POLICE BHAVAN KALABURAGI

POLICE BHAVAN KALABURAGI

25 November 2015

Kalaburagi District Press Note

                            ಪತ್ರಿಕಾ ಪ್ರಕಟಣೆ                         ದಿನಾಂಕ : 25/11/2015

          ಹೈದ್ರಾಬಾದ ಕರ್ನಾಟಕ ಪ್ರದೇಶದ ಕಲಬುರಗಿ ಮತ್ತು ಯಾದಗೀರಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ದಲಿತರ ಸಮಸ್ಯಗಳ ಬಗ್ಗೆ ಚರ್ಚಿಸುವ ಸಲುವಾಗಿ ಈಶಾನ್ಯ ವಲಯದ ಐಜಿಪಿ ಯವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಾಃ ಮಲ್ಲೇಶಿ ಸಜ್ಜನ ಹಾಗು ಸಂಘಟನಾ ಸಂಚಾಲಕರಾದ ಶ್ರೀ ಅರ್ಜುನ ಭದ್ರೆ ಇವರು ಭೇಟಿ ಮಾಡಲು ಬಂದಾಗ ಸಂಪರ್ಕ ಕೊರತೆಯಿಂದಾಗಿ ಮತ್ತು ಕೆಲಸದ ಒತ್ತಡದಿಂದಾಗಿ ಭೇಟಿಯಾಗಲು ಸಾದ್ಯವಾಗಿರದ ಕಾರಣ ಸದರಿಯವರನ್ನು, ಸಮಸ್ಯಗಳ ಬಗ್ಗೆ ಚರ್ಚಿಸಲು ದಿನಾಂಕ 27-11-2015 ರಂದು ಬೆಳಿಗ್ಗೆ 11-00 ಗಂಟೆಗೆ ಐಜಿಪಿ ಈಶಾನ್ಯ ವಲಯ ಕಛೇರಿಯಲ್ಲಿ ಸಮಯ ನಿಗಧಿ ಪಡಿಸಿದ್ದರಿಂದ ಈ ಬಗ್ಗೆ ದಿನಾಂಕ 27-11-2015 ರಂದು ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ಹಿಂಪಡೆಯಲು ಕೋರಿಕೊಂಡ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದುಕೊಂಡಿರುತ್ತಾರೆಂದು ತಿಳಿದುಬಂದಿರುತ್ತದೆ.

                                                               ಪೊಲೀಸ ಮಹಾನಿರೀಕ್ಷಕರು,
                                                                   (ಈ.ವ.) ಕಲಬುರಗಿ.

Kalaburagi District Reported Crimes


ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೋರ ಠಾಣೆ : ದಿನಾಂಕ 24-11-2015 ರಂದು  ಅಫಜಲಪೂರ ಪಟ್ಟಣದ  ಡಿಗ್ರಿ ಕಾಲೇಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀಮಂತ ಇಲ್ಲಾಳ ಪಿ.ಎಸ್.ಐ ಡಿ.ಸಿ.ಬಿ ಘಟಕ ಹಾಗೂ ಸಿಬ್ಬಂದಿ ಜನರಾದ 1) ಪ್ರದೀಪ ಕುಲಕರ್ಣಿ ಹೆಚ್ ಸಿ 420 2) ನಾಗೇಂದ್ರ ಸಿಪಿಸಿ 386 ಮತ್ತು ಪಂಚರೊಂದಿಗೆ  ಮತ್ತು ಅಫಜಲಪೂರ ಠಾಣೆಯ ಶ್ರೀ ಸುರೇಶ ಸಿಪಿಸಿ-801  ಕೂಡಿಕೊಂಡು ಸ್ಥಳಕ್ಕೆ ಹೋಗಿ, ಅಫಜಲಪೂರ ಪಟ್ಟಣದ ಡಿಗ್ರಿ ಕಾಲೇಜಿನಿಂದ  ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಡಿಗ್ರಿ ಕಾಲೇಜಿನ ಹತ್ತಿರ ಇರುವ ಒಂದು ಹೋಟೆಲಿನ ಮುಂದಿನ  ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರಿಗೆ ವಂಚಿಸಿ ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿದಾಗ ಒಬ್ಬ ಸಿಕ್ಕಿದ್ದು  ಕತ್ತಲಲ್ಲಿ ಮೂರು ಜನರು ಓಡಿ ಹೋದರು ಸಿಕ್ಕವನ  ಹೆಸರು ವಿಳಾಸ ವಿಚಾರಿಸಲಾಗಿ  ಚಂದ್ರಕಾಂತ ತಂದೆ ಸಿದರಾಯ ಅಳ್ಳಗಿ ಸಾ : ಅಳ್ಳಗಿ ಹಾ:: ಅಫಜಲಪೂರ  ಅಂತಾ ತಿಳಿಸಿದನು. ಸದರಿಯವನನ್ನು ಮಟಕಾ ಬರೆದುಕೊಂಡು ಎಲ್ಲಿ ಕೊಡುತ್ತಿರಿ, ಯಾರಿಗೆ ಕೊಡುತ್ತಿ ಎಂಬುದರ ಬಗ್ಗೆ ವಿಚಾರಿಸಿದ್ದು, ಸದರಿಯವನು ಇಲ್ಲಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡು ಮಹಾರಾಷ್ಟ್ರದ ದುದನಿಗೆ ಹೋಗಿ ಬಸ್ಸ ನಿಲ್ದಾಣದಲ್ಲಿ ತಿರುಗಾಡಿ ಮಟಕಾ ಬುಕ್ಕಿಗಳಿಗೆ ಕೋಡುತ್ತೇನೆ ಅವರ ಹೇಸರು ನಮಗೆ ಗೊತ್ತಿರುವುದಿಲ್ಲ ಅಂತಾ ತಿಳಿಸಿದನು. ನಂತರ ಓಡಿ ಹೋದ ಮೂರು ಜನರ ಹೆಸರು ವಿಳಾಸ ವಿಚಾರಿಸಲಾಗಿ 1) ಚಂದ್ರು ತಂದೆ ಅಪ್ಪಾಸಾಬ ಅವರಾದಿ ಸಾ : ಮಡ್ಡಿ ಏರಿಯಾ ಅಫಜಲಪೂರ ಇತನು ಕೂಡ ಮಟಕಾ ಬರೆದುಕೊಳ್ಳುತ್ತಾನೆ ನಾನು ಇವನ ಸಹಾಯಕನಾಗಿ ಕೆಲಸ ಮಾಡುತ್ತೇನೆ ಅಂತ ತಿಳಿಸಿದ್ದು ಇನ್ನೂ ಇಬ್ಬರ ಹೆಸರು  2) ರಮೇಶ  ಸಾ:ಅಫಜಲಪೂರ 2) ಸೂರ್ಯಕಾಂತ ಕೋಳಿಗೇರಿ ಸಾ :ಅಫಜಲಪೂರ ಅಂತ ತಿಳಿಸಿದ್ದು ಇವರು ಮಟಕಾ ಬರೆಸುತಿದ್ದರು ಅಂತ ತಿಳಿಸಿದನು   ನಂತರ ಸದರಿಯವನ ಅಂಗ ಶೋದನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ 1120/- ರೂ ನಗದು ಹಣ, ಎರಡು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು, ಒಂದು ಪೇನ್ನ ಕಾರ್ಬನ ಕಂಪನಿಯ ಹಳೆಯ ಸಾದಾ ಮೋಬೈಲ ಪೋನ ಅಕಿ-500/- ರೂ ಇವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ
ಕಮಲಾಪೋರ ಠಾಣೆ : ಶ್ರೀ ದೇವಿದಾಸ ತಂದೆ ಭದ್ದು ಜಾಧವ ಇವರು ದಿನಾಂಕ 23.11.2015 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಮ್ಮ ಗ್ರಾಮಕ್ಕೆ ಟ್ಯಾಕ್ಟರ ನಂ ಕೆಎ 28 ಟಿಬಿ 7805 ನೇದ್ದನು ಚಾಲಕನಾದ ಮಂಜು ಇತನೊಂದಿಗೆ ನಮ್ಮೂರಿಗೆ ಕಳುಹಿಸಿರುತ್ತಾನೆ. ನಿನ್ನೆ ದಿನಾಂಕ:23/11/2015 ಸಾಯಂಕಾಲ 6:00 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ 1) ಲಕ್ಷ್ಮಿಬಾಯಿ ಗಂಡ ದೇವಿದಾಸ ಜಾದವ ಮತ್ತು ನಮ್ಮೂರಿನ 2) ಲಲೀತಾಬಾಯಿ ತಂದೆ ದೇವಿದಾಸ ಜಾದವ 3) ವಸಂತ ತಂದೆ ಉಮಾಶಿಂಗ್ ಜಾದವ 4) ಸೇವುಬಾಯಿ ಗಂಡ ವಸಂತ ಜಾದವ 5) ಕ್ರೀಷ್ಣಾ ತಂದೆ ವಸಂತ ಜಾದವ 6) ಜೈಸಿಂಗ್ ತಂದೆ ಶಿತ್ಯಾನಾಯಕ ರಾಠೋಡ 7) ಕೃಷ್ಣಾ ತಂದೆ ರಾಮದಾಸ 8) ಕಲಾವತಿ ಗಂಡ ಮೊಗಲಪ್ಪ ನಡುವಿನದೊಡ್ಡಿ, 9) ಮೊಗಲಪ್ಪ ನಡುವಿನದೊಡ್ಡಿ, 10) ಸವೀತಾಬಾಯಿ ಗಂಡ ಬಜರಂಗ ಜಾದವ 11) ಮೀರಾಬಾಯಿ ಗಂಡ ರಾಮದಾಸ 12) ಜಗುಬಾಯಿ ಗಂ ಜೈಸಿಂಗ್ ರಾಠೋಡ 13) ರವಿ ತಂದೆ ಜೈಸಿಂಗ್ ರಾಠೋಡ ಹಾಗೂ ಇತರರು ಕೂಡಿಕೊಂಡು ನಮ್ಮೂರಿನಿಂದ ಘತ್ತರಗಿಯ ಸಕ್ಕರೆ ಪ್ಯಾಕ್ಟರಿಯ ವ್ಯಾಪ್ತಿಯಲ್ಲಿ ಕಬ್ಬು ಕಡಿಯುವದಕ್ಕಾಗಿ ಕೂಲಿ ಕೇಲಸಕ್ಕೆ ಹೋಗುತ್ತಿದ್ದಾಗ ದಿನಾಂಕ 24.11.2015 ರಂದು ಬೆಳ್ಳಿಗ್ಗಿನ ಜಾವ 5 ಗಂಟೆಯ ಸುಮಾರಿಗೆ ಹುಮನಾಬಾದ ಕಲಬುರಗಿ ರೋಡಿನಲ್ಲಿರುವ ರೋಡ ಕಿಣ್ಣಿ ಬ್ರೀಜ್ಡ್ ಮೇಲೆ ನಮ್ಮ ಟ್ಯಾಕ್ಟರ ಚಾಲಕುನು ಟ್ರ್ಯಾಕ್ಟರ ಚಲಾಯಿಸಿಕೊಂಡು ಬ್ರೀಜ್ಡ್ ಹೆಚ್ಚಿನ ಭಾಗ ದಾಟಿ ಕಲಬುರಗಿ ಕೆಡೆಗೆ ಇನ್ನೂ 4-5 ಫೀಟ್ ಬ್ರಿಜ್ಡ್ ಇರುವಾಗ ಎದರುಗಡೆಯಿಂದ ಅಂದರೆ ಕಲಬುರಗಿ ಕೆಡೆಯಿಂದ ಒಂದು ಲಾರಿ ಚಾಲಕ ತನ್ನ ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಟ್ರ್ಯಾಕ್ಟರ ಬ್ರಿಜ್ಡ್ ದಾಟುವರೆಗೆ ನಿಲ್ಲದೆ ಬ್ರಿಜ್ಡ್ ಒಳಗಡೆ ಬಂದು ನಮ್ಮ ಟ್ರಾಕ್ಟರ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ ಸದರಿ ಅಪಘಾತದಿಂದಾಗಿ ನಾವೇಲ್ಲರು ಚೆಲ್ಲಾ ಪಿಲ್ಲಿಯಾಗಿ ರೋಡಿ ಮೇಲೆ ಬಿದ್ದಿರುತ್ತೆವೆ.ನಂತರ ಸಾವರಿಸಿಕೊಂಡು ನಾನು ಎದ್ದು ನೋಡಲಾಗಿ 1) ಸೇವುಬಾಯಿ ಗಂಡ ವಸಂತ ಜಾದವ ಸಾ: ಇರಕಪಲ್ಲಿ 2) ಕೃಷ್ಣಾ ತಂದೆ ವಸಂತ ಜಾದವ 3) ಜೈಸಿಂಗ್ ತಂದೆ ಸಿತ್ಯಾನಾಯಕ ರಾಠೋಡ ಸಾ: ಡವೂರ 4) ಕೃಷ್ಣಾ ತಂದೆ ರಾಮದಾಸ ಸಾ: ಇರಕಪಲ್ಲಿ ಇವರುಗಳು ಅಪಘಾತದಿಂದಾದ ಗಾಯಗಳಿಂದಾಗಿ ಸ್ಥಳಲ್ಲಿ ಮೃತ ಪಟ್ಟಿದ್ದು ಇರುತ್ತದೆ.1.ಕಲಾವತಿ ಗಂಡ ಮೊಗಲಪ್ಪ ನಡಿವಿನದೊಡ್ಡಿ 2. ಸವೀತಾಬಾಯಿ ಗಂಡ ಬಜರಂಗ ಜಾದವ 3. ಮೀರಾಬಾಯಿ ಗಂಡ ರಾಮದಾಸ ರಾಠೋಡ ಸಾ:ಖರಜಗುತ್ತಿ 4. ಲಲಿತಾಬಾಯಿ ತಂದೆ ದೇವಿದಾಸ 5.ಜಗುಬಾಯಿ ಗಂ ಜೈಸಿಂಗ್ ರಾಠೋಡ 6 ರವಿ ತಂದೆ ಜೈಸಿಂಗ್ ರಾಠೋಡ ಇವರುಗಳಿಗೆ ಸಾದಾ ಮತ್ತು ಭಾರಿಗಾಯಗಳಾಗಿದ್ದು ನನಗೆ ಯಾವುದೆ ಗಾಯಗಳಾಗಿರುವದಿಲ್ಲ. ನಂತರ ನಮಗೆ ಅಪಘಾತ ಪಡಿಸಿದ ಚಾಲಕ ಜನರು ಜಮಾಯಿಸಿದ್ದರಿಂದ ತನ್ನ ಲಾರಿ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಲಾರಿ ನಂಬರ ನೋಡಲಾಗಿ ಕೆಎ 28 ಬಿ 4599 ಇರುತ್ತದೆ. ನಂತರ ಯಾರೊ 108 ಅಂಬುಲೇನ್ಸಕ್ಕೆ ಪೋನ ಮಾಡಿದ್ದು ಅಂಬುಲೇನ್ಸ ಬಂದ ನಂತರ ಗಾಯಾಳುಗಳನ್ನು ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ತೆಗೆದುಕೊಂಡು ಹೋಗಿರುತ್ತಾರೆ. ಗಾಯಾಳು ಸವೀತಾಬಾಯಿ ಗಂಡ ಬಜರಂಗ ಜಾಧವ ಇವಳು ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ ಅಂತ ಗೋತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

24 November 2015

Kalaburagi District Reported Crimes

ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 22-11-15 ರಂದು ರಾತ್ರಿ ಶ್ರೀ ಶ್ರೀಶೈಲ ತಂದೆ ಶಿವಣ್ಣಾ ಬೈರಾಮಡವಿ ಸಾ : ಹೀರಾಪೂರ  ರವರು ಮತ್ತು ಅವನ ಗೆಳೆಯ ಗುರು ಮುರಬ ಇಬ್ಬರು ಮಾತಾಡುತ್ತಾ ನಿಂತಾಗ ಅದೇ ಸಮಯಕ್ಕೆ ಸಿದ್ರಾಮ ಮತ್ತು ರಾಜು ಇಬ್ಬರು ಒಂದು ಮೋಟಾರ ಸೈಕಲ ಮೇಲೆ  ಸಿದ್ರಾಮನ ಗೆಳೆಯರು ಒಂದು ಮೋಟಾರ ಸೈಕಲ ಮೇಲೆ ಕುಳಿತುಕೊಂಡು ನನ್ನ ಹತ್ತಿರ ಬಂದು ಸಿದ್ರಾಮ ಇತನು ಶ್ರೀಶೈಲನಿಗೆ ಭೋಸಡಿ ಮಗನಿಗೆ ಓಣಿಯಲ್ಲಿ ನಮ್ಮ ಅಣ್ಣನ ಮಗಳಾದ ಮಾಹಾನಂದ ಮಾನ ಕಳೆದಿದ್ದಾನೆ ಎಂಬ ದ್ವೇಷದಿಂದ  ಇವತ್ತು ಶ್ರೀಶೈಲನಿಗೆ  ಖಲಾಷ ಮಾಡಿಯೇ ಬಿಡೋಣಾ ಅಂತಾ ಅಂದಾಗ ರಾಜು ಮತ್ತು ಅವನ ಇನ್ನಿಬ್ಬರು ಗೆಳೆಯರು ಮೂರು ಜನರು ಶ್ರೀಶೈಲನಿಗೆ  ಒತ್ತಿಯಾಗಿ ಹಿಡಿದು ಕೈಯಿಂದ ಶ್ರೀಶೈಲನ ಮೈಮೇಲೆ ಹೊಡೆ ಬಡಿ ಮಾಡ ಹತ್ತಿದರು. ಸಿದ್ರಾಮ ಇತನು ತನ್ನ ಹತ್ತಿರವಿದ್ದ ಚಾಕು ತೆಗೆದು ಶ್ರೀಶೈಲನಿಗೆ ಕೊಲೆ ಮಾಡುವ ಉದ್ದೇಶದಿಂದ ಹೊಟ್ಟೆಗೆ ಚಾಕುದಿಂದ ಹೊಡೆಯಲು ಅವನು ಹೊಡೆಯುವ ಎಟುನ್ನು ತಪ್ಪಿಸಿಕೊಳ್ಳುವಗೋಸ್ಕರ ಶ್ರೀಶೈಲನು ತನ್ನ  ಎಡಗೈ ಅಡ್ಡ  ತಂದಾಗ ಚಾಕುವಿನ ಎಟು ಶ್ರೀಶೈಲನ   ಎಡಗೈ ಮೊಣಕೈ ಮೇಲೆ ಬಡಿದು ರಕ್ತಗಾಯವಾಯಿತು. ಅದೇ ಚಾಕುವಿನಿಂದ ಮತ್ತೆ ನನಗೆ ಕೊಲೆ ಮಾಡುವ ಉದ್ದೇಶದಿಂದ ಶ್ರೀಶೈಲನ ಬಲ ಟೊಂಕಕ್ಕೆ  ಚುಚ್ಚಿ,  ಮರಣಾಂತಿಕ ಹಲ್ಲೆ ಮಾಡಿ ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಚೌಕ ಠಾಣೆ : ಶ್ರೀ ಗುರುಶಾಂತಪ್ಪ ತಂದೆ ಚಂದ್ರಶೇಖರ ಸಾ: ಸುಲ್ತಾನಪೂರ ಕಲಬುರಗಿ ರವರು ದಿನಾಂಕಃ 23.11.2015 ರಂದು ಬೆಳಿಗ್ಗೆ ಯಾಥ ಪ್ರಕಾರ ನಾನು ನನ್ನ ಅಂಗಡಿಗೆ ವ್ಯಾಪಾರ ಮಾಡುವ ಕುರಿತು ಅಂಗಡಿ ಹತ್ತಿರ ಬರುವಷ್ಟರಲ್ಲೆ ನಮ್ಮ ಅಂಗಡಿಯ ಎದುರಗಡೆ ಕೆಲವು ಜನರು ಜಮಾಯಿಸಿಕೊಂಡು ನಿಂತಿರುವದನ್ನು ಕಂಡು ಏನಾಗಿದೆ ಅಂತ ಹೋಗಿ ನೋಡಲಾಗಿ ನಾನು ರಾತ್ರಿ  ಮನೆಗೆ ಹೋಗುವ ಕಾಲಕ್ಕೆ ನೋಡಿದ ಅಪರಿಚಿತ ಅಂದಾಜು 40-45 ವರ್ಷದ ವಯಸಿನ ಗಂಡು ಮನುಷ್ಯನು ಮೃತಪಟ್ಟಿದ್ದು ಇರುತ್ತದೆ. ಅವನ ಹೆಸರು ವಿಳಾಸ ಏನು ಗೊತ್ತಾಗಿರುವದಿಲ್ಲ ಅವನ ಮೈ ಮೇಲೆ ಯಾವುದೇ ಗಾಯಗಳು ವೈಗೆರೆ ಇರುವದಿಲ್ಲ. ಅವನ ಹತ್ತಿರ ಯಾವುದೋ ರೋಗದ ಗುಳೆಗಳು ಪ್ಯಾಕೆಟ್ಟಗಳು ಇದ್ದು   ಇತನು ಯಾವುದೋ ರೋಗದಿಂದ  ಸತ್ತಿರಬಹುದು ಇತನ ಮೈಮೇಲೆ ಕೆಂಪು ಬಣ್ಣದ ಟೀ ಶರ್ಟ ಒಂದು ಬಿಳಿಯ ಬಣ್ಣದ ಟ್ಯಾವಲ್‌ ಬಿಳಿಯ ಬಣ್ಣದ ಅಂಡರವೇರ ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ ಧರಿಸಿಕೊಂಡಿರುತ್ತಾನೆ ಅಂದಾಜು ಎತ್ತರ 5-6 ಅಂಡಿ ಇರಬಹುದ್ದು  ತೆಲೆಯಲ್ಲಿ ಸ್ವಲ್ಪ ಕರಿಯ ಬೀಳಿಯ ಮಿಶ್ರತ ಕೂದಲು ಸ್ವಲ್ಪ ದಾಡಿ ಬಿಟ್ಟಿರುತ್ತಾನೆ ಇತನು ಬೆಳಿಗೆ 9.00 ಎಎಮ್‌ದ ವರೆಗೆ ಜೀವಂತ ಇರುವ ಬಗ್ಗೆ ಕೆಲವು ಹಮಾಲರು ನೋಡಿರುತ್ತಾರೆ ಅಂದಾಜು 10.30 ಗಂಟೆಯಿಂ 1045 ಗಂಟೆಯ ಮದ್ಯದ ಅವದಿಯಲ್ಲಿ ಅವನು ಮೃತಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಈ ಮೂಲಕ ವರದಿಯನ್ನು ಗಣಕಿಕರಿಸಿ ಕೊಡುವುದೇನೆಂದರೆ, ಇಂದು ದಿನಾಂಕ: 23-11-2015 ರಂದು 3:30 ಎಎಮ್  ಸುಮಾರಿಗೆ ಸಂಗಡ ಸಿಪಿಸಿ-801 ಶ್ರೀ ಸುರೇಶ, ಸಿಪಿಸಿ-657 ಶ್ರೀ ಸಂತೋಷ, ಸುರೇಶ ಸಿಪಿಸಿ-905 ರವರನ್ನು ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಬಸವೇಶ್ವರ ಸರ್ಕಲ ಹತ್ತಿರ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದಾಗ  ಬಾತ್ಮಿದಾರರಿಂದ ತಿಳಿದು ಬಂದಿದ್ದೇನೆಂದರೆ,
ಆಕ್ರಮವಾಗಿ ಮರಳು ತುಂಬುತ್ತಿದ್ದ ಹಿಟ್ಯಾಚ ಹಾಗು ಟಿಪ್ಪರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ: 23-11-2015 ರಂದು ಮಣೂರ ಗ್ರಾಮದ ಭೀಮಾನದಿಯಲ್ಲಿ ಸೊನ್ನ ಗ್ರಾಮದ ಶಿವಾನಂದ ತಂದೆ ಮಾಣಿಕಪ್ಪ ಮಸ್ತಾರ ಇವರು ಹಿಟಚಿ ಸಹಾಯದಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿಸಿ ಸಾಗಣಿಕೆ ಮಾಡಿಸುತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸಿದ್ದರಾಯ ಭೋಸಗೆ ಪಿ.ಎಸ್.ಐ  ಅಫಜಲಪೂರ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣೂರ ಗ್ರಾಮದ ಭೀಮಾ ನದಿಯ ಹತ್ತಿರ ಹೋಗಿ ಸ್ವಲ್ಪ ದೂರು ಜೀಪ ನಿಲ್ಲಿಸಿ ನಿಂತು ನೋಡಲು ಭಿಮಾನದಿಯಲ್ಲಿ ಬೃಹತ ಮರಳು ಎತ್ತುವ ಯಂತ್ರದಿಂದ ಮರಳು ತಗೆದು ಟಿಪ್ಪರನಲ್ಲಿ ತುಂಬುತ್ತಿದ್ದರು ಆಗ ನಾವು ಸದರಿಯವರು ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಯಂತ್ರ ಮತ್ತು ಟಿಪ್ಪರಗಳ ಮೇಲೆ ದಾಳಿ ಮಾಡಲು ಟಿಪ್ಪರ ಚಾಲಕರು ಮತ್ತು ಮರಳು ತುಂಬುತ್ತಿದ್ದ ಯಂತ್ರದ ಆಪರೇಟರ್ ಮುಂದೆ ನಿಂತು ಮರಳು ತುಂಬಿಸುತಿದ್ದ ಶಿವಾನಂದ ತಂದೆ ಮಾಣಿಕಪ್ಪ ಮಸ್ತಾರ ಸಾ||ಸೊನ್ನ ಎಲ್ಲರು  ಕತ್ತಲಲ್ಲಿ ಓಡಿ ಹೊದರು, ಸದರಿ ಶಿನಾನಂದನು ಓಡಿ ಹೋಗುವಾಗ ನಮ್ಮ ಸಿಬಂದ್ದಿ ಜನರು ಹಾಗೂ ಪಂಚರು ಗುರುತಿಸಿರುತ್ತಾರೆ. ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರಗಳನ್ನು ಚೆಕ್ ಮಾಡಲು ಟಿಪ್ಪರ ನಂ ಕೆಎ-32 ಸಿ-1542, ಕೆಎ-28 ಸಿ-0073  ಅಂತ ಇದ್ದು ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದಿತ್ತು. ಮರಳು ತುಂಬುವ ಯಂತ್ರವನ್ನು(ಹಿಟಚಿ) ಪರಿಶೀಲಿಸಿ ನೊಡಲು Sany ಕಂಪನಿಯ ಚೈನ ಬೆಲ್ಟ ಇರುವ  ಭೃಹತ ಮರಳು ಎತ್ತುವ ಯಂತ್ರವಿದ್ದು ಅದರ ಮಾಡಲ್ ನಂಬರ SY2050 ಇಂಜಿನ ನಂ 13SVY020600508  ಅಂತಾ ಇದ್ದಿತ್ತು. ಸದರಿಯವರು ಅನದಿಕೃತವಾಗಿ ಕಳ್ಳತನದಿಂದ ಮಣುರ ಭಿಮಾನದಿಯಿಂದ ಭೃಹತ ಯಂತ್ರದಿಂದ(ಹಿಟಚಿ) ಮರಳು ತಗೆದು ಟಿಪ್ಪರದಲ್ಲಿ ತುಂಬುತ್ತಿದ್ದರಿಂದ ಸದರಿ ಯಂತ್ರವನ್ನು ಹಾಗೂ ಮರಳು ತುಂಬಿದ ಟಿಪ್ಪರಗಳನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡೆನು.ಸದರಿ ಟಿಪ್ಪರಗಳಲ್ಲಿನ ಮರಳಿನ ಅಂದಾಜ ಕಿಮ್ಮತ್ತು 10,000/- ರೂ ಇರಬಹುದು ಹಾಗೂ ಭೃಹತ ಮರಳು ಎತ್ತುವ ಯಂತ್ರ (ಹಿಟಚಿ) ಅ.ಕಿ 5,00,000/- ರೂ ಇರಬಹುದು ನಂತರ ಸದರಿ ಟಿಪ್ಪರ  ಹಾಗೂ ಭೃಹತ ಮರಳು ಎತ್ತುವ ಯಂತ್ರವನ್ನು ನಮ್ಮ ಸಿಬ್ಬಂದಿಯವರ ಸಾಹಯದಿಂದ ಮಾಶಾಳ ಉಕ್ಕಡ ಠಾಣೆಯಲ್ಲಿ ನಿಲ್ಲಿಸಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.