POLICE BHAVAN KALABURAGI

POLICE BHAVAN KALABURAGI

02 January 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ರಾಕೇಶ ತಂದೆ ದೇವಿಂದ್ರ ಮಡಿವಾಳ ಸಾ: ಸ್ಷೇಷನ ಏರಿಯಾ ಶಹಾಬಾದ ಇವರು ದಿನಾಂಕ: 31-12-2014 ತನ್ನ ಗೆಳೆಯನಾದ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಸಾ: ಮಡ್ಡಿ ಏರಿಯಾ ಶಹಾಬಾದ ಇತನ ಮೊ/ಸೈ ನಂ: ಕೆ.ಎ-29/ಎಲ್-7034 ನೇದ್ದನ್ನು ತೆಗೆದುಕೊಂಡು ನನ್ನ ಹತ್ತಿರ ಬಂದು ಹೊಸ ವರ್ಷ ಆಚರಣೆ ಮಾಡೊಣ ಬಾ ಅಂತಾ ನನ್ನ ಜೊತೆಗೆ ಕರೆದುಕೊಂಡು ತಮ್ಮ ಮನೆಗೆ ಹೋಗಿ ಆತನ ಸಂಬಂದಿಕನಾದ ಮಲ್ಲಿಕಾರ್ಜುನ ರಾಜಾಪೂರ ಇತನನ್ನು ಕಲಬುರಗಿಗೆ ಬಿಟ್ಟು ಬರೊಣ ಅಂತಾ ಹೇಳಿ ಸದರಿ ಮೊ/ಸೈ ನನ್ನು ಮಲ್ಲಿಕಾರ್ಜುನ ಇತನು ಚಲಾಯಿಸಿಕೊಂಡು ಅದರ ಹಿಂದೆ ನಾನು ಮತ್ತು ಮಲ್ಲಿಕಾರ್ಜುನ ರಾಜಾಪೂರ ಕೂಡಿ ಸದರಿ ಮೊ/ಸೈ ಹಿಂದೆ ಕುಳಿತು ಕಲಬುರಗಿಯಲ್ಲಿ ಮಲ್ಲಿಕಾರ್ಜುನ ರಾಜಾಫೂರ ಇತನಿಗೆ ಬಿಟ್ಟು ಮರಳಿ ಶಹಾಬಾದಕ್ಕೆ 8.30 ಪಿಎಮ್ ಸುಮಾರಿಗೆ  ಸಣ್ಣೂರ ಕ್ರಾಸ ಮಾರ್ಗವಾಗಿ ಮುಗಳ ನಾಗಾಂವ ಕ್ರಾಸ ಹತ್ತಿರ ಸದರಿ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಇತನು ತನ್ನ ಮೊ/ಸೈ ಅತೀವೇಗ ಮತ್ತು ನಿಷ್ಕಾಳಜಿ ತನಿಂದ ಚಲಾಯಿಸಿಕೊಂಡು ಮುಗಳನಾಗಾಂವ ಕ್ರಾಸ ಹತ್ತಿರ ಬ್ರೀಜಿನ ಕೆಳಗೆ ಒಂದು ಕಲ್ಲಿಗೆ ಡಿಕ್ಕಿ ಹೊಡೆದು ಕೆಳಗೆ ಬಿಳಿಸಿದ್ದರಿಂದ ನನಗೆ ಎಡಗಣ್ಣಿನ ಕೆಳಗೆ ರಕ್ತಗಾಯ , ಎಡ ಕಪಾಳಕ್ಕೆ ಗುಪ್ತ ಗಾಯ ಬಲಗೈ ಮುಂಗೈ ಹತ್ತಿರ ತರಚಿತ ರಕ್ತಗಾಯವಾಗಿ ಬೇವುಸ್ ಆಗಿ ಸ್ಥಳದಲ್ಲಿಯೇ ಬಿದ್ದೇನು. ನಂತರ ದಿನಾಂಕ: 01-01-2015 ರಂದು ಬೆಳ್ಳಿಗ್ಗೆ 6.30 ಗಂಟೆಗೆ ನನಗೆ ಎಚ್ಚರಾದಗ ಎದ್ದು ನೋಡಲು ಮಲ್ಲಿಕಾರ್ಜುನ ತಂದೆ ಶರಣಪ್ಪಾ ಇತನಿಗೆ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಕಿವಿಗಳಿಂದ ಭಾಯಿಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.       
ಜೇವರ್ಗಿ ಠಾಣೆ : ದಿನಾಂಕ: 01.01.2015 ರಂದು ಶಿವರಾಜ ಕಟ್ಟಿಮನಿ ಈತನು ಮೋಟಾರ ಸೈಕಲ್‌ ನಂ ಕೆ.ಎ32ಇ.ಎಫ್‌9625 ನೇದ್ದರ ಮೇಲೆ ಜೇವರ್ಗಿಯಿಂದ ಊರಿಗೆ ಬರುತ್ತಿದ್ದಾಗ ಬಾಪುಗೌಡ ಹತ್ತಿ ಮಿಲ್‌ ಹತ್ತಿರ ಜೇವರ್ಗಿ ಶಹಾಪುರ ರೋಡಿನಲ್ಲಿ ಲಾರಿ ನಂ ಕೆಎ01ಎ2836 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಹಿಂದುಗಡೆ ವಾಹನಗಳು ಬರುವದನ್ನು ನೋಡದೆ ಹತ್ತಿ ಮಿಲ್‌ ಒಳಗಡೆ ಲಾರಿಯನ್ನು ತೆಗೆದುಕೊಂಡು ಹೋಗಲು ಒಮ್ಮೆಲೆ ಲಾರಿಯನ್ನು ಹೊರಳಿಸಿದಾಗ ನಮ್ಮ ಅಣ್ಣನ ಮೋಟಾರ ಸೈಕಲ್‌ ಲಾರಿಗೆ ಡಿಕ್ಕಿಯಾಗಿ ಭಾರಿ ರಕ್ತಗಾಯ ವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಬಸಪ್ಪ ತಂದೆ ಪೀರಪ್ಪ ಕಟ್ಟಿಮನಿ ಸಾ : ಮುದಬಾಳ ಕೆ ತಾ : ಜೇವರ್ಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಜೇವರ್ಗಿ ಠಾಣೆ : ದಿನಾಂಕ 29.12.2014 ರಂದು ರಾತ್ರಿ ಜೇವರ್ಗಿ ಪಟ್ಟಣದ ರೈಸ ಧಾಬಾ ಹತ್ತಿರ ಜೇವರ್ಗಿ ಕಲಬುರಗಿ ಹೈವೆ ರೋಡಿನ ಮೇಲೆ ಶ್ರೀ ಚೆನ್ನನಗೌಡ ತಂದೆ ಸಿದ್ದಣ್ಣಗೌಡ ಸಿರವಾಳ ಸಾ : ಸಿರವಾಳ ತಾ : ಶಹಾಪುರ ರವರ ಟಿಪ್ಪರ್ ನಂ ಕೆ.ಎ33ಎ2754 ನೇದ್ದರ ಚಾಲಕನು ಟಿಪ್ಪರ್‌ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರೊಡಿನ ಮೇಲೆ ಹೋಗಿತ್ತಿದ್ದ ಎಮ್ಮೆಗಳಿಗೆ ಡಿಕ್ಕಿ ಪಡಿಸುವದನ್ನು ತಪ್ಪಿಸಲು ಹೋಗಿ ಟಿಪ್ಪರ್‌ ಅನ್ನು ಪಲ್ಟಿ ಮಾಡಿ ಅಪಘಾತ ಮಾಡಿ ವಾಹನ ಜಖಂ ಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

01 January 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 31-12-2014 ರಂದು ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯದ ಮುಂದೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಶ್ರೀ ನಜೀರ ಅಹ್ಮದ .ಎಸ್. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಬಿಂದು ತಂದೆ ಗುಂಡಡೆರಾವ ಕುಲಕರ್ಣಿ ಸಾ|| ಬ್ರಾಹ್ಮಣ ಗಲ್ಲಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 230/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಿರುಕಳ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀಮತಿ ಶೋಭಾ ಗಂಡ ಅಶೋಕ ಅಸ್ತಳಕರ ಸಾ; ಸಕ್ಕರಗಾ ಹಾ;ವಾ; ಇಕ್ಕಳಕಿ ತಾ; ಆಳಂದ ಜಿ; ಕಲಬುರಗಿ ರವರು ಸುಮಾರು 10 ವರ್ಷಗಳ ಹಿಂದೆ ನನ್ನ ತಂದೆಯವರು ಸಕ್ಕರಗಾ ಗ್ರಾಮದ ತಿಪ್ಪಣ್ಣಾ ಅಸ್ತಲಕರ ರವರ ಮಗನಾದ ಅಶೋಕ ಅಸ್ತಲಕರರವರೊಂದಿಗೆ ಮದುವೆ ಮಾಡಿ ಕೋಟ್ಟಿದ್ದು 03 ಜನ ಮಕ್ಕಳಿರುತ್ತಾರೆ ಸುಮಾರು ಒಂದು ತಿಂಗಳಿಂದ ನನ್ನ ಮಕ್ಕಳನ್ನು ನನ್ನ ಗಂಡನ ಹತ್ತಿರ ಇಟ್ಟು ಕೋಂಡಿರುತ್ತಾರೆ, ಅಲ್ಲದೇ ನಾನು ಮತ್ತು ನನ್ನ ಗಂಡ ಅಶೋಕ ಅಸ್ತಳಕರ ಮಾವ ತಿಪ್ಪಣ್ಣ, ಅತ್ತೆ ತಾಯಾಬಾಯಿ ಹಾಗು ನಾದಿನಿಯಾದ ಜಯಶ್ರೀ ಗಂಡ ಲಕ್ಕನ ಹಾಗು ನನ್ನ ನಾಧಿನ ಮಗಳಾದ ಸ್ನೇಹಾ ತಂದೆ ಲಕ್ಕನ ನಾವೇಲ್ಲರೂ ಒಂದೆ ಕುಟುಂಬದಲ್ಲಿ ವಾಸವಾಗಿದ್ದು ದಿನಾಂಕ 26-11-2014 ರಂದು 08;00 ಎ.ಎಂಕ್ಕೆ ನಾವೇಲ್ಲರೂ ಮನೆಯಲ್ಲಿದ್ದಾಗ ನನ್ನ ಗಂಡನಾದ ಅಸೋಕ ತಂದೆ ತಿಪ್ಪಣ್ನ ಅಸ್ತಳಕರ ಅತ್ತೆಯಾದ ತಾಯಾಬಾಯಿ ನನ್ನ ಮೈದುನ್ ಅನೀಲ ಅಸ್ತಳಕರ, ಜಯಶ್ರೀ, ಸ್ನೇಹಾ ಮಾವ ತಿಪ್ಪಣ್ಣ ಹಾಗು ನಮ್ಮ ಸಂಬಂದಿಯಾದ ಸಿದ್ದು ತಂದೆ ಭೀಮಶ್ಯಾ ನಿಂಗದಳ್ಳಿ ಸಾ: ಝಳಕಿ[ಕೆ] ರವರೆಲ್ಲರೂ ಕೂಡಿಕೊಂಡು ನನ್ನ ಗಂಡನ ಮನೆಯಲ್ಲಿ ನನಗೆ ನೀನು ಅಡುಗೆ ಸರಿಯಾಗಿ ಮಾಡುವುದಿಲ್ಲ ಅಂತಾ ನನ್ನ ಗಂಡನು ನನಗೆ ತನ್ನ ಮನಸ್ಸಿಗೆ ಬಂದಂತೆ ಬೈಯುವುದು ಹೊಡೆಯುವುದು ಮಾಡುತ್ತಿದ್ದನು ಹಾಗು ನನ್ನ ಸೀಲದ ಮೇಲೆ ಸಂಶಯ ಮಾಡಿದ್ದು ಅಲ್ಲದೇ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿರುತ್ತಾನೆ ಅಲ್ಲದೇ ಈ ಮೇಲ್ಕಂಡ ಜನರು ಕೂಡಿಕೊಂಡು ನನಗೆ ಹೊಡೆಬಡೆ ಮಾಡಿದ್ದು ಅನೀಲ ಅಸ್ತಳಕರ ನನ್ನ ಮೇ ಮೇಲೆ ಬಂದು ನನ್ನ ಮೈ ಮೇಲಿನ ಸೀರೆ ಜಗ್ಗಿ ನೀನು ಸರಿಯಾಗಿಲ್ಲ ನೀನ್ನವ್ವನ ನೀನ್ನ ತವರು ಮನೆಗೆ ಹೊಗು ಅಂತಾ ನನ್ನ ಕಾಲಿನ ಮೇಲೆ ಒದ್ದಿರುತ್ತಾನೆ, ಜಯಶ್ರೀ ಇವಳು ನನ್ನೋಂದಿಗೆ ದಿನಾಲು ತಕರಾರು ಮಾಡಿಕೊಂಡು ನೀನು ಚೆನ್ನಾಗಿ ಕೆಲಸ ಮಾಡುವುದಿಲ್ಲ ಅಂತಾ ಮಾನಸಿಕ ದೈಹಿಕ ಕಿರುಕಳ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

31 December 2014

Kalaburagi District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 30-12-2014 ರಂದು ಶ್ರೀ ಮಹ್ಮದ ಫಿರೋಜ @ ರೌಫ ತಂದೆ ಮಹ್ಮದ ಖುತುಬುದ್ದಿನ ಸಾಃ ಚನ್ನವೀರ ನಗರ ಕಲಬುರಗಿ, ರವರು ಮತ್ತು  ಗೆಳಯನಾದ ಮಹ್ಮದ ಫಯಾಜ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 27 ಇ.ಸಿ 8652 ನೇದ್ದರ ಮೇಲೆ ಫಿರ್ಯಾದಿಯನ್ನು ಹಿಂದೆ ಕೂಡಿಸಿಕೊಂಡು ಎಮ್.ಎ.ಟಿ ಕ್ರಾಸ್ ದಿಂದ ಕೆ.ಬಿ.ಎನ್ ದರ್ಗಾ ಕಡೆಗೆ ಹೋಗುತ್ತಿದ್ದಾಗ ಸಂತ್ರಾಸ್ ವಾಡಿ ರೋಡಿಗೆ ಇರುವ ಜಾನಿ ಪೆಟ್ರೊಲ ಬಂಕ ಹತ್ತಿರ ರೋಡಿನ ಮೇಲೆ ಸುಜಕಿ ಎಕ್ಸೆಸ್ ಮೋ. ಸೈ ನಂ. ಕೆ.ಎ 32 ಇ.ಸಿ 772 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ ರಾಂಗ ಸೈಡಿನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತು ಹೊರಟ ಮೋಟಾರ ಸೈಕಲಕ್ಕೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಪಂಡಿತ ತಂದೆ ಶೀವರಾಯ ದೇವಂತಗಿ ರವರು ದಿನಾಂಕ 29-12-2014 ರಂದು ರಾತ್ರಿ 10:00 ಗಂಟೆಗೆ ಮಾರ್ಗ ಸೂಚಿ 55 ಕಲಬುರಗಿ ಜವಳಿ (ಡಿ) ಬಸ್ ನಂ ಕೆಎ-32-ಎಫ್-1501 ನೇದ್ದರಲ್ಲಿ ಸಾರಾಯಿ ಕುಡಿಯಲು ಬೇಡ ಅಂತಾ ಅಂದಿದಕ್ಕೆ ಜವಳಿ (ಡಿ) ಗ್ರಾಮದ ಅಗಸಿ ಹತ್ತಿರ ಬಸ್ ಚಲಾಯಿಸುತ್ತಿದ್ದಾಗ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬಸ್ಸಿನ ಮುಂದಿನ ಗ್ಲಾಸಿಗೆ ಕಲ್ಲು ಹೊಡೆದು 25,000/- ನಷ್ಟ ಪಡಿಸಿದ ಬಾಬು ತಂದೆ ಸಿದ್ದಣ್ಣ ಬನಶೇಟ್ಟಿ ಸಾ: ಜವಳಿ (ಡಿ) ಇತನ ಮೇಲೆಸೂಕ್ತಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.