POLICE BHAVAN KALABURAGI

POLICE BHAVAN KALABURAGI

16 March 2016

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ಗುರು@ಗುರುಶಾಂತ ತಂದೆ ಚಂದ್ರಶೇಖರ ಹಾವಾ ಸಾ;ತಾಜಸುಲ್ತಾನಪೂರ ಇವರು  ದಿನಾಂಕ15-3-2016 ರಂದು ತಾನು ಮತ್ತು ತನ್ನ ಗೆಳೆಯ ಇಬ್ಬರು ಕೂಡಿಕೊಂಡು ಕಲ್ಲಹಂಗರಗಾ ರೋಡಿಗೆ ಇರುವ ಹೊಲಕ್ಕೆ ನೋಡಿಕೊಂಡು ಬರುವ ಕುರಿತು ಹೊಲಕ್ಕೆ ಹೋಗಿ ಮರಳಿ ಬರುವಾಗ ಪಕ್ಕದ ಮಾಸ್ತರನ ಹಾವುನೂರ ಹೊಲದಲ್ಲಿ  ಒಬ್ಬ ಅಪರಿಚಿತ ವ್ಯಕ್ತಿ ವಯಸ್ಸು ಅಂದಾಜು 30-35 ವಯಸ್ಸಿನವನು ಅಂಗಾತವಾಗಿ ಬಿದ್ದಿದ್ದು ಮುಖದ ಮೇಲೆ ಹಣೆಯ ಮದ್ಯದಲ್ಲಿ ಗಟ್ಟಿ ಭಾರವಾದ ವಸ್ತುವಿನಿಂದ ಹೊಡೆದ ಗಾಯವಿದ್ದು ಎಡಗಣ್ಣಿಗೆ ಭಾರಿಗಾಯವಾಗಿ ಕಣ್ಣಿನ ಗುಡ್ಡಿ ಹೊರಬಂದಿರುತ್ತದೆ ಹಣಗೆ, ಬಾಯಿಗೆ ಭಾರಿ ಪೆಟ್ಟಾಗಿ ರಕ್ತಸ್ರಾವವಾಗಿರುತಿತ್ತು , ತಲೆಯ ಹಿಂದುಗಡೆ ಪೆಟ್ಟಾಗಿದ್ದು ,  ಕಿವಿಯಿಂದ ರಕ್ತಸ್ರಾವವಾಗಿರುತ್ತದೆ ಮುಖದ ಮೇಲೆ ರಕ್ತದ ಕಲೆಗಳು ಆಗಿದ್ದು ಮುಖಬಾವು ಬಂದಂತೆಯಾಗಿ ಕಪ್ಪಾಗಿರುತ್ತದೆ , ಮತ್ತು ಕುತ್ತಿಗೆಯ ಹತ್ತಿರ ಪೆಟ್ಟಾಗಿ ಕಪ್ಪಾಗಿ ಬಾವು ಬಂದಂತೆಯಾಗಿರುತ್ತದೆ ,ಮೈ ಮೇಲೆ ಒಂದುಬಿಳಿ ಕಲರನನೀಲಿ ಚೌಕಡಿ ಇರುವ ಶರ್ಟ ಇದ್ದು ಪಕ್ಕದಲ್ಲಿ ಪ್ಯಾಂಟ ಮತ್ತು ,ಅಂಡರವಿಯರ ಬಿದ್ದಿದ್ದವು ಯಾರೋ ದುಷ್ಕರಮಿಗಳು ಯಾವುದ ಉದ್ದೇಶದಿಂದ ಈ ವ್ಯಕ್ತಿಗೆ  ಎಲ್ಲಿಯೋ ಹೊಡೆಬಡಿ ಮಾಡಿ ಕೊಲೆ ಮಾಡಿ ಸಾಕ್ಷಿನಾಶಪಡಿಸುವ ಕುರಿತು ಸದರಿ ಹೊಲದಲ್ಲಿ ತಂದು ಬಿಸಾಡಿಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆಮರಿಸಿಕೊಂಡ ಆರೋಪಿತನ ಬಂಧನ :
ನರೋಣಾ ಠಾಣೆ : ಶ್ರೀ ಪಾಂಡು ತಂದೆ ಗುಂಡು ಚವ್ಹಾಣ ಸಾ: ಗೋಳಾ(ಬಿ) ಗ್ರಾಮ ಇವರು ದಿನಾಂಕ 16/11/1976 ರಂದು ಬೆಳಗಿನ ಜಾವ ಶಂಕರರಾವ ಪಾಟೀಲ ಇವರ ಹೊಲದಲ್ಲಿ ಸುಮಾರು 300 ರೂ. ಮೌಲ್ಯದ ನಿಂಬೆ ಹಣ್ಣಿನ ಚೀಲಾ ಕದ್ದಿದ್ದಾರೆ ಅಂತಾ ದೂರು ಸಲ್ಲಿಸಿದ ಮೇಲಿಂದಾ ನರೋಣಾ ಪೊಲೀಸ್ ಠಾಣೆ ಗುನ್ನೆ ನಂ. 60/1976 ಕಲಂ 379 ಐಪಿಸಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣದಲ್ಲಿನ ಆಪಾದಿತರಾದ ಎ1 ದಶರಥ ತಂದೆ ಹಣಮಂತ ಪಾರದಿ ಸಾ: ಭೀಮಳ್ಳಿ , 2 ದಾಡು ತಂದೆ ಪದ್ದು ಪಾರದಿ ಸಾ: ಭೀಮಳ್ಳಿ ಇಬ್ಬರು ಆರೊಪಿತರು ಘಟನೆ ಜರುಗಿದಾಗಿನಿಂದ ತಲೆಮರೆಸಿಕೊಂಡಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯವು ದಿನಾಂಕ 13/02/1985 ರಂದು ಎಲ್.ಪಿ.ಆರ್ ಅಂತಾ ಪರಿಗಣಿಸಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಎ1 ಆಪಾದಿತನು ಸುಮಾರು 40 ವರ್ಷಗಳವರೆಗೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದು ದಿನಾಂಕ 14/03/2016 ರಂದು ಆಪಾದಿತನ ಬಗ್ಗೆ ಖಚಿತ ಬಾತ್ಮಿ ತಿಳಿದುಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಸಾಹೇಬ ಆಳಂದ ರವರ ಮಾರ್ಗದರ್ಶನದಲ್ಲಿ ಶ್ರೀ ಶಿವಶಂಕರ ಸಾಹು ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಬಸವರಾಜ ಸಿಪಿಸಿ 672 , ಮಹೇಶ ಸಿಪಿಸಿ 790, ಸುರೇಶ ಸಿಪಿಸಿ 710, ಶಿವಾಜಿ ಸಿಪಿಸಿ 860 ರವರೊಂದಿಗೆ ಕಲಬುರಗಿ ತಾಜಸುಲ್ತಾನಪೂರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ಆರೋಪಿತನಾದ ದಶರಥ ತಂದೆ ಹಣಮಂತ ಪಾರದಿ ಸಾ: ಭೀಮಳ್ಳಿ ಈತನನ್ನು ಹಿಡಿದು ವಿಚಾರಿಸಿ ಖಚಿತ ಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ದಿನಾಂಕ 14/03/2016 ರಂದು ನ್ಯಾಯಾಂಗ ಬಂದನ ಕುರಿತು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.

15 March 2016

Kalaburagi District Reported Crimes

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 15.03.2016 ರಂದು ಶ್ರೀ ಶಿವುಕುಮಾರ ತಂದೆ ಸೋಮನಾಥ ಮಠಪತಿ ಸಾ; ಗೋಗಿ(ಕೆ) ತಾ;ಜಿ ಕಲಬುರಗಿ ಕಮಲಾಪೂರ ಗ್ರಾಮದಲ್ಲಿ ನನ್ನ ಕೆಲಸವಿದ್ದ ಪ್ರಯುಕ್ತ ಕಮಲಾಪೂರಕ್ಕೆ ಬರುವ ಕುರಿತು ಬೆಳ್ಳಿಗ್ಗೆ ನಾನು ನಮ್ಮ ಗ್ರಾಮದ ಬಸ್ಸ ನಿಲ್ದಾಣ ಹತ್ತಿರ ಬಂದಿದ್ದು ನಮ್ಮ ಗ್ರಾಮದ ಶ್ರೀಮತಿ ಮಲ್ಲಮ್ಮ ಗಂಡ ಬಸಯ್ಯ ಮಠ ಇವರು ಹಾಗೂ ನಮ್ಮ ಗ್ರಾಮದ ಮಲ್ಲಿಕಾರ್ಜುನ ಪೊಲೀಸ ಬಿರಾದಾರ, ಅಂಬರಿಷ ಗಂಗದಿ ಇವರು ಕೂಡಾ ಕಮಲಾಪೂರಕ್ಕೆ ಹೊಗುವ ಸಂಬಂದ ನಿಂತ್ತಿದ್ದು ಬೆಳ್ಳಿಗ್ಗೆ 10:15 ಗಂಟೆಯ ಸುಮಾರಿಗೆ ನಮ್ಮ ಗ್ರಾಮದ ತಿಪ್ಪಣ್ಣ ಪೊಲೀಸ ಬಿರಾದಾರ ಇತನು ಟಂಟಂ ಅಟೊ ನಂ ಕೆಎ 32 ಬಿ 8566 ನೇದ್ದು ಬಸ್ಸ ನಿಲ್ದಾಣ ಹತ್ತಿರ ತೆಗೆದುಕೊಂಡು ಬಂದು ಕಮಲಾಪೂರಕ್ಕೆ ಹೋಗುತ್ತೆನೆ ಅಂತ ಹೇಳಿದ್ದು ಆಗ ನಾನು ಮತ್ತು ಮಲ್ಲಮ್ಮ, ಮಲ್ಲಿಕಾರ್ಜುನ ಹಾಗೂ ಅಂಬರಿಷ ಕೂಡಿಕೊಂಡು ಸದರಿಯವರ ಟಂಟಂ ಅಟೊದಲ್ಲಿ ಕುಳಿತಿದ್ದು ತಿಪ್ಪಣ್ಣ ಇತನು ತನ್ನ ಟಂಟಂ ಅಟೊವನ್ನು ನಡೆಯಿಸಿಕೊಂಡು ಹೊರಟಿದ್ದು ನಮ್ಮ ಟಂಟಂ ಅಟೊ ಜೀವಣಗಿ ಗ್ರಾಮಕ್ಕೆ ಬಂದಾಗ ಜೀವಣಗಿ ಗ್ರಾಮದ ನಮಗೆ ಪರಿಚಯದ ಲಾಡಲೆಸಾಬ ತಂದೆ ನಬಿಸಾಸ ಮೋಮಿನ ಇತನು ನಮ್ಮ ಟಂಟಂ ಅಟೊದಲ್ಲಿ ಬಂದು ಕುಳಿತಿದ್ದು ನಂತರ ನಮ್ಮ ಟಂಟಂ ಅಟೊ ಚಾಲಕನು ಅಟೊವನ್ನು ನಡೆಯಿಸಿಕೊಂಡು ಕಮಲಾಪೂರ ಕಡೆಗೆ ಬರುತ್ತಿದ್ದು ನಮ್ಮ ಅಟೋ ಕಮಲಾಪೂರ ಗ್ರಾಮದ ಕೆ.ಇ,ಬಿ ಕ್ರಾಸ ದಿಂದ ರಾಷ್ಟ್ರಿಯ ಹೆದ್ದಾರಿ ನಂ 218 ರ ಮೇಲೆ ಕಮಲಾಪೂರ ಬಸ್ಸ ನಿಲ್ದಾಣದ ಕಡೆಗೆ ಹೊಗುತ್ತಿದ್ದಾಗ ನಮ್ಮ ಟಂಟಂ ಅಟೊ ಚಾಲಕ ತಿಪ್ಪಣ್ಣ ಇತನು ಅಟೊವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಹೊಗುತ್ತಿದ್ದು ಆಗ ನಾನು ಸದರಿಯವನಿಗೆ ಟಂಟಂನ್ನು ನಿಧಾನವಾಗಿ ನಡೆಯಿಸಲು ತಿಳಿಸಿದ್ದು ಆದರೂ ಕುಡಾ ಸದರಿಯವನು ಕಮಲಾಪೂರ ಗ್ರಾಮದ ವಿಶೇಷ ತಹಸಿಲ್ದಾರರ ಆಫೀಸ ದಿಂದ ಸ್ವಲ್ಪ ಮುಂದೆ ರಾಷ್ಟ್ರಿಯ ಹೆದ್ದಾರಿ ನಂ 218 ರ ಮೇಲೆ ರಸ್ತೆಯ ಮೇಲೆ ಬೆಳ್ಳಿಗ್ಗೆ 11 ಗಂಟೆಯ ಸುಮಾರಿಗೆ ತನ್ನ ಟಂಟಂ ಅಟೊವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ರಸ್ತೆಯ ಮೇಲೆ ಒಮ್ಮಲೆ ಕಟ್ಟ ಮಾಡಲು ಹೊಗಿ ಟಂಟಂ ಅಟೊ ಪಲ್ಟಿ ಮಾಡಿ ಅಪಘಾತ ಪಡಿಸಿದ್ದು ಅಪಘಾತ ಪಡಿಸಿದ ಪರಿಣಾಮ ಟಂಟಂದಲ್ಲಿ ಕಳಿತ್ತಿದ್ದು ನನಗೆ ಎಡಗಾಲ ಮೊಳಕಾಲ ಮೇಲೆ ರಕ್ತಗಾಯವಾಗಿದ್ದು, ಮಲ್ಲಮ್ಮ ಇವರಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು, ಬೆನ್ನಿಗೆ ತೆರಚಿದ ಗಾಯವಾಗಿದ್ದು, ಮತ್ತು ಬಲಗೈ ಮುಂಗೈ ಹತ್ತಿರ ತರಚಿದ ಗಾಯವಾಗಿದ್ದು ಸದರಿಯವರಿ ತಲೆಗೆ ಭಾರಿ ರಕ್ತಗಾಯವಾಗಿದ್ದರಿಂದ ರಕ್ತಸ್ರಾವವಾಗಿ ಸದರಿ ಮಲ್ಲಮ್ಮ ಇವರು ಸ್ಥಳದಲ್ಲಿ ಮೃತ ಪಟ್ಟಿದ್ದು. ಮತ್ತು ಟಂಟಂದಲ್ಲಿ ಕುಳಿತ ಮಲ್ಲಿಕಾರ್ಜುನ ಇತನಿಗೆ ಎಡಗೈ ಹಸ್ತದ ಮೇಲೆ ರಕ್ತಗಾಯವಾಗಿದ್ದು, ಅಂಬರಿಷ ಇತನಿಗೆ ಮುಖದ ಮೇಲೆ ರಕ್ತಗಾಯವಾಗಿದ್ದು ಮತ್ತು ಜೀವಣಗಿ ಗ್ರಾಮದ ಲಾಡಲೆಸಾಬ ಇತನಿಗೆ ಟೊಂಕದ ಹತ್ತಿರ ಬಾರಿ ಒಳಪೆಟ್ಟಾಗಿದ್ದು ಮತ್ತು ಎರಡು ಮಳಕಾಲ ಮೇಲೆ ರಕ್ತಗಾಯವಾಗಿದ್ದು ಇರುತ್ತದೆ. ಅಂಬರಿಷ ಮತ್ತು ಲಾಡಲೇಸಾಬ ಇಬ್ಬರು ಖಾಸಗಿ ವಾಹನದಲ್ಲಿ ಕುಳಿತು ಉಪಚಾರ ಕುರಿತು ಕಲಬುರಗಿಗೆ ಹೋಗಿದ್ದು ಇರುತ್ತದೆ. ಸದರಿ ಟಂಟಂ ಚಾಲಕ ತಿಪ್ಪಣ ಇತನು ಅಪಘಾತಪಡಿಸಿದ ನಂತರ ತನ್ನ ಟಂಟಂ ಅಟೊವನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಶಿವಲಿಂಗಪ್ಪಾ ತಂದೆ ಭೀಮರಾವ ಪಾಟೀಲ ಸಾ:ಜೆ.ಆರ್‌ ನಗರ ಕಲಬುರಗಿ ಇವರು ದಿನಾಂಕ:13/03/2016 ರಂದು ಮಧ್ಯಾನ 3.00 ಗಂಟೆಗೆ ತನ್ನ ಮನೆಗೆ ಬೀಗ ಹಾಕಿ ನಾನು ಮತ್ತು ಶ್ರೀಮತಿ ಮಹಾನಂದ ಹೈದ್ರಾಬಾದಗೆ ಹೋಗಿದ್ದು ಮರಳಿ ದಿನಾಂಕ:14/03/2016 ರಂದು ರಾತ್ರಿ 2.30 ಗಂಟೆಗೆ ಮನೆಗೆ ಬಂದು ನೋಡಲು ನಮ್ಮ ಮುಖ್ಯ ಬಾಗಿಲ ಕೀಲಿ ತೆರೆದಿದ್ದು ಇದ್ದು ನಾನು ನೋಡಲು ಬಾಗೀಲ ಒಳಗೆ ಕೊಂಡಿ ಹಾಕಿದ್ದು ಇತ್ತು ಹಿಂಬದಿ ಬಾಗಿಲು ತೆರೆದು ಹೋದಾಗ ಒಳಗೆ ಹೋಗಿ ನೋಡಲು ಅಲಮಾರದಲ್ಲಿದ್ದ ಎಲ್ಲಾ ಸಾಮಾನುಗಳು ಚಿಲ್ಲಾ-ಪಿಲ್ಲಿಯಾಗಿ ಬಿದ್ದಿದ್ದವು ಅಲಮಾರದಲ್ಲಿದ್ದ ಬಂಗಾರದ 05 ಗ್ರಾಂ 2 ಉಂಗುರುಗಳು, ಬಂಗಾರದ 50 ಗ್ರಾಂ ತಾಳಿಚೈನ, ಬಂಗಾರದ 10 ಗ್ರಾಂ ಕಿವಿ ಹೂಗಳು ಹಾಗೂ ನಗದು ಹಣ 50000/-ರೂ ಹೀಗೆ ಒಟ್ಟು 2,60,000/-ರೂ ಬೆಲೆಬಾಳುವ ಬಂಗಾರದ ಆಭರಣಗಳು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಹಚ್ಚಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಳಂದ ಠಾಣೆ : ಶ್ರೀ ಮಹಾದೇವರಾವ ತಂದೆ ಸಿದ್ದಪ್ಪಾ ಕವಲಗಾ ಸಾ: ಚಿತಲಿ ಗ್ರಾಮ ತಾ; ಆಳಂದ ರವರು  ದಿನಾಂಕ; 13/03/2016 ರಂದು ರಾತ್ರಿ ಎಂದಿನಂತೆ 11-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಲಕ್ಷ್ಮೀಬಾಯಿ ಕೂಡಿ ಊಟ ಮಾಡಿಕೊಂಡು  ಬೇಸಿಗೆ ಸೆಕೆ ಇರುವದರಿಂದ ನಮ್ಮ ಮನೆಯ ಕೀಲಿ ಹಾಕಿ ಮನೆಯ ಮುಂದೆ ಇರುವ ನಮ್ಮ ಹೊಲದಲ್ಲಿ ಹೋಗಿ ಮಲಗಿರುತ್ತೇವೆ. ನಂತರ ದಿನಾಂಕ: 14/03/2016 ರಂದು ರಾತ್ರಿ 4-30 ಗಂಟೆಯ ಸುಮಾರಿಗೆ ಏಕಿ ಮಾಡಲು ಎದ್ದಾ ಗ ನಮ್ಮ ಮನೆಯ ಬಾಗಿಲು ಖುಲ್ಲಾ ಇರುವದನ್ನು ನೋಡಿ ನಾನು ನನ್ನ ಹೆಂಡತಿಗೆ ಎಬ್ಬಿಸಿ ಮನೆ ಕೀಲಿ ಹಾಕಿದ ಬಗ್ಗೆ ವಿಚಾರಿಸಲು ಅವಳು ಮಲಗುವಾಗ ಕೀಲಿ ಹಾಕಿ ಬಂದಿರುತ್ತೇನೆ ಅಂತಾ ತಿಳಿಸಿದ್ದು, ನಂತರ ನಾವು ಹತ್ತಿರ ಹೋಗಿ ನೋಡಲು ಮನೆಯ ಕೀಲಿ ಮುರಿದಿದ್ದು ಮನೆಯ ಒಳಗಡೆ ಹೋಗಿ ನೋಡಲು ಮನೆಯಲ್ಲಿದ್ದ ಟ್ರಂಕ್‌ ಖುಲ್ಲಾ ಇದ್ದು ಅದರೊಳಗಡೆ ಡಬ್ಬದಲ್ಲಿ ಇಟ್ಟಿದ್ದ 01) ಒಂದು ತೊಲಾ ಬಂಗಾರದ ಬೋರಮಳ ಸರ ಅಕಿ; 6000/- ರೂ 02) ಒಂದು ತೊಲಾ ಬಂಗಾರದ ಕಿವಿ ಹೂ ಮತ್ತು ಜುಮಕಿ ಅಕಿ; 6000/- ರೂ 03) ಗಡಿಗೆಯಲ್ಲಿ ಡಬ್ಬದಲ್ಲಿಟ್ಟಿದ್ದ 10,000/- ರೂ ನಗದು ಹಣ ಮತ್ತು 04) ಒಂದು ಸ್ಯಾಮಸಂಗ ಮೊಬೈಲ್‌ ಸೆಟ್‌ ಸಿಮ್‌ ನಂ: 9902455839 ಇದ್ದು ಅಕಿ: 1000/- ರೂ 05) ಮತ್ತು ಸೀರೆಗಳು ಬಟ್ಟೆಬರೆಗಳು ಅಕಿ: 1500/- ರೂ ಹೀಗೆ ಒಟ್ಟು 24,500/- ರೂ ಬೆಲೆಬಾಳುವ ಸ್ವತ್ತನ್ನು               ದಿನಾಂಕ: 13/03/2016 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 14/03/2016 ರಂದು ರಾತ್ರಿ 04-30 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಕೀಲಿ ಮುರಿದು ರಾತ್ರಿ ವೇಳೆಯಲ್ಲಿ ಮನೆಯ ಒಳಗಡೆ ಹೋಗಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 March 2016

Kalaburagi District Reported Crimes.

ಜೇವರ್ಗಿ ಠಾಣೆ : ದಿನಾಂಕ 13.03.2016 ರಂದು ಸಾಯಂಕಾಲ ನಾನು ಕಲಬುರಗಿ ಗಂಗಾ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಫಿರ್ಯಾದಿದಾರಳಾದ ಶ್ರೀದೇವಿ ಗಂಡ ರಾಚಯ್ಯ ಹಿರೆಮಠ ಇವಳು ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ರಾತ್ರಿ  21:30 ಗಂಟೆಗೆ ಠಾಣೆಗೆ ಬಂದಿದ್ದು ಸದರಿ ಫಿರ್ಯಾದಿ ಹೇಳಿಕೆ  ಸಾರಾಂಶವೆನೆಂದರೆ ಇಂದು ದಿನಾಂಕ 13.03.2016 ರಂದು ಮದ್ಯಾಹ್ನ  2.15  ಗಂಟೆ ಸುಮಾರಿಗೆ ಕಟ್ಟಿಸಂಗಾವಿ ಮದರಿ ಕ್ರಾಸ್  ಹತ್ತಿರ ಜೇವರಗಿ ಕಲಬುರಗಿ ರಸ್ತೆಯ ಮೇಲೆ ನನ್ನ ಗಂಡನು ನಡೆಸುತ್ತಿದ ಕಾರ್ ನಂ ಕೆ.ಎ -32ಎಮ್-8623  ನೆದ್ದರಲ್ಲಿ  ಕುಳಿತು ಮಾನವಿಗೆ ಹೋಗುತ್ತಿದ್ದಾಗ ಅದೇ ವೇಳೆಗೆ ಜೇವರಗಿ ಕಡೆಯಿಂದ ಒಂದು ಕ್ರೊಸರ್ ಜೀಪ ನಂ ಕೆ.ಎ18ಎ3507 ನೇದ್ದರ ಚಾಲಕನು ತನ್ನ ಜೀಪನ್ನು ಅತೀ ವೇಗೆ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನನ್ನ ಗಂಡ ಚಲಾಯಿಸುತ್ತಿದ್ದ ಕಾರಿಗೆ ಎದುರಾಗಿ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ಕಾರ ನಡೆಸುತ್ತಿದ ನನ್ನ ಗಂಡನಿಗೆ ಭಾರಿ ಮತ್ತು ಸಾದಾ ಗಾಯಗಳಾಗಿರುತ್ತವೆ. ಅಪಘಾತದ ನಂತರ ಕ್ರೊಸರ್ ಜೀಪ್  ಚಾಲಕನು ತನ್ನ ಜೀಪನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಕಾರಣ ಸದರಿ ಜೀಪ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕುಅಂತಾ ಇತ್ಯಾದಿ ಫಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.
ಜೇವರಗಿ ಠಾಣೆ: ದಿನಾಂಕ 13.03.2016 ರಂದು ರಾತ್ರಿ ನಾನು ಕಲಬುರಗಿ ನಗರದ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು ರಂಜಿತ್ ಸಿಂಗ್ ಈತನ ಸಂಗಡ ಇದ್ದ ಫಿರ್ಯಾದಿದಾರ ನಿಂಗಪ್ಪ ಬುರಲಿ ಈತನು ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ರಾತ್ರಿ 23:30 ಗಂಟೆಗೆ ಠಾಣೆಗೆ ಬಂದಿದ್ದು ಸದರಿ ಫಿರ್ಯಾದಿ ಹೇಳಿಕೆ  ಸಾರಾಂಶವೆನೆಂದರೆ ಇಂದು ದಿನಾಂಕ 13.03.2016 ರಂದು ಸಾಯಂಕಾಲ 04.45  ಗಂಟೆ ಸುಮಾರಿಗೆ ಕೋಳಕೂರ ಕ್ರಾಸ್ ಹತ್ತಿರ ಜೇವರಗಿ ಕಲಬುರಗಿ ರಸ್ತೆಯ ಮೇಲೆ ನಾನು ನನ್ನ ಮೋಟಾರು ಸೈಕಲ್‌ ನಂ ಕೆ.ಎ38ಆರ್‌5202 ನೇದ್ದರ ಮೇಲೆ ರಂಜೀತ ಸಿಂಗನಿಗೆ ಹಿಂದುಗಡೆ ಕೂಡಿಸಿಕೊಂಡು ವಿಜಯಪುರಕ್ಕೆ ಹೋಗುತ್ತಿದ್ದಾಗ ಅದೇ ವೇಳೆಗೆ ಎದುರಿನಿಂದ ಒಂದು ಟಾಟಾ ಎ.ಸಿ.ಇ ವಾಹನ ನಂ ಕೆ.ಎ32ಸಿ5091 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗೆ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಒಮ್ಮೇಲೆ ನನ್ನ ಮೋಟಾರು ಸೈಕಲ್‌ ಕಡೆಗೆ ಬಂದು ನನ್ನ ಹಿಂದೆ ಕುಳಿತ ರಂಜಿತ ಸಿಂಗನಿಗೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಪಡಿಸದ್ದರಿಂದ ರಂಜೀತ ಈತನಿಗೆ ಬಲಗಾಲಿನ ಮೊಳಕಾಲಿಗೆ ಭಾರಿ ರಕ್ತ ಗಾಯವಾಗಿದ್ದು ಅಪಘಾತದ ನಂತರೆ ವಾಹನ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಕಾರಣ ಸದರಿ ವಾಹನ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕುಅಂತಾ ಇತ್ಯಾದಿ ಫಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.
ಯಡ್ರಾಮಿ ಠಾಣೆ: ದಿನಾಂಕ: 13-03-2016 ರಂದು 3;00 ಪಿ.ಎಂ ಕ್ಕೆ ಫಿರ್ಯಾದಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ, ನನ್ನದೊಂದು ಕ್ರೋಜರ ವಾಹನವಿದ್ದು. ಅದನ್ನು ಖಾಸಗಿಯಾಗಿ ಚಲಾಯಿಸಿಕೊಂಡಿರುತ್ತೇನೆ. ಕಳೆದ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ ಚುನಾವಣೆಯಲ್ಲಿ ನನ್ನ ವಾಹನವನ್ನು ಬಾಡಿಗೆಯಾಗಿ ಕೊಟ್ಟಿದ್ದು, ಅದರ ಬಾಬತ್ತು 28,000/- ರೂ ಹಾಗು ಇತರೆ ಹಣ 17,000/- ರೂ ಹೀಗೆ ಒಟ್ಟು 45,000/- ರೂ ಗಳನ್ನು ಮತ್ತು ನಮ್ಮ ಮನೆಯಲ್ಲಿದ್ದ ಬಂಗಾರದ ಆಭರಣಗಳನ್ನು ಕಬ್ಬೀಣದ ಪೆಟ್ಟಿಗೆಯಲ್ಲಿ ಇಟ್ಟಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 12-03-2016 ರಂದು ರಾತ್ರಿ 10;00 ಗಂಟೆಗೆ ನಾನು ಮತ್ತು ನನ್ನ ತಾಯಿ ಗುಂಡಮ್ಮ ಹಾಗು ನ್ನನ ನಹೆಂಡತಿಯಾದ ರೂಪಾ ರವರು ಊಟ ಮಾಡಿ ಮನೆಗೆ ಕೀಲಿ ಹಾಕಿಕೊಂಡು ಮಾಳಗಿ ಮೇಲೆ ಮಲಗಿಕೊಂಡಿರುತ್ತೇವೆ. ದಿನಂತೆ ದಿನಾಂಕ 13-03-2016 ರಂದು ಬೆಳಿಗ್ಗೆ 05;00 ಗಂಟೆಗೆ ನಾವೆಲ್ಲರು ಎದ್ದು ಕೆಳಗೆ ಬಂದು ನೋಡಲಾಗಿ ನಮ್ಮ ಮನೆ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರದಿತ್ತು, ನಂತರ ನಾವೆಲ್ಲರು ಒಳಗೆ ಹೋಗಿ ನೋಡಲಾಗಿ ಪೆಟ್ಟಿಗೆಯಲ್ಲಿದ್ದ 1] ನಗದು ಹಣ 45,000/- ರೂ, 2] 15 ಗ್ರಾಂ ಬಂಗಾರದ ಲಾಕಿಟ ಅ;ಕಿ; 30,000/- ರೂ, 3] 5 ಗ್ರಾಂ ಬಂಗಾರದ ಕಿವಿ ಓಲೆಗಳು ಅ;ಕಿ; 10,000/- ರೂ, 4] 3 ಗ್ರಾಂ ಬಂಗಾರದ ಬಿಳಿ ಹರಳಿನ ಉಂಗರ ಅ;ಕಿ; 6,000/- ರೂ, 5] 20 ಗ್ರಾಮಿನ 4 ಸುತ್ತುಂಗರಗಳು ಅ;ಕಿ; 40,000/- ರೂ, 6] 5 ಗ್ರಾಂ ಬಂಗಾರದ ಗುಂಡುಗಳು ಅ;ಕಿ; 10,000/- ರೂ ಹೀಗೆ ಒಟ್ಟು ನಗದು ಹಣ 45,000/- ರೂ ಮತ್ತು  96,000/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳು ಇರಲಿಲ್ಲ. ದಿನಾಂಕ 12-03-2016 ರಂದು ರಾತ್ರಿ 11;00 ಗಂಟೆಯಿಂದ ದಿನಾಂಕ 13-03-2016 ರ ಬೆಳಗಿನ 04;00 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆ ಬಾಗಿಲ ಕೀಲಿಯನ್ನು ಮುರಿದು ಒಳಗೆ ಪ್ರವೇಶ ಮಾಡಿ ಪೆಟ್ಟಿಗೆಯಲ್ಲಿದ್ದ ಬಂಗಾರ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಲ್ಲದೆ ನನ್ನಂತೆ ನಮ್ಮೂರಿನ ನರಸಪ್ಪ ತಂದೆ ಗುಂಡಪ್ಪ ಅಗಸರ ಈತನ ಮನೆಯು ಸಹ ಕಳ್ಳತನವಾಗಿದ್ದು ಅವನಿಗೆ ಕೇಳಲಾಗಿ ಅವರ ಮನೆಯ ಕೀಲಿ ಮುರಿದು  ಪೆಟ್ಟಿಗಿಲ್ಲಿಟ್ಟ  ನಗದು 20,000/- ರೂ ಗಳನ್ನು ಕಳ್ಳತನವಾಗಿದ್ದು ಇರುತ್ತದೆ, ಅದರಂತೆ ಶೋಭಾ ಗಂಡ ಶ್ರೀಶೈಲ ಸ್ಥಾವರಮಠ ವರ ಮನೆಯು ಕಳ್ಳತನವಾಗಿದ್ದು, ಇವರ ಮನೆಯಲ್ಲಿ 1] ನಗದು ಹಣ 8,000/- ರೂ, 2] 5 ಗ್ರಾಂ ಬಂಗಾರದ ಕಿವಿ ಓಳೆಗಳು ಅ;ಕಿ; 10,000/- ರೂ, 3] 80 ಗ್ರಾಂ ಬೆಳ್ಳಿಯ 4 ಲಿಂಗದಕಾಯಿ ಅ;ಕಿ; 1,600/- ರೂ, 4] 30 ಗ್ರಾಂ ಬೆಳ್ಳಿಯ ಕಾಲಚೈನ ಅ;ಕಿ; 600/- ರೂ ಹೀಗೆ ಒಟ್ಟು 8,000/- ರೂ ನಗದು ಹಣ ಮತ್ತು 12,200/- ರೂ ಕಿಮ್ಮತ್ತಿನ ಬಂಗಾರ ಹಾಗು ಬೆಳ್ಳಿಯ ಆಭರಣಗಳು ಕಳ್ಳತನವಾಗಿರುತ್ತವೆ ಅಂತಾ ಹೇಳಿದರು, ಮತ್ತು ಸಿದ್ದಣ್ಣ ತಂದೆ ಬಸಂವತ್ರಾಯ ಬಡಿಗೇರ ಇವರ ಮನೆಯು ಕಳ್ಳತನವಾಗಿದ್ದು, ಅವರ ಮನೆಯಲ್ಲಿ ವೈನಿಟಿ ಬ್ಯಾಗನಲ್ಲಿಟ್ಟ 5 ಗ್ರಾಂ ಬಂಗಾರದ ಕಿವಿ ಓಲೆಗಳು ಅ;ಕಿ 10,000/- ರೂ ಹಾಗು 3 ಗ್ರಾಂ ಬಂಗಾರದ ಮಾಟಿ ಅ;ಕಿ; 6,000/- ರೂ ಹೀಗೆ ಒಟ್ಟು 16,000/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳು ಕಳ್ಳತನವಾಗಿರುತ್ತವೆ ಅಂತಾ ತಿಳೀಸಿರುತ್ತಾರೆ. ಹೀಗೆ ನಮ್ಮೆಲ್ಲರ ಒಟ್ಟು 1,97,200/- ರೂ ಕಿಮ್ಮತ್ತಿನ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಹಾಗು ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಬಂಗಾರದ ಆಭರಣಗಳು ಪತ್ತೆಯಾದಲ್ಲಿ ಅವುಗಳನ್ನು ನಾನು ಗುರುತಿಸುತ್ತೇನೆ. ಕಾರಣ ಮೇಲ್ಕಂಡ ವಸ್ತುಗಳನ್ನು ಹಾಗು ನಗದು ಹಣವನ್ನು ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.
ರೇವೂರ ಠಾಣೆ : ದಿನಾಂಕಃ13/03/2016  ರಂದು ಫಿರ್ಯಾದಿ ಶ್ರೀ ಜಟ್ಟೆಪ್ಪಾ ತಂದೆ ಸಂಗಪ್ಪ ಗೌರ ವಯಃ21 ಜಾಃ ಕುರುಬ ಉಃ ಕೂಲಿ ಸಾ|| ಇಂಗಳಗಿ(ಬಿ)  ಇವರು ಠಾಣೆಗೆ ಹಾಜರಾಗಿ  ನೀಡಿದ  ಟೈಫ್ ಮಾಡಿಸಿದ ದೂರೆನೆಂದರೆ  ನಮ್ಮ ತಂದೆ ತಾಯಿಗೆ 1)ಯಲ್ಲಪ್ಪಾ 2)ಸಾಬವ್ವ 3) ಲಕ್ಷ್ಮಿಬಾಯಿ 4)ಜಟ್ಟೆಪ್ಪಾ 5) ಕಾಮಣ್ಣಾ ವಯಃ18 6) ಪಾರ್ವತಿ ವಯಃ 14 ವರ್ಷ ಹೀಗೆ ಒಟ್ಟು ಮೂರುಜನ ಹೆಣ್ಣು ಮತ್ತು ಮೂರು ಜನ ಗಂಡು ಮಕ್ಕಳಿರುತೇವೆ, ನನ್ನ ಅಕ್ಕಂದಿರಾದ ಸಾಬವ್ವ ಮತ್ತು ಲಕ್ಷ್ಮಿಬಾಯಿ ರವರ ಮದುವೆಯಾಗಿದ್ದು ಗಂಡನ ಮನೆಯಲ್ಲಿ ಇರುತ್ತಾರೆ ನನ್ನ ತಂದೆ-ತಾಯಿ ತಿರಿಕೊಂಡಿದ್ದು ಈಗ ನಮ್ಮ ಮನೆಯಲ್ಲಿ ನಾನು ನನ್ನ ಅಣ್ಣ ಯಲ್ಲಪ್ಪಾ, ತಮ್ಮ ಕಾಮಣ್ಣಾ ತಂಗಿಯಾದ ಪಾರ್ವತಿ ಎಲ್ಲರೂ ವಾಸವಾಗಿರುತ್ತೇನೆ. ನನ್ನ ವಿವಾಹ ನಿಚ್ಶಿತಾರ್ಥವು ಈಗ ಆರು ತಿಳಗಳ ಹಿಂದೆ ಕಾರಭೋಸ್ಗಾ ಗ್ರಾಮದ ದುಂಡಪ್ಪಾ ಡಬ್ಬಿಗೋಳ ರವರ  ಮಗಳಾದ ಬಸಮ್ಮಳೋಂದಿಗೆ ಯಾಗಿರುತ್ತದೆ. ಶಿವರಾತ್ರಿ ಅಮವಾಸೆ ಪ್ರಯುಕ್ತ ನಮ್ಮ ಭೀಗರ ಗ್ರಾಮವಾದ ಕಾರಭೋಸಗಾ ಗ್ರಾಮದಲ್ಲಿ ಕಾಡಸಿದ್ದೇಶ್ವರ ಜಾತ್ರೆ ಇದ್ದ ನಿಮೀತ್ಯ ನಾನು. ನನ್ನ ತಂಗಿ ಪಾರ್ವತಿ, ನನ್ನ ಚಿಕ್ಕಮ್ಮಳಾದ ಭಾಗಮ್ಮ, ಹಾಗೂ ನನ್ನ ಅಣ್ಣನಾದ ಯಲ್ಲಪ್ಪಾ ಎಲ್ಲರೂ ದಿಃ09/03/2016 ರಂದು ಕಾರಬೋಸ್ಗಾ ಗ್ರಾಮಕ್ಕೆ ಹೋಗಿರುತ್ತೇವೆ. ಜಾತ್ರೆ ಮುಗಿದ ಮೇಲೆ ನಮ್ಮ ಬಿಗರು ಪಾರ್ವತಿ ಇವಳಿಗೆ ಎರಡು ದಿನಗಳ ನಂತರ ಕಳುಹಿಸುತ್ತೇವೆ ಅಂತಾ ಹೇಳಿದ್ದಕ್ಕೆ ಪಾರ್ವತಿಗೆ ಕಾರಭೋಸ್ಗಾ  ಗ್ರಾಮದಲ್ಲಿ ಬಿಟ್ಟು ಮರುದಿನ ದಿಃ10/03/2016 ಸಾಯಂಕಾಲ-7 ಗಂಟೆಗೆ ನಾನು ನನ್ನ ಚಿಕ್ಕಮ್ಮಳಾದ ಭಾಗಮ್ಮ, ಅಣ್ಣ ಯಲ್ಲಪ್ಪಾ ಎಲ್ಲರೂ ನಮ್ಮ ಊರಿಗೆ ಬಂದಿರುತ್ತೇವೆ.       ಹಿಗಿದ್ದು ನಿನ್ನೆ ದಿನಾಂಕಃ12/03/2016 ರಂದು 4 ಗಂಟೆ ಸುಮಾರಿಗೆ ನಾನು ನಮ್ಮ ಮಾವನಾದ ದುಂಡಪ್ಪನ ರವರಿಗೆ ಫೋನಮಾಡಿ ನಾನು ನಾಳೆ ಬಂದು ಪಾರ್ವತಿಗೆ ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿದಾಗ ನಮ್ಮ ಮಾವ ದುಂಡಪ್ಪನವರು ತಿಳಿಸಿದೆನೆಂದರೆ ಈಗ 2-00ಪಿಎಮ್ ಕ್ಕೆ ನಾನು ನನ್ನ ಹೆಂಡತಿ ಭಾಗಮ್ಮ ಹಾಗು ಪಾರ್ವತಿ ಎಲ್ಲರೂ ಮನೆಯಲ್ಲಿದ್ದಾಗ ಒಬ್ಬ ವ್ಯಕ್ತಿ ನಮ್ಮ ಮನೆಗೆ ಬಂದು ನನ್ನ ಹೆಸರು ನಾಗಪ್ಪಾ ತಂದೆ ಭಾಗಪ್ಪಾ ಘತ್ತರಗಿ ಸಾಃ ದೇವಲ ಗಾಣಗಾಪೂರ ಅಂತಾ ಇದು.್ದ ನಾನು ನಿಮ್ಮ ಅಳಿಯ ಜಟ್ಟೆಪ್ಪ ಇಬ್ಬರೂ ಸ್ನೇಹಿತರಿದ್ದು ಇಂದು ಜಟೆಪ್ಪನು ನನ್ನ ತಂಗಿಗೆ ಕರೆದುಕೊಂಡು ಬರುವುದಿದೆ ಬಾ ಅಂತಾ ಹೇಳಿದಾಗ ಜಟ್ಟೆಪ್ಪಾ ನಾನು ಇಬ್ಬರೂ ನನ್ನ ಟಂ.ಟಂ ತೆಗದುಕೊಂಡು ಬರುತ್ತಿದ್ದಾಗ ಬಾದನಳ್ಳಿಯಲ್ಲಿ ಟಂ.ಟಂ ಪಂಚರಾಗಿದ್ದು. ಅಲ್ಲೆ ನಮ್ಮ ಸ್ನೇಹಿತನ ಮೋಟರ ತೆಗೆದುಕೊಂಡು, ಜಟ್ಟೆಪ್ಪನು ನನಗೆ ಮೋಟರ ಸೈಕಲ ನಡೆಸಲು ಬರುವುದಿಲ್ಲಾ ನೀನು ಮೋಟರ ಸೈಕಲ ಮೇಲೆ ಕಾರಬೋಸ್ಗಾ ಗ್ರಾಮಕ್ಕೆ ಹೋಗಿ ನಮ್ಮ ಸಂಬಂದಿಕರಾದ ದುಂಡಪ್ಪಾ ಡಬ್ಬಿ ರವರ ಮನೆಯಲ್ಲಿರುವ ನನ್ನ ತಂಗಿ ಪಾರ್ವತಿಯನ್ನು ಕರೆದುಕೊಂಡು ಬಾ ಅಂತಾ ಹೇಳಿದ್ದಾನೆ. ಅದಕ್ಕೆ ಬಂದಿದ್ದೇನೆ ಅಂತಾ ಹೇಳಿದಾಗ ನಾನು ಪಾರ್ವತಿ ಇವಳಿಗೆ ಆತನ ಪರಿಚಯ ಇದೆಯೋ ಹೇಗೆ ಅಂತಾ ವಿಚಾರಿಸಿದಾಗ ಅವಳು ಸದರಿಯವನು ನಮಗೆ ಪರಿಚಿತನಾಗಿದ್ದು ನಮ್ಮ ಅಣ್ಣನ ಸ್ನೇಹಿತನಿರುತ್ತಾನೆ .ಅಂತಾ ಹೇಳಿದಾಗ ನಾವು ನಂಬಿ ಪಾರ್ವತಿ ಇವಳಿಗೆ ಮಧ್ಯಾನ್ಹ 2-30 ಪಿಎಮ್ ಸುಮಾರಿಗೆ ಆತನ ಜೊತೆಗೆ ಮೋಟರ ಸೈಕಲ ಮೇಲೆ ಕಳಹಿಸಿಕೊಟ್ಟಿರುತ್ತೇವೆ.ಅಂತಾ ತಿಳಿಸಿದರು. ಆಗ ನಾನು ನಮ್ಮ ಮಾವನವರಿಗೆ ಸದರಿವನು ನನ್ನ ಸ್ನೇಹಿತನಾಗಿರುವದಿಲ್ಲಾ ನಾನು ಅವನಿಗೆ ಕಳುಹಿಸಿರುವುದಿಲ್ಲಾ ಅಂತಾ ಹೇಳಿ ನಂತರ ನಾನು ಕಾರಭೋಸ್ಗಾ ಗ್ರಾಮಕ್ಕೆ ಹೋಗಿ ನಾನು ನನ್ನ ಮಾವ ನನ್ನ ಅಣ್ಣ ಯಲ್ಲಪ್ಪಾ ಎಲ್ಲರೂ ಹುಡಕಾಡಿದರು ಎಲ್ಲಿಯೂ ನನ್ನ ತಂಗಿ ಸಿಕ್ಕಿರುವುದಿಲ್ಲಾ. ನನ್ನ ತಂಗಿಗೆ ತನ್ನ ಜೊತೆಗೆ ಕರೆದುಕೊಂಡ ಹೋದ ನಾಗಪ್ಪಾ ತಂದೆ ಭಾಗಪ್ಪಾ ಘತ್ತರಗಿ  ಉಃ ಟಂ,ಟಂ ಡ್ರೈವರ ಜಾಃ ಕಬ್ಬಲಿಗ ಸಾಃದೇವಲಗಾಣಗಾಪೂರದ ಈತನದ್ದು ಒಂದು ಟಂಟಂ ಇದ್ದು ಈತನು ಆಗಾಗ ನಮ್ಮೂರಿಗೆ ಬಂದು ಕೂಲಿ ಕೆಲಸಕ್ಕೆ ಹೋಗುವ ಹೆಣ್ಣ ಮಕ್ಕಳನ್ನು ತನ್ನ ಟಂ.ಟಂ ನಲ್ಲಿ ಕರೆದುಕೊಂಡು ಹೋಗುವುದು ಮತ್ತು ತಂದು ಬೀಡುವುದು ಮಾಡುತ್ತಿದ್ದನ್ನು. ನನ್ನ ತಂಗಿಯೂ ಸಹ ಆಗಾಗ ದೇವಲ ಗಾಣಗಾಪೂರಕ್ಕೆ ಕೂಲಿ ಕೆಲಸಕ್ಕೆ ಆತನ ಟಂ,ಟಂನಲ್ಲಿ ಹೋಗುವುದು ಬರುವುದು ಮಾಡುತ್ತಿದ್ದಳು. ಸದರಿಯವನು ಅಪ್ರಾಪ್ತ 14 ವರ್ಷದ ನನ್ನ ತಂಗಿಯನ್ನು ಯಾವುದೋ ದುರುದ್ದೇಶದಿಂದ ಪುಸಲಾಯಿಸಿ ನಮ್ಮ ಬೀಗರಿಗೆ ಸುಳ್ಳು ಹೇಳಿ ಕಾರಬೋಸ್ಗಾ ಗ್ರಾಮದ ನಮ್ಮ ಸಂಬಂಧಿಕರ ಮನೆಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆ. ಎಲ್ಲಾ ಕಡೆಗೆ ಹುಡಕಾಡಿದರು ಸಿಗದ ಕಾರಣ ತಡವಾಗಿ  ಇಂದು ದೂರು ನೀಡುತ್ತಿದ್ದು. ಕಾರಣ ಸದರಿಯವನ ಮೇಲೆ ಕಾನೂನಿನ ಕ್ರಮ ಕೈಗೊಂಡು ನನ್ನ ತಂಗಿಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ನೀಡಿದ  ದೂರಿನ ಸಾರಾಂಶದ ಮೇಲಿಂಶದ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.