POLICE BHAVAN KALABURAGI

POLICE BHAVAN KALABURAGI

02 July 2017

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಜೇವರಗಿ ಠಾಣೆ : ದಿನಾಂಕ 01.07.2017 ರಂದು ಬೆಳಿಗ್ಗೆ ಶ್ರೀ ಕಲ್ಲಣ್ಣಗೌಡ ತಂದೆ  ಜಗಶೇಟ್ಟಿಗೌಡ ಮಾಲಿಪಾಟೀಲ  ಸಾಃ ಕೆಲ್ಲೂರ ತಾಃ ಜೇವರಗಿ ರವರು ಮತ್ತು ನನ್ನ ಕಾಕನಾದ  ಬಸಣ್ಣಗೌಡ ತಂದೆ ಅಯ್ಯಪ್ಪಗೌಡ ಮಾಲಿಪಾಟೀಲ ಇಬ್ಬರೂ ಕೂಡಿಕೊಂಡು ನಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಬರುವಾಗ ಸಾಯಂಕಾಲ 5.00 ಗಂಟೆಯ ಸುಮಾರಿಗೆ ನಮ್ಮೂರ ಸರಕಾರಿ ಶಾಲೆಯ ಹತ್ತಿರ ಜೇವರಗಿ- ಶಹಾಪೂರ ರೋಡಿನಲ್ಲಿ ಇಬ್ಬರೂ ರೋಡ ಸೈಡಿನಿಂದ ನಡೆದುಕೊಂಡು ಬರುವಾಗ  ಅದೇ ವೇಳೆಗೆ ಶಹಾಪೂರ ರೋಡಿನ ಕಡೆಯಿಂದ ಒಂದು ಲಾರಿಯನ್ನು ಅದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಸಂಗಡ ಬರುತ್ತಿದ್ದ ನಮ್ಮ ಕಾಕ ಬಸಣ್ಣಗೌಡ ಇತನಿಗೆ ಹಿಂದಿನಿಂದ ಡಿಕ್ಕಿಪಡಿಸಿದನು, ಆಗ ನಮ್ಮ ಕಾಕ ರೋಡಿನಲ್ಲಿ ಬಿದ್ದನು. ನಾನು ಮತ್ತು ಅಲ್ಲಿಯೇ ರೋಡಿನಲ್ಲಿ ಬರುತ್ತಿದ್ದ ನಮ್ಮೂರ ಮಲ್ಲಿಕಾರ್ಜುನ ತಂದೆ ಬಸವರಾಜಗೌಡ ಪಾಟೀಲ, ಸುಬಾಶ್ಚಂದ್ರ ತಂದೆ ಕರಬಸ್ಸಪ್ಪ ಜವಳಿ ನಮ್ಮ ಕಾಕನಿಗೆ ನೊಡಲು ಅವನ ತಲೆಗೆಎರಡು ಕೈಗಳಿಗೆ ಎದೆಗೆ ಬೇನ್ನಿಗೆ ಭಾರಿ ರಕ್ತ ಗಾಯಗಳಾಗಿ  ಅವನು ಸ್ಥಳದಲ್ಲಿಯೇ ಮೃತಪಟ್ಟಿದ್ದನು .ಲಾರಿ ಚಾಲಕನು ತನ್ನ ಲಾರಿ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದನು.  ಲಾರಿಯನ್ನು ನೋಡಲಾಗಿ ಅದು  22 ಚಕ್ರವುಳ್ಳ ಉದ್ದನೇಯ ಟ್ರ್ಯಾಲಿಯ ಲಾರಿ ಇದ್ದು. ಅದರ  ನಂ ಹೆಚ್.ಆರ್-39-ಡಿ-7783 ಇತ್ತು. ಅದರ ಚಾಲಕನಿಗೆ ಹೆಸರು ಕೇಳಲಾಗಿ ಅವನು ತನ್ನ ಹೆಸರು ದೀಪಕ ತಂದೆ ರಮೇಶ ತಿವಾರಿ ಯು.ಪಿ. ಅಂತಾ ಹೇಳಿ, ಬಸಣ್ಣಗೌಡ ಮೃತಪಟ್ಟಿದ್ದನ್ನು ನೋಡಿ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಬಲತ್ಕಾರ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಆಳಂದ ಠಾಣೆ : ಕುಮಾರಿ ರವರಿಗೆ ಆಳಂದದ ಅಜಮಲ್‌ ತಂದೆ ಯೂಸೂಫ್‌ ಅನ್ಸಾರಿ ಈತನು 2016 ನೇ ಸಾಲಿನ ಸೆಪ್ಟಂಬರ್‌ ತಿಂಗಳಿಂದ ಪಾಲೋ ಮಾಡಿ ನನ್ನ ಹಿಂದೆ ಬಂದು ನನ್ನೊಂದಿಗೆ ಸಲಿಗೆಯಿಂದ ಮಾತಾಡುತ್ತಾ ಪೀಡಿಸುತ್ತಾ ಬಂದು ನೀನು ನನ್ನೊಂದಿಗೆ ಪ್ರೀತಿಸು ನಿನಗೆ ಮದುವೆಯಾಗುತ್ತೇನೆ ಎಂದು ಹೇಳಿದಾಗ ನಾನು ನಿನಗೆ ಪ್ರೀತಿ ಮಾಡುವದಿಲ್ಲ ಎಂದು ಹೇಳಿದಾಗ ಅವನು ಈ ವಿಷಯ ಕಾಲೇಜಿನಲ್ಲಿ ಬಂದು ಮತ್ತು ನೀನು ಕೆಲಸ ಮಾಡುವಲ್ಲಿ ಬಂದು ಚೀರುತ್ತೇನೆ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಹೆದರಿಸಿದ್ದರಿಂದ ನಾನು ಅವನೊಂದಿಗೆ ಸಲುಗೆಯಿಂದ ಇರುತ್ತಿದ್ದೇನು. ನಂತರ 2016 ನೇ ಸಾಲಿನ ನವೆಂಬರ್‌ ತಿಂಗಳಲ್ಲಿ ಅಜ್ಮಲ್‌ ತಂದೆ ಯೂಸೂಫ್‌ ಅನ್ಸಾರಿ ಈತನು ನಿನಗೆ ಸಚ್ಚಾ ಮನಸ್ಸಿನಿಂದ ಪ್ರೀತಿಸುತ್ತೇನೆ, ನನಗೆ ತಾಯಿ ಇಲ್ಲ, ನೀನೆ ನನಗೆ ಎಲ್ಲಾ, ನಿನ್ನಷ್ಟು ನನಗೆ ಅರ್ಥ ಮಾಡಿಕೊಳ್ಳುವವರು ಯಾರು ಇಲ್ಲ, ನಿನ್ನೊಂದಿಗೆ ನಿಜವಾದ ಪ್ರೀತಿ ಮಾಡುತ್ತೇನೆ ಎಂದು ನನಗೆ ನಂಬಿಸಿದ್ದರಿಂದ ನನಗೂ ಒಂದು ಜೀವನ ಆಗುತ್ತದೆ ಎಂದು ಅವನೊಂದಿಗೆ ಪ್ರೀತಿಸುತ್ತಾ ಬಂದಿರುತ್ತೇನೆ. ನಂತರ ದಿನಾಂಕ:24/09/2016 ರಂದು ನನಗೆ ಪುಸಲಾಯಿಸಿ ಕಲಬುರಗಿಗೆ ಕರೆದುಕೊಂಡು ಹೋಗಿ ಆಳಂದ ಚೆಕ್‌ ಪೋಷ್ಟ ಹತ್ತಿರ ಇರುವ ಒಂದು ಲಾಡ್ಜಗೆ ಒಯ್ದು ಒತ್ತಾಯ ಪೂರ್ವಕವಾಗಿ ನನಗೆ ಮೈ ಮೇಲಿನ ಬಟ್ಟೆ ಕಳೆಯುತ್ತಿದ್ದಾಗ ನಾನು ಬೇಡ ಮದುವೆಯಾಗುವವರೆಗೆ ಇದೆಲ್ಲ ಬೇಡ ಅಂದರು ಕೂಡ ನಾನೇ ನಿನಗೆ ಮದುವೆಯಾಗುವವನು ಇದ್ದೇನೆ ಎಂದು ನನಗೆ ಒತ್ತಾಯಪೂರ್ವಕವಾಗಿ ಬಟ್ಟೆ ಕಳೆದು ನನ್ನ ಎರಡು ಕಾಲುಗಳು ಎತ್ತಿ ನನಗೆ ಒತ್ತಿ ಹಿಡಿದು ಜಬರದಸ್ತಿಯಿಂದ ನನಗೆ ಸಂಬೋಗ ಮಾಡಿರುತ್ತಾನೆ. ನಂತರ ನಾನು ಪ್ರಗ್ನೆಂಟ್‌ ಆಗಿದ್ದಾಗ ಅಜಮಲ್‌ ಈತನು ಮದುವೆಯಾಗುವವರೆಗೆ ಮಕ್ಕಳು ಬೇಡ ಅಬಾರೇಷನ್‌ ಮಾಡಿಸು ಎಂದು ಒತ್ತಾಯ ಪೂರ್ವಕವಾಗಿ ನನಗೆ ಮಾತ್ರೆ ನೀಡಿದ್ದರಿಂದ ಅಬಾರೇಷನ್‌ ಆಗಿರುತ್ತದೆ. ಇದೇ ರೀತಿಯಾಗಿ ಹೊರಗೆ ಕರೆದುಕೊಂಡು ಹೋಗಿ ಜಬರದಸ್ತಿಯಿಂದ ಸಂಬೋಗ ಮಾಡಿರುತ್ತಾನೆ. ನಂತರ ನಾನು ಮಾರ್ಚ ತಿಂಗಳಲ್ಲಿ ಮೊತ್ತೊಮ್ಮೆ ಪ್ರಗ್ನೆಂಟ್‌ ಆಗಿದ್ದರಿಂದ ಮಕ್ಕಳು ಬೇಡ ಎಂದು ಮಾತ್ರೆ ನೀಡಿದ್ದರಿಂದ ಅಬಾರೇಷನ್‌ ಆಗಿರುತ್ತದೆ. ನಾನು ಮದುವೆಯಾಗೋಣ ಎಂದು ಕೇಳಿದರೆ ಮುಂದೆ ಆಗೋಣ ಇನ್ನು ಸ್ವಲ್ಪ ಸಮಯ ಹೋಗಲಿ ಎಂದು ಮುಂದೆ ಹಾಕುತ್ತಾ ಬಂದು ನನಗೆ ಪುಸಲಾಯಿಸಿ ದಿನಾಂಕ:27/05/2017 ರಂದು ಕಲಬುರಗಿಯ ಆಳಂದ ಚೆಕ್‌ಪೋಷ್ಟ್‌ ಹತ್ತಿರ ಇರುವ ಒಂದು ಲಾಡ್ಜಗೆ ಕರೆದುಕೊಂಡು ಹೋಗಿ ಮತ್ತೆ ಒತ್ತಾಯ ಪೂರ್ವಕವಾಗಿ ಸಂಬೋಗ ಮಾಡಿರುತ್ತಾನೆ. ನಂತರ ನಾನು ಅಜಮಲ್‌ ಈತನಿಗೆ ಮದುವೆಯಾಗು ಎಂದು ಕೇಳಲು ಹೋದರೆ ನಾನು ನಿನಗೆ ಯಾವಾಗ ಮದುವೆಯಾಗುತ್ತೇನೆ ಎಂದು ಹೇಳಿದ್ದೇನೆ. ನಿನಗೆ ಮದುವೆಯಾಗುವದಿಲ್ಲ ಬೇಕಾದರೆ ನಾವು ಹೀಗೆ ಕೂಡುತ್ತಾ ಇರೋಣ ಮದುವೆ ಬೇಡ ಎಂದು ಹೇಳಿರುತ್ತಾನೆ. ದಿನಾಂಕ: 30/06/2017 ರಂದು 12-30 ಪಿಎಮ್‌ ವೇಳೆಗೆ ಅಜಮಲ್ ಇತನ ತಂದೆಯಾದ ಯೂಸೂಫ್‌ ಅನ್ಸಾರಿ ಈತನು ನಿನ್ನೊಂದಿಗೆ ಮಾತಾಡುವದಿದೆ ಮನೆಗೆ ಬಾ ಎಂದು ಕರೆದಿದ್ದರಿಂದ ನಾನು ಅವರ ಮನೆಗೆ ಹೋದಾಗ  ಅವರ ಮನೆಯಲ್ಲಿ 1) ಯೂಸೂಫ್ ತಂದೆ ಬೂರಾನುದ್ದಿನ್ ಅನ್ಸಾರಿ, 2) ಫಿರಾಸತ್‌ ಅನ್ಸಾರಿ ತಂದೆ ಮೈಬೂಬ್ ಅನ್ಸಾರಿ, 3) ಫುರಖಾನ್ ತಂದೆ ಮೈಬೂಬ್‌ ಅನ್ಸಾರಿ 4) ಕಾಲೇಮೀರ್ ತಂದೆ ಮೈಮೂದ್ ಅನ್ಸಾರಿ ಹಾಗೂ 5) ಯೂಸೂಫ್ ಅನ್ಸಾರಿ ಈತನ ಅಳಿಯ ಹೆಸರು ಗೊತ್ತಿಲ್ಲ ಎಲ್ಲರು ಹಾಜರಿದ್ದರು. ಆಗ ನಾನು ಯೂಸೂಫ್ ಅನ್ಸಾರಿ ಈತನೊಂದಿಗೆ ಮಾತಾಡುತ್ತಿದ್ದಾಗ ನಮ್ಮ ಮಗ ಗಂಡಸಿದ್ದಾನೆ ಹೀಗೆ ಮಾಢುತ್ತಾನೆ ನೀನು ರಂಡಿ ಇದ್ದಿ ನಿನ್ನ ನಡತೆ ಸರಿ ಇರುವದಿಲ್ಲ ಎಂದು ಬೈದಿರುತ್ತಾನೆ ಮತ್ತು ನಮ್ಮ ವಸೂಲಿ ಬಹಳ ದೂರದವರೆಗೆ ಇದೆ ನೀನು ಏನು ಮಾಡಕ್ಕಾಗಲ್ಲ ನಿನಗೆ ಹೊಡೆದು ಹಾಕಿದರು ಕೂಡ ಯಾರು ಕೇಳುವವರಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ. ಫಿರಾಸತ್‌ ಅನ್ಸಾರಿ ಈತನು ಮತ್ತು ಪುರಖಾನ್ ಅನ್ಸಾರಿ ಹಾಗು ಕಾಲೇಮಿರ್ ಇವರು ಕೂಡಿ ನೀನು ಕ್ಯಾರೆಕ್ಟರ್‌ ಲೆಸ್‌ ಇದಿ ಹರಾಮಕೋರ್ ಇದಿ ನಿನಗೆ ಖಲಾಸ್‌ ಮಾಡಿದರು ಕೇಳುವವರಿಲ್ಲ ನೀನು ಕೇಸು ಮಾಡಿದರೆ ನಿಮ್ಮ ಮನೆಯ ಮರ್ಯಾದೆ ತೆಗೆಯುತ್ತೇವೆ ನಮ್ಮ ಅನ್ಸಾರಿ ಬಿರಾದಾರಿ ಕೂಡಿ ನಿಮ್ಮ ಮನೆಯವರಿಗೆ ಅಗಸಿಗೆ ತಂದು ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ.  ಫುರಖಾನಾ ಅನ್ಸಾರಿ ಈತನು ನನ್ನ ಕೈ ಹಿಡಿದು ಎಳೆದು ಕಪಾಳಕ್ಕೆ ಕೈಯಿಂದ ಹೊಡೆದಿರುತ್ತಾನೆ. ಫಿರಾಸತ್‌ ಅನ್ಸಾರಿ ಈತನು ಕೈಯಿಂದ ತಳ್ಳಿ ನೆಲಕ್ಕೆ ಕೆಡವಿರುತ್ತಾನೆ. ಮತ್ತು ನಿನಗೆ ಹೊಡೆದು ಹಾಕಿದರೆ ಯಾರು ಕೇಳುತ್ತಾರೆ ಎಂದು ಹೊಡೆಯಲು ಬಂದಿರುತ್ತಾನೆ. ಯೂಸೂಫ್‌ ಅನ್ಸಾರಿ ಈತನ ಅಳಿಯ ಈತನು ಅನ್ಸಾರಿ ಇವರಿಗೆ ಇದೆಲ್ಲ ಕಾಮನ್‌ ಇದೆ ನೀನೇನು ಮಾಡುತ್ತಿ ನಿನ್ನ ಪಾಡಿಗೆ ನೀನಿರು ಆಗಿದ್ದು ಆಗಿದೆ ಎಂದು ಬೈದಿರುತ್ತಾನೆ. ನಂತರ ಎಲ್ಲರೂ ಕೂಡಿ ನನಗೆ ಒತ್ತಾಯ ಪೂರ್ವಕವಾಗಿ ಕೇಸು ಮಾಡುವದಿಲ್ಲ ಅಜಮಲ್‌ ಈತನೊಂದಿಗೆ ಸಂಬಂದ ಇರುವದಿಲ್ಲ ನನ್ನ ಪಾಡಿಗೆ ನಾನಿರುತ್ತೇನೆ ಅಂತಾ ಸಹಿ ಮಾಡು ಎಂದು ಬಾಂಡ್ ಮೇಲೆ ನನಗೆ ಹೆದರಿಸಿ ಸಹಿ ಪಡೆದಿದ್ದು ನಾನು ನಿರಾಕರಿಸಿದರೂ ಕೂಡ ನನ್ನ ಎರಡು ಕೈಗಳ ಹೆಬ್ಬರಳು ಒತ್ತಿಸಿಕೊಂಡಿರುತ್ತಾರೆ. ನಂತರ ನನಗೆ ಕಾರಿನಲ್ಲಿ ತಂದು ಮಟಕಿ ಕ್ರಾಸ್ ಹತ್ತಿರ ತಳ್ಳಿ ಬಿಟ್ಟು ಹೋಗಿರುತ್ತಾರೆ. ನಂತರ ನಾನು ಅಜಮಲ್‌ ಅನ್ಸಾರಿ ಈತನಿಂದ ಮೋಸ ಹೋಗಿ ಅವರ ಮನೆಯವರಿಂದ ನನಗೆ ನ್ಯಾಯ ಸಿಗದೆ ಇದ್ದ ಕಾರಣಕ್ಕಾಗಿ ನಾನು ಮಾನ ಮರ್ಯಾದೆಗೆ ಅಂಜಿ ಮನ ನೊಂದುಕೊಂಡು ಸಾಯ ಬೇಕು ಅಂತಾ  ಮಾತ್ರೆ ಸೇವನೆ ಮಾಡಿದ್ದರಿಂದ ಚಕ್ಕರ್‌ ಬಂದು ಗುತ್ತೆದಾರ ಇವರ ಮನೆಯ ಹತ್ತಿರ ಬಿದ್ದಿದ್ದಾಗ ನಮ್ಮ ಮನೆಯವರಿಗೆ ವಿಷಯ ಗೊತ್ತಾಗಿ ನಮ್ಮ ಅಣ್ಣ ಇಶಾಕ್‌ ತಂದೆ ಅಬ್ದುಲ್ ರೆಹಮಾನ್ ಹಾಗು ನಮ್ಮ ಮಾಮಿ ಕಾಜಾಬೀ ಗಂಡ ಜಾನಿ ಕಡ್ಡೆ ಮತ್ತು ನಮ್ಮ ತಾಯಿ ಆಶಾಬೀ ಗಂಡ ಅಬ್ದುಲ್‌ ರೆಹಮಾನ್‌ ಇವರು ಉಪಚಾರ ಕುರಿತು ಪಿ.ಎನ್.ಶಹಾ ಆಸ್ಪತ್ರೆಗೆ ತಂದು ಉಪಚಾರಪಡಿಸಿ ನಂತರ ಸರ್ಕಾರಿ ಆಸ್ಪತ್ರೆ ಆಳಂದಕ್ಕೆ ಒಯ್ದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಅಜಮಲ್ ಅನ್ಸಾರಿ ಈತನು ನನಗೆ ಮದುವೆ ಆಗುತ್ತೇನೆ ಎಂದು ನಂಬಿಸಿ ಮೋಸ ಮಾಡಿ ಒತ್ತಾಯ ಪೂರ್ವಕವಾಗಿ ಬಲವಂತವಾಗಿ ಸಂಬೋಗ ಮಾಡಿ ಮದುವೆಗೆ ನಿರಾಕರಿಸಿದ್ದರಿಂದ ಮತ್ತು ಅವನ ಮನೆಯವರಿಗೆ ಕೇಳಲು ಹೋದರೆ ನನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಳು ಸಕ್ಷಿ ಹೇಳುವಂತೆ ಒತ್ತಾಯಿಸಿ ಜೀವ ಭಯ ಹಾಕಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ  ಪರ್ವೀನ ಗಂಡ ಶಾಬೊದ್ದಿನ ಜಮಾದಾರ ಸಾ: ಮೈನಾಳ ತಾ:ಜಿ: ಕಲಬುರಗಿ ಇವರು ದಿನಾಂಕ 05/12/2014 ರಂದು ನನ್ನ ಗಂಡನಾದ ಶಹಾಬೂದ್ದಿನ ಇವರಿಗೆ  ಕವಲಗಾ ಸಿಮಾಂತರದ ಹೋಲದಲ್ಲಿ ನನ್ನ ಭಾವನ ಮಗನಾದ ಎಮ್.ಡಿ ಮಶಾಕ @ ಎಮ್.ಡಿ ಜುನೇದ ತಂದೆ ಮೈನೊದ್ದಿನ ಜಮಾದಾರ ಇತನು ತನ್ನ ಗೇಳೆಯನೊಂದಿಗೆ ಹೋಲದ ವಿಷಯದ ಸಂಬಂಧ ನನ್ನ ಗಂಡನಿಗೆ ಹರಿತವಾದ ಆಯುಧದಿಂದ ಚುಚ್ಚಿ ಕೋಲೆ ಮಾಡಿದ್ದು ಈ ಬಗ್ಗೆ ನನ್ನ ಭಾವನ ಮಗ ಹಾಗೂ ಆತನ ಗೆಳೆಯ ಎಮ್.ಡಿ ಜಹೀದ ತಂದೆ ಖಾಜಾಮಿಯ್ಯಾ ಇವರ ಮೇಲೆ ಫರಹತಾಬಾದ ಪೊಲೀಸ ಠಾಣೆಯಲ್ಲಿ ಗುನ್ನೆ ನಂ 178/14 ಕಲಂ 302,201, ನೇದ್ದರಲ್ಲಿ ಪ್ರಕರಣ ದಾಖಲಾಗಿ ಇಬ್ಬರಿಗೂ ಮಾನ್ಯ ನ್ಯಾಯಾದೀಶರು ನ್ಯಾಯಂಗ ಬಂಧನಕ್ಕೆ ಕಳುಹಿಸಿದ್ದು ಸುಮಾರೂ ನಾಲ್ಕೈದು ತಿಂಗಳ ನಂತರ ಭಾವನ ಮಗ ಎಮ್.ಡಿ ಮಶಾಕ @ ಎಮ್.ಡಿ ಜುನೇದ ಇತನು ಜೈಲಿನಿಂದ ಜಾಮಿನಿನ ಮೇಲೆ ಬಿಡುಗಡೆಯಾಗಿ ಕಲಬುರಗಿಗೆ ಬಂದು ಅಲ್ಲೆ ಕೆಲಸ ಮಾಡಿಕೊಂಡು ಈಗ ಎರಡು ತಿಂಗಳಿಂದ ಆಗಾಗ  ಊರಿಗೆ ಬಂದು  ನನಗೆ  ನೀನು ನಮ್ಮ ಮೇಲೆ ಕೇಸು ಮಾಡಿ ಜೈಲಿಗೆ ಕಳುಹಿಸಿದ್ದಿ ನೀನು ಮುಂದೆ ಕೋರ್ಟಿ ನಲ್ಲಿ ಸಾಕ್ಷಿ ಹೇಳುವಾಗ ನಾನು ನಿನ್ನ  ಗಂಡನಿಗೆ ಕೋಲೆ ಮಾಡಿರುವುದಿಲ್ಲಾ ಅಂತಾ ಸುಳ್ಳು ಹೇಳಬೆಕು ಇಲ್ಲದಿದ್ದರೆ  ನಿನ್ನ ಜೀವ ಸಹೀತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ. ಅಲ್ಲದೆ ಊರಿನ ಜನರ ಮುಂದೆಯೂ ಸಹ ಇದೆ ರೀತಿ ಹೇಳಿ ಕೊಳ್ಳುತ್ತಾ ತಿರಗಾಡುತ್ತಾ ಇದ್ದು. ಇತನಿಂದ ನನಗೆ ಪ್ರಾಣ ಭಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 01-07-2017 ರಂದು ಶ್ರೀ ಸಿದ್ದಾರೂಡ ತಂದೆ ಅಪ್ಪಯ್ಯ ಗೌಡಗಾಂವ ಸಾ: ಮಾಶಾಳ ಇವರು ಈಗ ಸುಮಾರು 40 ವರ್ಷಗಳ ಹಿಂದೆ ನಮ್ಮ ಬಾಬನ ಮಗಳಾದ ಗುರುಶಾಂತವ್ವ ಗಂಡ ದುಂಡಪ್ಪಾ ಕೊಡಗುಂಟ ಸಾ:ರೂಗಿ ಇವಳಿಗೆ ನಮ್ಮ ಬಾಬಾನಾದ ಭೀಮಶಾ ಇವರಿಗೆ ಗಂಡು ಮಕ್ಕಳ ಇರದೆ 5 ಜನ ಹೆಣ್ಣು ಮಕ್ಕಳು ಇರುತ್ತಾರೆ. ಅವರಿಗೆ ಸಂಬಂಧಿಸಿದ ಆಸ್ತಿಯನ್ನು ಹೆಣ್ಣು ಮಕ್ಕಳಿಗೆ ಸಮಪಾಲು ಹಂಚಿಕೆ ಮಾಡಿಕೊಟ್ಟಿರುತ್ತಾರೆ. ನಮ್ಮ ಬಾಬನ ಆಸ್ತಿಯನ್ನು ಗುರುಶಾಂತವ್ವ ಇವಳ ಪಾಲಿಗೆ ಬಂದಿದ್ದು ಮಾರಾಟ ಮಾಡಲು ಹೋದಾಗ ಈಗ 10 ವರ್ಷದ ಹಿಂದೆ ಅವಳ ಪಾಲಿಗೆ ಬಂದಿದ್ದ 6 ಎಕರೆ ಜಮೀನನ್ನು ನಾನು 70 ಸಾವಿರ ರೂಪಾಯಿಗಳನ್ನು ಕೊಟ್ಟು ನಮ್ಮ ತಮ್ಮನಾದ ದೂಳಪ್ಪನ ಹೆಸರಿನ ಮೇಲೆ ಊರಿನ ಪ್ರಮುಖರ ಸಮಕ್ಷಮದಲ್ಲಿ ಖರೀಧಿ ಮಾಡಿದ್ದು, ಖರೀಧಿ ಮಾಡಿದ ಬಗ್ಗೆ 50 ರೂ. ಸ್ಟಾಂಪ ಪೇಪರ ಮೇಲೆ ಬರೆದುಕೊಟ್ಟಿರುತ್ತಾರೆ. ಆಗಿನಿಂದ ಇಂದಿನ ವರೆಗೆ ಸದರಿ 6 ಎಕರೆ ಹೊಲವನ್ನು ನಾವೇ ಉಳಿಮೆ ಮಾಡಿಕೊಂಡು ಬಂದಿರುತ್ತೇನೆ. ಖರೀಧಿ ಮಾಡಿಕೊಂಡ 6 ತಿಂಗಳ ಮೇಲೆ ನನ್ನ ಅಕ್ಕಳಾದ ಗುರುಶಾಂತವ್ವಳು ತೀರಿಕೊಂಡಿದ್ದು ಇರುತ್ತದೆ. ನನ್ನ ಅಕ್ಕಳಾದ ಗುರುಶಾಂತವ್ವಳು ತೀರಿಕೊಂಡ ಮೇಲೆ ಖರೀಧಿ ಮಾಡಿದ ಹೊಲವನ್ನು ನಮ್ಮ ಹೆಸರಿಗೆ ಮಾಡಿಕೊಂಡಿರುವುದಿಲ್ಲ. ಮುಂದೆ 10 ವರ್ಷ ತನಕ ಸದರಿ ಹೊಲವನ್ನು ನಮ್ಮ ಕಬ್ಜೆಯಲ್ಲಿದ್ದು, ಅದನ್ನು ಉಳಿಮೆ ಮಾಡಿಕೊಂಡು ಬಂದಿರುತ್ತೇವೆ.  ಈಗ ಎರಡು ವರ್ಷಗಳ ಹಿಂದೆ ನಮ್ಮ ಅಕ್ಕಳ ಗಂಡನಾದ ದುಂಡಪ್ಪಾ ಕುಡಗುಂಟಿ ಇತನು ನಮಗೆ ಗೊತ್ತಿಲ್ಲದೆ ನಾವು ಖರೀಧಿ ಮಾಡಿದ ಹೊಲ 6 ಎಕರೆ ಹೊಲವನ್ನು ನಮ್ಮೂರಿನ ಶಿವಪ್ಪಾ ತಂದೆ ಸಿದ್ರಾಮಪ್ಪ ಪ್ಯಾಟಿ ಇತನಿಗೆ ಮಾರಾಟ ಮಾಡಿರುತ್ತಾನೆ. ಮಾರಾಟ ಮಾಡುವುದಕಿಂತ ಮುಂಚೆ ನಮಗೆ ಗೊತ್ತಾಗಿ ನಾವು ಅಣ್ಣತಮ್ಮಂದಿರು ಕೂಡಿ ಶಿವಪ್ಪ ಪ್ಯಾಟಿ ಇತನಿಗೆ ನಾವು ನಮ್ಮ ಅಕ್ಕಳ ಇರುವಾಗಲೇ ಹೊಲ ಖರೀಧಿ ಮಾಡಿರುತ್ತೇನೆ ನೀನು ತಗೆದುಕೊಳ್ಳಬೇಡಾ ಅಂತಾ ತಿಳಿಸಿರುತ್ತೇನೆ. ಮುಂದೆ ಸದರಿ ಶಿವಪ್ಪ ಪ್ಯಾಟಿ ಇತನು ನಾವು ಖರೀಧಿ ಮಾಡಿದ ಹೊಲವನ್ನು ಖರೀದಿ ಮಾಡಿಕೊಂಡು 2015 ನೇ ವರ್ಷದಲ್ಲಿ ಅವನು ದಬ್ಬಾಳಿಕೆ ಮಾಡಿ ನಮ್ಮ ಸಂಗಡ ಜಗಳ ತಗೆದು ಹೊಲ ತಾನು ಖರೀದಿ ಮಾಡಿರುತ್ತೇನೆ ಅಂತಾ ನಮಗೆ ಮತ್ತು ನನ್ನ ತಮ್ಮನ ಹೆಂಡತಿಗೆ ಹೊಡೆಬಡೆ ಮಾಡಿದ್ದು ನಾವು ಸದರಿ ಹೊಲದಲ್ಲಿ ಹರತಿ ಹೊಡೆದಿದ್ದರೂ, ಅವನು ನಮಗೆ ಅಂಜಿಸಿ ಹೊಲ ಬಿತ್ತಿ ಅವನೇ ಬೆಳೆ ತಗೆದುಕೊಂಡಿರುತ್ತಾನೆ. ಇದರಿಂದ ನಮ್ಮ ಹೊಲದ ಹತ್ತಿರ ಬೊರಟಿ ಗ್ರಾಮದ ಚಂದಪ್ಪಾ ತಂದೆ ಶಂಕರ ಮಡ್ಡಿ ಇತನದ ಹೊಲ ಇದ್ದು, ಅವನ ಹೊಲದ ಬಾಂದರಿ ನಮ್ಮ ಹೊಲದ ಬಾಂದರಿಗಳು ಕೂಡಿದ್ದು, ಸದರಿ ಚಂದಪ್ಪಾನು ನಮ್ಮೂರ ಶಿವಪ್ಪ ಪ್ಯಾಟಿ ಇತನ ಮಾತು ಕೇಳಿ ಈ ವರ್ಷ ನಮ್ಮ ಹೊಲದಲ್ಲಿನ ಗುಂಟದಕಲ್ಲುಗಳನ್ನು ಕಿತ್ತಿದ್ದು, ಇದನ್ನು ನೋಡಿ ನಾನು ದಿನಾಂಕ:28/06/2017 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಹೊಲದಲ್ಲಿ ಚಂದಪ್ಪನಿಗೆ ಕೇಳಿದಾಗ ಚಂದಪ್ಪನು, ಮತ್ತು ಅವನ  ಅಣ್ಣತಮ್ಮಂದಿರಾದ ಸಿದ್ದಪ್ಪಾ ತಂದೆ ದ್ಯಾವಪ್ಪಾ ಮಡ್ಡಿ, ಕಾಶಿನಾಥ ತಂದೆ ದ್ಯಾವಪ್ಪಾ ಮಡ್ಡಿ, ನಾಗಪ್ಪಾ ತಂದೆ ಶಂಕರ ಮಡ್ಡಿ, ಆದಪ್ಪ ತಂದೆ ಶಂಕರ ಮಡ್ಡಿ ಹಾಗೂ ಬೊರಟಿ ಗ್ರಾಮದ ಮಹ್ಮದ ಜೇವೂರ, ಇವರೆಲ್ಲರೂ ಕೂಡಿ ನನಗೆ ಮತ್ತು ನನ್ನ ತಮ್ಮ ದೂಳಪ್ಪನಿಗೆ ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಬೆನ್ನ ಮೇಲೆ ಹೊಡೆದಿದ್ದು, ಬಿಡಿಸಲು ಬಂದು ನನ್ನ ತಮ್ಮ ದೂಳಪ್ಪನಿಗೂ ಕೂಡಾ ಹೊಡೆಬಡೆ ಮಾಡಿ ಅಂಜಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಣ ಮಾನ್ಯರವರು ಸದರಿಯವರ ಮೇಲೆ ಕ್ರಮ ಕೈಕೊಳ್ಳಬೇಕೆಂದು  ಅಂತಾ ಕೊಟ್ಟ ವಗೈರೆ ಫೀರ್ಯಾಧಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 163/2017 ಕಲಂ 143, 147, 148, 504, 323, 324, 109, 506, ಸಂ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

01 July 2017

Kalaburagi District Press Note

:: ಪತ್ರಿಕಾ ಪ್ರಕಟಣೆ ::
ಪೊಲೀಸ್ ಸಬ್-ಇನ್ಸಪೆಕ್ಟರ್ (ಸಿವಿಲ್) ಮತ್ತು ಪೊಲೀಸ್ ಸಬ್-ಇನ್ಸಪೆಕ್ಟರ್ (ರಾಜ್ಯ ಗುಪ್ತವಾರ್ತೆ) (ಪುರುಷ & ಮಹಿಳಾ) ಹಾಗೂ ಸೇವೆಯಲ್ಲಿರುವವರು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿ ಸಂಬಂಧವಾಗಿ ಅರ್ಜಿಗಳನ್ನು ಆನಲೈನ ಮುಖಾಂತರ ಸಲ್ಲಿಸಲು ಕೊನೆಯ ದಿನಾಂಕ: 28-06-2017 ರಂದು ಸಂಜೆ 6-00 ಗಂಟೆಯ ವರೆಗೆ ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 29-06-2017 ರಂದು ನಿಗದಿಪಡಿಸಲಾಗಿದ್ದು, ಸಾರ್ವಜನಿಕರ ಮನವಿಗಳ ಆಧಾರದ ಮೇಲೆ ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ಕೋರಿರುವ ಹಿನ್ನಲೆಯಲ್ಲಿ ಆನಲೈನ ಮುಖಾಂತರ ದಿನಾಂಕ: 28-06-2017 ರಿಂದ 06-07-2017 ರ ವರೆಗೆ ಮತ್ತು ಅರ್ಜಿ ಶುಲ್ಕವನ್ನು ದಿನಾಂಕ: 29-06-2017 ರಿಂದ 07-07-2017 ರವರೆಗೆ ವಿಸ್ತರಿಸಲಾಗಿದೆ.

                                                                                                                        ಸಹಿ/-
                                                                                                            ಪೊಲೀಸ್ ಅಧೀಕ್ಷಕರು,
                                                                                                                          ಕಲಬುರಗಿ. 

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:30/06/2017 ರಂದು ರಾತ್ರಿ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಮೌಲಾಲಿ ಕಟ್ಟಾದ ಹತ್ತರಿ ಒಬ್ಬ ವ್ಯಕ್ತಿ ದೈವ ಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ  ಸಂಜೀವಕುಮಾರ  ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಖದಿರ ಚೌಕದ ಹತ್ತಿರ ಹೋಗಿ ಮೌಲಾಲಿ ಕಟ್ಟದ ಹತ್ತರ ಇರುವ ಹೊಟೆಲ್ ಹಿಂದಗಡೆಯಲ್ಲಿ  ನಿಂತು ನೋಡಲು ಬೀದಿ ಲೈಟಿನ ಬೆಳಕಿನಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಅಬ್ದುಲ್ ರವುಫ್ ತಂದೆ ಅಬ್ದುಲ್ ಗನಿ ಸಾ: ಮೌಲಾಲಿ ಕಟ್ಟಾ ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗ ಶೋದನೆ ಮಾಡಲು ಒಂದು ಬಾಲ್ ಪೆನ್, 1 ಮಟಕಾ ಬರೆದ ಚೀಟಿ, ನಗದು ಹಣ 1070/-ರೂಗಳು ಮತ್ತು ಕೃತ್ಯ ಬಳಸಿದ ಒಂದು ಮೊಬೈಲ್ ಅಂ.ಕಿ:500/- ನೇದ್ದವುಗಳು ದೊರಕಿದ್ದು. ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ: 30/06/2017 ರಂದು ಮಧ್ಯಾಹ್ನ ನರೋಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಗೋಳಾ.ಬಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ.ಗಜಾನನ.ಕೆ.ನಾಯಕ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ,  ಗೋಳಾ.ಬಿ ಗ್ರಾಮಕ್ಕೆ ಬಾತ್ಮಿ ಬಂದ ಸ್ಥಳವಾದ ಸರ್ಕಾರಿ ಶಾಲೆ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ರೋಡಿನ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ರಾಜಕುಮಾರ @ ರಾಜು ತಂದೆ ಬಾಬು ರಾಠೋಡ, ಸಾ||ಗೋಳಾ ಬಿ ತಾಂಡಾ ಅಂತಾ ತಿಳಿಸಿದ್ದು ಸದರಿಯವನಿಗೆ  ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ   1] ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2) ಒಂದು ಬಾಲ ಪೆನ್‌ 3) ನಗದು ಹಣ 550/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ 30/06/2017 ರಂದು ಮುಂಜಾನೆ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ರಾಕ್ಟ್ರರ್ ನಲ್ಲಿ ಜೇವರ್ಗಿ ಕ್ರಾಸ್ ಕಡೆಗೆ ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ಶಾಹಾಬದ ನಗರ ಠಾಣೆ ಹಾಗು  ಸಿಬ್ಬಂದಿ ಮತ್ತು ಪಂಚರೊಂದಿಗೆ  ಜೇವರ್ಗಿ ಕ್ರಾಸ್ ಹತ್ತಿರ ಹೋದಾಗ ಹೊನಗುಂಟಾ ರಸ್ತೆ ಕಡೆಯಿಂದ ಒಂದು ಮರಳು ತುಂಬಿದ ಟ್ರಾಕ್ಟರ್ ಬರುತಿದ್ದು ಅದರ ಚಾಲಕ ಪೊಲೀಸ್ ಜೀಪ್ ನೋಡಿ  ಟ್ರಾಕ್ಟರ್ ನಿಲ್ಲಿಸಿ ಓಡಿ ಹೋದಾಗ  ಅದರ ನಂಬರ್ ಕೆ ಎ 33 ಟಿ 7695-7696 ಇದ್ದು ಅ ಕಿ 2,00,000 ಅದರಲ್ಲಿ ಮರಳು ತುಂಬಿದ್ದು ಅಂ.ಕಿ . 1000/- ಪಂಚರ ಸಮಕ್ಷಮ  ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಸದರಿ ಟ್ರಾಕ್ಟರ್ ಚಾಲಕ ಮತ್ತು ಮಾಲಿಕ ಸೇರಿ ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೆ ಮರಳು ಕಳ್ಳತನದಿಂದ ಸಾಗಿಸುತ್ತಿದ್ದವರ ಮೇಲೆ   ಕಾನೂನು ಕ್ರಮ  ಕೈಗೊಳ್ಳಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಶರಣಮ್ಮ ಗಂಡ ದೇವಿಂದ್ರ ಉದ್ದನವರ ಸಾ||ಲಾಡಚಿಂಚೋಳಿ ಇವರು ದಿನಾಂಕ:30/06/2017. ನನ್ನ ಗಂಡನು ಈಗ ಸುಮಾರು 15 ವರ್ಷಗಳ ಹಿಂದೆ ಮೃತಪಟ್ಟಿದ್ದು ಈಗ ಸದ್ಯ ನಾನು ಮತ್ತು ನನ್ನ ರಂದು ಬೆಳಿಗ್ಗೆ ನನಗೆ ಒಬ್ಬಳು ಮಗಳು ಮಾತ್ರ ಇದ್ದು ಅವಳ ಮದುವೆ ಮಾಡಿಕೊಟ್ಟಿದ್ದು ಗಂಡನ ಮನೆಯಲ್ಲಿರುತ್ತಾಳೆ ತಾಯಿಯಾದ ಸೋನುಬಾಯಿ ಇಬ್ಬರು ಒಟ್ಟಿಗೆ ವಾಸವಾಗಿದ್ದೇವೆ. ಈಗ ಸುಮಾರು 7-8 ದಿವಸಗಳ ಹಿಂದೆ ನಮ್ಮ ಅತ್ತಿಗೆಯಾದ ಗುಂಡಮ್ಮ ಇವಳು ನಮ್ಮ ಮನೆಯಲ್ಲಿರುವ ದಿನಬಳಕೆಯ ಬಾಂಡ್ಯಾಗಳು ಹಂಚಿಕೆ ಮಾಡಿಕೊಳ್ಳುವ ಸಲುವಾಗಿ ನಮ್ಮೊಂದಿಗೆ ಬಾಯಿ ತಕರಾರು ಮಾಡಿದ್ದು ದಿನಾಂಕ:29/06/2017 ರಂದು ಮುಂಜಾನೆ ನಾನು ಮತ್ತು ನನ್ನ ತಾಯಿಯಾದ ಸೋನುಬಾಯಿ ಇಬ್ಬರು ಮಾತನಾಡುತ್ತಾ ನಮ್ಮ ಮನೆಯ ಮುಂದೆ ಕುಳಿತಿರುವಾಗ ನಮ್ಮ ಅತ್ತಿಗೆಯ ಸಂಬಂಧಿಕನಾದ ನಮ್ಮೂರಿನ ಅಶೋಕ ತಂದೆ ಮಲ್ಲಪ್ಪ ಉದ್ದನವರ ಅತ್ತಿಗೆಯಾದ ಗುಂಡಮ್ಮ ಗಂಡ ಸಿದ್ದಪ್ಪ ಉದ್ದನವರ ಅವಳ ಮಗನಾದ ಕಾಶಿನಾಥ ತಂದೆ ಸಿದ್ದಪ್ಪ ಉದ್ದನವರ ಮತ್ತು ಅಶೋಕನ ತಾಯಿಯಾದ ಶಾಂತಬಾಯಿ ಗಂಡ ಮಲ್ಲಪ್ಪ ಉದ್ದನವರ ರವರುಗಳು ಕೂಡಿಕೊಂಡು ಬಂದು ಗುಂಡಮ್ಮಳು ನನಗೆ ಏ ಸೂಳಿ ನಿಮ್ಮ ಮನೆಯಲ್ಲಿರುವ ಬಾಂಡ್ಯಾಗಳು ನಮ್ಮವು ಅವಾ ನಮಗೆ ವಾಪಸ್ಸು ಕೊಡು ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಳು ಆಗ ನಾನು ಮತ್ತು ನನ್ನ ತಾಯಿ ನಿಮ್ಮ ಬಾಂಡ್ಯಾಗಳು ನಮ್ಮ ಮನೆಯಲ್ಲಿ ಏಕೆ ಇರುತ್ತವೆಂದು ಹೇಳುತ್ತಿರುವಾಗ ಅಶೋಕನು ತನ್ನಲ್ಲಿದ್ದ ಚಾಕು ತಗೆದು ನನಗೆ ಚುಚ್ಚುತ್ತಿರುವಾಗ ನಾನು ನನ್ನ ಎರಡು ಕೈಗಳು ಅಡ್ಡ ಹಿಡಿದ್ದರಿಂದ ಸದರಿ ಚಾಕು ನನ್ನ ಎರಡು ಅಂಗೈಗಳಿಗೆ ಚುಚ್ಚಿದ್ದರಿಂದ ಭಾರಿ ರಕ್ತಗಾಯಗಳು ಆಗಿರುತ್ತವೆ. ಗುಂಡಮ್ಮ ಮತ್ತು ಶಾಂತಬಾಯಿ ಇವರುಗಳು ಬಡಿಗೆಯಿಂದ ನನ್ನ ತಾಯಿಯ ಬಲಗೈಗೆ ಹೊಡೆದಿದ್ದರಿಂದ ರಕ್ತಗಾಯ ವಾಗಿರುತ್ತದೆ. ಮತ್ತು ಬಡಿಗೆಯಿಂದ ಅವಳ ತೊಡೆಗೆ ಗುಂಡಿಚೆಪ್ಪಿಗೆ ಹೊಡೆದಿದ್ದರಿಂದ ಒಳಪೆಟ್ಟಾಗಿದೆ ಕಾಶಿನಾತನು ಸಹ ಬಡಿಗೆಯಿಂದ ನನ್ನ ಹಣೆಯ ಮೇಲ್ಭಾಗ ಬಲಗಡೆ ತೆಲೆಗೆ ಹೊಡೆದ್ದಿದ್ದರಿಂದ ರಕ್ತಗಾಯವಾಗಿದೆ. ಮತ್ತು ಕಾಶಿನಾಥನು ಹಾಗೂ ಅಶೋಕ ಇಬ್ಬರು ಸೇರಿ ನನ್ನ ತಾಯಿಗೆ ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆಗೆ ಹಾಗೂ ಹೊಟ್ಟೆ ಕೇಳಭಾಗಗಕ್ಕೆ ವದ್ದಿದ್ದರಿಂದ ಒಳಪೆಟ್ಟು ಆಗಿದೆ. ಅಷ್ಟರಲ್ಲಿಯೆ ಅಲ್ಲಯೇ ಇದ್ದ ನಮ್ಮ ಒಣಿಯವರಾದ ಸರುಬಾಯಿ ಗಂಡ ಬಾಬು ಶಿಲ್ಡ, ಲಕ್ಷ್ಮೀಬಾಯಿ ಗಂಡ ಶಾಮರಾಯ ಕೋರೆ ಮತ್ತು ಸಿದ್ದಪ್ಪ ತಂದೆ ಶಾಮರಾಯ ಕೋರೆ ರವರುಗಳು ಜಗಳ ನೋಡಿ ಬಿಡಿಸಿರುತ್ತಾರೆ. ನಂತರ ನಾಲ್ಕು ಜನರು ನನಗೆ ಹಾಗೂ ನನ್ನ ತಾಯಿಗೆ ಇವತ್ತು ನೀವು ಉಳಿದ್ದಿದ್ದಿರಿ ಮುಂದೆ ಒಂದಲ್ಲ ಒಂದು ದಿವಸ ನಿಮಗೆ ಖಲಾಸ ಮಾಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಘಾತ ಪ್ರಕರಣ :
ಸೇಡಂ ಠಾಣೆ  : ಶ್ರೀ. ರಾಜು ತಂದೆ ಹಲಗಪ್ಪ ಕೊಡೆಕಲ್, ಸಾ:ಲಕ್ಷ್ಮೀಪುರ ವಾಡಿ, ತಾ:ಚಿತ್ತಾಪೂರ ರವರು  ದಿನಾಂಕ:30-06-2017 ರಂದು ನಮ್ಮ ಅಳಿಯನಾದ ಶ್ರೀ. ಲಕ್ಷ್ಮಣ ತಂದೆ ಗಿಡ್ಡಪ್ಪ ಭಾಗೋಡಿ ಈತನ ಮದುವೆಯು ಕರನಕೋಟದಲ್ಲಿ ಇದ್ದುದ್ದರಿಂದ ನಾನು ಸಂಗಡ ನಮ್ಮ ಸಂಭಂದಿಕರು ಹಾಗೂ 50 ರಿಂದ 60 ಜನರು ಲಾರಿ ನಂ-KA26-4305 ನೇದ್ದನ್ನು ಬಾಡಿಗೆ ಮಾಡಿಕೊಂಡು ನಮ್ಮೂರ ಲಕ್ಷ್ಮೀಪೂರದಿಂದ ಕರನಕೋಟಗೆ ಹೊರಟಾಗ ಸೇಡಂದಲ್ಲಿ ಚಿಂಚೊಳಿ ರೋಡಿನ .ಪಿ.ಎಮ್.ಸಿ ಮುಂದುಗಡೆ ಚಿಂಚೋಳಿ ಕಡೆಯಿಂದ ಲಾರಿ ನಂ-MH12LT-0584 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಲಾರಿ ಬಲಗಡೆಯ ಹಿಂದಿನ ಟೈರಗೆ ಒಮ್ಮೆಲೆ ಡಿಕ್ಕಿ ಹೊಡೆದು ಅಪಘಾತಪಡಿಸಿದನು ಆಗ ಲಾರಿಯಲ್ಲಿ ಹಿಂದುಗಡೆ ಕುಳಿತ 1] ಹಣಮಂತ ತಂದೆ ಗಿಡ್ಡಪ್ಪ ಭಾಗೋಡಿ ಸಾ:ಲಕ್ಷ್ಮೀಪುರ ಈತನ ಹಣೆಗೆ ತಲೆಗೆ ಬಡಿದು ಬುರುಡೆ ಒಡೆದು ಭಾರಿ ರಕ್ತಗಾಯವಾಗಿ ಲಾರಿಯಲ್ಲಿಯೇ ಮೃತಪಟ್ಟಿದ್ದು  2] ಭೋಜಪ್ಪ ತಂದೆ ಭೀಮಯ್ಯ ಕರನಕೋಟ ಈತನಿಗೆ ಬಲಗೈ ಮೊಳಕೈಗೆ ರಕ್ತಗಾಯವಾಯಿತು, 3] ನಾಗೇಶ ತಂದೆ ಭೀಮಯ್ಯ ಕುನ್ನೂರ ಈತನಿಗೆ ಬಲಗೈ ಮುಂಗೈಗೆ ಬೆರಳುಗಳಿಗೆ ರಕ್ತಗಾಯಗಳಾಯಿತು. 4] ಮಹೇಶ ತಂದೆ ದೇವಿಂದ್ರಪ್ಪ ಅಚ್ಚೇಲಿ ಈತನಿಗೆ ಬಲಗೈ ಮೊಳಕೈಗೆ ಗುಪ್ತ ಪೆಟ್ಟಾಯಿತು. 5] ಅವಿನಾಶ ತಂದೆ ಶರಣಪ್ಪ ಜೇವರ್ಗಿ ಈತನಿಗೆ ಬಲಗೈ ಮೊಳಕೈಗೆ ರಕ್ತಗಾಯವಾಯಿತು, ನನಗೆ ಯಾವುದೇ ಗಾಯಗಳಾಗಿರುವದಿಲ್ಲ. ಡಿಕ್ಕಿ ಪಡೆಯಿಸಿದ ಲಾರಿ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಸಚಿನ ತಂದೆ ಸುರೇಶ ಸಾ:ಪಂಡರಪುರ ಅಂತ ತಿಳಿಸಿದನು. ಗಾಯಾಳು ಜನರಿಗೆ ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತೇವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.