POLICE BHAVAN KALABURAGI

POLICE BHAVAN KALABURAGI

31 October 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರ್ಗಿ ಠಾಣೆ : ದಿನಾಂಕ 30.10.2015 ರಂದು ಜೇವರಗಿ ಪಟ್ಟಣದ ರಿಲಾಯನ್ಸ ಪೆಟ್ರೋಲ್ ಪಂಪ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಂದು ರುಪಾಯಿಗೆ 80 ರೂಪಾಯಿ ಕೊಡುತ್ತೆವೆ ಅಂತ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಬರೆದುಕೊಳ್ಳುತ್ತಿದ್ದು ಬಗ್ಗೆ  ಖಚಿತ ಬಾತ್ಮಿ ಮೇರೆಗೆ ಶ್ರೀ. ವಿಧ್ಯಾಸಾಗರ ಎ.ಎಸ್.ಐ ಜೇವರಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ  ಮೂರುಜನರನ್ನು ವಶಕ್ಕೆ ತೆಗೆದುಕೊಂಡು ಸದರಿಯವರ ಹೆಸರು ವಿಚಾರಿಸಲು  1] ಶಿವಪುತ್ರ ತಂದೆ ಮಲ್ಕಪ್ಪ ನಲ್ಲೂಕರ್  ಸಾಃ ಬಸವೇಶ್ವರ ನಗರ ಜೇವರಗಿ   2] ಧರ್ಮರಾಜ ತಂದೆ ಸಿದ್ರಾಮಪ್ಪ ಚಿನ್ನಮಳ್ಳಿ  ಸಾ: ವಿದ್ಯಾನಗರ  ಜೇವರಗಿ   3] ಮಲ್ಲೇಶಪ್ಪ ತಂದೆ ಬಸಣ್ಣಾ  ಬಸವಪಟ್ಟಣ ಸಾಃ ಶಾಂತನಗರ ಜೇರವಗಿ ಅಂತಾ ತಿಳಿಸಿದ್ದು ಸದರಿಯವರ ವಶದಿಂದ ಜೂಜಾಟಕ್ಕೆ ಬಳಸಿದ ನಗದು ಹಣ  1.050/- ರೂ ಗಳು ನಗದು ಹಣ ಮತ್ತು 2 ಬಾಲ್‌ ಪೆನ್ ಮತ್ತು ಎರಡು ಮಟಕಾ ಚೀಟಿ ಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಅನೀಲಕುಮಾರ @ ಕುಮಾರ ತಂದೆ ಸೂರ್ಯಕಾಂತ ಹವಾಣೆ ಸಾ|| ಭೂಸನೂರ ಇವರು ತನ್ನ ಹೊಲದಲ್ಲಿ ಕೊರಳ್ಳಿ ಗ್ರಾಮದ ನಿಜಲಿಂಗಪ್ಪ ತಂದೆ ಅಮೃತ ಗೊಬ್ಬೂರ ಇವನು ತನ್ನ ಬಿಟ್ಟಿದ್ದರಿಂದ ತಕರಾರು ಆಗಿತ್ತು, ಅದೇ ದ್ವೇಶದಿಂದ ದಿನಾಂಕ 30-102015 ರಂದು ಭೂಸನೂರ ಫ್ಯಾಕ್ಟರಿ ಹತ್ತಿರ ನಿಂತಾಗ 01] ಅಮೃತ ಗೊಬ್ಬೂರ, 02] ವಿಜಯಕುಮಾರ ಸಂಗೋಳಗಿ, 03] ಲಕ್ಕಪ್ಪ ದೇವ, 04] ಅಮೃತನ ಹಿರಿಯ ಮಗ ಸಾ|| ಎಲ್ಲರೂ ಕೊರಳ್ಳಿ. ಎಲ್ಲರು ಸೇರಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವ ಭಯಪಡಿಸಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 30-10-2015 ರಂದು ಗ್ರಾಮ ಪಮಚಾಯತಿಯ ಪಿ.ಡಿ.ಓ ರವರು ಗ್ರಾಮ ಸಬೆಯನ್ನು ಇಟ್ಟುಕೊಂಡಿದ್ದು, ಸದರಿ ಗ್ರಾಮ ಸಬೆಯನ್ನು ಗ್ರಾಮದ ಜನರಿಗೆ ತಿಳಿಸಿದೆ, ಡಂಗುರ ಬಾರಿಸದೆ ಏಕಾ ಏಕಿ ಗ್ರಾಮ ಸಭೆಯನ್ನು ಇಟ್ಟುಕೊಂಡಿರುತ್ತಾನೆ. ಸದರಿ ಗ್ರಾಮ ಸಭೆಯ ನಮ್ಮೂರಿನ ಹನುಮಂತ ದೆವರ ಗುಡಿಯ ಮುಂದೆ ಇಟ್ಟುಕೊಂಡ ಮೇರೆಗೆ ನಾನು ಮತ್ತು ನಮ್ಮ ಸಮಾಜದ ಶರಣಪ್ಪ ತಂದೆ ರಾಮಚಂದ್ರ ಬಂಡಗಾರ, ಪರಮೇಶ್ವರ ತಂದೆ ರಾಮಚಂದ್ರ ಬಡಗಾರ, ನಮ್ಮ ತಂದೆ ಭೀಮಶಾ ತಂದೆ ಮಳಸಿದ್ದ ಕೋಕರೆ, ಹಾಗೂ ನಮ್ಮ ಕಾಕನ ಮಗಳು ಅನುಸುಬಾಯಿ ಗಂಡ ಶಿವಯೋಗೆಪ್ಪ ಬಂಡಗಾರ ಎಲ್ಲರೂ ಕೂಡಿ ಸದರಿ ಗ್ರಾಮ ಸಭೆಗೆ ಹೋಗಿರುತ್ತೇವೆ. ಸದರಿ ಗ್ರಾಮ ಸಭೆ ನಡೆದಿದ್ದಾಗ ನಾನು ಪಿ.ಡಿ.ಓ ರವರಿಗೆ ಗ್ರಾಮ ಪಂಚಾಯತಿಯ ಕಾರ್ಯಾಲಯವನ್ನು ಖಾಸಗಿ ಸ್ಥಳದಲ್ಲಿ ಇಡಬೇಡಿ ಕಟ್ಟಡ ಆಗುವವರೆಗೆ ಯಾವುದಾರರು ಸರ್ಕಾರಿ ಜಾಗದಲ್ಲಿ ಇರಲಿ, ಹಾಗೂ ನೀವು ಸದರಿ ಗ್ರಾಮ ಸಭೆಯನ್ನು ಗ್ರಾಮದ ಯಾವುದೆ ಜನರಿಗೆ ತಿಳಸದೆ ನಡೆಸುತ್ತಿದ್ದರಿ, ನೀವು ಸಭೆಯನ್ನು ನಡೆಸಬೇಕಾದರೆ ಜನರಿಗೆ ಮಾಹಿತಿ ತಿಳಿಸಿ ಡಂಗುರ ಸಾರಿ ಸಭೆ ಇಟ್ಟಿರುವ ಬಗ್ಗೆ ತಿಳಿಸಬೇಕಾಗಿತ್ತು ಅಂತಾ ಕೇಳುತ್ತಿದ್ದೇನು, ಆಗ ಸದರಿ ಸಭೆಗೆ ಬಂದಿದ್ದ 1) ವಿಷ್ಣು ತಂದೆ ಮಾಣಿಕ ಬಂಡಗಾರ 2) ಮಾಣಿಕ ತಂದೆ ಮಲ್ಲಪ್ಪ ಬಂಡಗಾರ 3) ಮಾಹಾದೇವ ತಂದೆ ಜೀವಣ್ಣ ರೂಪನೂರ 4) ಬಸನಿಂಗ ತಂದೆ ಪಂಡಿತ ಬಂಡಗಾರ 5) ಯಶವಂತ ತಂದೆ ಪಂಡಿತ ಬಂಡಗಾರ 6) ಗುರಪ್ಪ ತಂದೆ ಪಂಡಿತ ಬಂಡಗಾರ 7) ಕೃಷ್ಣಾ ತಂದೆ ಮಾಣಿಕ ಬಂಡಗಾರ 8) ದತ್ತು ತಂದೆ ಮಲ್ಲಪ್ಪ ಬಂಡಗಾರ 9) ಪಂಡಿತ ತಂದೆ ಮಾರುತಿ ಬಂಡಗಾರ 10) ನಿರ್ಮಲಾ ಗಂಡ ಬಸನಿಂಗ ಬಂಡಗಾರ ಸಾ|| ಎಲ್ಲರೂ ರಾಮನಗರ ಇವರುಗಳು ಎದ್ದು ನಿಂತು ಏನೊ ಸೂಳಿ ಮಗನೆ ಇದನ್ನೇಲ್ಲಾ ಕೇಳೊದಕ್ಕೆ ನೀನು ಯಾರು ಸುಮ್ಮನ್ನೆ ಗ್ರಾಮ ಸಭೆಗೆ ಬಂದಿದಿ ಸುಮ್ಮ ಕುಳಿತು ನೋಡಬೇಕು ಏನಾದ್ರು ಕೇಳಿದರೆ ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಎಲ್ಲರೂ ನನಗೆ ಬೈಯುವುದು ಮಾಡುತ್ತಿದ್ದರು, ಆಗ ನನ್ನ ಜೋತೆಗೆ ಬಂದ ಶರಣಪ್ಪ ಬಂಡಗಾರ, ಪರಮೇಶ್ವರ ಬಂಡಗಾರ, ನಮ್ಮ ತಂದೆ ಭೀಮಶಾ ಬಂಡಗಾರ ಇವರುಗಳು ಸದರಿಯವರಿಗೆ ನಾವು ಗ್ರಾಮದವರು ಇದ್ದಿವಿ ಕೇಳಬೇಕಾಗುತ್ತದೆ ಅಂತಾ ಹೇಳುತ್ತಿದ್ದರು, ಆಗ ಏಕಾ ಏಕಿ ವಿಷ್ಣು ಬಂಡಗಾರ ಈತನು ತನ್ನ ಕೈಯಲ್ಲಿ ತಲವಾರ ಹಿಡಿದುಕೊಂಡು, ಉಳಿದವರು ಚಾಕು, ಬಡಿಗೆ, ಕಲ್ಲುಗಳನ್ನು ಹಿಡಿದುಕೊಂಡು ನಮ್ಮ ಕಡೆಗೆ ಬಂದು ನಮಗೆಲ್ಲರಿಗೂ ಬೈಯುತ್ತಾ ಸೂಳೆ ಮಕ್ಕಳೆ ನಿಮಗೆ ಇವತ್ತು ಜೀವ ಸಹಿತ ಬಿಡುವುದಿಲ್ಲ, ಖಲಾಸ ಮಾಡುತ್ತೇವೆ ಅಂತಾ ಎಲ್ಲರೂ ಕೂಡಿ ನಮಗೆಲ್ಲರಿಗೂ ಹೊಡೆಯುತ್ತಿದ್ದರು. ವಿಷ್ಣು ಈತನು  ಪರಮೇಶ್ವರನಿಗೆ ಮಗನೆ ನಿನ್ನ ಸಾವು ಇವತ್ತು ನನ್ನ ಕೈಯಲ್ಲೆ ಅಂತಾ ಅನ್ನುತ್ತಾ ತನ್ನ ಕೈಯಲ್ಲಿದ್ದ ತಲವಾರದಿಂದ ಅವನ ಮುಖದ ಮೇಲೆ ಹೊಡೆದನು. ಸದರಿಯವರೆಲ್ಲರು ನಮಗೆ ಸುತ್ತುಗಟ್ಟಿ ಕೊಲೆ ಮಾಡಬೆಕೆಂದು ನಮಗೆ ತಮ್ಮ ಕೈಯಲ್ಲಿದ್ದ ತಲವಾರದಿಂದ, ಬಡಿಗೆಗಳಿಂದ ಚಾಕುವಿನಿಂದ, ಕಲ್ಲಗಳಿಂದ ಹೊಡೆಯುವುದು ಕಾಲಿನಿಂದ ಒದ್ದು ಗಾಯಗೊಳಿಸಿರುತ್ತಾರೆ ಅಂತಾ ಶ್ರೀ ಬಸವರಾಜ ತಂದೆ ಭೀಮಶಾ ಕೋಕರೆ ಸಾ|| ರಾಮನಗರ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 30-10-2015 ರಂದು ನಮ್ಮ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ಸಭೆ ಇದ್ದ ಮೇರೆಗೆ ಸದರಿ ಸಭೆಗೆ ನಾನು ಸಹ ಹೋಗಿರುತ್ತೇನೆ. ಮದ್ಯಾಹ್ನ 12:30 ಗಂಟೆ ಸುಮಾರಿಗೆ ಸಭೆ ನಡೆದಿದ್ದಾಗ ನಮ್ಮೂರಿನ ಬಸವರಾಜ ತಂದೆ ಭೀಮಶಾ ಕೋಕರೆ ಈತನು ಸಭೆಯಲ್ಲಿ ಎದ್ದು ನಿಂತು ಸಭೆ ನಡೆಸುತ್ತಿದ್ದ ಪಿ.ಡಿ.ಓ ರವರಿಗೆ ನೀವು ಯಾರಿಗೂ ಕೇಳದೆ ಯಾಕೆ ಸಭೆ ಇಟ್ಟಿರಿ, ನಿಮ್ಮ ಮನಸ್ಸು ಬಂದ ಹಾಗೆ ಮಾಡುತ್ತಿರಾ ಅಂತಾ ಸಭೆಯಲ್ಲಿ ಒದರಾಡುತ್ತಿದ್ದನು. ಆಗ ನಾನು ಮತ್ತು ನನ್ನಂತೆ ಕೃಷ್ಣಾ ತಂದೆ ಮಾಣಿಕ ಬಂಡಗಾರ, ಯಶವಂತ ತಂದೆ ಪಂಡಿತ ಬಂಡಗಾರ, ಗುರುಲಿಂಗ ತಂದೆ ಪಂಡಿತ ಬಂಡಗಾರ, ಬಸನಿಂಗ ತಂದೆ ಪಂಡಿತ ಬಂಡಗಾರ ಎಲ್ಲರೂ ಬಸವರಾಜನಿಗೆ ಯಾಕ ಕೂಗಾಡಿ ಸಭೆ ಹಾಳ ಮಾಡ್ತಿ ಅಂತಾ ಕೇಳುತ್ತಿದ್ದೇವು, ಆಗ ಸದರಿ 1) ಬಸವರಾಜ ತಂದೆ ಭೀಮಶಾ ಕೋಕರೆ ಮತ್ತು ಸಭೆಗೆ ಬಂದಿದ್ದ 2) ಭೀಮಶಾ ತಂದೆ ಮಳಸಿದ್ದ ಕೋಕರೆ 3) ದತ್ತು ತಂದೆ ಭೀಮಶಾ ಕೋಕರೆ 4) ಮನೋಹರ ತಂದೆ ಮಹಿಪತಿ ಡೊಂಬಳೆ 5) ಶರಣಪ್ಪ ತಂದೆ ಮಾಳಪ್ಪ ಕೋಕರೆ 6) ಶರಣು ತಂದೆ ರಾಮು ಬಂಡಗಾರ 7) ಪರಮೇಶ್ವರ ತಂದೆ ರಾಮ ಬಂಡಗಾರ 8) ಶಿವಯೋಗೆಪ್ಪ ತಂದೆ ರಾಮ ಬಂಡಗಾರ 9) ಯಲ್ಲಾಲಿಂಗ ತಂದೆ ರಾಮ ಬಂಡಗಾರ 10) ಅನುಸುಬಾಯಿ ಗಂಡ ಶಿವಯೋಗೆಪ್ಪ ಬಂಡಗಾರ ಸಾ|| ಎಲ್ಲರೂ ರಾಮನಗರ ಇವರೆಲ್ಲರೂ ಏನ್ರೋ ಸೂಳೆ ಮಕ್ಕಳೆ ಊರಾಗ ದಬ್ಬಾಳಿಕೆ ಮಾಡ್ತಿರಿ ಅಂತಾ ಎಲ್ಲರೂ ತಮ್ಮ ತಮ್ಮ  ಕೈಯಲ್ಲಿ ಲಾಂಗ, ಚಾಕು, ಬಡಿಗೆ, ಕಲ್ಲುಗಳನ್ನು ಹಿಡಿದುಕೊಂಡು ನಮ್ಮ ಕಡೆಗೆ ಬಂದು ನಮಗೆಲ್ಲರಿಗೂ ಬೈಯುತ್ತಾ ಸೂಳೆ ಮಕ್ಕಳೆ ನಿಮಗೆ ಇವತ್ತು ಜೀವ ಸಹಿತ ಬಿಡುವುದಿಲ್ಲ, ಖಲಾಸ ಮಾಡುತ್ತೇವೆ ಅಂತಾ ಹೇಳಿ ಬಸವರಾಜನು ಮತ್ತು ಅವನ ತಂದೆ ಬೀಮಶಾ ಇಬ್ಬರು ನನ್ನ ಏದೆಯ ಮೇಲಿನ ಅಂಗಿ ಹಿಡಿದು ನನಗೆ ತಳ್ಳಾಡುವುದು ಮಾಡಿ ಹೊಡೆಯುತ್ತಿದ್ದರು. ಕೃಷ್ಣಾ ಈತನಿಗೆ ದತ್ತು ಕೋಕರೆ ಹಾಗೂ ಮನೋಹರ ಡೊಂಬಳೆ ಇಬ್ಬರು ಕೂಡಿ ಬಡಿಗೆಗಳಿಂದ ಹೊಡೆಯುತ್ತಿದ್ದರುಯಶವಂತನಿಗೆ ಶರಣಪ್ಪ ಕೋಕರೆ ಮತ್ತು ಶರಣು ಬಂಡಗಾರ ಇಬ್ಬರು ಕೂಡಿ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುವುದು ಕಲ್ಲನಿಂದ ಹೊಡೆಯುವುದು ಮಾಡುತ್ತಿದ್ದರು. ಗುರುಲಿಂಗನಿಗೆ ಯಲ್ಲಾಲಿಂಗ ಮತ್ತು ಅನುಸುಬಾಯಿ ಇವರು ಹೊಡೆ ಬಡೆ ಮಾಡುತ್ತಿದ್ದರು. ಬಸನಿಂಗನಿಗೆ ಪರಮೇಶ್ವರ ಮತ್ತು ಶಿವಯೋಗೆಪ್ಪ ಇವರು ಚಾಕುವಿನಿಂದ ಹಾಗೂ ಬಡಗೆಗಳಿಂದ ಹೊಡೆಯುವುತ್ತಿದ್ದರು, ನನಗೆ ಬಸವರಾಜ ನಡೆದ ಜಗಳದ ಗಲಾಟೆಯಲ್ಲಿ ಚಾಕುವಿನಂದ ನನ್ನ ಕೈಗೆ ಹೊಡೆದನು, ಆಗ ನಾನು ಕೆಳಗೆ ಬಿದ್ದೇನು, ಸದರಿಯವನು ನನಗೆ ಹೊಡೆದರಿಂದ ಜಾಸ್ತಿ ಹೋಗಿ ನಾನು ಕೆಳಗೆ ಬಿದ್ದಾಗ ಹೇಗೆ ಖಲಾಸ ಮಾಡಿದೆವು ಅಂತಾ ಎಲ್ಲರೂ ಕೂಡಿ ನಮಗೆ ಸುತ್ತುಗಟ್ಟಿ ಕೊಲೆ ಮಾಡಬೆಕೆಂದು ನಮಗೆ ತಮ್ಮ ಕೈಯಲ್ಲಿದ್ದ ಲಾಂಗದಿಂದ, ಬಡಿಗೆಗಳಿಂದ ಚಾಕುವಿನಿಂದ, ಕಲ್ಲುಗಳಿಂದ ಹೊಡೆಯುವುದು ಕಾಲಿನಿಂದ ಒದ್ದು ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ನಿಜಲಿಂಗಪ್ಪ ತಂದೆ ಅಮೃತ ಗೊಬ್ಬೂರ ಸಾ|| ಕೊರಹಳ್ಳಿ ಇವರು ದಿನಾಂಕ ಭೂಸನೂರ ಗ್ರಾಮ ಸೀಮಾಂತರದ ಹಳ್ಳದಲ್ಲಿ ಕುರಿ ಕಾಯುತ್ತಿರುವಾಗ 01] ಸೂರ್ಯಕಾಂತ ತಂದೆ ಬಸಣ್ಣ ಹವಾಣೆ, 02] ಕುಮಾರ ತಂದೆ ಸೂರ್ಯಕಾಂತ ಹವಾಣೆ ಸಾ|| ಇಬ್ಬರೂ ಭೂಸನೂರ ರವರು ಅಲ್ಲಿಗೆ ಬಂದು ತಮಗೆ ಕುರಿ ಹಾಲು ಹಿಂಡಿಕೊಡಲು ಕೇಳಿದ್ದು ಅದಕ್ಕೆ ಫಿರ್ಯಾದಿಯು ಕುರಿ ಗಬ್ಬ ಇದ್ದು ಹಾಲು ಬರುವದಿಲ್ಲ ಅಂತ ಅಂದಿದ್ದಕ್ಕೆ ಆಪಾದಿತರಿಬ್ಬರೂ ತಡೆದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಬಡಿಗೆಯಿಂದ ಮನಸ್ಸಿಗೆ ಬಂದಂತೆ ಬೆನ್ನ ಮೇಲೆ ಹೊಡೆದು ಜೀವ ಭಯಪಡಿಸಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ[್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ಲಕ್ಷ್ಮಣ ನಾಗಾಬಾರ ಸಾ : ದೇಸಾಯಿ ಕಲ್ಲೂರ ರವರ ಗಂಡ ಲಕ್ಷ್ಮಣ ತಂದೆ ಮಲಕಪ್ಪ ನಾಗಬಾರ ಇವರು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾನೆ. ನಮಗೆ ಒಟ್ಟು 2 ಜನ ಗಂಡು ಮಕ್ಕಳು 3 ಜನ ಹೆಣ್ಣು ಮಕ್ಕಳು ಇರುತ್ತಾರೆ. ನಮಗೆ ಸ್ವಂತ ಹೊಲ ಇಲ್ಲದ ಕಾರಣ ನನ್ನ ಗಂಡ ನಮ್ಮೂರಿನ ಶ್ರೀಮಂತ ತಂದೆ ವಿಠೋಬಾ ಕೋಳಿ ಇವರ ಹೊಲ ಸ ನಂ 9 ನೇದ್ದನ್ನು ಪಾಲಿಗೆ ಮಾಡಿರುತ್ತಾನೆ. ಸದರಿ ಹೊಲವು ನಮ್ಮೂರಿನಿಂದ ಆನೂರ ರೋಡಿಗೆ ಇರುತ್ತದೆ. ನಮ್ಮ ಧನ ಕರುಗಳನ್ನು ನಾವು ಪಾಲಿಗೆ ಮಾಡಿದ ಹೊಲದಲ್ಲಿಯೆ ಕಟ್ಟುತ್ತಿದ್ದರಿಂದ ನನ್ನ ಗಂಡ ದಿನಾಲು ಹೊಲದಲ್ಲಿಯೆ ಮಲಗುತ್ತಾನೆ. ಈಗ ಸದರಿ ಹೊಲದಲ್ಲಿ 3 ಎಕರೆ ಕಬ್ಬಿನ ಬೇಳೆ ಇದ್ದು ಉಳಿದ ಜಮೀನು ಮಳೆ ಬರದೆ ಇದ್ದ ಕಾರಣ ಏನು ಬಿತ್ತನೆ ಮಾಡದೆ ಹಾಗೆ ಬಿಟ್ಟಿರುತ್ತಾನೆ. ನಾವು ಮೊದಲಿನಿಂದಲೂ ಇದೆ ರೀತಿ ಬೇರೆಯವರ ಹೊಲವನ್ನು ಪಾಲಿಗೆ ಮಾಡಿ ಅದರಲ್ಲೆ ಜೀವನ ಸಾಗಿಸುತ್ತಿರುತ್ತೇವೆ. ಈಗ ಸುಮಾರು 4-5 ವರ್ಷಗಳಿಂದ ನಾವು ಪಾಲಿಗೆ ಮಾಡಿದ ಹೊಲಗಳು ಸರಿಯಾಗಿ ಬೇಳೆಯದೆ ಕಾರಣದಿಂದ ನನ್ನ ಗಂಡ ಊರ ಮನೆಯಲ್ಲಿ ಸುಮಾರು 4-5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿರುತ್ತಾನೆ. ನನ್ನ ಗಂಡ ಯಾರ ಯಾರ ಹತ್ತಿರ ಹಣ ಪಡೆದುಕೊಂಡಿದ್ದಾನೆ ಎಂಬ ಬಗ್ಗೆ ನನಗೆ ತಿಳಿಸಿರುವುದಿಲ್ಲ, ಆದರೆ 5-6 ಲಕ್ಷ ಸಾಲ ಇದೆ ಎಂದು ನನಗೆ ಹೇಳಿ ಅದರಲ್ಲಿಯೆ ಚಿಂತೆ ಮಾಡುತ್ತಿರುತ್ತಾನೆ. ಹಾಗೂ ಈ ವರ್ಷ ಸರಿಯಾಗಿ ಮಳೆ ಬರದೆ ಇದ್ದ ಕಾರಣ ಕಬ್ಬು ಸಹ ಒಣಗಿದ್ದು ನಾನು ಸಾಲ ಹೇಗೆ ತಿರಿಸಲಿ ಎಂದು ಚಿಂತೆ ಮಾಡುತ್ತಿರುತ್ತಾನೆ. ನಾನು ನನ್ನ ಗಂಡನಿಗೆ ಆಗಾಗ ಏನು ಆಗಲ್ಲ ಮುಂದೆ ಬೇಳೆದಾವು ಅಂತಾ ಹೇಳಿರುತ್ತೇನೆ. ದಿನಾಂಕ 29-10-2015 ರಂದು ರಾತ್ರಿ ನನ್ನ ಗಂಡ ಮನೆಯಲ್ಲಿ ಊಟ ಮಾಡುತ್ತಿದ್ದಾಗ ನನಗೆ ಏನು ಮಾಡೋದು ಮಳೆನು ಇಲ್ಲ ಬೇಳೆನು ಇಲ್ಲ, ಮಾಡಿದ ಸಾಲದ ಬಡ್ಡಿ ಜಾಸ್ತಿ ಆಗುತ್ತಾನೆ ಇದೆ, ಇದೆ ರೀತಿ ಆದರೆ ನಾನು ಸಾಲ ಹೇಗೆ ತಿರಿಸಲಿ ಅಂತಾ ಹೇಳುತ್ತಿದ್ದಾಗ ನಾನು ಎಂದಿನಂತೆ ನನ್ನ ಗಂಡನಿಗೆ ಸಮಾದಾನ ಮಾಡಿದೆನು. ನಂತರ ನನ್ನ ಗಂಡ ಊಟ ಮಾಡಿ ಹೊಲಕ್ಕೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೊದರು. ಇಂದು ದಿನಾಂಕ 30-10-2015 ರಂದು ಬೆಳಿಗ್ಗೆ 08:00 ಗಂಟೆ ಸುಮಾರಿಗೆ ನನ್ನ ಗಂಡ ದಿನಾಲು ಬೆಳಿಗ್ಗೆ 06:00 ಗಂಟೆಗೆ ಮನೆಗೆ ಬರುವವರು ಇಂದು ಬರದೆ ಇದ್ದ ಕಾರಣ ನಾನು ಸದರಿ ನಾವು ಮಾಡಿದ ಹೊಲಕ್ಕೆ ಹೋಗಿ ನೋಡಲು ನನ್ನ ಗಂಡನು ಹೊಲದಲ್ಲಿದ್ದ ಮನೆಯ ಮುಂದೆ ಬಯಲಿನಲ್ಲಿ ಮಲಗಿಕೊಂಡಿದ್ದನು, ನನ್ನ ಗಂಡನ ಪಕ್ಕದಲ್ಲಿಯೆ ಒಂದು ಬೇಳೆಗೆ ಹೊಡೆಯುವ ಒಂದು ವಿಷದ ಬಾಟಲಿ ಬಿದ್ದತ್ತು, ನಾನು ಗಾಬರಿಯಾಗಿ ನನ್ನ ಗಂಡನ ಹತ್ತಿರ ಹೋಗಿ ನೋಡಿದಾಗ ನನ್ನ ಗಂಡನು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 30-10-2015 ರಂದು ಸೊನ್ನ ಗ್ರಾಮಕ್ಕೆ ಹೊಂದಿಕೊಂಡಿರುವ ಭಿಮಾನದಿಯಿಂದ ಟ್ರಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸುರೇಶ ಬೆಂಡೆಗುಂಬಳ ಪಿ.ಎಸ್.ಐ  ಅಫಜಲಪೂರ ಪೊಲೀಸ್ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಕ್ರಾಸ  ಹತ್ತಿರ ಹೊಗುತ್ತಿದ್ದಾಗ ನಮ್ಮ ಎದುರಿನಿಂದ ಟ್ಯಾಕ್ಟರ ಬರುತ್ತಿದ್ದು, ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪ ನೋಡಿ ತನ್ನ ಟ್ರಾಕ್ಟರನ್ನು  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಸದರಿ ಟ್ಯಾಕ್ಟರದಲ್ಲಿ  ಮರಳು ತುಂಬಿದ್ದು ಇದ್ದು ಅದರ  ನಂಬರ ಅರ್ಜುನ ಮಹೇಂದ್ರ ಕಂಪನಿಯ ಟ್ರಾಕ್ಟರ ನಂ ಕೆಎ-32 ಟಿಎ-8002 ಅಂತ ಇದ್ದು . ಸದರಿ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 3,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಅಫಜಲಪೂರ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 31-10-2015 ರಂದು  ಶಿವಪೂರ ಬನ್ನಟ್ಟಿ  ಗ್ರಾಮದ ಕಡೆಯಿಂದ ಟಿಪ್ಪರದಲ್ಲಿ ಅಕ್ರಮವಾಗಿ ಮರಳು ತುಂಬಿ ಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಸುರೇಶ ಬೆಂಡೆಗುಂಬಳೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬನ್ನಟ್ಟಿ ಕ್ರಾಸ್ ಹತ್ತಿರ ಹೋಗುತ್ತಿದ್ದಂತೆ ಎದುರಿನಿಂದ ಟಿಪ್ಪರ ಬರುತ್ತಿದ್ದು. ಸದರಿ ಟಿಪ್ಪರ ಚಾಲಕನು ನಮ್ಮ ಪೊಲೀಸ್ ಜೀಪ ನೋಡಿ ತನ್ನ ವಶದಲ್ಲಿದ್ದ ಟಿಪ್ಪರ  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು. ನಂತರ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದು ಅದರ ನಂಬರ ಟಿಪ್ಪರ ನಂ ಜಿಎ-01, ಡಬ್ಲೂ-7034 ಅಂತ ಇದ್ದು ,ಸದರಿ ಟಿಪ್ಪರಲ್ಲಿನ ಮರಳಿನ ಅಂದಾಜು ಕಿಮ್ಮತ್ತು 5,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆ ಸದರ ವಾಹನದೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 27-10-2015 ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಮರಮಂಚಿ ತಾಂಡಾದ ನಮ್ಮ ಸಂಭಂದಿಕನಾದ ಸಂಜು ಈತನು ನಮ್ಮ ಮನೆಗೆ ಬಂದು ತನ್ನ ತಂದೆಯಾದ ಗೋಪಾಲ ರಾಠೋಡ ಇವರಿಗೆ ಲಕುವಾ ಆಗಿದ್ದು ಅವರಿಗೆ ಆರಾಮ ಇರುವದಿಲ್ಲ ಅಂತ ತಿಳಿಸಿದ್ದು ಉಪಚಾರ ಕುರಿತ ಎಲ್ಲಿಗೆ ಕರೆದುಕೊಂಡು ಹೋಗಬೇಕು ಅಂತ ವಿಚಾರಿಸಿದ್ದು ಆಗ ನಮ್ಮ ತಂದೆಯಾದ ಸಕ್ಕು ನನಗೆ ನಾವು ಮರಮಂಚಿ ತಾಂಡಕ್ಕೆ ಹೋಗಿ ಗೋಪಾಲ ರಾಠೋಡನೊಂದಿಗೆ ಮಾತನಾಡಿ ಬರೊಣ ನಡೆ ಅಂತ ಹೇಳಿದ್ದು ಅದಕ್ಕೆ ನಾನು ಒಪ್ಪಿಕೊಂಡಿದ್ದು ನಂತರ ನಾನು ನಮ್ಮ ತಂದೆ ಸಕ್ಕು ರಾಠೋಡ ಮತ್ತು ನಮ್ಮ ಸಂಬಂದಿಕನಾದ ಸಂಜು ಕೂಡಿಕೊಂಡು ನಮ್ಮ ಮೋಟಾರ ಸೈಕಲ್ ನಂ ಎಮ್.ಹೆಚ್-02-ಇಎ-9613 ನೇದ್ದು ತೆಗೆದುಕೊಂಡು ನಮ್ಮ ತಾಂಡಾದಿಂದ ಮರಮಂಚಿ ತಾಂಡಾಕ್ಕೆ ಹೊಗುವ ಕುರಿತು ಹೊರಟಿದ್ದು ಸಂಜು ಇತನು ನಮ್ಮ ಮೋಟಾರ ಸೈಕಲ ಚಲಾಯಿಸುತ್ತಿದ್ದು ಅಂದು ಮಧ್ಯಾನ 12 ಗಂಟೆಯ ಸುಮಾರಿಗೆ ಪಟವಾದ ಗ್ರಾಮ ದಿಂದ ಸೊಂತ ಗ್ರಾಮದ ಕಡೆಗೆ ಹೊರುವ ರಸ್ತೆಯ ಮೇಲೆ ಹೊಗುತ್ತಿದ್ದಾಗ ಅದೆ ವೇಳೆಗೆ ನಮ್ಮ ಎದರುಗಡೆಯಿಂದ 2-3 ಮೋಟಾರ ಸೈಕಲಗಳು ಬರುತ್ತಿದ್ದ ಆಗ ಸಂಜು ಇತನು ನಮ್ಮ ಮೋಟಾರ ಸೈಕಲ್ ರಸ್ತೆಯ ಎಡಗಡೆಯಿಂದ ನಡೆಯಿಸಿಕೊಂಡು ಹೋಗುತ್ತಿದ್ದ ಎದುರಗಡೆಯಿಂದ ಬರುತ್ತಿದ್ದ ಮೋಟಾರ ಸೈಕಲಗಳಲ್ಲಿ ಒಂದು ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಎದುರಗಡೆ ಇರುವ ಮೋಟಾರ ಸೈಕಲಗಳ ಓವರ ಟೇಕ್ ಮಾಡಿ ಅದೆ ವೇಗದಲ್ಲಿ ಬಂದು ನಮ್ಮ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟು ನಮಗೆ ಅಪಘಾತ ಪಡಿಸಿದ್ದು, ಅಪಘಾತ ಪಡಿಸಿದ ಪರಿಣಾಮ ನಾವು 3 ಜನರು ಮೋಟಾರ ಸೈಲ್ ಸಮೇತ ರಸ್ತೆಯ ಪಕ್ಕದಲ್ಲಿ ಬಿದಿದ್ದು, ನಮಗೆ ಡಿಕ್ಕಿ ಕೊಟ್ಟ ಮೋಟಾರ ಸೈಕಲ ಸವಾರನು ಮೋಟಾರ ಸೈಕಲ ಸಮೇತ ಅಲ್ಲೆ ಬಿದ್ದಿದ್ದು ಸದರಿಯವನು ತನ್ನ ಮೋಟಾರ ಸೈಕಲ ಅಲ್ಲೆ ಬಿಟ್ಟು ಓಡಿ ಹೊಗಿದ್ದು, ಸದರಿಯವನಿಗೆ ನೋಡಿದರೆ ಗುರುತಿಸುತ್ತೇನೆ. ನಾವು ಬಿದ್ದು ಪರಿಣಾಮ ನನ್ನ ಎಡಗಾಲು ತೊಡೆಗೆ ಎಡಗಾಲ ಪಾದದ ಮೇಲೆ, ಎಡಗಾಲ ಮಳಕಾಲ ಮೇಲೆ ಭಾರಿರಕ್ತಗಾಯವಾಗಿ ಕಾಲು ಮುರಿದಿದ್ದು ನಮ್ಮ ತಂದೆ ಸಕ್ಕು ಇವರಿಗೆ ಎರಡು ಕಾಲುಗಳ ಮೇಲೆ ಭಾರಿ ರಕ್ತಗಾಯವಾಗಿದ್ದು ತಲೆಗೆ ಭಾರಿ ಒಳಪೆಟ್ಟಾಗಿದು ಸಂಜು ಇತನು ಹಾರಿ ಬಿದ್ದಿದ್ದರಿಂದ ಅವನ ಎಡಗೈ ಮುಂಗೈ ಹತ್ತಿರ ತರಚಿದ ಗಾಯವಾಗಿದ್ದು ಅವನಿಗೆ ಅಷ್ಠೆನು ಗಾಯವಾಗಿರುವದಿಲ್ಲ. ನಂತರ ನಾನು ನಮಗೆ ಡಿಕ್ಕಿ ಕೊಟ್ಟ ಮೋಟಾರ ಸೈಕಲ್ ನಂ ನೋಡಲು ಕೆಎ-32-ಕೆ-4853 ಅಂತಾ ಇದ್ದು, ನಂತರ ನಾನು ನಮ್ಮ ಸಂಭಂದಿಕರಾದ  ಪಾಂಡುರಂಗ ಇವರಿಗೆ ಪೋನ ಮಾಡಿ ವಿಷಯ ತಿಳಿಸಿದ್ದು ಸ್ವಲ್ಪ ಹೊತ್ತಿನಲ್ಲಿ ಪಾಂಡುರಂಗ ಮತ್ತು ಹಾಗೂ ನಮ್ಮ ಸಂಬಂದಿಕರಾದ ಶಾಮು ಇವರು ಸ್ಥಳಕ್ಕೆ ಬಂದು ನನಗೆ ಮತ್ತು ತಂದೆಗೆ ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಉಪಚಾರ ಕುರಿತು ದಿನಾಂಕ 27.10.2015 ರಂದು ರಾತ್ರಿ ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ, ನಮ್ಮ ತಂದೆ ಸಕ್ಕು ಇವರಿಗೆ ಬಾರಿರಕ್ತಗಾಯ ಪಡಿಸಿ ದು:ಖಾಪತ ಗೊಳಿಸಿದ ಸದರಿ ಮೋಟಾರ ಸೈಕಲ್ ನಂ. ಕೆಎ-32-ಕೆ-4853  ನೇದ್ದರ ಚಾಲಕ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಹೇಳಿಕೆ ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಕ್ಕು ರಾಠೋಡ ಈತನು ಉಪಚಾರ ಫಲಿಸದೆ ದಿನಾಂಕ:27-10-2015 ರಂದು ಆದ ರಸ್ತೆ ಅಪಘಾತದಲ್ಲಿ ಆದ ಗಾಯಗಳಿಂದ ಉಪಚಾರ ಫಲಿಸದೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 October 2015

Kalaburagi District Reported Crimes

ಕೊಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 14/10/2015 ರಂದು ಮುಂಜಾನೆ 7-10 ಗಂಟೆಗೆ ತನ್ನ ಗಂಡನಾದ ಶರಣಕುಮಾರ ಇತನಿಗೆ ನಮ್ಮೂರ ಶ್ರೀಶೈಲ ತಂದೆ ಸಿದ್ದಪ್ಪ ಜೈನಾಪೂರ ಇತನು ನನ್ನ ಗಂಡನಿಗೆ ಮನೆಯಿಂದ ಕರೆದಕೊಂಡು ಹೋಗಿದ್ದು  ಎರಡು ತಾಸಿನ ನಂತರ ನನ್ನ ಗಂಡ ಬಿದ್ದಿರುತ್ತಾನೆ ಅವನಿಗೆ ಆಸ್ಪತ್ರೆಗೆ ಅಟೋದಲ್ಲಿ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ವಿಷಯ ಗೊತ್ತಾಗಿದ್ದು ನಂತರ ಮೃತಪಟ್ಟ ನನ್ನ ಗಂಡ ಶವ ಮನೆಗೆ ತಂದಿರುತ್ತಾರೆ. ನನ್ನ ಗಂಡನಿಗೆ ಶ್ರೀಶೈಲ ಇತನು ತನ್ನ ತೋಟದ ಹೊಲದಲ್ಲಿ ಜೀವ ಹೊಡೆದು ಓಡಿ ಹೋಗಿರುತ್ತಾನೆ. ಮತ್ತು ನಮ್ಮ ಕುಟುಂಬದರಿಗೆ ಶ್ರೀಶೈಲ ಇತನ ಕುಟುಂಬದವರು ಅವಾಚ್ಯವಾಗಿ ಬೈದು ಬೇಡ ಅಂತಾ ಜಾತಿ ನಿಂದನೆ  ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಶ್ರೀಮತಿ ದೇವಮ್ಮ ಗಂಡ ಶರಣಕುಮಾರ ಸುಬೇದಾರ ಸಾ: ಹಳೆ ಶಹಾಬಾದ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಆಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದವರ ಬಂಧನ :
ಸೇಡಂ ಠಾಣೆ : ದಿನಾಂಕ:30-10-2015 ರಂದು ಸೇಡಂ ಪಟ್ಟಣದ ಮೇನ್ ಬಜಾರ ಅಂಬೇಡ್ಕರ ಮೂರ್ತಿಯ ಹತ್ತಿರ ಸೇಂದಿ ಪಾಕೀಟ್ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ಧಾರೆ.  ಅಂತ ಖಚಿತ ಬಾತ್ಮಿ ಬಂದ ಮೇರೆಗೆ, ಬಾಪುಗೌಡ ಎಸ್. ಪಾಟೀಲ್ ಪಿ.ಎಸ್.ಐ. ಸೇಡಂ ಪೊಲೀಸ್ ಠಾಣೆ, ಮತ್ತು ಠಾಣೆಯ ಸಿಬ್ಬಂದಿಯವರಾದ, ಶಿವಕುಮಾರ ಪಿಸಿ-861, ಮನೋಹರ ಪಿಸಿ-536 ಹಾಗೂ ಮಪಿಸಿ-746 ಹಾಗು ಪಂಚರೊಂದಿಗೆ  ಬಾತ್ಮಿ ಬಂದ ಸ್ಥಳಕ್ಕೆ ಹೋಗಿ, ಅಂಬೇಡ್ಕರ ಮೂರ್ತಿ ಹತ್ತಿರ  ಮರೆಯಾಗಿ ನಿಂತು ನೋಡಲಾಗಿ, ಒಬ್ಬ ಹೆಣ್ಣುಮಗಳು ತನ್ನ ತಲೆಯ ಮೇಲೆ ಒಂದು ಪ್ಲಾಸ್ಟಿಕ್ ಪಾಕೀಟ್ ತುರತ್ತಿದ್ದು ಈ ಬಗ್ಗೆ ಅನುಮಾನ ಬಂದು ನಾನು ಸಿಬ್ಬಂದಿಯವರೊಂದಿಗೆ, ಪಂಚರ ಸಮಕ್ಷಮ ಹಾಗೂ ಮಪಿಸಿ=746 ರವರ ಸಹಾಯದಿಂದ ಅವಳ ತಲೆಯ ಮೇಲಿದ್ದ ಚೀಲವನ್ನು ಕೆಳಗೆ ಇಳಿಸಿ ಬಿಚ್ಚಿ ನೋಡಲಾಗಿ ಅದರಲ್ಲಿ ಸೇಂದಿ ತುಂಬಿದ ಪಾಕೀಟಗಳು ಇದ್ದವು. ಅವುಗಳ ಬಗ್ಗೆ ವಿಚಾರಿಸಲು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಲಾಭಕ್ಕಾಗಿ ಕಲಬೆರಿಕೆ ಸೇಂದಿ ಮಾರಾಟ ಮಾಡುತ್ತೇವೆ ಅಂತ ತಿಳಿಸಿದ್ದು. ಪರಿಶೀಲಿಸಲಾಗಿ ಒಟ್ಟು 25 ಸೇಂದಿ ಪಾಕೀಟ್ ಗಳು ಇದ್ದವು ಅದರ ಅಂದಾಜು ಕಿಮ್ಮತ್ತು 250/- ರೂಪಾಯಿ ಇರುತ್ತದೆ. ಸದರಿಯವಳ ಹೆಸರು ವಿಚಾರಿಸಲಾಗಿ ಲಕ್ಷ್ಮೀಬಾಯಿ ಗಂಡ ಹೀರಾಲಾಲ ರಾಠೋಡ ವಯ:40 ವರ್ಷ, ಜಾತಿ:ಲಂಬಾಣಿ, ಉ:ಕೂಲಿ ಕೆಲಸ, ಸಾ:ಇಂದಿರಾ ನಗರ, ಸೇಡಂ ಅಂತ ತಿಳಿಸಿದ್ದು  ಸದರಿಯವಳನ್ನು ವಶಕ್ಕೆ ತೆಗೆದುಕೊಂಡು ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸೇಡಂ ಠಾಣೆ : ದಿನಾಂಕ:30-10-2015 ರಂದು ಸೇಡಂ ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ, ಶ್ರೀ, ಗೌರಿಶಂಕರ ಹೆಚ್.ಸಿ-91 ಸೇಡಂ ಪೊಲೀಸ್ ಠಾಣೆ ಮತ್ತು ಠಾಣೆಯ ಸಿಬ್ಬಂದಿಯವರಾದ, ಮರೆಗೆಪ್ಪ ಪಿಸಿ-791, ಪಿಸಿ-572 ಆನಂದ ಹಾಗು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ನಡೆದುಕೊಂಡು ಹೋಗಿ, ಇಂದಿರಾನಗರದ ಒಂದು ಮನೆಯ ಹತ್ತಿರ ಮನೆಯ ಗೋಡೆಗೆ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಜನರು ಒಬ್ಬೊಬ್ಬರಾಗಿ ಹೋಗಿ ಬರುತ್ತಿದ್ದನ್ನು ಹಾಗೂ ಒಬ್ಬ ವ್ಯಕ್ತಿ ಸೇಂದಿ ಮಾರಾಟ ಮಾಡುತ್ತಿರುವದನ್ನು ಖಚಿತಪಡಿಸಿಕೊಂಡು, ನಾನು ಸಿಬ್ಬಂದಿಯವರೊಂದಿಗೆ, ಪಂಚರ ಸಮಕ್ಷಮ ಏಕಕಾಲಕ್ಕೆ ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಲಾಗಿ, ಆಸೀಫ್ ತಂದೆ ಬಾಬುಮಿಯಾ ಗೌಂಡಿ, ಸಾ:ಇಂದಿರಾನಗರ, ಸೇಡಂ  ಅಂತ ತಿಳಿಸಿದರು ಅವನ ಹತ್ತಿರ ಇರುವ ಚೀಲದಲ್ಲಿ ಪರಿಶೀಲಿಸಲಾಗಿ 25 ಸೇಂದಿ ಪಾಕೀಟಗಳು ಅಂ.ಕಿ 250/- ರೂಪಾಯಿ, ನೇದ್ದ್ನನು ಜಫ್ತಿ ಮಾಡಿಕೊಂಡೇವು. ಸದರಿ ಸೇಂದಿ ಬಗ್ಗೆ ವಿಚಾರಿಸಲು ತಾನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಲಾಭಕ್ಕಾಗಿ ಕಲಬೆರಿಕೆ ಸೇಂದಿ ಮಾರಾಟ ಮಾಡುತ್ತೇವೆ ಅಂತ ತಿಳಿಸಿದ್ದು.  ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸೇಡಂ ಠಾಣೆ : ದಿನಾಂಕ:29-10-2015 ರಂದು ಬಸವನಗರದಲ್ಲಿ ಅಕ್ರಮವಾಗಿ ಸೇಂದಿ ತೈಯಾರು ಮಾಡಿ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ, ಶ್ರೀ, ಗೌರಿಶಂಕರ ಹೆಚ್.ಸಿ-91 ಸೇಡಂ ಪೊಲೀಸ್ ಠಾಣೆ ಮತ್ತು ಠಾಣೆಯ ಸಿಬ್ಬಂದಿಯವರಾದ, ಮರೆಗೆಪ್ಪ ಪಿಸಿ-791, ಶಿವಕುಮಾರ ಪಿಸಿ-861, ಭಿಮಣ್ಣ ಪಿಸಿ-808, ಆಸೀಫ್ ಮಿಯಾ ಪಿಸಿ-535  ಹಾಗು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ನಡೆದುಕೊಂಡು ಹೋಗಿ, ಬಸವನಗರ ತಾಂಡಾದಲ್ಲಿರುವ ರಮೇಶ ರಾಠೋಡ ಇವರ ಮನೆಯ ಗೋಡೆಗೆ  ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಜನರು ಒಬ್ಬೊಬ್ಬರಾಗಿ ಹೋಗಿ ಬರುತ್ತಿದ್ದು, ಹಾಗೂ ಒಬ್ಬ ಹೆಣ್ಣುಮಗಳು ಮತ್ತು ಇನ್ನೊಬ್ಬ ವ್ಯಕ್ತಿ ಸೇಂದಿ ಪಾಕೀಟಗಳನ್ನು 10 ರೂಪಾಯಿಗೆ ಒಂದರಂತೆ ಮಾರಾಟ ಮಾಡುತ್ತಿರುವದನ್ನು ಖಚಿತಪಡಿಸಿಕೊಂಡು ನಾನು ಸಿಬ್ಬಂದಿಯವರೊಂದಿಗೆ, ಪಂಚರ ಸಮಕ್ಷಮ ಏಕಕಾಲಕ್ಕೆ ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಲಾಗಿ 1] ಸುರೇಖ ಗಂಡ ರಮೇಶ ರಾಠೋಡ, 2] ರಮೇಶ ತಂದೆ ಗಣಪತಿ ರಾಠೋಡ ಇಬ್ಬರೂ ಸಾ:ಬಸವನಗರ ತಾಂಡಾ, ಸೇಡಂ. ಅಂತ ತಿಳಿಸಿದರು ಅವರ ಹತ್ತಿರ ಪರಿಶೀಲಿಸಲಾಗಿ 100 ಸೇಂದಿ ಪಾಕೀಟಗಳು ಅಂ.ಕಿ 1000/- ರೂಪಾಯಿ ಮತ್ತು ಒಂದು ಪ್ಲಾಸ್ಟಿಕ್ ಬುಟ್ಟಿ ಜಫ್ತಿ ಮಾಡಿಕೊಂಡು ಸದರಿ ಸೇಂದಿ ಬಗ್ಗೆ ವಿಚಾರಿಸಲು ನಾವು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಲಾಭಕ್ಕಾಗಿ ಕಲಬೆರಿಕೆ ಸೇಂದಿ ಮಾರಾಟ ಮಾಡುತ್ತೇವೆ ಅಂತ ತಿಳಿಸಿದ್ದು. ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಚೌಕ ಠಾಣೆ : ದಿನಾಂಕ: 29.10.2015 ರಂದು ಖಾರಿಬೌಡಿ ಮೋಮಿನಪೂರ ಮಹಿಬೂಬ ಟೇಲರ ಅಂಗಡಿಯ ಹತ್ತಿರ ಇರುವ ಸಾರ್ವಜನಿಕ ರಸ್ತೆಯ ಹತ್ತಿರ ಕೆಲವು ಜನರು ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ ಶ್ರೀ ಉಮಾಶಂಕರ.ಬಿ. ಪಿ.ಐ ಚೌಕ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಖಾರಿಬೌಡಿ ಮೋಮಿನಪೂರ ಮಹಿಬೂಬ ಟೇಲರ ಅಂಗಡಿಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ ಇಬ್ಬರೂ ವ್ಯಕ್ತಿಗಳು ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ಒಮ್ಮೆಲೆ ಎಲ್ಲರೂ ಸುತ್ತುವರೆದು ಮಟಕಾ ಚೀಟಿ ಬರೆದುಕೊಳ್ಳುವ ವ್ಯಕ್ತಿಗೆ ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ಮೋದಲನೇಯವನು ತನ್ನ ಹೆಸರು ಮಹ್ಮದ ಶಮ್ಸ್ ಮೈನೋದ್ದಿನ @ ಮುನ್ನಾ ತಂದೆ ಮಹ್ಮದ ಹಸನ ಅಲಿ ಸಾ: ಖಾರಿಬೌಡಿ ಮೋಮಿನಪೂರ ಕಲಬುರಗಿ 2) ಮಹ್ಮದ ಜಾಫರ ತಂದೆ ಇಮಾಮ ಸಾಬ ಭಗವಾನ ಹಿಪ್ಪರಗಾ ಸಾ: ಖಾರಿಬೌರಿ ಮೋಮಿನಪೂರ ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 3300/- ರೂ  ಮಟಕಾ ಚೀಟಿಗಳು ಹಾಗು  ಬಾಲಪೆನ್ ವಶಪಡಿಸಿಕೊಂಡು ಈ ಮಟಕಾ ಚೀಟಿಯನ್ನು ಯಾರಿಗೆ ಕೊಡುವದಾಗಿ ವಿಚಾರಣೆಗೆ ಒಳಪಡಿಸಿದ್ದು ಸದರಿಯವರು ಇಬ್ಬರೂ ತಾವು ಈ ಮಟಕಾ ಚೀಟಿಗಳನ್ನು ಮಟಕಾ ಬುಕ್ಕಿಯಾದ ವಿಜಯಕುಮಾರ @ ಬುಕ್ಕಿ ವಿಜಯ ತಂದೆ ಹಣಮಂತರಾವ ಬೆಳಗೇರಿ ವ: 36 ಉ: ಮಟಕಾ ಬುಕ್ಕಿ & ವ್ಯಾಪಾರ ಸಾ: ಮಾಹಾದೇವ ನಗರ ಶೇಖ ರೋಜಾ ಕಲಬುರಗಿ ಅಂತಾ ಹೆಸರು ಹೇಳಿದ್ದು ಸದರಿ ಆರೋಪಿತರಿಗೆ ಸ್ಥಳದಲ್ಲಿಯೇ ದಸ್ತಗಿರಿ ಮಾಡಿಕೊಂಡು ಅವರೊಂದಿಗೆ ಮಟಕಾ ಬುಕ್ಕಿ ಇತನ ವಿಳಾಸಕ್ಕೆ ಹೋಗಿ ನೋಡಿದಾಗ ಸದರಿ ಮಟಕಾ ಬುಕ್ಕಿ ವಿಜಯಕುಮಾರ @ ಬುಕ್ಕಿ ವಿಜಯ ಇತನು ಇಲ್ಲಿಂದ ಓಡಿ ಹೋಗಿದ್ದು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ. ,
ಚೌಕ ಠಾಣೆ : ದಿನಾಂಕ: 29.10.2015 ರಂದು ಸಾಯಂಕಾಲ ಎಸ್.ಕೆ ಲಮಾಣಿ ಇವರ ಮನೆಯ ಹತ್ತಿರ ಪೂಲಿನ ಬದಿಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ ಶ್ರೀ ಹಸೇನ ಬಾಷಾ ಪಿ.ಎಸ್.ಐ (ಕಾ.ಸು)  ಚೌಕ ಪೊಲೀಸ್ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಎಸ್.ಕೆ ಲಮಾಣಿ ಇವರ ಮನೆಯ ಹತ್ತಿರ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ಒಮ್ಮೆಲೆ ಎಲ್ಲರೂ ಸುತ್ತುವರೆದು ಮಟಕಾ ಚೀಟಿ ಬರೆದುಕೊಳ್ಳುವ ವ್ಯಕ್ತಿಗೆ ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಗುಂಡಪ್ಪ ತಂದೆ ಶಂಕರ ನಾಟೀಕಾರ ಸಾ: ಕಾವೇರಿ ನಗರ  ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ನಗದು ಹಣ 2420/-ರೂಪಾಯಿ, ಒಂದು ಮಟಕಾ ಚೀಟಿ , ಒಂದು ಬಾಲಪೆನ್ , ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ ಮುದ್ದೆಮಾಲು  ವಶಪಡಿಸಿಕೊಂಡು ಈ ಮಟಕಾ ಚೀಟಿಯನ್ನು ಯಾರಿಗೆ ಕೂಡುವುದಾಗಿ ಕೇಳಿದಾಗ ಸದರಿಯವನು ತಾನು ಈ ಮಟಕಾ ಚೀಟಿಗಳನ್ನು ಮಟಕಾ ಬುಕ್ಕಿಯಾದ ರಾಜು @ ರಾಜಶೇಖರ ತಂದೆ ಮಲ್ಲಿಕಾರ್ಜುನ ಸಾ: ರಾಜುಗಾಂಧಿ ನಗರ ಕಲಬುರಗಿ ಅಂತಾ ಹೆಸರು ಹೇಳಿದ್ದು ಮಟಕಾ ಬುಕ್ಕಿ ಇತನ ವಿಳಾಸಕ್ಕೆ ಹೋಗಿ ನೋಡಿದಾಗ ಸದರಿ ರಾಜು @ ರಾಜಶೇಖರ ಇತನು ಅಲ್ಲಿಂದ ಓಡಿ ಹೋಗಿದ್ದು ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಂಕ್ರೆಪ್ಪ ತಂದೆ ಬಸಪ್ಪ ಸಾತನೂರ ಸಾ|| ಗೊರವಗುಂಡಗಿ ತಾ|| ಸಿಂದಗಿ ಇವರು ದಿನಾಂಕ 13-09-2015 ರಂದು ಬೆಳಿಗ್ಗೆ ನಮ್ಮೂರಿನಿಂದ ನಾನು ಮತ್ತು ನನ್ನ ಹೆಂಡತಿ ಈರಮ್ಮ ಹಾಗೂ ನನ್ನ ಮಗಳು ರೇಣುಕಾ ಹಾಗೂ ಅವಳ 2 ಹೆಣ್ಣು ಮಕ್ಕಳು ಎಲ್ಲರೂ ಕೂಡಿಕೊಂಡು ಶ್ರೀ ಘತ್ತರಗಾ ಭಾಗ್ಯವಂತಿ ದೇವಸ್ಥಾನಕ್ಕೆ ದೆವರ ದರ್ಶನಕ್ಕೆಂದು ಬಂದು ಶ್ರೀ ಭಾಗ್ಯವಂತಿ ದೇವಸ್ಥಾನದ ಹತ್ತಿರ ಇರುವ ಭೀಮಾನದಿಯಲ್ಲಿ ಸ್ನಾನ ಮಾಡುವ ಸಂಭದ ನಮ್ಮ ಬಟ್ಟೆಬರೆಗಳನ್ನು ಹಾಗೂ ನನ್ನ ಹೆಂಡತಿಯ ಮೈ ಮೇಲೆ ಇದ್ದ ಒಂದು ಬೋರಮಳ ಸರ ಹಾಗೂ ನನ್ನ ಮಗಳ ಮೈ ಮೇಲೆ ಇದ್ದ ಒಂದು ಬೋರಮಳ ಎಲ್ಲವುಗಳನ್ನು ನಾವು ತಗೆದುಕೊಂಡು ಹೋದ ಹಳೆಯ ಬಟ್ಟೆಯ ಚೀಲದಲ್ಲಿ ಹಾಕಿ ಹೊಳೆಯ ದಂಡೆಯ ಮೇಲೆ ಇಟ್ಟು, ಎಲ್ಲರೂ ಹೊಳೆಯಲ್ಲಿ ಸ್ನಾನ ಮಾಡಿದೆವು. ನಂತರ ಎಲ್ಲರೂ ಸ್ನಾನ ಮುಗಿಸಿಕೊಂಡು ನಾವು ಇಟ್ಟಿದ ಚೀಲದ ಹತ್ತಿರ ಬಂದು ನೋಡಲಾಗಿ ನಾವು ಬಂಗಾರದ ಸಾಮಾನುಗಳು ಇಟ್ಟ ಚೀಲವನ್ನು ಬಂಗಾರ ಸಾಮಾನುದೊಂದಿಗೆ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ನಂತರ ನಾವು ಎಲ್ಲಾ ಕಡೆ ಹುಡುಕಾಡಿ ಅಲ್ಲಿಗೆ ಬಂದ ಭಕ್ತಾದಿಗಳು ಸಹ ವಿಚಾರಿಸಿದೇವು. ಸದರಿ ನಮ್ಮ ವಡವೆಗಳು ಸಿಕ್ಕಿರುವುದಿಲ್ಲ. 2 ಬಂಗಾರದ ಬೋರಮಳ ಸರಗಳು ಅಂದಾಜು 42,000/- ರೂ ಕಿಮ್ಮತ್ತು ಆಗಬಹುದು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.