POLICE BHAVAN KALABURAGI

POLICE BHAVAN KALABURAGI

28 November 2014

Kalaburagi District Reported Crimes

ಅಪಹರಣ ಪ್ರಕರಣ :
ಮಳಖೇಡ ಠಾಣೆ : ಶ್ರೀ ಅಶೋಕ ತಂದೆ ಪಾಂಡುರಂಗ ತಳವಾರ ಸಾ: ಕಾಚೂರ ತಾ: ಸೇಡಂ ಇವರು ದಿನಾಂಕ: 09-11-2014 ರಂದು ರವಿವಾರ ಇದ್ದುದ್ದರಿಂದ ನನ್ನ ಮಗನಾದ ಜಗನ್ನಾಥ ಇತನು ಮುಂಜಾನೆ ಮನೆಯಿಂದ ಊಟ ಮಾಡಿಕೊಂಡು ಊರಲ್ಲಿ ಆಟವಾಡಲು ಹೋದನು. ಮುಂಜಾನೆ 10:00 ಗಂಟೆಯವರೆಗೆ ಆಟವಾಡುತ್ತಿದ್ದು ನಂತರ, ಸಾಯಂಕಾಲ 15:00 ಗಂಟೆಯವರೆಗೆ ಊರಲ್ಲಿ ಕ್ರಿಕೇಟ ಆಟವಾಡುತ್ತಿದ್ದನು. ಆಗ ನಾನು ಕೆಲಸದ ನಿಮಿತ್ಯಾ ಹೊಲಕ್ಕೆ ಹೊದೇನು. ನಂತರ ರಾತ್ರಿ ನನ್ನ ಮಗ ಜಗನ್ನಾಥ ಇತನು ಮನೆಗೆ ಬರಲಿಲ್ಲಾ. ನಾನು ಮತ್ತು ನನ್ನ ಹೆಂಡತಿ ಊರಲ್ಲಿ ವಿಚಾರಿಸಲು ನನ್ನ ಮಗನ ಬಗ್ಗೆ ಪತ್ತೆಯಾಗಲಿಲ್ಲಾ. ನನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ನಾನು ಇಲ್ಲಿಯವರೆಗೆ ಎಲ್ಲಾ ಬೀಗರು ನೆಂಟ್ಟರಲ್ಲಿ ವಿಚಾರಣೆ ಮಾಡಲು ನನ್ನ ಮಗನ ಬಗ್ಗೆ ಯಾವುದೆ ಮಾಹಿತಿ ಸಿಗಲಿಲ್ಲಾ. ನನ್ನ ಅಪ್ರಾಪ್ತ ವಯಸ್ಸಿನ ಮಗನಾದ ಜಗನ್ನಾಥ ಇತನು ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಶೋಕ ತಂದೆ ರೇವಪ್ಪ ಶೆಟ್ಟಿ ಸಾ : ಅಫಜಲಪೂರ ರವರು ದಿನಾಂಕ 08-11-2014 ರಂದು ರಾತ್ರಿ 11:30 ಗಂಟೆ ಸುಮಾರಿಗೆ ನಾನು ಅಂಗಡಿಯಿಂದ ನನ್ನ ಮೋ/ಸೈ ನಂಬರ ಕೆಎ-32 ಕೆ-4567 ಅಂತಾ ಇದ್ದು, ಚೆಸ್ಸಿ ನಂಬರ:- 8B536160H  ಇಂಜೆನ ನಂಬರ:- 8B536160H  MOdel No- 1998, ಅಂತಾ ಇದ್ದು, ಕಪ್ಪು ಬಣ್ಣದ್ದು ಇರುತ್ತದೆ. ಅದರ ಅಂದಾಜು 30,000/- ರೂ ಕಿಮ್ಮತ್ತಿನದರ ಮೇಲೆ ನಮ್ಮ ಮನೆಗೆ ಬಂದು ನಮ್ಮ ಅಣ್ಣನ ಮನೆಯ ಮುಂದೆ ಮೋ/ಸೈ ನಿಲ್ಲಿಸಿ ಮನೆಗೆ ಹೊಗಿರುತ್ತೆನೆ, ಸದರಿ ಮೋ/ಸೈ ನಿಲ್ಲಿಸಿದ್ದು ನಮ್ಮ ಮನೆಯ ಮುಂದಿನಿಂದ ಹಾಗೂ ಕಿಡಕಿಯಿಂದ ನೊಡಿದರೆ ಕಾಣುತ್ತದೆ, ಅಂದಾಜು ರಾತ್ರಿ 12:30 ಗಂಟೆ ಸುಮಾರಿಗೆ ನಾನು ಮೂತ್ರ ಮಾಡಲು ಎದ್ದಾಗ ನನ್ನ ಮೋ/ಸೈ ನಾನು ನಿಲ್ಲಿಸಿದ ಸ್ಥಳದಲ್ಲೆ ಇದ್ದು ನಂತರ ಬೆಳಗಿನ ಜಾವ ಸುಮಾರು 05:00 ಗಂಟೆ ಎದ್ದು ಮನೆಯಿಂದ ಹೊರಗೆ ಬಂದು ನೋಡಲಾಗಿ ನನ್ನ ಮೋ/ಸೈ ಇರಲಿಲ್ಲ, ಸದರಿ ನನ್ನ ಮೋ/ಸೈ ನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 November 2014

Kalaburgi District Press Note

ಪತ್ರಿಕಾ ಪ್ರಕಟಣೆ

ಪೊಲೀಸ ಪೇದೆ ಸಿ.ಇ.ಟಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಬಹಿರಂಗ ಪಡಿಸಿದ ಪ್ರಮುಖ ಆರೋಪಿತರ ಪೈಕಿ ಸಿದ್ದಣ್ಣ ದೇವದುರ್ಗ ಬಂಧನ, 73,03,500 ರೂ ಜಪ್ತಿ.
ದಿನಾಂಕ 16/11/2014 ರಂದು ನಡೆದ ಪೊಲೀಸ್ ಪೇದೆಗಳ ನೇಮಕಾತಿ ಸಿ.ಇ.ಟಿ ಪರೀಕ್ಷೆಯಲ್ಲಿಯ ಉತ್ತರಗಳು ಬಹಿರಂಗಗೊಂಡಿದ್ದು, ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಗುನ್ನೆ ನಂ. 290/2014 ಕಲಂ. 420, 120(ಬಿ) ಐ.ಪಿ.ಸಿ ಗುನ್ನೆ ವರದಿಯಾಗಿದ್ದು ಇರುತ್ತದೆ. ಪ್ರಕರಣದಲ್ಲಿ ಮಾನ್ಯ ಐಜಿಪಿ ಈವ ಕಲಬುರಗಿ, ಮಾನ್ಯ ಎಸ್.ಪಿ ಕಲಬುರಗಿ ರವರ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳಿಸಿ ಪ್ರಕರಣದಲ್ಲಿ ಈಗಾಗಲೇ 13 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಕಾಲಕ್ಕೆ ಪ್ರಕರಣದ ಆರೋಪಿತನಾದ ಸಿದ್ದಣ್ಣ ತಂದೆ ಹಣಮಂತರಾಯ ದೇವದುರ್ಗ ವ: 27 ವರ್ಷ ಜಾ: ಉಪ್ಪಾರ ಉ: ಎಸ್.ಡಿ.ಎ ಗ್ರಾಮೀಣ ಅಭಿವ್ರದ್ದಿ, ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತಿ ಕಚೇರಿ ಮಾದಗೊಂಡನಹಳ್ಳಿ ತಾ: ಮಾಗಡಿ ಜಿ: ರಾಮನಗರ ಹಾ.ವ: ಹಂಚನಾಳ (ಎಸ್.ವೈ) ತಾ: ಜೇವರ್ಗಿ ಜಿ: ಕಲಬುರಗಿ ಈತನನ್ನು ನಿನ್ನೆ ದಿನಾಂಕ 26/11/2014 ರಂದು ರಾತ್ರಿ 9:00 ಗಂಟೆಗೆ ಹಿಡಿದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಸದರಿಯವನು ದಿನಾಂಕ 16/11/2014 ರಂದು ನಡೆದ ಪೊಲೀಸ್ ಪೇದೆ ನೇಮಕಾತಿ ಸಿ.ಇ.ಟಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಬೆಂಗಳೂರು ಮೂಲದ 2 ಜನರು ತನಗೆ ನೀಡಿದ್ದು ಅದನ್ನು ತಾನು ಅಶೋಕ ಒಡೆಯರ ಹಾಗು ಇತರರ ಮೂಲಕ ಪೊಲೀಸ ಪೇದೆ ಹುದ್ದೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾರಾಟ ಮಾಡಿ ಅವರಿಂದ ಹಣ ಪಡೆದುಕೊಂಡಿರುವ ಬಗ್ಗೆ ವಿಚಾರಣೆ ಕಾಲಕ್ಕೆ ತಿಳಿಸಿದ್ದು ಸದರಿ ಆರೋಪಿತನಿಂದ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿ ಸಂಗ್ರಹಿಸಿದ ಒಟ್ಟು 73,03,500=00 ರೂಪಾಯಿಗಳನ್ನು ತನಿಖೆ ಕಾಲಕ್ಕೆ ಹಾಜರ ಪಡಿಸಿದ್ದು ಜಪ್ತು ಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನ ವಿಚಾರಣೆ ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ. ಪ್ರಶ್ನೆ ಪತ್ರಿಕೆ ಬಹಿರಂಗ ಪಡಿಸಿದ ಇನ್ನೂ ಕೆಲವು ಪ್ರಮುಖ ಆರೋಪಿತರ ಪತ್ತೆಗಾಗಿ ಜಾಲ ಬೀಸಲಾಗಿದೆ.

Kalaburagi Police Press Note

ಪತ್ರಿಕಾ ಪ್ರಕಟಣೆ ಎಸ್.ಪಿ. ಕಲಬುರಗಿರವರಿಂದ
ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ  ರಾಜ್ಯ, ಬೆಂಗಳೂರುರವರು ದಿನಾಂಕ: 27-11-2014 ರಂದು ಬೆಂಗಳೂರುನಿಂದ ವಿಶೇಷ ವಿಮಾನದ ಮೂಲಕ ಬೀದರದಿಂದ ಕಲಬುರಗಿ ನಗರಕ್ಕೆ ಆಗಮಿಸಿ ಐವಾನ-ಎ-ಶಾಹಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿ ದಿನಾಂಕ 28-11-2014 ರಂದು ಬೆಳಿಗ್ಗೆ 11:00 ಗಂಟೆಗೆ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಸಭಾಂಗಣ ಮಿನಿ ವಿಧಾನ ಸೌಧ ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿ ನಂತರ ಕೆ.ಸಿ.ಟಿ. ಕಾಲೇಜ ಆವರಣದಲ್ಲಿ ಜರುಗುವ ಸಭೆಯಲ್ಲಿ ಭಾಗವಹಿಸಿ ತದನಂತರ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ ಪ್ರಾದೇಶಿಕ ಕೇಂದ್ರ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಕಲಬುರಗಿಯಿಂದ ರಸ್ತೆಯ ಮೂಲಕ ಸಾಯಂಕಾಲ 06-00 ಗಂಟೆಗೆ ನಿರ್ಗಮಿಸಿ ಬೀದರ ಎರಬೇಸಗೆ ತೆರಳಲಿರುವರು.
ಹೈದ್ರಾಬಾದ ಕರ್ನಾಟಕ  ಪ್ರದೇಶದಲ್ಲಿ ಇರುವ ಬೀದರ, ಯಾದಿಗಿರ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಮಾನ್ಯ ಮುಖ್ಯಮಂತ್ರಿಯವರಿಗೆ ಭೇಟಿಯಾಗುವ ಕುರಿತು ಕಲಬುರಗಿಗೆ ಬರುವವರಿದ್ದರೆ ಅವರಿಗೆ ವಾಹನ ಪಾಸುಗಳನ್ನು ಜಿಲ್ಲಾ ವಿಶೇಷ ಶಾಖೆ ಪೊಲೀಸ್ ಭವನ ಕಲಬುರಗಿಯಲ್ಲಿ ಪಡೆದುಕೊಳ್ಳಲು ಈ ಮೂಲಕ ತಿಳಿಯಪಡಿಸಲಾಗಿದೆ. ಸಂಪರ್ಕಿಸಬಹುದಾದ ದೂರವಾಣಿ ಸಂ. 08472-263610.