POLICE BHAVAN KALABURAGI

POLICE BHAVAN KALABURAGI

19 November 2015

KALABRAGI DISTRICT REPORTED CRIMES

ಕಳವು ಪ್ರಕರಣ:
ಚೌಕ ಪೊಲೀಸ್‌ ಠಾಣೆ : ದಿನಾಂಕ 18.11.2015 ರಂದು  ಶ್ರೀ ಗುರುಪ್ರಕಾಶ ತಂದೆ ಶಿವಶರಣಪ್ಪ ಮುಗಳಿ ಸಾಃ ಜನತಾ ಲೇಔಟ ಕಲಬುರಗಿ ಇವರು ದಿನಾಂಕಃ 13.10.2015 ರಂದು ಸಾಯಂಕಾಲ 5.00 ಗಂಟೆಗೆ  ತಮ್ಮ ಮನೆಯ ಮುಂದೆ ಮೋಟಾರ ಸೈಕಿಲ್‌ ನಿಲ್ಲಿಸಿ ಮನೆಯೋಳಗೆ ಹೋಗಿ ಊಟ ಮಾಡಿ ಮರಳಿ 6.00 ಗಂಟೆಗೆ ಬಂದು ನೋಡಿದಾಗ ಮನೆಯ ಮುಂದೆ ನಿಲ್ಲಿಸಿದ ಹೀರೋ ಹೊಂಡಾ ಸ್ಪೆಲಂಡರ  ಮೊಟಾರ ಸೈಕಲ ನಂ ಕೆಎ 32  ಯು 5919 ನೇದ್ದು ಇರಲ್ಲಿಲ.  ಆಗ ನಾನು ಗಾಬರಿಗೊಂಡು ನನ್ನ ಸ್ನೇಹಿತರಿಗೆ ನನ್ನ ಮೋಟಾರ ಸೈಕಿಲ್‌ ಕಳುವಾದ ಬಗ್ಗೆ ಹೇಳಿದ್ದು ಇರುತ್ತದೆ. ನಂತರ ನಾನು ಹಾಗೂ ನಮ್ಮ  ಸ್ನೇಹಿತರು ಸೇರಿ ಎಲ್ಲಾ ಕಡೆ ಹುಡಕಾಡಿದ್ದು ಪತ್ತೆ ಆಗಿರುವದಿಲ್ಲ. ಸದರಿ ನನ್ನ ಮೋಟಾರ ಸೈಕಲನ್ನು ಯೋರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜುಕೋರನ ಬಂಧನ:
ನಿಂಬರ್ಗಾ ಪೊಲೀಸ್ ಠಾಣೆ: ದಿನಾಂಕ 18-11-2015 ರಂದು ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್. ನಿಂಬರ್ಗಾ ಪೊಲೀಸ ಠಾಣೆ ರವರು ಮಾಡಿಯಾಳ ಗ್ರಾಮದ  ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂಧಿಯವರಾದ  ಹಜರತ ಅಲಿ ಪಿಸಿ 154, ಶಿವಶರಣ ಸಿಪಿಸಿ 1153 ರವರೊಂದಿಗೆ ಪಂಚರಾದ ಶಿವಾನಂದ, ಮಹಾದೇವ ಇವರನ್ನು ಬರ ಮಾಡಿಕೊಂಡು ಸಿಬ್ಬಂಧಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಪ್ರಭಾಕರ ತಂದೆ ಬಾಬು ಸಾ: ಮಾಡಿಯಾಳ ಇತನನ್ನು ದಸ್ತಗೀರ ಮಾಡಿ ಆತನಿಂದ  ನಗದು ರೂ 1210/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ವಶಪಡಿಸಿಕೊಂಡು ಆತನ ವಿರುದ್ದ ನಿಂಬರ್ಗಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜುಕೋರನ ಬಂಧನ:
ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ 18.11.2015 ರಂದು ಓಕಳಿ ಕ್ರಾಸ ಹತ್ತಿರ ನೋಡಲು ಓಕಳಿ ಕ್ರಾಸ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಬಾಂಬೆ ಮಟಾಕ ಇದೆ 1 ರುಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿಯನ್ನು ಬರೆದು ಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಠಾಣೆಯ ಸಿಬ್ಬಂದಿಯವರಾದ ಕತಲಸಾ ಪಿಸಿ 310, ಮಲ್ಲಿಕಾರ್ಜುನ ಪಿಸಿ 1229 ರವರು ಮತ್ತು ಪಂಚರೊಂದಿಗೆ ದಾಳಿ ಮಾಡಿ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಮಟಕಾ ಬರೆದುಕೊಳ್ಳುತ್ತಿದ್ದ ಗೊರಖನಾಥ ತಂದೆ ಸಂಗಣ್ಣ ದುರ್ಗೆ ಸಾ: ಅಂಬಲಗಿ ತಾ:ಜಿ: ಆಳಂದ ಜಿ: ಕಲಬುರಗಿ ಈತನಿಗೆ ದಸ್ತಗೀರ ಮಾಡಿ ಆತನಿಂದ ನಗದು ಹಣ 550/- ರೂ, ಒಂದು ಬಾಲ ಪೇನ, ಮತ್ತು 2 ಮಟಕಾ ಚೀಟಿಗಳು ಜಪ್ತಿಮಾಡಿ ಆತನ ವಿರುದ್ದ ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ

18 November 2015

KALABRAGI DISTRICT REPORTED CRIMES

ನಕಲಿ ಫೇಸ್ ಬುಕ್ ಮತ್ತು ಸುಳ್ಳು ಜೀ-ಮೇಲ್ ಅಕೌಂಟಗಳು ಸೃಷ್ಟಿಸಿದ ಬಗ್ಗೆ:
ಮಹಿಳಾ ಪೊಲೀಸ ಠಾಣೆ : ದಿನಾಂಕ: 17.11.2015 ರಂದು ಶ್ರೀಮತಿ ಅಶ್ವಿನಿ ಗಂಡ ಪ್ರಮೋದ ಕಣ್ಣಿ ಸಾ: ಅತ್ತರ ಕಂಪೌಂಡ ಗಾಜಿಪೂರ ಕಲಬುರಗಿ ರವರು ಠಾಣೆ ಹಾಜರಾಗಿ ತಾನು 2013 ನೇ ಸಾಲಿನಲ್ಲಿ ಕಲಬುರಗಿಯ ಅಪ್ಪಾ ಐ.ಇ.ಟಿ. ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೇಸರ ಅಂತಾ ನೇಮಕಾತಿ ಹೊಂದಿ ಅಲ್ಲಿ ಸುಮಾರು 2 ವರ್ಷಗಳ ಕಾಲ ಸೇವೆ ಸಲ್ಲಿಸಿ. 2015 ನೇ ಸಾಲಿನಲ್ಲಿ ನಾನು ಪ್ರೊಫೇಸರ ಹುದ್ದೆಗೆ ರಾಜೀನಾಮೆ ನೀಡಿ ಗಂಡನ ಜೊತೆಯಲ್ಲಿ  ಸಂಸಾರ ಮಾಡಿಕೊಂಡು ಉಳಿದಿರುತ್ತೇನೆ . ನನ್ನ ಮತ್ತು ನನ್ನ  ಗಂಡನ ಸಂಬಂಧ ದೂರ ಮಾಡುವ ಉದ್ದೇಶದಿಂದ ಮತ್ತು ಸಂಸಾರದಲ್ಲಿ ಬಿರುಕು ಉಂಟು ಮಾಡುವ ಒಂದು ಕೆಟ್ಟ ಉದ್ದೇಶದಿಂದ ನನಗೆ ಮತ್ತು ನನ್ನ ಗಂಡನಿಗೆ ಸಾರ್ವಜನಿಕವಾಗಿ ಮತ್ತು ಗೆಳಯರು ಮತ್ತು  ಬಂಧುಬಳಗದಲ್ಲಿ ಕೆಟ್ಟ ಅಭಿಪ್ರಾಯ ಮೂಡಿ ಬರುವಂತೆ ಯಾರೂ ಅಪರಿಚಿತರು ನನ್ನ ಹೆಸರಿನ ನಕಲಿ ಫೇಸಬುಕ ಅಕೌಂಟ ಮತ್ತು ಸುಳ್ಳು ಜೀ-ಮೇಲ್ ಅಕೌಂಟಗಳು ಸೃಷ್ಟಿಸಿ ಇವುಗಳ ಮುಖಾಂತರ ಜೀವ ಬೇದರಿಕೆ  ಮತ್ತು ಅವಾಚ್ಯ ಶಬ್ದಗಳನ್ನು ಉಪಯೋಗಿಸಿದ ಸಂದೇಶಗಳನ್ನು ರವಾನಿಸುತ್ತಿದ್ದಾರೆ ಮತ್ತು ನನ್ನ ಭಾವಚಿತ್ರಗಳನ್ನು ಅಪ್ಪಾ ಐ.ಇ.ಟಿ ಕಾಲೇಜಿನ ಟೀಚಿಂಗ್ ಸಿಬ್ಬಂದಿಯವರಾದ ಪ್ರವೀಣ ಹಿಪ್ಪರಗಿ, ಸಂಜೀವ, ವಿಲಾಸ ಇವರ ಭಾವಚಿತ್ರದೊಂದಿಗೆ ಜೋಡಿಸಿ ಮತ್ತು ಸುಳ್ಳು ಫೇಕ ಬುಕ ಖಾತೆಗಳನ್ನು ಸೃಷ್ಟಸಿ ಅಶ್ಲಿಲ ಶಬ್ದಗಳಿಂದ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಇದರಿಂದ ನನ್ನ ಮತ್ತು ನನ್ನ ಗಂಡನವರಿಗೆ ಮಾನಸಿಕ ಹಿಂಸೆಯಾಗುತ್ತಿದೆ. ಇದಲ್ಲದೆ ನನ್ನ ಹೆಸರು ಮತ್ತು ನನ್ನ ಭಾವಚಿತ್ರವನ್ನು ಉಪಯೋಗಿಸಿ ಸೋಶಿಯಲ್ ವೇಬ್ ಸೈಟ್ಸಗಳಲ್ಲಿ ರಜಿಸ್ಟರ ಮಾಡಿದ್ದು. ಈ ಮೇಲಿನ ಕೃತ್ಯಗಳನ್ನು ದಿನಾಂಕ: 28.02.2015  ರಿಂದ 11.11.2015 ರ ವರೆಗೆ ಮಾಡಿದ್ದು. ಈ ರೀತಿ  ನನ್ನ ಖ್ಯಾತಿಗೆ ಕುಂದು ತರುವ ಉದ್ದೇಶದಿಂದ ಹಾಗೂ ತಮ್ಮ ಹೆಸರನ್ನು ಗುರುತಿಸಿಕೊಳ್ಳದೆ ತನ್ನ ವಿಳಾಸ ಇತ್ಯಾದಿ ತಿಳಿಸದೇ ಎಲೆಕ್ಟ್ರಾನಿಕ್ ಡಿವಾಇಸಗಳ ಸಹಾಯದಿಂದ ನನ್ನ ಹೆಸರಿಗೆ ಸುಳ್ಳು ಮಾಹಿತಿಯನ್ನು ರವಾನಿಸುತ್ತಾ ಮೇಲಿಂದ ಮೇಲೆ ಫೆಸ ಬುಕ ಮತ್ತು ಜಿ- ಮೇಲ್  ಮುಖಾಂತರ ಸಂದೇಶಗಳನ್ನು ಕಳುಹಿಸಿ ನನ್ನ ವೈಯಕ್ತಿಕ ಚರಿತ್ರೆ ಹಾಳುಮಾಡುತ್ತಾ  ಮತ್ತು ನನ್ನ ಸಂಸಾರದಲ್ಲಿ ಬಿರುಕು ಉಂಟು ಆಗುವ ರೀತಿ ವರ್ತಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ್ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕೊಲೆಯತ್ನ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:  ದಿನಾಂಕ 17/11/2015 ರಂದು ಶ್ರೀ ಧನರಾಜ ತಂದೆ ಬಸವರಾಜ ಹಿರಾಣಿ ಸಾ: ಸರಡಗಿ (ಬಿ) ಇವರು ಫಿರ್ಯಾದಿ ಸಲ್ಲಿಸಿದ್ದೇನೆಂದರೆ ತಮ್ಮ ಗ್ರಾಮದ  ನಿಖಿಲ ತಂದೆ ವಿಜಯಕುಮಾರ ಬುಳ್ಳಾ ಇತನು ಈಗ ಸುಮಾರು 2 ವರ್ಷಗಳಿಂದ ನಮ್ಮ ಊರಿನ ಪಕ್ಕಕ್ಕೆ ಹರೀಯುವ ಭೀಮಾ ನದಿ ದಡದಿಂದ ಕಳ್ಳತನದಿಂದ ಪೋಲೀಸರ ಕಣ್ಣು ತಪ್ಪಿಸಿ ಅಕ್ರಮವಾಗಿ ಉಸುಕು(ಮರಳು) ಸಾಗಣೆ ಮಾಡುತ್ತಿದ್ದು ಇದಕ್ಕೆ ನಾನು ಈ ಹಿಂದೆ ನಿಖಿಲನಿಗೆ ಮರಳು ಸಾಗಣೆ ಮಾಡಲು ತಕರಾರು ಮಾಡಿದ್ದು ಅದಕ್ಕೆ ಅವನು ನನಗೆ ನಿನ್ಯಾರು ನನಗೆ ಕಕೇಳುವವ ಅಂತಾ ನನ್ನೋಂದಿಗೆ ತಕರಾರು ಮಾಡಿ ಮಗನೆ ನಿನಗೆ ನೋಡಿಯೇ ಬಿಡುತ್ತೇನೆ ಅಂತಾ ದ್ವೇಷ ಬೆಳೆಯಿಸಿಕೋಂಡು ಬಂದಿರುತ್ತಾನೆ. ದಿನಾಂಕ 16/11/2015 ರಂದು ನಾನು ಕಲಬುರಗಿಯಿಂದ ನಮ್ಮೂರಿಗೆ ಹೋಗುವ ಕುರಿತು ಫರಹತಾಬಾದ ಗ್ರಾಮದ ಬಸ್ಸ ನಿಲ್ದಾಣದ ಹತ್ತೀರ ಇರುವ ಹುಸೇನ ಪಂಕ್ಚರ ಅಂಗಡಿಯ ಮುಂದಿನ ರೋಡಿನ ಮೇಲೆ ರಾತ್ರಿ 6-30 ಗಂಟೆಯ ಸುಮಾರಿಗೆ ನನ್ನ ಅತ್ತೇಯ ಮಗನಾದ ಸತೀಶ ಧನರಾಯ ಗೋಳ ಇತನೋಂದಿಗೆ ನಿಂತಾಗ ಸದರಿ ನಿಖಿಲನು ತನ್ನ ಸಂಬಂದಿಕರಾದ ಶಂಕರ ಬುಳ್ಳಾ ಮತ್ತು ಚಿನ್ನು ಬುಳ್ಳಾ ಇವರೋಂದಿಗೆ ಬಂದವನೆ ನನಗೆ ನಿಖಿಲ ಇತನು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನೀನು ನಮಗೆ ನದಿಯಿಂದ ಮರಳು ಸಾಗಣೆ ಮಾಡಲು ಅಡೆತಡೆ ಮಾಡಿ ನಮಗೆ ದಂಧಾದಲ್ಲಿ ಲುಕ್ಸಾನ ಮಾಡುತ್ತೀದ್ದಿ ಮಗನೆ ಇದು ನಿನಗೆ ಜೀವ ಸಹಿತ ಬಿಡುವದಿಲ್ಲಾ ಎನ್ನುತ್ತಾ ನನ್ನನ್ನು ಕೋಲೆ ಮಾಡಬೆಕೆಂಬ ಉದ್ದೇಶದಿಂದ ಚಿನ್ನು ಈತನು ನನಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು ನಿಖಿಲ ಇತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಬಲಗಡೆ ಮೆಲಕಿಗೆ,ಬಲಕಿವಿಗೆ ಹೋಡೆದು ರಕ್ತಗಾಯ ಮತ್ತು ಕುತ್ತೀಗೆಯ ಎಡ ಹಿಂಬದಿಗೆ ಹೋಡೆದು ಗುಪ್ತಗಾಯ ಮಾಡಿರುತ್ತಾನೆ, ಶಂಕರ ಇತನು ಕಲ್ಲಿನಿಂದ ನನ್ನ ಬಲಗಾಲಿನ ಪಾದದ ಮೇಲೆ ಹೋಡೆದು ರಕ್ತಗಾಯ ಮಾಡಿರುತ್ತಾನೆ ಆಗ ನಾನು ಚೀರಾಡುವದನ್ನು ಕೇಳಿ ಅಲ್ಲಿಯೇ ಇದ್ದ ನನ್ನ ಮಾವ ಸತೀಶ ಮತ್ತು ನಮ್ಮೂರಿನ ಶರಣು ತಿಬಶೇಟ್ಟಿ, ಹಾಗೂ ಅಪ್ಪಾಸಾಬ ಹಾಲಕಾಯಿ ಇವರು ಬಂದು ನನಗೆ ಹೋಡೆಬಡೆ ಮಾಡುತ್ತೀರುವದನ್ನು ಬಿಡಿಸಿ ನನಗೆ ಚಿಕಿತ್ಸೆಗಾಗಿ ಸತ್ಯಾ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದು. ನನಗೆ ಕೋಲೆ ಮಾಡುವ ಉದ್ದೇಶದಿಂದ ಹೋಡಬಡೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಫಿರ್ಯಾದಿ ಸಲ್ಲಿಸಿದ್ದು ಫಿರ್ಯಾದಿ ಸಾರಾಂಶದ ಮೇಲಿಂದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

17 November 2015

KALABURAGI DISTRICT REPORTED CRIMES

ವರದಕ್ಷಿಣಿ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ ಠಾಣೆ : ದಿನಾಂಕ: 16.11.2015 ರಂದು ಶ್ರೀಮತಿ ಜರೀನಾ ಗಂಡ   ಸ್ಮಾಯಿಲ್ ಸಾಬ ಖಾದ್ರಿ  ಸಾ: ಹರನೂರ ತಾ:ಜೆವರ್ಗಿ ಜಿ: ಕಲಬುರಗಿ ಹಾ:ವ: ಖಾಜಾ ಕಾಲೋನಿ ಜೇವರ್ಗಿ  ಇವರು ಠಾಣೆ ಹಾಜರಾಗಿ ಸುಮಾರು 6 ವರ್ಷಗಳ ಹಿಂದೆ ಹರನೂರ ಗ್ರಾಮದ ಇಸ್ಮಾಯಿಲ್ ಸಾಬ ತಂದೆ ಅಲ್ಲಾವುದ್ದಿನ್ ಸಾಬ ಖಾದ್ರಿ ಇವರ ಜೊತೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ವರದಕ್ಷಿಣೆ ರೂಪದಲ್ಲಿ 25 ಸಾವಿರ ರೂಪಾಯಿ ನಗದು ಹಣ 3 ತೊಲೆ ಬಂಗಾರ ಮತ್ತು ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು. ನನಗೆ ಒಂದು ಹೆಣ್ಣು, ಒಂದು ಗಂಡು ಮಗು ಇದ್ದು. ಮದುವೆ ಆದಾಗಿನಿಂದ ನನ್ನ ಗಂಡ ಇಸ್ಮಾಯಿಲ್ ಸಾಬನು ನನಗೆ ತವರು ಮನೆಯಿಂದ 2 ಲಕ್ಷ ರೂಪಾಯಿ ಮತ್ತು 2 ತೊಲೆ ಬಂಗಾರ ತರುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿದ್ದು. ನನ್ನ ನಾದಿನಿ ಫರೀದಾಬೇಗಂ ಅತ್ತೆಯಾದ ಸೋಫನಬಿ ಮಾವ ಅಲ್ಲಾವುದ್ದೀನ, ನೆಗೆಣಿ ನಸೀಮಾ ಇವರು ಕೂಡ 2 ಲಕ್ಷ ರೂಪಾಯಿ  2 ತೊಲೆ ಬಂಗಾರ ತೆಗೆದುಕೊಂಡು ಬಂದರೆ ಮಾತ್ರ ನಮ್ಮ ಮನೆಯಲ್ಲಿ ನಿಗೆ ಜಾಗವಿದೆ ಇಲ್ಲವಾದರೆ ನಿನಗೆ ಜೀವ ಸಹಿತ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನನ್ನ ಗಂಡ ನನಗೆ ಗೊತ್ತಿಲ್ಲದ ಹಾಗೆ ಮತ್ತೊಂದು ಮದುವೆ ಸಹ ಕೂಡ ಮಾಡಿಕೊಂಡಿರುತ್ತಾನೆ. ದಿ. 26-07-2015 ರಂದು 11 ಗಂಟೆಯ ಸುಮಾರಿಗೆ ನಾನು ನನ್ನ ಎರಡು ಮಕ್ಕಳು ಹಾಗೂ ನನ್ನ ತಂದೆ ಸಿಕಂದರ ರವರೊಂದಿಗೆ ನನ್ನ ಗಂಡನ ಮನೆಯಾದ ಹರನೂರ ಗ್ರಾಮಕ್ಕೆ ಹೋದಾಗ ಆಗ ಮೇಲೆ ನಮೂದಿಸಿದವರರೆಲ್ಲರೂ ಕೂಡಿ ನೀನು ನಮ್ಮ ಮನೆಗೆ ಏಕೆ ಬಂದಿದ್ದಿ ಒಂದು ವೇಳೆ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ 2 ಲಕ್ಷ ರೂಪಾಯಿ 2 ತೊಲೆ ಬಂಗಾರ ತಂದರೆ ನಿನಗೆ ನಮ್ಮ ಇಟ್ಟುಕೊಳ್ಳುತ್ತೇವೆ. ಇಲ್ಲವಾದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಬೈದು ಮನೆಯಿಂದ ಹೊರಗೆ ಹಾಕಿರುತ್ತಾರೆ. ನಾನು ಗಂಡನ ಜೊತೆಗೆ ಜೀವನ ಮಾಡಬೇಕು ಅಂತಾ ಅವರು ಕೊಟ್ಟ ಹಿಂಸೆಯನ್ನು ಸಹಿಸಿಕೊಂಡು ಬಂದಿರುತ್ತೇನೆ ಇಷ್ಟು ದಿವಸ ಕಳೆದರು ಕೂಡ ಅವರು ನನ್ನೊಂದಿಗೆ ಜೀವನ ಮಾಡಲು ಸಿದ್ದವಿಲ್ಲ ಆದ್ದರಿಂದ ನನಗೆ ಮದುವೆ ಆದಾಗಿನಿಂದ ತವರು ಮನೆಯಿಂದ ವರದಕ್ಷಿಣೆ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟ ನನ್ನ ಗಂಡ ಹಾಗೂ ಅವರ ಮನೆಯವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ