POLICE BHAVAN KALABURAGI

POLICE BHAVAN KALABURAGI

03 December 2015

Kalaburagi District Reported Crimes

ಆತ್ಮ ಹತ್ಯೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಸಾತಮ್ಮ ಗಂ ಮಹಾಂತಯ್ಯ ಸ್ವಾಮಿ ಇವರು ದಿನಾಂಕ: 01-12-2015 ರಂದು ಮದ್ಯಾಹ್ನ 3 ಗಂಟೆಗೆ ಅತಿ ಸಾಲದಿಂದ ಬೆಸತ್ತು ಮತ್ತು ಮನೆಯಲ್ಲಿ ಅತಿ ಬಡತನದಿಂದ ಬೆಸತ್ತು ವಿಷ ಕುಡಿದಿದ್ದಾಳೆ ವಿಷ ಕುಡಿದಿದ್ದನ್ನು ನಾನು ನೋಡಿ ತಕ್ಷಣವೆ ನಮ್ಮ ಸಂಬಂದಿಕರನ್ನು ಕರೆದುಕೊಂಡು ಆಕೆಯನ್ನು ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋದೇವು. ಗಂಗಾ ಆಸ್ಪತ್ರೆ ಕಲಬುರಗಿಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ: 02-12-2015 ರಂದು ಬೆಳಗ್ಗೆ 7:30 ಕ್ಕೆ ಮೃತಪಟ್ಟಿರುತ್ತಾಳೆ ಅಂತಾ ಶ್ರೀಮತಿ ಸಾಂಬಾಯಿ ಗಂಡ ನಾಡಗೌಡ ವಡೆಯರ ಸಾ: ಮುರುಗಾನೂರ ತಾ: ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ಟಳು ಶವ ಪಂಚನಾಮೆ ಮತ್ತು ಪೊಸ್ಟ ಮಾರ್ಟಮ ಸಲುವಾಗಿ ಮುಂಜಾನೆ 10 ಗಂಟೆಗೆ ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ಒಪ್ಪಿಸಲಾಗಿದೆ.
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪ್ರಭಾವತಿ ಗಂಡ ಶಿವಾನಂದ ಮಾಳಗಿ ಸಾ:ಬೋರಾಬಾಯಿ ನಗರ ಕಲಬುರಗಿ ಇವರ ಮಗಳಾದ ಸಪ್ನಾ ಇವಳು ಧಾರ್ಮಿಕ ಕಾರ್ಯಕ್ರಮದಲ್ಲಿ ಊಟ ಬಡಿಸುವ ಕೆಲಸಕ್ಕೆ ಹೋಗುತ್ತಿದ್ದಳು ನಮ್ಮ ಓಣಿಯ ಪುಟ್ಟು ತಂದೆ ಬಾಬುರಾವ ಎಂಬುವನು ಆಗಾಗ ನಮ್ಮ ಮನೆಯ ಮುಂದೆ ಬಂದು ಚಿರಾಡುವದು , ಸಾರಾಯಿ ಕುಡಿಯುವದು ಮಾಡುತ್ತಿದ್ದನು ಅವನ ಜೊತೆಗೆ ಅವನ ಸ್ನೇಹಿತನಾದ  ಶಿವಾ ಎಂಬುವನು ಕೂಡ ಬಂದು ನಮ್ಮ ಮನೆಯ ಬಾಗಿಲು ಬಾರಿಸಿ ಕುಡಿಯಲು ನೀರು ಕೊಡಿ ಅಂತಾ ಗಲಾಟೆ ಮಾಡುತ್ತಿದ್ದರು. ನೀರು ಕೊಡದೇ ಇದ್ದರೆ ರಂಡಿ ಮಕ್ಕಳೆ ಭೋಸಡಿ ಮಕ್ಕಳೇ ನೀವು ನಮ್ಮ ವಿರುದ್ದ ಕೇಸು ಮಾಡಿದರೆ ನಿಮಗೆ ಕೊಲೆ ಮಾಡುತ್ತೇವೆ ಅಂತಾ ಧಮಕಿ ಹಾಕುತ್ತಿದ್ದರು. ದಿನಾಂಕ  01-12-2015 ರಂದು ಮಧ್ಯಾಹ್ನ 1-00 ಗಂಟೆ ಸುಮಾರಿಗೆ ಬಯಲು ಸೀಮೆ ಬಾತರೂಮಿಗೆ ಹೋದಾಗ ಪುಟ್ಟು ಮತ್ತು ಶಿವಾ ಕೂಡಿಕೊಂಡು  ಸಪ್ನಾ ಇವಳಿಗೆ ಬಲವಂತವಾಗಿ ಅಪಹರಿಸಿಕೊಂಡು ಹೋಗಿರುತ್ತಾರೆ. ಪುಟ್ಟು ಇತನಿಗೆ ಈಗಾಗಲೇ ಒಂದು ತಿಂಗಳ ಹಿಂದೆ ಮದುವೆಯಾಗಿರುತ್ತದೆ. ಇಂದು ಬೆಳಿಗ್ಗೆ ಪುಟ್ಟು ಇತನ ತಮ್ಮನಾದ ದಾವೀದ ಇತನು ನಮ್ಮ ಮನೆಗೆ ಬಂದು ನಿಮ್ಮ ಮಗಳು ಸೇಡಂನಲ್ಲಿರುತ್ತಾಳೆ ಅವಳಿಗೆ ಕರೆದುಕೊಂಡು ಬರಲು ಪ್ರಯತ್ನ ಮಾಡಿದ್ದರೆ ನಮ್ಮ ಅಣ್ಣ ಪುಟ್ಟು ಇತನು ನಿಮಗೆ ಕೊಲೆ ಮಾಡುತ್ತಾನೆ ಅಂತಾ ಬೆದರಿಕೆ ಹಾಕಿರುತ್ತಾನೆ. ಕಾರಣ ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಸಪ್ನಾ ಇವಳಿಗೆ ಅಪಹರಿಸಿಕೊಂಡು ಹೋದ ಪುಟ್ಟು ಮತ್ತು ಅವನಿಗೆ ಸಹಾಯ ಮಾಡಿದ ದಾವೀದ ಹಾಗೂ ಶಿವಾ ಇವರ ಮೇಲೆ ಕಾನೂನು ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

02 December 2015

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ: ದಿನಾಂಕ: 01/12/2015 ರಂದು ಬೆಳಿಗ್ಗೆ 10:30 ಗಂಟೆ ನಾನು ಶ್ರೀ ಮಹೇಶ ತಂದೆ ಶರಣಬಸಪ್ಪಾ ಹಡಪದ ಸಾ; ಕವಲಗಾ ತಾ: ಆಳಂದ ಮತ್ತು ಅವರ ಕಾಕನಾದ ಮಲ್ಲಿನಾಥ ಹಡಪದ ಇಬ್ಬರೂ ಮೋಟರ್ ಸೈಕಲ ನಂಬರ್  KA-34 S-684  ನೇದ್ದರ ಮೇಲೆ ಮದುವೆ ಲಗ್ನ ಪತ್ರ ಕೊಡಲು ಕೊಡಲ ಹಂಗರಗಾ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ನಾನು ಮೋಟರ್ ಸೈಕಲ ಚಲಾಯಿಸುತ್ತಿದ್ದು ಕೊಡಲ ಹಂಗರಗಾದಿಂದ ಆಳಂದ ಮುಖ್ಯ ರಸ್ತೆಯ ಮೂಲಕ ಬರುವಾಗ ರಾತ್ರಿ 08:30 ಗಂಟೆ ಸುಮಾರಿಗೆ ಸಂಗೋಳಗಿ ಹನುಮಾನ ಮಂದಿರ ಸಮೀಪ ಒಬ್ಬ ಟಾಟಾ ಸುಮೋ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಬಂದು ಓವರಟೇಕ್ ಮಾಡುವಾಗ ನಮ್ಮ ಮೋಟರ್ ಸೈಕಲಿಗೆ ಹಿಂದಿನಿಂದ ಡಿಕ್ಕಿಪಡಿಸಿದ್ದರಿಂದ ನಾವು ಕೆಳಗಡೆ ಬಿದ್ದು ನನಗೆ ತಲೆಗೆ ರಕ್ತಗಾಯ, ಎಡಗೈ ರಟ್ಟೆಗೆ ತರಚಿದ ಗಾಯವಾಗಿದ್ದು ನನ್ನ ಕಾಕನಾದ ಮಲ್ಲಿನಾಥನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು. ನಮಗೆ ಡಿಕ್ಕಿಪಡಿಸಿದ ಟಾಟಾ ಸುಮೋ ನಂಬರ್ ನೋಡಲಾಗಿ MH-43 A-4952 ಇದ್ದು ಸದರಿ ಟಾಟಾ ಸುಮೋ ಚಾಲಕನು ಸ್ಥಳದಲ್ಲಿ ಜನ ಸೇರುವುದನ್ನು ನೋಡಿ ವಾಹನ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು. ಸದರಿ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆತ್ಮಹತ್ಯೆ ಪ್ರಕರಣ:
ರೇವೂರ ಪೊಲಿಸ್ ಠಾಣೆ: ದಿನಾಂಕ:01-12-2015 ರಂದು ಶ್ರೀಮತಿ ಸುಮೀತ್ರಾ ಗಂಡ ಶರಣಬಸು ಕೋಳಕೂರ ಸಾ:ಕೋಗನೂರ ಈವರು ಠಾಣೆಗೆ ಹಾಜರಾಗಿ ತಾನು ತನ್ನ ಗಂಡ ಮಕ್ಕಳೊಂದಿಗೆ ವಾಸವಾಗಿದ್ದು ನನ್ನ ಗಂಡನಿಗೆ 4 ಎಕರೆ  ಜಮೀನು ಇದ್ದು.  ವ್ಯವಸಾಕ್ಕಾಗಿ ಬ್ಯಾಂಕಿನಲ್ಲಿ ಸಾಲ ಮಾಡಿದ್ದು ಕಳೆದ ವರ್ಷ ಬ್ಯಾಂಕಿನ ಸಾಲ ಮುಟ್ಟಿಸುವ ಸಲುವಾಗಿ ನನ್ನ ಗಂಡ  ಕಳೆದ  ವರ್ಷ  ತನ್ನ4 ಎಕರೆ ಜಮೀನನ್ನು   ಮಾರಿ   ಸಾಲ  ತಿರಿಸಿದ್ದು. ಸಂಬಂದಿಕರಲ್ಲಿ  ಇನ್ನು 1  ಲಕ್ಷ್ಯ ಬಡ್ಡಿ ರಹಿತ ಸಾಲ ತೆಗೆದುಕೊಂಡಿದ್ದು ಮರಳಿ ಹಣ  ಕೋಡುವುದು ಬಾಕಿ ಇತ್ತು .ಅಲ್ಲದೆ  ಗ್ರಾಮದರವರಲ್ಲಿ 1 ಲಕ್ಷ್ಯ ರೂಪಾಯಿ ಹಣ ಕೈಗಡ ಮಾಡಿಕೊಂಡು ನಮ್ಮ ಗ್ರಾಮದ  ಮಹಾಂತೇಶ ಹೀರೇಮಠ  ರವರವ 5 ಎಕರೆ ಜಮೀನನ್ನು  ಮೂರು ವರ್ಷಕ್ಕಾಗಿ 1 ಲಕ್ಷ್ಯ ಕೊಟ್ಟು ಪಾಲಿಗೆ ಹಾಕಿಕೊಂಡಿರುತ್ತಾರೆ. ಅಲ್ಲದೆ ಈ ವರ್ಷ  ಕೃಪಿಗಾಗಿ  ಬೀಜ  ಗೋಬ್ಬರಕ್ಕಾಗಿ  ಮನೆಯಲ್ಲಿದ್ದ  ಬಂಗಾರ ಮಾರಿ 25  ಸಾವಿರ  ಖರ್ಚು ಮಾಡಿರುತ್ತಾನೆ. ಈ ವರ್ಷ ಸರಿಯಾಗಿ ಮಳೆ ಆಗದ ಕಾರಣ ಹೋಲದಲ್ಲಿ ಹಾಕಿದ ಕಬ್ಬು, ತೋಗರಿ ಸರಿಯಾಗಿ ಬೆಳೆಯದೆ ಒಣಗಿ  ಹೋಗಿದ್ದರಿಂದ ನನ್ನ ಗಂಡನು ತಾನು ಮಾಡಿದ ಕೈಗಡ ಸಾಲ ಮರುಪಾವತಿಸುವುದು ಹೇಗೆ ಎಂದು ಚಿಂತೆಗಿಡಾಗಿದ್ದು. ಅದಕ್ಕೆ ನಾನು ನನ್ನ ಗಂಡನಿಗೆ ಚಿಂತೆಮಾಡಬೇಡ ಮುಂದಿನ ವರ್ಷ ಮಳೆ ಚನ್ನಾಗಿ ಆಗಬಹುದು ಆಗ ಸಾಲ ತಿರಿಸಿದರೆ ಆಯಿತು ಅಂತಾ ದೈರ್ಯ ತುಂಬುತ್ತಾ  ಬಂದಿದ್ದು. ದಿನಾಂಕ:01/12/2015 ರಂದು ಮದ್ಯಾನ್ಹ 1 ಗಂಟೆ ಸುಮಾರಿಗೆ ಅಣ್ಣನ ಹೋಲಕ್ಕೆ ಹೋಗಿಬರುತ್ತೇನೆ ಅಂತಾ  ಹೇಳಿ  ಹೋಗಿ ಹೋಲದಲ್ಲಿ ಗುಡಿಸಲ ಪಕ್ಕದಲ್ಲಿರುವ   ಬೇವಿನ ಮರಕ್ಕೆ  ಹಗ್ಗದಿಂದ  ನೇಣು  ಹಾಕಿಕೊಂಡು  ಮೃತಪಟ್ಟಿದ್ದು. ನನ್ನ ಗಂಡನು ತಾನು ಮಾಡಿದ  ಕೈಗಡ ಸಾಲ ಮರು ಪಾವತಿಸುವುದು ಹೇಗೆ ಎಂದು ಚಿಂತೆ ಮಾಡಿ ಆತಂಕಕ್ಕೊಳಗಾಗಿ ಮನನೊಂದು  ಕೋಗನೂರ  ಸಿಮಾಂತರದಲ್ಲಿರುವ ಹೋಲದಲ್ಲಿ ಬೇವಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ  ಮಾಡಿಕೊಂಡಿದ್ದು. ಮುಂದಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೆವೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ

01 December 2015

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಡಾ:ಚಂದ್ರಕಲಾ ಗಂಡ ಶ್ರೀನಿವಾಸರಾವ ಬನ್ನೂರಕರ  ಉ: ಬಿ.ಎ.ಎಂ.ಎಸ್. (ಎಂ.ಎಸ್.) ಡಾಕ್ಟರ ವೃತ್ತಿ ಸಾ: ಬಿದ್ದಾಪುರ ಕಾಲನಿ ಕಲಬುರಗಿ ರವರಿಗೆ ದಿನಾಂಕ 6-2-2013 ರಂದು ಕಲಬುರಗಿ ನಗರದ ಬಿದ್ದಾಪೂರ ಕಾಲನಿ ರಾಣಪ್ಪ ಬನ್ನೂರಕರ ಇವರ ಮಗನಾದ ಡಾ:ಶ್ರೀನಿವಾಸ ಇತನೊಂದಿಗೆ ಮದುವೆಯಾಗಿದ್ದು, ಮದುವೆ ಕಾಲಕ್ಕೆ ವರಉಪಚಾರಕ್ಕೆಂದು 8 ತೊಲೆ ಬಂಗಾರ ಮತ್ತು 1 ಲಕ್ಷ ರೂಪಾಯಿ ಕೊಟ್ಟಿದ್ದು  ಹಾಗೂ ಲಗ್ನಕ್ಕೆ ಬೇಕಾಗುವ ಸಾಮಾನುಗಳನ್ನು ಕೊಟ್ಟು ಕಲಬುರಗಿ ನಗರದ ಕೋಠಾರಿ ಭವನದಲ್ಲಿ ಮದುವೆ ಮಾಡಿದ್ದು, ಮದುವೆಯಾದ 2-3 ತಿಂಗಳ ವರೆಗೆ  ನನ್ನ ಗಂಡ ಶ್ರೀನಿವಾಸರಾವ ತಂದೆ ರಾಣಪ್ಪ ಬನ್ನೂರಕರ  ಅತ್ತೆ ಸುಲೋಚನಾ ಗಂಡ ರಾಣಪ್ಪ ಬನ್ನೂರಕರ  ಮಾವ ರಾಣಪ್ಪ ತಂದೆ ಶರಣಪ್ಪ ಬನ್ನುರಕರ ಇವರೆಲ್ಲರೂ ಸರಿಯಾಗಿ ನೋಡಿಕೊಂಡು ನಂತರ ನನ್ನ ಗಂಡ  ಅತ್ತೆ, ಮಾವ ಹಾಗೂ ನಾದಿನಿಯರಾದ ಲಲಿತಾ ಗಂಡ ಮೋಹನಚಂದ್ರ ಸುತಾರ ಸಾ:ಬಿದ್ದಾಪೂರ ಕಾಲನಿ ಕಲಬುರಗಿ, ಸುಧಾ ಗಂಡ ಸಂತೋಷ ಗೊರಟಿ ಸಾ: ಬಿದ್ದಾಪುರ ಕಾಲನಿ ಕಲಬುರಗಿ, ಸುನಿತಾ ಗಂಡ ಶರಣಬಸಪ್ಪ ಹೋಳಕರ ಸಾ: ಬಿದ್ದಾಪೂರ ಕಾಲನಿ ಕಲಬುರಗಿ ಇವರೆಲ್ಲರೂ ನನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ ಮತ್ತು ನಾನು ಈ ಹಿಂದೆ ವಿದ್ಯಾಭ್ಯಾಸ ಮಾಡುವ ಕಾಲಕ್ಕೆ ಸರಕಾರದಿಂದ ಬರುತ್ತಿದ್ದ ಸೈಫಂಡರ್ಸ (ಶಿಷ್ಯ ವೇತನ) ತಿಂಗಳ 25,000/-ರೂ. ಕೊಡುವಂತೆ ಹೊಡೆ ಬಡಿ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದು, ಅಲ್ಲದೇ ಈ ಹಿಂದೆ ಅಂದರೆ ನನ್ನ ಮದುವೆಕ್ಕಿಂತ ಮುಂಚಿತವಾಗಿ ನನ್ನ ಹತ್ತಿರ ಇದ್ದ ಶಿಷ್ಯ ವೇತನದ  ಜಮಾ ಇದ್ದ ಸುಮಾರು 1,50,000 ರೂ. ಹಣ ಸಹಾ ನನ್ನ ಗಂಡ ಪಡೆದುಕೊಂಡಿರುತ್ತಾರೆ. ನಾನು ಈಗ ಸುಮಾರು 10 ತಿಂಗಳಿಂದ ಕಲಬುರಗಿ ನಗರದ ಹಿಂಗುಲಾಂಬಿಕಾ ಆರ್ಯುವೇದಿಕ ಮೆಡಿಕಲ ಕಾಲೇಜನಲ್ಲಿ ಸಹಾಯಕಿ ಉಪನ್ಯಾಸಕಿ ಅಂತಾ  ಕೆಲಸಕ್ಕೆ ಹೋಗುತ್ತಿದ್ದು, ನನಗೆ ಪ್ರತಿ ತಿಂಗಳು 14,500 ರೂ. ಸಂಬಳ ಕೊಡುತ್ತಿದ್ದಾರೆ ಸದರಿ ಸಂಬಳವು ಸಹ ನನ್ನ ಗಂಡ ಮನೆಯವರು  ತೆಗೆದುಕೊಳ್ಳುತ್ತಿದ್ದು ನಾನು ಎನಾದರು ಕೇಳಿದರೆ ಹೊಡೆ ಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ರಂಡಿ ನೀನು ನಾವು ಹೇಳಿದ ಹಾಗೇ ಕೇಳಬೇಕು ಅಂತಾ ನನ್ನ ವೃತ್ತಿ ಕೆಲಸಕ್ಕೆ  ಕಳಹಿಸದೇ ಕೆಲಸ ಮಾಡು ಅಂತಾ ಹೊಡೆ ಬಡಿ ಮಾಡಿ  ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದು , ದಿನಾಂಕ. 15-11-2015 ರಂದು 5-00 ಪಿ.ಎಂ.ಕ್ಕೆ ಬಿದ್ದಾಪುರ ಕಾಲೂನಿಯ ಮನೆಯಲ್ಲಿ ಫಿರ್ಯಾದಿದಾರಳ ಗಂಡ ಡಾ;ಶ್ರಿನಿವಾಸ , ಅತ್ತೆಸುಲೋಚನಾ , ಮಾವ ರಾಣಪ್ಪಾ , ನಾದನಿಯರಾದ ಲಲಿತಾ , ಸುಧಾ , ಸುನೀತಾ  ಎಲ್ಲರೂ ಕೂಡಿಕೊಂಡು   ಮನೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೆ  ಇನ್ನೂ ವರದಕ್ಷಣೀ ರೂಪದಲ್ಲಿ ಹಣ , ಬಂಗಾರ ಮತ್ತು ಕಾರ ತೆಗೆದುಕೊಂಡು ಬಾ ಎಂದು ಎಲ್ಲರೂ ಜಗಳ ತೆಗೆದು ನನಗೆ ಹೊಡೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟಿರುತ್ತಾರೆ  ದಿನಾಂಕ 15-11-2015 ರಂದು ನನ್ನ ಗಂಡ ಮತ್ತು ಮನೆಯವರೆಲ್ಲರೂ ಕೂಡಿ ನನಗೆ ಹೊಡೆ ಬಡಿಮಾಡಿದಕ್ಕೆ  ನನಗೆ ಮನಸಿನ ಮೇಲೆ ಆಘಾತವಾಗಿದಕ್ಕೆ  ಸರಿಯಾಗಿ ಫಿರ್ಯಾದಿ ನೀಡಲು ಆಗಿರುವದಿಲ್ಲಾ . ಅಲ್ಲದೆ  ನನ್ನ ಮಾವ ರಾಣಪ್ಪಾ ಇವರು ನನಗೆ ರಂಡಿ ನಮ್ಮ ಮನೆಯು ನಿನಗೆ ಲಾಡ್ಜ, ಬೋರ್ಡಿಂಗ ಮಾಡರುವದು ನಿನು ನಮ್ಮ ಮನೆಗೆ ಬಂದು ಆರಾಮ ಇರುವದಕ್ಕೆ ಕಟ್ಟಿರುವದಿಲ್ಲಾ ಮನೆಯಲ್ಲಿರುವ ನೀನು ಕೂಡಾ ಪ್ರತಿತಿಂಗಳ ಸಂಬಳ ನನ್ನ ಕೈಯಲ್ಲಿ ಕೊಡಬೇಕು ಎಂದು  ಹಿಂಸೆ ಕೋಡುತ್ತಾ ಬಂದಿರುತ್ತಾರೆ, ಅಲ್ಲದೆ ಜುಲೈ 2015 ತಿಂಗಳಲ್ಲಿ ನನ್ನ ಅಕೌಂಟನಲ್ಲಿದ್ದ  ಹಣವನ್ನು ಕೂಡಾ ತೆಗೆದುಕೊಂಡಿರುತ್ತಾರೆ, ಆದರೆ ನನ್ನ ಗಂಡ ಶ್ರೀನಿವಾಸ, ಅತ್ತೆ ಸುಲೋಚನಾ, ಮಾವ ರಾಣಪ್ಪ, ನಾದಿನಿಯರಾದ ಲಲಿತಾ, ಸುಧಾ ಎಲ್ಲರೂ ಕೂಡಿಕೊಂಡು  ಕಳೆದ 1 ವರ್ಷದಿಂದ ನನಗೆ ರಂಡಿ ಮದುವೆ ಕಾಲಕ್ಕೆ ವರದಕ್ಷಿಣೆ ಕೊಟ್ಟಿರುವದಿಲ್ಲಾ ನಿನಗೆ ಬಿಟ್ಟರೆ ಬಹಳಷ್ಟು ವರದಕ್ಷಿಣೆ ಕೋಡುತ್ತಿದ್ದರು ಈಗ ನಿಮ್ಮ ತಾಯಿಯಿಂದ 5 ಲಕ್ಷ ರೂಪಾಯಿ ಒಂದು ಕಾರು  ಹಾಗೂ ಒಂದು ಡೈನಿಂಗ ಟೇಬಲ್ ಮತ್ತು 5 ತೊಲೆಬಂಗಾರ ವರದಕ್ಷಣೆ ರೂಪದಲ್ಲಿ ತೆಗೆದುಕೊಂಡು ಬಂದರೆ ನಮ್ಮ ಮನೆಯಲ್ಲಿರಬೇಕು ಇಲ್ಲದಿದ್ದರೆ ಈ ಮನೆಯಲ್ಲಿ ನಿನಗೆ ಜಾಗ ಇಲ್ಲಾ ಎಂದು ನನಗೆ ಹೊಡೆ ಬಡಿ ಮಾಡುತ್ತಾ  ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೋಡುತ್ತಿದ್ದಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಚಂದ್ರಕಾಂತ ತಂದೆ ಮಲ್ಲೇಶಪ್ಪಾ ಶಿವಕೇರಿ ಸಾ:ವಿದ್ಯಾನಗರ ಕಲಬುರಗಿ ಇವರು ದಿನಾಂಕ:-30/11/2015 ರಂದು ಮದ್ಯ ರಾತ್ರಿ 00:30 ಗಂಟೆ ಸುಮಾರಿಗೆ ಫಿರ್ಯಾದಿದಾರನು ಸಂಡಾಸಕ್ಕೆ ಕಟ್ಟಿಗೆ ಅಡ್ಡಾದ ಹತ್ತಿರ ನಮ್ಮೂರ ರಾಜು ತಂದೆ ಹಣಮಂತ ದ್ಯಾಗಾಯಿ ಇವನ ತಮ್ಮ ರವಿ ದ್ಯಾಗಾಯಿ ಅಕ್ಕನ ಮಗ ಅವಿನಾಶ, ಕೆಕೆ ನಗರದ ಆನಂದ ಸೂಗುರ, ಪಾಂಡು ಭಾಂಡೆದ ಇವರೆಲ್ಲರೂ ಕುಳಿತ್ತಿದ್ದರು. ನಾನು ಸಂಡಾಸ ಮಾಡಿ ಮರಳಿ ಮನೆಯ ಕಡೆಗೆ ಬರುತ್ತಿರುವಾಗ ಅಡ್ಡಾದ ಹತ್ತಿರ ಕುಳಿತ್ತಿದ್ದ ರಾಜು ದ್ಯಾಗಾಯಿ ಇವನು ಅವನ ಸಂಗಡ ಕುಳಿತ್ತಿದ್ದವರು ನಾನು ಬರುವುದು ಹೇಳಿ ಅಲ್ಲಿಂದ ಎದ್ದು ಸ್ವಲ್ಪ ದೂರದಲ್ಲಿ ಹೋಗಿ ನಿಂತನು ಮನೆಯ ಕಡೆಗೆ ಹೋಗುತ್ತಿರುವನಿಗೆ ರಾಜುನ ತಮ್ಮ ರವಿ ದ್ಯಾಗಾಯಿ ಕರೆದನು ನಾನು ಅವರಲ್ಲಿಗೆ ಹೋದ ಕೂಡಲೇ ಎಲ್ಲರೂ ಕೂಡಿ ನನ್ನ ಸಂಗಡ ತೆಕ್ಕಿಗೆ ಬಿದ್ದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಎಳೆದಾಡುತ್ತಾ ಹೊಡೆಯುತ್ತಾ ಕಮಿಟಿ ಹಾಲದ ಕಪೌಂಡ ಒಳಗೆ ಎಳೆದುಕೊಂಡು ಹೋಗುತ್ತಿದ್ದರು ರಾಜು ದ್ಯಾಗಾಯಿ ಬೀಡಬೇಡಿರಿ ಅವನಿಗೆ ಖೂನಿ ಮಾಡಿಯೇ ಬಿಡಿರಿ ಎಂದು ಹೇಳತ್ತಿದ್ದನು ಇವರೆಲ್ಲರೂ ನನ್ನನ್ನು ಕಮಿಟಿ ಹಾಲಿನಲ್ಲಿ ಖೂನಿ ಮಾಡುತ್ತೇವೆ ಭೋಸಡಿ ಮಗನಿಗೆ ನಿನ್ನೆಗೆ ಬೀಡಿವುದಿಲ್ಲಾ ಎಳೆದುಕೊಂಡು ಹೋಗುತ್ತಿದ್ದಾಗ ಅವರಿಂದ ಬಿಡಿಸಿ ಕೊಂಡು ನಾನು ನನ್ನ ಮನೆಗೆ ಓಡಿ ಬಂದೇನು ಆವಾಗ ರಾತ್ರಿ ಅಂದಾಜು ಒಂದು ಗಂಟೆ ಆಗಿರಬಹುದು.ನಾನು ಮನೆಗೆ ಓಡಿ ಬಂದ ಕೂಡಲೇ ಸದರಿಯವರೆಲ್ಲರೂ ನನ್ನ ಹಿಂದೆಯೇ ಮನೆಗೆ ಬಂದು ಮನೆಯಲ್ಲಿದ್ದವನನ್ನು ಏಳದಾಡಿ ಹೊಲಸು ಶಬ್ದದಿಂದ ಬೈಯ್ಯತ್ತಾ ಕಲ್ಲು ಮನೆಯ ಮೇಲೆ ಹೊಡೆದರು ಹೆಣ್ಣು ಮಕ್ಕಳು ನಮ್ಮ ಅಣ್ಣನು ಕುಪೇಂದ್ರ ಎಲ್ಲರೂ ಬಂದ ಕೂಡಲೇ ಮನೆಯ ಮುಂದಿನಿಂದ ಹೋದರು  , ಸದರಿಯವರು ನನಗೆ ಮುಖದ ಮೇಲೆ ಬಾಯಿಯ ಮೇಲೆ ಹೊಡೆದಿದ್ದರಿಂದ ತುಟಿಗೆಗಳಿಗೆ ಪೆಟ್ಟು ಆಗಿ ರಕ್ತ ಬಂದು ಬಾವು ಬಂದಿರುತ್ತದೆ ಮತ್ತು ಗುಪ್ತ ಪೆಟ್ಟು ಆಗಿರುತ್ತದೆ, ಸದರಿಯವರು ಕಪನೂರ ಸಿಮಾಂತರದಲ್ಲಿರುವ  ಹೊಲಾ ಸರ್ವೆ ನಂ 56/1 ನೇದ್ದರ ಬಗ್ಗೆ ನಮ್ಮ ಅಣ್ಣನಿಗೂ ಅವರಿಗು ಕೇಸ ನಡೆದಿರುತ್ತದೆ ಅಣ್ಣನಿಗೆ ಇವನೇ ಸಹಾಯ ಮಾಡುತ್ತಿದ್ದಾನೆ ಎಂದು ಎಳೆದುಕೊಂಡು ನನಗೆ ಕೊಲೆ ಮಾಡಲು ಪ್ರಯತ್ನಸಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಆನಂದ ತಂದೆ ಮಲ್ಲಪ್ಪ ಸೂಗುರ ಸಾ:ಕೆಕೆ ನಗರ ಕಲಬುರಗಿ ಇವರು ದಿನಾಂಕ:-30/11/2015 ರಂದು ಮದ್ಯ ರಾತ್ರಿ 00:30 ಗಂಟೆ ಸುಮಾರಿಗೆ ಫಿರ್ಯದಿ ಹಾಗು ಗಾಯಾಳು ರವಿಂದ್ರ ತಂದೆ ಹಣಮಂತ ದ್ಯಾಗಾಯಿ ಹಾಗು ಅವಿನಾಶ ಚಿಂಚೋಳಿ ಎಲ್ಲರೂ ಕಪನೂರದ ಹರಿಜನವಾಡಾದ ಕಮಿಟಿ ಹಾಲದಲ್ಲಿ ಕುಳಿತುರುವಾಗ ಆಗ ಅದೇ ಸಮಯಕ್ಕೆ ನಮ್ಮ ಪೈಕಿಯವರಾದ 1) ಚಂದ್ರಕಾಂತ ತಂದೆ ಮಲ್ಲೇಶಪ್ಪಾ ಶಿವಕೇರಿ, 2) ಕುಪೇಂದ್ರ ತಂದೆ ಮಲ್ಲೇಶಪ್ಪ ಶಿವಕೇರಿ, 3) ರೇಖಾ ಗಂಡ ಚಂದ್ರಕಾಂತ ಶಿವಕೇರಿ, 4) ರವಿ ತಂದೆ ಕುಪೇಂದ್ರ ಶಿವಕೇರಿ 5) ಶಿವಕುಮಾರ ತಂದೆ ಕುಪೇಂದ್ರ ಶಿವಕೇರಿ 6) ವಿನೋದ ತಂದೆ ಕುಪೇಂದ್ರ ಶಿವಕೇರಿ 7) ಸುರೇಶ ತಂದೆ ದೇವಿಂದ್ರಪ್ಪ ಶಿವಕೇರಿ 8) ಅನ್ನಪೂರ್ಣ ಗಂಡ ಹಣಮಂತ ಶಿವಕೇರಿ ಸಾ:ಎಲ್ಲರೂ ಕಪನೂರ ಇವರೆಲ್ಲರೂ ಕಪನೂರ ಸಿಮಾಂತರದ ಹೋಲಾ ಸರ್ವೆ ನಂ 56/1 ಹಾಗು ರೇಶನ ಹಂಚುವ ವಿಷಯದ ಸಂಬಂದ ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆ ಕಬ್ಬಿಣದ ರಾಡ, ಕಲ್ಲು ಚಾಕು ಹಿಡಿದುಕೊಂಡು ಬಂದವರೇ ಫಿರ್ಯಾದಿಗೆ ಹಾಗು ಗಾಯಾಳುದಾರನಾದ ರವಿಂದ್ರ ದ್ಯಾಗಾಂವ ಇಬ್ಬರಿಗೆ ಹೊಡೆದು ಭಾರಿ ಮತ್ತು ಸಾದಾ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಸಿದ್ದು ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ:- 30/11/2015 ರಂದು ಬೆಳಿಗ್ಗೆ ಶ್ರೀ ಹುಚ್ಚಪ್ಪ ತಂದೆ ಭೀಮಣ್ಣ ನಾಯಿಕೊಡಿ ಸಾ ಉಡಚಣ ರವರು ಬಸವೇಶ್ವರ ವೃತ್ತದ ಹತ್ತಿರ ಇದ್ದಾಗ ಮೊಟಾರ ಸೈಕಲ್ ನಂ. ಕೆಎ32 ಇಇ-9674 ನೇದ್ದರ ಚಾಲಕನಾದ ಸಾಯಿಬಣ್ಣ ಜಮಾದಾರ ಮತ್ತು ಅವನ ಬೈಕೆ ಮೇಲೆ ಕುಳಿತ ಇನ್ನು ಒಬ್ಬ, ಇಬ್ಬರು ಸೇರಿಕೊಂಡು ತಮ್ಮ ಮೊಟಾರ ಸೈಕಲ್ ನೇದ್ದನ್ನು ನಮ್ಮ ಸರಕಾರಿ ಬಸ್ಸಿನ ಮುಂದೆ ನಿಲ್ಲಿಸಿ ಸರಕಾರಿ ಕೆಲಸಕ್ಕೆ ಅಡತಡೆ ಮಾಡಿ ಸರಕಾರಿ ಕೆಲಸದ ಮೇಲಿರುವ ನನಗೆ ಮುಂದೆ ಹೊಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಮತ್ತು ಕಾಲಿನಿಂದ ಒದ್ದು ನೋವುಂಟು ಮಾಡಿ ಜೀವ ಭಯ ಹಾಕಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಮಹ್ಮದ ಶೇಖ ಈತನು ತನ್ನ ಆಟೋರೀಕ್ಷಾ ನಂ: ಕೆಎ 32 8868 ನೇದ್ದರಲ್ಲಿ ಮೃತ ಹಸೀನಾಬೇಗಂ ಗಂಡ ಸಲೀಮಶೇಖ ಹಾಗೂ ಅವಳ ಮಗ ಸೋಹೇಲ್ ಇವರಿಗೆ ಕೂಡಿಸಿಕೊಂಡು ಮದುವೆಯ ಆಮಂತ್ರಣ ಪತ್ರ ಕೊಡಲು ಹೋಗಿ ಆಮಂತ್ರಣ ಪತ್ರಿಕೆ ಕೊಟ್ಟು ಮರಳಿ ಮನೆಯ ಕಡೆಗೆ ಬರುವಾಗ ತನ್ನ ಆಟೋವನ್ನು ಅತಿವೇಗ & ನಿಸ್ಕಾಳಜಿತನದಿಂದ ಚಲಾಯಿಸಿ ಪೀರ ಬಂಗಾಲಿ ದರ್ಗಾದ ಎದುರುಗಡೆ ಬಂದಾಗ ಒಂದು ನಾಯಿ ಅಡ್ಡ ಬರಲು ತಪ್ಪಿಸಲು ಹೋಗಿ ವೇಗದಲ್ಲಿದ್ದ ಆಟೋವನ್ನು ಬಲಕ್ಕೆ ತಿರುಗಿಸಿದಾಗ ವೇಗದ ನಿಯಂತ್ರಣ ತಪ್ಪಿ ಆಟೋ ಪ್ಲಟಿಯಾಗಿ ರೋಡಿನ ಮೇಲೆ ಬಿದ್ದಾಗ ಒಳಗೆ ಕುಳಿತ ಹಸೀನಾ ಬೇಗಂ ಇವಳಿಗೆ ಬಲಗೈ ಮುಂಗೈ ಮೇಲೆ, ಬಲಗೈ ಮೊಣಕಟ್ಟಿಗೆ ಹಣೆಗೆ, ಬಲಗಾಲ ಮೊಳಕಾಲಿಗೆ, ತಲೆಗೆ ಭಾರಿ ಪೆಟ್ಟಾಗಿದ್ದು, ಮಗ ಸೊಹೇಲ್ ಹಾಗೂ ಚಾಲಕನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು, ಹಸೀನಾ ಬೇಗಂ ಇವಳಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದಾಗ ಉಪಚಾರ ಫಲಕಾರಿ ಆಗದೆ ಬೆಳಿಗ್ಗೆ 10:38 ಗಂಟೆಗೆ ಮೃತ ಪಟ್ಟಿರುತ್ತಾಳೆ ಅಂತಾ ಶ್ರೀ ಮಹ್ಮದಶೇಖ ತಂದೆ ಜಾವೀದ ಶೇಖ ಆಟೋ ನಂ-ಕೆಎ32 8868ನೇದ್ದರ ಚಾಲಕ ಸಾ|| ಉಮರ ಕಾಲೋನಿ ಕಲಬುರಗಿ   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ನನ್ನ ಕಾಕನ ಮಗಳ ಲಗ್ನವಿದ್ದ ಪ್ರಯುಕ್ತ ಲಗ್ನ ಪತ್ರಿಕೆಯನ್ನು ಸಂಬಂದಿಕರಿಗೆ ಹಂಚಿಕೆ ಮಾಡಲು ನನ್ನ ಗಂಡ ವಿರೇಶ ಇವರು ನಿನ್ನೆ ದಿನಾಂಕ-29/11/2015 ರಂದು ನಮ್ಮ ಸಂಭಂದಿಕರಾದ ರಾಮಯ್ಯಾ ಇವರ ಮೋಟಾರ ಸೈಕಲ ನಂ ಕೆಎ-32 ಇಸಿ-0230 ನೇದ್ದನ್ನು ಪಿ.ಎಮ್ ಕ್ಕೆ ತೆಗೆದುಕೊಂಡು ಕಲಬುರಗಿಗೆ ಹಾಗೂ ಇತರ ಕಡೆಗೆ ಹಂಚಿ ಬರುವುದಾಗಿ ಹೇಳಿ ಹೋದನು. ನಂತರ ಸಾಯಾಂಕಾಲ 6-30 ಪಿ.ಎಮ್ ಕ್ಕೆ ಮನೆಯಲ್ಲಿದ್ದಾಗ ನಮ್ಮೂರಿನ ಕಾಶಪ್ಪಾ ಇವರು ಫೋನ್ ಮಾಡಿ ತಿಳಿಸಿದೆನೆಂದರೆನಾನು ಸೇಡಂದಿಂದ ಟೆಂಗಳಿ ಕ್ರಾಸ್ ಗೆ ಹೋಗುತ್ತಿರುವಾಗ ಪಿ.ಎಮ್ ದ ಸುಮಾರಿಗೆ ಮಲಕೂಡ ಕ್ರಾಸ್ ದಾಟಿ ಸ್ವಲ್ಪ ದೂರದಲ್ಲಿ ರಾಜ್ಯ ರಸ್ತೆ ಹೆದ್ದಾರಿ ಮೇಲೆ ಒಬ್ಬ ಮೋಟಾರ ಸೈಕಲ ಸವಾರನು  ಮೋಟಾರ ಸೈಕಲ ಸಮೇತ ರೊಡಿನ ಮೇಲೆ ಬಿದಿದ್ದನ್ನು ನೋಡಿ ಹತ್ತಿರ ಹೋಗಿ ನೋಡಲಾಗಿ ವಿರೇಶ ಮಠ ಅಂತಾ ಗುರ್ತಿಸಿದ್ದು ಸದರಿಯವನಿಗೆ ತೆಲೆಗೆಗದ್ದಗಲ್ಲದ ಹತ್ತಿರ ಮೂಗಿನ ಮೇಲೆ ಹಾಗೂ ಬಲ ಗಣ್ಣಿನ ಹತ್ತಿರ ಭಾರಿ ರಕ್ತಗಾಯಾಗಳಾಗಿ ಸತ್ತಂತ್ತೆ ಬಿದ್ದಿರುತ್ತಾನೆ ಆತನಿಗೆ ಜಿ.ವ್ಹಿ.ಆರ್ ಅಂಬುಲೈನ್ಸ್ ನಲ್ಲಿ ಹಾಕಿಉಪಚಾರ ಕುರಿತು ಕಲಬುರಗಿಯ ಯುನೈಟೇಡ ಆಸ್ಪತ್ರಗೆ ಕಳುಹಿಸಿಕೊಟ್ಟಿರುತ್ತೇನೆ ತಾವು ಹೋಗಿ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಗೊಂಡು ನಮ್ಮ ದೂರಿನ ಸಂಭಂದಿಕರಾದ ಕಲ್ಲಯಾ ಇವರಿಗೆ ಪೋನ್ ಮಾಡಿ ಕಲಬುರಗಿಗೆಯ ಯುನೈಟೇಡ ಆಸ್ಪತ್ರೆಗೆ ಬರಲು ತಿಳಿಸಿ ನಾವು ಊರಿನಿಂದ ನಮ್ಮ ಅತ್ತೆ ಇಬ್ಬರೂ ರಾತ್ರಿ 8-30 ಪಿ.ಎಮ್ ದ ಸುಮಾರಿಗೆ ಕಲಬುರಗಿಗೆ ಬಂದಾಗ ಕಲ್ಲಯಾ ಇವರೂ ಸಹ ಬಂದಿದ್ದು ನಾವು ಜನ ಕೂಡಿ ನನ್ನ ಗಂಡನ ಹತ್ತಿರ ಹೋಗಿ ನೋಡಲು ತೆಲೆಗೆಗದ್ದಗಲ್ಲದ ಹತ್ತಿರ ಮೂಗಿನ ಮೇಲೆ ಹಾಗೂ ಬಲ ಗಣ್ಣಿನ ಹತ್ತಿರ ಭಾರಿ ರಕ್ತಗಾಯಾಗಳಾಗಿದ್ದು ಬ್ಯಾಂಡೆಜ್ ಹಚ್ಚಿರುತ್ತಾರೆ ಮಾತನಾಡುವ ಸ್ಥಿತ್ತಿಯಲ್ಲಿರಲ್ಲಿಲ್ಲಾ ನನ್ನ ಗಂಡ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೆ ದಿನಾಂಕ-30/11/2015 ರಂದು ಬೆಳಿಗ್ಗೆಗ ಎ.ಎಮ್ ಕ್ಕೆ ಮೃತ ಪಟ್ಟಿರುತ್ತಾನೆ.   ಕಾರಣ ನಿನ್ನೆ ದಿನಾಂಕ-29/11/2015 ರಂದು ಸಾಯಂಕಾಲ ಗಂಟೆ ಸುಮಾರಿಗೆ ನನ್ನ ಗಂಡ ಮೋಟಾರ ಸೈಕಲ ನಂ ಕೆಎ-32 ಇಸಿ-0230 ನೇದ್ದರ ಮೇಲೆ ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಊರಿಗೆ ಬರುವಾಗ ಮೋಟರ ಸೈಕಲ ಸಮೇತ ರೊಡಿನ ಕೆಳಗೆ ಬಿದ್ದು ತೆಲೆಗೆಗದ್ದಗಲ್ಲದ ಹತ್ತಿರ ಮೂಗಿನ ಮೇಲೆ ಹಾಗೂ ಬಲ ಗಣ್ಣಿನ ಹತ್ತಿರ ಭಾರಿ ರಕ್ತಗಾಯಾಗಳಾಗಿ ಸತ್ತಂತ್ತೆ ಬಿದ್ದಿದ್ದು ಯುನೈಟೇಡ ಆಸ್ಪತ್ರೆಯಲ್ಲಿ ಉಪಚಾರ ಹೊಂದದೆ ದಿನಾಂಕ-30/11/2015 ರಂದು ಎ.ಎಮ್ ಕ್ಕೆ ಮೃತ ಪಟ್ಟಿರುತ್ತಾನೆ ಅಂತಾ ಶ್ರೀಮತಿ ಕಾವೇರಿ ಗಂಡ ವರೇಶ ಮಠ ಸಾ : ಸೇಟ್ಟಿ ಹೂಡಾ ತಾ : ಸೇಡಂ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರ5ಣ ದಾಖಲಾಗಿದೆ. 
ದ್ವೀಚಕ್ರ ವಾಹನ ಕಳವು ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಅಶೋಕ ತಂದೆ ರಾವುತಪ್ಪ ಅಮ್ಮಣ್ಣಿ ಸಾ ಘತ್ತರಗಾ . ರವರ  ಹಿರೋ ಸ್ಪೇಂಡರ ಪ್ರೋ ಕಂಪನಿಯ ಮೋಟಾರ ಸೈಕಲ ನಂಬರ ಕೆಎ-32 ಇಕೆ-3458 ಅಂತಾ ಇರುತ್ತದೆ, ಚೆಸ್ಸಿ ನಂಬರ:- MBLHA10BFFHF07053 ಇಂಜೆನ ನಂಬರ:- HA10ERFH14096 ಅಂತಾ ಇದ್ದು, ಅಂದಾಜು 35,000/- ರೂ ಕಿಮ್ಮತ್ತಿನದ್ದನ್ನು ದಿನಾಂಕ 19-11-2015 ರಂದು 9;00 ಪಿ.ಎಂ ಸುಮಾರಿಗೆ ನಾನು ನಮ್ಮ ಹೊಲದಿಂದ ಮನೆಗೆ ಬಂದು ನಮ್ಮ ಮನೆಯ ಮುಂದೆ ನನ್ನ ಮೋಟರ ಸೈಕಲ್ ನಿಲ್ಲಿಸಿದ್ದು ನಂತರ 20-11-2015 ರಂದು ಬೆಳಗಿನ ಜಾವ 04:00 ಗಂಟೆಗೆ ಏಕಿ ಮಾಡಲು ಮನೆಯಿಂದ ಹೊರಗಡೆ ಬಂದು ನನ್ನ ಮೋಟರ ಸೈಕಲ್ ನೋಡಲಾಗಿ ನಾನು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ, ಸದರಿ ನನ್ನ ಮೋಟರ ಸೈಕಲನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ನಂತರ ಸದರಿ ನನ್ನ ಮೋಟಾರ ಸೈಕಲನ್ನು ಕಳ್ಳತನವಾದ ದಿನದಿಂದ ನಾನು ಮತ್ತು ನಮ್ಮ ಗ್ರಾಮ ಮಹೀಬೂಬ ಪಟೆಲ ಹಾಗೂ ಸಂಗಯ್ಯ ತಂದೆ ಸಿದ್ದಯ್ಯ ಮಠಪತಿ  ರವರು ಕೂಡಿ ಜೆರಟಗಿ, ಮೋಟಗಿ,ಚವಡಾಪೂರ ಮತ್ತು ಅಫಜಲಪೂರ ಪಟ್ಟಣದಲ್ಲಿ ಎಲ್ಲಾಕಡೆ ಹುಡಕಾಡಿದರು ಕಳತನವಾದ ನಮ್ಮ ಮೋಟರ ಸೈಕಲ್ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.