POLICE BHAVAN KALABURAGI

POLICE BHAVAN KALABURAGI

16 February 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 15/02/2015 ರಂದು ಶ್ರೀ ರಾಜೇಶ ತಂದೆ ರೇಚಣಸಿದ್ದ ಮಜಗೊಂಡ ಸಾ ಲಚ್ಹಾಣ ತಾ : ಇಂಡಿ ಜಿ : ಬಿಜಾಪೂರ ರವರು ತನ್ನ ಗೆಳೆಯನ ಮದುವೆ ನಿಮಿತ್ಯ ಲಚ್ಚಾಣದಿಂದ ಮೋ/ಸೈ ನಂ- ಎಮ್.ಹೆಚ್-13 ಎವಿ-5983 ನೇದ್ದರ ಮೇಲೆ ಫಿರ್ಯಾದಿ ಮತ್ತು ಗಾಯಾಳು ಬರುತ್ತಿದ್ದಾಗ ಸೊನ್ನ ಕ್ರಾಸ್ ಹತ್ತಿರ ಮದ್ಯಾಹ್ನ 12:30 ಗಂಟೆ ಸುಮಾರಿಗೆ ಹಿಂದು ಗಡೆಯಿಂದ ಕಬ್ಬು ತುಂಬಿದ ಟ್ರಾಕ್ಟರ್ ನಂ- ಎಮ್.ಹೆಚ್-13 ಜೆ-6920 ನೇದ್ದರ ಚಾಲಕನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಫಿರ್ಯಾದಿಯ ಮೋ/ಸೈನ್ನು ಸೈಡ ಹೊಡೆಯುವಾಗ ಮೋ/ಸೈಗೆ ಡಿಕ್ಕಿ ಪಡಿಸಿದನು ಆಗ ಮೋ/ಸೈ ಹಿಂದೆ ಕುಳಿತ ರಾಹುಲ ಇವನು ಟ್ರಾಕ್ಟರ ಟ್ರೈಲಿ ಹಿಂದಿನ ಗಾಲಿಯಲ್ಲಿ ಸಿಕ್ಕಿಬಿದ್ದುದ್ದರಿಂದ ರಾಹುಲ ಇವನಿಗೆ ಕೈಗೆ, ಕಾಲಿಗೆ, ಟೊಂಕಿಗೆ ಮತ್ತು ಇತರೆ ಕಡೆಗೆ ಸಾದಾ ಮತ್ತು ಭಾರಿ ರಕ್ತಗಾಯ ಮತ್ತು ಗುಪ್ತ ಪೆಟ್ಟಾಗಿದ್ದು ಗಾಯಾಳು ರಾಹುಲ ತಂದೆ ಶಿವಪ್ಪ ಬೈರಗೋಂಡ ಸಾ|| ಲಚ್ಚಾಣ ತಾ|| ಇಂಡಿ ಇವರಿಗೆ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗಿರುತ್ತಾರೆ. ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ರವರಿಂದ ಸದರಿ ಗಾಯಾಳು ರಾಹುಲ ಬೈರಗೋಂಡ ಇವನು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ರಫೀಕ ತಂದೆ ಅಬ್ದುಲ ಸಲೀಮ ಸಾ : ರಾಯಚೂರ ಮೊಹಲ್ಲಾ ಯಾದಗೀರ ರವರು ಮತ್ತು ಯಾದಗಿರಿದವರಾದ ರಿಯಾಜ ಅಹ್ಮದ ತಂದೆ ಮೌಲಾಸಾಬ ಕೋಲಿವಾಡೆ ರವರ ಲಾರಿ ಮೇಲೆ ಸುಮಾರು ದಿನಗಳಿಂದ ಕ್ಲೀನರ ಅಂತಾ ಕೆಲಸ ಮಾಡುತ್ತಿದ್ದು ಸದರ ಲಾರಿ ನಂ ಎಮ್.ಎಚ್. 11 ಎಫ್. 5402 ಇದ್ದು ಸದರ ಲಾರಿ ಚಾಲಕ ರಿಯಾಜ ಅಹಮ್ಮದ ಇವನು  ಅಫಜಲಪೂರ ತಾಲೂಕಿನ ಬನ್ನಟ್ಟಿ ಕ್ರಾಸ ಹತ್ತಿರ ಸದರಿ ನಮ್ಮ ಲಾರಿ ಚಾಲಕ ರಿಯಾಜ ರವರು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಲಾರಿಯನ್ನು ಚಲಾಯಿಸುತ್ತಾ ರಸ್ತೆ ಎಡಗಡೆ ತೆಗ್ಗಿನಲ್ಲಿ ಹಾಕಿ ಬಲಮಗ್ಗಲಿಗೆ ಪಲ್ಟಿ ಮಾಡಿದನು ಆಗ ನಾನು ಜೋರಾಗಿ ಚೀರಿ ಲಾರಿಯಿಂದ ಹೊರಗೆ ಜಿಗಿದು ಚಾಲಕನ ಹತ್ತಿರ ಹೋಗಿ ನೋಡಲು ರಿಯಾಜ ಇವನು ಲಾರಿ ಪ್ರೇಮ ಕೆಳಗೆ  ಸಿಕ್ಕಿಬಿದ್ದಿದ್ದು ಕೆಲವು ಜನರ ಸಾಹಾಯದಿಂದ ಹೊರಗೆ ತೆಗೆದು ಉಪಚಾರ ಕುರಿತು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 15-02-2015 ರಂದು ಬೆಳಿಗ್ಗೆ ಶ್ರೀ ಗುಲಾಮ ಹುಸೇನ ತಂದೆ ಅಬ್ದುಲ ಖಾದರ ಸಾ: ಖಮರಕಾಲೋನಿ ಅಕ್ಬರಿಯಾಮಜೀದ ಹತ್ತಿರ ಕಲಬುರಗಿ. ರವರ ಮಗನಾದ ಮಹ್ಮದ ಸುಫಿಯಾನ ಇತನಿಗೆ ಸಂಡಾಸ ಬಂದಿದಕ್ಕೆ ಆತನ ಅತ್ತೆಯಾದ ತಾಹೇರಬೇಗಂ  ಇವಳು ಮಹ್ಮದ ಸುಫಿಯಾನ ಸಂಡಾಸಕ್ಕೆ ಕರೆದುಕೊಂಡು ಹೋಗಿ ರೋಡಿನ ಪಕ್ಕದಲ್ಲಿ ಸಂಡಾಸಕ್ಕೆ ಕೂಡಿಸಿದಾಗ ಆರೋಪಿ ಸೋಹೇಲ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 6799 ಖಮರ ಕಾಲೂನಿ ಅಟೋ ಸ್ಟಾಂಡ ಕಡೆಯಿಂದ ತನ್ನ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಸಂಡಾಸಕ್ಕೆ ಕುಳಿತ ಮಹ್ಮದ ಸುಫಿಯಾನ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತ ಪಡಿಸಿದ ಮೋಟಾರ ಸೈಕಲ ಸಿರೀಜ ನೋಡಿರುವುದಿಲ್ಲ. ಅಪಘಾತದಲ್ಲಿ ಮಹ್ಮದ ಸುಫಿಯಾನ ಈತನಿಗೆ ಎಡಗಾಲು ಪಾದಕ್ಕೆ ಎಡಗಡೆ ಸೊಂಟಕ್ಕೆ ಮತ್ತು ತಲೆಗೆ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ದು ಇರುತ್ತದೆ ಅಂತ ಫಿರ್ಯಾದಿ ಹೇಳಿಕೆ ಸಾರಂಶ ಇರುತ್ತದೆ.
ಆಕಸ್ಮಿಕ ಬೆಂಕಿ ಹಾನಿಯಾದ ಪ್ರಕರಣ :

ಚೌಕ ಠಾಣೆ : ಶ್ರೀ ಭಗವಾನ ತಂ ಶಿವಲಿಂಗಯ್ಯ ಅಲಸಳ್ಳಿ ಸಾಃ ಮನೆ  ನಂ. 6 ಮತ್ತು 7 ದೇವನಗರ ಹಳೆ ಜೇವರ್ಗಿ ರಸ್ತೆ ಕಲಬುರಗಿ ಇವರು ಗಂಜನಲ್ಲಿ ರವಿ ರಸಾಳಕರ ರವರ ಅಂಗಡಿಯಲ್ಲಿ ಬಾಲಾಜಿ ಮಾರ್ಕೆಟಿಂಗ ಎಂಬ ಹೆಸರಿನ ಮಶನರಿ ಮಾರಾಟ ಮಾಡುವ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತೇನೆ. ದಿನಾಂಕ 09.02.15 ರಂದು ಬೆಳಗ್ಗೆ 9 ಗಂಟೆಗೆ ನಾನು ಗಾಜಿಪೂರ ಬಡಾವಣೆಯಲ್ಲಿದ್ದಾಗ ನಮ್ಮ ಅಂಗಡಿಯ ಪಕ್ಕದ ಅಂಗಡಿಯವರಾದ ಪಟೇಲ ಮತ್ತು ಅಂಬಣ್ಣ ಇವರು ನನಗೆ ಪೋನ ಮಾಡಿ ನಿಮ್ಮ ಅಂಗಡಿಯ ಒಳಗಡೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಸಾಮಾನುಗಳು ಸುಡುತ್ತಿವೆ ಅಗ್ನಿಶಾಮಕ ವಾಹನ ತರಿಸಿದ್ದೇವೆ ಅಂತ ಹೇಳಿದ್ದರಿಂದ ನಾನು ಗಾಬರಿಯಾಗಿ ಹೋಗಿ ನೋಡಲು ನಮ್ಮ ಅಂಗಡಿಗೆ ಬೆಂಕಿ ಹತ್ತಿ ಉರಿಯುತ್ತಿದ್ದು ಅಗ್ನಿಶಾಮಕ ವಾಹನ ಬೆಂಕಿ ಆರಿಸಿದ್ದರಿಂದ ನಾವು ಪರಿಶೀಲಿಸಲು ಅಂಗಡಿಯಲ್ಲಿದ್ದ ಪಿ.ಯು.ಸಿ ಫಿಟಿಂಗ ಪೈಪ 90 ಎಂ.ಎಂ. ಎಂಟಿಎ, 90 ಎಂ.ಎಂ.ಟಿ, ಎಲಬು ಬೆಂಟ, ಕಾಲರ, ಎಫ್.ಟಿ.ಎ, ಬಾಲವಾಲ, ಫುಟಬಾಲ. ನಳಗಳು. ಹೆಚ್.ಡಿಪಿಸಿ ಪೈಪಗಳು, ಕೇಬಲವಾಯರಗಳು, ಸ್ಟಾಸರ, ಮೋಟಾರ ನೇದ್ದುಗಳು ಆಕಸ್ಮಿಕ ಬೆಂಕಿಯಿಂದ ಸೂಟ್ಟು ಅಂದಾಜ ಕಿಮತ್ತು 5,56,728/- ರೂ. ನೇದ್ದವುಗಳಷ್ಟು ಹಾನಿಯಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 February 2015

Kalaburagi District Reported Crimes

ಆಕ್ರಮವಾಗಿ ಆಯುಧ ಮಾರಾಟ ಮಾಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 13-02-2015 ರಂದು ಬೆಳಿಗ್ಗೆ ಕಲಬುರಗಿ ರಸ್ತೆಗೆ ಇರುವ ನಿರಾವರಿ ಆಫೀಸ ಹತ್ತಿರ ಎರಡು ಜನರು ನಿಂತುಕೊಂಡು ಪಿಸ್ತೂಲ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ನಿರಾವರಿ ಆಫೀಸ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ನಿರಾವರಿ ಆಫೀಸ ಹತ್ತಿರ ಇಬ್ಬರು ನಿಂತಿದ್ದು, ಒಬ್ಬನ ಹತ್ತಿರ ಪಿಸ್ತೂಲ ಇತ್ತು ಮತ್ತೊಬ್ಬನ ಹತ್ತಿರ ಗುಂಡುಗಳು ಇದ್ದವು. ಇಬ್ಬರು ಪಿಸ್ತೂಲ ಮತ್ತು ಗುಂಡುಗಳು ತಮ್ಮ ಕೈಯಲ್ಲಿ ಹಿಡಿದು ಪರಿಶೀಲನೆ ಮಾಡುತ್ತಿದ್ದಾಗ ದಾಳಿ ಮಾಡಿ ಇಬ್ಬರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿಲಾಗಿ 1] ಮಹಮ್ಮದ ಹನೀಫ ತಂದೆ ಚಾಂದಸಾಬ ಮುಲ್ಲಾ ಸಾ|| ಲಿಂಬಿತೋಟ ಅಫಜಲಪುರ ಅಂತಾ ತಿಳಿಸಿದನು, ಇವನ ಹತ್ತಿರ ಒಂದು ಪಿಸ್ತೂಲ ದೊರೆತಿದ್ದು, ಸದರಿ ಪಿಸ್ತೂಲಿನ ಬಗ್ಗೆ ವಿಚಾರಿಸಿದಾಗ ಇದು ಕಂಟ್ರಿ ಪಿಸ್ತೂಲ ಇರುತ್ತದೆ, ಇದರ ಬಗ್ಗೆ ನನ್ನ ಹತ್ತಿರ ಯಾವುದೆ ಲೈಸನ್ಸ  ಇರುವುದಿಲ್ಲಾ ಅಂತಾ ತಿಳಿಸಿದನು. 2] ಶರಣಬಸಪ್ಪಾ @ ಶರಣು ತಂದೆ ಜಗದೇವಪ್ಪಾ ಕಲಶಟ್ಟಿ@ ಗೂಳೆ ಸಾ|| ಚಿಂಚೋಳಿ ಅಂತಾ ತಿಳಿಸಿದ್ದು, ಇವನ ಹತ್ತಿರ 4 ಜೀವಂತ ಗುಂಡುಗಳು ದೊರೆತವು, ನಂತರ ಇವನಿಗೆ ತನ್ನ ಹತ್ತಿರ ಇದ್ದ ಸದರಿ 4 ಜೀವಂತ ಗುಂಡಗಳ ಬಗ್ಗೆ ವಿಚಾರಿಸಿದಾಗ ಅವುಗಳು ಇದೇ ಕಂಟ್ರಿ ಪಿಸ್ತೂಲಿಗೆ ಸಂಬಂಧ ಪಟ್ಟಿದ್ದು ಇರುತ್ತವೆ ಅಂತಾ ತಿಳಿಸಿದನು. ಆರೋಪಿತರು ಅಕ್ರಮವಾಗಿ ಇಟ್ಟುಕೊಂಡ ಒಂದು ಕಂಟ್ರಿ ಪಿಸ್ತೂಲ ಅ||ಕಿ|| 40,000/- ರೂ ಮತ್ತು ಸದರಿ ಕಂಟ್ರಿ ಪಿಸ್ತೂಲಿನ 4 ಜಿವಂತ ಗುಂಡುಗಳು ಅ||ಕಿ|| 2,000/- ರೂ ನೇದ್ದವುಗಳನ್ನು  ಜಪ್ತ ಮಾಡಿಕೊಂಡ ಮುದ್ದೆ ಮಾಲಿನೊಂದಿಗೆ ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಕೊಲೆ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಕಲಾವತಿ ಗಂಡ ಶಿವಶರಣ ಪೂಜಾರಿ ಸಾ: ಕಿಣ್ಣಿಸುಲ್ತಾನ ಇವರಿಗೆ ಐದು ವರ್ಷದ ಹಿಂದೆ ಗುಲಬರ್ಗಾ ತಾಲೂಕಿನ ಶರಣಸಿರಸಗಿ ಗ್ರಾಮದ ಶಿವಕುಮಾರ ತಂದೆ ಈರಣ್ಣಾ ಚಾಕಣಿ ಇತನಿಗೆ ಶರಣಸಿರಸಗಿ ಗ್ರಾಮದ ಶರಣಬಸವಣಪ್ಪಾ ಮಂಟಪದಲ್ಲಿ ಮದುವೆ ಮಾಡಿಕೊಟ್ಟಿರುವದು ಇರುತ್ತದೆ. ನನ್ನ ಮಗಳು ಮದುವೆಯಾದ ನಂತರ ನಡೆಯಲು ತನ್ನ ಗಂಡನ ಮನೆಗೆ ಹೋಗಿದ್ದು ಮದುವೆಯಾದ ಒಂದು ವರ್ಷದವರೆಗೆ ನನ್ನ ಮಗಳ ಗಂಡ ಶಿವಕುಮಾರ ಚಾಕಣಿ, ಅತ್ತೆ ನೀಲಮ್ಮಾ ಚಾಕಣಿ, ಮಾವ ಈರಣ್ಣಾ ಚಾಕಣಿ, ಭಾವ ರಾಜು ಚಾಕಣಿ,  ಮೈದುನ ಸಂತೋಷ ಚಾಕಣಿ ಇವರುಗಳು ಒಂದು ವರ್ಷದ ವರೆಗೆ ಚನ್ನಾಗಿ ನೋಡಿಕೊಂಡು ನಂತರ ನನ್ನ ಮಗಳಿಗೆ ಅವಳ ಗಂಡ ಅತ್ತೆ ಮಾವ ಭಾವ ಮತ್ತು ಮೈದುನ ಇವರೆಲ್ಲರೂ ಕೂಡಿ ನನ್ನ ಮಗಳಿಗೆ ಮಕ್ಕಳಾಗಿರುವುದಿಲ್ಲಾ ಅಂತಾ ಬೈಯುವದು ಮಾಡುತ್ತಿದ್ದು ಈ ವಿಷಯವನ್ನು ನನ್ನ ಮಗಳು ಫೋನ ಮೂಲಕ ಹಾಗೂ ಹಬ್ಬ ಹರಿದಿನಗಳಿಗೆ ತವರಿಗೆ ಬಂದಾಗ ನಮಗೆ ಹೇಳಿದ್ದು ಇರುತ್ತದೆ. ಈಗ ಒಂದುವರೆ ತಿಂಗಳ ಹಿಂದೆ ನನ್ನ ಮಗಳಿಗೆ  ಅವಳ ಗಂಡ ಶೀವಕುಮಾರ ಮತ್ತು ಅತ್ತೆ ನೀಲಮ್ಮ  ಕೂಡಿ ಅವಳ ಗಂಡನ ಮನೆಯಲ್ಲಿ ರಂಡೀ ನೀನಗೆ ಮಕ್ಕಳಾಗಿಲ್ಲಾ ನೀನು ಗೊಡ್ಡು ಇದ್ದಿ, ಅಂತಾ ಜಗಳ ಮಾಡಿ ಹೊಡೆದು, ನನ್ನ ಮಗಳ ಗಂಡ ನನ್ನ ಮಗಳಿಗೆ ಶರಣ ಸಿರಸಗಿಯಿಂದ ಕರೆದುಕೊಂಡು ಬಂದು ನನ್ನ ಮನೆಗೆ ಬಿಟ್ಟು ಹೋಗಿದ್ದ. ಈ ವಿಷಯವನ್ನು ನನ್ನ ಮಗಳು ನನ್ನ ಮುಂದೆ ಹೇಳಿದ್ದು ಇರುತ್ತದೆ. ದಿನಾಂಕ: 12/02/2015 ರಂದು ಮದ್ಯಾಹ್ನ ನಾನು ನನ್ನ ಮಗಳಾದ ಮೀನಾಕ್ಷಿ ನನ್ನ ಎರಡನೆ ಮಗಳಾದ ಸಾರಿಕ @ ಸವೀತಾ ನನ್ನ ಎರಡನೆ ಅಳಿಯ ಉಮಾಕಾಂತ ತಂದೆ ಶಿವಣ್ಣಾ ಗೊಡಕೆ ಇವರುಗಳು ಇದ್ದಾಗ ನನ್ನ ಮಗಳಾದ ಮಿನಾಕ್ಷಿ ಇವಳ ಗಂಡ ಶಿವಕುಮಾರ ಚಾಕಣಿ ಇವನು ಒಂದು ಸೈಕಲ್ ಮೋಟರ್ ತೆಗೆದುಕೊಂಡು ಕಿಣ್ಣಿಸುಲ್ತಾನಕ್ಕೆ ನಮ್ಮ ಮನೆಯಲ್ಲಿ ಒಂದು ಅರ್ದಗಂಟೆ ಕುಳಿತು ಊಟ ಮಾಡಿಕೊಂಡು ನಾಲ್ಕುವರೆ ಗಂಟೆಗೆ ನನ್ನ ಹೆಂಡತಿಗೆ ಕರೆಯಲು ಬಂದಿರುತ್ತೆನೆ. ಸದ್ಯ ನಾವು ಹೋಗುತ್ತಿದ್ದೆವೆ ಎಂದು ನನಗೆ ಹೇಳಿ ನನ್ನ ಅಳಿಯ ಶಿವಕುಮಾರ ಚಾಕಣಿ ರವರು ತಾನು ತಂದಿದ್ದ ಸೈಕಲ್ ಮೋಟರ್ ನಂ: ಕೆಎ 32 ಆರ್ 8668 ಇದರ ಮೇಲೆ ನನ್ನ ಮಗಳಾದ ಮಿನಾಕ್ಷಿಗೆ ಕುಡಿಸಿಕೊಂಡು ಸಾಯಾಂಕಾಲ 05:00 ಗಂಟೆಗೆ ಹೋಗಿದ್ದು ಇರುತ್ತದೆ, ನಂತರ ನಾನು 08:00 ಗಂಟೆಯ ಸುಮಾರಿಗೆ ಅಳಿಯನಿಗೆ ಫೊನ ಮಾಡಿ ಊರಿಗೆ ಮುಟ್ಟಿದ್ದಿರಾ ಅಂತಾ ಕೇಳಿದ್ದಾಗ ನನ್ನ ಮಗಳು ಮತಾಡಿ ದಾರಿಯಲ್ಲಿ ಹೋಗುತ್ತಿದ್ದೆವೆ ಅಂತಾ ಹೇಳಿರುತ್ತಾಳೆ ನಮ್ಮೂರಿನ ಶಿವಾನಂದ ತಂದೆ ವಿಠಲ ಕುಂಬಾರ ಮತ್ತು ಸಂಜಿವುಕುಮಾರ ತಂದೆ ಮಾಳಪ್ಪಾ ಪೂಜಾರಿ ಇವರು ಮದ್ಯ ರಾತ್ರಿ 12:00 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದು ವಿಷಯ ತಿಳಿಸಿದ್ದೆನೆಂದರೆ, ನಿಮ್ಮ ಅಳಿಯ ಶಿವಕುಮಾರ ಚಾಕಣಿ ಹಾಗೂ ನಿಮ್ಮ ಮಗಳು ಮಿನಾಕ್ಷೀ ಹೋಗುವ ದಾರಿಯಲ್ಲಿ ಲಾಡಚಿಂಚೋಳಿ ಕ್ರಾಸ್ ಹತ್ತಿರ ರಾತ್ರಿ 10:00 ಗಂಟೆಯ ಸುಮಾರಿಗೆ ಅಪಘಾತವಾಗಿದ್ದರಿಂದ ನಿಮ್ಮ ಮಗಳಾದ ಮಿನಾಕ್ಷಿ ಇವರು ಭಾರಿಗಾಯವಾಗಿ ಮೃತಪಟ್ಟಿರುತ್ತಾಳೆ ಎಂದು ತಿಳಿಸಿದ ಮೇರೆಗೆ ನಾನು ನನ್ನ ಗಂಡನಾದ ಶಿವಶರಣ ಹಾಗೂ ಓಣಿಯ ಕೆಲವು ಜನರು ಕೂಡಿ ಡೋಗಿನಾಲಾ ದಾಟಿ ಲಾಡಚಿಂಚೋಳಿ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನನ್ನ ಮಗಳ ಶವವು ಬಿದ್ದಿದ್ದು ನಾವುಗಳು ನೋಡಲು ಅವಳ ಬಲಗಡೆ ಮೆಲಕಿನ ಮೇಲೆ ಭಾರಿ ರಕ್ತಗಾಯವಾಗಿದ್ದು ಅಲ್ಲದೆ ಗದ್ದಕ್ಕೆ ಎಡಗಡೆ, ಮಗ್ಗಲಿಗೆ ಕಂದುಗಟ್ಟಿದ ಗಾಯವಾಗಿದ್ದು ಅಲ್ಲದೆ ಎಡಗಾಲು ಮೊಳಕಾಲಿಗೆ ತರಚಿದ ಗಾಯವಾಗಿತ್ತು ಇದು ನನ್ನ ಅಳಿಯ ನನ್ನ ಮಗಳಿಗೆ ಶಿಲದ ಬಗ್ಗೆ ಸಂಶಯ ಮಾಡಿ ನನ್ನ ಮಗಳಿಗೆ ಜೊತೆಯಲ್ಲಿ ಕರೆದುಕೊಂಡು ಬಂದು ಲಾಡಚಿಂಚೋಳಿಯ ಸಿಮೆಯ ಒಂದು ಹೊಲದಲ್ಲಿ ಕೆಳಗೆ ಮಲಗಿಸಿ ದೊಡ್ಡ ಕಲ್ಲಿನಿಂದ ನನ್ನ ಮಗಳಾದ ಮಿನಾಕ್ಷಿಯ ತಲೆಯ ಮೇಲೆ ಎತ್ತಿ ಹಾಕಿ ಭಾರಿ ಗಾಯ ಪಡಿಸಿ ಕೊಲೆ ಮಾಡಿರುತ್ತಾರೆ. ಇದನ್ನು ಮುಚ್ಚಲು ಅವಳ ಶವವು ಸೈಕಲ್ ಮೋಟರ್ ಮೇಲೆ ಹಾಕಿಕೊಂಡು ರೋಡಿಗೆ ಹಾಕಿ ಸಾಕ್ಷೀ ಮುಚ್ಚಿ ಹಾಕುವ ಉದ್ದೇಶದಿಂದ ಅಪಘಾತವೆಂದು ಸೃಷ್ಠಿ ಮಾಡಿರುತ್ತಾನೆ. ಅಂದರೆ ನನ್ನ ಅಳಿಯನೆ ನನ್ನ ಮಗಳಿಗೆ ಅವಳ ಶೀಲದ ಬಗ್ಗೆ ಸಂಶಯ ಪಟ್ಟು ಕೊಲೆ ಮಾಡಿರುತ್ತಾನೆ  ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 February 2015

Kalaburagi District Reported Crimes

ಕಡಲೆ ಚೀಲಗಳನ್ನು ಕಳವು ಮಾಡಿದ ಆರೋಪಿತರ ಬಂಧನ :
ಕಮಲಾಪೂರ ಠಾಣೆ : ದಿನಾಂಕ 09-02-2015 ರಂದು 12-00 ಪಿ.ಎಮ್ ಕ್ಕೆ ಶ್ರೀ ಬಸಪ್ಪ ತಂದೆ ದೇವಪ್ಪ ಹಕಾರೆ  ಸಾ:ನೆರೆಗಲ ಗ್ರಾಮ ತಾ:ರೋಣ ಜಿ:ಗದಗ ಇವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ:11-02-2015 ರಂದು 11-00 ಎ.ಎಮಕ್ಕೆ ಪಿ.ಎಸ್.ಐ. ಕಮಲಾಪೂರ ಮತ್ತು ಠಾಣೆಯ ಸಿಬ್ಬಂದಿ ಜನರಾದ ಸಿದ್ರಾಮಪ್ಪ ಎ.ಎಸ.ಐ ಕತಲಸಾ ಪಿ.ಸಿ-310 ಹಾಗೂ ಹಣಮಂತ ರೆಡ್ಡಿ ಪಿ.ಸಿ-491 ಇವರನ್ನು ಕರೆದುಕೊಂಡು ಆರೋಪಿತರ ಪತ್ತೆ ಕುರಿತು ಭಿಮನಾಳ ಗ್ರಾಮಕ್ಕೆ ಬೇಟಿನೀಡಿ ಅಲ್ಲಿಂದ ಮರಗುತ್ತ ಗ್ರಾಮಕ್ಕೆ ಹೋಗುವಾಗ 12-00 ಪಿ.ಎಮ ಸೂಮಾರಿಗೆ ಮರಗುತ್ತಿ ಇನ್ನೂ 1 ಕೆ.ಮೀ  ಅಂತರ ಇದ್ದಾಗ 4 ಜನರು ನಮ್ಮ ಪೋಲಿಸ ಜೀಪನ್ನು ನೋಡಿ ಸಂಶಯಯಾಸ್ಪದ ರೀತಿಯಲ್ಲಿ ವರ್ತಿಸುತ್ತ ನಮಗೆ  ನೋಡಿ ವೇಗವಾಗಿ ಹೋಲದಲ್ಲಿ ಓಡಿ ಹೋಗುತ್ತಿದ್ದಾಗ ನಾನು ಸಿಬ್ಬಂದಿ ಜನರ ಸಹಾಯದಿಂದ ಆರೋಪಿತರಿಗೆ ಬೆನ್ನು ಹತ್ತಿ 4 ಜನರನ್ನು ಹಿಡಿದು ಅವರ ಹೆಸರು ವಿಳಾಸದ ಬಗ್ಗೆ ವಿಚಾರ ಮಾಡಲು ಸರಿಯಾಗಿ ತಮ್ಮ ಹೆಸರು ವಿಳಾಸ ಹೇಳದೆ ಇದ್ದುದರಿಂದ ಸದರಿ 4 ಜನರನ್ನು ಠಾಣೆಗೆ ಕರೆದುಕೊಂಡು ಬಂದು ಕೂಲಂಕುಷವಾಗಿ ವಿಚಾರ ಮಾಡಲು 1) ಲಕ್ಷ್ಮಣ ತಂದೆ ಅರ್ಜುನ ಕಾಳೆ ಸಾ; ಶೆಖಾಪೂರ 2) ಮಹೇಶ ತಂದೆ ಭಾಗಣ್ಣ ಗೋಡಕೆ ಸಾ; ಪಡಸಾವಳಗಿ, 3) ಚಂದ್ರಕಾಂತ ತಂದೆ ಸಂಗು ಕಾಳೆ  ಸಾ; ಶೆಖಾಪೂರ, 4) ಧರ್ಮರಾಜ ತಂದೆ ಭುತಾಳೆ ಸಾ;   ಪಡಸಾವಳಗಿ ಎಲ್ಲರೂ ತಾ; ಆಳಂದ ಜಿ; ಕಲಬುರ್ಗಿ  ಅಂತ ತಿಳಿಸಿದ್ದುನಂತರ ಅವರ ಸ್ವ ಖುಷಿ ಹೇಳಿಕೆಯನ್ನು ಪಡೆದ್ದಾಗ ಮೇಲೆ ಹೇಳಿದ ನಾಲ್ಕು ಜನರು ಮತ್ತು ಅಮೃತ ತಂದೆ ಮಕ್ಲು ಪವಾರ , ಗಂಗಾಧರ ತಂದೆ ಖಾರೋಳ ಕಾಳೆ, ಮಾಣಿಕ್ಯ ತಂದೆ ಪದ್ಮು ಕಾಳೆ, ಶಿವಾಜಿ ತಂದೆ ಪದ್ಮು ಕಾಳೆ, ವಸಂತ ತಂದೆ ಭೈರು ಪವಾರ ಮತ್ತು ರಾಜು ತಂದೆ ಭೈರು ಪವಾರ ಇವರೆಲ್ಲರೂ ಕೂಡಿ ದಿನಾಂಕ 08-02-2015 ರಂದು ರಾತ್ರಿ ವೇಳೆಯಲ್ಲಿ ಹೆದ್ದಾರಿಯ ಕುದರೆಮುಖ  ಹೊಡಿನಲ್ಲಿ ನಿಧಾನವಾಗಿ ಏರುತ್ತಿದ್ದ ಲಾರಿ , ಹಿಂದಿನಿಂದ ನಾಲ್ಕು ಜನರು ಅದರ ಮೇಲೆ ಏರಿ ಕೊಯಿತಾದಿಂದ ಲಾರಿಯ ಮೇಲೆ ಕಟ್ಟಿದ್ದ ತಾಡಪತ್ರಿ ಮತ್ತು ಹಗ್ಗವನ್ನು ಕಟ್ಟ ಮಾಡಿ ಲಾರಿಯಲ್ಲಿದ್ದ ಏಳು ಕಡಲಿ ಚೀಲಗಳನ್ನು ಕಳ್ಳತನ ಮಾಡಿ, ಕೆಳಗೆ ಬೀಸಾಕಿದ್ದು, ಉಳಿದ ಆರು ಜನರು ಮಹೇಂದ್ರ ಬುಲೆರೋ ಪೀಕಫ್ ಜೀಪಿನಲ್ಲಿ ಕಳ್ಳುವು ಮಾಡಿದ, ಚೀಲಗಳನ್ನು ಹಾಕುತ್ತಾ ಬಂದಿದ್ದುನಂತರ ಲಾರಿ ಚಾಲಕನಿಗೆ ಅನುಮಾನ ಬಂದು ಲಾರಿ ನಿಲ್ಲಿಸಿದ್ದಾಗನಾವೆಲ್ಲರೂ ಲಾರಿಯಿಂದ ಇಳಿದು ಬುಲೆರೋ ಜೀಪನಲ್ಲಿ ಕುಳಿತು ಕಳ್ಳತನ ಮಾಡಿದ್ದ ಕಡಲಿ ಚೀಲಗಳನ್ನು ತೆಗೆದುಕೊಂಡು  ಓಡಿ ಹೋದ ಬಗ್ಗೆ ತಪ್ಪು ಓಪ್ಪಿಕೊಂಡಿದ್ದು, ನಂತರ ಕಳ್ಳವು ಮಾಡಿ ಮುಚ್ಚಿಟ್ಟ ಜಾಗೆಯನ್ನು ಆರೋಪಿತನಾದ ಲಕ್ಷ್ಮಣ ಕಾಳೆ ಇತನು ತೋರಿಸಿ, ನಾಲ್ಕು ಚೀಲ ಕಡಲಿ ಅ,ಕಿ 8500 ಮತ್ತು ಒಂದು ಮಹೇಂದ್ರಾ ಪೀಕಫ್ ಬುಲೆರೋ ಜೀಪ್ ನಂ ಕೆಎ-32-ಬಿ-6722 ಅ.ಕಿ 2,00000 ಲಕ್ಷ ಮತ್ತು ಒಂದು ಕೊಯಿತಾ ಅ.ಕಿ 00.00 ನೇದ್ದನು ಹಾಜಪಡಿಸಿದ್ದು  ಅವುಗಳನ್ನು ಜಪ್ತಿಮಾಡಿಕೊಂಡು ಸದರಿಯವರಿಗೆ ನ್ಯಾಯಾಂಗ ಬಂಧನ ಕುರಿತು ಕಳುಹಿಸಲಾಗಿದೆ.
ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 11.02.2015 ರಂದು ಸಾಯಂಕಾಲ 06:00 ಗಂಟೆಯ ಸುಮಾರಿಗೆ ಕಟ್ಟಿ ಸಂಗಾವಿ ಕ್ರಾಸ್‌ ಹತ್ತಿರ ಮಲ್ಲಣ್ಣ ಹೆಳವರ ಇವರ ಮನೇಯ ಹತ್ತಿರ ಜೇವರ್ಗಿ ಕಲಬುರಗಿ ಮೇನ್‌ ರೋಡ್‌ ಮೇಲೆ ಶ್ರೀ ನಾಗಣ್ಣ ತಂದೆ ನಿಂಗಣ್ಣ ನಂದೆಳಿ ಸಾ: ಯನಗುಂಟಿ ಮತ್ತು ಇತರರು ಕುಳಿತುಕೊಂಡು ಹೋಗುತ್ತಿದ್ದ ಟಂಟಂ ನಂ ಕೆ.ಎ32ಎ6769 ನೇದ್ದಕ್ಕೆ ಟಿ.ಎಸ್12ಯು.ಎ೦551 ನೇದ್ದರ ಚಾಲಕ ನೇದ್ದರ ಚಾಲಕನು ತನ್ನ ಲಾರಿಯನ್ನು ತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿ ಮತ್ತು ಇತರರು ಕುಳಿತುಕೊಂಡು ಹೋಗುತ್ತಿದ್ದ ಟಂಟಂಗೆ ಹಿಂದಿನಿಂದ ಡಿಕ್ಕಿ ಪಡಿಸಿ ಟಂಟಂ ಪಲ್ಟಿಮಾಡಿ ಫಿರ್ಯಾದಿ ಮತ್ತು ಇತರರಿಗೆ ಸಾದಾ ಮತ್ತು ಭಾರಿ ಗಾಯಗೊಳಿಸಿ ತನ್ನ ಲಾರಿ ಸಮೇತ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 12-02-2014 ರಂದು ಮದ್ಯಾಹ್ನ ಶ್ರೀ ಮಲ್ಲಿಕಾರ್ಜುನ ತಂದೆ ಶಿವಲಿಂಗಪ್ಪಾ ಪಾಟೀಲ  ಸಾ: ಆರ್.ಜಿ. ನಗರ ಖಾದ್ರಿ ಚೌಕ ಕಲಬುರಗಿ ರವರು ಮತ್ತು ಅವರ ಚಿಕ್ಕಪ್ಪನ ಮಗನಾದ ಶರಣು ಪಾಟೀಲ ಇಬ್ಬರೂ ಜೆ.ಆರ್ ನಗರಕ್ಕೆ ಹೋಗಬೇಕು ಅಂತಾ ನಡೆದುಕೊಂಡು ಇಬ್ಬರೂ ಹೋಗುವಾಗ ಕೇಂದ್ರ ಬಸ್ ನಿಲ್ದಾಣದ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ನನಗೆ ಡಿಕ್ಕಿ ಪಡಿಸಿದರಿಂದ ನನಗೆ ಬಲ ಹಣೆಗೆ ರಕ್ತಗಾಯ, ಬಲಕಣ್ಣಿಗೆ ಗುಪ್ತಪೆಟ್ಟು, ಎಡಗಣ್ಣಿಗೆ ಗುಪ್ತಪೆಟ್ಟು ಬಿದ್ದು ಬಾವ ಬಂದಿರುತ್ತದೆ ಅಪಘಾತ ಪಡಿಸಿದ ಮೋ/ಸೈಕಲ ಸವಾರನ ಹಿಂದುಗಡೆ ಕುಳಿತ್ತಿದ್ದ ಸಾಗರ ಇತನು ಕೂಡಾ ಕೆಳಗಡೆ ಬಿದ್ದು ಗಾಯಹೊಂದಿದ್ದು ಮೋ/ಸೈಕಲ ಸವಾರ  ನಮ್ಮ ಕಡೆಗೆ ನೋಡುತ್ತಾ ಜಿ.ಆರ್ ನಗರ ಕಡೆಗೆ ತನ್ನ ಮೋ/ಸೈಕಲ ಸಮೇತ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಝಕೀಯಾ ಗಂಡ ಅತೀಕ ಅಹ್ಮದ ಸಾ; ಮನೆ ನಂ 1-949-10/29ಎ ಶಹಾಬಾಜ ಕಾಲೋನಿ ರೆಹಮತ ನಗರ ಕಲಬುರಗಿ ಇವರು ದಿನಾಂಕ 29.03.2008 ರಂದು ಅತೀಕ ಅಹ್ಮದನೊಂದಿಗೆ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ವರನಿಗೆ ವರದಕ್ಷಿಣೆ ರೂಪದಲ್ಲಿ 15.000/- ರೂ ಹೀರೋ ಹೊಂಡಾ ದ್ವೀಚಕ್ರ ವಾಹನ 1 ತೊಲೆ ಬಂಗಾರ ಮತ್ತು ಗ್ರಹ ಬಳಕೆಯ ಸಾಮಾನುಗಳು ಕೊಟ್ಟಿದ್ದು ಇರುತ್ತದೆ ಮದುವೆಯಾದ ನಂತರ ನನ್ನ ಗಂಡ ನನ್ನೊಂದಿಗೆ ಒಳ್ಳೆ ಬಾಂದವ್ಯದಿಂದ ಇದ್ದುದರಿಂದ ನನಗೆ ಆಪಿಯಾ ಮಹರನ ಅಂತಾ ಒಂದು ಹೆಣ್ಣು ಮಗು ಹುಟ್ಟಿರುತ್ತದೆ ಆವಾಗಿನಿಂದ ನನ್ನ ಗಂಡ ಅತೀಕ ಒಂದಲ್ಲಾ ಒಂದು ಕಾರಣ ಒಡ್ಡಿ ಹಿಂಸೆ ಕೊಡಲು ಪ್ರಾರಂಬಿಸಿದನು. ನನ್ನ ಅತ್ತೆ ಬದರ ಜಹಾಂ ಮಾವ ಶೇಖಯಾಕುಬ ಮೈದುನ ಶಫೀಖಅಹ್ಮದ ನಾದಿನಿ ಆಸ್ಮಾ ಪೀರದೋಸ, ಅಪ್ಸಾನ ಇವರೆಲ್ಲರೂ ಕೂಡಿ ನನ್ನ ಗಂಡನಿಗೆ ಪ್ರಚೋದನೆ ಕೊಡುತ್ತಾ ತವರು ಮನೆಯಿಂದ 2 ಲಕ್ಷ ರೂ ತೆಗೆದುಕೊಂಡು ಬಾ ಅಂತ ಹಿಂಸೆ ಕೊಡಲು ಪ್ರಾರಂಬಿಸಿದರು. ದಿನಾಂಕ 09.01.2015 ರಂದು 5 ಗಂಟೆ ಸುಮಾರಿಗೆ ನಾನು ನಮ್ಮ ತಂದೆ ತಾಯಿಯ ಮನೆಯಲ್ಲಿದ್ದಾಗ ನನ್ನ ಗಂಡ ನನ್ನ ತವರು ಮನೆಗೆ ಬಂದು ಅವಾಚ್ಯವಾಗಿ ಬೈಯ್ಯಲು ಪ್ರಾರಂಬಿಸಿ ಚಪ್ಪಲಿಯಿಂದ ಹೊಡೆದು ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಹೊಡೆಬಡೆ ಮಾಡಲು  ಹತ್ತಿದನು. ಈ ವಿಷಯವನ್ನು ನಾನು ನನ್ನ ಅತ್ತೆ ಮಾವನಿಗೆ ಪೋನ ಮಾಡಿ ತಿಳಿಸಿದರೆ ಅವರು ಕೂಡ ಬಾಯಿಗೆ ಬಂದಂತೆ ಬೈದು ಏ ರಂಡಿ ನೀನು ನನ್ನ ಮಗನಿಗೆ 2 ಲಕ್ಷ ರೂ ತರದೇ ಇದ್ದರೆ ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಅಂತಾ ಬೈದಿರುತ್ತಾರೆ. ನೀನು ಕೇಸು ಮಾಡಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.