POLICE BHAVAN KALABURAGI

POLICE BHAVAN KALABURAGI

18 June 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಚೌಕ ಠಾಣೆ : ದಿನಾಂಕ: 17.06.2015 ರಂದು ಠಾಣಾ ಸರಹದ್ದಿನಲ್ಲಿ ಬರುವ ಮುಸ್ಲಿಂ ಚೌಕ ಮೋಮಿನಪುರ ಜಬ್ಬಾರ ಹೊಟೇಲ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಶ್ರೀ ಹಸೇನ ಬಾಷಾ ಪಿ.ಎಸ್.ಐ (ಕಾ.ಸು)  ಚೌಕ ಪೊಲೀಸ್ ಠಾಣೆ ಕಲಬುರಗಿ ರವರು ತಮ್ಮ ಮೇಲಾಧಿಕಾರಿಗಳಾದ ಡಿ.ಎಸ್.ಪಿ (ಬಿ) ಉಪ ವಿಭಾಗ ಇವರಿಗೆ ಮಾಹಿತಿ ತಿಳಿಸಿದ ಅವರ ಮಾರ್ಗದರ್ಶನದಂತೆ ನಮ್ಮ ಠಾಣೆಯ ಪಿ.ಐ ಸಾಹೇಬರಾದ ಉಮಾಶಂಕರ ಬಿ. ಅವರ ನೇತೃತ್ವದಲ್ಲಿ ಸಿಬ್ಬಂದಿ ಹಾಗು ಪಂಚರೊಂದಿಗೆ ಮುಸ್ಲಿಂ ಚೌಕ ಮೋಮಿನಪುರ ಜಬ್ಬಾರ ಹೊಟೇಲ ಹತ್ತಿರ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸೈಯದ ಉಸ್ಮಾನ ತಂದೆ ಬಾಬುಮಿಯಾ ಸಾ: ದಾವೂದ ಬೇಕರಿ ಹತ್ತಿರ ಯದುಲ್ಲಾ ಕಾಲೋನಿ ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ನಗದು ಹಣ 1170/-ರೂಪಾಯಿ, ಒಂದು ಮಟಕಾ ಚೀಟಿ , ಒಂದು ಬಾಲಪೆನ್  ವಶಪಡಿಸಿಕೊಂಡು ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹಿಬೂಬಶೇಖ ತಂದೆ ಮೀರಾಸಾಬಶೇಖ ಸಾ: ದೇವಿನಗರ ಆಳಂದ ರಸ್ತೆ ಕಲಬುರಗಿ ಇವರು ತಮ್ಮ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇದ್ದ ಪ್ರಯುಕ್ತ ನನಗೆ ನಮ್ಮ ನೆಂಟರು ಬೀಗರಿಗೆ ಕಾರ್ಯಕ್ರಮದ ಬಗ್ಗೆ ಹೇಳಲು ಹೋಗಲು ನನಗೆ ವಾಹನದ ಅವಶ್ಯಕತೆ ಇರುವದರಿಂದ ನನ್ನ ಗೆಳೆಯನಾದ ಯಾದಗಿರ ಜಿಲ್ಲೆಯ ಶಹಾಪುರ ತಾಲ್ಲೂಕಿನವನಾದ ಶ್ರೀ ಅಯ್ಯಣಗೌಡ ತಂದೆ ಬಸಣ್ಣಗೌಡ ಕುಡಮನಳ್ಳಿ ಇತನ MAHINDRA& MAHINDRA BOLERO SLX JEEP KA-33 M-2027 ವಾಹನ ಇರುವದರಿಂದ ನಾನು ದಿನಾಂಕ:22/01/2015 ರಂದು ಆತನ ಹತ್ತಿರ ಹೋಗಿ ನನ್ನ ಗೆಳೆಯ ಅಯ್ಯಣಗೌಡ ಇವರಿಗೆ ನಮ್ಮ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇದೆ ನನಗೆ ಅಲ್ಲಲ್ಲಿ ಹೋಗಿ ಬರಲು 3-4 ದಿವಸ ವಾಹನ ಕೊಡಿ ಅಂತಾ ಕೇಳಿದಾಗ ಆಯಿತು ಅಂತಾ ಹೇಳಿ ನನಗೆ ಅವನು ಆತನ MAHINDRA&MAHINDRA BOLERO SLX JEEP KA-33,M-2027 ಜೀಪ ಕೀಲಿ ಕೈ ಕೊಟ್ಟಿದ್ದರಿಂದ ನಾನು ಸಾಯಂಕಾಲ 6.00 ಗಂಟೆ ಸುಮಾರಿಗೆ ಅಲ್ಲಿಂದ ವಾಹನ ತೆಗೆದುಕೊಂಡು ಬಂದು ರಾತ್ರಿ 11.00 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದೆ ನಿಲ್ಲಿಸಿ ವಾಹನಕ್ಕೆ ಲಾಕ ಮಾಡಿ ನಾನು ಮನೆಯಲ್ಲಿ ಊಟಮಾಡಿ ಮಲಗಿಕೊಂಡಿದ್ದು ಬೆಳಗ್ಗೆ ದಿನಾಂಕ:23/01/2015 ರಂದು 6.30 ಗಂಟೆಗೆ ಮನೆಯಿಂದ ಹೊರಗೆ ಬಂದಿದ್ದು ನಮ್ಮ ಮನೆಯ ಮುಂದೆ ವಾಹನ ಇರಲಿಲ್ಲ ನಾನು ಗಾಬರಿಯಾಗಿ ಈ ವಿಷಯ ವಾಹನದ ಮಾಲಿಕ ಅಯ್ಯಣ್ಣಗೌಡ ಇವರಿಗೆ ತಿಳಿಸಿದ್ದು ಅವರು ಹೀಗಾದರೆ ನೀನು ಪೊಲೀಸ ಠಾಣೆಗೆ ಹೋಗಿ ಮಾಹಿತಿ ನೀಡು ಅಂತಾ ಹೇಳಿದಾಗ ನಾನು ಪೊಲೀಸ ಠಾಣೆಗೆ ಬಂದು ಮಾಹಿತಿ ನೀಡಿ ವಾಹನದ ಬಗ್ಗೆ ನಾನು ಹುಡುಕಾಡಿ ಮತ್ತೆ ಬಂದು ದೂರುಸಲ್ಲಿಸುತ್ತೇನೆ ಅಂತಾ ಹೋಗಿರುತ್ತೇನೆ. ಅಂದಿನಿಂದ ನಾನು ಎಲ್ಲಾ ಕಡೆ ಹುಡುಕಾಡಿದರೂ ವಾಹನ ಸಿಕ್ಕಿರುವದಿಲ್ಲಾ ಆದ್ದರಿಂದ ನಾನು ತಡವಾಗಿ ಠಾಣೆಗೆ ಬಂದಿರುತ್ತೇನೆ. ಯಾರೋ ಕಳ್ಳರು MAHINDRA&MAHINDRA BOLERO SLX JEEP KA-33 M-2027 CHASSIS NO.MA1PS2GAKA2C79155, ENGINE NO. GAA4C30865 ಅ.ಕಿ.4,69,000/-ರೂ ಬೆಲೆ ಬಾಳುವದು ಕಳುವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 17.06.2015 ರಂದು ಮುಂಜಾನೆ 09.30 ಗಂಟೆಗೆ ಕೃಷಿ ಕಛೇರಿ ಹತ್ತಿರ ಜೇವರಗಿ ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ಅಂಬರೀಷ ತಂದೆ ಬಸವಕಲ್ಯಾಣಪ್ಪ ಸಜ್ಜನ್ ಸಾ: ಕಟ್ಟಿ ಸಂಗಾವಿ ಈತನು ತನ್ನ ಮೋಟಾರು ಸೈಕಲ್ ನಂ ಕೆ.ಎ32ವಿ7767 ನೇದ್ದರ ಮೇಲೆ ತನ್ನಮಕ್ಕಳಾದ ರಕ್ಷೀತಾ ಮತ್ತು ಬಸವಕಲ್ಯಾಣಪ್ಪ ಇವರುಗಳನ್ನು ಕೂಡಿಸಿಕೊಂಡು ತನ್ನ ಊರಿನಿಂದ ಜೇವರಗಿ ಕಡೆಗೆ ಬರುತ್ತಿದ್ದ ವೇಳೆಗೆ ಜೇವರಗಿ ಕಡೆಯಿಂದ ಟಿಪ್ಪರ್ ನಂ ಕೆಎ.32ಸಿ1416 ನೇದ್ದರ ಚಾಲಕನು ತನ್ನ ಟಿಪ್ಪರ್‌ ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೊಡಿನ ಎಡಬದಿಯಿಂದ ನಿಧಾನವಾಗಿ ಹೋಗುತ್ತಿದ್ದ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಕ್ಕೆ ಮೋಟಾರು ಸೈಕಲ್‌ ಮೇಲೆ ಇದ್ದ ಮೂರು ಜನರಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಅಪಘಾತ ನಂತರ ಟಿಪ್ಪರ್ ಚಾಲಕನು ತನ್ನ ಟಿಪ್ಪರ್‌ನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಶ್ರೀ ಶರಣಪ್ಪ ತಂದೆ ವಿರುಪಾಕ್ಷಪ್ಪ ಸಜ್ಜನ್ ಸಾ: ಹಾಗರಗುಂಡಗಿ ತಾ : ಕಲಬುರಗಿ ಹಾ:ವ: ವಿಧ್ಯಾ ನಗರ ಜೇವರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಮಹ್ಮದ ಖದೀರುದ್ದಿನ ತಂದೆ ಮಹ್ಮದ ಗೌಸುದ್ದಿನ ಸಾ|| ಶಾಸ್ತ್ರೀ ನಗರ ಸೇಡಂ ಇವರು ದಿನಾಂಕ 16/06/2015 ರಂದು ಬೆಳಿಗ್ಗೆಯಿಂದ ತನ್ನ ಅಂಗಡಿ ತರೆದು ವ್ಯಾಪಾರ ಮಾಡಿಕೊಂಡು ರಾತ್ರಿ 10-00 ಗಂಟೆಯ ಸಮಯಕ್ಕೆ ನಾನು ನನ್ನ ಅಂಗಡಿ ಮುಚ್ಚಿಕೊಂಡು ಮನೆಗೆ ಹೋದೆನು. ನಂತರ ಇಂದು ದಿನಾಂಕ 17/06/2015 ರಂದು ಬೆಳಿಗ್ಗೆ 06-00 ಗಂಟೆಗೆ ನಮ್ಮ ಅಂಗಡಿ ಇದ್ದ ಕಾಂಪ್ಲೆಕ್ಸನಲ್ಲಿ ದಿನಾಲು ಕಸಗುಡಿಸುವ ಕುರಿತು ಬರುವ ಶಹಾಬುದ್ದಿನ ಇವರು ನನಗೆ ಫೋನ ಮಾಡಿ ತಿಳಿಸಿದ್ದೇನೆಂದರೆ ನನ್ನ ಅಂಗಡಿ ಪ್ರಿನ್ಸ ಎಲೆಕ್ಟ್ರಾನಿಕ್ಸನ ಶೆಟರ ಎತ್ತಿದ್ದು, ಮತ್ತು ಅದರ ಗ್ಲಾಸ ಇದ್ದ ಬಾಗಿಲು ಮುರಿದು ಗ್ಲಾಸ ಒಡೆದಿದ್ದು ಇರುತ್ತದೆ ಅಂತಾ ಹೇಳಿದರು. ಆಗ ನಾನು ಗಾಬರಿಗೊಂಡು ನನ್ನ ತಮ್ಮನಾದ ಹಫೀಜನೊಂದಿಗೆ ನಮ್ಮ ಅಂಗಡಿಗೆ ಬಂದು ನೋಡಲಾಗಿ ನಮ್ಮ ಅಂಗಡಿಯ ಮುಂದಿನ ಶಟ್ಟರನ ಕೀಲಿ ಮುರಿದಿದ್ದು ಮತ್ತು ಸೈಡಿಗೆ ಇದ್ದ ಇನ್ನೊಂದು ಶೆಟ್ಟರ ಕೀಲಿ ಮುರಿದು ಮೇಲಕ್ಕೆ ಎತ್ತಿದ್ದು, ಗಾಜಿನ ಬಾಗಿಲು ಮುರಿದಿದ್ದು, ಮತ್ತು ಒಳಗೆ ನೋಡಲಾಗಿ ನನ್ನ ಅಂಗಡಿಯಲ್ಲಿ ಇಟ್ಟಿದ್ದ ಒಟ್ಟು 12 ಎಲ.ಇ.ಡಿ. ಟಿ.ವಿಗಳು ಇರಲಿಲ್ಲ. ಅವುಗಳ ಅ.ಕಿ. ರೂ. 1,50,000-00 ಆಗುತ್ತದೆ. ಅವುಗಳನ್ನು ದಿನಾಂಕ 16/06/2015 ರಂದು ರಾತ್ರಿ 10-00 ಗಂಟೆಯಿಂದ ಇಂದು ದಿನಾಂಕ 17/06/2015 ರಂದು ಬೆಳಿಗ್ಗೆ 06-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನನ್ನ ಅಂಗಡಿಯ ಶೆಟ್ಟರ ಮುರಿದು ನನ್ನ ಅಂಗಡಿಯಲ್ಲಿ ಇದ್ದ ಒಟ್ಟು 12 ಎಲ.ಇ.ಡಿ, ಟಿವಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆದ್ದಾರಿ ಬಂದ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 17.06.2015 ರಂದು ಕೃಷಿ ಕಛೇರಿ ಹತ್ತಿರ ಜೇವರಗಿ ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ನಡೆದ ರಸ್ತೆ ಅಪಘಾತದ ಹಿನ್ನೆಲೆಯಲ್ಲಿ ಕೈಲಾಸ ತಂದೆ ಈರಯ್ಯ ಬುಟ್ನಾಳ ಸಂಗಡ 27 ಜನರು ಹಾಗು ಸಂಗಡ ಇತರರು ಕೂಡಿಕೊಂಡು ಜೇವರಗಿ ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೆ ಪರವಾನಿಗೆ ಇಲ್ಲದೆ ಮಾನ್ಯ ಸುಪ್ರೀಂ ಕೋರ್ಟ ರವರ ಯಾವುದೆ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಬಾರದು ಎಂಬ ಆದೇಶವನ್ನು ಉಲ್ಲಂಘನೆ ಮಾಡಿ ತಮ್ಮ ಕೈಯಲ್ಲಿ ಬಡಿಗೆ, ರಾಡುಗಳನ್ನು ಹಿಡಿದುಕೊಂಡು ಏಕಾಎಕಿ ಹೆದ್ದಾರಿಯ ಮೇಲೆ ಹೋಗಿ ಬರುವ ವಾಹನಗಳನ್ನು ತಡೆದು ಚಾಲಕರಿಗೆ ಹಾಗು ಸಾರ್ವಜನಿಕರಿಗೆ ಅವಾಚ್ಯವಾಗಿ ಬೈದು ತಮ್ಮ ಕೈಯಲ್ಲಿದ್ದ ಬಡಿಗೆ ಮತ್ತು ರಾಡುಗಳನ್ನು ತೋರಿಸಿ ಜೀವದ ಬೇದರಿಕೆ ಹಾಕಿ ಸಾರ್ವಜನಿಕರ ತೊಂದರೆ ಕೊಟ್ಟು ಕಾನೂನು ಸೂವ್ಯವಸ್ತೆ ಹದಗೆಡಿಸಿರುತ್ತಾರೆ ಅಂತಾ ಶ್ರೀ. ಪಂಡಿತ. ವಿ. ಸಗರ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


17 June 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಚೌಕ ಠಾಣೆ : ದಿನಾಂಕ: 16.062015 ರಂದು ಠಾಣಾ ವ್ಯಾಪ್ತಿಯ ಗಂಜ ಬಸ್ ಸ್ಟ್ಯಾಂಡದ ಜಗದಂಭಾ ಹೊಟೇಲ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಶ್ರೀ ಮೋಹನ ಮಾನೆ ಪಿ.ಎಸ್.ಐ (ಅ.ವಿ) ಚೌಕ ಪೊಲೀಸ್ ಠಾಣೆ ಕಲಬುರಗಿ ರವರು  ಸದರಿ ವಿಷಯವನ್ನು ನಮ್ಮ ಮೇಲಾಧಿಕಾರಿಗಳಾದ ಡಿ.ಎಸ್.ಪಿ (ಬಿ) ಉಪ ವಿಭಾಗ ಇವರಿಗೆ ಮಾಹಿತಿ ತಿಳಿಸಿದ ಅವರ ಮಾರ್ಗದರ್ಶನದಂತೆ ನಮ್ಮ ಠಾಣೆಯ ಪಿ.ಐ ಸಾಹೇಬರಾದ ಉಮಾಶಂಕರ ಬಿ. ರವರಿಗೆ ಸ್ಥಳಕ್ಕೆ ಬರುವಂತೆ ವಿನಂತಿಸಿಕೊಂಡು ಅವರ ನೇತೃತ್ವದಲ್ಲಿ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಗಂಜ ಬಸ್ ಸ್ಟ್ಯಾಂಡದ ಜಗದಂಭಾ ಹೊಟೇಲ ಹತ್ತಿರ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹ್ಮದ ಆರೀಫ್ ತಂದೆ ರಾಜಾ ಪಟೇಲ ಸಾ: ಬನ್ನೂರು (ಔರಾದ (ಬಿ) ತಾ:ಜಿ: ಕಲಬುರಗಿ ಹಾ.ವ: ಖಧೀರ ಬೈ ಇವರ ಮನೆಯಲ್ಲಿ ಬಾಡಿಗೆ ಮಿಜಗುರಿ ಕಲಬುರಗಿ  ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿಮಾಡಲಾಗಿ ಅವನ ಹತ್ತಿರ ನಗದು ಹಣ 3040/-ರೂಪಾಯಿ, ಒಂದು ಮಟಕಾ ಚೀಟಿ , ಒಂದು ಬಾಲಪೆನ್, ಒಂದು ಮೋಬಾಯಿಲ್ ಕರಿಯ ಬಣ್ಣದ್ದು ಅ.ಕಿ. 500/- ರೂ, ಜೂಜಾಟಕ್ಕೆ ಸಂಬಂದ ಪಟ್ಟ ಮುದ್ದೆಮಾಲನ್ನು ಜಪ್ತಿಮಾಡಿಕೊಂಡು ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ನರೋಣಾ ಠಾಣೆ : ಶ್ರೀ. ವಿಶ್ವನಾಥ ತಂದೆ ಸಿದ್ದಪ್ಪ  ಮರಾಠ  ಸಾ;ಲಾಡಚಿಂಚೋಳಿ ಹಾ:ವ:ಮುನ್ನಳ್ಳಿ ಇವರು ದಿನಾಂಕ 13/06/2015 ರಂದು ಮುಂಜಾನೆ ಅವರ ಮಗನಾದ ಸಿದ್ದರಾಮ ವಯಸ್ಸು 03 ವರ್ಷ ಇತನಿಗೆ ಗ್ರಾಮದ ಸಂತೆ ಸೇರುವ ಸ್ಥಳದಲ್ಲಿ ಬಿಟ್ಟಿರುವಾಗ ಯಾರೋ ಸಂತೆಗೆ ಬಂದಿರುವ  ಜನರಲ್ಲಿ ಯಾರೋ ಯಾವದೋ ಉದ್ದೇಶದಿಂದ ಸಿದ್ದರಾಮನನ್ನು ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು  :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 16-06-2015 ರಂದು ರಾತ್ರಿ ಶ್ರೀ ರಮೇಶ ತಂದೆ ಮಲ್ಲೇಶಪ್ಪ ಚಿತ್ತಾಪೂರ  ಸಾ: ಸುಂದರ ನಗರ    ಕಲಬುರಗಿ ರವರು ಮತ್ತು ನನ್ನ ಗೆಳೆಯನಾದ ಮಲ್ಲಿನಾಥ ಇಬ್ಬರೂ ಕೂಡಿಕೊಂಡು ಆತನ ಮೊಟಾರ ಸೈಕಲ ನಂ ಕೆಎ-32-ಕೆ-7332 ನೇದ್ದರ ಮೇಲೆ ಶ್ರೀ  ಶರಣ ಬಸವೆಶ್ವರ ದೆವಸ್ಥಾನಕ್ಕೆ ಹೋಗುವ ಕುರಿತು ಮೋಟಾರ ಸೈಕಲ ನಾನು ಚಲಾಯಿಸುತ್ತಿದ್ದು ಮಲ್ಲಿನಾಥ ಇತನು ಹಿಂದೆ ಕುಳಿತಿಕೊಂಡು ಜಿ.ಜಿ. ಹೆಚ್ ಸರ್ಕಲ, ಜಗತ ಸರ್ಕಲ ಮುಖಾಂತರವಾಗಿ ಶ್ರೀ ಶರಣ ಬಸವೇಶ್ವರ ದಾವಸ್ಥಾನಕ್ಕೆ ಹೋಗುವಾಗ ದಾರಿ ಮದ್ಯ ಯಲ್ಲಮ್ಮ ಟೆಂಪಲ ಎದುರು ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-32-ಇಡಿ-9124 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಎದುರಿನಿಂದ ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ  ನನಗೆ ಬಲಗಾಲು ಮೊಳಕಾಲಿಗೆ ಭಾರಿ ರಕ್ತಗಾಯ, ಎಡಗಾಲು ಪಾದದ ಮೆಲ್ಬಾಗದಲ್ಲಿ ರಕ್ತಗಾಯ, ಎಡ ಕಿವಿಗೆ ರಕ್ತಗಾಯ ಬಲಗೈ ಕಿರುಬೆರಳಿಗೆ ಗುಪ್ತಪೆಟ್ಟು, ಭಲ ಬುಜಕ್ಕೆ ತರಚಿದ ಗಾಯಗೊಳಿಸಿದ್ದು  ಮಲ್ಲಿನಾಥ ಇತನಿಗೆ ಯಾವುದೆ ಗಾಯಗಳಾಗಿರುವದಿಲ್ಲಅಪಘಾತಗೊಳಿಸಿದ  ಮೋಟಾರ ಸೈಕಲ ಸಾವರನು ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀಮತಿ  ಸಂಗೀತಾ ಗಂಡ ನೀಲು ರಾಠೋಡ ಸಾ|| ಮುದಬಾಳ ಬಿ ತಾಂಡಾ ದಿನಾಂಕ 16.06.2015 ರಂದು ಸಾಯಂಕಾಲ ತಾನು ಮತ್ತು ನಮ್ಮೂರ ಸಂಗೀತಾ ಗಂಡ ನೀಲು ರಾಠೋಡ, ಬಾಬು ತಂದೆ ಬೋಜು ನಾಯಕ ರಾಠೋಡ ,ರೇಣುಕಾ ಗಂಡ ಭೀಮು ರಾಠೋಡ ಎಲ್ಲರು ಕುಳಿತುಕೊಂಡು ಆರೋಪಿತನು ನಡೆಸುತ್ತಿದ್ದ ಟಂಟಂ ನಂ ಕೆ.ಎ33-9983 ನೇದ್ದರಲ್ಲಿ ಕೂಳಿತುಕೊಂಡು ಹೋಗುತ್ತಿದ್ದಾಗ ಸಂಗಮೇಶ ಬಿರಾದಾರ ಸಾ|| ಅವರಾದ್ ಇವರ ಹೊಲದ ಹತ್ತಿರ ಜೇವರಗಿ ಶಹಾಪುರ ಮೇನ್‌ ರೋಡ್‌ ಮೇಲೆ ಹೋಗುತ್ತಿದ್ದಾಗ ನಾವು ಕುಳಿತ ಟಂಟಂ ಚಾಲಕನು ಮುಂದೆ ಹೋಗುತ್ತಿದ್ದ ಬಸ್‌ಗೆ ಕಟ್ ಹೋಡೆಯಲು ಹೋಗಿ ಟಂಟಂ ಅನ್ನು ಒಮ್ಮೇಲೆ ಕಟ್ ಹೊಡೆದಿದ್ದರಿಂದ ಟಂಟಂ ಪಲ್ಟಿ ಮಾಡಿ ನಮಗೆಲ್ಲರಿಗೆ ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀ ಶಿವಾನಂದ ತಂದೆ ಶಿವಶರಣಪ್ಪ ಸಂಗೋಳಗಿ ಸಾ: ಜಿಡಿಎ ಕಾಲೋನಿ ಶಹಾಬಜಾರ  ಕಲಬುರಗಿ ಇವರು  ಖಾಸಗಿಯಾಗಿ ಗಾರ್ಡನ ಕೆಲಸ ಗುತ್ತಿಗೆ ಪಡೆದು ಕೆಲಸ ಮಾಡಿಕೊಂಡು ತಾಯಿಯವರೊಂದಿಗೆ ವಾಸವಾಗಿರುತ್ತೇನೆ. ನನಗೆ ಇನ್ನೂ ಮದುವೆ ಆಗಿರುವುದಿಲ್ಲಾ. ಮನೆಯಲ್ಲಿ ನಮ್ಮ ತಾಯಿ ಇವರು ಒಬ್ಬರೆ ಇರುತ್ತಾರೆ. ನನ್ನಂತೆ ಸಹ ನಮ್ಮ ಓಣಿಯಲ್ಲಿ ಶ್ರೀಕಾಂತ ಮತ್ತು ಸುನೀಲ ಅನ್ನುವವರು ವಾಸವಿದ್ದು ಅವರ ಪರಿಚಯ ಇರುತ್ತದೆ. ಇಬ್ಬರು ಗೆಳೆಯರು ದಿನಾಂಕ 16.06.2015 ರಂದು ಸಾಯಂಕಾಲ 5-30 ಪಿ.ಎಂ.ಕ್ಕೆ ನಾನು ಸುನೀಲ ಇಬ್ಬರೂ ಸಿನಿಮಾ ನೋಡಿಕೊಂಡು ಸರಾಯಿ ಕುಡಿದು ಮನೆಗೆ ಹೋಗುವ ಕುರಿತು ದರ್ಬಾರ ಹೊಟೇಲದ ಹಿಂದೆ ಇರುವ ರೋಡಿಗೆ ನಡೆದುಕೊಂಡು ಬರುತ್ತಿದ್ದಾಗ ಎದುರುಗಡೆಯಿಂದ ಶ್ರೀಕಾಂತ ನನ್ನ ಗೆಳೆಯ ಸಿಕ್ಕಿದ್ದು ನನಗೆ ನೋಡಿ ನನಗೆ ಕುಡಿಯಲಿಕ್ಕೆ ಸ್ವಲ್ಪ ಹಣ ಕೂಡು ಅಂತಾ ಕೇಳಿದಕ್ಕೆ ನಾನು ನನ್ನ ಹತ್ತಿರ ಸದ್ಯ ಹಣ ಇಲ್ಲಾ ಎಲ್ಲಾ ಹಣ ಈಗ ನಾನು ಖರ್ಚು ಮಾಡಿರುತ್ತೆನೆ. ಅಂತಾ ಹೇಳಿದಕ್ಕೆ ಶ್ರೀಕಾಂತ ಇತನು ನನ್ನೊಂದಿಗೆ ಜಗಳಕ್ಕೆ ಬಿದ್ದು ರಂಡಿ ಮಗನೇ ನನಗೆ ಕುಡಿಯಲಿಕ್ಕೆ ಹಣ ಕೊಡು ಅಂತಾ ಹೇಳಿದರೆ ಇಲ್ಲಾ ಅನ್ನುತ್ತಿಯಾ ಬೋಸಡಿ ಮಗನೇ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಟ್ಟೆಗೆ ಬೆನ್ನಿಗೆ ಹೊಡೆದನು. ಇದರಿಂದ ನಾನು ಕೂಡಾ ಸಿಟ್ಟಿನಲ್ಲಿ ಅವನಿಗೆ ಕೈಯಿಂದ 2-3 ಏಟು ಹೊಡೆಯಲು ಅವನು ನನಗೆ ಅಲ್ಲಿಯೆ ಬಿದ್ದ ಒಂದು ಹಿಡಿಗಾತ್ರದ ದಪ್ಪ ಕಲ್ಲಿನಿಂದ ತಲೆಗೆ ಜೋರಾಗಿ ಹೊಡೆದಿದ್ದು ಇದರಿಂದ ನನ್ನ ತಲೆಗೆ ಬಡಿದು ಒಮ್ಮೇಲೆ ರಕ್ತ ಸೊರಲಾರಬಿಂಸಿತ್ತು ಇದರಿಂದ ನಾನು ಚಿರಾಡಲು ದರ್ಬಾರ ಹೊಟೇಲ ರೋಡಿನ ಬದಿಯಿಂದ ಬರುತ್ತಿದ್ದ ಕೆಲವು ಜನರು ಓಡಿ ಬರಲು ಸದರಿ ಶ್ರೀಕಾಂತ ಇತನು ನನಗೆ ಹೊಡೆದು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16 June 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ದಿನಾಂಕ 15-06-2015 ರಂದು ಮೃತ ಅಬ್ದುಲ್ ಬಾಶಾ ಇತನು ಏತ ನಿರಾವರಿ ಕಾಲುವೆ ನಿರ್ಮಿಸುವ ಕೆಲಸದಲ್ಲಿದ್ದಾಗ ಹಿಟಾಚಿಯ ಮಾಲಿಕ ತನ್ನ ಬುಲೇರೋ ಗಾಡಿಯಲ್ಲಿ ಡೀಸಲ್ ಕೊಟ್ಟು ವಾಪಸ್ ಬರುತ್ತಿದ್ದಾಗ ಅಬ್ದುಲ್ ಬಾಶಾ ಇತನು ಹಿಟಾಚಿ ನಿಲ್ಲಿಸಿ ಮೇಲುಗಡೆ ಕೆನಾಲ್ ರೋಡಿನ ಮೇಲೆ ಬರುತ್ತಿದ್ದಂತೆ ಬುಲೆರೋ ವಾಹನ ಸಂಖ್ಯೆ ಕೆ ಎ 28 ಎನ್ 6491 ನೆದ್ದರ ಚಾಲಕನಾದ ಯಲ್ಲಪ್ಪ ಇತನು ತನ್ನ ವಾಹನ ನಿರ್ಲಕ್ಷತನದಿಂದ ನೆಡೆಸಿಕೊಂಡು ಬಂದು ಮೃತ ಅಬ್ದುಲಬಾಶಾ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ಆತನು ಕೆಲಸಕ್ಕೆ ನಿಂತ ಹಿಟಾಚಿಯ ಚೈನಿನ ಮೇಲೆ ಬಿದ್ದಾಗ ಅವನ ಎಡಗಾಲ ಮೊಳಕಾಲಿನ ಮೇಲ್ಭಗಾದಲ್ಲಿ ಎರಡು ಕಡೆ  ಭಾರಿ ರಕ್ತಗಾಯವಾಗಿದ್ದು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪೂರ ಒಯ್ದು ಸೇರಿಕೆ ಮಾಡಿದಾಗ ಮೃತಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಡಾ|| ವಿನೋದಕುಮಾರ ಇವರು ಠಾಣೆಗೆ ದಿನಾಂಕ 15-06-2015 ರಂದು ಸಾಯಂಕಾಲ ತಮ್ಮ  ಕಾರ ಟಿಪಿ ನಂ ಕೆಎ-25-ಟಿಎ-007437 ಚೆಸ್ಸಿ ನಂ MDHHSNAW5E8-014755  ನೇದ್ದರಲ್ಲಿ ನನ್ನ ಸಂಬಂದಿಕರಿಗೆ ರೈಲ್ವೇ ಸ್ಟಷನಕ್ಕೆ ಬಿಟ್ಟು ವಾಪಸ್ಸ ಮನೆಗೆ ಬರುವ ಕುರಿತು ಐವಾನ-ಈ-ಷಾಹಿ , ಗುಲ್ಲಾಬಾವಾಡಿ, ಏಷಿಯನ್ ಮಹಲ,ಮುಖಾಂತರ ಡಿ.ಎ.ಆರ್ ಮೇನ ಗೆಟ ಕಡೆಗೆ ಕಾರ ಚಲಾಯಿಸಿಕೊಂಡು ಹೋಗುವಾಗ ಹಳೆ ಡಿಪಿಓ ಕ್ರಾಸ ಹತ್ತೀರ ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-36-ಕೆ-6424 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೆಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಕಾರಿಗೆ ಹಿಂದಿನಿಂದ ಬಂದು ಕಾರಿನ ಬಲಗಡೆ ಹಿಂದಿನ ಡೋರಿಗೆ ಡಿಕ್ಕಿಪಡಿಸಿ ಹಾಗೆ ಎಡಗಡೆ ಹಿಂದಿನ ಬಂಪರಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ  ಕಾರ ಡ್ಯಾಮೇಜ ಮಾಡಿ ಮೋಟಾರ ಸೈಕಲ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಮಲಕಾಜಪ್ಪ ಸುತಾರ ಸಾ|| ಭೂಸನೂರ ರವರು ತನ್ನ ಮನೆಯ ಜಾಗೆಯ ಸಂಭಂಧ ತನ್ನ ನಗೇಣಿಯ ಸೊಸೆಯಾದ ಅನಿತಾ ಗಂಡ ಗುರುನಾಥ ಸುತಾರ ಇವಳು ದಿನಾಂಕ 14-06-2015 ರಂದು ಸಾಯಂಕಾಲ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಾಲಿನಿಂದ ಹೊಡೆ ಬಡೆ ಮಾಡಿ ನೂಕಿಸಿಕೊಟ್ಟು ಜೀವ ಭಯ ಪಡಿಸಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.