POLICE BHAVAN KALABURAGI

POLICE BHAVAN KALABURAGI

30 October 2015

Kalaburagi District Reported Crimes

ಕೊಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 14/10/2015 ರಂದು ಮುಂಜಾನೆ 7-10 ಗಂಟೆಗೆ ತನ್ನ ಗಂಡನಾದ ಶರಣಕುಮಾರ ಇತನಿಗೆ ನಮ್ಮೂರ ಶ್ರೀಶೈಲ ತಂದೆ ಸಿದ್ದಪ್ಪ ಜೈನಾಪೂರ ಇತನು ನನ್ನ ಗಂಡನಿಗೆ ಮನೆಯಿಂದ ಕರೆದಕೊಂಡು ಹೋಗಿದ್ದು  ಎರಡು ತಾಸಿನ ನಂತರ ನನ್ನ ಗಂಡ ಬಿದ್ದಿರುತ್ತಾನೆ ಅವನಿಗೆ ಆಸ್ಪತ್ರೆಗೆ ಅಟೋದಲ್ಲಿ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ವಿಷಯ ಗೊತ್ತಾಗಿದ್ದು ನಂತರ ಮೃತಪಟ್ಟ ನನ್ನ ಗಂಡ ಶವ ಮನೆಗೆ ತಂದಿರುತ್ತಾರೆ. ನನ್ನ ಗಂಡನಿಗೆ ಶ್ರೀಶೈಲ ಇತನು ತನ್ನ ತೋಟದ ಹೊಲದಲ್ಲಿ ಜೀವ ಹೊಡೆದು ಓಡಿ ಹೋಗಿರುತ್ತಾನೆ. ಮತ್ತು ನಮ್ಮ ಕುಟುಂಬದರಿಗೆ ಶ್ರೀಶೈಲ ಇತನ ಕುಟುಂಬದವರು ಅವಾಚ್ಯವಾಗಿ ಬೈದು ಬೇಡ ಅಂತಾ ಜಾತಿ ನಿಂದನೆ  ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಶ್ರೀಮತಿ ದೇವಮ್ಮ ಗಂಡ ಶರಣಕುಮಾರ ಸುಬೇದಾರ ಸಾ: ಹಳೆ ಶಹಾಬಾದ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಆಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದವರ ಬಂಧನ :
ಸೇಡಂ ಠಾಣೆ : ದಿನಾಂಕ:30-10-2015 ರಂದು ಸೇಡಂ ಪಟ್ಟಣದ ಮೇನ್ ಬಜಾರ ಅಂಬೇಡ್ಕರ ಮೂರ್ತಿಯ ಹತ್ತಿರ ಸೇಂದಿ ಪಾಕೀಟ್ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ಧಾರೆ.  ಅಂತ ಖಚಿತ ಬಾತ್ಮಿ ಬಂದ ಮೇರೆಗೆ, ಬಾಪುಗೌಡ ಎಸ್. ಪಾಟೀಲ್ ಪಿ.ಎಸ್.ಐ. ಸೇಡಂ ಪೊಲೀಸ್ ಠಾಣೆ, ಮತ್ತು ಠಾಣೆಯ ಸಿಬ್ಬಂದಿಯವರಾದ, ಶಿವಕುಮಾರ ಪಿಸಿ-861, ಮನೋಹರ ಪಿಸಿ-536 ಹಾಗೂ ಮಪಿಸಿ-746 ಹಾಗು ಪಂಚರೊಂದಿಗೆ  ಬಾತ್ಮಿ ಬಂದ ಸ್ಥಳಕ್ಕೆ ಹೋಗಿ, ಅಂಬೇಡ್ಕರ ಮೂರ್ತಿ ಹತ್ತಿರ  ಮರೆಯಾಗಿ ನಿಂತು ನೋಡಲಾಗಿ, ಒಬ್ಬ ಹೆಣ್ಣುಮಗಳು ತನ್ನ ತಲೆಯ ಮೇಲೆ ಒಂದು ಪ್ಲಾಸ್ಟಿಕ್ ಪಾಕೀಟ್ ತುರತ್ತಿದ್ದು ಈ ಬಗ್ಗೆ ಅನುಮಾನ ಬಂದು ನಾನು ಸಿಬ್ಬಂದಿಯವರೊಂದಿಗೆ, ಪಂಚರ ಸಮಕ್ಷಮ ಹಾಗೂ ಮಪಿಸಿ=746 ರವರ ಸಹಾಯದಿಂದ ಅವಳ ತಲೆಯ ಮೇಲಿದ್ದ ಚೀಲವನ್ನು ಕೆಳಗೆ ಇಳಿಸಿ ಬಿಚ್ಚಿ ನೋಡಲಾಗಿ ಅದರಲ್ಲಿ ಸೇಂದಿ ತುಂಬಿದ ಪಾಕೀಟಗಳು ಇದ್ದವು. ಅವುಗಳ ಬಗ್ಗೆ ವಿಚಾರಿಸಲು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಲಾಭಕ್ಕಾಗಿ ಕಲಬೆರಿಕೆ ಸೇಂದಿ ಮಾರಾಟ ಮಾಡುತ್ತೇವೆ ಅಂತ ತಿಳಿಸಿದ್ದು. ಪರಿಶೀಲಿಸಲಾಗಿ ಒಟ್ಟು 25 ಸೇಂದಿ ಪಾಕೀಟ್ ಗಳು ಇದ್ದವು ಅದರ ಅಂದಾಜು ಕಿಮ್ಮತ್ತು 250/- ರೂಪಾಯಿ ಇರುತ್ತದೆ. ಸದರಿಯವಳ ಹೆಸರು ವಿಚಾರಿಸಲಾಗಿ ಲಕ್ಷ್ಮೀಬಾಯಿ ಗಂಡ ಹೀರಾಲಾಲ ರಾಠೋಡ ವಯ:40 ವರ್ಷ, ಜಾತಿ:ಲಂಬಾಣಿ, ಉ:ಕೂಲಿ ಕೆಲಸ, ಸಾ:ಇಂದಿರಾ ನಗರ, ಸೇಡಂ ಅಂತ ತಿಳಿಸಿದ್ದು  ಸದರಿಯವಳನ್ನು ವಶಕ್ಕೆ ತೆಗೆದುಕೊಂಡು ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸೇಡಂ ಠಾಣೆ : ದಿನಾಂಕ:30-10-2015 ರಂದು ಸೇಡಂ ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ, ಶ್ರೀ, ಗೌರಿಶಂಕರ ಹೆಚ್.ಸಿ-91 ಸೇಡಂ ಪೊಲೀಸ್ ಠಾಣೆ ಮತ್ತು ಠಾಣೆಯ ಸಿಬ್ಬಂದಿಯವರಾದ, ಮರೆಗೆಪ್ಪ ಪಿಸಿ-791, ಪಿಸಿ-572 ಆನಂದ ಹಾಗು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ನಡೆದುಕೊಂಡು ಹೋಗಿ, ಇಂದಿರಾನಗರದ ಒಂದು ಮನೆಯ ಹತ್ತಿರ ಮನೆಯ ಗೋಡೆಗೆ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಜನರು ಒಬ್ಬೊಬ್ಬರಾಗಿ ಹೋಗಿ ಬರುತ್ತಿದ್ದನ್ನು ಹಾಗೂ ಒಬ್ಬ ವ್ಯಕ್ತಿ ಸೇಂದಿ ಮಾರಾಟ ಮಾಡುತ್ತಿರುವದನ್ನು ಖಚಿತಪಡಿಸಿಕೊಂಡು, ನಾನು ಸಿಬ್ಬಂದಿಯವರೊಂದಿಗೆ, ಪಂಚರ ಸಮಕ್ಷಮ ಏಕಕಾಲಕ್ಕೆ ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಲಾಗಿ, ಆಸೀಫ್ ತಂದೆ ಬಾಬುಮಿಯಾ ಗೌಂಡಿ, ಸಾ:ಇಂದಿರಾನಗರ, ಸೇಡಂ  ಅಂತ ತಿಳಿಸಿದರು ಅವನ ಹತ್ತಿರ ಇರುವ ಚೀಲದಲ್ಲಿ ಪರಿಶೀಲಿಸಲಾಗಿ 25 ಸೇಂದಿ ಪಾಕೀಟಗಳು ಅಂ.ಕಿ 250/- ರೂಪಾಯಿ, ನೇದ್ದ್ನನು ಜಫ್ತಿ ಮಾಡಿಕೊಂಡೇವು. ಸದರಿ ಸೇಂದಿ ಬಗ್ಗೆ ವಿಚಾರಿಸಲು ತಾನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಲಾಭಕ್ಕಾಗಿ ಕಲಬೆರಿಕೆ ಸೇಂದಿ ಮಾರಾಟ ಮಾಡುತ್ತೇವೆ ಅಂತ ತಿಳಿಸಿದ್ದು.  ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸೇಡಂ ಠಾಣೆ : ದಿನಾಂಕ:29-10-2015 ರಂದು ಬಸವನಗರದಲ್ಲಿ ಅಕ್ರಮವಾಗಿ ಸೇಂದಿ ತೈಯಾರು ಮಾಡಿ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ, ಶ್ರೀ, ಗೌರಿಶಂಕರ ಹೆಚ್.ಸಿ-91 ಸೇಡಂ ಪೊಲೀಸ್ ಠಾಣೆ ಮತ್ತು ಠಾಣೆಯ ಸಿಬ್ಬಂದಿಯವರಾದ, ಮರೆಗೆಪ್ಪ ಪಿಸಿ-791, ಶಿವಕುಮಾರ ಪಿಸಿ-861, ಭಿಮಣ್ಣ ಪಿಸಿ-808, ಆಸೀಫ್ ಮಿಯಾ ಪಿಸಿ-535  ಹಾಗು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ನಡೆದುಕೊಂಡು ಹೋಗಿ, ಬಸವನಗರ ತಾಂಡಾದಲ್ಲಿರುವ ರಮೇಶ ರಾಠೋಡ ಇವರ ಮನೆಯ ಗೋಡೆಗೆ  ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಜನರು ಒಬ್ಬೊಬ್ಬರಾಗಿ ಹೋಗಿ ಬರುತ್ತಿದ್ದು, ಹಾಗೂ ಒಬ್ಬ ಹೆಣ್ಣುಮಗಳು ಮತ್ತು ಇನ್ನೊಬ್ಬ ವ್ಯಕ್ತಿ ಸೇಂದಿ ಪಾಕೀಟಗಳನ್ನು 10 ರೂಪಾಯಿಗೆ ಒಂದರಂತೆ ಮಾರಾಟ ಮಾಡುತ್ತಿರುವದನ್ನು ಖಚಿತಪಡಿಸಿಕೊಂಡು ನಾನು ಸಿಬ್ಬಂದಿಯವರೊಂದಿಗೆ, ಪಂಚರ ಸಮಕ್ಷಮ ಏಕಕಾಲಕ್ಕೆ ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಲಾಗಿ 1] ಸುರೇಖ ಗಂಡ ರಮೇಶ ರಾಠೋಡ, 2] ರಮೇಶ ತಂದೆ ಗಣಪತಿ ರಾಠೋಡ ಇಬ್ಬರೂ ಸಾ:ಬಸವನಗರ ತಾಂಡಾ, ಸೇಡಂ. ಅಂತ ತಿಳಿಸಿದರು ಅವರ ಹತ್ತಿರ ಪರಿಶೀಲಿಸಲಾಗಿ 100 ಸೇಂದಿ ಪಾಕೀಟಗಳು ಅಂ.ಕಿ 1000/- ರೂಪಾಯಿ ಮತ್ತು ಒಂದು ಪ್ಲಾಸ್ಟಿಕ್ ಬುಟ್ಟಿ ಜಫ್ತಿ ಮಾಡಿಕೊಂಡು ಸದರಿ ಸೇಂದಿ ಬಗ್ಗೆ ವಿಚಾರಿಸಲು ನಾವು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಲಾಭಕ್ಕಾಗಿ ಕಲಬೆರಿಕೆ ಸೇಂದಿ ಮಾರಾಟ ಮಾಡುತ್ತೇವೆ ಅಂತ ತಿಳಿಸಿದ್ದು. ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

No comments: