POLICE BHAVAN KALABURAGI

POLICE BHAVAN KALABURAGI

16 January 2016

Kalaburagi District Reported Crimes

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ ಮಾರುತಿ ತಂ ಮೈಲಾರಿ ನಾಟೀಕರ, ಸಾ:ಲಿಂಗನವಾಡಿ ಇವರ ಮಗಳಾದ ಸುಜಾತಳಿಗೆ 7 ವರ್ಷಗಳ ಹಿಂದೆ ವ್ಹಿ ಕೆ ಸಲಗರ ಗ್ರಾಮದ ಶ್ರೀ ಶಿವರಾಯ ತಂ ಖಂಡಪ್ಪ ಗದ್ಲೆಗಾಂವ ಸಾ: ವ್ಹಿ ಕೆ ಸಲಗರ ಇವರ ಮಗನಾದ ಗೋಪಾಲ ತಂ ಶಿವರಾಯ ಗದಲೆಗಾಂವ ಈತನ ಜೊತೆ ಮದುವೆ ಮಾಡಿ ಕೊಟ್ಟಿದ್ದು, ಮದುವೆ ಆದ 2 ವರ್ಷ ಗಂಡ ಹೆಂಡತಿ ಸರಿಯಾಗಿ ಇದ್ದರು ಈಗ 5 ವರ್ಷಗಳಿಂದ ಮನೆಯಲ್ಲಿ ದಿನಾ ಮಗಳಿಗೆ ಜಾಚು ಮಾಡುತ್ತಿದ್ದರು ಬಂಗಾರ ತಗೆದುಕೊಂಡು ಬಾ 2 ಲಕ್ಷ ರೂಪಾಯಿ ನಿನ್ನ ತಂದೆಯಿಂದ ತಗೆದುಕೊಂಡು ಬಾ ಎಂದು ದಿನನಿತ್ಯ ಮನೆಯಲ್ಲಿ ಅತ್ತೆಯಾದ ಶ್ರೀಮತಿ 1]ಕಾಶಿಬಾಯಿ ಗಂ ಶಿವರಾಯ 2]ಮಾವನಾದ ಶಿವರಾಯ ತಂ ಖಂಡಪ್ಪ, 3]ಅಳಿಯನಾದ ಗೋಪಾಲ ತಂದೆ ಶಿವರಾಯ, ಹಾಗೂ 4];ಲಕ್ಷ್ಮಣ ತಂ ಶಿವರಾಯ ಮತ್ತು ಲಕ್ಷ್ಮಣನ ಹೆಂಡತಿಯಾದ 5]ಲಲಿತಾಬಾಯಿ ಗಂ ಲಕ್ಷ್ಮೀಣ ಇವರೆಲ್ಲಾ ಸೇರಿ ದಿನನಿತ್ಯೆ ಹೊಡೆಯುವುದು ಬೈಯುವದು ಹೋಗು ನಾವು ಹೇಳಿದಸ್ಟು ದುಡ್ಡು ನಿನ್ನ ತಾಯಿ-ತಂದೆಯಿಂದ ತಗೆದುಕೊಂಡು ಬಂದರೆ ಚಂದ, ಇಲ್ಲಾ ಅಂದರೆ ರಂಡಿ ದಿನಾ ಇದೆಗತಿ ಅಂತಾ ದಿನಾ ಎಲ್ಲರು ಕಿರಕುಳ ಕೊಡುತ್ತಿದ್ದರು. ಮತ್ತು ಮನೆಯಲ್ಲಿ ಇನ್ನು ಇಬ್ಬರು ಹುಡಿಗಿಯರು ಕೂಡಾ ಇರುತ್ತಾರೆ ಶಿವರಾಯನ ಮೊಮ್ಮಕ್ಕಳಾದ 6]ಜೋತಿ ತಂ ಹಣಮಂತ ಸಾ:ಸನಗುಂದಿ ಈ ಹುಡಗಿ ಕೂಡ ಸೋದರ ಮಾವನ ಜೊತೆ ಸೇರಿ ನನ್ನ ಮಗಳಿಗೆ ತೊಂದರೆ ಕೊಡುತ್ತಿದ್ದರು. ಇದೆಲ್ಲಾ ನನ್ನ ಮಗಳು ಫೋನ ಮೂಲಕ ಹೇಳುತ್ತಿದ್ದಳು. ನಾನು 6 ತಿಂಗಳ ಹಿಂದೆ ಮಗಳ ಮನೆಗೆ ಹೋಗಿ ಅಳಿಯನಿಗೆ ಬೀಗನಿಗೆ ಎಲ್ಲರಿಗೂ ಹೇಳಿ ನನ್ನ ಮಗಳಿಗೆ ನನ್ನ ಮನೆಗೆ ಕರೆದುಕೊಂಡು 6 ತಿಂಗಳ ನನ್ನ ಕಡೆ ಇಟ್ಟಿಕೊಂಡಿದ್ದೆ. 6 ತಿಂಗಳ ನಂತರ ಅಳಿಯ ಬಂದು ನನ್ನ ಹೆಂಡಿತಿಗೆ ಕರೆದುಕೊಂಡು ಹೋಗುತ್ತೇನೆ ಸರಿಯಾಗಿ ಇಟ್ಟಿಕೊಳ್ಳುತ್ತೇನೆ ಎಂದು ದಿನಾಂಕ: 07/01/2016 ರಂದು ವ್ಹಿ ಕೆ ಸಲಗರಕ್ಕೆ ಕರೆದುಕೊಂಡು ಹೋಗಿ 8 ದಿನದಲ್ಲಿ ಎಲ್ಲರು ಕೂಡಿ ನನ್ನ ಮಗಳಿಗೆ ನೇಣು ಹಾಕಿ ಕೊಲೆಮಾಡಿರುತ್ತಾರೆ. ನಾನು ನನ್ನ ಮಗಳ ಲಗ್ನದಲ್ಲಿ ವರದಕ್ಷಿಣೆ 50,000/- ರೂಪಾಯಿ 25 ಗ್ರಾಮ ಬಂಗಾರ ಕೊಟ್ಟಿರುತ್ತೇನೆ. ಅದು ಅಲ್ಲದೇ ನನ್ನ ಮಗನ ಲಗ್ನದಲ್ಲಿ ಅಳಿಯನಿಗೆ 5 ಗ್ರಾಮ ಬಂಗಾರ ಹಾಕಿರುತ್ತೇನೆ, ಇಷ್ಟೆಯಲ್ಲಾ ಕೊಟ್ಟರು ನನ್ನ ಮಗಳಿಗೆ ಬಂಗಾರ ದುಡ್ಡು ತಗೆದುಕೊಂಡು ಬಾ ಎಂದು ಕಿರಕುಳ ಕೊಟ್ಟು ಕೊನೆಗೆ ನೇಣುಹಾಕಿ ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ದಿನಾಂಕ: 15-01-2016 ರಂದು ಬೆಳಗ್ಗೆ 4-30 ಗಂಟೆ ಸುಮಾರಿಗೆ ನನ್ನ ಮಗ ನಿಂಗನಗೌಡ ಇತನು ವಾಕಿಂಗ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದನು. ನಂತರ 6 ಗಂಟೆ ಸುಮಾರಿಗೆ ನಿಂಗನಗೌಢನ ಗೆಳೆಯ ಅನೀಲ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ ಇವನು ಓಡುತ್ತಾ ನಮ್ಮ ಮನೆಗೆ ಬಂದು ಗಾಬರಿಯಲ್ಲಿ ಹೇಳಿದ್ದೇನೆಂದರೆ ನಾನು ಮತ್ತು ನಿಮ್ಮ ಮಗ ನಿಂಗನಗೌಡ ಹಾಗೂ ನಮ್ಮೂರ ನನ್ನ ಗೆಳೆಯರಾದ ದೇವಿಂದ್ರ ಓವೂರ, ನಾಗರಾಜ ಕೊಳಿ , ರವಿ ಹಳ್ಳದ ಮನಿ ರವರೆಲ್ಲರೂ ಕೂಡಿ ಬೆಳಗ್ಗೆ 4-30 ಗಂಟೆ ಸುಮಾರಿಗೆ ವಾಕಿಂಗ ಸಲುವಾಗಿ ನಮ್ಮೂರಿನಿಂದ ಸಿಂದಗಿ ಶಹಾಪೂರ ರಸ್ತೆಯಲ್ಲಿರು ರಿಯಾಜ್ ಡೊಂಗರಗಾಂವ ರವರ ಪೆಟ್ರೊಲ್ ಪಂಪ ಹತ್ತಿರ ಹೋಗಿರುತ್ತೇವೆ ನಂತರ 5-30 ಗಂಟೆ ಸುಮಾರಿಗೆ ಸದರಿ ಪೆಟ್ರೋಲ್ ಹತ್ತಿರ ರಸ್ತೆಯ ಎಡಗಡೆ ನಾವೆಲ್ಲರೂ ನಿಂತಿದ್ದೇವು. ರಸ್ತೆಕಡೆ ನಿಂಗನಗೌಡ ಇವನು ನಿಂತಿದ್ದು ಅದೇ ಸಮಯಕ್ಕೆ ಸಿಂದಗಿ ಕಡೆಯಿಂದ ಕಬ್ಬಿನ ಟ್ರ್ಯಾಕ್ಟರ ಅದರ ಚಾಲಕನು ಅತೀ ವೇಗದಿಂದ ಮತ್ತು ನಿಷ್ಕಾಳಜಿತನದಿಂದ ಬಂದು ಡಿಕ್ಕಿ ಹೊಡೆದನು. ಆಗ ನಿಂಗನಗೌಢ ಆಯಾ ತಪ್ಪಿ ಕೆಳಗೆ ಬಿದ್ದಾಗ ಟ್ರ್ಯಾಕ್ಟರ ಟ್ರ್ಯಾಲಿ ಗಾಲಿಯನ್ನು ಅವನ ತಲೆಯ ಮೇಲಿಂದ ಹಾದು ಹೋಗಿರುತ್ತದೆ. ನಂತರ ಟ್ರ್ಯಾಕ್ಟರ ಚಾಲಕನಿಗೆ ಟ್ರ್ಯಾಕ್ಟರ ನಂಬರ ಕೇಳಲಾಗಿ ಕೆ.ಎ.-32 ಟಿ.ಎ-3693 ಅಂತಾ ಹೇಳಿ ತನ್ನ ಟ್ರ್ಯಾಕ್ಟರ ತೆಗೆದುಕೊಂಡು ಜೋರಾಗಿ ಹೋದನು. ಅಂತಾ ಹೇಳಿದನು ನಂತರ ನಾನು ಮತ್ತು ನನ್ನ ಹೆಂಡತಿ ಗಂಗಾಬಾಯಿ ಮತ್ತು ಅಣ್ಣ ತಮ್ಮಂದಿರಾದ ಗುರುಪ್ಪಗೌಡ ತಂದೆ ಬಸನಗೌಡ ಹಾಗೂ ಸಂಗನಗೌಡ ತಂದೆ ಗೊಲ್ಲಾಳಪ್ಪ ರವರೆಲ್ಲರೂ ಕೂಡಿ ಸ್ಥಳಕ್ಕೆ ಹೋಗಿ ನೋಡಿದೇವು . ಅಲ್ಲಿ ರಸ್ತೆಯ ಎಡಗಡೆ ನನ್ನ  ಮಗ ನಿಂಗನಗೌಡ ಇವನು ಮೃತಪಟ್ಟು ಬಿದ್ದಿದ್ದನು. ನಂತರ ನೋಡಲಾಗಿ ನನ್ನ ಮಗನ ತಲೆಗೆ ಭಾರಿ ರಕ್ತಗಾಯವಾಗಿ ತಲೆ ಪೂರ್ತಿ ಒಡೆದಿರುತ್ತದೆ. ಅಂತಾ ಶ್ರೀ ನಿಲಕಂಠ ತಂದೆ ಗೊಲ್ಲಾಳಪ್ಪ ಪೊಲೀಸ್ ಪಾಟೀಲ್ ಸಾ:ಬಿರಾಳ ಹಿಸ್ಸಾ ತಾ:ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 14-01-2016 ರಂದು ಸಾಯಂಕಾಲ 7-00 ಗಂಟೆರ ಸುಮಾರಿಗೆ ಜೇವರ್ಗಿ- ಶಹಾಪೂರ ಮೇನ್ ರೋಡ ಮುದಬಾಳ (ಬಿ) ಕ್ರಾಸ್ ಸಮೀಪ ರೋಡಿನಲ್ಲಿ ಮೀರಾಪಟೇಲ ತಂದೆ ಚಾಂದಪಟೇಲ ಸಾ: ಬಿಳವಾರ ಈತನು ನಡೆಸುವ ಡಸ್ಟರ್ ಕಾರ ನಂ ಕೆಎ 32-ಎನ್-7191 ನೇದ್ದರಲ್ಲಿ ನಾನು ಮತ್ತು ಸಿದ್ದಣ್ಣಗೌಡ ತಂದೆ ಸಿದ್ದಬಸಪ್ಪಗೌಡ ಕೂಡಲಗಿ, ಚೆನ್ನಪ್ಪ ತಂದೆ ರೇವಣಸಿದ್ದಪ್ಪ ಆನೂರ, ಶೀವನಗೌಡ ತಂದೆ ಪ್ರೇಮಣಗೌಡ ಪಾಟೀಲ ಎಲ್ಲರೂ ಕುಳಿತುಕೊಂಡು ಹೋಗುತ್ತಿದ್ದಾಗ ಮೀರಾ ಪಟೇಲ ಈತನು ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಒಮ್ಮಲೇ ಕಟ್ ಹೊಡೆದು ರೋಡಿನ ಬಲಸೈಡಿನಲ್ಲಿ ಪಲ್ಟಿ ಮಾಡಿದ್ದರಿಂದ ಸಿದ್ದಣ್ಣಗೌಡ ಕೂಡಲಗಿ ಈತನಿಗೆ ಭಾರಿ ಗಾಯಗಳಾಗಿದ್ದರಿಂದ ಅವನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಉಳಿದ ನಮ್ಮೇಲ್ಲರೀಗೆ ಭಾರಿ ಮತ್ತು ಸಾದಾ ಗಾಯಗಳಾಗಿರುತ್ತವೆ ಅಂತಾ ಶ್ರೀ ಬಸವಂತರಾಯ ತಂದೆ ಬಲವಂತರಾಯ ಜ್ಯೋತೆಪ್ಪಗೌಡರ ಸಾ: ಅರಳಗುಂಡಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 11-01-2016 ರಂದು ಅಂದಾಜ ರಾತ್ರಿ 9;00 ಗಂಟೆ ಸುಮಾರಿಗೆ ನಮ್ಮ ತಮ್ಮ ಮಲ್ಲಿನಾಥ  ಇವನು ನಮ್ಮ ಸಂಬಂಧಿಕರಾದ ಭೀಮರಾಯ ಕಲಶೇಟ್ಟಿ ರವರ  ಮೋಟರ ಸೈಕಲ್ ನಂ  ಕೆ.ಎ-32/ಇ.ಎಫ್-1742 ನೇದ್ದನ್ನು ತೆಗೆದುಕೊಂಡು ತನ್ನ ಸಂಗಡ ನಮ್ಮ ಗ್ರಾಮದ ಸಂಗಣ್ಣ ಕಲಶೇಟ್ಟಿ ಇತನಿಗೆ ಕರೆದುಕೊಂಡು ನಮ್ಮ ಹೊಲಕ್ಕೆ ಹೋಗುತ್ತೇನೆ ಅಂತ ಹೇಳಿ ಹೋಗಿರುತ್ತಾನೆ ಹೋದ ಸ್ವಲ್ಪ ಸಮಯದಲ್ಲಿ ನಮ್ಮೂರ ನಿಂಗಣ್ಣ ತಂದೆ ಗೊಲ್ಲಾಳಪ್ಪ ಕಲಶೇಟ್ಟಿ ಇವರು ನನಗೆ ಫೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಾನು ಮತ್ತು ನಮ್ಮೂರ ಪೀರಪ್ಪ ಮಂದೇವಾಲ ಇಬ್ಬರು ಕೂಡಿ ನಮ್ಮ ಮೋಟರ ಸೈಕಲ ಮೇಲೆ ಅಫಜಲಪೂರದಿಂದ ಊರಿಗೆ ಬರುತ್ತಿದ್ದೇವು, ನಮ್ಮೂರ ಶರಣಪ್ಪ ಮಾಂಗ ರವರ ಹೊಲದ ಹತ್ತಿರ ಇದ್ದಾಗ ನಮ್ಮ ಮುಂದೆ ಅದೇ ಸಮಯಕ್ಕೆ ಆನೂರ ಗ್ರಾಮ ಕಡೆಯಿಂದ ಒಂದು ಮೋಟರ ಸೈಕಲ ಬರುತ್ತಿದ್ದು, ಸದರಿ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲ ಅತಿವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಒಮ್ಮೆಲೆ ತಮ್ಮ ಮೋಟಾರ ಸೈಕಲ್ ಸ್ಕಿಡ್ಡಾಗಿ ಅಲ್ಲೆ ಲೈಟಿನ ಕಂಬದ ಹತ್ತಿರ ಜೋರಾಗಿ ಮೋಟಾರ ಸೈಕಲ ಸವಾರ ಹಾಗು ಅದರ ಹಿಂದೆ ಹುಳಿತಿದ್ದವನು ಬಿದ್ದರು  ಆಗ  ನಾನು ಮತ್ತು ನನ್ನೊಂದಿಗೆ ಇದ್ದ ಪೀರಪ್ಪ ಮಂದೇವಾಲ ಇಬ್ಬರು ಕೂಡಿ ಮೋಟರ ಸೈಕಲ್ ಸವಾರನ ಹತ್ತಿರ ಹೋಗಿ ನೋಡಿದಾಗ ಸವಾರನು ನಮ್ಮ ಗ್ರಾಮದ ಸಂಗಣ್ಣ ತಂದೆ ಹಣಮಂತ್ರಾಯ ಕಲಶೇಟ್ಟಿ ಹಾಗೂ ಹಿಂದೆ ಕುಳಿತಿದ್ದವನು  ನಿಮ್ಮ ತಮ್ಮ ಮಲ್ಲಿನಾಥ ಇದ್ದನು, ಇಬ್ಬರಿಗೆ ನಾವು ನೋಡಲಾಗಿ ಸಂಗಣ್ಣ ಇತನಿಗೆ ಸಣ್ಣಪುಟ್ಟ ತರಚಿದ ಗಾಯ ವಾಗಿದ್ದು ಮಲ್ಲಿನಾಥ ಇತನಿಗೆ  ಅಲ್ಲೆ ಇದ್ದ ಲೈಟಿನ ಕಂಬದ ಗೈ ವಾಯರ್ ಕುತ್ತಿಗಿಗೆ ತಗುಲಿ ಗಂಟಲ ಹತ್ತಿರ ಭಾರಿ ಗಾಯವಾಗಿದ್ದು ಹಾಗೂ ತಲೆಗೆ ರಕ್ತಗಾಯ ಮತ್ತು ಮೈಕೈಗೆ ತರಚಿದ ಗಾಯಗಳಾಗಿರುತ್ತವೆ ಸದರಿ ಮೊಟಾರ ಸೈಕಲ್ ನಂಬರ ನೋಡಲಾಗಿ ಕೆಎ-32 ಇಎಫ್ 1742 ಇತ್ತು   ಅಂತಾ ತಿಳಿಸಿದನು. ನಂತರ ನಾನು ಮತ್ತು ನಮ್ಮ ಸಂಬಂಧಿಕರಾದ ಭೀಮರಾಯ ಕಲಶಟ್ಟಿ, ನಮ್ಮ ಅಣ್ಣನಾದ ಬಲಭೀಮ ಬಳೂಂಡಗಿ ರವರೊಂದಿಗೆ ಒಂದು ಖಾಸಗಿ ವಾಹನ ತೆಗೆದುಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮನಿಗೆ ಲೈಟಿನ ಕಂಬದ ಗೈ ವಾಯರ್ ಕುತ್ತಿಗೆಗೆ ತಗುಲಿ ಗಂಟಲ ಹತ್ತಿರ ಭಾರಿ ಗಾಯವಾಗಿದ್ದು ಹಾಗೂ ತಲೆಗೆ ರಕ್ತಗಾಯ ಮತ್ತು ಮೈಕೈಗೆ ತರಚಿದ ಗಾಯಗಳಾಗಿರುತ್ತವೆ ನಂತರ ನಮ್ಮ ತಮ್ಮ ಮಲ್ಲಿನಾಥನಿಗೆ  ಉಪಚಾರ ಕುರಿತು ಕಲಬುರಗಿಯ ಬಸವೇಶ್ವರ  ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ಅಂತಾ  ಶ್ರೀ ಅಶೋಕ ತಂದೆ ಮೇಲಪ್ಪ ಬಳೂಂಡಗಿ ಸಾ||ಆನೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ನಿಂಗಣ್ಣ ತಂದೆ ಭೀಮರಾಯ ಹೊಸ್ಮನಿ ಸಾ|| ಕಲ್ಲಹಂಗರಗಾ ತಾ-ಜೇವರ್ಗಿ ಜಿ-ಕಲಬುರ್ಗಿ ಇವರ ತಂದೆ ತಾಯಿಗೆ ನಾನು ಮತ್ತು ಸಂಗಣ್ಣ ಅಂತಾ ಇಬ್ಬರೂ ಗಂಡು ಮಕ್ಕಳು ಇರುತ್ತೇವೆ. ನಮ್ಮ ತಾಯಿಯವರು ಕಳೆದ 5 ವರ್ಷದ ಹಿಂದೆ ತೀರಿಕೊಂಡಿದ್ದು ಇರುತ್ತದೆ. ನಮ್ಮ ತಂದೆಯವರ ಹೆಸರಿನಿಂದ ನೆಲೋಗಿ ಸೀಮಾಂತರದಲ್ಲಿ ಜಮೀನು ಸರ್ವೇ ನಂ. 164 ವಿಸ್ತಿರ್ಣ 4 ಎಕರೆ 14 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ಈ ವರ್ಷ ತೋಗರಿ ಬೆಳೆ ಹಾಕಿದ್ದು ಇರುತ್ತದೆ. ತೊಗರೆ ಬೆಳೆ ಚನ್ನಾಗಿ ಬರೆದೆ ನಮ್ಮ ತಂದೆಯವರು ಕೃಷಿಗಾಗಿ ಹಾಗೂ ಸಂಸಾರದ ಅಡಚಣೆಗಾಗಿ ಊರ ಜನರ ಹತ್ತಿರ ಕೈಗಡದ ಹಾಗೆ ತಂದಿರುವ 5,00,000=00ನ ರೂಪಾಯಿ ಹೇಗೆ ತೀರಿಸಬೇಕು ಅಂತಾ ಯಾವಾಗಲು ಚಿಂತೆ ಮಾಡುತ್ತಾ ಕುಳಿತುಕೊಳ್ಳುತಿದ್ದರು, ನಾನು ನಮ್ಮ ಅಜ್ಜಿ ಭೀಮಬಾಯಿ, ನನ್ನ ಅಣ್ಣ ನಿಂಗಣ್ಣ ತಂದೆ ಬಸಣ್ಣ ಎಲ್ಲರೂ ನಮ್ಮ ತಂದೆಯವರಿಗೆ ತಿಳಿ ಹೇಳಿ ಮುಂದಿನ ವರ್ಷ ತಿರಿಸಿದರಾಯಿತು ಅಂತಾ ಹೇಳಿದ್ದೆವು.  ಆದರು ನಮ್ಮ ತಂದೆಯವರು ಮಾಡಿದ ಸಾಲ ಹೇಗೆ ತೀರಿಸಬೇಕು ಅಂತಾ ಚಿಂತಿಸುತಿದ್ದರು. ದಿನಾಂಕ: 14/01/2016 ರಂದು ರಾತ್ರಿ 10-00 ಪಿ.ಎಮ್ ಕ್ಕೆ ಎಂದಿ ನಂತೆ ನಾನು ನನ್ನ ತಂದೆ ಭೀಮರಾಯ, ಅಜ್ಜಿ ಭೀಮಬಾಯಿ ನಮ್ಮ ತಮ್ಮ ಸಂಗಣ್ಣ ಎಲ್ಲರೂ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡೆವು ನಮ್ಮ ತಂದೆಯವರು ಊಟ ಸರಿಯಾಗಿ ಮಾಡದೆ ಹಾಗೆ ಮಲಗಿಕೊಂಡಿದ್ದರು, ದಿನಾಂಕ: 15-01-2016 ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಎದ್ದು ನೋಡಲಾಗಿ ನಮ್ಮ ತಂದೆಯವರ ಬಾಯಿಯಿಂದ ನೊರೆ ಬರುತ್ತಿತ್ತು. ಆಗ ನಾನು ಗಾಬರಿಯಾಗಿ ಚಿರಾಡುತಿದ್ದಾಗ ನಮ್ಮ ಅಜ್ಜಿ ಮತ್ತು ನಮ್ಮ ತಮ್ಮ ಸಂಗಣ್ಣ ಎಲ್ಲರೂ ಬಂದು ನೋಡುವಷ್ಟರಲ್ಲಿ ನಮ್ಮ ತಂದೆ ಭೀಮರಾಯ ತೀರಿಕೊಂಡಿದ್ದರು. ನಮ್ಮ ತಂದೆಯವರು ಕೃಷಿಗಾಗಿ ಮತ್ತು ಸಂಸಾರದ ಅಡಚಣೆಗಾಗಿ ಊರ ಮನೆಯವರ ಹತ್ತಿರ ಮಾಡಿದ 5,00,000=00 ರೂಪಾಯಿ ಸಾಲದ, ಈ ವರ್ಷ ಮಳೆ ಬರದೆ ಬೆಳೆ ಬೆಳೆಯದೆ ಸಾಲದ ಹಣ್ಣ ಹೇಗೆ ತೀರಿಸಬೇಕು ಅಂತಾ ಮಾಡಿದ ಸಾಲವನ್ನು ತೀರಿಸಲಾಗದೆ ಮನಃನೊಂದು ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣಗಳು:
ರೇವೂರ ಠಾಣೆ : ಶ್ರೀಮತಿ  ಶಶಿಕಲಾ  ಗಂಡ ಆದಪ್ಪಗೌಡ  ಹಿರಿಗೊಡ  ಸಾ:ಭೈರಾಮಡಗಿ ಇವರನ್ನು. ನನ್ನ ತಂದೆಯಾದ ಬಸವರಾಜ ಮುಗಳಿ ರವರು ನನಗೆ ನಮ್ಮ ಗ್ರಾಮದ ನನ್ನ ಸೊದರತ್ತೆಯ ಮಗನಾದ ಆದಪ್ಪಗೌಡ ತಂದೆ ದುಂಡಪ್ಪ ಹಿರಿಗೊಡ ರವರೊಂದಿಗೆ 5 ವರ್ಷಗಳ ಹಿಂದೆ ನಮ್ಮ ಸಂಪ್ರದಾಯದಂತೆ 2 ವರೆ ತೋಲೆ ಬಂಗಾರ ಮತ್ತು 21 ಸಾವಿರ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ.ಮದುವೆಯಾದ 3 ವರ್ಷಗಳವರೆಗೆ ನನ್ನ ಗಂಡ ಹಾಗೂ ಗಂಡನ ಮನೆಯವರು  ಚನ್ನಾಗಿ ನೊಡಿಕೊಂಡು ನಂತರ ನನ್ನ ಗಂಡ ಹಾಗೂ ಅತ್ತೆಯಾದ ಕಸ್ತೂರಿ ಬಾಯಿ ಮತ್ತು ಮಾವನಾದ ದುಂಡಪ್ಪ ರವರು ನಿಮ್ಮಪ್ಪನ ಮನೆಯಿಂದ 50 ಸಾವಿರ ರೂಪಾಯಿ ಹುಂಡಾ ತೆಗೆದುಕೊಂಡು ಬಾ ಅಂತಾ ಹೇಳಿ  ನನಗೆ ಹೊಡೆಬಡೆ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾರೆ. ಆದರೆ ಇವರು ಇಂದು ನಾಳೆ ಸರಿ ಹೋಗಬಹುದೆಂದು ನಾನು ಕೂಡಾ ತಾಳಿಕೊಂಡು ಬಂದಿರುತ್ತೇನೆ. ಈ ವಿಷಯ ನಮ್ಮ   ತಂದೆ ತಾಯಿಯವರಿಗೆ ಗೋತ್ತಾಗಿ  ಅವರ  ನನ್ನ ಗಂಡನಿಗೆ ಮತ್ತು  ಅತ್ತೆ ಮಾವರಿಗೆ  ನಿಮಗೆ ಗೊತ್ತಿದೆ  ನಾವು  ಬಡವರಿದ್ದೆವು ಮೇಲಾಗಿ ಸಂಧಿಕರಿದ್ದೇವು ಈ ರೀತಿ ನಮ್ಮ ಮಗಳಿಗೆ ಕಿರುಕುಳ  ನೀಡಬೇಡಿ ಅಂತಾ ಹೇಳಿದಾಗ ಅವರ ನಮ್ಮ ತಂದೆ ಯವರಿಗೆ ವರದಕ್ಷಿಣೆ ಕೊಟ್ಟು ಆ ಮೇಲೆ ನೀವು ನಮ್ಮ ಮನೆಗೆ ಬನ್ನಿ ಇಲ್ಲವಾದರೆ ನನ್ನ ಮಗನಿಗೆ  ಬೇರೆ  ಮದುವೆ ಮಾಡುತ್ತೇವೆ ಅಂತಾ ಹೇಳುತ್ತಾ  ಬಂದಿರುತ್ತಾರೆ. ದಿನಾಂಕ:13-01-2016 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನು ನನಗೆ  ಏ ರಂಡಿ ನಿಮ್ಮಪ್ಪನ ಮನೆಯಿಂದ 50 ಸಾವಿರ ರೂಪಾಯಿ ವರದಕ್ಷಿಣೆ ತಗೆದುಕೊಂಡು ಬಾ ಅಂತಾ ಹೇಳಿದರು ಕೂಡಾ ಮನೆಯಲ್ಲಿಯೇ ಇದ್ದಿಯಾ ಅಂತಾ ಬೈದು ಕೈಯಿಂದ  ನನ್ನ ಕಪಾಳಕ್ಕೆ ಹೊಡೆದನು ಆಗ ನನ್ನ ಅತ್ತೆಯು ರಂಡಿ ನಿಮ್ಮಪ್ಪನ  ಮನೆಗೆ ಹೋಗು ಹಣ ತರುವುದಾದರೆ ಈ ಮನೆಗೆ ಬಾ ಅಂತಾ ಅಂದು ನನ್ನ  ತಲೆಯ ಮೇಲಿನ ಕೂದಲು ಹಿಡಿದು ಎಳೆದು  ಮನೆಯಿಂದ ಹೊರೆಗೆ ಹಾಕಿದಳು ಆಗ ನನ್ನ ಭಾವನಾದ ಹಣಮಂತನು  ನನಗೆ ಈ ರಂಡಿಗೆ ಎಷ್ಟು ಸಲ ಹೇಳಿದರು ಕೇಳುತ್ತಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈದನು ಆಗ ನನ್ನ ಮಾವನು ನನಗೆ  ಏ ರಂಡಿ ನಿನ್ನ ಮನೆಯಿಂದ 50 ಸಾವಿರ ರೂಪಾಯಿ ತರದೆ ಮನೆಗೆ ಬರಬೇಡ ಬಂದರೆ ನಿನಗೆ  ಜೀವ ಸಹಿತ ಬಿಡುವದಿಲ್ಲ ಖಲಾಸ  ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಭಯ ಹಾಕಿದನು  ಆಗ ನಮ್ಮ ಸಂಬಂದಿಕರಾದ ದತ್ತಪ್ಪಾ ತಂದೆ ಮಲಕಣ್ಣಾ   ಮುಗಳಿ  ಮತ್ತು  ಬಸಮ್ಮ ಗಂಡ ಲೊಕಪ್ಪಾ ಮುಗಳಿ ಹಾಗೂ ನಮ್ಮ ಗ್ರಾಮದವರಾದ ಬಸವಂತರಾಯ ತಂದೆ ಮಲಕಣ್ಣ ಮುಗಳಿ ರವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ನಾನು ನೇರವಾಗಿ ನನ್ನ ತಂದೆಯ ಮನೆಗೆ ಹೋಗಿ ಸದರಿ ವಿಷಯವನ್ನು ನನ್ನ ತಂದೆ ಹಾಗೂ  ತಾಯಿಯವರಿಗೆ ತಿಳಿಸಿ ಅವರೊಂದಿಗೆ ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡುತ್ತಿದ್ದೆನೆ. ನನಗೆ ಯಾವ ಗಾಯ ವಗೈರೆ  ಯಾಗದ  ಕಾರಣ ಆಸ್ಪತ್ರೆಗೆ ತೋರಿಸುವ ಅವಶ್ಯಕತೆ  ಇರುವುದಿಲ್ಲಾ, ಕಾರಣ ವರದಕ್ಷಿಣೆ ಸಲುವಾಗಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ  ಮಾನಸಿಕವಾಗಿ  ಮತ್ತು ದೈಹಿಕವಾಗಿ   ಕಿರುಕುಳ  ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಅನಿತಾ ಗಂಡ ಅಂಭಾದಾಸ ಗಡೇಕರ ಸಾ:ಅಣಕಲ್‌ ತಾ:ಚಿತ್ತಾಪುರ ಜಿ:ಕಲಬುರಗಿ ಹಾ:ವ:ಮಾಣಿಕೇಶ್ವರಿ ಕಾಲೋನಿ ಇವರ ಮದುವೆ ಅಂಭಾದಾಸ ತಂದೆ ದಯಾನಂದ ಸಾ:ಅಣಕಲ ತಾ:ಚಿತ್ತಾಪುರ ಜಿ:ಕಲಬುರಗಿ ಇವರ ಜೊತೆ 2ನೇ ವಿವಾಹ ವಾಗಿರುತ್ತದೆ. ನನ್ನ ವಿವಾಹವಾಗುವದಕ್ಕಿಂತ ಮುಂಚೆ ನನ್ನ ಅಕ್ಕಳಾದ ಸುನೀತಾ ಇವಳ ಮದುವೆ ಕೂಡಾ ಅಂಭಾದಾಸ ಜೊತೆ 20/05/2005 ರಲ್ಲಿ ನಮ್ಮ ಹಿರಿಯರ ಸಮ್ಮುಖದಲ್ಲಿಯಾಗಿರುತ್ತದೆ. ಸುಮಾರು 5 ವರ್ಷಗಳ ಕಾಲ ಅಣಕಲ್‌‌, ಗುರುಮೀಠಕಲ್‌, ಹಾಗೂ ಬೆಂಗಳೂರಿನಲ್ಲಿ ಇರುತ್ತಿದ್ದರು ನನ್ನ ಅಕ್ಕಳಿಗೆ 2 ಮಕ್ಕಳು ಆಗಿರುತ್ತವೆ. ಒಂದು ಗಂಡು ಒಂದು ಹೆಣ್ಣು ದಿನಾಂಕ:26/01/2011 ರಂದು ಬೆಂಗಳೂರಿನಲ್ಲಿ ಅಂಭಾದಾಸನು ನನ್ನ ಅಕ್ಕನಿಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿರುತ್ತಾನೆ. ಉಪಚಾರ ಕುರಿತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲು ಮಾಡಿ ದಿನಾಂಕ:30/11/2011 ರಂದು ನನ್ನ ಅಕ್ಕ ಮೃತ ಪಟ್ಟಿರುತ್ತಾಳೆ. ನನ್ನ ಅಕ್ಕನ ಶವವನ್ನು ಅಣಕಲ್‌ ಗ್ರಾಮಕ್ಕೆ ತಂದು ಶವ ಸಂಸ್ಕಾರ ಮಾಡಿರುತ್ತಾರೆ. ನನ್ನ ಭಾವ ಅಂಭಾದಾಸ ನನ್ನ ತಂದೆ-ತಾಯಿಗೆ ಹೇಳಿದ್ದೆನೆಂದರೆ ನನ್ನ ಮಕ್ಕಳಿಗೆ ನೋಡಿಕೊಳ್ಳುವರು ಯಾರು ಇಲ್ಲಾ ಅದಕ್ಕಾಗಿ ನಿಮ್ಮ ಎರಡನೇ ಮಗಳಾಸ ಅನೀತಾಳ ಜೊತೆಗೆ ನನಗೆ ಎರಡನೇ ಮದುವೆ ಮಾಡಿ ಎಂದು ಮನ ಒಲಿಸಿದಾಗ ನನ್ನ ತಂದೆ-ತಾಯಿಯವರು ನಿನ್ನ ಅಕ್ಕನ ಮಕ್ಕಳನ್ನು ನೋಡುವರು ಯಾರು ಇಲ್ಲಾ ಅಂತಾ ಹೇಳಿ ಆತನ ಜೊತೆಯಲ್ಲಿ ದಿನಾಂಕ:10/09/2012 ರಂದು ಮದುವೆ ಮಾಡಿಕೊಟ್ಟಿರುತ್ತಾರೆ. ನನ್ನ ಗಂಡ ಅಂಭಾದಾಸ ಈತನು ದಿನಾಲು ಕುಡಿದು ಬಂದು ಏ ರಂಡಿ ಮಗಳೆ ಭೋಸಡಿ ಮಗಳೆ ನೀನು ನಿನ್ನ ತವರು ಮನೆಯಿಂದ 3 ಲಕ್ಷ ರೂಪಾಯಿ ತರದೆ ಇದ್ದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಸಾಕಷ್ಟು ಸಾರಿ ಭಯಾ ಹಾಕಿದ್ದಾನೆ. ಅಲ್ಲದೆ ನೀನು ತವರು ಮನೆಯಿಂದ 3 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಕಿರಿಕಿರಿ ಮಾಡುತ್ತಿದ್ದಾನೆ. ಸುಮಾರು 2 ತಿಂಗಳ ಹಿಂದೆ ನಾನು ನನ್ನ ಗಂಡನಾದ ಅಂಭಾದಾಸ ನಮ್ಮ ಊರಾದ ಅಣಕಲ ಗ್ರಾಮಕ್ಕೆ ಹೋಗಿದ್ದು ನನ್ನ ಮಾವನಾದ ದಯಾನಂದ ತಂದೆ ಜಂಪಣ್ಣಾ, ನನ್ನ ಅತ್ತೆಯಾದ ಇಟಾಬಾಯಿ ಗಂಡ ದಯಾನಂದ ಇಬ್ಬರೂ ಕೂಡಿಕೊಂಡು ಏ ರಂಡಿ ಮಗಳೆ ಸೂಳೆ ಮಗಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನೀನು ತವರು ಮನೆಗೆ ಹೋಗಿ ಬೆಳ್ಳಿ ಮತ್ತು ಬಂಗಾರ ತರದೆ ಇದ್ದರೆ ನಿನಗೆ ನನ್ನ ಮಗನ ಜೊತೆ ಸಂಸಾಗ ಮಾಡಲು ಬಿಡುವದಿಲ್ಲಾ ಅಂತಾ ಬೈಯುತ್ತಿದ್ದಾರೆ. ಮತ್ತು ನನ್ನ ಭಾವನಾದ ರಾಮಕೃಷ್ಣ ತಂದೆ ದಯಾನಂದ, ಆತನ ಹೆಂಡತಿ ಯಮುನಾ ಗಂಡ ರಾಮಕೃಷ್ಣ ಇವರು ಕೂಡಾ ಸೂಳಿ ರಂಡಿ ಎಂದು ಬೈದು ಇವಳಿಗೆ ಮನೆಯಲ್ಲಿ ಊಟ ಕೊಡಬೇಡಿರಿ ಏನಾದರೂ ದುಡ್ಡು ತರದೆ ಹೋದರೆ ನಿನ್ನನ್ನು ಸಾಯಿಸಿ ಬಿಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ನಾನು ದೌರ್ಜನ್ಯ ಹಾಗೂ ದಬ್ಬಾಳಿಕೆಯನ್ನು ತಾಳುತ್ತಾ ಸಾಕಷ್ಟು ಬಾರಿ ಪೊಲೀಸರಿಗೆ ದೂರು ನೀಡಬೇಕೆಂದಿದ್ದೆ ಆದರೆ ನನ್ನ ಅಕ್ಕನ ಮಕ್ಕಳ ಮಾರಿ ನೋಡಿ ಸುಮ್ಮನೆ ಆಗಿದ್ದೇನೆ. ನಾವು ನಮ್ಮ ತಂದೆಯವರ ಸ್ವಂತ ಮನೆಯಾದ ಕಲಬುರಗಿ ನಗರದ ಬ್ರಹ್ಮಪೂರ ಬಡವಾಣೆಯ ಮಾಣಿಕೇಶ್ವರಿ ಕಾಲೋನಿಯಲ್ಲಿ ವಾಸವಾಗಿರುತ್ತೇವೆ. ಪ್ರತಿನಿತ್ಯ ನನಗೆ ನಿಮ್ಮ ಅಪ್ಪನಿಗೆ ಹೇಳಿ ಬೈಕ ಖರೀದಿಸಿ ಕೊಡಿಸು ಮತ್ತು ಕಲಬುರಗಿಯಲ್ಲಿ ನಿಮ್ಮ ತಂದೆಯವರ ಹೆಸರಿಗೆ ಇರುವ ಮನೆಯನ್ನು ನನ್ನ ಹೆಸರಿಗೆ ಮಾಡಿಸಿಕೊಡು ಅಂತಾ ಪ್ರತಿನಿತ್ಯ ಮಾನಸಿಕ ತೊಂದರೆ ಕೊಡುತ್ತಿದ್ದಾನೆ ಈ ಘಟನೆಯು ನಮ್ಮ ಪಕ್ಕದ ನೆರೆಹೊರೆಯವರಾದ ಆನಂದ ಹಾಗೂ ಅರ್ಚನಾ ಶಿವಶರಣಪ್ಪಾ ಇವರು ನೋಡಿರುತ್ತಾರೆ. ದಿನಾಂಕ:09/01/2016 ರಂದು ನಾನು ನನ್ನ ಗಂಡನ ಅನುಮತಿ ಪಡೆದು ಹೊಟೇಲನಲ್ಲಿ ಕೆಲಸ ಮಾಡುತ್ತಿರುವಾಗ 10.00 ಗಂಟೆಗೆ ನನ್ನ ಗಂಡ ಕುಡಿದು ಬಂದು ನನಗೆ ಹೊಡೆಬಡೆ ಮಾಡಿರುತ್ತಾನೆ. ಮತ್ತು ಹೊಟೇಲನಿಂದ ಮನೆಯವರೆಗೆ ಹೊಡೆಬಡೆ ಮಾಡುತ್ತಾ ಕರೆದುಕೊಂಡು ಹೋಗಿರುತ್ತಾನೆ. ನಾನು ಈ ಬಗ್ಗೆ ನನ್ನ ಅಣ್ಣನಾದ ಮಾಧವ ಇವರಿಗೆ ತಿಳಿಸಿದಾಗ ನನ್ನ ಗಂಡನು ಕಲಬುರಗಿಗೆ ಬಂದಿರುತ್ತಾನೆ. ಮತ್ತು ನನಗೆ ನನ್ನ ಗಂಡ ಮನೆಯ ಒಳಗೆ ಕರೆದುಕೊಂಡು ಹೋಗಿ ಹೊಟ್ಟೆಗೆ ಹಾಗೂ ಬೆನ್ನಿಗೆ ಹೊಡೆದಿರುತ್ತಾನೆ. ಮತ್ತು ಸುಮಾರು ಒಂದು ಗಂಟೆಗಳ ಕಾಲ ಹೀಗೆ ಹೊಡೆಯುತ್ತಾ ನನ್ನ ಕುತ್ತಿಗೆ ಹಿಡಿದು ಹಿಚುಕಿ ಸಾಯಿಸುವ ಸಂದರ್ಭದಲ್ಲಿ ನಾನು ನನ್ನ ಕೈಯಿಂದ ಆತನ ಮುಖಕ್ಕೆ ಉಗುರಿನಿಂದ ಚಿವರಿ ಬಿಡಿಸಿಕೊಂಡು ಹೊರಗೆ ಹೋಗುವ ಸಂದರ್ಭದಲ್ಲಿ ಮತ್ತೆ ನನಗೆ ಹಿಡಿದು ಒಳಗೆ ಕರೆದುಕೊಂಡು ಹೋಗಿ ಸೀಮೆ ಎಣ್ಣೆ ಡಬ್ಬಿ ತೆಗೆದುಕೊಂಡು ನನ್ನ ಮೈಮೇಲೆ ಸುರಿದಿರುತ್ತಾನೆ. ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವಾಗ ಹೀಗೆ ನಿನ್ನ ಅಕ್ಕನಿಗೆ ಇದೆ ರೀತಿ ಬೆಂಕಿ ಹಚ್ಚಿ ಸಾಯಿಸಿರುತ್ತೇನೆ ನಿನಗೂ ಕೂಡಾ ಇದೆ ರೀತಿ ಬೆಂಕಿ ಹಚ್ಚಿ ಸಾಯಿಸುತ್ತೇನೆ ಅಂತಾ ಹೇಳಿದಾಗ ನಾನು ಕೂಡಲೆ ಆತನ ಕೈಯಿಂದ ಬಿಡಿಸಿಕೊಂಡು ಓಡುತ್ತಿರುವಾಗ ನಮ್ಮ ಅಣ್ಣ ಮಾಧವ ಬಿಡಿಸಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಠಾಣೆ : ಶ್ರೀಮತಿ ಖೈರುನ್ನಿಸಾ ಗಂಡ ಮಹ್ಮದ ಹುಸೇನ ಸಾ:ಗವಂಡಿ ಬೈಗನ್ ವಾಡಿ ಪ್ಲಾಟ ನಂ:14 ಡಿ3 ಹುಸೇನ ಗೋರಿಯಾ ರೋಡ ನಂ:10 ಬಾಂಬೆ ಮಹಾರಾಷ್ಟ್ರ ಹಾ:ವ: ಐಲಿಯಾ ಮಜೀದ ಹತ್ತಿರ ಸಂತ್ರಾಸವಾಡಿ ಕಲಬುರಗಿ ಇವರು ಸುಮಾರು 6 ವರ್ಷಗಳ ಹಿಂದೆ ಮಹ್ಮದ ಹುಸೇನ ಒಬ್ಬರಿಗೊಬ್ಬರೂ ಪ್ರೀತಿಸಿ ದಿನಾಂಕ 19-06-2003 ರಂದು ಖಾಜಿ ಹತ್ತಿರ ಬಾಂಬೆಯಲ್ಲಿ ನಮ್ಮ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿರುತ್ತೇವೆ. ಮದುವೆಯಾದ ಸುಮಾರು 15 ದಿವಸಗಳ ವರೆಗೆ ನನ್ನ ಗಂಡ ನನ್ನೊಂದಿಗೆ ಚೆನ್ನಾಗಿದ್ದು, ತದನಂತರ ನನ್ನ ಗಂಡ ಮಹ್ಮದ ಹುಸೇನ ಇತನು ನನಗೆ ನಾನು ದುಡ್ಡಿನ ಸಲುವಾಗಿ ನಿನಗೆ ಮದುವೆ ಮಾಡಿಕೊಂಡಿರುತ್ತೇನೆ ನಿನ್ನ ತವರು ಮನೆಯಿಂದ ನನಗೆ 2 ಲಕ್ಷ ರೂಪಾಯಿ ಹಣ ತಂದು ಕೊಡು ಅಂತಾ ಜಗಳ ತೆಗೆದು ಹೊಡೆ ಬಡೆ ಮಾಡಲು ಪ್ರಾರಂಭಿಸಿದನು. ಮತ್ತು ನನಗೆ ಬೇರೆಯವರ ಮನೆಯಲ್ಲಿ  ಬಟ್ಟೆ, ಬಾಂಡೆ ಮಾಡುವ ಕೆಲಸಕ್ಕೆ ಹಚ್ಚಿ ನಾನು ದುಡಿದ ಹಣವೆಲ್ಲಾ ತಾನೇ ತೆಗೆದುಕೊಳ್ಳುತ್ತಿದ್ದನು. ಮತ್ತು ನನ್ನ ಸವತಿ ರಿಹಾನಾ ಹಾಗೂ ಅವಳ ತಮ್ಮ ಮೈನು , ನಾದಿನಿ ಆಶಾ ಇವರು ಕೂಡ ನನಗೆ ಅವಾಚ್ಯ ಶಬ್ದಗಳಿಂದ ಬೈದು ಈ ಮನೆಯಲ್ಲಿ ಇರಬೇಡ ಅಂತಾ ಬೈಯುತ್ತಿದ್ದರು. ಹಾಗೂ ನನ್ನ ಗಂಡ ಮಹ್ಮದ ಹುಸೇನ ಇತನು ನನಗೆ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದನು. ದಿನಾಂಕ 30-09-2015 ರಂದು ನನಗೆ ಹೊಡೆ ಬಡೆ ಮಾಡಿ ನನ್ನ ತವರು ಮನೆಯಾದ ಕಲಬುರಗಿಯ ಸಂತ್ರಾಸವಾಡಿಗೆ ತಂದು ಬಿಟ್ಟು ಹೋದನು. ದಿನಾಂಕ 10-01-2016 ರಂದು 7-00 ಪಿ.ಎಮ್ ಕ್ಕೆ ನನ್ನ ಗಂಡನಾದ ಮಹ್ಮದ ಹುಸೇನ ಇತನು ಸಂತ್ರಾಸವಾಡಿಯ ನನ್ನ ತವರು ಮನೆಗೆ ಬಂದು ರಂಡಿ ನೀನು ಇಲ್ಲೇ ಇರು ನನ್ನ ಹತ್ತಿರ ಬರಬೇಡ ನೀನು 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಂದರೆ ಮಾತ್ರ ನಿನಗೆ ಕರೆದುಕೊಂಡು ಹೋಗಿ ಬೇರೆ ಮನೆ ಮಾಡಿ ಇಡುತ್ತೇನೆ. ಬರಿಗೈಲ್ಲೇ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಹೊಡೆ ಬಡೆ ಮಾಡಿರುತ್ತಾನೆ.ಕಾರಣ ಮದುವೆಯಾದಾಗಿನಿಂದ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ಜೀವ ಬೆದರಿಕೆ ಹಾಕಿದ ನನ್ನ ಗಂಡ ಹಾಗೂ ನನ್ನ ಸವತಿ ರಿಹಾನಾ ಹಾಗೂ ಅವಳ ತಮ್ಮ ಮೈನು , ನಾದಿನಿ ಆಶಾ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಪ್ರಭು ತಂದೆ ಶೇಖಪ್ಪ ನಾಯಕೋಡಿ ಸಾ : ಮೈನಾಳ ತಾ/ಜಿ ಕಲಬುರಗಿ ಇವರ ಅಕ್ಕ ಗಂಗೂಬಾಯಿ ಗಂಡ ಶರಣಪ್ಪ ಜಮಾದಾರ ಸಾ : ಕಿರಸಾವಳಗಿ ತಾ : ಅಫಜಲಪುರ ಇವಳ ಮಗನಾದ ಮೌಲಾ ತಂದೆ ಶರಣಪ್ಪ ಜಮಾದಾರ ಇತನು ಆಗಾಗ ನಮ್ಮ ಮನೆಗೆ ಬಂದು ಹೋಗುವದು ಮಾಡುತ್ತಿದ್ದು ಎಂದಿನಂತೆ ನಿನ್ನೆ ದಿನಾಂಕ 13/1/2016 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದಿದ್ದು ತನಗೆ ಸಾಲವಾಗಿದೆ 40,000/- ರೂ ಹಣ ಕೊಡಿರಿ ಅಂತಾ ಕೇಳಿದ್ದು ಅದಕ್ಕೆ ನಾವಿಇಬ್ಬರು ನಮ್ಮ ಹತ್ತಿರ ಹಣ ಇಲ್ಲ ಎಲ್ಲಿಂದ ಕೊಡಣಾ ಅಂತಾ ಅಂದಿದ್ದು ಅದರಿಂದ ಅವನು ಇದೇ ವಿಷಯವಾಗಿ ಫಿರ್ಯಾದಿ ಹಾಗು ಫಿರ್ಯಾದಿ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ರಾತ್ರಿ ಅವರ ಮನೆಯಲ್ಲಿಯೇ ಊಟ ಮಾಡಿಕೊಂಡು ಮಲಗಿಕೊಂಡಿದ್ದು ದಿನಾಂಕ 14/1/2016 ರಂದು ರಾತ್ರಿ 3-00 ಎಎಂ ಸುಮಾರಿಗೆ ಸದರಿ ಮೌಲಾ ಇತನು ಅಲ್ಲಿಯೇ ಮನೆಯಲ್ಲಿ ಇಟ್ಟಿರುವ ಕಬ್ಬು ಕತ್ತರಿಸುವ ಕೊಯಿತಾ ತೆಗೆದುಕೊಂಡು ಮಲಗಿಕೊಂಡಿರುವ ಫಿರ್ಯಾದಿ ಹೆಂಡತಿಯ ಕುತ್ತಿಗೆಯ ಎಡ ಭಾಗದಲ್ಲಿ ಮತ್ತು ತಲೆಗೆ ಕೊಯಿತಾದಿಂದ ಹೊಡೆದು ರಕ್ತಗಾಯಗೊಳಿಸಿದ್ದು ತನ್ನ ಹೆಂಡತಿ ಚಿರಾಡುವದುನ್ನು ಕೇಳಿ  ಎಚ್ಚರಗೊಂಡು ಫಿರ್ಯಾದಿಗೆ ಅವನು ನೀವು ಹಣ ಕೊಡು ಅಂತಾ ಕೊಟ್ಟಿರುವದಿಲ್ಲ ಭೋಸಡಿ ಮಕ್ಕಳೆ ಇಂದು ನಿಮಗೆ ಖಲಾಸ ಮಾಡುತ್ತೇನೆ ಅಂತಾ ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿಯ ಎಡಗೈ ಮುಂಗೈ ಹತ್ತಿರ ಹೊಡೆದು ರಕ್ತಗಾಯಗೊಳಿಸಿದ್ದು ಆಗ ಈ ಇಬ್ಬರು ಗಂಡ ಹೆಂಡತಿ ಚಿರಾಡುತ್ತಿರುವಾಗ ಅಲ್ಲಿಯೇ ಮಲಗಿಕೊಂಡಿರುವ ಇವರ ಮಗ 6 ವರ್ಷ ಭೂತಾಳಿ ಇತನಿಗೆ ಮೌಲಾ ಇತನು ಅದೇ ಕೊಯಿತಾದಿಂದ ಕುತ್ತಿಗೆ ಬಲಬಾಗದಲ್ಲಿ ಮತ್ತು ತಲೆಗೆ ಹೆಡಕಿಗೆ ಬಲವಾಗಿ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು ಆಗ ಇವರು ಚಿರಾಡುವದನ್ನು ನೋಡಿ ಕೇಳಿ ಪಕ್ಕದ ಮನೆಯವರು ಓಡಿ ಬಂದಾಗ ಮೌಲಾ ಇತನು ಓಡಿ ಹೋಗಿರುತ್ತಾನೆ. ಈ ಮೂರು ಜನ ಗಾಯಾಳುದಾರರನ್ನು ಚಿಕಿತ್ಸೆಗಾಗಿ ಕಲಬುರಗಿಗೆ ತರುವಾಗ ಮಾರ್ಗ ಮದ್ಯದಲ್ಲಿ ಭೂತಾಳಿ ಇತನು ಮೃತ ಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 January 2016

Kalaburagi District Reported Crimes

 ಕೊಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ನಾಗಪ್ಪ ತಂದೆ ಶಿವರಾಯ ಕುಪನೂರು ಸಾಃ ಹೆಬ್ಬಾಳ ಚಿಂಚೋಳಿ ತಾಃ ಚಿತಾಪೂರ್ ಇವರ ತಂಗಿಯ ಗಂಡನಾದ ಸಾಯಿಬಣ್ಣ ಈತನಿಗೆ ಆತನ ಹೆಂಡತಿಯಾದ ನೀಲಮ್ಮ ಇವಳು ಯಾವಾಗಲೂ ಕಿರಿಕಿರಿ ಕೊಡುತ್ತ ಜಗಳ ಮಾಡುತ್ತಿದ್ದು, ಇದರಿಂದ ಸಾಯಿಬಣ್ಣ ಈತನು ತುಂಬಾ ನೊಂದಿದ್ದು, ನೆಮ್ಮದಿ ಇಲ್ಲದಂತಾಗಿದ್ದರಿಂದ ಆರೋಪಿತನಾದ ಸಾಯಿಬಣ್ಣ ಈತನು ದಿನಾಂಕಃ 12/01/2016 ರಂದು 1.00 ಎಎಂ ಕ್ಕೆ ತನ್ನ ವಾಸದ ಮನೆಯಾದ ಬಸವೇಶ್ವರ ಕಾಲೋನಿಯಲ್ಲಿ  ತನ್ನ ಹೆಂಡತಿಯಾದ ನೀಲಮ್ಮ ಇವಳಿಗೆ ಚಾಕುವಿನಿಂದ ಕುತ್ತಿಗೆ ಕೊಯ್ದು ನಂತರ ಕತ್ತು ಹಿಸುಕಿ ಕೊಲೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅತ್ಯಾಚಾರ ಮಾಡಿದ ಪ್ರಕರಣ :
ಮುಧೋಳ ಠಾಣೆ : ಕುಮಾರಿ ವಯಾ; 14 ವರ್ಷ ಇವರ ಅಣ್ಣ ಬಾಲು ಇತನ ಗೇಳೆಯನಾದ ನಮ್ಮ ತಾಂಡಾದ ಶ್ರಾವಣಕುಮಾರ ತಂದೆ ಹುನ್ಯಾನಾಯಕ ಚವ್ಹಾಣ ಇತನು ಆಗಾಗ ನಮ್ಮ ಅಣ್ಣನ ಹತ್ತಿರ ಮಾತಾಡಲು ನಮ್ಮ ಮನೆಗೆ ಬರುತಿದ್ದನು ನನ್ನೋಂದಿಗೆ ಮಾತಾಡುತಿದ್ದನು . ಇಗ 10-15 ದಿನಗಳಿಂದ ಶ್ರಾವಣಕುಮಾರ ಇತನು ನನಗೆ ಆಗಾಗ ಪೋನ ಮಾಡಿ ನಾನು ನಿನಗೆ ಲವ್ ಮಾಡುತಿದ್ದೆನೆ ಅಂತಾ ಹೇಳುತಿದ್ದನು ನಾನು ಆತನಿಗೆ ನಿನು ಈ ಬಗ್ಗೆ  ಮಾತಾಡಬೇಡ ನಾನು ಚಿಕ್ಕವಳಿದ್ದನೆ  ಅಂತಾ ಹೇಳಿದ್ದು ಆದರು ಸಹ ಕೆಳದೆ ಆತನು ನನಗೆ ಹಾಗೆ ಆಗಾಗ  ಪೋನ ಮಾಡಿ ಮಾತಾಡುತಿದ್ದನು ಇಗ 8-10  ದಿನಗಳ ಹಿಂದೆ ದಿನಾಂಕ 04-1-2016 ರಾತ್ರಿ 8-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ತಾಂಡಾದ ಶ್ರಾವಣಕುಮಾರ ತಂದೆ ಹುನ್ಯಾನಾಯಕ ಇತನು ನನಗೆ ಪೋನ ಮಾಡಿ ನಾನು ನಿನ್ನ ಜೊತೆ ಮತಾಡುವದಿದೆ ನಿಮ್ಮ ಮನೆಯ ಹಿಂದುಗಡೆ ಬಾ ಅಂತಾ ಕರೆದನು ಆಗಾ ನಾನು ಆತನಿಗೆ ನಾನು ಬರುವದಿಲ್ಲಾ ಅಂತ ಹೇಳಿದಾಗ ಆತನು ನನಗೆ ನಾನು ನಿನಗೆ ಎನು ಮಾಡುವದಿಲ್ಲಾ ಸ್ವಲ್ಪ ಹೊತ್ತು ಬಂದು ಹೊಗು ಅಂತಾ ಹೇಳಿದನು ಆಗಾ ನಾನು ನಮ್ಮ ಮನೆಯ ಹಿಂದುಗಡೆ ಹೊದಾಗ ಶ್ರಾವಣ ಕುಮಾರ ಇತನು ನನಗೆ ಅಲ್ಲೆ ನಮ್ಮ ಮನೆಯ ಹಿಂದುಗಡೆ ಯಂಕ್ಯಾನಾಯಕ ಇವರ ಖುಲ್ಲಾ ಜಾಗದಲ್ಲಿ ಕಲ್ಲಿನ ಗುಂಪಿಯ ಮರೆಯಲ್ಲಿ ಕರೆದು ನನಗೆ ನಿನ್ನ ಮೆಲೆ ಆಸೆ ಆಗಿದೆ ನಿನು ನಾನು ಹೆಳಿದಂತೆ ಕೇಳು ಅಂತಾ ನನಗೆ ಕೈ ಹಿಡಿದು ಎಳೆದು ಒತ್ತಿ ಹಿಡಿದು ಕೇಳಗೆ ಹಾಕಿ ನಾನು ಬೆಡವೆಂದರು ಜಬರದಸ್ತಯಿಂದ ಬಲತ್ಕಾರ ಮಾಡಿದ್ದು  ಅಲ್ಲದೆ        ದಿನಾಂಕ 10-1-2016 ರಂದು ರವಿವಾರದಂದು ಶಾಲೆಗೆ ರಜೆ ಇದ್ದರಿಂದ ಮದ್ಯಾನ ನಾನು ನಮ್ಮ ಮೆಕೆಗಳನ್ನು ಮೆಯಿಸಲು ನಮ್ಮ ತಾಂಡಾದ ಸಮೀಪದಲ್ಲಿರುವ ಚಂದ್ಯಾನಾಯಕ ತಂದೆ ಹಣಮ್ಯಾನಾಯಕ ಇವರ ತೊಗರಿ ಕಟಾವು ಮಾಡಿದ ಹೊಲದಲ್ಲಿ ನಮ್ಮ ಮೇಕೆಗಳನ್ನು ಮೇಯಿಸುತಿದ್ದಾಗ ನಮ್ಮ ತಾಂಡಾದ ಶ್ರಾವಣಕುಮಾರ ತಂದೆ ಹುನ್ಯಾನಾಯಕ ಇತನು ತನ್ನ ದನಗಳನ್ನು ಮೆಯಿಸಲು ನಾನು ಮೆಕೆಗಳನ್ನು ಮೇಯಿಸುತಿದ್ದ  ತೊಗರಿ ಹೊಲದಲ್ಲಿ ಬಂದು ನನ್ನೊಂದಿಗೆ ಮತಾಡುತ್ತಾ ನನ್ನ ಹಿಂದೆ ಹಿಂದೆ ಬರುತಿದ್ದನು ನಾನು ನಮ್ಮ ಮೆಕೆಗಳನ್ನು ಮೇಯಿಸುತ್ತಾ ಹೊಲದಲ್ಲಿ ಗೀಡದ ನೇರಳಲ್ಲಿ ಕುಳಿತಾಗ ಸದರಿ ಶ್ರಾವಣ ಕುಮಾರ ಇತನು ಹಿಂದಿನಿಂದ ಬಂದು ನನಗೆ ಒತ್ತಿಹಿಡಿದುಕೊಂಡನು ನಾನು ಆತನಿಗೆ ನಾನು ಚಿಕ್ಕಳಿದ್ದನೆ ನನಗೆ ಎನು ಮಾಡಬೇಡ ಬಿಡು  ನನ್ನ ಮೈ ಮುಟ್ಟ ಬೇಡಾ ಅಂತಾ ಹೇಳಿದರು ಸಹ ಕೇಳದೆ ನನಗೆ ಶ್ರಾವಣಕುಮಾರ ಇತನು  ಜಬರದಸ್ತಿಯಿಂದ ಕೇಳಗೆ ಹಾಕಿ ಬಲತ್ಕಾರ ಮಾಡಿ ಈ ವಿಷಯವನ್ನು ಯಾರಿಗೆ ಹೇಳಬೇಡಾ ಅಂತಾ ಹೇಳಿ ಆತನು ಅಲ್ಲಿಂದ ಮನೆಗೆ ಹೊದನು ನಾನು ಆತನಿಗೆ ನಿನು ಇನ್ನೊಮೆ ನನಗೆ ಮಾತಾಡಬೇಡಾ ನನ್ನ ಹತ್ತಿರ ಬರ ಬೇಡಾ ನಿನು ನನ್ನ ಹತ್ತಿರ ಬಂದರೆ ನಮ್ಮ ತಂದೆ ತಾಯಿಗೆ ಹೇಳುತ್ತೆನೆ ಅಂತಾ ಹೇಳಿದ್ದು ಆತನು ನನಗೆ ಹಾಗೆ ಪೋನ ಮಾಡುತಿದ್ದನು. ದಿನಾಂಕ  13-01-2015 ರಂದು ಮದ್ಯರಾತ್ರಿ 12-30 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ತಾಯಿ ಮಂಗಲಿಬಾಯಿ ಇಬ್ಬರು ಮನೆಯಲ್ಲಿ ಮಲಗಿಕೊಂಡಿದ್ದಾಗ ನಮ್ಮ ತಾಂಡಾದ ಶ್ರಾವಣಕುಮಾರ ಇತನು ನಮ್ಮ ಮನೆಯ ಬಾಗಿಲ ಕೊಂಡಿಯನ್ನು ಕೈ ಹಾಕಿ ತೆಗೆದು ನಿಧಾನವಾಗಿ ನಮ್ಮ ಮನೆಯಲ್ಲಿ ಬಂದು ನಮ್ಮ ತಾಯಿ ಹತ್ತಿರ ಮಲಗಿದ್ದ ನನಗೆ ಕೈ ಹಿಡಿದು ಎಳೆದು ನಾನು ಚಿರಾಡುತ್ತೆನೆ ಅಂತಾ ನನ್ನ ಬಾಯಿ ಒತ್ತಿ ಹಿಡಿದುಕೊಂಡು ಮನೆಯಿಂದ ಹೊರೆಗೆ ನಮ್ಮ ಮೇಕೆಗಳು ಇದ್ದ ರೂಮಿನಲ್ಲಿ ಕರೆದುಕೊಂಡು ಹೊಗಿ ನನಗೆ ಮಾತಾಡುತಿದ್ದಾಗ ಮನೆಯಲ್ಲಿದ್ದ ನಮ್ಮ ತಾಯಿ ಎದ್ದು  ಮನೆಯಲ್ಲಿ ಇಲ್ಲದನ್ನು ನೊಡಿ ನಮ್ಮ ತಾಯಿ ಮನೆಯಿಂದ ಹೊರಗಡೆ ಬಂದಿದ್ದು ನಮ್ಮ ತಾಯಿ ನನಗೆ ಶ್ರಾವಣ ಕುಮಾರ ಇತನು ಮಾತಾಡುವದನ್ನು   ನೊಡಿ ಆತನಿಗೆ ನೀನು ಈ ರಾತ್ರಿ ಹೊತ್ತಿನಲ್ಲಿ ನಮ್ಮ ಮನೆಗೆ ಯಾಕೆ? ಬಂದಿದ್ದಿ ನನ್ನ ಮಗಳಿಗೆ ಎನು ಮಾಡುತಿದ್ದಿ ಅಂತಾ ಕೇಳಿದಾಗ ಅವನು ನಮ್ಮ ತಾಯಿಗೆ ದೊಬ್ಬಿಕೊಟ್ಟು ಓಡಿ ಹೊದನು. ನಾನು ಈ ವಿಷಯವನ್ನು ನಮ್ಮ ತಾಯಿ ಹತ್ತಿರ ತಿಳಿಸಿದ್ದು ನಮ್ಮ ತಾಯಿ ನಾಳೆ ತಾಂಡಾದಲ್ಲಿ ಪಂಚಾಯಿತಿ ಹಾಕುತ್ತೆನೆ ಅವನಿಗೆ ಬಿಡುವದಿಲ್ಲಾ ಅಂತಾ ಹೇಳಿದ್ದು ಇದಿಂದ ನಾನು ನನ್ನ ಮರ್ಯಾದೆ ಹೊಗಿದೆ ತಾಂಡಾದಲ್ಲಿ ಜನರಿಗೆ ಮುಖ ಹೇಗೆ ತೊರಿಸಲಿ ನನಗೆ ಯಾರು ಮದುವೆ ಮಾಡಿಕೊಳ್ಳುತ್ತಾರೆ ಅಂತಾ ಮಾನಸಿಕ ಮಾಡಿಕೊಂಡು ಇಂದು ಮುಂಜಾನೆ 6-30 ಗಂಟೆ ಸುಮಾರಿಗೆ ನಮ್ಮ ತಾಯಿ ಮನೆಯಿಂದ ಹೊರಗಡೆ ಹೊದಾಗ ನಾನು ಮನೆಯಲ್ಲಿದ್ದ ತೊಗರಿಗೆ ಹೊಡುವ ಔಷದಿ ಕುಡಿದಿದ್ದು ನಮ್ಮ ತಾಯಿ ಹೊರಗಿನಿಂದ ಮನೆಗೆ ಬಂದಾಗ್ ನಾನು ನಮ್ಮ ತಾಯಿಗೆ ನಾನು ಸಾಯಬೆಕೆಂದು ಔಷದಿ ಕುಡಿದಿರುತ್ತೆನೆ ಅಂತಾ ತಿಳಿಸಿದ್ದು ಆಗಾ ನಮ್ಮ ತಾಯಿ ಹಾಗು ಹೊಲದಿಂದ ಮನೆಗೆ ಬಂದಿದ್ದ ನಮ್ಮ ತಂದೆ ಇಬ್ಬರು ಕೂಡಿ ನನಗೆ ಒಂದು ಅಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಮುಧೋಳ ಸರಕಾರಿ ದವಖಾನೆಗೆ ತಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಅಂಬುಲೆನ್ಸದಲ್ಲಿ ಹಾಕಿಕೊಂಡು ಸರಕಾರಿ ಅಸ್ಪತ್ರೆ ಸೇಡಂದಲ್ಲಿ ಸೆರಿಕೆ ಮಾಡಿದ್ದು ನಾನು ಇಲ್ಲಿಉಪಚಾರ ಪಡೆಯುತಿದ್ದೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಈರಣ್ಣ ತಂದೆ ಶಂಕ್ರೆಪ್ಪ  ಕಾಂಬಳೆ  ಸಾ||ಅವರಾದ(ಬಿ) ತಾ||ಜಿ|| ಕಲಬುರಗಿ ರವರು ದಿನಾಂಕ:12/01/2016 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗೆಳೆಯ ವಿನೋದ ಕಾಂಬಳೆ ಇಬ್ಬರು ಕೂಡಿಕೊಂಡು ಸಿಮ್‌ ಕಾರ್ಡ ಖರದಿ ಮಾಡುವ ಸಲುವಾಗಿ ಕಲಬುರಗಿ ಕೇಂದ್ರ ಬಸ್‌ ನಿಲ್ದಾಣದ ಹತ್ತಿರ ಬಂದಿದ್ದು ನಂತರ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದು ಸಿಮ್‌ ಕಾರ್ಡನ್ನು ಖರಿದಿ ಮಾಡಿಕೊಂಡು ರಾತ್ರಿ 8 ಗಂಟೆಯ ಸುಮಾರಿಗೆ ನಾವಿಬ್ಬರು ಕೂಡಿಕೊಂಡು ನಮ್ಮೂರಿಗೆ ಹೋಗುವ ಸಲುವಾಗಿ ಕೇಂದ್ರ ಬಸ್‌ ನಿಲ್ದಾಣದ ಒಳಗೆ ಹೋಗುತ್ತಿರುವಾಗ, ನಾವಿಬ್ಬರು ಇಲ್ಲಿ ಎಲ್ಲೊ ಮಾಲಗಳು ಸಿಗುತ್ತವೆ ಅಂತ ಒಬ್ಬರಿಗೊಬ್ಬರು ಮಾತನಾಡುತ್ತಾ ಹೋಗುತ್ತಿರುವಾಗ ಯಾರೋ ಇಬ್ಬರು ವ್ಯಕ್ತಿಗಳು ನಮ್ಮ ಹಿಂದಿನಿಂದ ಬಂದು ನಮ್ಮ ಹೆಗಲ ಮೇಲೆ ಕೈ ಹಾಕಿ ನಾವು ನಿಮಗೆ ಮಾಲು ಕೊಡುಸುತ್ತೆವೆ ನಡೆಯಿರಿ ಅಂತ ನಮ್ಮನ್ನು ಬಸ್‌ ನಿಲ್ದಾಣದ ಮುಂದುಗಡೆ ಇರುವ ಆಟೋಗಳು ನಿಲ್ಲುವ  ಸ್ಥಳದಲ್ಲಿ ಕರೆದುಕೊಂಡು ಹೊದರು. ಅಲ್ಲಿ ಹೋದ ನಂತರ ಅದರಲ್ಲಿದ್ದ ಒಬ್ಬನು ನಮಗೆ ಬೈಯುತ್ತಾ ಮಕ್ಕಳೆ ನಿಮ್ಮ ಹತ್ತಿರ ಎಷ್ಟು ರೊಕ್ಕ ಅವ ಹೊರಗೆ ತೆಗೆಯಿರಿ ಅಂತ ಅಂದನು. ಆಗ ನಾವು ನಾವೇಕೆ ನಿಮಗೆ ರೊಕ್ಕ ಕೊಡಬೇಕು ಅಂದಾಗ ಮತ್ತೊಬ್ಬನು ಮಗನೆ ರೊಕ್ಕ ಕೊಡಲ್ಲಂತಿ ಅಂತ ಅಂದು  ಜಬರದಸ್ತಿಯಿಂದ ನನ್ನ ಪ್ಯಾಂಟಿನ ಜೇಬಿನಲ್ಲಿದ್ದ ಅಂದಾಜು 8,000/- ಕಿಮ್ಮತ್ತಿನ ಮೈಕ್ರೊಸಾಫ್ಟ ಕಂಪನಿಯ ಒಂದು ಮೋಬೈಲ್‌ ಫೊನ್‌ ಮತ್ತು ನಗದು ಹಣ 500/- ರೂಪಾಯಿ ಕಸಿದುಕೊಂಡನು. ನಂತರ ಮತ್ತೊಬ್ಬನು ನನ್ನ ಗೆಳೆಯನಾದ ವಿನೋದನ ಜೇಬಿನಲ್ಲಿದ್ದ ಅಂದಾಜು 3000/- ಕಿಮ್ಮತ್ತಿನ ಜೀಯೋನಿ ಕಂಪನಿಯ ಮೋಬೈಲ್‌ ಫೋನ್‌ ಕಸಿದುಕೊಂಡರು. ನಂತರ ಅವರು ನಮಗೆ ಅಲ್ಲೆ ಬಿಟ್ಟು ಎಮ್‌ಎಸ್‌ ಕೆ ಮಿಲ್‌  ಕಡೆಗೆ ಹೋಗಿರುತ್ತಾರೆ. ಅವರಿಬ್ಬರು ಒಬ್ಬರಿಗೊಬ್ಬರು ಮಾತನಾಡುತ್ತಿದ್ದುದ್ದರಿಂದ ನನ್ನ ಹತ್ತಿರ ಇದ್ದ ಮೋಬೈಲ್‌ ಫೋನ್‌ ಮತ್ತು ನಗದು ಹಣ ಜಬರದಸ್ತಿಯಿಂದ ಕಸಿದುಕೊಂಡುವನ ಹೆಸರು ಶಿವಶರಣ ದೊಡ್ಡಮನಿ ಅಂತಾ ಗೊತ್ತಾಗಿದ್ದು ಮತ್ತು ನನ್ನ ಗೆಳೆಯ ವಿನೋದ ಇತನಿಂದ ಮೋಬೈಲ್‌ ಫೊನ್‌ ಜಬರದಸ್ತಿಯಿಂದ ಕಸಿದಿಕೊಂಡವನ ಹೆಸರು ಚಾಂದಪಾಷಾ ಅಂತ ಗೊತ್ತಾಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

13 January 2016

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 12.01.2016 ರಂದು ಇಜೇರಿ ಗ್ರಾಮದ ಸಾಥಖೇಡ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ. ವಿಧ್ಯಾಸಾಗರ ಎ.ಎಸ್.ಐ ಜೇವರಗಿ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಒಂದು ರುಪಾಯಿಗೆ 80 ರೂಪಾಯಿ ಕೊಡುತ್ತೆವೆ ಅಂತ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಬರೆದುಕೊಳ್ಳುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ದಾಳಿ ಮೂರು ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರನ್ನು ವಿಚಾರಿಸಲು 1. ಮಲಕಲಣ್ಣ ತಂದೆ ಮಲ್ಲಪ್ಪ ಮಡಿವಾಳಕರ್ ಸಾ : ಶಹಾಪುರ 2.  ಮಲ್ಲಣ್ಣ ತಂದೆ ನರಸಿಂಗಪ್ಪ ಸಗರ ಸಾ : ಇಜೇರಿ 3. ಗುರಪ್ಪ ತಂದೆ ಶಿವಪ್ಪ ಮಡಿವಾಳಕರ್ ಸಾ : ಇಜೇರಿ ಅಂತಾ ತಿಳಿಸಿದ್ದು ಸದರಿಯವರಿಂದ  ಜೂಜಾಟಕ್ಕೆ  ಬಳಸಿದ ನಗದು ಹಣ 4.000/- ರೂ, 3 ಬಾಲ್‌ ಪೆನ್ ಮತ್ತು 3 ಮಟಕಾ ಚೀಟಿ ಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಕುಮಾರಿ ವಿಜಯಲಕ್ಷ್ಮೀ ಕೋಬಾಳಕರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಕಲಬುರಗಿ ಇವರು ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಮೇಲಾಧಿಕಾರಿಗಳಿಂದ ಅನುಮೋದನೆ ಪಡೆಯಲು ಮಂಡಿಸದೆ ಅಪ್ರಾಮಾಣಿಕತೆಯಿಂದ ಉದ್ದೇಶಪೂರ್ವಕವಾಗಿ ವಂಚನೆ ಮಾಡಿರುವದು ಹಾಗೂ ತಪ್ಪು ದಸ್ತಾ ವೇಜುಗಳನ್ನು ತಯಾರಿಸಿ ಸರ್ಕಾರದ ಅನುದಾನ ದೂರುಪಯೋಗ ಪಡಿಸಿಕೊಂಡಿದ್ದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಮಾನ್ಯ ಪ್ರಾದೇಶಿಕ ಆಯುಕ್ತಕರು ತಿಳಿಸಿ ಸದರಿಯವರ ವಿರುದ್ದ ಕ್ರಿಮಿನಲ್‌ ಮೂಕದ್ದಮೆ ದಾಖಲಿಸುವಂತೆ ಸೂಚಿಸಿರುತ್ತಾರೆ ಆದ್ದರಿಂದ ಸದರಿಯವರು ಸರ್ಕಾರದ ಅನುದಾನ ರೂಪಾಯಿ 10098110 (ಒಂದು ಕೋಟಿ 98 ಸಾವಿರ110/-ರೂ) ಮಾತ್ರ ದುರ್ಬಳಕೆ ಮಾಡಿ ತೀರ್ವ ತರಹದ ಕರ್ತವ್ಯ ಲೋಪವೆಸಗಿ ಸರ್ಕಾರಿ ದಾಖಲಾತಿಗಳನ್ನು ಪೋರ್ಜರಿ ಮಾಡಿರುತ್ತಾರೆ ಆದ್ದರಿಂದ ಕುಮಾರಿ ವಿಜಯಲಕ್ಷ್ಮೀ ಕೋಬಾಳಕರ ಇವರ ವಿರುದ್ದ ಸೆಕ್ಷನ 420 ಅಡಿ ತಕ್ಷಣ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಶ್ರೀ ಚಂದ್ರಾಮಪ್ಪಾ ತಂದೆ ಹುಚ್ಚಪ್ಪಾ ಯೋಜನಾ ನಿರ್ದೇಶಕರು ಡಿ.ಆರ್‌‌.ಡಿ.ಎ ಜಿಲ್ಲಾ ಪಂಚಾಯತ ಕಲಬುರಗಿ ರವರು ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಹನಮಂತರಾಯ್  ತಂದೆ ಕಲ್ಯಾಣರಾವ್ ಮಲಾಜೀ ಸಾ: ಬೆಳಮಗಿ ತಾ: ಆಳಂದ ಜಿ: ಕಲಬುರಗಿ ಹಾ:ವ: ಮನೆ ನಂ ಹೆಚ್.ಐ.ಜಿ- 140 ಹೈಕೋರ್ಟ ಎದರುಗಡೆ ಕೆಹೆಚ್.ಬಿ ಕಾಲನಿ ಕಲಬುಗಿ ರವರು  ಹೆಂಡತಿ ಮಕ್ಕಳೊಂದಿಗೆ ಎಳ್ಳಾಮಸೆ ಹಬ್ಬದ ಪ್ರಯುಕ್ತ ನಾನು ಕುಟುಂಬ ಸಮೇತನಾಗಿ ದಿನಾಂಕ: 09/01/2016 ರಂದು ಸಾಯಂಕಾಲ 06-00 ಗಂಟೆ ಸುಮಾರಿಗೆ ಕೆ.ಹೆಚ್.ಬಿ ಕಾಲನಿಯ ಮನೆ ಮುಂದಿನ ಬಾಗಿಲನ್ನು ಕೊಂಡಿ ಹಾಕಿ ಹಿಂದಿನ ಬಾಗಿಲ  ಕೀಲಿ ಹಾಕಿಕೊಂಡು ಬೆಳಮಗಿ ಊರಿಗೆ ಹೋಗಿದ್ದು ದಿನಾಂಕ: 11/01/2016 ರಂದು 12-30 ಪಿಎಮ್ ಕ್ಕೆ ಊರಿನಿಂದ ಮನೆಗೆ ಬಂದು ನೋಡಲು ನಮ್ಮ ಮನೆಯ ಹಿಂದಿನ ಬಾಗಿಲ ಚಾನಲ ಗೇಟಗೆ ಹಾಕಿದ್ದ ಕೀಲಿ ಮುರಿದಿದ್ದು ಚಾನಲ ಗೇಟ ತೆಗೆದಿದ್ದು ಒಳಗಡೆ ಬಾಗಿಲಿಗೆ ಹಾಕಿದ್ದ ಕೀಲಿ ಕೊಂಡಿ ಮುರಿದಿದ್ದು ಬಾಗಿಲು ಸ್ವಲ್ಪ ತೆರೆದಿದ್ದು ನಾನು ಗಾಬರಿಯಿಂದ ಒಳಗೆ ಹೋಗಿ ನೋಡಲು ಮನೆಯ ಬೆಡರೂಮ್ ನಲ್ಲಿದ್ದ ಎರಡು ಅಲಮಾರಿಗಳು ಕೆಳಗೆ ಖುಲ್ಲಾ ಬಾಗಿಲು ತೆರೆದು ಬಿದ್ದಿದ್ದು ಅಲಮಾರಾದ ಲಾಕ ಮುರಿದಿದ್ದು ನಾನು ಅಲಮಾರದಲ್ಲಿ ನೋಡಲು ಅಲಮಾರದ ಲಾಕರನಲ್ಲಿಟ್ಟ 1,65,000/-ರೂ ನಗದು ಹಣ  ಕಾಣಿಸಲಿಲ್ಲಿ. ಮತ್ತು ಇನ್ನೊಂದು ಅಲಮಾರದ ಲಾಕರನಲ್ಲಿಟ್ಟ 12ತೊಲೆ ಬೆಳ್ಳಿ ಆರತಿ ಸೆಟ್ ಅ.ಕಿ 4800/-ರೂ 11 ತೊಲೆ ಬೆಳ್ಳಿ ಗಣಪತಿ ಅ.ಕಿ= 4400/-ರೂ ಪ್ರತಿ 4 ತೊಲೆ ಬೆಳ್ಳಿಯ 2 ಗ್ಲಾಸ್ ( 8 ತೊಲೆ ) ಅ.ಕಿ = 3200/-ರೂ ಹಾಗೂ ಒಂದು ಸ್ಯಾಮಸಂಗ ಮೋಬೈಲ್ ಅ.ಕಿ= 4000/-ರೂ ಹೀಗೆ ಒಟ್ಟು 1,81,400/- ರೂ ಕಿಮ್ಮತ್ತಿನ ನಗದು ಹಣ ಬೆಳ್ಳಿ ಆಭರಣಗಳನ್ನು ಯಾರೋ ಕಳ್ಳರು ದಿನಾಂಕ: 09/01/2016 ರಂದು ಸಾಯಂಕಾಲ 06-00 ಗಂಟೆಯಿಂದ ದಿನಾಂಕ: 11/01/2016ರ ಮಧ್ಯಾಹ್ನ 12-30 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಮನೆ ಹಿಂದಿನ ಬಾಗಿಲ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಶೋಕ ನಗರ ಠಾಣೆ : ದಿನಾಂಕ:11/01/2016 ರಂದು ಮದ್ಯಾಹ್ನ ನಾನು ಬಸ್‌ ಮೂಲಕ ಕಲಬುರಗಿಗೆ ಬಂದಿದ್ದು ಬರುವಾಗ ನನ್ನ ವ್ಯವಹಾರದ ಸಲುವಾಗಿ 1,00,000/- ರೂಪಾಯಿಗಳು ತೆಗದುಕೊಂಡು ಬಂದಿದ್ದು ಸಾಯಂಕಾಲ 6 ಗಂಠೆಯ ಸುಮಾರಿಗೆ ನಾನು ನಮ್ಮ ಪೆಟ್ರೊಲ್‌ ಬಂಕನಿಂದ ಜಮಾ ಆದ ಒಟ್ಟು 30,000/- ರೂಪಾಯಿಗಳನ್ನು ತೆಗದುಕೊಂಡು ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದಿದ್ದು ಆ ಸಮಯದಲ್ಲಿ ನನ್ನ ಹತ್ತಿರ ಒಟ್ಟು 1,30,000/- ಇದ್ದವು. ರಾತ್ರಿ 7:30 ಗಂಟೆಯ ಸುಮಾರಿಗೆ ನನಗೆ ಪರಿಚಯದವರಾದ ಅಂಬಾದಾಸ ಎನ್ನುವವರು ನನ್ನ ಹತ್ತಿರ ಬಂದು ನನಗೆ 30,000/- ರೂಪಾಯಿ ಕೈಗಡ ಕೇಳಿದ್ದು ಆಗ ನಾನು ಆ ವ್ಯಕ್ತಿಗೆ ನನ್ನ ಹತ್ತಿರ ಇದ್ದ ಹಣದಲ್ಲಿ 30,000/-ರೂಪಾಯಿಗಳನ್ನು ಕೊಟ್ಟಿದ್ದು  ಇರುತ್ತದೆ. ಉಳಿದ ಹಣ 1 ಲಕ್ಷ ರೂಪಾಯಿ ನನ್ನ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡಿದ್ದೆನು. ರಾತ್ರಿ 8 ಗಂಟೆಯ ಸುಮಾರಿಗೆ ನಾನು ಬಿ.ಗುಡಿಗೆ ಹೋಗುವ ಸಲುವಾಗಿ ಕಲಬುರಗಿ ಬೆಂಗಳೂರ ಬಸ್ಸಿಗೆ ಹತ್ತಿದೆನು. ನಾನು ಹತ್ತುವ ಸಮಯದಲ್ಲಿ ನನ್ನ ಹತ್ತಿರ  ಇದ್ದ 1 ಲಕ್ಷ ರೂಪಾಯಿ ಹಣ ನನ್ನ ಪ್ಯಾಂಟಿನ ಜೇಬಿನಲ್ಲಿದ್ದವು. ನಂತರ ರಾತ್ರಿ 9:30 ಗಂಟೆಯ ಸುಮಾರಿಗೆ ನಾನು ಬಿ. ಗುಡಿಯಲ್ಲಿ ಬಸ್‌ ಇಳಿದ ನಂತರ ನನ್ನ ಜೇಬಿನಲ್ಲಿದ್ದ ಹಣ ನೋಡಲು ಇದ್ದಿರುವದಿಲ್ಲ. ಬಸ್‌ ಇಳಿಯುವ ಸಮಯದಲ್ಲಿ ಯಾರೋ ಕಳ್ಳರು ನನ್ನ ಪ್ಯಾಂಟಿನ ಜೇಬನ್ನು ಕತ್ತರಿಸಿ 1 ಲಕ್ಷ ರುಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ  ಶ್ರೀ  ವಾಯ್‌.ಟಿ.ಲಿಂಗಣ್ಣಾ ತಂದೆ ತಿಮ್ಮಣ್ಣಾ ಸಾ||ಮನೆ ನಂ. 23/2 ಭಲಬಿಮೇಶ್ವರ ಕಲ್ಯಾಣ ಮಂಟಪ್ಪ ಹತ್ತಿರ ಬಿಮರಾಯನ ಗುಡಿ ತಾ|| ಶಹಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ: 12-06-2016 ರಂದು ಮಧ್ಯಾನ ನನ್ನ ಹೀರೊ ಹೊಂಡಾ ಸ್ಪೆಂಡರ್‌‌ ಪ್ಲಸ್‌‌ ಮೋಟಾರ ಸೈಕಲ ನಂ.ಕೆಎ.32 ಯು.6407 ನೇದ್ದನ್ನು ಮನೆಯ ಮುಂದೆ ನಿಲ್ಲಿಸಿ ಹೊರಗಡೆ ಹೋಗಿದ್ದು ಮರಳಿ 4 ಗಂಟೆಗೆ ಮನೆಗೆ ಬಂದಾಗ ನನ್ನ ಮನೆಯ ಮುಂದೆ ನನ್ನ ಮೋಟಾರ ಸೈಕಲ ಇರಲಿಲ್ಲ ಕಾರಣ ನನ್ನ ಮೋಟಾರ ಸೈಕಲ ಕಪ್ಪು ಬಣ್ಣವುಳ್ಳದ್ದು ನಂ.KA32 U6407, CHASSIS NO. MBLHA10EE8HH03236, ENGINE NO.HA10EA8HH07824 ಅ.ಕಿ. .30000/-ರೂ ಬೆಲೆ ಬಾಳುವದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಚನ್ನಬಸಪ್ಪಾ ಪಾಟೀಲ ತಂದೆ ಶರಣಪ್ಪಾ ಪಾಟೀಲ್‌ ಸಾ:ಮಹಾಲಕ್ಷ್ಮೀ ಲೇ ಔಟ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 10/01/2016 ರಂದು ನಾನು ನನ್ನ ಹೆಂಡತಿಯಾದ ಗಂಗುಬಾಯಿ ನನ್ನ ಮಕ್ಕಳಾದ ರಾಹುಲ,ರೇಷ್ಮಾ ಎಲ್ಲರು ನಮ್ಮ ಹೊಲ ಸರ್ವೇ ನಂ 101 ನೇದ್ದರಲ್ಲಿನ ನಮ್ಮ ಮನೆಯಲ್ಲಿದ್ದಾಗ ಯಾರೋ ಬೈಯುವುದನ್ನು ಕೇಳಿ ನಾನು ನನ್ನ ಹೆಂಡತಿ ನನ್ನ ಮಕ್ಕಳು ಮನೆಯಿಂದ ಹೊರಗೆ ಬಂದು ನೋಡಲಾಗಿ ನಮ್ಮ ಅಣ್ಣನ ಮಗನಾದ 1) ಸಚೀನ ತಂದೆ ಛತ್ರು ರಾರೋಡ ಹಾಗೂ ನಮ್ಮ ಅಣ್ಣಂದಿರಾದ 2) ಛತ್ರು ತಂದೆ ರತ್ನು ರಾಠೋಡ 3)ಹೀರೂ ತಂದೆ ರತ್ನು ರಾಠೋಡ ಮತ್ತು 4) ಭದ್ರು ತಂದೆ ಹೀರೂ ರಾಠೋಡ 5)ಶಾಂತಾಬಾಯಿ ಗಂಡ ಛತ್ರು ರಾಠೋಡ 6) ಲಲಿತಾಬಾಯಿ ಗಂಡ ಹೀರೂ ರಾಠೋಡ 7)ರವಿನಾಬಾಯಿ ಗಂಡ ಭದ್ರು ರಾಠೋಡ ಸಾ||ಎಲ್ಲರು ಬಳೂರ್ಗಿ ತಾಂಡಾ ಇವರೇಲ್ಲರು ಗುಂಪು ಕಟ್ಟಿಕೊಂಡು ಅತಿಕ್ರಮವಾಗಿ ನಮ್ಮ ಹೊಲದಲ್ಲಿ ಪ್ರವೇಶ ಮಾಡಿ ನಮ್ಮ ಮನೆಯ ಮುಂದೆ ಬಂದು ನನಗೆ ಛತ್ರು ಇತನು ರಂಡಿಮಗನೆ ಹೊಲ ಮನಿ ಇನ್ನೂ ಸರಿಯಾಗಿ ಪಾಲ ಆಗಿಲ್ಲಾ ಈ ಹೊಲದಲ್ಲಿ ನಮಗ ಇನ್ನೂ ಪಾಲ ಬರ್ತಾದ ಅಂತ ಅನ್ನುತಿದ್ದಾಗ ಅದೇ ಸಮಯಕ್ಕೆ ಅಲ್ಲಿಂದ ತಮ್ಮ ಹೊಲಗಳಿಗೆ ಹೋಗುತಿದ್ದ ನಮ್ಮ ಗ್ರಾಮದ ಆನಂದ ತಂದೆ ಲಸ್ಕರ ರಾಠೋಡ , ಸುರೇಶ ತಂದೆ ಚಂದ್ರಶ್ಯಾ ಸಕ್ಕರಗಿ , ಮಲ್ಲಪ್ಪ ತಂದೆ ಚಂದ್ರಮಾ ಕೋತಿ ಇವರು ನಮ್ಮ ಹತ್ತಿರ ಬಂದು ನಮ್ಮ ಅಣ್ಣನಾದ ಛತ್ರು ಹಾಗೂ ಹೀರೂ ಇವರಿಗೆ ಯಾಕೆ ಸುಮ್ಮನೆ ಬೈದಾಡುತ್ತಿರಿ ಅಂತ ಅನ್ನುತಿದ್ದಾಗ ಹೀರೂ ಇತನು ನನಗೆ ಈ ರಂಡಿಮಗಂದು ಸೊಕ್ಕ ಬಾಳ ಅದಾ ಅಂತ ಅಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ನನ್ನ ಕಪಾಳದ ಮೇಲೆ ಹೊಡೆದಾಗ ನನ್ನ ಹೆಂಡತಿ ಬಿಡಿಸಲು ಬಂದರೆ ಲಲಿತಾಬಾಯಿ, ಶಾಂತಾಬಾಯಿ, ರವಿನಾಬಾಯಿ ಇವರು ನನ್ನ ಹೆಂಡತಿಗೆ ನಿನು ಬರ್ತಿ ರಂಡಿ ಅಂತ ಅಂದು ನನ್ನ ಹೆಂಡತಿಗೆ ಹಿಡಿದು ಕೈಯಿಂದ ಹೊಡೆಯುತಿದ್ದಾಗ ಸಚೀನ ಇತನು ಅಲ್ಲೆ ಬಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ಹೆಂಡತಿಯ ತಲೆಗೆ ಜೋರಾಗಿ ಹೊಡೆದು ರಕ್ತಗಾಯ ಪಡಿಸಿ ಕುದಲು ಹಿಡಿದು ಜಗ್ಗಾಡುತಿದ್ದನು ಆಗ ನನಗೆ ಛತ್ರು ಇತನು ಕಲ್ಲಿನಿಂದ ನನ್ನ ಕಡೆ ಬಿಸಿ ಹೊಡೆದಾಗ ಸದರಿ ಕಲ್ಲು ನನ್ನ ಬಲಗೈ ಹೆಬ್ಬೆರಳಿಗೆ ಬಡಿದು ರಕ್ತಗಾಯವಾಗಿರುತ್ತದೆ. ನನ್ನ ಮಗ ರಾಹುಲ ಹಾಗೂ ರೇಷ್ಮಾ ನಮಗೆ ಹೊಡೆಯುವದನ್ನು ಬಿಡಿಸಲು ಬಂದರೆ ಶಾಂತಾಬಾಯಿ ಇವಳು ಸಚೀನನ ಕೈಯಲಿದ್ದ ಬಡಿಗೆ ತಗೆದುಕೊಂಡು ಅದೇ ಬಡಿಗೆಯಿಂದ  ನನ್ನ ಮಗಳ ಏಡಗೈ ಮುಗೈ ಕೆಳಗೆ ಹೊಡೆದು ರಕ್ತಗಾಯ ಪಡಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಶ್ರೀ ಮನೋಹರ ತಂದೆ ರತ್ನು ರಾಠೋಡ ಸಾ|| ಬಳೂರ್ಗಿ ತಾಂಡಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.