POLICE BHAVAN KALABURAGI

POLICE BHAVAN KALABURAGI

01 October 2015

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಜಯಸುಧಾ  ಗಂಡ ವಿಜಯ ಪ್ರಸಾದ ಸಾ: ಎನ್.ಜಿ.ಓ ಕಾಲೋನಿ ಕಲಬುರಗಿ ರವರನ್ನು ದಿನಾಂಕ 24/05/2013ರಂದು  ಕುಟುಂಬದ ಸದಸ್ಯರ ಸಮಕ್ಷಮದಲ್ಲಿ ಧಾರವಾಡದ ವಿಜಯ ಪ್ರಸಾದ ಇವರೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು   ಮದುವೆಯಲ್ಲಿ 10,00,000 ನಗದು ಹಣ 25 ತೊಲೆ ಬಂಗಾರ ಮತ್ತು ಹೇಳಿದ ಕಡೆ ಏಂಗೆಜಮೆಂಟ ಮತ್ತು ಮದುವೆ ಮಾಡಿಕೊಡಬೇಕು ಅಂತಾ ಬೇಡಿಕೆ ಇಟ್ಟಿದ್ದು  ನಮ್ಮ ತಂದೆಯವರು  5 ಲಕ್ಷ ರೂಪಾಯಿ ಮತ್ತು 10 ತೊಲೆ ಬಂಗಾರ ಅವರ ಕುಟುಂಬದವರ ಒತ್ತಾಯದ ಮೇರೆಗೆ ಕೊಟ್ಟಿರುತ್ತಾರೆ. ಮದುವೆಯಾದ ನಂತರ ನನ್ನ ಗಂಡ ಅತ್ತೆ ಮಾವ ನಾದಿನಿ  ಇವರೆಲ್ಲರು ನನಗೆ 3 ಲಕ್ಷ ರೂಪಾಯಿ ಹಾಗೂ ಕಾರನ್ನು ನಿಮ್ಮ ತಂದೆಯಿಂದ  ತೆಗೆದುಕೊಂಡು ಬಾ ಅಂತಾ ಹೊಡೆಬಡೆ ಮಾಡುತ್ತಿದ್ದರು ಆಗ ನನ್ನ ಗಂಡ ನಾನು ನಿನ್ನ ಜೊತೆ ಸುಮನ್ನೆ ಮದುವೆಯಾದೆ ನನ್ನ ಜೊತೆಯಿದ್ದ ಅಶ್ವಿನಿ ಇವಳ ಜೊತೆ ನಾನು ಬಹಳ ದಿನದಿಂದ ಸಂಬಂಧ ಇಟ್ಟುಕೊಂಡಿದ್ದೆ ಅವಳಿಗೆ ಕೇಳಿದರೆ ಹಣ ಒಡವೆ ಕೊಡಿಸುತ್ತಿದ್ದಳು. ಆಗ ನಾನು ನಮ್ಮ ತಂದೆಯವರಿಗೆ ವಿಷಯವನ್ನು ತಿಳಿಸಿದಾಗ ಅವರು ನನ್ನ ಗಂಡನಿಗೆ ಬುದ್ದಿವಾದ ಹೇಳಿದಾಗ ಆಗ ನನ್ನ ಗಂಡ ಇದು ನನ್ನ ವೈಯಕ್ತಿಕ ಜೀವನ ನಿವೇನು ಹೇಳುವುದು ಬೇಡ ಅಂತಾ ಹೇಳಿ ನಮ್ಮ ತಂದೆ ತಾಯಿಯವರಿಗೆ ವಾಪಸ ಕಳುಹಿಸಿರುತ್ತಾರೆ ನಾನು ಗರ್ಭಿಣಿಯಾದ ನಂತರ ನನ್ನ ಗಂಡ ಹಾಗೂ ಅವರ ಕುಟುಂಬದ ಸದಸ್ಯರು ನನಗೆ ಚೆನ್ನಾಗಿ ನೋಡಿಕೊಳ್ಳದೆ  ಗರ್ಭಪಾತ ಮಾಡಿಸು ಅಂತಾ ಒತ್ತಡ ಹೇರಿದರು ಅದಕ್ಕೆ ನಾನು ಒಪ್ಪದಿದ್ದಾಗ ನನ್ನ ಗಂಡ ನನಗೆ ಕಾಲಿನಿಂದ ಹೊಟ್ಟೆಗೆ ಒದ್ದು  ನನ್ನ ಅತ್ತೆ ಮಾವ ನಾದಿನಿ  ಇವರೆಲ್ಲರು ಕೂಡಿ ನನಗೆ ದೈಹಿಕ ಹಿಂಸೆ ನೀಡಿರುತ್ತಾರೆ.  ನನ್ನ ಅತ್ತೆ ಮಾವ ನನ್ನ ಗಂಡನಿಗೆ ಬುದ್ದಿವಾದ ಹೇಳದೆ ಅವನು ಗಂಡಸು ಇದ್ದಾನೆ ಅವನ ಇಷ್ಟ ಬಂದ ಹಾಗೆ ಮಾಡುತ್ತಾನೆ ಅಂತಾ ನೀನು ಇದ್ದರೆ ಇರು ಇಲ್ಲದಿದ್ದರೆ ಮನೆ ಬಿಟ್ಟು ಹೊಗು ಅಂತಾ ಹೇಳಿದರು ಒಂದು ದಿನ ರಾತ್ರಿ ನನ್ನ ಗಂಡ ತನ್ನ ಪೋನನ್ನು ಮನೆಯಲ್ಲಿ ಬಿಟ್ಟು ಹೊಗಿದನು ಅದಕ್ಕೆ ಅಶ್ವಿನಿ ಇವಳಿಂದ ಪೋನ ಬಂದಿತ್ತು ನಾನು ಪೋನ ರಿಸಿವ ಮಾಡಿದಾಗ ಅಶ್ವಿನಿ ಇವಳು ಸುಮ್ಮನೆ ವಿಜಯಗೆ ಪೋನ ಕೊಡು ಅಂತಾ ಹೇಳಿದ್ದು ಆಗ ನಾನು ಅಶ್ವಿನಿ ಇವಳಿಗೆ ಸುಮ್ಮನೆ ನನ್ನ ಜೀವನ ಮತ್ತು ನನ್ನ ಗಂಡನ ಜೀವನ ಯಾಕೆ ಹಾಳು ಮಾಡುತ್ತಿ ದಯವಿಟ್ಟು ನಮ್ಮಿಂದ ದೂರ ಇರು ಅಂತ ಹೇಳಿದರು ಅದಕ್ಕೆ ಅವಳು  ಏ ಮುದೈವಿ ನಿನಗೆಂತ ಮೊದಲು ಅವನ ಸುಖ ನಾನು ಪಡೆದಿದ್ದಿನಿ ನೀನು ಈಗ ಬಂದಿದ್ದಿ ನೀ ಏನಾದರು ನನಗೆ ಮತ್ತು ವಿಜಯಗೆ ತೊಂದರೆ ಕೊಟ್ಟೆ ಅಂದರೆ ನಮ್ಮ ಅಪ್ಪನೆ ಡಿ.ಎಸ್.ಪಿ ಇದ್ದಾನೆ ನೀನು ಹೆಸರು ಕೇಳಿಲ್ವಾ ನಮ್ಮ ಪಾಡಿಗೆ ನಮಗೆ ಬಿಡು ಅಂತಾ ಹೇಳಿದಳು. ನಾನು ಗರ್ಭಿಣಿಯಾಗಿದ್ದಾಗ ಕುಬುಸ ಕಾರ್ಯಕ್ರಮದಲ್ಲಿ ನನ್ನ ತಂದೆ ನನ್ನ ಗಂಡನಿಗೆ ನಮ್ಮ ತಂದೆ 2 ತೊಲೆ ಬಂಗಾರ ಉಂಗುರ ಹಾಕಿದರು. ನನಗೆ ಒಂದು ಹೆಣ್ಣು ಮಗು ಹುಟ್ಟಿತ್ತು ಆಗ ನನ್ನ ಗಂಡ ಅತ್ತೆ ಮಾವ ನಾದಿನಿ ಎಲ್ಲರೂ ನೀನು ಗಂಡು ಮಗುವನ್ನು ಹೇರಲಿಲ್ಲ ಅಂತಾ ಮನೆಯಿಂದ ಹೊರಗೆ ಹಾಕಿದರು. ಆಗ ನನ್ನ ತಂದೆ ತಾಯಿ ಬಂದು ಬುದ್ದಿವಾದ ಹೇಳಿ ಅಲ್ಲಿಯೇ ಬಿಟ್ಟು ಬಂದರು. ಆಗ ಅವರು ಪ್ರತಿ ಕ್ಷಣ ಮಾನಸಿಕ ಮತ್ತು ದೈಹಿಕೆ ಹಿಂಸೆ ಕೊಟ್ಟು ಚಿತ್ರ ಹಿಂಸೆ ಕೈಯಿಂದ ಹೊಡೆಬಡೆ ಮಾಡುತ್ತಿದ್ದನು. ದಿನಾಂಕ 01-09-2015 ರಂದು 10-30 ನಿಮಿಷಕ್ಕೆ ಕೊರ್ಟ ಆವರಣದಲ್ಲಿ ನನ್ನ ಗಂಡ ಹಾಗೂ ಕುಟುಂಬದ ಎಲ್ಲಾ ಸದಸ್ಯರು  ನನ್ನನ್ನು ಅವಾಚ್ಯವಾಗಿ ಬೈದು ನನ್ನ ಗಂಡ ಹಾಗೂ ಗಂಡನ ತಮ್ಮ ಸಿಂಹಾದ್ರಿ ಹಾಗೂ ಸಣ್ಣ ನಾದಿನಿ ನೀನು ನಮ್ಮ ಮೇಲೆ ಎಷ್ಟು ಕೇಸು ಬೇಕಾದರೂ ಹಾಕಿಕೊಳ್ಳು ನಮಗೆ ಯಾವುದೇ ಭಯವಿಲ್ಲ ಅಂತಾ ಹೆದರಿಸಿದ್ದು ನನ್ನ ಗಂಡ ನಾನು ಅಶ್ವಿನಿ ಜೊತೆ ಸಂಬಂದ ಹಾಗೆ ಮುಂದುವರೆಸುತ್ತೇನೆ. ನೀನು ಏನು ಬೇಕಾದರು ಮಾಡಿಕೊಳ್ಳು ಅಂತಾ ನನ್ನನ್ನು ಅವಾಚ್ಯವಾಗಿ ಬೈದಿರುತ್ತಾನೆ. ನಂತರ 12-20 ಗಂಟೆ ಸುಮಾರಿಗೆ ಪುನ: ನನ್ನ ಗಂಡ ಹಾಗೂ ನನ್ನ ಮಾವ ಪೈಡಯ್ಯ ಅತ್ತೆ ರಗುಪತಮ್ಮ ನಾದಿನಿ ಶ್ರೀದೇವಿ ಹಾಗೂ ಗಂಡನ ಅಣ್ಣ ವೆಂಕಟೇಶ ತಮ್ಮ ಸಿಂಹಾದ್ರಿ ಇವರು ನಮ್ಮ ಮನೆಗೆ ಬಂದು ರಂಡಿ ಬೋಸಡಿ ನಿನಗೆ ನಾವು ಇಟ್ಟುಕೊಳ್ಳುವದಿಲ್ಲ ನೀನು ನಮ್ಮ ಮೇಲೆ ಕೇಸು ಮಾಡಿದ್ದಿ ಅದು ವಾಪಾಸ್ಸು ತೆಗೆದುಕೊಂಡರೆ ಸರಿ ಇಲ್ಲದಿದ್ದರೆ ನಿನ್ನನ್ನು ಮತ್ತು ನಿನ್ನ ತಂದೆಯನ್ನು ಸಾಯಿಸುತ್ತೇವೆ. ಅಂತಾ ಬೈದು ಮತ್ತು ನಿಮ್ಮ ಎಲ್ಲಾ ಕುಟುಂಬದ ಸದಸ್ಯರ ಮೇಲೆ ನಾವು ಪ್ರಕರಣ ದಾಖಲಿಸಿ ನಿಮಗೆ ಸತಾಯಿಸುತ್ತೇವೆ ಅಂತಾ ಅಂದು ಅವರಲ್ಲಿ ನನ್ನ ಗಂಡನ ತಂದೆಯಾದ ಪೈಡಯ್ಯ ಅತ್ತೆ ರಗುಪತಮ್ಮ ನಾದಿನಿ ಶ್ರೀದೇವಿ ಹಾಗೂ ನನ್ನ ಗಂಡನ ಅಣ್ಣ ವೆಂಕಟೇಶ ತಮ್ಮ ಸಿಂಹಾದ್ರಿ ನನ್ನ ತಲೆಯ ಕೂದಲು ಎಳದಾಡಿ ಹೊಡೆದಿದ್ದು ಮತ್ತು ನನ್ನ ಕತ್ತನ್ನು ಒತ್ತಿ ಸಾಯಿಸಲು ಪ್ರಯತ್ನಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 27-09-2015  ರಂದು  ರಾತ್ರಿ ನನ್ನ  ಮಗನಾದ ರೇವಣಸಿದ್ದಪ್ಪ ಇತನು ತನ್ನ  ಮೋಟಾರ ಸೈಕಲ ನಂ ಕೆಎ-32-ವಾಯ್-714 ನೇದ್ದನ್ನು ಆರ.ಟಿ.ಓ ಕ್ರಾಸ ಕಡೆಯಿಂದ ಮನೆಗೆ ಹೋಗುವ ಕುರಿತು  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಎಮ.ಆರ.ಎಮ್.ಸಿ ಕಾಲೇಜ  ಎದುರು ರೋಡ ಮೇಲೆ ರೋಡ ಎಡ ಬಲ ಕಟ  ಹೋಡೆದು ಒಮ್ಮಲೇ ಬ್ರೇಕ ಹಾಕಿ ಮೋಟಾರ ಸೈಕಲ ಸ್ಕಿಡ್ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಬಿದ್ದು ತೆಲೆಗೆ ಭಾರಿ ಗುಪ್ತಗಾಯ ಬಲ ಮೆಲಿಕಿನ ಹತ್ತೀರ ಹಾಗೂ ಬಲಗಾಲು ಪಾದದ ಮೇಲ್ಬಾದಲ್ಲಿ ಗಾಯ ಹೊಂದಿ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆಗೆ ಸೇರಿಕೆಯಾಗಿ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದನ ವ್ಹಿ - ಕೇರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೊರಿಸಲು ವೈದ್ಯರು ಪರೀಕ್ಷಿಸಿ  ಬೆಳಗ್ಗೆ 5-00 ಗಂಟೆಗೆ  ಮೃತಪಟ್ಟಿರುತ್ತಾನೆ, ಅಂತಾ ತಿಳಿಸಿದ್ದು ನನ್ನ ಮಗ ಗಾಯದ ಉಪಚಾರ ಫಲಕಾರಿಯಾಗದೆ ಹೈದ್ರಾಬಾದ ವ್ಹಿ - ಕೇರ ಆಸ್ಪತ್ರೆಯಲ್ಲಿ  ದಿನಾಂಕ 30-09-215 ರಂದು  ಬೆಳಿಗ್ಗೆ 5-00 ಗಂಟೆಗೆ  ಮೃತಪಟ್ಟಿರುತ್ತಾನೆ ಅಂತಾ ಶ್ರೀ ಪರಮೇಶ್ವರ ತಂದೆ ದೇವರಾಯ  ಹೊಸಮನಿ ಸಾ: ಖಜೂರಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

30 September 2015

KALABURAGI DISTRICT REPORTED CRIMES.

ರೇವೂರ ಪೊಲೀಸ ಠಾಣೆ : ದಿನಾಂಕ:29-09-2015 ರಂದು ಹೆಚ್.ಸಿ-406 ರವರು ಸರ್ಕಾರಿ ಆಸ್ಪತ್ರೇ ಕಲಬುರ್ಗಿಯಲ್ಲಿ ಉಪಚಾರ ಕುರಿತು ಸೇರಿಕೆಯಾದ ಪ್ರೇಮನಾಥ ತಂದೆ ಕಲ್ಯಾಣಿ ದೊಡ್ಡಮನಿ ಸಾ:ಭೋಗನಳ್ಳಿ ಗ್ರಾಮ ಈತನ ಹೇಳಿಕೆ ಪಡೆದುಕೊಂಡು 2 ಪಿ.ಎಮ್.ಕ್ಕೆ ಠಾಣೆಗೆ ಬಂದು ಹೇಳಿಕೆ ಸಾರಾಂಶ ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ನಿನ್ನೆ ದಿನಾಂಕ:28-09-2015 ರಂದು 7 ಪಿ,ಎಮ್.ಕ್ಕೆ ನನ್ನತಮ್ಮ ರಾಜಶೇಖರನು ಭೋಗಲಿಂಗೇಶ್ವರ ದೇವಾಲಯಕ್ಕೆ ಹೋಗಿ ತೆಂಗಿನಕಾಯಿ ವಡೆದುಕೊಂಡು ಬಂದನಂತರ 8-00 ಪಿ,ಎಮ್.ಕ್ಕೆ ಸುಮಾರಿಗೆ ಬಸ್ ನಿಲ್ದಾಣದ ಹತ್ತೀರ ಇದ್ದಂತಹ ಕಟ್ಟಿಗೆ ಸಾಮಾನುಗಳನ್ನು ತರಲು ನಾನು ನನ್ನ ತಂದೆಯವರಾದ ಕಲ್ಯಾಣಿ ನ್ನ ತಮ್ಮನಾದ ರಾಜಶೇಖರ ಹಾಗೂ ನಮ್ಮ ಸಮಾಜದವರಾದ  ಶ್ರೀ ಭೋಗಪ್ಪ ತಂದೆ ಬುದ್ದಪ್ಪ ಮೇಲ್ಮನಿ ಶಂಕರ ತಂದೆ ವಿಠ್ಠಲ ಗೌಡಗಾಂವ ಚಂದಪ್ಪ ತಂದೆ ಬಸಣ್ಣ ದೊಡಮನಿ ಎಲ್ಲರೂ ಸರಕಾರಿ ಶಾಲೆಯ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಭೋಗಲಿಂಗೆಶ್ವರ ದೇವಾಲಯದ ಪೂಜಾರಿಗಳಾದ 1) ಬಸವರಾಜ ತಂದೆ ದತ್ತು ಸುತಾರ 2) ದತ್ತು ತಂದೆ ಹಣಮಂತ ಸುತಾರ 3) ನಂದು ತಂದೆ ದತ್ತು ಸುತಾರ 4) ಮಲ್ಲು ತಂದೆ ದತ್ತು ಸುತಾರ 5) ಈರಣ್ಣಾ ತಂದೆ ದತ್ತು ಸುತಾರ 6) ದೇವಿಂದ್ರ ತಂದೆ ಹಣಮಂತ ಸುತಾರ 7) ಲಕ್ಷ್ಮಿಕಾಂತ ತಂದೆ ಭೀಮಾ ಸುತಾರ 8) ಸುರೇಶ ತಂದೆ ಸಿದ್ದಣ್ಣಾ ಸುತಾರ ಹಾಗೂ ನಮ್ಮ ಸಮಾಜದ ಮೇಲೆ ಹಿಂದಿನಿಂದ ದ್ವೆಷ ಸಾದಿಸುತ್ತಾ ಬಂದಂತ 9) ಭಾಷಾ ಪಟೇಲ ತಂದೆ ಹಸನ ಪಟೇಲ 10) ನಜೀರ ಪಟೇಲ ತಂದೆ ಹಸನ ಪಟೇಲ 11) ಮುಕ್ತಾರ ಪಟೇಲ ತಂದೆ ಅನ್ವರ ಪಟೇಲ 12) ಅಲ್ಲಾವುದ್ದಿನ್ ತಂದೆ ಮಶಾಕ ಪಟೇಲ ಎಲ್ಲರೂ ಗುಂಪು ಕಟ್ಟಿಕೊಂಡು ಬಂದು ಏ ರಂಡಿ ಮಕಳ್ಯಾ ಹೋಲ್ಯಾರೇ ದೇವರಗುಡಿ ಒಳಗಡೆ ಬಂದು ತೆಂಗಿನಕಾಯಿ ಒಡಿಯುತ್ತಿರಾ ಅಂತಾ ಬಸವರಾಜನು ಬೈಯುತ್ತಾ ಎಲ್ಲರೂ ನಮಗೆ ತಡೆದು ನಿಲ್ಲಿಸಿ ಮತ್ತೆ ಬಸವರಾಜನು ನನ್ನ ತಮ್ಮ ರಾಜಶೇಖರ ಎದೆಯ ಮೇಲಿನ ಅಂಗಿಯನ್ನು ಹಿಡಿದು ಕೈಯಿಂದ ಕಪಾಳ ಮೇಲೆ ಹೊಡೆದು ನೇಲಕ್ಕೆ ಕಾಕಿದಾಗ ದತ್ತು,ಮಲ್ಲು,ನಂದು,ಎಲ್ಲರೂ ಕಾಲಿನಿಂದ ಒದ್ದಿರುತ್ತಾರೆ.ನನಗೆ ಈರಣ್ಣನು ನನಗೆ ಕೈಯಿಂದ ಕಾಪಾಳ ಮೇಲೆ ಹೊಡೆದಾಗ ಲಕ್ಷ್ಮಿಕಾಂತನು ಅಲ್ಲೆ ಬಿದ್ದ ಬಡಿಗೆಯಿಂದ ನನ್ನ ತೆಲೆಯ ಹಿಂಭಾಗಕ್ಕೆ ಹೊಡೆದು ದೇವಿಂದ್ರನು ಅಲ್ಲೆಬಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ಮುಗಿನ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ.ಸುರೇಶನು ಭೋಗಪ್ಪನಿಗೆ ಕೈಯಿಂದ ಕಪಾಳ ಮೇಲೆ ಹೊಡೆದಿರುತ್ತಾನೆ.ಆಗ ಭಾಷಾ ಪಟೇಲ & ನಜೀರ ಪಟೇಲ ರವರು ರಂಡಿ ಮಕ್ಕಳ್ಯಾ ಹೊಲೇರ್ಯಾ ಊರಲ್ಲಿ ನಿಮ್ಮದೆ ಧಿಮಾಕ್ಕ ಮಾಡತಿರ್ಯಾ ಅಂತಾ ನನ್ನ ತಂದೆಯವರಿಗೆ ಬೈದ್ದು ಶಂಕರನಿಗೆ ಬೆನ್ನ ಮೇಲೆ ಭಾಷಾ ಪಟೇಲನು & ಭೋಗಪ್ಪನಿಗೆ ನಜೀರ ಪಟೇಲನು ಕಪಾಳ ಮೇಲೆ  ಕೈಯಿಂದ ಹೊಡೆದರು ಚಂದಪ್ಪನಿಗೆ ನೆಲಕ್ಕೆ ಹಾಕಿ ಮುಕ್ತಾರ ಪಟೇಲ & ಅಲ್ಲವುದ್ದಿನ್ ಇಬ್ಬರು ಕಾಲಿನಿಂದ ಒದ್ದಿರುತ್ತಾರೆ ಆಗ ನಮ್ಮ ಗ್ರಾಮದವರಾದ ಸರದಾರ ಪಟೇಲ,ಲಾಲ ಅಹ್ಮದ ಪಟೇಲ, ಗುಂಡಪ್ಪ ಜಮಾದಾರ,ಮಕ್ಬುಲ ಪಟೇಲ ತಂದೆ ಇಬ್ರಾಹಿಂ ಪಟೇಲ ಹಾಗೂ ಸಿದ್ದಮ್ಮಾ ಗಂಡ ಉದ್ದಂಡಪ್ಪ ಎಲ್ಲರೂ ಬಂದು ಜಗಳ ಬಿಡಿಸಿದರು.ಆಗ ಮತ್ತೆ ಬಸವರಾಜನು ನಮಗೆ ಇವತ್ತು ಇವರು ಬಂದು ಬಿಡಿಸದಿದ್ದರೆ ನಿಮಗೆ ಜೀವ ಸಹಿತ ಬಿಡುತ್ತಿರಲಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿ ಹೊದರು ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆ ಸರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.
ಗ್ರಾಮೀಣ  ಪೊಲೀಸ ಠಾಣೆ : ದಿನಾಂಕ: 29/09/2015 ರಂದು 09-30 ಎಎಮ್ ಕ್ಕೆ ಫಿರ್ಯಾದಿದಾರರು  ಠಾಣೆಗೆ ಹಾಜರಾಗಿ ನೀಡಿದ ಒಂದು ಲಿಖಿತ ಫಿರ್ಯಾದಿ ಸಾರಾಂಶವೆನೆಂದರೆ, ತಾನು ತಮ್ಮ ದಾಲಮಿಲನಿಂದ ದಿನಾಂಕ: 27/09/2015 ರಂದು 7-00 ಪಿಎಮ್ ಕ್ಕೆ ಎ.ಪಿ.ಎಮ್.ಸಿ ಮಾರ್ಕೇಟ ವಾಸಿ ಮುಂಬೈಗೆ ಆರ್ಡರ್ ಇದ್ದುದ್ದರಿಂದ ಕೆಎ-32 ಬಿ-2343ನಂಬರಿನ ನ್ಯಾಶನಲ್ ಕಲರ್ 10ಟಯರನ ಲಾರಿಯಲ್ಲಿ ನಮ್ಮ ದಾಲಮಿಲ್ ಬಿಲ್ ನಂ 211. 212, 213, 214  ನಂಬರನ 30ಕೆಜಿ ತೂಕದ 534 ಬ್ಯಾಗ ತೋಗರಿ ಬೆಳೆಯನ್ನು 77 ಬ್ರ್ಯಾಂಡನ ಗುರುತುಳ್ಳ ಚೀಲದಲ್ಲಿ ತುಂಬಿ ಕಳುಹಿಸಿರುತ್ತೇನೆ. ಸದರಿ ಲಾರಿ ಚಾಲಕ ಮೆಹಬೂಬ ಎಂಬಾತನು ದಿನಾಂಕ: 28/09/2015 ರಂದು 12-00 ಪಿಎಮ್ ಗಂಟೆ ಸುಮಾರಿಗೆ ಪೋನ ಮಾಡಿ ತೊಗರಿ ಬೆಳೆ ತುಂಬಿದ ನನ್ನ ಲಾರಿಯನ್ನು ರಾತ್ರಿ ಮಿಜಬಾನಗರದ ಸಾಧಿಕ್ ಎಲೆಕ್ಟ್ರೀಕಲ್ ಶಾಪ ಎದರುಗಡೆ ರೋಡಿನ ಎಡಬದಿಯಲ್ಲಿ ನಿಲ್ಲಿಸಿ ದಿನಾಂಕ: 28/09/2015 ರಂದು 4-00 ಎಎಮ್ ವರೆಗೆ ಲಾರಿಯಲ್ಲಿಯೇ ಮಲಗಿಕೊಂಡಿದ್ದು 4-00 ಎಎಮ್ ಕ್ಕೆ ಎದ್ದು ಲಾರಿ ಲಾಕ ಮಾಡಿಕೊಂಡು ಮನೆಗೆ ಹೋಗಿ 9-00 ಎಎಮ್ ಸುಮಾರಿಗೆ ಬಂದು ನೋಡಲು ನಾನು ನಿಲ್ಲಿಸಿದ್ದ ನನ್ನ ಕೆಎ-32 ಬಿ-2343 ನಂಬರಿನ ತೊಗರಿ ಬೆಳೆ ತುಂಬಿದ ಲಾರಿ ಕಾಣಿಸುತ್ತಿಲ್ಲ ಅಂತ ಪೋನ ಮಾಡಿ ತಿಳಿಸಿದ್ದು ತಕ್ಷಣ ನಾನು ಮತ್ತು ನನ್ನ ಸ್ನೇಹಿತ ಪಂಪಣ್ಣಗೌಡ ಇಟಗಿ ಇವರು ಸ್ಥಳಕ್ಕೆ ಹೋಗಿ ನೋಡಲು ಲಾರಿ ಚಾಲಕ ಮೆಹಬೂಬ ಹೇಳಿದ ವಿಷಯ ನಿಜವಿದ್ದು ಸ್ಥಳದಲ್ಲಿ ಲಾರಿ ಇರಲಿಲ್ಲ. ಎಲ್ಲಾಕಡೆ ಹುಡುಕಾಡಿದರೂ 77 ಬ್ರ್ಯಾಂಡನ 30 ಕೆಜಿ ತೂಕದ 534 ಬ್ಯಾಗ ತೋಗರಿ ಬೆಳೆ (ಒಟ್ಟು= 160 ಕ್ವಿಂಟಲ್ 20ಕೆಜಿ)  ತುಂಬಿದ್ದ ಅ.ಕಿ= 1747500/-ರೂ ಹಾಗೂ ಕೆಎ-32 ಬಿ-2343 ನಂಬರಿನ ನ್ಯಾಶನಲ್ ಕಲರ್ 10 ವ್ಹೀಲ್ ಚೆಸ್ಸಿ ನಂ MBICMDWZAA753 ಇಂಜಿನ ನಂ SAH631872 ಇರುವ ಅ.ಕಿ= 1000000/-ರೂ ಹೀಗೆ ಒಟ್ಟು 2747500/-ರೂ ಕಿಮ್ಮತ್ತಿನ ತೊಗರಿ ಬೆಳೆ ತುಂಬಿದ ಲಾರಿಯನ್ನು ದಿನಾಂಕ: 28/09/2015 ರಂದು 4-00 ಎಎಮ್ ದಿಂದ 9-00 ಎಎಮ್ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನವಾದ ತೊಗರಿ 30ಕೆಜಿ ತೂಕದ 534 ಬ್ಯಾಗ ತೊಗರಿ ಬೆಳೆ ತುಂಬಿದ ಲಾರಿಯನ್ನು ಪತ್ತೆ ಹಚ್ಚಿ ನಮ್ಮ ತೊಗರಿ ಬೆಳೆ ಮತ್ತು ಲಾರಿಯನ್ನು ನಮಗೆ ವಾಪಸ ಕೊಡಿಸಬೇಕು ಮತ್ತು ಕಳ್ಳತನ ಮಾಡಿದ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಂತ ವಗೈರೆ ನೀಡಿದ ಫಿರ್ಯಾದಿ ಹೇಳಿಕೆ ಮೇಲಿಂದ ಪ್ರಕರಣ ಧಾಖಲಾಗಿರುತ್ತದೆ.

28 September 2015

KALABURAGI DISTRICT REPORTED CRIMES.

ಮಹಿಳಾ ಪೊಲೀಸ ಠಾಣೆ : ದಿನಾಂಕ 27.09.2015 ರಂದು 7 ಪಿ.ಎಂಕ್ಕೆ ಪಿರ್ಯಾದಿದಾರರಾದ ಶ್ರೀಕಾಂತ ತಂದೆ ನಾರಾಯಣರಾವ ಮೆಂಗಜಿ ಅಧೀಕ್ಷಕರು ಸಾ: ಬಾಲಕಿಯರ ಬಾಲ ಮಂದಿರ ಆಳಂದ ರಸ್ತೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ ತಮ್ಮ ಸಂಸ್ಥೆಯ ನಿವಾಸಿಯಾದ ಅರ್ಚನಾ ತಂದೆ ಕಮಲಾಕರ ವಯಸ್ಸು 17 ವರ್ಷ ಇವಳು ಸರಕಾರಿ ಫ್ರೌಡ ಶಾಲೆ ವಿಜಯನಗರ ಕಾಲೋನಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ದಿನಾಂಕ 26.09.2015 ರಂದು 8 ಗಂಟೆಯ ಸುಮಾರಿಗೆ ಅರ್ಚನಾ ಹಾಗೂ ಇನ್ನುಳಿದ 12 ಜನ ಅದೇ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಅವರೆಲ್ಲರನ್ನು ನಮ್ಮ ಸಂಸ್ಥೆಯ ರಕ್ಷಕಿಯಾದ  ಕವಿತಾ ಇವರು ಎಲ್ಲಾ ಮಕ್ಕಳಿಗೆ ಶಾಲೆಗೆ ಬಿಟ್ಟು ಬಂದಿರುತ್ತಾರೆ. ಶಾಲೆಗೆ ಹೋದ 12 ಜನ ಮಕ್ಕಳು ಮರಳಿ 9 ಗಂಟೆಯ ಸುಮಾರಿಗೆ ಶಾಲೆ ಇರುವದಿಲ್ಲ ಅಂತಾ ಸಂಸ್ಥೆಗೆ ಬಂದಿರುತ್ತಾರೆ. ಅರ್ಚನಾ ಇವಳು ಸಂಸ್ಥೆಗೆ ಬರದೇ ಇರುವದರಿಂದ ಕೂಡಲೇ ಶಾಲೆಗೆ ಹೋಗಿ ಹುಡುಕಾಡಲಾಗಿ ಅರ್ಚನಾ ಇವಳು ಸಿಕ್ಕಿರುವದಿಲ್ಲ ಅಲ್ಲಿಂದ ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿರುವದಿಲ್ಲ ಕಾರಣ ಕಾಣೆಯಾದ ಅರ್ಚನಾ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಕೊಟ್ಟ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಾಗಿರುತ್ತದೆ.
ಜೇವರ್ಗಿ ಪೊಲೀಸ ಠಾಣೆ : ದಿನಾಂಕ 27/09/2015 ರಂದು ಸಾಯಂಕಾಲ 4-30 ಗಂಟೆಗೆ ಫಿರ್ಯಾದಿ ಶ್ರೀ ಸಿದ್ದಪ್ಪ ತಂದೆ ಶ ರಣಪ್ಪ  ಮದ್ದರಕಿ ಸಾ: ಜೇವರ್ಗಿ ಇವರು ಠಾಣೆಗೆ ಹಾಜರಾಗಿ ಒಂದು ದೂರು ಅರ್ಜಿ ಹಾಜರ ಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 27-08-2015 ರಂದು ಮದ್ಯಾಹ್ನ 1.30  ಗಂಟೆಯಿಂದ 2.00 ಗಂಟೆಯ ಮದ್ಯದ ಅವದಿಯಲ್ಲಿ  ಯಾರೋ ಕಳ್ಳರು ಜೇವರ್ಗಿ ಪಟ್ಟಣದ ಜೇವರಗಿ ಪಟ್ಟಣದ ಎನ್.ಇ.ಎಸ್.  ಕಂಪ್ಯೂಟರ್ ಕೇಂದ್ರ ಎದುರುಗಡೆ ಸ್ಥಳದಲ್ಲಿ ನಿಲ್ಲಿಸಿದ ಪೀರ್ಯಾದಿಯ ಮೊಟಾರ್ ಸೈಕಲ್ ನಂ ಕೆ.ಎ.32-ಇ.ಹೆಚ್.-8013 ಅ.ಕಿ.24,000=00  ನೇದ್ದು  ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಕಾರಣ ಕಳುವು ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸ ಬೇಕು ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಾಗಿರುತ್ತದೆ.
ಗ್ರಾಮೀಣ ಪೊಲೀಸ ಠಾಣೆ : ದಿನಾಂಕ 26-09-15 ರಂದು ಸಂಜೆ 7-15 ಗಂಟೆ ಸುಮಾರಿಗೆ  ಸದರ ಅಪರಿಚಿತ ವ್ಯಕ್ತಿ ಅಂದಾಜ 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿ ಪಟ್ಟಣ ಕ್ರಾಸ ಮತ್ತು ಸಾವಳಗಿ ಪಾಟಿ ಮಧ್ಯದಲ್ಲಿ ಬರುವ  ಕಲಬುರಗಿ 13 ಕಿ.ಮೀ. ಮೈಲಗಲ್ಲು ಎಡ ರೋಡ ಬದಿಯಿಂದ ಒಬ್ಬ ವ್ಯಕ್ತಿ ನಡೆದುಕೊಂಡು ಹೊರಟಿದ ವ್ಯಕ್ತಿಗೆ  ಆಳಂದ ರೋಡ ಕಡೆಯಿಂದ ಒಂದು ಬಿಳಿ ಬಣ್ಣದ ಲಾರಿ ಎಂಹೆಚ 12 ಎಫಝಡ 9305 ಲಾರಿ ಚಾಲಕ ತನ್ನ ವಶದಲ್ಲಿದ್ದ ಲಾರಿಯನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಡಿಕ್ಕಿ ಹೊಡೆದು ಅಪಘಾತ ಪಡಿಸಿ,  ಸ್ವಲ್ಪ ಮುಂದೆ ಹೋಗಿ ಲಾರಿ ನಿಲ್ಲಿಸಿ ಓಡಿ ಹೋದನು. ಸದರ ವ್ಯಕ್ತಿಗೆ ನೋಡಲಾಗಿ ಅವನ ಎಡಗೈ ರಟ್ಟೆಯ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ. ಬಲಗಾಲ ಮೊಳಕಾಲ ಮೇಲೆ, ಮತ್ತು ಕೆಳೆಗೆ  ಹಾಗೂ ಬಲ ಹುಬ್ಬಿನ ಮೇಲೆ  ಬಲ ತಲೆಯ ಮೇಲೆ ಅಲ್ಲಿಲ್ಲಿ ತರಚಿದ ರಕ್ತಗಾಯಗಳಾಗಿದ್ದು, ಎಡ ಕಿವಿಯಿಂದ ರಕ್ತ ಸೋರಿದ್ದು ಇರುತ್ತದೆ .ಎಡಗಾಲ ಹೆಬ್ಬಟ್ಟಿಗೆ ರಕ್ತಗಾಯವಾಗಿದ್ದು ಇರುತ್ತದೆ. ದಾರಿಗೆ ಹೋಗು-ಬರುವ ಜನರು ಅವನ ಷರ್ಟು ಪ್ಯಾಂಟ ಕಿಸೆ ಚೆಕ್ಕ ಮಾಡಲಾಗಿ ಅವನ ಹತ್ತಿರ ಯಾವುದೇ ಡೈರಿ ಮತ್ತು ಮೋಬಾಯಿಲ್ ಸಿಗಲಿಲ್ಲಾ. ಇದರಿಂದಾಗಿ ಸದರ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಸದರ ಅಪರಿಚಿತ ವ್ಯಕ್ತಿ ಅಂದಾಜ 35 ರಿಂದ 40 ವರ್ಷ ವಯಸ್ಸಿವನಿದ್ದು, ಉದ್ದ ಮುಖ, ಉದ್ದ ಮೂಗು, ಬಡಕಲು ಮೈಕಟ್ಟು, ಸಾದಾಕಪ್ಪು ಮೈಬಣ್ಣವುಳ್ಳವನು ಇರುತ್ತಾನೆ. ಅವನು ನೀಲಿ ಮತ್ತು ಹಳದಿ ಬಣ್ಣದ ಚೌಕಡಿ ಷರ್ಟು,  ಕಪ್ಪು ಬಣ್ಣದ ಪ್ಯಾಂಟು, ನೀಲಿ ಬಣ್ಣದ ಝಾಂಗ ಧರಿಸಿರುತ್ತಾನೆ. ಅಂದಾಜ 5 ಅಡಿ 3 ಎತ್ತರ ಇರುತ್ತಾನೆ. ಸದರ ಅಪರಿಚಿತ ವ್ಯಕ್ತಿಯು ತನಗೆ ಆದ ರಸ್ತೆ ಅಪಘಾತ ಗಾಯಗಳಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ  ನಿನ್ನೆ ದಿನಾಂಕ 26-09-15 ರಂದು ರಾತ್ರಿ 10-30 ಗಂಟೆಗೆ ಸರಕಾರಿ  ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಇಂದು ದಿನಾಂಕ 27-09-15 ರಂದು ಬೆಳಿಗ್ಗೆ ಗೊತ್ತಾಗಿ ಪೊಲೀಸ ಠಾಣೆಗೆ ಬಂದಿರುತ್ತೇನೆ. ಕಾರಣ ಅಪರಿಚಿತ ವ್ಯಕ್ತಿಗೆ ಅಪಘಾತಪಡಿಸಿ ಮರಣವನ್ನುಂಟು ಮಾಡಿದ ಹಟಕೇಶ್ವರ ಲಾರಿ ಎಂಹೆಚ 12 ಎಫಝಡ 9305 ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 378/2015 ಕಲಂ 279,304 (ಎ) ಐಪಿಸಿ ಸಂಗಡ 187 ಐ.ಎಂ.ವಿ.ಎಕ್ಟ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.