POLICE BHAVAN KALABURAGI

POLICE BHAVAN KALABURAGI

17 March 2016

Kalaburagi District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀ ನರಸಿಂಗ ತಂದೆ ಕಾಶಪ್ಪ ವಾಡೇಕರ್ ಸಾ:ಬಸವ ನಗರ ಎಮ್.ಎಸ್.ಕೆ ಮಿಲ್ ರೋಡ ಕಲಬುರಗಿ ಇವರು ಮಗಳಾದ, ಶೃತಿ ವಯಾ:17 ವರ್ಷ ಇವಳು ದಿಶಾ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಂಕ 15-03-2016 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು ಪುನಃ ಮನೆಗೆ ಬರದೇ ಇದ್ದಾಗ ನಾವು ಸಾಯಂಕಾಲ ಅವಳ ಕಾಲೇಜಿಗೆ ಹೋಗಿ ಅವಳ ಸ್ನೇಹಿತರಿಗೆ ಹಾಗೂ ನಮ್ಮ ಸಂಬಂಧಿಕರಲ್ಲಿ ಹುಡುಕಾಡಿದೆವು. ನಂತರ ಇಂದು ದಿನಾಂಕ 16-03-2016 ಬೆಳಿಗ್ಗೆ 7-42 ಗಂಟೆಗೆ ಅನೀಲ @ ಅನ್ಯಾ ತಂದೆ ಶಂಕರ ಚಿಗನೂರ ಇತನು ನನ್ನ ಮೊಬಾಯಿಲ್ ನಂ:9663416159 ಕ್ಕೆ ಆತನ ಮೊಬಾಯಿಲ್ ನಂ:7719989124 ನೇದ್ದರಿಂದ ಕರೆ ಮಾಡಿ ನಿನ್ನ ಮಗಳನ್ನು ನಾನು ಕಿಡ್ನಾಪ ಮಾಡಿಕೊಂಡು ಬಂದಿದ್ದು, ಬೆಂಗಳೂರಿನಲ್ಲಿದ್ದೇವೆ ಏನು ಮಾಡಿಕೋತಿ ಮಾಡಿಕೋ ಎಂದು ಫೋನ ಸ್ವೀಚ್ಛ ಆಫ್ ಮಾಡಿರುತ್ತಾನೆ. ಇದರಿಂದ ನಮಗೆ ತುಂಬಾ ಭಯವಾಗಿದ್ದು, ನನ್ನ ಮಗಳಾದ ಶೃತಿ ಇವಳಿಗೆ ಅಪಹರಿಸಿಕೊಂಡು ಹೋದ ಅನೀಲ @ ಅನ್ಯಾ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣಗಳು :
ಜೇವರಗಿ ಠಾಣೆ : ದಿನಾಂಕ 15.03.2016 ರಂದು 23:30 ಗಂಟೆಯಿಂದ ದಿ 16.03.2016 ರಂದು 05:೦೦ ಗಂಟೆಯ ಮಧ್ಯದ ಅವಧೀಯಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಮನೆಯ ಬಾಗೀಲ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯ ಅಲಮಾರಿಯ ಬಾಗಿಲು ತೆಗೆದು ಅದರಲ್ಲಿಟ್ಟಿದ್ದ 24.500/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದ್ದು ಕಾರಣ ಸದರಿ ಕಳ್ಳರನ್ನು ಹಾಗು ಕಳುವಾದ ವಸ್ತುಗಳನ್ನು  ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಸೈದಪ್ಪ ತಂದೆ ನಾಗಪ್ಪ ಕ್ಯಾಸಪ್ಪಳ್ಳಿ ಸಾ|| ಇಜೇರಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ದಿನಾಂಕ 15-03-2016 ರಂದು ರಾತ್ರಿ 10;00 ಗಂಟೆಯಿಂದ ದಿನಾಂಕ 16-03-2016 ರಂದು ಬೆಳಿಗ್ಗೆ 07;00 ಗಂಟೆ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಶಾಲೆಯ ಗಣಕಯಂತ್ರ ಕೋಣೆಯ ಕೊಂಡಿಯನ್ನು ಕಟ್ ಮಾಡಿ ಕೋಣೆಯಲ್ಲಿದ್ದ 08 ಟೂಬಲರ್ ಬ್ಯಾಟ್ರಿಗಳು ಅ;ಕಿ; 8,000/- ರೂ ನೇದ್ದವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಬ್ಯಾಟ್ರಿಗಳು ಪತ್ತೆಮಾಡಿ ಆರೋಪಿತರ ಮೇಲೆ ಕಾನೂನು ರೀತಿ ಕ್ರಮ ಕೈಗೋಳ್ಳಬೇಕು ಅಂತಾ ಶ್ರೀ ಬಸಯ್ಯ ತಂದೆ ಸೋಮಶೇಖರಯ್ಯ ಸಾಲಿ ಉ; ಮುಖ್ಯೆ ಗುರುಗಳು ಬಿಳವಾರ ಸರಕಾರಿ ಪ್ರೌಡ ಶಾಲೆ  ರವರು  ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ  ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ದಸ್ತಯ್ಯ ತಂದೆ ಸಿದ್ಧಯ್ಯಾ ಗುತ್ತೆದಾರ ಸಾ: ಪ್ಲಾಟ ನಂ. 118 ಆಳಂದ ಚೆಕ್ಕ ಪೋಸ್ಟ ರಾಮತೀರ್ಥ ನಗರ ಆಳಂದ ರಸ್ತೆ ಕಲಬುರಗಿ ಇವರ ಮಗಳಾದ ಕುಮಾರಿ ಇವಳು  ದಿನಾಂಕ 06-11-13 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗ ಮನೆಯಿಂದ ಶಾಲೆಗೆ ಹೋದವಳು ಇಲ್ಲಿಯವರೆಗೆ ನನ್ನ ಮಗಳು ಮನೆಗೆ ಬಂದಿರುವುದಿಲ್ಲಾ. ನನ್ನ ಮಗಳ ಪತ್ತೆ ಕುರಿತು  ನಮ್ಮ ಸಂಬಂಧಿಕರ ಊರಾದ, ಚಿತ್ತಾಪೂರ, ಕಾಳಗಿ, ತಾಂಡೂರ, ಸೇಡಂ. ಮದ್ದರಕಿ ಹೂವಿನಹಡಗಿಲ, ಬಳ್ಳಾರಿ, ಪೂನಾ, ಬೆಂಗಳೂರ ಮತ್ತು  ಇತರೆ ಕಡೆಗಳಲ್ಲಿ ಹುಡುಕಾಡಿದರೂ ನನ್ನ ಮಗಳು ಸಿಕ್ಕಿರುವುದಿಲ್ಲಾ. ನಮ್ಮ ಓಣಿಯಲ್ಲಿ ವಾಸವಾಗಿರುವ 1)ರಮೇಶ ತಂದೆ ಬಂಡೆಪ್ಪ 2)ರಾಜು ತಂದೆ ಅಣ್ಣೆಪ್ಪ ವಡ್ಡರ 3)ಸುನೀಲ ತಂದೆ ನಾರಾಯಣ ಈ ಮೂರು ಜನರು ದಿನಾಂಕ 06-11-13 ರಿಂದ ನಮ್ಮ ಓಣಿಯಲ್ಲಿ ಕಾಣಿಸುತ್ತಿಲ್ಲಾ. ಈ ಮೂರು ಜನರು ನನ್ನ ಮಗಳಿಗೆ  ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ನನ್ನ ಮರ್ಯಾದೆ ಹಾಳಾಗುತ್ತದೆ ಎಂದು ತಿಳಿದು ಇಲ್ಲಿಯವರೆಗೆ ಹುಡುಕಾಡಿದ್ದು  ಆದರೂ ನನ್ನ ಮಗಳು ಪತ್ತೆಯಗಿರುವುದಿಲ್ಲಾ.  ಅಂತಾ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು   ಈ ಫ್ರಕರಣದಲ್ಲಿ ಅಪಹರಣಕ್ಕೆ ಒಳಗಾದ ಕುಮಾರಿಮತ್ತು ಆರೋಪಿ ರಮೇಶ ತಂದೆ ಬಂಡೆಪ್ಪ ತಳವಾರ ಇಬ್ಬರು  ಪೂನಾ ಪಟ್ಟಣದ ವಡ್ಡರ ವಾಡಿ ಏರಿಯಾದಲ್ಲಿ ಇದ್ದಾರೆ ಎಂಬ ಖಚಿತ ಬಾತ್ಮಿ ಮೇರೆಗೆ ದಿನಾಂಕ 15-03-16 ರಂದು ರಾತ್ರಿ ಸಮಯದಲ್ಲಿ  ಕುಮಾರಿ ಮತ್ತು ಆರೋಪಿ ರಮೇಶ ತಂದೆ ಬಂಡೆಪ್ಪ ತಳವಾರ ಇವರಿಬ್ಬರನ್ನು ನಾನು ಮತ್ತು ಸಿಬ್ಬಂದಿಯವರಾದ ಸಿಪಿಸಿ 1215, 479, ಮಪಿಸಿ 744 ರವರ ಸಹಾಯದಿಂದ ವಶಕ್ಕೆ ತೆಗೆದುಕೊಂಡು ಇಂದು ದಿನಾಂಕ 16-03-16 ರಂದು ಮಧ್ಯಾಹ್ನ 04-00 ಗಂಟೆಗೆ ಠಾಣೆಗೆ ಬಂದು ಅಪಹರಣಕ್ಕೆ ಒಳಗಾದ ಕುಮಾರಿ ತಂದೆ ದಸ್ತಯ್ಯ ಗುತ್ತೆದಾರ ಸಾ: ಪ್ಲಾಟ ನಂ. 118 ಆಳಂದ ಚೆಕ್ಕ ಪೋಸ್ಟ ರಾಮ ತೀರ್ಥ ನಗರ ಆಳಂದ ರಸ್ತೆ ಕಲಬುರಗಿ ಇವಳ ಹೇಳಿಕೆ ಪಡೆದುಕೊಂಡು, ಅಸಲು  ಹೇಳಿಕೆ  ಹಾಜರಪಡಿಸುವಂತೆ ನಮ್ಮ ಠಾಣೆಯ ಶ್ರೀಮತಿ ಭಾರತಿಬಾಯಿ ಮ.ಎ.ಎಸ್.ಐ. ರವರು ಎದುರುಗಡೆ ಕುಮಾರಿಕುಮಾರಿ ಇವಳು ಹೇಳಿಕೆ ಕೊಟ್ಟಿದ್ದರ ಸಾರಾಂಶವೆನೆಂದೆರೆ, ದಿನಾಂಕ  06-11-13 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ  ಮನೆಯಿಂದ ಶಾಲೆಗೆ ಹೋಗಬೇಕೆಂದು  ಹೊರಟಾಗ ನಮ್ಮ ಮನೆ ಹತಿರ ರಮೇಶ ಇತನು ಬಂದು ನನಗೆ ಮದುವೆ ಮಾಡಿಕೊಳ್ಳುತ್ತೇನೆ ಓಡಿ ಹೋಗೋಣಾ ನಡಿ ಅಂತಾ ಪುಸಲಾಯಿಸುತ್ತಿರುವಾಗ ನಾನು ಬರುವುದಿಲ್ಲಾ ಅಂತಾ ಹೇಳಿದ್ದಕ್ಕೆ ಆತನು ನನಗೆ ನೀನು ನನ್ನ ಜೊತೆ ಬರದೇ ಇದ್ದಲ್ಲಿ ನಿಮ್ಮ ತಂದೆ, ತಾಯಿ ಮತ್ತು ತಮ್ಮಂದಿರರನ್ನು ಜೀವಂತ ಬಿಡುವುದಿಲ್ಲಾ ಮತ್ತು ನಿಮ್ಮ ಮನೆಯ ಮಾನ ಮಾರ್ಯಾದೆ ತೆಗೆಯುತ್ತೇನೆ. ಎಂದು ಹೆದರಿಸಿ, ನನಗೆ ಮನೆಯ ಎದುರುನಿಂದ ಒತ್ತಾಯಪೂರ್ವಕವಾಗಿ ಕಲಬುರಗಿ ಕೇಂದ್ರ ಬಸನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಬಳ್ಳಾರಿಗೆ ಹೋಗಿದ್ದು. ಬಳ್ಳಾರಿ ಬಸಸ್ಟ್ಯಾಂಡಲ್ಲಿ ರಮೇಶನ ಗೆಳೆಯರಾದ ನಮ್ಮ ಬಡಾವಣೆಯ ರಾಜು ತಂದೆ ಅಣ್ಣೆಪ್ಪ ವಡ್ಡರ ಮತ್ತು  ಸುನೀಲ ತಂದೆ ನಾರಾಯಣ ಇವರು ಸಿಗಲು ಇವರಿಬ್ಬರು ರಮೇಶನಿಗೆ ನಿನಗೆ ಮದುವೆ ಮಾಡಿಕೊಳ್ಳಲು ನಾವು ಸಹಾಯ ಮಾಡುತ್ತೇವೆ ಎಂದು ಹೇಳಿ ನಮ್ಮಿಬ್ಬರನ್ನು ತಮ್ಮ ಜೊತೆಯಲ್ಲಿ ಮಾಹಾರಾಷ್ಟ್ರ ರಾಜ್ಯದ ಪೂನಾಕ್ಕೆ ಕರೆದುಕೊಂಡು ಪೂನಾದ  ವಡ್ಡರವಾಡಿ ಏರಿಯಾದಲ್ಲಿ ರಮೇಶನ ಗೆಳೆಯರಾದ ರಾಜು ತಂದೆ ಅಣ್ಣೆಪ್ಪ ವಡ್ಡರ ಮತ್ತು ಸುನೀಲ ಇವರು  ರಮೇಶನಿಗೆ ಒಂದು ರೂಮು ಬಾಡಿಗೆ ಹಿಡಿದು ಕೊಟ್ಟಿದ್ದು ಸದರಿ ರೂಮಿನಲ್ಲಿ ನಾವಿಬ್ಬರೂ ವಾಸವಾಗಿದ್ದೇವು. 2-3 ದಿವಸಗಳ ನಂತರ ರಾಜು ಮತ್ತು ಸುನೀಲ ಇವರಿಬ್ಬರ ಸಹಾಯದಿಂದ ರಮೇಶ ಇತನು  ನನಗೆ ಪೂನಾ ವಡ್ಡರ ವಾಡಿ ಏರಿಯಾದ ಹತ್ತಿರ ಇರುವ ಛತ್ರಸಿಂಗ್ ಏರಿಯಾದಲ್ಲಿರುವ ಅಂಬಾಭಾಯಿ ಗುಡಿಯಲ್ಲಿ ಹಿಂದು ಸಂಪ್ರದಾಯದಂತೆ  ನನಗೆ ತಾಳಿ ಕಟ್ಟಿ ಮದುವೆಯಾದನು. ಆಗ್ಗಾಗೆ ರಾಜು ಮತ್ತು ಸುನೀಲ ಇವರಿಬ್ಬರು ರಮೇಶನಿಗೆ ಹಣ ಸಹಾಯ ಮಾಡುತ್ತಿದ್ದರು. ಮದುವೆಯಾದ ರಾತ್ರಿ ಸಮಯದಲ್ಲಿ ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಲು ಬಂದಾಗ ಅವನಿಗೆ ಸಧ್ಯ ಬೇಡವೆಂದರೂ ನನ್ನೊಂದಿಗೆ ಜಬರದಸ್ತಿಯಿಂದ ಹಠ ಸಂಭೋಗ ಮಾಡಿ ಅತ್ಯಾಚಾರ ವೆಸೆಗಿರುತ್ತಾನೆ. ಮುಂದೆ ಹಾಗೇ ಮಾಡಲು ಬಂದಾಗ ರಮೇಶನಿಗೆ ನಾವು ಪ್ರಾಪ್ತ ವಯಸ್ಕರಾದ ನಂತರ ಎಲ್ಲಾ ಹಿರಿಯ ಸಮಕ್ಷಮದಲ್ಲಿ ಲಗ್ನವಾದ ನಂತರ ದೈಹಿಕ ಸಂಪರ್ಕ ಮುಂದುವರೆಸೋಣಾ ಅಂತಾ ಹೇಳಿದರೂ ಕೂಡಾ ಜಬರದಸ್ತಿಯಿಂದ ಸತತವಾಗಿ ಹಗಲು ಮತ್ತು ರಾತ್ರಿ ಎನ್ನದೆ ನನಗೆ ಬಲತ್ಕಾರ ಮಾಡುತ್ತಾ ಬಂದಿರುತ್ತಾನೆ. ಈಗ ಸಧ್ಯ ನಾನು 6 ತಿಂಗಳ ಗರ್ಬಿಣಿ ಇರುತ್ತೇನೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

16 March 2016

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ಗುರು@ಗುರುಶಾಂತ ತಂದೆ ಚಂದ್ರಶೇಖರ ಹಾವಾ ಸಾ;ತಾಜಸುಲ್ತಾನಪೂರ ಇವರು  ದಿನಾಂಕ15-3-2016 ರಂದು ತಾನು ಮತ್ತು ತನ್ನ ಗೆಳೆಯ ಇಬ್ಬರು ಕೂಡಿಕೊಂಡು ಕಲ್ಲಹಂಗರಗಾ ರೋಡಿಗೆ ಇರುವ ಹೊಲಕ್ಕೆ ನೋಡಿಕೊಂಡು ಬರುವ ಕುರಿತು ಹೊಲಕ್ಕೆ ಹೋಗಿ ಮರಳಿ ಬರುವಾಗ ಪಕ್ಕದ ಮಾಸ್ತರನ ಹಾವುನೂರ ಹೊಲದಲ್ಲಿ  ಒಬ್ಬ ಅಪರಿಚಿತ ವ್ಯಕ್ತಿ ವಯಸ್ಸು ಅಂದಾಜು 30-35 ವಯಸ್ಸಿನವನು ಅಂಗಾತವಾಗಿ ಬಿದ್ದಿದ್ದು ಮುಖದ ಮೇಲೆ ಹಣೆಯ ಮದ್ಯದಲ್ಲಿ ಗಟ್ಟಿ ಭಾರವಾದ ವಸ್ತುವಿನಿಂದ ಹೊಡೆದ ಗಾಯವಿದ್ದು ಎಡಗಣ್ಣಿಗೆ ಭಾರಿಗಾಯವಾಗಿ ಕಣ್ಣಿನ ಗುಡ್ಡಿ ಹೊರಬಂದಿರುತ್ತದೆ ಹಣಗೆ, ಬಾಯಿಗೆ ಭಾರಿ ಪೆಟ್ಟಾಗಿ ರಕ್ತಸ್ರಾವವಾಗಿರುತಿತ್ತು , ತಲೆಯ ಹಿಂದುಗಡೆ ಪೆಟ್ಟಾಗಿದ್ದು ,  ಕಿವಿಯಿಂದ ರಕ್ತಸ್ರಾವವಾಗಿರುತ್ತದೆ ಮುಖದ ಮೇಲೆ ರಕ್ತದ ಕಲೆಗಳು ಆಗಿದ್ದು ಮುಖಬಾವು ಬಂದಂತೆಯಾಗಿ ಕಪ್ಪಾಗಿರುತ್ತದೆ , ಮತ್ತು ಕುತ್ತಿಗೆಯ ಹತ್ತಿರ ಪೆಟ್ಟಾಗಿ ಕಪ್ಪಾಗಿ ಬಾವು ಬಂದಂತೆಯಾಗಿರುತ್ತದೆ ,ಮೈ ಮೇಲೆ ಒಂದುಬಿಳಿ ಕಲರನನೀಲಿ ಚೌಕಡಿ ಇರುವ ಶರ್ಟ ಇದ್ದು ಪಕ್ಕದಲ್ಲಿ ಪ್ಯಾಂಟ ಮತ್ತು ,ಅಂಡರವಿಯರ ಬಿದ್ದಿದ್ದವು ಯಾರೋ ದುಷ್ಕರಮಿಗಳು ಯಾವುದ ಉದ್ದೇಶದಿಂದ ಈ ವ್ಯಕ್ತಿಗೆ  ಎಲ್ಲಿಯೋ ಹೊಡೆಬಡಿ ಮಾಡಿ ಕೊಲೆ ಮಾಡಿ ಸಾಕ್ಷಿನಾಶಪಡಿಸುವ ಕುರಿತು ಸದರಿ ಹೊಲದಲ್ಲಿ ತಂದು ಬಿಸಾಡಿಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆಮರಿಸಿಕೊಂಡ ಆರೋಪಿತನ ಬಂಧನ :
ನರೋಣಾ ಠಾಣೆ : ಶ್ರೀ ಪಾಂಡು ತಂದೆ ಗುಂಡು ಚವ್ಹಾಣ ಸಾ: ಗೋಳಾ(ಬಿ) ಗ್ರಾಮ ಇವರು ದಿನಾಂಕ 16/11/1976 ರಂದು ಬೆಳಗಿನ ಜಾವ ಶಂಕರರಾವ ಪಾಟೀಲ ಇವರ ಹೊಲದಲ್ಲಿ ಸುಮಾರು 300 ರೂ. ಮೌಲ್ಯದ ನಿಂಬೆ ಹಣ್ಣಿನ ಚೀಲಾ ಕದ್ದಿದ್ದಾರೆ ಅಂತಾ ದೂರು ಸಲ್ಲಿಸಿದ ಮೇಲಿಂದಾ ನರೋಣಾ ಪೊಲೀಸ್ ಠಾಣೆ ಗುನ್ನೆ ನಂ. 60/1976 ಕಲಂ 379 ಐಪಿಸಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣದಲ್ಲಿನ ಆಪಾದಿತರಾದ ಎ1 ದಶರಥ ತಂದೆ ಹಣಮಂತ ಪಾರದಿ ಸಾ: ಭೀಮಳ್ಳಿ , 2 ದಾಡು ತಂದೆ ಪದ್ದು ಪಾರದಿ ಸಾ: ಭೀಮಳ್ಳಿ ಇಬ್ಬರು ಆರೊಪಿತರು ಘಟನೆ ಜರುಗಿದಾಗಿನಿಂದ ತಲೆಮರೆಸಿಕೊಂಡಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯವು ದಿನಾಂಕ 13/02/1985 ರಂದು ಎಲ್.ಪಿ.ಆರ್ ಅಂತಾ ಪರಿಗಣಿಸಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಎ1 ಆಪಾದಿತನು ಸುಮಾರು 40 ವರ್ಷಗಳವರೆಗೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದು ದಿನಾಂಕ 14/03/2016 ರಂದು ಆಪಾದಿತನ ಬಗ್ಗೆ ಖಚಿತ ಬಾತ್ಮಿ ತಿಳಿದುಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಸಾಹೇಬ ಆಳಂದ ರವರ ಮಾರ್ಗದರ್ಶನದಲ್ಲಿ ಶ್ರೀ ಶಿವಶಂಕರ ಸಾಹು ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಬಸವರಾಜ ಸಿಪಿಸಿ 672 , ಮಹೇಶ ಸಿಪಿಸಿ 790, ಸುರೇಶ ಸಿಪಿಸಿ 710, ಶಿವಾಜಿ ಸಿಪಿಸಿ 860 ರವರೊಂದಿಗೆ ಕಲಬುರಗಿ ತಾಜಸುಲ್ತಾನಪೂರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ಆರೋಪಿತನಾದ ದಶರಥ ತಂದೆ ಹಣಮಂತ ಪಾರದಿ ಸಾ: ಭೀಮಳ್ಳಿ ಈತನನ್ನು ಹಿಡಿದು ವಿಚಾರಿಸಿ ಖಚಿತ ಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ದಿನಾಂಕ 14/03/2016 ರಂದು ನ್ಯಾಯಾಂಗ ಬಂದನ ಕುರಿತು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.

15 March 2016

Kalaburagi District Reported Crimes

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 15.03.2016 ರಂದು ಶ್ರೀ ಶಿವುಕುಮಾರ ತಂದೆ ಸೋಮನಾಥ ಮಠಪತಿ ಸಾ; ಗೋಗಿ(ಕೆ) ತಾ;ಜಿ ಕಲಬುರಗಿ ಕಮಲಾಪೂರ ಗ್ರಾಮದಲ್ಲಿ ನನ್ನ ಕೆಲಸವಿದ್ದ ಪ್ರಯುಕ್ತ ಕಮಲಾಪೂರಕ್ಕೆ ಬರುವ ಕುರಿತು ಬೆಳ್ಳಿಗ್ಗೆ ನಾನು ನಮ್ಮ ಗ್ರಾಮದ ಬಸ್ಸ ನಿಲ್ದಾಣ ಹತ್ತಿರ ಬಂದಿದ್ದು ನಮ್ಮ ಗ್ರಾಮದ ಶ್ರೀಮತಿ ಮಲ್ಲಮ್ಮ ಗಂಡ ಬಸಯ್ಯ ಮಠ ಇವರು ಹಾಗೂ ನಮ್ಮ ಗ್ರಾಮದ ಮಲ್ಲಿಕಾರ್ಜುನ ಪೊಲೀಸ ಬಿರಾದಾರ, ಅಂಬರಿಷ ಗಂಗದಿ ಇವರು ಕೂಡಾ ಕಮಲಾಪೂರಕ್ಕೆ ಹೊಗುವ ಸಂಬಂದ ನಿಂತ್ತಿದ್ದು ಬೆಳ್ಳಿಗ್ಗೆ 10:15 ಗಂಟೆಯ ಸುಮಾರಿಗೆ ನಮ್ಮ ಗ್ರಾಮದ ತಿಪ್ಪಣ್ಣ ಪೊಲೀಸ ಬಿರಾದಾರ ಇತನು ಟಂಟಂ ಅಟೊ ನಂ ಕೆಎ 32 ಬಿ 8566 ನೇದ್ದು ಬಸ್ಸ ನಿಲ್ದಾಣ ಹತ್ತಿರ ತೆಗೆದುಕೊಂಡು ಬಂದು ಕಮಲಾಪೂರಕ್ಕೆ ಹೋಗುತ್ತೆನೆ ಅಂತ ಹೇಳಿದ್ದು ಆಗ ನಾನು ಮತ್ತು ಮಲ್ಲಮ್ಮ, ಮಲ್ಲಿಕಾರ್ಜುನ ಹಾಗೂ ಅಂಬರಿಷ ಕೂಡಿಕೊಂಡು ಸದರಿಯವರ ಟಂಟಂ ಅಟೊದಲ್ಲಿ ಕುಳಿತಿದ್ದು ತಿಪ್ಪಣ್ಣ ಇತನು ತನ್ನ ಟಂಟಂ ಅಟೊವನ್ನು ನಡೆಯಿಸಿಕೊಂಡು ಹೊರಟಿದ್ದು ನಮ್ಮ ಟಂಟಂ ಅಟೊ ಜೀವಣಗಿ ಗ್ರಾಮಕ್ಕೆ ಬಂದಾಗ ಜೀವಣಗಿ ಗ್ರಾಮದ ನಮಗೆ ಪರಿಚಯದ ಲಾಡಲೆಸಾಬ ತಂದೆ ನಬಿಸಾಸ ಮೋಮಿನ ಇತನು ನಮ್ಮ ಟಂಟಂ ಅಟೊದಲ್ಲಿ ಬಂದು ಕುಳಿತಿದ್ದು ನಂತರ ನಮ್ಮ ಟಂಟಂ ಅಟೊ ಚಾಲಕನು ಅಟೊವನ್ನು ನಡೆಯಿಸಿಕೊಂಡು ಕಮಲಾಪೂರ ಕಡೆಗೆ ಬರುತ್ತಿದ್ದು ನಮ್ಮ ಅಟೋ ಕಮಲಾಪೂರ ಗ್ರಾಮದ ಕೆ.ಇ,ಬಿ ಕ್ರಾಸ ದಿಂದ ರಾಷ್ಟ್ರಿಯ ಹೆದ್ದಾರಿ ನಂ 218 ರ ಮೇಲೆ ಕಮಲಾಪೂರ ಬಸ್ಸ ನಿಲ್ದಾಣದ ಕಡೆಗೆ ಹೊಗುತ್ತಿದ್ದಾಗ ನಮ್ಮ ಟಂಟಂ ಅಟೊ ಚಾಲಕ ತಿಪ್ಪಣ್ಣ ಇತನು ಅಟೊವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಹೊಗುತ್ತಿದ್ದು ಆಗ ನಾನು ಸದರಿಯವನಿಗೆ ಟಂಟಂನ್ನು ನಿಧಾನವಾಗಿ ನಡೆಯಿಸಲು ತಿಳಿಸಿದ್ದು ಆದರೂ ಕುಡಾ ಸದರಿಯವನು ಕಮಲಾಪೂರ ಗ್ರಾಮದ ವಿಶೇಷ ತಹಸಿಲ್ದಾರರ ಆಫೀಸ ದಿಂದ ಸ್ವಲ್ಪ ಮುಂದೆ ರಾಷ್ಟ್ರಿಯ ಹೆದ್ದಾರಿ ನಂ 218 ರ ಮೇಲೆ ರಸ್ತೆಯ ಮೇಲೆ ಬೆಳ್ಳಿಗ್ಗೆ 11 ಗಂಟೆಯ ಸುಮಾರಿಗೆ ತನ್ನ ಟಂಟಂ ಅಟೊವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ರಸ್ತೆಯ ಮೇಲೆ ಒಮ್ಮಲೆ ಕಟ್ಟ ಮಾಡಲು ಹೊಗಿ ಟಂಟಂ ಅಟೊ ಪಲ್ಟಿ ಮಾಡಿ ಅಪಘಾತ ಪಡಿಸಿದ್ದು ಅಪಘಾತ ಪಡಿಸಿದ ಪರಿಣಾಮ ಟಂಟಂದಲ್ಲಿ ಕಳಿತ್ತಿದ್ದು ನನಗೆ ಎಡಗಾಲ ಮೊಳಕಾಲ ಮೇಲೆ ರಕ್ತಗಾಯವಾಗಿದ್ದು, ಮಲ್ಲಮ್ಮ ಇವರಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು, ಬೆನ್ನಿಗೆ ತೆರಚಿದ ಗಾಯವಾಗಿದ್ದು, ಮತ್ತು ಬಲಗೈ ಮುಂಗೈ ಹತ್ತಿರ ತರಚಿದ ಗಾಯವಾಗಿದ್ದು ಸದರಿಯವರಿ ತಲೆಗೆ ಭಾರಿ ರಕ್ತಗಾಯವಾಗಿದ್ದರಿಂದ ರಕ್ತಸ್ರಾವವಾಗಿ ಸದರಿ ಮಲ್ಲಮ್ಮ ಇವರು ಸ್ಥಳದಲ್ಲಿ ಮೃತ ಪಟ್ಟಿದ್ದು. ಮತ್ತು ಟಂಟಂದಲ್ಲಿ ಕುಳಿತ ಮಲ್ಲಿಕಾರ್ಜುನ ಇತನಿಗೆ ಎಡಗೈ ಹಸ್ತದ ಮೇಲೆ ರಕ್ತಗಾಯವಾಗಿದ್ದು, ಅಂಬರಿಷ ಇತನಿಗೆ ಮುಖದ ಮೇಲೆ ರಕ್ತಗಾಯವಾಗಿದ್ದು ಮತ್ತು ಜೀವಣಗಿ ಗ್ರಾಮದ ಲಾಡಲೆಸಾಬ ಇತನಿಗೆ ಟೊಂಕದ ಹತ್ತಿರ ಬಾರಿ ಒಳಪೆಟ್ಟಾಗಿದ್ದು ಮತ್ತು ಎರಡು ಮಳಕಾಲ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ. ಅಂಬರಿಷ ಮತ್ತು ಲಾಡಲೇಸಾಬ ಇಬ್ಬರು ಖಾಸಗಿ ವಾಹನದಲ್ಲಿ ಕುಳಿತು ಉಪಚಾರ ಕುರಿತು ಕಲಬುರಗಿಗೆ ಹೋಗಿದ್ದು ಇರುತ್ತದೆ. ಸದರಿ ಟಂಟಂ ಚಾಲಕ ತಿಪ್ಪಣ ಇತನು ಅಪಘಾತಪಡಿಸಿದ ನಂತರ ತನ್ನ ಟಂಟಂ ಅಟೊವನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಶಿವಲಿಂಗಪ್ಪಾ ತಂದೆ ಭೀಮರಾವ ಪಾಟೀಲ ಸಾ:ಜೆ.ಆರ್‌ ನಗರ ಕಲಬುರಗಿ ಇವರು ದಿನಾಂಕ:13/03/2016 ರಂದು ಮಧ್ಯಾನ 3.00 ಗಂಟೆಗೆ ತನ್ನ ಮನೆಗೆ ಬೀಗ ಹಾಕಿ ನಾನು ಮತ್ತು ಶ್ರೀಮತಿ ಮಹಾನಂದ ಹೈದ್ರಾಬಾದಗೆ ಹೋಗಿದ್ದು ಮರಳಿ ದಿನಾಂಕ:14/03/2016 ರಂದು ರಾತ್ರಿ 2.30 ಗಂಟೆಗೆ ಮನೆಗೆ ಬಂದು ನೋಡಲು ನಮ್ಮ ಮುಖ್ಯ ಬಾಗಿಲ ಕೀಲಿ ತೆರೆದಿದ್ದು ಇದ್ದು ನಾನು ನೋಡಲು ಬಾಗೀಲ ಒಳಗೆ ಕೊಂಡಿ ಹಾಕಿದ್ದು ಇತ್ತು ಹಿಂಬದಿ ಬಾಗಿಲು ತೆರೆದು ಹೋದಾಗ ಒಳಗೆ ಹೋಗಿ ನೋಡಲು ಅಲಮಾರದಲ್ಲಿದ್ದ ಎಲ್ಲಾ ಸಾಮಾನುಗಳು ಚಿಲ್ಲಾ-ಪಿಲ್ಲಿಯಾಗಿ ಬಿದ್ದಿದ್ದವು ಅಲಮಾರದಲ್ಲಿದ್ದ ಬಂಗಾರದ 05 ಗ್ರಾಂ 2 ಉಂಗುರುಗಳು, ಬಂಗಾರದ 50 ಗ್ರಾಂ ತಾಳಿಚೈನ, ಬಂಗಾರದ 10 ಗ್ರಾಂ ಕಿವಿ ಹೂಗಳು ಹಾಗೂ ನಗದು ಹಣ 50000/-ರೂ ಹೀಗೆ ಒಟ್ಟು 2,60,000/-ರೂ ಬೆಲೆಬಾಳುವ ಬಂಗಾರದ ಆಭರಣಗಳು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಹಚ್ಚಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಳಂದ ಠಾಣೆ : ಶ್ರೀ ಮಹಾದೇವರಾವ ತಂದೆ ಸಿದ್ದಪ್ಪಾ ಕವಲಗಾ ಸಾ: ಚಿತಲಿ ಗ್ರಾಮ ತಾ; ಆಳಂದ ರವರು  ದಿನಾಂಕ; 13/03/2016 ರಂದು ರಾತ್ರಿ ಎಂದಿನಂತೆ 11-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಲಕ್ಷ್ಮೀಬಾಯಿ ಕೂಡಿ ಊಟ ಮಾಡಿಕೊಂಡು  ಬೇಸಿಗೆ ಸೆಕೆ ಇರುವದರಿಂದ ನಮ್ಮ ಮನೆಯ ಕೀಲಿ ಹಾಕಿ ಮನೆಯ ಮುಂದೆ ಇರುವ ನಮ್ಮ ಹೊಲದಲ್ಲಿ ಹೋಗಿ ಮಲಗಿರುತ್ತೇವೆ. ನಂತರ ದಿನಾಂಕ: 14/03/2016 ರಂದು ರಾತ್ರಿ 4-30 ಗಂಟೆಯ ಸುಮಾರಿಗೆ ಏಕಿ ಮಾಡಲು ಎದ್ದಾ ಗ ನಮ್ಮ ಮನೆಯ ಬಾಗಿಲು ಖುಲ್ಲಾ ಇರುವದನ್ನು ನೋಡಿ ನಾನು ನನ್ನ ಹೆಂಡತಿಗೆ ಎಬ್ಬಿಸಿ ಮನೆ ಕೀಲಿ ಹಾಕಿದ ಬಗ್ಗೆ ವಿಚಾರಿಸಲು ಅವಳು ಮಲಗುವಾಗ ಕೀಲಿ ಹಾಕಿ ಬಂದಿರುತ್ತೇನೆ ಅಂತಾ ತಿಳಿಸಿದ್ದು, ನಂತರ ನಾವು ಹತ್ತಿರ ಹೋಗಿ ನೋಡಲು ಮನೆಯ ಕೀಲಿ ಮುರಿದಿದ್ದು ಮನೆಯ ಒಳಗಡೆ ಹೋಗಿ ನೋಡಲು ಮನೆಯಲ್ಲಿದ್ದ ಟ್ರಂಕ್‌ ಖುಲ್ಲಾ ಇದ್ದು ಅದರೊಳಗಡೆ ಡಬ್ಬದಲ್ಲಿ ಇಟ್ಟಿದ್ದ 01) ಒಂದು ತೊಲಾ ಬಂಗಾರದ ಬೋರಮಳ ಸರ ಅಕಿ; 6000/- ರೂ 02) ಒಂದು ತೊಲಾ ಬಂಗಾರದ ಕಿವಿ ಹೂ ಮತ್ತು ಜುಮಕಿ ಅಕಿ; 6000/- ರೂ 03) ಗಡಿಗೆಯಲ್ಲಿ ಡಬ್ಬದಲ್ಲಿಟ್ಟಿದ್ದ 10,000/- ರೂ ನಗದು ಹಣ ಮತ್ತು 04) ಒಂದು ಸ್ಯಾಮಸಂಗ ಮೊಬೈಲ್‌ ಸೆಟ್‌ ಸಿಮ್‌ ನಂ: 9902455839 ಇದ್ದು ಅಕಿ: 1000/- ರೂ 05) ಮತ್ತು ಸೀರೆಗಳು ಬಟ್ಟೆಬರೆಗಳು ಅಕಿ: 1500/- ರೂ ಹೀಗೆ ಒಟ್ಟು 24,500/- ರೂ ಬೆಲೆಬಾಳುವ ಸ್ವತ್ತನ್ನು               ದಿನಾಂಕ: 13/03/2016 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 14/03/2016 ರಂದು ರಾತ್ರಿ 04-30 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಕೀಲಿ ಮುರಿದು ರಾತ್ರಿ ವೇಳೆಯಲ್ಲಿ ಮನೆಯ ಒಳಗಡೆ ಹೋಗಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.