೆ ತೋಟದ ಮನೆಯಿಂದ ಊರಿಗೆ ಬಂದಿದ್ದು, ನನ್ನನ್ನು ಕಂಡ ಸುಮಾರು 07 ಜನರ ತಂಡ ನಮ್ಮುರಿನ ಅಂಬೇಡ್ಕರ ಸರ್ಕಲದಲ್ಲಿ ಬಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ, ಅಂದರೆ ಆನಂದ ತಂದೆ ಭೀಮಶಾ ಚಿತ್ಪೂರ, ಪ್ರವೀಣಕುಮಾರ  ಚಿತ್ಪೂರ, ಶಿವಾನಂದ ತಂದೆ ಅಣ್ಣಾರಾವ ಚಿತ್ಪೂರ, ನಾಗೇಂದ್ರಪ್ಪ ಚಿತ್ಪೂರ, ಬೈರು ತಂದೆ ಭೀಮಶಾ ಚಿತ್ಪೂರ, ರಾಜು ಬಿ ಚಿತ್ಪೂರ ಪ್ರಮುಖ ಆರೋಪಿ ಸಿದ್ದಾರಾಮ ತಂದೆ ಶ್ರೀಶೈಲ ಚಿತ್ಪೂರ ಇವರೆಲ್ಲರೂ ಕೂಡಿಕೊಂಡು ಬಂದು, ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ನನಗೆ ಈ 07 ಜನರು ಒಮ್ಮಲೆ ನನ್ನ ಮೇಲೆ ಎರಗಿ ಬಂದು ಹೊಡೆದಿದ್ದಾರೆ ಮತ್ತು ನನ್ನ ಕುತ್ತಿಗೆ ಒತ್ತಿ ಹಿಡಿದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ನನ್ನ ಶರ್ಟ ಮತ್ತು ತಲೆಯ ಮೇಲೆ ಅಂಗಾಂಗದ ಮೇಲೆ ಗಾಯಗಳಾಗಿವೆ, ನಂತರ ಊರಿನ ಜನರು ನನ್ನನ್ನು ಈ 07 ಜನರು ಹೊಡೆಯುವುದನ್ನು ಕಂಡು ಓಡಿ ಬಂದು ಬಿಡಿಸಿದರು, ಆದ್ದರಿಂದ ಇವರಿಂದ ಹಲವು ಸಾರಿ ನನಗೆ ಜೀವ ಬೇದರಿಕೆ ಹಾಕದ್ದಾರೆ ಮತ್ತು ನನ್ನ ಜೀವಕ್ಕೆ ಏನಾದರೂ ಆದರೆ ಈ 07 ಜನರೆ ನನ್ನ ಜಿವಕ್ಕೆ ಅಪಾಯವಿದೆ ಆದ್ದರಿಂದ ಇವರಿಗೆ ಕಾನೂನಿನ ಪ್ರಕಾರ ಜರುಗಿಸಬೇಕು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಸಿದ್ದರಾಮ ತಂದೆ ಶ್ರೀಶೈಲ ಚಿತ್ತಪೂರ ಸಾ||ತೆಲ್ಲೂಣಗಿ ತಾ||ಅಫಜಲಪೂರ ರವರ ಊರು ನಂದರ್ಗಾ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವುದರಿಂದ ಗ್ರಾಮಿಣ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಕಾಮಗಾರಿ ಮಂಜೂರಾಗಿದ್ದು ಸದರಿ ಕೆಲಸವನ್ನು ನಮ್ಮ ಗ್ರಾಮದ ಅಪ್ಪಾಶ್ಯಾ ತಂದೆ ಶಿವರಾಮ ಪಾಟೀಲ ರವರು ಗುತ್ತಿಗೆ ಹಿಡಿದಿರುತ್ತಾರೆ. ಸದರಿ ಕಾಮಗಾರಿಯನ್ನು ಸರಿಯಾಗಿ ಮಾಡದಿರುವುದರಿಂದ ನಾನು ನಮ್ಮ ಗ್ರಾಮದಲ್ಲಿ ಸದರಿ ಕೆಲಸದ ಬಗ್ಗೆ ಪ್ರಶ್ನಿಸಿದ್ದು ಇರುತ್ತದೆ. ಸದರಿ ವಿಷಯದ ಬಗ್ಗೆ ಅಪ್ಪಾಶ್ಯಾ ರವರು ನನ್ನ ಮೇಲೆ ದ್ವೇಷ ಕಟ್ಟಿಕೊಂಡು ದಿನಾಂಕ 09/08/2017 ರಂದು ಬೆಳಿಗ್ಗೆ ನಾನು ಹಾಗು ನಮ್ಮ ಗ್ರಾಮದ ಕಲ್ಲಪ್ಪ ತಂದೆ ಧರ್ಮಣ್ಣ ಪುಲಾರಿ,ಚಂದ್ರಕಾಂತ ತಂದೆ ಶಂಕರ ಬನಸೋಡಿ, ರಾಜಕೂಮಾರ ಮಾಂಗ ಎಲ್ಲರು ಕೆಲಸದ ನಿಮಿತ್ಯಾ ಅಫಜಲಪೂರ  ತಹಸಿಲ ಕಾರ್ಯಾಲಯಕ್ಕೆ ಬಂದಿದ್ದು ಇರುತ್ತದೆ ನಮ್ಮಂತೆ ಅಪ್ಪಾಶ್ಯಾ ಪಾಟೀಲ ರವರು ಬಂದಿರುತ್ತಾರೆ ನಾನು ಹಾಗು ಕಲ್ಲಪ್ಪ,ಚಂದ್ರಕಾಂತ, ರಾಜಕೂಮಾರ ನಾಲ್ಕು ಜನರು ಮದ್ಯಾಹ್ನ 1.30 ಪಿಎಮ್ ಸುಮಾರಿಗೆ ತಹಸಿಲ ಕಾರ್ಯಾಲಯದ ಮುಂದಿರುವ ಹೋಟೆಲದಲ್ಲಿ ಚಾಹ ಕುಡಿದು  ಹೋಟೆಲ ಮುಂದೆ ಮಾತನಾಡುತ್ತಾ ನಿಂತಾಗ ಅಪ್ಪಾಶ್ಯಾ ಪಾಟೀಲ ರವರು ನಮ್ಮ ಹತ್ತಿರ ಬಂದು ನನಗೆ ತಡೆದು ನಿಲ್ಲಿಸಿ ರಂಡಿಮಗನೇ ಸಿದ್ದ್ಯಾ ನಾ ಪಂಚಾಯತಿ ಕಡೆದಿಂದ ಮಾಡಿಸಿದ ಕೆಲಸದ ಬಗ್ಗೆ ಕೆಳ್ತಿ ಬೋಸಡಿಗೆ ನೀ ಯಾರ್ಲೆ ಅಂತ ಬೈಯುತಿದ್ದಾಗ ಅಲ್ಲೆ ಇದ್ದ  ಕಲ್ಲಪ್ಪ, ಚಂದ್ರಕಾಂತ ಹಾಗು ರಾಜಕುಮಾರ ಮೂರು ಜನರು ಅಪ್ಪಾಶ್ಯಾ ರವರಿಗೆ ಯಾಕ್ರಿ ಸುಮ್ನೆ ಬೈತಿರಿ ಊರಲ್ಲಿ ಮಾತಾಡೋಣ ಅಂತ ಹೇಳುತಿದ್ದಾಗ ಅಪ್ಪಾಶ್ಯಾ ರವರು ಕೇಳದೆ ನನ್ನ ಎದೆಯ ಮೇಲಿನ ಅಂಗಿ ಹಿಡಿದು ನನ್ನ ಹೊಟ್ಟೆಗೆ, ಎದೆಗೆ ತಮ್ಮ ಕೈ ಮುಷ್ಠಿ ಮಾಡಿ ಹೊಡೆಯುತಿದ್ದಾಗ ಕಲ್ಲಪ್ಪ, ಚಂದ್ರಕಾಂತ, ರಾಜಕುಮಾರ ಬಿಡಿಸಿರುತ್ತಾರೆ ಅಪ್ಪಾಶ್ಯಾ ಇತನು ಅಲ್ಲಿಂದ ಹೋಗುವಾಗ ನನಗೆ ರಂಡಿ ಮಗನೇ ಸಿದ್ದ್ಯಾ ನೀ ಊರಾಗ ಸಿಗು ನಿನ್ನ ಜೀವಾ ಹೊಡಿತಿನಿ ಅಂತ ಅಂದು ಅಲ್ಲಿಂದ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ನಾಗನಾಥ ತಂದೆ ಜಕ್ಕಪ್ಪ ಹಡಪದ ಸಾ: ಸೊಲ್ಲಾಪೂರ ರವರು ದಿನಾಂಕ 10-07-2017 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಾನು ನನ್ನ ಗೆಳೆಯನಾದ ಪಾಂಡು@ಮಲ್ಲನಾಥ ತಂದೆ ಸಿದ್ದಣ್ಣ ಕಾಳೆ ಇಬ್ಬರು ಕೂಡಿ ನಮ್ಮ ಹಿರೋ ಹೊಂಡಾ ಮೋಟಾರ್ ಸೈಕಲ್ ನಂ MH 14 GG-0076 ನೇದ್ದರ ಮೇಲೆ ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರದ ದತ್ತಾತ್ರೇಯ ದರ್ಶನಕ್ಕೆ ಬಂದು ಗಾಣಗಾಪೂರದಲ್ಲಿ ದರ್ಶನ ಮಾಡಿ ಮರಳಿ ನಮ್ಮ ಸೋಲಾಪೂರಕ್ಕೆ ಬರುವಾಗ ಸದರಿ ಮೋಟಾರ್ ಸೈಕಲ್ ನಾನೆ ಚಲಾಯಿಸುತ್ತಾ ಅಫಜಲಪೂರ ಸಮೀಪ ಇರುವ ಆನೂರ ರೋಡಿಗೆ ಇರುವ ಹತ್ತಿ ಮೀಲ್ ಹತ್ತಿರ  ಸಾಯಂಕಾಲ 6.00 ಗಂಟೆ ಸುಮಾರಿಗೆ ಬರುತಿದ್ದಾಗ ನಮ್ಮ ಎದುರಿನಿಂದ ಒಂದು ಟಿಪ್ಪರ ನೇದ್ದರ ಚಾಲಕ ಟಿಪ್ಪರನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ನಾನು ಹಾಗು ಪಾಂಡು@ ಮಲ್ಲಿನಾಥ ಇಬ್ಬರು ಜೋರಾಗಿ ಕೆಳಗೆ ಬಿದ್ದು ನನ್ನ ಬಲಗಾಲು ಸದರಿ ಟಿಪ್ಪರಿನ ಚಕ್ರದದಲ್ಲಿ ಸಿಲುಕಿ ನನ್ನ ಬಲಗಾಲು  ಮೊಳಕಾಲಿನಿಂದ ಕೆಳಗೆ ಪೂರ್ಣವಾಗಿ  ನುಜ್ಜುಗುಜ್ಜಾಗಿರುತ್ತದೆ. ಪಾಂಡು@ ಮಲ್ಲಿನಾಥನಿಗೆ ಮೈಕೈಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿರುತ್ತವೆ. ಸದರಿ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ.ಟಿಪ್ಪರಿನ ನಂಬರ ನೋಡಲಾಗಿ TATA ಕಂಪನಿಯ ಟಿಪ್ಪರ ಇದ್ದು ಅದರ ನಂ KA-28 B-6655 ಅಂತ ಇರುತ್ತದೆ. ನಂತರ  ಅಲ್ಲಿಂದ ಹೋಗುತಿದ್ದ ಜನರು ಹಾಗು ಅಲ್ಲೆ ಹತ್ತಿ ಮಿಲ್ಲ್ ಬಳಿ ಇದ್ದ ಜನರು ನಮ್ಮ ಹತ್ತಿರ ಬಂದು ನಮ್ಮನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಸೇರಿಕೆ ಮಾಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಸೊಮಶೇಖರ ತಂದೆ ಸುಭಾಶ್ಚಂದ್ರ ಆಲೂರ  ಸಾ|| ಗುಂಜ ಬಬಲಾದ ತಾ|| ಆಳಂದ ಜಿ|| ಕಲಬುರಗಿ ರವರು ತನ್ನ ಮೋಟಾರ ಸೈಕಲ್ ನಂ ಕೆ.ಎ-32 ಇ.ಸಿ 6925 Chassis No. MBLHA10AMCHL57788 Engine No HA10EJCHL09552 ಅ.ಕಿ.ರೂ 20,000/- ರೂ ನೇದ್ದನ್ನು ದಿನಾಂಕ 07-08-2017 ರಂದು 7-30 ಪಿಎಮ್ ಸುಮಾರಿಗೆ ಮಾಹಾಗಾಂವ ಕ್ರಾಸಿನ ರಾಕೇಶ ಹೋಟಲ ಮುಂದುಗಡೆ ನಿಲ್ಲಿಸಿ ಚಹಾ ಕುಡಿದು ಮರಳಿ 8-15 ಪಿಎಮ್ ಕ್ಕೆ ಬಂದು ನೋಡಲು ಮೋಟಾರ ಸೈಕಲ್ ಇರಲಿಲ್ಲ ಯಾರೋ ಅಪರಿಚಿತ ಕಳ್ಳರು ನನನ್ನ ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

10 August 2017

Kalaburagi District Reported Crimes

ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ  : ಶ್ರೀ ಸಂಪತ ಕುಮಾರ ತಂದೆ ಪ್ರಕಾಶ ಸಾ|| ಹನುಮಾನ ಗುಡಿಯ ಹತ್ತಿರ ಗಂಗಾನಗರ ಕಲಬುರಗಿ ಇವರ ಮನೆಯ ಬಲಕ್ಕೆ ಮಾಣಿಕ ಮತ್ತು ಎಡಕ್ಕೆ ರೇವಣಸಿದ್ದ ಇವರ ಮನೆಯಿದ್ದು ಮಾಣಿಕ ಇವರು ಎಮ್ಮೆಗಳನ್ನು ಸಾಕಿರುತ್ತಾರೆ. ಎಮ್ಮೆಗಳು ಮೂತ್ರ ವಿಸರ್ಜನೆ ಮಾಡಿದಾಗ ಅವು ನಮ್ಮ ಅಂಗಡಿ ಮುಂದಿನಿಂದ ಹರಿದು ರೇವಣಸಿದ್ದ ಇವರ ಮನೆಯ ಮುಂದೆ ರಸ್ತೆಯ ಮೇಲೆ ಹರಿದು ಹೋಗಿ ನಾಲೆಗೆ ಸೇರುತ್ತವೆ. ಈಗ ಸುಮಾರು 8-10 ದಿನಗಳ ಹಿಂದೆ ರೇವಣಸಿದ್ದ ಈತನು ತಮ್ಮ ಮನೆಯ ಮುಂದೆ ಮೂತ್ರ ಹರಿದು ಬರದ ಹಾಗೆ ಒಡ್ಡಿಹಾಕಿದ್ದು ಆಗ ಮಳೆ ಬಂದಾಗ ನಮ್ಮ ಕಾಕಾ ಹರಿದು ಹೋಗಲೆಂದು ಒಡ್ಡಿಯನ್ನು ತಗೆದಾಗ ನಮ್ಮೊಂದಿಗೆ ಬಾಯಿ ಮಾತಿನ ತಕರಾರನ್ನು ರೇವಣಸಿದ್ದನು ಮಾಡಿಕೊಂಡು ನಮ್ಮ ಮಗ ಬರಲಿ ನಿಮಗೆ ನೋಡಿಕೊಳ್ಳುತ್ತೇವೆ ಅಂತಾ ಹೇಳಿದ್ದು  ದಿನಾಂಕ:08/08/17 ರಂದು ರಾತ್ರಿ ನಾನು ಮತ್ತು ನಮ್ಮ ಕಾಕಾ ಮಹೇಶ ಅಂಗಡಿ ಬಂದ ಮಾಡಿ ನಾನು ಗಾಡಿಗಳನ್ನು ಮನೆ ಒಳಗೆ ಹಚ್ಚುತ್ತಿದ್ದಾಗ ರೇವಣಸಿದ್ದ ಮತ್ತು ಅವನ ಸುರೇಶ ಇಬ್ಬರೂ ಕೂಡಿ ಬಂದು ಸುರೇಶನು ನನಗೆ ರಂಡಿ ಮಗನೆ ನಮ್ಮ ತಂದೆಗೆ ನಾನು ಇಲ್ಲದಾಗ ಜಗಳ ತೆಗೆದು ಬೈಯುತ್ತಿರಿ ಅಂತಾ ಬೈದು ಅಲ್ಲೇ ಬಿದ್ದಿದ್ದ ಒಂದು ಗಾಜಿನ ಬಾಟಲಿಯಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ರೇವಣಸಿದ್ದನು ಸೂಳೆಮಗಂದು ಬಹಳ ಆಗ್ಯಾದ ಅಂತಾ ಬೈದು ಕೈಯಿಂದ ಕಣ್ಣಿನ ಮೇಲೆ ಹೊಡೆದಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ  ವ್ಯೆಕತ್ತಿಯ ಬಂಧನ  :
ಶಾಹಾಬಾದ ನಗರ ಠಾಣೆ : ದಿನಾಂಕ: 09/08/2017 ರಂದು ಬೆಳಗಿನ ಜಾವ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ರವರು  ಮತ್ತು ಸಿಬ್ಬಂದಿಯೊಂದಿಗೆ ವಿಶೇಷ ಗಸ್ತು  ಮಾಡುತ್ತಾ ಲಕ್ಷ್ಮಿ ಗಂಜದಲ್ಲಿರುವ  ಇಂಗಿನ ಶೇಟ್ಟಿ ಇವರ ಆಡತ ಅಂಗಡಿಯ ಕಡೆಗೆ ಹೋದಾಗ ಅರವಿಂದ ತಂದೆ ತಾರಾಸಿಂಗ ಪವಾರ ಸಾ: ರಾರಪೈಲ ತಾಂಡಾ ಕಲಬುರಗಿ ಇತನು ಕತ್ತಲಲ್ಲಿ ಮರೆಯಾಗಿ ನಿಂತಿದ್ದು ನಮ್ಮ ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದಾಗ ಅವನಿಗೆ ಹಿಡಿದು ವಿಚಾರಿಸಲು ತನ್ನ ಹೆಸರು ವಿಧ ವಿಧವಾಗಿ ತಿಳಿಸಿದನು ಮತ್ತು ಅವನಿಗೆ ಅಂಗ ಶೋಧನೆ ಮಾಡಲು ಅವನ ಹತ್ತಿರ ಒಂದು ಕಬ್ಬಿಣದ ರಾಡ ಸಿಕ್ಕಿದ್ದು . ಸದರಿಯವರನು ರಾತ್ರಿ ವೇಳೆಯಲ್ಲಿ ರಾಡು ಹಿಡಿದುಕೊಂಡು ಯಾವುದಾರು ಸ್ವತ್ತಿನ ಅಪರಾಧ ಮಾಡುವ ಉದ್ದೇಶ ರಾಡು ಇಟ್ಟುಕೊಂಡು ತಿರುಗಾಡುತ್ತಿದ್ದು ಅವನಿಗೆ ಹೀಗೆ ಬಿಟ್ಟಲ್ಲಿ ಸ್ವತ್ತಿನ ಅಪರಾಧ ಮಾಡುವ ಸಂಭವ ಕಂಡು ಬಂದಿರುವುದರಿಂದ ಸದರಿಯವನಿಗೆ ಹಿಡಿದುಕೊಂಡು  ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹಿಸಿದ ಮರಳು ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ:09.08.2017 ರಂದು ಹೋನಗುಂಟಾ ಸೀಮಾಂತರದ ವಿವಿದ ಸರ್ವೆ ನಂಬರ್ ಜಮೀನುಗಳಲ್ಲಿ ಆಕ್ರಮವಾಗಿ ಕಾಗಿಣಾ ನದಿಯಿಂದ ಮರಳು ಹೊರತೆಗೆದು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿ ಇಟ್ಟಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿಐ ಶಹಾಬಾದ ಮತ್ತು ಸಿಬ್ಬಂದಿಯವರು ಹಾಗೂ ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಜನರು ಮತ್ತು ಪಿಡಬ್ಲೂಡಿ ಅಧಿಕಾರಿಗಳೊಂದಿಗೆ ಹೊನಗುಂಟಾ ಸೀಮಾಂತರದ ಸರ್ವೆ ನಂ.164/06 134 ಹಾಗೂ ಸರಿಕಾರಿ ಗಾಯರಾಣ ಸರ್ವೆ ನಂ.141 ಹೀಗೆ ವಿವಿದ ಸರ್ವೆ ನಂಬರಗಳಲ್ಲಿ  ಮರಳು ದಾಸ್ತಾನು ಮಾಡಿದ್ದು ನೋಡಿ ಖಚಿತ ಪಡಿಸಿಕೊಂಡು ಪಂಚರೊಂದಿಗೆ ಜಪ್ತಿ ಪಂಚನಾಮೆ ಕೈಕೊಂಡು ಪಿಡಬ್ಲೂಡಿ ಅಧಿಕಾರಿಯಿಂದ ಅಳತೆ ಮಾಡಿಸಲಾಗಿ  ಒಟ್ಟು 39 ಕ್ಯೂಬಿಕ್ ಮೀಟರ್ ಅಂ.ಕಿ 27300/- ನೇದ್ದು ಮರಳು ಜಪ್ತಿ ಪಡಿಸಿಕೊಂಡು ಭೂಮಾಲಿಕರು ಆಕ್ರಮ ಮರಳು ದಾಸ್ತಾನು ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ 4.30 ಪಿಎಂ ಕ್ಕೆ ಶ್ರೀ ಮಲ್ಲಿಕಾರ್ಜುನ ಶಿವಪೂರ ಉಪ ತಹಸೀಲ್ದಾರರು ನಾಡ ಕಾರ್ಯಲಯ ಶಹಾಬಾದ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರವಾಹನ ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ದಸ್ತಗಿರಿ ತಂದೆ ಬುರಾನಸಾಬ ಸಾ:ಮರತೂರ ರವರು ತನ್ನ ದಿನ ನಿತ್ಯದ ಕೆಲಸಕ್ಕಾಗಿ ನನ್ನ ಹೆಸರಿನಲ್ಲಿರುವ ಹೀರೊ ಹೊಂಡಾ ಮೊ ಸೈ ನಂ ಕೆಎ 37 ಕ್ಯೂ 2100 ನ್ನದ್ದು  ನಡೆಸಿಕೊಂಡು ಹೆಂಡತಿ ಮಕ್ಕಳೊಂದಿಗೆ ಇರುತ್ತೇನೆ. ಹೀಗಿದ್ದು ಇಂದು ದಿನಾಂಕ 09/08/2017  ಬೆಳಗ್ಗೆ  10.30 ಕ್ಕೆ ನನ್ನ ಮೋ ಸೈ ತೆಗೆದುಕೊಂಡು ನಮ್ಮೂರ ವಿಜ್ಞಾನೇಶ್ವರ ಗುಡಿಯ ಹತ್ತಿರದ ಹೊಲಕ್ಕೆ ಹೋಗಿ ಹೊಲದ ಹತ್ತಿರ ಮೋ ಸೈ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದೇನು ಹೊಲದಲ್ಲಿ ಕೆಲಸ ಮುಗಿಸಿಕೊಂಡು  ಮರಳಿ 1 ಪಿಎಂ ಕ್ಕೆ ಬಂದಾಗ ನನ್ನ  ಮೋ ಸೈ ಕಾಣಲಿಲ್ಲ ಗಾಬರಿಯಾಗಿ ಆಜು ಬಾಜು & ಇತರೆ ಕಡೆಗೆ ಹುಡುಕಾಡಿದ್ದು ಸಿಗಲಿಲ್ಲಾ. ನಂತರ ನನ್ನ ಮೋ ಸೈ ಕಾಣೆಯಾದ ಬಗ್ಗೆ ನಮ್ಮೂರ ಶಾಮರಾಯ ತಂ ಶಿವಶರಣಪ್ಪಾ & ದೇವಾನಂದ  ತಂದೆ ಚಂದಪ್ಪಾ ಇವರಿಗೆ ತಿಳಿಸಿದ್ದರಿಂ ದ ಅವರೊಂದಿಗೆ ನಾನು  & ಎಲ್ಲರೂ ಕೂಡಿ ಮರತೂರ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಿದರು ಮೋ ಸೈ  ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ರಾಮಪ್ಪ ತಂದೆ ಶ್ರೀಮಂತರಾವ ಐರೋಡಗಿ ಸಾ: ರೌರ (ಬಿ) ರವರ ಹೇಳಿಕೆ ಪಡೆದುಕೊಂಡು ಹಾಜರ ಪಡಿಸಿದ್ದು ಸದರಿ ಕೇಳಿಕೆಯ ಸಾರಾಂಶವೇನೆಂದರೆ  ನಿನ್ನೆ ದಿನಾಂಕ 07-08-2017 ರಂದು ಎಂದಿನಂತೆ ಅಫಜಲಪೂರದಲ್ಲಿರುವ ಮನೆಯಿಂದ ಕರಜಗಿ ಕರ್ತವ್ಯಕ್ಕೆಂದು ನನ್ನ ಮೋಟಾರ ಸೈಕಲ್ ನಂ ಎಮ್.ಹೆಚ್-13-2051 ನೇದ್ದರ ಮೇಲೆ ಕುಳಿತುಕೊಂಡು ನಾನೊಬ್ಬನೆ ಹೋಗುತ್ತಿದ್ದು ರೌರ ಕ್ರಾಸ್ ಸಮೀಪ ಸಮಯ 09:40 ಎ.ಎಮ್ ದ ಸುಮಾರಿಗೆ ಎದುರುಗಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ವಾಹನವನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡೆಸಿದ್ದು ನಾನು ಹಾಗೂ ಸದರಿ ವಾಹನದ ಮೇಲೆ ಕುಳಿತ ಮೂರು ಜನರು ಕೂಡಾ ಕೇಳಗೆ ಬಿದ್ದೇವು. ಅವರಿಗೆ ಯಾವುದೇ ಗಾಯ ಪೆಟ್ಟು ಆಗಿರುವುದಿಲ್ಲಾ ನನಗೆ ಎಡಗಾಲು ಮೋಳಕಾಲ ಕೇಳಗೆ ಎಲುಬು ಮುರಿದಿದ್ದು ಎಡಗೈಯ ಕೀರುಬೇರಳು ಮಧ್ಯ ಬೇರಳಿಗೆ ರಕ್ತ ಗಾಯವಾಗಿದ್ದು ಇರುತ್ತದೆ. ಸದರಿ ಮೋಟಾರ ಸೈಕಲ್ ನಂ ಎಮ್.ಹೆಚ್-12-ಸಿ.ಜಿ-6510 ಇತ್ತು ಸದರಿ ಮೂರು ಜನರು ನನಗೆ ಅಪಘಾತವಾದುದನ್ನು ನೋಡಿ ಮಾಡಾಡಿಸದೇ ಓಡಿ ಹೋಗಿರುತ್ತಾರೆ ಸದರಿ ಯವರಿಗೆ ನೋಡಿದಲ್ಲಿ ಗುರುತಿಸುತ್ತೇನೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.