POLICE BHAVAN KALABURAGI

POLICE BHAVAN KALABURAGI

14 February 2016

Kalaburagi District Reported Crimes

ಆಕ್ರಮವಾಗಿ ಶ್ರೀಗಂಧದ ಕಟ್ಟಿಗೆ ಸಾಗಿಸುತ್ತಿದ್ದವರ ಬಂಧನ :
ಕಮಲಾಪೂರ ಠಾಣೆ : ದಿನಾಂಕ 13.02.2016 ರಂದು ಬೆಳ್ಳಿಗ್ಗೆ ಕಮಲಾಪೂರ ಗ್ರಾಮ ಸಿಮಾಂತರದ ಓಕಳಿ ಕ್ರಾಸ ಹತ್ತಿರ ಇಬ್ಬರು ವ್ಯಕ್ತಿಗಳು ಮೋಟಾರ ಸೈಕಲ ಮೇಲೆ ಪ್ಲಾಸ್ಟಿಕ ಚೀಲದಲ್ಲಿ ಶ್ರೀಗಂಧನ ಕಟ್ಟಿಗೆಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಮೇರೆಗೆ ಶ್ರೀ ಗಜಾನನ್ ಕೆ.ನಾಯಕ ಪಿ.ಎಸ್.ಐ ಕಮಲಾಪೂರ ಪೊಲೀಸ್ ಠಾಣೆ ಸಿಬ್ಬಂದಿಯವರಾದ ಕತಲಸಾ ಪಿಸಿ 310, ರಾಜೇಂದ್ರ ರಡ್ಡಿ ಪಿಸಿ 484, ಮಲ್ಲಿಕಾರ್ಜುನ  ಪಿಸಿ 1229 ಮತ್ತು ಬಾಬು ಶೇರಿಕಾರ ಪಿಸಿ 333 ರವರು ಹಾಗು ಪಂಚರೊಂದಿಗೆ ಕಮಲಾಪೂರ ದಿಂದ ಓಕಳಿ ಕಡೆಗೆ ಹೋಗುವ ಓಕಳಿ ಕ್ರಾಸ ಹತ್ತಿರ ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಹಿರೊ ಸ್ಲೇಂಡರ ಮೋಟಾರ ಸೈಕಲ ನಂ ಕೆಎ 32 ಇಸಿ 5284 ನೇದ್ದು ತೆಗೆದುಕೊಂಡು ನಿಂತ್ತಿದ್ದು ಸದರಿ ಮೋಟಾರ ಸೈಕಲ ಮೇಲೆ ಒಂದು ಬಿಳಿ ಪ್ಲಾಸ್ಟಿಕ ಚೀಲ ಇರುವದನ್ನು ಖಚಿತ ಪಡಿಸಿ ಕೊಂಡು ನಂತರ ಪಿ.ಎಸ್.ಐ. ಸಾಹೇಬರು ಮತ್ತು ಅವರ ಸಿಬ್ಬಂದಿ ಜನರು ನಮ್ಮ ಸಮಕ್ಷಮ ಸದರಿ ಇಬ್ಬರ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಸದರಿಯವರಿಗೆ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಪ್ರಕಾಶ ತಂದೆ ಶಿವಪ್ಪ ಕೈಕಡಿ ಸಾ: ಕನಕಟ ತಾ: ಹುಮನಾಬಾದ ಜಿ: ಬೀದರ 2. ವಿಜಯಕುಮಾರ ತಂದೆ ರಾಮಣ್ಣ ಸಾ: ಬೇಳಕೇರಾ ತಾ:ಹುಮನಾಬಾದ ಜಿ: ಬೀದರ ಅಂತ ತಿಳಿಸಿದ್ದು ನಂತರ ಸದರಿಯವರಿಗೆ ವಿಚಾರಣೆಗೊಳಪಡಿಸಿದಾಗ ಸದರಿಯವರು ಶ್ರೀಗಂಧದ ಕಟ್ಟಿಗೆಗಳನ್ನು ಪ್ಲಾಸ್ಟಿಕ ಚೀಲದಲ್ಲಿ ಹಾಕಿಕೊಂಡು ಹೊಗುತ್ತಿರುವ ಬಗ್ಗೆ ತಿಳಿಸಿದ್ದು ನಂತರ ಪಂಚರ ಸಮಕ್ಷಮ ಸದರಿಯವರ ವಶದಲ್ಲಿದ್ದ ಪ್ಲಾಸ್ಟಿಕ ಚೀಲ ಪರಿಶೀಲಿಸಿ ನೋಡಲು ಪ್ಲಾಸ್ಟಿಕ ಚೀಲದಲ್ಲಿದ್ದ ಕಟ್ಟಿಗೆಗಳನ್ನು ತುಕಡಿಗಳನ್ನು ಹೊರಗೆ ತೆಗೆದು ನೊಡಲು ಒಟ್ಟು 15 ಕಟ್ಟಿಗೆ ತುಕ್ಕಡಿಗಳಿದ್ದು ಸದರಿ ಕಟ್ಟಿಗೆಗಳಿಂದ ಸುವಾಸನೆ ಬರುತ್ತಿದ್ದು ಸದರಿ ಕಟ್ಟಿಗೆಗಳು ಶ್ರೀಗಂದನ ಕಟ್ಟಿಗೆಯ ತುಕ್ಕಡಿಗಳಿದ್ದು ಅವುಗಳ ಪರಿಶೀಲಿಸಿ ನೋಡಲು ಹಸಿ ಶ್ರೀಗಂದಕಟ್ಟಿಗೆ ತುಕಡಿಗಳಿದ್ದು ಸದರಿ ಎಲ್ಲಾ ಕಟ್ಟಿಗಳ ಮೇಲೆ ಕ್ರ.ಸಂಖೆ 1 ರಿಂದ 15 ಸಂಖೈಗಳನ್ನು ಬರೆದು ಪ್ರತಿಯೊಂದು ಕಟ್ಟಿಗೆ ತುಕಡಿಯನ್ನು ತೂಕಮಾಡಿ ನೊಡಲು ಒಟ್ಟು  8 ಕಿಲೋ 500 ಗ್ರಾಮ ತೂಕದ ಶ್ರೀಗಂಧನ ಕಟ್ಟಿಗೆ ಇದ್ದು ಸದರಿ ಶ್ರೀಗಂಧನ ಕಟ್ಟಿಗೆಯ ಅಂದಾಜ ಕಿಮ್ಮತ್ತು 12,000/- ರೂಪಾಯಿ ಬೇಲೆ ಬಾಳುವದಿದ್ದು ಸದರಿ ಶ್ರೀಗಂಧದ ಕಟ್ಟಿಗೆಳನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು  ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಮುಧೋಳ ಠಾಣೆ : ದಿನಾಂಕ: 13.02.2016 ರಂದು ಬೆಳಗ್ಗೆ 05:00 ಗಂಟೆಗೆ ಮೊತಕಪಲ್ಲಿ ಗ್ರಾಮಸ್ಥರು ಹಾಗು ದೇವಸ್ಥಾನದ ಪೂಜಾರಿಗಳು ಶ್ರೀ ಬಲಭೀಮಸೇನ ದೇವಸ್ಥಾನ ಮೊತಕಪಲ್ಲಿಯಲ್ಲಿ ಕಳೂವಾದ ಬಗ್ಗೆ ದೂರವಾಣಿ ಮೂಲಕ ಕರೆ ಬಂದ ಕಾರಣ ಮೊತಕಪಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ ಅಂದಾಜು 3 ಕೆಜಿಯ ಬೆಳ್ಳಿ ಪಾದುಕೆಗಳು ಅದರ ಮೌಲ್ಯ ಅಂದಾಜು 1 ಲಕ್ಷ ಹಾಗು ದೇವಸ್ಥಾನದ ಹುಂಡಿಯು ಒಡೆದು ಪಕ್ಕಕ್ಕೆ ಇಟ್ಟಿರುತ್ತಾರೆ. ಅದರಲ್ಲಿನ ಹಣ ದೇವಸ್ಥಾನದ ಆವರಣದಲ್ಲಿ ಹುಂಡಿಯ ಸುತ್ತಾ ಬಿದ್ದರಿರುತ್ತವೆ. ಈ ಕೃತ್ಯವು ರಾತ್ರಿ 02:00 ಎ.ಎಮ್ ದಿಂದ 04:00 ಎ.ಎಮ್ ದ ಮಧ್ಯದ ಅವಧಿಯಲ್ಲಿ ಆಗಿರುತ್ತದೆ ಅಂತಾ ಶ್ರೀ ಸುಬ್ಬಣ್ಣಾ ಜಮಖಂಡಿ ತಹಸೀಲ್ದಾರರು ಸೇಡಂ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 February 2016

Kalaburagi District Reported Crimes

ಕೊಲೆ ಪ್ರಕರಣ :
ಚೌಕ ಠಾಣೆ : ಶ್ರೀ ದಿಲ್ದಾರ ಬಡೆಖಾನ್ ತಂದೆ ಮೇಹಮುದ ಬಡೆಖಾನ್ ಸಾ: ಮನೆ ನಂ. 908 ರೌಫೀನ್ ಮಂಡಿ ಸದರ ಮೋಹಲ್ಲಾ ಕಲಬುರಗಿ ಬರೆದು ಕೊಡುವ ವಿನಂತಿ ಅರ್ಜಿ ಏನೆಂದರೆ ನನ್ನ ಮಗಳಾದ ಫರಾನಾ ಈವರಿಗೆ ಕಳೆದ 5 ವರ್ಷಗಳ ಹಿಂದೆ ಮಹಮ್ಮದ ಪಾರುಕ್ ನವಾಡೆ ತಂದೆ ಮಹಮ್ಮದ ಫಫಿ ನವಾಡೆ ಇತನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ಮಹಮ್ಮದ ಪಾರುಕ್ ನವಾಡೆ ಅಳಿಯನಾಗಬೇಕು, ಈತನೊಂದಿಗೆ ಕಳೆದ 2-3 ವರ್ಷಗಳಿಂದ ಖುರೇಷಿ ಜನರದ ನಜೀರ ಖುರೇಷಿ ಕಮ್ಮು, ಖಲೀಲ್ ಕಮ್ಮು ಖುರೇಷಿ, ಅದಿಲ್ ಕಮ್ಮು ಖುರೇಷಿ, ಯುಸೂಫ್ ಕಮ್ಮು ಖುರೇಷಿ, ಟಿಪ್ಪು ಕಮ್ಮು ಖುರೇಷಿ, ಅಜೀಮ್ ಕಮ್ಮು ಖುರೇಷಿ, ಅಖಿಲ್ ಕಮ್ಮು ಖುರೇಷಿ, ಮತ್ತು ಇತರೆ ಜನರೊಂದಿಗೆ ನನ್ನ ಅಳಿಯನ ತಂದೆಯವರು ಮತ್ತು ಅಳಿಯ ನಮ್ಮ ಖುರೇಷಿ ಸಮಾಜದ ಅದ್ಯಕ್ಷ ಸ್ಥಾನ ಪಡೆದು ಸಮಾಜದಲ್ಲಿ ಅವರು ಮುಂದುವರೆಯುತ್ತಿರುದ್ದರಿಂದ ಅವರ ಎಳಿಗೆಯನ್ನು ಸಹಿಸದೇ ಈ ಮೇಲ್ಕಂಡ ಜನರು ನನ್ನ ಅಳಿಯ ಮತ್ತು ಅವರ ಕುಟುಂಬದವರ ಮೇಲೆ ಅನಾವಶ್ಯಕವಾಗಿ ದ್ವೇಶ ಭಾವನೆ ಕಟ್ಟಿಕೊಂಡು ಅವರಿಗೆ ಹೊಡೆಯುವುದು ಬಡೆಯುವುದು ಬೆದರಿಕೆ ಹಾಕುವುದು ಸುಮಾರು ತಿಂಗಳಿಂದ ದ್ವೇಶ ಸಾದಿಸುತ್ತಾ ಬಂದಿರುತ್ತಾರೆ. ಮತ್ತು ಈಗಾಗಲೇ ನನ್ನ ಅಳಿಯ ಮತ್ತು ಅವನ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದರಿಂದ ಕೇಸ ಕೊಟ್ಟಿದ್ದರಿಂದ ವೈಮಸ್ಸು ಬೇಳೆದಿದ್ದು  ದಿನಾಂಕ 12/02/2016 ರಂದು ಅಂದಾಜು 8-15 ಪಿ.ಎಂ.ಕ್ಕೆ ನಾನು ಮನೆಯಲ್ಲಿದ್ದಾಗ ನನ್ನ ಅಳಿಯನ ಗೆಳೆಯ ಮೋಬೈಲ್ ಮುಖಾಂತರ ಮಾಹಿತಿ ತಿಳಿಸಿದ್ದೇನೆಂದರೆ ನಿಮ್ಮ ಅಳಿಯ ಮಹಮ್ಮದ ಪಾರುಕ್ ಇತನಿಗೆ ಆದಿಲ್ ಕಮ್ಮು ಖುರೇಷಿ, ಖಲೀಲ್ ಕಮ್ಮು ಖುರೇಷಿ, ಮತ್ತು ಇವರ ಸಂಗಡಿಗರು ಕೂಡಿಕೊಂಡು ನಿಮ್ಮ ಅಳಿಯನಿಗೆ ಸಿಕ್ಕಾಪಟ್ಟೆಯಾಗಿ ಮಾರಾಕಾಸ್ತ್ರದಿಂದ ಹೊಡೆಯುತ್ತಿದ್ದಾರೆ. ಅವನು ನಿತ್ರಾಣ ಸ್ಥೀತಿಯಲ್ಲಿ ರೋಡಿನ ಮೇಲೆ ಬಿದ್ದಿದ್ದಾನೆ ಎಂದು ತಿಳಿಸುತ್ತಲೇ ತಾನು ಗಾಬರಿಯಾಗಿ ಬಡಕಲ್ ಮೋಮಿನಪೂರ ಹತ್ತಿರ ಬಂದು ನೋಡಿದಾಗ ನನ್ನ ಅಳಿಯ ಮಹಮ್ಮದ ಪಾರುಕ್ ಇತನಿಗೆ ಹಳೆಯ ವೈಮಸ್ಸಿನಿಂದಲೇ ಆದಿಲ್ ಕಮ್ಮು ಖುರೇಷಿ, ಖಲೀಲ್ ಕಮ್ಮು ಖುರೇಷಿ, ಅಜೀಮ್ ಕಮ್ಮು ಖುರೇಷಿ, ಅಖಿಲ್ ಕಮ್ಮು ಖುರೇಷಿ, ಮತ್ತು ಇತರೆ ಜನರು ಸೇರಿ ಮಾರಾಕಾಸ್ತ್ರದಿಂದ ತಲೆಯ ಮೇಲೆ, ಹೊಟ್ಟೆಯ ಮೇಲೆ, ಎದೆಯ ಮೇಲೆ ಸಿಕ್ಕಾಪಟ್ಟೆಯಾಗಿ ಮಾರಾಕಾಸ್ತ್ರದಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಶ್ರೀಶೈಲ ತಂದೆ ಶಿವಶರಣಪ್ಪ ಪಾಟೀಲ ಸಾ|| ಸಿದನೂರ ತಾ|| ಅಫಜಲಪೂರ ಹಾ|| || ಅಫಜಲಪೂರ ನಾನು ಮತ್ತು ನನ್ನ ಗೆಳೆಯ ಚಂದ್ರಕಾಂತ ತಂದೆ ಶಾಂತಯ್ಯ ಹಿರೆಮಠ ಇಬ್ಬರು ನಮ್ಮ ನಮ್ಮ ಸ್ವಂತ ಕೆಲಸದ ಪ್ರಯುಕ್ತ, ಚಂದ್ರಕಾಂತ ಹಿರೆಮಠ ಇವರ ಮೋಟರ ಸೈಕಲ ನಂಬರ ಕೆಎ-32 ಇಇ-0644 ನೇದ್ದರ ಮೇಲೆ ಅಫಜಲಪೂರ ತಾಲೂಕಿನ ನಂದರ್ಗಾ ಗ್ರಾಮಕ್ಕೆ ಹೋಗಿರುತ್ತೇವೆ. ನಂದರ್ಗಾ ಗ್ರಾಮದಲ್ಲಿ ನಮ್ಮ ಕೆಲಸ ಮುಗಿಸಿಕೊಂಡು ಮರಳಿ ಸದರ ಮೋಟರ ಸೈಕಲ ಮೇಲೆ ಅಫಜಲಪೂರಕ್ಕೆ ಹೊರಟಿರುತ್ತೇವೆ. ಮೋಟರ ಸೈಕಲನ್ನು ಚಂದ್ರಕಾಂತ ಹಿರೆಮಠ ರವರು ನಡೆಸುತ್ತಿದ್ದರು ನಾನು ಅವರ ಹಿಂದೆ ಕುಳಿತಿದ್ದೇನು, ನಾವು ಅಂದಾಜು ಮದ್ಯಾಹ್ನ 3:30 ಗಂಟೆ ಸುಮಾರಿಗೆ ಮೋಟರ ಸೈಕಲ ಮೇಲೆ ಅಫಜಲಪೂರ ಕರಜಗಿ ರೋಡಿಗೆ ಇರುವ ಅಳ್ಳಗಿ ಕ್ರಾಸ ಹತ್ತಿರ ಬರುತ್ತಿದ್ದಾಗ, ನಮ್ಮ ಎದರುಗಡೆಯಿಂದ ಒಬ್ಬ ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನಾವು ಬರುತ್ತಿದ್ದ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿದನು, ಆಗ ನಾವು ಮೋಟರ ಸೈಕಲದೊಂದಿಗೆ ಕೇಳಗೆ ಬಿದ್ದೇವು, ಆಗ ನಾವು ನಮಗೆ ಡಿಕ್ಕಿಪಡಿಸಿದ ಮೋಟರ ಸೈಕಲ ನಂಬರ ನೋಡಿದ್ದು ಕೆಎ-32 ಇಡಿ-2365 ಅಂತಾ ಇರುತ್ತದೆ. ಡಿಕ್ಕಿಯಾದ ತಕ್ಷಣ ಮೋಟರ ಸೈಕಲ ಚಾಲಕ, ಮೋಟರ ಸೈಕಲ ತಗೆದುಕೊಂಡು ಅಲ್ಲಿಂದ ಹೊದನು, ಸದರಿ ಡಿಕ್ಕಿಯಿಂದ ನನ್ನ ಬಲಗಾಲು ಮೋಳಕಾಲಿನ ಕೇಳಗೆ ಎರಡು ಕಡೆ ಕಾಲು ಮುರಿದಿತ್ತು ಹಾಗೂ ಬಲಗಾಲು ಹೆಬ್ಬರಳಿಗೆ ತರಚಿದ ರಕ್ತಗಾಯ ಆಗಿತ್ತು, ಚಂದ್ರಕಾಂತ ಹಿರೆಮಠ ರವರಿಗೆ ಯಾವುದೆ ಗಾಯಗಳು ಆಗಿರುವುದಿಲ್ಲಾ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ದಿನಾಂಕ:08-02-2016 ರಂದು ಮದ್ಯಾಹ್ನ ಸೂಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂ-218 ಕಮಕಲಾಪೂರ ಹುಮನಾಬಾದ ರೋಡಿನ ಕುದರೆಮುಖ ಹೋಡ್ಡಿನ ತಿರುವಿನಲ್ಲಿ ಶ್ರೀ ಸಂಜು ತಂದೆ ಶಿವರಾಯ ಹುಲಿಮನಿ ಸಾ: ನವನಿಹಾಳ ತಾ:ಜಿ:ಕಲಬುರಗಿ ಇವರ ಬಾವನಾದ ಮಂಜುನಾಥ ಕಮಲಾಪೂರಕ್ಕೆ ದವಾಖಾನೆಗೆ ತೋರಿಸಿಕೊಂಡು ತನಗೆ ಪರಿಚಯದವನಾದ ಮಾದೇಶ ಈತನ ಹಿರೋಹೊಂಡಾ ಸ್ಪ್ಲೆಂಡರ ಪ್ಲಸ ಮೋಟರ ಸೈಕಲ ನಂ-ಕೆಎ-32 ಎಬಿ-1304 ನೇದ್ದರ ಮೇಲೆ ಕುಳಿತು ಕಿಣ್ಣಿಸಡಕ ಗ್ರಾಮಕ್ಕೆ ವಾಪಸ್ಸ ಹೋಗುವಾಗ ಮಾದೇಶನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಸ್ಕಿಡ್ಡ ಮಾಡಿ ಕೆಡವಿದ್ದರಿಂದ ತನ್ನ ಭಾವ ಮಂಜುನಾಥನಿಗೆ ಬಲ ರಟ್ಟೆಗೆ ಹಾಗೂ ಅಲ್ಲಲ್ಲಿ ಗುಪ್ತ ಗಾಯಗಳಾಗಿದ್ದು. ಅಲ್ಲದೆ ಮಾದೇಶನಿಗೆ ಹೋಟ್ಟೆ ಮೇಲೆ ಚರ್ಮ ಸುಲಿದಂತಾಗಿ ಭಾರಿ ರಕ್ತ ಹಾಗೂ ಗುಪ್ತ ಗಾಯಗಳಾಗಿ ಕಲಬುರಗಿ ಸರಕಾರಿ ದವಾಖಾನೆಯಲ್ಲಿ ಉಪಚಾರ ಪಡೆಯುತ್ತಿದ್ದು ಮಹಾದೇವ & ಮಾಹದೇಶ ಸಾ:ಬಾಪುನಗರ ಕಲಬುರಗಿ ಈತನು ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ನೀಲಮ್ಮ ಗಂಡ ಮರೆಪ್ಪ ಕುರಿಮನಿ  ಸಾ||| ಘತ್ತರಗಾ ಇವರ ನನ್ನ ಗಂಡನು ಘತ್ತರಗಾ ಗ್ರಾಮದಲ್ಲಿ ಅಂಬೇಡ್ಕರ ಸರ್ಕಲ ಹತ್ತಿರ ಪಾನಶಾಪ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಪ್ರತಿ ಅಮವಾಸೆ ಹಾಗೂ ಪ್ರತಿ ಶುಕ್ರವಾರಗಳಂದು ಘತ್ತರಗಾ ಶ್ರೀ ಭಾಗ್ಯವಂತಿ ದೇವಸ್ಥಾನಕ್ಕೆ ಭಕ್ತಾದಿಗಳು ಜಾಸ್ತಿ ಬರುವುದರಿಂದ, ವ್ಯಾಪಾರ ಮಾಡುವ ಸಂಭಂದ ನನ್ನ ಗಂಡ ಪ್ರತಿ ಅಮವಾಸೆ ಹಾಗೂ ಪ್ರತಿ ಶುಕ್ರವಾರದ ಹಿಂದಿನ ದಿನಗಳ ರಾತ್ರಿ ವೇಳೆಯಲ್ಲಿ ಪಾನಶಾಪ ಹತ್ತಿರದ ಅಂಬೇಡ್ಕರ ಕಟ್ಟೇಯ ಮೇಲೆ ಮಲಗುತ್ತಿದ್ದರು, ಹಿಗಿದ್ದು ನಿನ್ನೆ ದಿನಾಂಕ 11-02-2016 ರಂದು ರಾತ್ರಿ 11:00 ಗಂಟೆ ಸುಮಾರಿಗೆ ನನ್ನ ಗಂಡನಾದ ಮರೆಪ್ಪ ತಂದೆ ಗಡ್ಡೆಪ್ಪ ಕುರಿಮನಿ ಇವರು ಮನೆಯಲ್ಲಿ ಊಟ ಮಾಡಿ ನಾನು ಪಾನಶಾಪ್ ಹತ್ತಿರ ಅಂಭೇಡ್ಕರ ಕಟ್ಟೆಯ ಮೇಲೆ ಮಲಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾರೆ. ಮದ್ಯ ರಾತ್ರಿ ಅಂದಾಜು 02:30 ಗಂಟೆ ಸುಮಾರಿಗೆ ನಾನು ನನ್ನ ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದಾಗ ನಮ್ಮ ಚಿಕ್ಕಪ್ಪನಾದ ಶಿವಕಾಂತ ತಂದೆ ಭೀಮಶಾ ಸಿಂಗೆ ಇವರು ನನಗೆ ಪೋನ ಮಾಡಿ ನಿನ್ನ ಗಂಡನ ಮೇಲೆ ಕಬ್ಬಿನ ಟ್ರೈಲಿ ಬಿದ್ದಿದೆ ಭಾ ಅಂತಾ ತಿಳಿಸಿದ ಮೇರೆಗೆ ನಾನು ನನ್ನ ಮಕ್ಕಳೊಂದಿಗೆ ಅಂಬೇಡ್ಕರ ಸರ್ಕಲ ಹತ್ತಿರ ಬಂದು ನೋಡಲಾಗಿ ನನ್ನ ಗಂಡ ಮಲಗಿದ್ದ ಅಂಬೇಡ್ಕರ ಕಟ್ಟೆಯ ಮೇಲೆ ಕಬ್ಬಿನ ಟ್ರೈಲಿ ಬಿದ್ದಿತ್ತು, ಆಗ ನನ್ನ ತಂದೆ ರಾವುತಪ್ಪ ಸಿಂಗೆ, ನನ್ನ ಗಂಡನ ಅಣ್ಣ ಭಾಗಪ್ಪ ಕುರಿಮನಿ, ನಮ್ಮ ಅಣ್ಣ ತಮ್ಮಕಿಯ ಲಕ್ಷ್ಮೀಕಾಂತ ಸಿಂಗೆ, ಹಾಗೂ ಪ್ರತ್ಯಕ್ಷ ದರ್ಶಿಗಳಾದ ಚಂದಪ್ಪ ಬಟ್ಟರಕಿ, ಸುಭಾಷ ಬಿಲ್ಲಾಡ ಇವರೆಲ್ಲರೂ ಕೂಡಿ ನನ್ನ ಗಂಡನ ಮೇಲೆ ಬಿದ್ದ ಕಬ್ಬುಗಳನ್ನು ತಗೆದು ನನ್ನ ಗಂಡನನ್ನು ಹೊರಗೆ ತಗೆದು ನನ್ನ ಗಂಡನನ್ನು ನೋಡಲಾಗಿ ನನ್ನ ಗಂಡನು ಮೃತಪಟ್ಟಿದ್ದು, ನನ್ನ ಗಂಡನಿಗೆ ಎರಡು ಕಾಲುಗಳು ಮೋಳಕಾಲಿನಿಂದ ಕೆಳಗೆ ಮುರಿದು ಕಡೆಗಾಗಿದ್ದವು, ಹಾಗೂ ಹೊಟ್ಟೆಯ ಕೆಳಗೆ ಸೊಂಟದ ಮೇಲೆ ಬಾರಿ ಗುಪ್ತಗಾಯವಾಗಿ ಸೊಂಟದ ಮುರಿದಿತ್ತು, ನಂತರ ನನ್ನ ಗಂಡನ ಮೇಲೆ ಬಿದ್ದ ಟ್ಯಾಕ್ಟರ ನಂಬರ ನೋಡಲಾಗಿ, ಟ್ಯಾಕ್ಟರ ಇಂಜೆನ ನಂಬರ NNHY07739, ಮುಂದಿನ ಟ್ರೈಲಿ ನಂಬರ ಕೆಎ-28 ಟಿ-7353, ಪಲ್ಟಿಯಾದ ಹಿಂದಿನ ಟ್ರೈಲಿ ನಂಬರ ಕೆಎ-28 ಟಿ-7354 ಅಂತಾ ಅರ್ಜುನ ಮಹೆಂದ್ರಾ ಕಂಪನಿಯ ಕೆಂಪು ಬಣ್ಣದ ಟ್ಯಾಕ್ಟರ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 February 2016

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸುರೇಖಾ ಗಂಡ ಮನೋಹರ  ಹೊಟಕರ  ಸಾ: ಭಾರ್ಶಿ ಹಾಲ ವಸತಿ ಪ್ಲಾಟ ನಂ 71 ಭವಾನಿ ನಿಲಯ ಪೊಲೀಸ ಹೇಲಿಪ್ಯಾಟ ಮೈದಾನದ ಹತ್ತಿರ ಸೇಡಂ ರಸ್ತೆ ಕಲಬುರಗಿ ರವರ ಮದುವೆಯು ದಿನಾಂಕ: 29.05.2013 ರಂದು ವಿಜಯಲಕ್ಷ್ಮೀ ಕಲ್ಯಾಣ ಮಂಟಪ ಆರ್.ಟಿ.ಓ ಆಫೀಸ ಹತ್ತಿರ ಕಲಬುರಗಿಯಲ್ಲಿ ಮನೋಹರ ತಂದೆ ಫಕೀರಪ್ಪಾ  ಹೋಟಕರ  ಇವರೊಂದಿಗೆ ಸಮಾಜ  ಹಿರಿಯರ ಹಾಗೂ  ನೆಂಟರ ಸಮಕ್ಷಮ ಸಂಪ್ರದಾಯದ ಪ್ರಕಾರ ಜರುಗಿರುತ್ತದೆ. ಮದುವೆಯಲ್ಲಿ 6 ತೊಲೆ ಬಂಗಾರ, 25 ಸಾವಿರ ರೂಪಾಯಿ ಹೀಗೆ ಅಂದಾಜು ಮದುವೆಯ ವೆಚ್ಚ 8 ರಿಂದ 10 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ಒಂದು ತಿಂಗಳವರೆಗೆ ನನ್ನ ಗಂಡ ಹಾಗೂ ಗಂಡನ ಮನೆಯವರು ನನ್ನೊಂದಿಗೆ ಚೆನ್ನಾಗಿದ್ದು, ನಂತರ ನನ್ನ ಗಂಡ ಹಾಗೂ ಗಂಡನ ಮನೆಯವರೆಲ್ಲರೂ ಸೇರಿಕೊಂಡು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ಹೊಡೆ ಬಡೆ ಮಾಡುತ್ತಿದ್ದು ನನ್ನ ಗಂಡ ಮನೋಹರ ಇತನು ಬೇರೆ ಹೆಣ್ಣಿನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ದಿನಾಲೂ ನನ್ನ ಗಂಡ ನನಗೆ ಹೊಡೆ ಬಡೆ ಮಾಡುತ್ತಿದ್ದನು. ನೀನು ನಿನ್ನ ತವರು ಮನೆಯಿಂದ 4 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಹಣ ತಂದರೆ ಮಾತ್ರ ನಿನಗೆ ಮನೆಯಲ್ಲಿಟ್ಟುಕೊಳ್ಳುತ್ತೇನೆ ಅಂತಾ ಹೇಳಿದ್ದರಿಂದ ನಾನು ಇತ್ತೀಚೆಗೆ 2 ತಿಂಗಳಿಂದ ನನ್ನ ತವರುಮನೆಯಾದ ಕಲಬುರಗಿಯಲ್ಲಿ  ಇದ್ದು, ದಿನಾಂಕ 02-02-2016 ರಂದು 2-30 ಗಂಟೆ ಸುಮಾರಿಗೆ ನನ್ನ ಗಂಡನು ತವರು ಮನೆಗೆ ಬಂದು ನನಗೆ ಸಾಲವಾಗಿರುತ್ತದೆ ನಿನ್ನ ತಂದೆ ತಾಯಿಯವರಿಂದ  4 ಲಕ್ಷ ರೂಪಾಯಿ ಹಣ ಕೊಡಿಸು ಇಲ್ಲದಿದ್ದರೆ ನಾನು ನಿನಗೆ ಇಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ನನಗೆ ಸಿಕ್ಕಾಪಟ್ಟೆ ಹೊಡೆಯುವಾಗ ನನ್ನ ತಾಯಿ ಲಿಂಬಾಬಾಯಿ , ವೈನಿಯರಾದ ರಂಜನಾ, ಇವರು ಬಂದು ಜಗಳ ಬಿಡಿಸಿರುತ್ತಾರೆ. ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಹೊಡೆ ಬಡೆ ಮಾಡಿ ತವರು ಮನೆಯಿಂದ 4 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಹೇಳಿದ ನನ್ನ ಗಂಡ ಮನೋಹರ ಮತ್ತು ಮಾವ ಫಕೀರಪ್ಪಾ ಅತ್ತೆ  ಸೋಜರ ಬಾಯಿ, ಮೈದುನ ಅನಂತ, ನಾದಿನಿ ಕವಿತಾ, ರೂಪಾ ಸಂಗೀತಾ ,ಸವಿತಾ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 25-01-2016 ರಂದು ಬೆಳಿಗ್ಗೆ 06:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಎಗಮ್ಮ ಇಬ್ಬರು ಕರಜಗಿ ರೋಡಿಗೆ ವಾಯು ವಿಹಾರಕ್ಕೆ ಹೋಗಿದ್ದು ನಾವಿಬ್ಬರು ವಾಯು ವಿಹಾರ ಮಾಡಿಕೊಂಡು ಮರಳಿ ಕರಜಗಿ ರೋಡಿನ ಕಡೆಯಿಂದ ಮರಳಿ ಮನೆಯ ಕಡೆಗೆ ಬರುತ್ತಿದ್ದಾಗ ನಮ್ಮೂರಿನ ನೀರಿನ ಟಾಕಿ ಹತ್ತಿರ ಅಂದಾಜು ಬೆಳಿಗ್ಗೆ 06:30 ಗಂಟೆ ಸುಮಾರಿಗೆ ಬರುತ್ತಿದ್ದಾಗ ಎದರುಗಡೆಯಿಂದ ನಮ್ಮೂರಿನ ಸೋಮಣ್ಣ ತಂದೆ ಮುತ್ತಣ್ಣ ಕನ್ನೋಟ್ಟಿ ಈತನು ತನ್ನ ವಶದಲ್ಲಿದ್ದ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ರೋಡಿನ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ನನ್ನ ತಾಯಿಗೆ ಡಿಕ್ಕಿಪಡಿಸಿದನು, ಸದರಿ ಡಿಕ್ಕಿಯಿಂದ ನನ್ನ ತಾಯಿಯ ಏಡಗೈ ಭುಜದ ಹತ್ತಿರ ಗುಪ್ತಗಾಯ, ಎಡಕಣ್ಣಿನ ಹತ್ತಿರ ತರಚಿದ ರಕ್ತಗಾಯ ಮತ್ತು ಬಲ ಮೋಳಕಾಲಿಗೆ ಬಾರಿ ಗುಪ್ತಗಾಯವಾಗಿ ಕಾಲು ಮುರಿದಂತೆ ಆಗಿತ್ತು, ಹಾಗೂ ಮೈ ಕೈಗೆ ಸಣ್ಣ ಪುಟ್ಟ ತರಚಿದ ರಕ್ತಗಾಯಗಳು ಹಾಗೂ ಗುಪ್ತಗಾಯಗಳು ಆಗಿದ್ದವು. ಆಗ ನಾನು ಮತ್ತು ಅದೆ ಸಮಯಕ್ಕೆ ಬಂದ ನಮ್ಮೂರಿನ ದಾನಪ್ಪ ವಾಂಗಿ, ಬಸು ಮೇತ್ರಿ, ಬಸುಗೌಡ ಬಿರಾದಾರ ಎಲ್ಲರೂ ಕೂಡಿ ನನ್ನ ತಾಯಿಯನ್ನು ಉಪಚರಿಸಿದೆವು, ಸದರಿ ನಮ್ಮ ತಾಯಿಗೆ ಡಿಕ್ಕಿಯಾದ ಮೋಟರ ಸೈಕಲ ನಂ ನೋಡಿದ್ದು ಅದರ ನಂಬರ ಕೆಎ-32 ಕ್ಯೂ-3816 ಅಂತಾ ಇರುತ್ತದೆ. ನಂತರ ನಾನು ಮತ್ತು ನನ್ನ ತಂದೆ ಇಬ್ಬರು ಕೂಡಿ ನನ್ನ ತಾಯಿಯನ್ನು ಒಂದು ಖಾಸಗಿ ವಾಹನದಲ್ಲಿ ಸೋಲ್ಲಾಪೂರದ ಕೋಠಡಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೆವೆ ಅಂತಾ ಶ್ರೀ ಸಂಜಿವಕುಮಾರ ತಂದೆ ಅಶೋಕ ಮೇತ್ರಿ ಸಾ|| ಉಡಚಾಣ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.