POLICE BHAVAN KALABURAGI

POLICE BHAVAN KALABURAGI

28 February 2017

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು:
ಕಾಳಗಿ ಪೊಲೀಸ ಠಾಣೆ :- ದಿನಾಂಕ 28/02/17 ರಂದು ಶ್ರೀ ಈರಭದ್ರಪ್ಪ ಪಂಡರಗೇರಿ ಸಾ:ಹುಳಗೇರಾ ಇವರು ಠಾಣೆಗೆ ಹಾಜರಾಗಿ  ದಿನಾಂಕ 27/02/2017 ರಂದು ಕೋರವಾರ ಅಣ್ಣವೀರಪ್ಪ ದೇವರ ಥೇರು ಇರುವುದರಿಂದ ನಮ್ಮ ಗ್ರಾಮದಿಂದ ನಾನು ನನ್ನ ಹೆಂಡತಿ ಶಾಂತಾಬಾಯಿ ನನ್ನ ಮಗ ಶಿವುಕುಮಾರ ಸಾಯಂಕಾಲ ದೇವಸ್ಥಾನಕ್ಕೆ ಹೋಗಿದ್ದು ನನ್ನ ಇನ್ನೊಬ್ಬ ಮಗ ಆನಂದನು ಹುಳಗೇರಾದಿಂದ ಯಾರದೋ ಮೋಟಾರ ಸೈಕಲ್  ತೆಗೆದುಕೊಂಡು ಕಾಳಗಿಗೆ ಬಂದು ಕಾಳಗಿಯಿಂಧ  ತನ್ನ  ಗೆಳೆಯನಾದ ಮಡಿವಾಳಪ್ಪ ತಂದೆ ರವೀಂದ್ರ ನಡಗಟ್ಟಿ ಇತನೊಂದಿಗೆ ಅಣವೀರಪ್ಪನ ದೇವಸ್ಥಾನಕ್ಕೆ ನನ್ನ ಮಗ ಮತ್ತು ಆತನ ಗೆಳೆಯ ಮಡಿವಾಳಪ್ಪ ಮೋಟಾರ ಸೈಕಲ್ ನಂ. ಕೆಎ-28 ಕ್ಯೂ-5105 ನೇದ್ದರ ಮೇಲೆ ಬರುತ್ತಿದ್ದಾಗ ಕಾಳಗಿ ಹತ್ತಿರದ ಗೋಟುರ ಕಡೆಯ ರಸ್ತೆ ಯಲ್ಲಿ ಕಲಬುರಗಿ ಕಡೆಯಿಂದ ಬರುತ್ತಿದ್ದ ಟಾಟಾ ಸುಮೋ ನಂ. ಕೆಎ-32 ಎ-5133 ನೇದ್ದರ ಚಾಲಕ ವಾಹನವನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸುತ್ತಾ ನನ್ನ ಮಗರ ಮತ್ತು ಆತನ ಗೆಳೆಯ ಬರುತ್ತಿದ್ದ ಮೋಟಾರ ಸೈಕಲ್ ಕ್ಕೆ ಡಿಕ್ಕಿ ಪಡಿಸಿದ್ದರಿಂದ ನನ್ನ ಮಗನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ ಎರಡು ಕಿವಿಯಿಂದ ರಕ್ತ ಸೋರಿರುತ್ತದೆ. ಎರಡು ಕಾಲುಗಳಿಗೆ ತರಚಿತ ಗಾಯಗಳಾಗಿದ್ದು. ಆತನ ಗೆಳೆಯ ಮಡಿವಾಳಪ್ಪನಿಗೆ ಕಾಲು ಮುರಿದಿದ್ದು ಮಡಿವಾಳಪ್ಪನಿಗೆ ಖಾಸಗಿ ವಾಹನದಲ್ಲಿ  ಸರಕಾರಿ ಆಸ್ಪತ್ರೆ ಕರೆದುಕೊಂಢು ಹೋಗಿದ್ದು. ನನ್ನ ಮಗ ಆನಂದನು ಮೃತ ಪಟ್ಟಿದ್ದು . ಅಪಘಾತ ಪಡಿಸಿದ ಟಾಟಾ ಸುಮೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಮುಧೋಳ ಪೊಲೀಸ್ ಠಾಣೆ :- ದಿನಾಂಕ: 27.02.2017 ರಂದು ಶ್ರೀಮತಿ ಅನುಸುಜಮ್ಮ @ ಅನಸಮ್ಮ ಗಂಡ ನರಸಿಂಹಲು ಮಾಲಾಮೀದಿ ಸಾ: ಕೊಡಚರ್ಲಾ ಮಂಡಲ: ಬಸೀರಾಬಾದ (ಟಿ.ಎಸ್. ರಾಜ್ಯ) ಇವರು ಹೇಳಿಕೆ ಫೀರ್ಯಾದಿಯಲ್ಲಿ ಇಂದು ದಿನಾಂಕ: 27-02-2017 ರಂದು ತಮಗಮ ಊರಿನಿಂದ ತಾನು ಮತ್ತು ನನ್ನ ಗಂಡ ನರಸಿಂಹಲು ಮೇದಕ್ ಗ್ರಾಮಕ್ಕೆ ನಮ್ಮ ಮೊ/ಸೈ ನಂ OR-05-V-0954 ನೇದ್ದರ ಮೇಲೆ ಸಂಬಂದಿಕರಾದ ವೆಂಕಟೇಶ ತಂದೆ ಶಾಮಪ್ಪ ಸಾ: ಮೇದಕ ಇವರ ಮನೆಗೆ ಬಂದಿದ್ದು. ನನ್ನ ಗಂಡ ಮೇದಕ ಗ್ರಾಮದ ನಮ್ಮ ಸಂಬಂದಿಕರ ಮನೆಯಲ್ಲಿ ನನಗೆ ಬಿಟ್ಟು ಕಾನಕುರ್ತಿ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತಾ ಮೊ/ಸೈನ್ನು ನಂ OR-05-V-0954  ನೇದ್ದರ ಮೇಲೆ ಹೋಗಿದ್ದು. ಸಾಯಂಕಾಲ ನನ್ನ ಗಂಡನ ಫೋನ ದಿಂದ ನನಗೆ ಫೋನ ಮಾಡಿ ನಿನ್ನ ಗಂಡ ಕಾನಕುರ್ತಿಯಿಂದ ಮೇದಕ ಕಡೆಗೆ ಮೊ/ಸೈ ನಂ OR-05-V-0954 ನೇದ್ದರ ಮೇಲೆ ಬರುತ್ತಿದ್ದಾಗ  ಗಂಗಾರಾವಲಪಲ್ಲಿ ಗೇಟ ದಾಟಿ ಸುಮಾರು 1 ಕಿಮಿ ದೂರದ ಅಂತರದಲ್ಲಿ ನಿನ್ನ ಗಂಡ ಮೊ/ಸೈ ನ್ನು ಅತಿವೇಗ ಹಾಗು ನಿಷ್ಕಾಳಜೀತನಿಂದ ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ಮೊ/ಸೈ ಸ್ಕಿಡ್ಡಾಗಿ ರೋಡಿನ ಮೇಲೆ ಬಿದ್ದಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಬರುತ್ತಿದೆ ಅಂತಾ ತಿಳಿಸಿದಾಗ ನಾನು ಮತ್ತು ನಮ್ಮ ಸಂಬಂದಿಕರಾದ ವೆಂಕಟೇಶ ತಂದೆ ಶಾಮಪ್ಪ ಇಬ್ಬರು ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನ ತಲೆಗೆ ಹಿಂದುಗಡೆ ಭಾರಿ ರಕ್ತಗಾಯವಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತಬರುತ್ತಿದ್ದು ಉಪಚಾರ ಕುರಿತು 108 ಅಂಬುಲೇನ್ಸನಲ್ಲಿ ಸರಕಾರಿ ಆಸ್ಪತ್ರೆ ಗುರುಮಠಕಲ್ ಗೆ ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಆಸ್ಪತ್ರೆಗೆ ತೆಗೆದುಕೊಂಡು ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಆಡಕಿ ಗ್ರಾಮದ ಹತ್ತಿರ ಮೃತ ಪಟ್ಟಿದ್ದು ಇತನ ಮೃತ ದೇಹವನ್ನು ಸರಕಾರಿ ಆಸ್ಪತ್ರೆ ಸೇಡಂಕ್ಕೆ ತಂದಿದ್ದು. ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.

27 February 2017

Kalaburagi District Reported Crimes

ನೀರಿನಲ್ಲಿ ಮುಳುಗಿ ಸಾವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ  26-2-2017 ರಂದು  ಶ್ರೀ ಅಮೀರ ಅಲಿಖಾನ ತಂದೆ ಇಬ್ರಾಹಿಂ ಅಲಿಖಾನ ಸಾ : ಶರ್ಫ ಮಡ್ಡಿ ಇಸ್ಲಾಮಾಬಾದ ಕಾಲೂನಿ ಕಲಬುರಗಿ  ರವರ  ಮಗಳು ಅಮತುಸಬುರ ವಯ;13 ವರ್ಷ , ಮರಿಯಮ್ಮಾ ವಯ;16 ವರ್ಷ ಇವರು ತಮ್ಮ ಹೊಲದ ಪಕ್ಕದಲ್ಲಿ ಇರುವ ಕುಮಸಿ ಗ್ರಾಮದ ಸೀಮಾಂತರದಲ್ಲಿ ಬರುವ ಕೆರೆಯ ನೀರಿನಲ್ಲಿ ಆಡಲು ಹೋದಾಗ ಆಯಾ ತಪ್ಪಿ  ಕೇರೆ ನೀರಲ್ಲಿ ಬಿದ್ದಾಗ  ಅವರನ್ನು  ಕರೆಯಲು/ತೆಗೆಯಲು ಹೋದ ಫಿರ್ಯಾದಿ ಅಳಿಯ ಸಾದುಲ್ ರೆಹಮಾನ ಮತ್ತು  ನನ್ನ ಅಣ್ಣನ ಮಗ ಬಸಿರ ಅಲಿಖಾನ ಇವರೂ ಕೂಡಾ  ಆಯಾತಪ್ಪಿ  ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 26-02-2017 ರಂದು 3 ಪಿ.ಎಮ್ ಕ್ಕೆ  ಶ್ರೀ ಗುಂಡಪ್ಪ ತಂದೆ  ಸಂಗಪ್ಪ ಜವಾಜಿ ಮು:ರಾಜನಾಳ ಗ್ರಾಮ ತಾ:ಜಿ:ಕಲಬುರಗಿ ಇವರು ದಿನಾಂಕ : 26.02.2017 ರಂದು ನಸುಕಿನ ಜಾವ ರಾಜನಾಳ ಗ್ರಾಮದಿಂದ ನನ್ನ ಅಣ್ಣನಾದ ರಾಜಕುಮಾರ ಜವಾಜಿ ಇವರು ನನ್ನ ಮೋಬಾಯಿಲಗೆ ಫೊನ ಮಾಡಿ ಯಾರೋ ಕಳ್ಳರು ನನ್ನ ಮನೆಯಲ್ಲಿ ನಾನು ಮಲಗುವ ಕೋಣೆಯ ಬಾಗಿಲಿಗೆ ಹಾಕಿದ ಕಿಲಿಯನ್ನು ಮುರಿದು ಮನೆಯಲ್ಲಿ ಹೋಗಿ ಅಲಮಾರಿಯ ಕಿಲಿಯನ್ನು ಮುರಿದು ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿ ಆಗಿ ಬಿಸಾಡಿ ಕಳ್ಳತನ ಮಾಡಿರುವ ವಿಷಯ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ನನ್ನ ಮನೆ ಕಳ್ಳತನವಾದ ವಿಷಯ ನನ್ನ ಸಂಗಡ ಸಂಗಮಕ್ಕೆ ಬಂದಿದ್ದ ಜಗನ್ನಾಥ ಕಲ್ಲೂರ ಹಾಗೂ ಮಂಜುನಾಥ ಜವಾಜಿ ಹಾಗೂ ಹುಮನಾಬಾದನಲ್ಲಿರುವ ನನ್ನ ಹೆಂಡತಿಗೆ ತಿಳಿಸಿದ್ದು. ನಾವೇಲ್ಲರೂ ಕೂಡಿ ಮುಂಜಾನೆ ವಾಪಸ್ಸ ರಾಜನಾಳ ಗ್ರಾಮದ ನನ್ನ ಮನೆಗೆ ಬಂದು ನೋಡಲು ನನ್ನ ಅಣ್ಣ ಫೊನನಲ್ಲಿ ಹೇಳಿದಂತೆ ನಾನು ಮಲಗುವ ಕೋಣೆಯ ಬಾಗಿಲಕಿಲಿ ಮುರಿದು ಒಳಗೆ ಹೋಗಿ ಅಲಮಾರಿಯ ಕಿಲಿ ಮುರಿದು ಅಲಮಾರಿಯಲ್ಲಿಟ್ಟ ಸಾಮಾನುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಟಾಕಿದ್ದು. ನಂತರ ನಾನು ನೋಡಲು ಅಲಮಾರಿಯಲ್ಲಿಟ್ಟ  ಬಮಗಾರದ ಮತ್ತು ಬೆಳ್ಳಿಯ ಆಭರಣಗಳನ್ನು , ಕೈಗಾಡಿಯಾರ ಮತ್ತು ನಗದು ಹಣ ಹೀಗೆ ಒಟ್ಟು ಒಟ್ಟು 91.800 ರೂಪಾಯಿ ಮಾಲನ್ನು ಯಾರೋ ಕಳ್ಳರು ರಾತ್ರಿ 12 ಗಂಟೆಯಿಂದ 02.00 ಗಂಟೆಯ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಲ್ಲಯ್ಯ ತಂದೆ ಕಲ್ಲಯ್ಯ ಹೊಸಮಠ ಸಾ|| ಅಫಜಲಪೂರ ಇವರು ದಿನಾಂಕ 20-02-2017 ರಂದು ಸಂಜೆ ಮಾದಾಬಾಳ ತಾಂಡಾದಲ್ಲಿ ನನ್ನ ಗೆಳೆಯರಾದ ವಿನೋದ ತಂದೆ ಮೋತಿಚಂದ ರಾಠೊಡ ಸಾ|| ಮಾದಾಬಾಳ ಇವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮ ಇದ್ದರಿಂದ, ಸದರಿ ಕಾರ್ಯಕ್ರಮಕ್ಕೆ ನಾನು ಮತ್ತು ನಮ್ಮ ಸ್ನೇಹಿತರು ಆದ ಗುರುದೇವ ತಂದೆ ಶರಣಯ್ಯ ಹಿರೇಮಠ ಸಾ|| ಅಫಜಲಪೂರ ಇಬ್ಬರು ಕೂಡಿ ಅರ್ಜುನ ಬಂಕದ ಇವರ ಮೋಟರ ಸೈಕಲ ನಂ ಕೆಎ-32 ಎಸ್-5755 ನೇದ್ದರ ಮೇಲೆ ಅಫಜಲಪೂರದಿಂದ ಮಾದಾಬಾಳ ತಾಂಡಾಕ್ಕೆ ಹೊರಟಿರುತ್ತೇವೆ. ಮೋಟರ ಸೈಕಲ ನಾನೆ ನಡೆಸುತ್ತಿದ್ದೇನು. ರಾತ್ರಿ 7:45 ಗಂಟೆ ಸುಮಾರಿಗೆ ಮಾದಾಬಾಳ ತಾಂಡಾದ ಹತ್ತಿರ ಹೊಗುತ್ತಿದ್ದಂತೆ ಎದರುಗಡೆಯಿಂದ ಒಂದು ವಾಹನದ ಚಾಲಕನ ತನ್ನ ವಾಹನವನ್ನು ಲೈಟ ಹಾಕಿಕೊಂಡು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸುತ್ತಾ ಬಂದನವನೆ ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿ ಹೊಡೆದನು. ಆಗ ನಾವು ಕೆಳಗೆ ಬಿದ್ದೇವು. ಡಿಕ್ಕಿಯಿಂದ ನನಗೆ ಎಡಗಾಲು ಮೋಳಕಾಲಿನ ಕೆಳಗೆ ಕಾಲು ಮುರಿದಿರುತ್ತದೆ. ಮತ್ತು ಸೊಂಟಕ್ಕೆ ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿ ಏಡ ಮೆಲಕಿಗೆ ತರಚಿದ ರಕ್ತಗಾಯವಾಗಿತ್ತು. ಮೋಟರ ಸೈಕಲ ಮೇಲೆ ಹಿಂದೆ ಕುಳಿತಿದ್ದ ಗುರುದೇವ ಇವರಿಗೆ ಎರಡುಕಾಲುಗಳಿಗೆ ಹಾಗೂ ಮೈ ಕೈಗೆ ಬಾರಿ ಗುಪ್ತಗಾಯಗಳು ಹಾಗೂ ಅಲ್ಲಲ್ಲಿ ತರಚಿದ ಗಾಯಗಳು ಆಗಿರುತ್ತವೆ. ನಮ್ಮ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿದ ವಾಹನ ನೋಡಲಾಗಿ ಕ್ರೂಜರ ವಾಹನ ಇದ್ದು ಅದರ ನಂ ಕೆಎ-23 ಎನ್-0176 ಅಂತಾ ಇರುತ್ತದೆ. ಡಿಕ್ಕಿಯಾದ ತಕ್ಷಣ ಅದರ ಚಾಲಕ ಕ್ರೂಜರನ್ನು ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

26 February 2017

Kalaburagi District Reported Crimes

ಅತ್ಯಾಚಾರ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ರವರ ಊರಿನ ಶರಣಪ್ಪ ತಂದೆ ಚಂದ್ರಾಮ ಗುಬ್ಬಾ ಇತನು ನಾನು ನೀರಿಗೆ ಹೋಗುವಾಗ ಮತ್ತು ಹೊಲಕ್ಕೆ ಕೆಲಸಕ್ಕೆ ಹೋಗುವಾಗ ನನಗೆ ನೋಡಿ ಸಿಳ್ಳೆ ಹೊಡೆದು ಚುಡಾಯಿಸುವುದು ಮಾಡುತ್ತಾ ಬಂದಿರುತ್ತಾನೆ ಈ ವಿಷಯವನ್ನು ಮನೆಯಲ್ಲಿ ನನ್ನ ತಾಯಿ ಅನಸೂಬಾಯಿಗೆ ಮತ್ತು ಮಾವ ಇವರಿಗೆ ಹೇಳಿದ್ದೆನು. ಅವರು ಅವನ ಮನೆಗೆ ಹೋಗಿ ಬುದ್ದಿ ಮಾತು ಹೇಳಿದ್ದು ಇರುತ್ತದೆ ನಾವು ಮರ್ಯಾದೆಗೆ  ಅಂಜಿ ಸುಮ್ಮನಿದ್ದೆವು. ಈಗ ಸುಮಾರು 6 ತಿಂಗಳ ಹಿಂದೆ ಮೂದಬಾಳ (ಬಿ) ಗ್ರಾಮದ ಬಸವರಾಜ ತೆಳಗಿನಮನಿ ಇವನೊಂದಿಗೆ ನನ್ನ ಮದುವೆಯಾಗಿರುತ್ತದೆ ಮದುವೆಯಾದ ನಂತರ ನಾನು ಮೂದಬಾಳ (ಬಿ) ಗ್ರಾಮದಲ್ಲಿಯೇ ನನ್ನ ಗಂಡನ ಮನೆಯಲ್ಲಿ ವಾಸವಾಗಿದ್ದೆನು. ನನ್ನ ತವರು ಮನೆ ಮಾರಡಗಿ (ಎಸ್.ಎ) ಗ್ರಾಮದಲ್ಲಿ ದೇವಿ ಜಾತ್ರೆ ಇದ್ದುದ್ದರಿಂದ ನಾನು ದಿ. 15.02.17 ರಂದು ಮುಂಜಾನೆ ಮಾರಡಗಿ (ಎಸ್.ಎ) ಗ್ರಾಮಕ್ಕೆ ಬಂದು ನನ್ನ ತಾಯಿ ಹತ್ತಿರ ಇದ್ದೆನು. ದಿ. 16.02.2017 ರಂದು ರಾತ್ರಿ ನಾನು ಮನೆಯಿಂದ ಬೈಲ ಕಡೆಗೆ ( ಬರ್ಹಿದೇಶಕ್ಕೆ) ಹೋಗಿ ಮರಳಿ ಮನೆಗೆ ಬರುವಾಗ  ರಾತ್ರಿ 8.00 ಗಂಟೆ ಸುಮಾರಿಗೆ ಶರಣಪ್ಪ ಗುಬ್ಬಾ ಇತನು ಬಂದು ನನಗೆ ತಡೆದು ನಿಲ್ಲಿಸಿ ಏ ಬಾರೆ ಎಂದು ನನ್ನ ಕೈ ಹಿಡಿದು ಜಗ್ಗಾಡ ಹತ್ತಿದನು. ನಾನು ಅವನಿಗೆ ನನಗೆ ಯಾಕೆ? ಈ ರೀತಿ ಮಾಡುತ್ತಿದ್ದಿ ಎಂದು ಕೇಳಿದಾಗ ನೀನ್ನ ಮೇಲೆ ನನ್ನ ಮನಸ್ಸು ಇದೆ ನನ್ನ ಜೊತೆ ಮಲಗು ಬಾ ಎಂದು ಕರೆದನು. ಅದಕ್ಕೆ ನಾನು ಒಪ್ಪದೆ ಇದ್ದಾಗ ಅವನು ನನಗೆ ಜಬರದಸ್ತಿಯಿಂದ ಎಳೆದುಕೊಂಡು ಹೆಣ್ಣುಮಕ್ಕಳು ಬರ್ಹಿದೇಶಕ್ಕೆ ಹೊಗುವ ಸ್ಥಳದ ಜಾಲಿ ಕಂಟಿಯ ಮರೆಯಲ್ಲಿ ಒಯ್ದು ನನಗೆ ನೇಲಕ್ಕೆ ಕೆಡುವಿ ಜಬರದಸ್ತಿಯಿಂದ ಸಂಬೊಗ ಮಾಡಿರುತ್ತಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾನೆ. ನಾನು ಮರ್ಯಾದೆಗೆ  ಅಂಜಿ ಸುಮನಿದ್ದೆನು. ಮತ್ತು ದಿ. 17.02.2017 ರಂದು ಅವನು ನನ್ನ ಗಂಡನಿಗೆ ಪೊನ ಮಾಡಿ ನೀನ್ನ ಹೆಂಡತಿಗೆ ಎತ್ತಿಕೊಂಡು ಹೋಗುತ್ತೆನೆ ಎಂದು ಅವಾಚ್ಯ ಶಬ್ದಗಳಿಂದ ಬೈದ್ದಿರುತ್ತಾನೆ. ಅದಕ್ಕೆ ನನ್ನ ಗಂಡನು ಅವನಿಗೆ ನೀನು ಯಾರು ಎಂದು ಕೇಳಿದರೆ ಏ ಬೊಸಡಿ ಮಗನೆ ನಾನು ಯಾರಾದರು ಏನು ನೀನ್ನ ಹೆಂಡತಿಗೆ ಬಿಡುವುದಿಲ್ಲಾ ಎಂದು ಬೇದರಿಕೆ ಹಾಕಿರುತ್ತಾನೆ. ಈ ವಿಷಯವನ್ನು ಮನೆಯಲ್ಲಿ ನನ್ನ ಗಂಡ ಹೇಳಿದಾಗ, ಶರಣಪ್ಪನು ನನಗೆ ಜಬರದಸ್ತಿಯಿಂದ ಸಂಬೊಗ ಮಾಡಿದ ವಿಷಯ ತಿಳಿಸಿರುತ್ತೆನೆ. ದಿ. 18.02.2017 ರಂದು ಮುಂಜಾನೆ ನಾನು ಮತ್ತು ನನ್ನ ಗಂಡ, ಹಾಗೂ ನನ್ನ ತಾಯಿ, ಮಾಂವದಿರು ಎಲ್ಲರೂ ಕೂಡಿ ಶರಣಪ್ಪನ ಮನೆಗೆ ಕೇಳಲು ಹೋದಾಗ ಮನೆಯಲ್ಲಿ  ಶರಣಪ್ಪ ತಂದೆ ಚಂದ್ರಾಮ ಗುಬ್ಬಾ ಇದ್ದಿರಲಿಲ್ಲಾ, ಶರಣಪ್ಪನ ಮನೆಯವರಾದ 1) ಚಂದ್ರಾಮ ತಂದೆ ಬೀರಪ್ಪ ಗುಬ್ಬಾ 2) ಮರೆಮ್ಮ ಗಂಡ ಚಂದ್ರಾಮ ಗುಬ್ಬಾ 3) ಶಂಕರೇಪ್ಪ ತಂದೆ ಚಂದ್ರಾಮ ಗುಬ್ಬಾ 4) ನಿಂಗಣ್ಣಾ ತಂದೆ ಚಂದ್ರಾಮ ಗುಬ್ಬಾ ಇವರೆಲ್ಲರೂ ಕೂಡಿ ಶರಣಪ್ಪನ ಬಗ್ಗೆ ನಮಗೇನು ಗೊತ್ತಿಲ್ಲಾ ನೀವು ನಮ್ಮ ಮನೆಯತನಕ ಬಂದು ಕೇಳುತ್ತಿರಿ ನೀವು ಏನು ಬೇಕಾದರೂ ಮಾಡಿಕೊಳಿರಿ ಬೊಸಡಿ ಮಕ್ಕಳೆ ಎಂದು ಬೈಯ್ದು ನಮಗೆ ಬೇದರಿಕೆ ಹಾಕಿರುತ್ತಾರೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಕಿರುಕಳ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 20-02-2017 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಶ್ರೀಮತಿ  ರೇಣುಕಾ ತಂದೆ ಈಶ್ವರ ಕಾಟನೂರ ಸಾ: ಬಸವಪಟ್ಟಣ್ಣ ಹಾ: ವ: ಬಿದನೂರ ತಾ; ಅಫಜಲಪೂರ ಇವರಿಗೆ  ಈಶ್ವರ ತಂದೆ ಶರಣಪ್ಪಾ ಕಾಟನೂರ ಇನ್ನೂ 7 ಜನರು ಸಾ: ಎಲ್ಲರೂ ಬಸವಪಟ್ಟಣ್ಣ ಇವರು ಕುಡಿಕೊಂಡು ಜಗಳತೆಗೆದು  ಈ ಮೊದಲಿನಂತೆ ನಿನಗೆ ಅಡುಗೆ ಮಾಡಲು ಬರಲ್ಲಾ ಹೊಲದ ಕೆಲಸ ಬರುವುದಿಲ್ಲಾ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತಾ ಅವ್ಯಾಚ್ಚವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದೆ ಠಾಣೆಯಲ್ಲಿ ಪ್ರಕರಣ ದಾಖಾಲಗಿದೆ.