POLICE BHAVAN KALABURAGI

POLICE BHAVAN KALABURAGI

15 December 2014

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಪೂರ ಠಾಣೆ : ದಿನಾಂಕ 14-12-2014 ರಂದು  ಅಫಜಲಪೂರ ಪಟ್ಟಣದ .ಪಿ.ಎಮ್.ಸಿ ಆವರಣದ ಸಾರ್ವಜನೀಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೊಡಲು .ಪಿ.ಎಮ್.ಎಫ್.ಸಿ ಅಡತಿ ಕಟ್ಟದ ಮುಂದೆ ಇದ್ದ ಖುಲ್ಲಾ ಜಾಗದಲ್ಲಿ ಗುಂಪು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತ ದಾಳಿ ಮಾಡಿ,  11  ಜನರಿನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1. ಬಸವರಾಜ ತಂದೆ ಭೀಮಶಾ ಮ್ಯಾಳೇಸಿ  2. ರಾಜಕುಮಾರ ತಂದೆ ಮಲ್ಲಪ್ಪ ಗುಣಾರಿ  3.ದೀಪಕ ತಂದೆ ಅಪ್ಪಾಸಾಹೇಬ ಕಾಂಬ್ಳೆ 4.ಶೀವಾನಂದ ತಂದೆ ಶರಣಪ್ಪ ಕುಮಸಗಿ. 5 ರಾಜೇಶ ತಂದೆ ಸಿದ್ದಣ್ಣ ಪಾಟೀಲ 6. ಪ್ರಶಾಂತ ತಂದೆ ಶಿವಶರಣಪ್ಪ ನಂದಿ 7. ಅಶೋಕ ತಂದೆ ಬಸಣ್ಣ ಬಟಗೇರಾ 8. ಶಾಂತು ತಂದೆ ಸಿದ್ದಪ್ಪ ಡಾಂಗೆ 9. ಸಿದ್ದಾರಾಮ ತಂದೆ ಶಾಮರಾಯ ಹುಂಚಡ್ಕಗಿ10. ಸಿದ್ದಲಿಂಗ ತಂದೆ ನಾಗಪ್ಪ ಗಂಟೆ  11. ಸುರೇಶ ತಂದೆ ಮಳೇಪ್ಪ ಅಂದೋಡಗಿ ಸಾ||  ಎಲ್ಲರು ಅಫಜಲಪೂರ. ಸದರಿಯವರಿಂದ ನಗದು ಹಣ  ಒಟ್ಟು 18400/- ರೂ ಮತ್ತು 52 ಇಸ್ಪೆಟ ಎಲೆಗಳುನ್ನು ಜಪ್ತಿ ಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಜಪೂರ ಠಾಣೆ : ದಿನಾಂಕ 14-12-2014 ರಂದು ಅಫಜಲಪೂರ ಪಟ್ಟಣದ ಘತ್ತರಗಾ ರೋಡಿಗೆ ಇರುವ ಮೋರಟಗಿ ಇವರ ಕಟ್ಟಿಗೆ ಅಡ್ಡಾದ ಹತ್ತಿರ ಸಾರ್ವಜನೀಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ,ಸಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 07 ಜನರನ್ನು ವಶಕ್ಕೆ ತೆಗೆದುಕೊಂಡು ಸದರಿಯವರನ್ನು ವಿಚಾರಿಸಲಾಗಿ 1. ರಾಚಪ್ಪ ತಂದೆ ಬಸವಂತ್ರಾಯ ದೇಸಾಯಿ 2. ಈರಣ್ಣ ತಂದೆ ಶ್ರೀಮಂತ ದೇಸಾಯಿ  3. ಇಮಾಮ ತಂದೆ ಕರೀಮಸಾಬ ಖುರೇಸಿ 4. ಜಗದೇವಪ್ಪ ತಂದೆ ಕಲ್ಯಾಣಿ ತಾರಾಪೂರ  5. ರೇವಣಸಿದ್ದಪ್ಪ ತಂದೆ ಮಲ್ಲಪ್ಪ ನಾಗಣಸೂರ  6. ರಾಮು ತಂದೆ ಕರೆಪ್ಪ ಕಾಂಬ್ಳೇ  7. ಬಸವರಾಜ ತಂದೆ ರೇವಪ್ಪ ಶೇಟ್ಟಿ ಸಾ|| ಎಲ್ಲರು ಅಪಜಲಪೂರ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಿಸಿದ್ದ ನಗದು ಹಣ 6920/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಸಿದ್ದಣ್ಣ ತಂದೆ ಬಸವರಾಜ ಕುಮ್ಮಾಣಿ ಸಾ|| ಕೋಳಕೂರ ರವರು ದಿನಾಂಕ 13.12.14 ರಂದು ಜೇವರ್ಗೀ ಪಟ್ಣದ ಹೊಸ ಬಸ್‌ನಿಲ್ದಾಣದ ಹತ್ತಿರ ರಸ್ತೆಯ ಪಕ್ಕದಲ್ಲಿ ತನ್ನ ಊರಿಗೆ ಹೋಗುವ ಸಲುವಾಗಿ ನಿಂತಿದ್ದಾಗ ಲಾರಿ ನಂ ಕೆಎ33-4940  ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನಿಂತಿದ್ದ ಫಿರ್ಯಾದಿದಾರನಿಗೆ ಡಿಕ್ಕಿ ಪಡಿಸಿ ಭಾರಿ ರಕ್ತ ಗಾಯ ಪಡಿಸಿ ಲಾರಿಯನ್ನು ಸ್ಥಳದಲ್ಲಿಯೆ ಬಿಟ್ಟು ಚಾಲಕನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಕುಮಾರಿ ಯಲ್ಲಮ್ಮ ತಂದೆ ಹುಚ್ಚಪ್ಪ ನಾಟಿಕಾರ ಸಾ|| ಹಳ್ಯಾಳ ಇವರು ದಿನಾಂಕ 14-12-2014 ರಂದು ಸಾಯಂಕಾಲ 5:00 ಗಂಟೆ ಸಮಯಕ್ಕೆ ನನ್ನ ತಮ್ಮ ಮಹೇಶ ಈತನು ನಮ್ಮ ಮನೆಯ ಪಕ್ಕದಲ್ಲಿ ಹುಂಚಿ ಗಿಡದ ಕೇಳಗೆ ಆಟ ಆಡುತ್ತಿದ್ದಾಗ, ನಮ್ಮ ಸಮಾಜದ ಖಾಜಪ್ಪ ತಂದೆ ಜಗದೇವಪ್ಪ ಬಳೂರ್ಗಿ ಈತನ ಮಗ ಪರಸುರಾಮ ಈತನು ಹುಂಚಿ ಗಿಡಕ್ಕೆ ಹುಂಚಿ ಕಾಯಿಯ ಸಂಬಂದ ಕಲ್ಲು ಹೊಡೆದಿದ್ದು, ಸದರಿ ಕಲ್ಲು ನನ್ನ ತಮ್ಮನಿಗೆ ಬಡೆದಿರುತ್ತದೆ ಇದರಿಂದ ನನ್ನ ತಮ್ಮ ನಾಗೇಶನು ಪರಶುರಾಮನೊಂದಿಗೆ ಜಗಳ ಮಾಡಿ ಒಂದು ಏಟು ಹೊಡೆದಿರುತ್ತಾನೆ, ಅದೆವಿಚಾರವಾಗಿ ಖಾಜಪ್ಪನ ಹೆಂಡತಿ ಮಂಗಲಾ ಇವಳು ನಮ್ಮೋಂದಿಗೆ ಜಗಳವಾಡಿದ್ದು ಸಾಯಂಕಾಲ 6:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಕ್ಕ ಚಂದಮ್ಮ ಹಾಗೂ ನನ್ನ ತಾಯಿ ಶಾಂತಾಬಾಯಿ ಮೂರು ಜನರು ನಮ್ಮ ಮನೆಯಲ್ಲಿದ್ದಾಗ 1. ಸಾಯಬಣ್ಣ ತಂದೆ ಜಗದೇವಪ್ಪ ಬಳೂರ್ಗಿ 2. ಖಾಜಪ್ಪ ತಂದೆ ಜಗದೇವಪ್ಪ ಬಳೂರ್ಗಿ 3. ಮಂಗಲಾ ಗಂಡ ಖಾಜಪ್ಪ ಬಳೂರ್ಗಿ 4. ಮಂಜುಬಾಯಿ ಗಂಡ ಸಾಯಬಣ್ಣ ಬಳೂರ್ಗಿ ಸಾ|| ಎಲ್ಲರೂ ಹಳ್ಯಾಳ ರವರು ಮನೆಯಲ್ಲಿ ಬಂದು ಅದರಲ್ಲಿ ಮಂಗಲಾ ಇವಳು ರಂಡೆರೆ ಎಲ್ಲಿ ಇದ್ದಿರಿ ನನ್ನ ಮಗನಿಗಿ ಹೊಡೆದು ಕಳಿಸಿರಿ ಅಂತಾ ಬಂದವರೆ ನನಗೆ ಸಾಯಬಣ್ಣ ಈತನು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದನು, ಆಗ ನನ್ನ ಅಕ್ಕ ಚನ್ನಮ್ಮ ಇವಳು ಬಿಡಿಸಲು ಬಂದಾಗ ಅವಳಿಗೆ ಖಾಜಪ್ಪ ಮತ್ತು ಮಂಗಲಾ ಇವರು ಕೈಯಿಂದು ಹೊಡೆದು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾರೆ, ಮಂಜುಬಾಯಿ ಇವಳು ನನ್ನ ಮುಖದ ಮೇಲೆ ತನ್ನ ಉಗುರಿನಿಂದ ಚೂರಿರುತ್ತಾಳೆ, ನನ್ನ ತಾಯಿ ಬಿಡಿಸಲು ಬಂದಾಗ ಅವಳಿಗೂ ಸಹ ಸಣ್ಣ ಪುಟ್ಟ ಗಾಯಗಳು ಆಗಿರುತ್ತವೆ, ನಂತರ ನಮಗೆ ಹೊಡೆಯುತ್ತಿದ್ದ ಎಲ್ಲರು ಹೊರಗೆ ಜನರು ಬರುವುದನ್ನು ನೋಡಿ ಮನೆಯಿಂದ ಹೊರಗೆ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿಂಬರ್ಗಾ ಠಾಣೆ : ಶ್ರೀ ಬಸಲಿಂಗಯ್ಯ ತಂದೆ ಶಿವಯೋಗಯ್ಯ ಹಿರೇಮಠ ಸಾ : ಜವಳಿ (ಡಿ) ಇವರು  ದಿನಾಂಕ 13-12-14 ರಂದು ಜವಳಿ (ಡಿ) ಗ್ರಾಮದ ಅಗಸಿ ಹತ್ತಿರ ತನಗೆ ಬಾಬು ತಂದೆ ಸಿದ್ದಣ್ಣ ಬನಶೇಟ್ಟಿ ಇವನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯ ಪಡಿಸಿ ಕಾಲಿನಿಂದ ಒದ್ದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14 December 2014

KALABURAGI DIST REPORTED CRIME

ಮಟಕಾ ಜೂಜುಕೋರನ ಬಂಧನ:
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 13/12/2014 ರಂದು ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಶ್ರೀ ಕಲ್ಲಪ್ಪ ಸಿಪಿಸಿ 265 ರವರೊಂದಿಗೆ ಠಾಣೆಯ ಜೀಪ್ ನಂ ಕೆ.ಎ 32, ಎಮ 1563 ನೇದ್ದರಲ್ಲಿ ಜವಳಿ (ಡಿ) ಗ್ರಾಮದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಶರಣ ನಗರದಲ್ಲಿ ಬಸ ನಿಲ್ದಾಣದ ಹತ್ತಿರ ಡಾಂಬರ್ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮೇಲೆ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಬಾತ್ಮಿ ಪಡೆದು ಪಂಚರಾದ ಶ್ರೀ ಬಸವರಾಜ ತಂದೆ ನಾಗಪ್ಪಾ ಸಾ|| ನಿಂಬರ್ಗಾ, ಶ್ರೀ ಈರಯ್ಯ ತಂದೆ ಶರಣಯ್ಯ ಹಿರೇಮಠ ಸಾ|| ನಿಂಬರ್ಗಾ ಇವರೊಂದಿಗೆ ಜವಳಿ (ಡಿ) ಗ್ರಾಮದ ಶರಣ ನಗರದಲ್ಲಿ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಯಶವಂತರಾಯ ತಂದೆ ಚನ್ನಮಲ್ಲಪ್ಪ ಬಂದರವಾಡ ಸಾ|| ಜವಳಿ (ಡಿ) ಗ್ರಾಮ ಈತನನ್ನು ದಸ್ತಗೀರ ಮಾಡಿ ಆತನಿಂದ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 4050/-, ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು ಬಾಲ ಪೆನ್ನ, ಒಂದು ಬಿಳಿ ಬಣ್ಣದ ಮೋಬೈಲ ಅ.ಕಿ 500/-,  ಒಂದು ಡಿಸ್ಕವರ ಮೊಟಾರ ಸೈಕಲ ನಂ. ಕೆ.ಎ 37, ಎಸ್ 6374 ಅ.ಕಿ 15000/- ನೇದ್ದವುಗಳನ್ನು ವಶಪಡಿಸಿಕೊಂಡು ಆತನ ವಿರುದ್ದ ನಿಂಬರ್ಗಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ಕಳವು ಪ್ರಕರಣ:
ವಿಶ್ವವಿದ್ಯಾಲಯ ಪೊಲೀಸ ಠಾಣೆ:ದಿನಾಂಕ: 13.12.2014 ಶ್ರೀ. ಜಿ.ಎಮ್ ಕೈಲಾಸಪತಿ ತಂದೆ ಜಿ.ಎಮ್ ಚನ್ನಬಸಪ್ಪ, ಸಾ|| ಸಜ್ಜನ ಲೇಔಟ ಕೋಟನೂರ (ಡಿ) ಕಲಬುರಗಿ ರವರು ಠಾಣೆಗೆ ಹಾಜರಾಗಿ ತಾನು ದಿನಾಂಕ: 09/12/2014 ರಂದು ರಾತ್ರಿ 10:00 ಗಂಟೆಗೆ ಮನೆಗೆ ಕೀಲಿ ಹಾಕಿಕೊಂಡು ಕರ್ನೂಲದಲ್ಲಿ ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ದಿನಾಂಕ: 11/12/2014 ರಂದು ಬೆಳಗಿನ ಜಾವ 0200 ಗಂಟೆಯ ಸುಮಾರಿಗೆ ಕಲಬುರಗಿಯ ನಮ್ಮ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಮುಖ್ಯ ದ್ವಾರದ ಕೀಲಿ ಮುರಿದ ಹಾಗೆ ಕಾಣಿಸಿದ್ದು ನಾನು ಒಳಗಡೆ ಹೋಗಿ ನೋಡಲಾಗಿ ಮನೆಯಲ್ಲಿ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದು ಕಂಡು ಮನೆಯಲ್ಲಿ ಹುಡುಕಾಡಲಾಗಿ ದೇವರ ಮನೆಯಲ್ಲಿ ಇಟ್ಟಿದ್ದ ಒಟ್ಟು ಒಟ್ಟು ಬೆಳ್ಳಿ ಬಂಗಾರ ನಗದು ಹಣ ಸೇರಿ 45,500/- ಬೆಲೆಬಾಳುವ ಸಾಮಾನುಗಳನ್ನು ಯಾರೋ ಕಳ್ಳರು ದಿ: 09/12/2014 ರಂದು ರಾತ್ರಿ 10:00 ಗಂಟೆಯಿಂದ ದಿ: 11/12/2014 ರ ಬೆಳಿಗ್ಗೆ 0200 ಗಂಟೆಯ ಮದ್ಯದ ಅವಧಿಯಲ್ಲಿ ಮನೆಯ ಬಾಗಿಲು ಮುರಿದು ಒಳಗೆ ಪ್ರವೇಶ ಮಾಡಿ ಈ ಮೇಲಿನ ಬೆಳ್ಳಿ, ಬಂಗಾರ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವ ವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ:13-12-2014 ರಂದು ಶ್ರೀ. ಹಣಮಂತ ತಂದೆ ಲಾಡಪ್ಪ ಹಳಿಗೋಡೆ ಸಾ: ದರ್ಗಾ ಶಿರೂರುರವರು ಠಾಣೆಗೆ ಹಾಜರಾಗಿ ದಿನಾಂಕ 13-12-2014 ರಂದು 01;30 ಪಿ.ಎಂ ಗಂಟೆ ಸುಮಾರಿಗೆ ಮಾದನ ಹಿಪ್ಪರಗಾ ಗ್ರಾಮದ ಶ್ರೀ ಶಿವಲಿಂಗೇಶ್ವರ ಮಠದಲ್ಲಿ ಉಚಿತ ಸಾಮೂಹಿಕ ವಿವಾಹದ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ನಾನು ಮತ್ತು ನಮ್ಮೂರಿ ಪಂಡಿತ ತಂದೆ ಹಣಮಂತ ಹಳಿಗೋಡೆ ರವರೊಂದಿಗೆ  ಶ್ರೀ ಶಿವಲಿಂಗೇಶ್ವರ ಮಠದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ಊಟ ತಗೆದುಕೊಳ್ಳುತ್ತಿರುವಾಗ ನನ್ನ ಹಿಂದಿನಿಂದ ಒಬ್ಬ ವ್ಯಕ್ತಿ ಬಂದು ನನ್ನ ಪ್ಯಾಂಟಿನ ಹಿಂದಿನ ಜೇಬಿನಲ್ಲಿ ಕೈ ಹಾಕಿ ನನ್ನ ಪಾಕೀಟ ತಗೆದುಕೊಂಡು ಹೊಗುತ್ತಿರುವಾಗ ನಾನು ಕಳ್ಳ ಕಳ್ಳ ಅಂತಾ ಕೂಗಿದಾಗ ಅಲ್ಲಿನ ಸಾರ್ವಜನಿಕರು ಹಿಡಿದು ಪೊಲೀಸ್ ರಿಗೆ ಒಪ್ಪಿಸಿದ್ದು ಆತನಿಗೆ ವಿಚಾರಿಸಿಲಾಗಿ ತನ್ನ ಹೆಸರು ಮೋಹ್ಮದ ರಫೀಕ್ ತಂದೆ ಮೊಹ್ಮದ ಇಸ್ಮಾಯಿಲ್ ಸಾ:ಆಶ್ರಯ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಅವನನ್ನು ಚೆಕ್ಕ ಮಾಡಲಾಗಿ ನನ್ನ ಹಿಂದಿನ ಜೇಬಿನೀಂದ ಕಳವು ಮಾಡಿದ 5000/- ಸಾವಿರ ರೂಪಾಯಿಯಲ್ಲಿ ಕೇವಲ 2000/- ಸಾವಿರ ರೂಪಾಯಿ ಮಾತ್ರ ಇದ್ದು ಉಳಿದ ಹಣ ಯಾರಿಗೆ ಕೊಟ್ಟಿದ್ದಾನೋ, ಎಲ್ಲಿ ಬಿಸಾಕಿದ್ದನೋ ಗೊತ್ತಿರುವುದಿಲ್ಲ ನನ್ನ ಜೇಬಿನಲ್ಲಿನ ಹಣ ಕಳುವು ಮಾಡಿದವನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.