POLICE BHAVAN KALABURAGI

POLICE BHAVAN KALABURAGI

24 June 2014

Gulbarga District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ರವಿಕುಮಾರ ತಂದೆ ಶಿವರಾಜ ಪಾಟೀಲ್ ಸಾ:ಉಪಳಾಂವ ತಾ|| ಜಿ|| ಗುಲಬರ್ಗಾ ರವರ ತಂದೆಯವರು  ದಿನಾಂಕ: 23-06-2014 ರಂದು ಬೆಳಿಗ್ಗೆ 5-30 ಗಂಟೆಯ ಸುಮಾರಿಗೆ ತನ್ನ ತಂದೆ ಶಿವರಾಜ ಪಾಟೀಲ್ ಇವರು ಕೆಲಸಕ್ಕೆಂದು ತಮ್ಮ ಹೊಂಡಾ ಪ್ಲೇಜರ್ ಸ್ಕೂಟಿ ಮೊಪೆಡ್ ನಂ: ಕೆಎ-32-ಆರ್ 7535 ನೇದ್ದರ ಮೇಲೆ ಮನೆಯಿಂದ ಒಬ್ಬರು ಹೋದರು. ನಂತರ 6-10 ,ಎಮಕ್ಕೆ ಸಂಜೀವಕುಮಾರ ಅಟ್ಟೂರೆಂಬುವವನು ನನ್ನ ತಂದೆಯ ಮೊಬೈಲದಿಂದ ಮಾಹಿತಿ ತಿಳಿಸಿದ್ದೇನೆಂದರೆ, ಹುಮ್ನಾಬಾದ ರಿಂಗ ರೋಡ ಹತ್ತೀರ ನಿಮ್ಮ ತಂದೆಯವರಿಗೆ ಅಪಘಾತವಾಗಿರುತ್ತದೆ. ಬೇಗ ಬಾ ಅಂತಾ ಹೇಳಿದನು. ಆಗ ಗಾಬರಿಗೊಂಡು ನಾನು ಹುಮ್ನಾಬಾದ ರಿಂಗ ರೋಡ ಹತ್ತೀರ ಬಂದು ನೋಡಲು ನನ್ನ ತಂದೆಗೆ ತಲೆಯ ಹಿಂದುಗಡೆ ಎಡಭಾಗದಲ್ಲಿ ಭಾರಿ ರಕ್ತಗಾಯವಾಗಿರುತ್ತೆ, ಆಗ ನನ್ನ ತಂದೆಗೆ ವಿಚಾರಿಸಲು ಊರಿಂದ ಹೋಟಲ್ಗೆ ಹೋಗುವಾಗ ಹುಮ್ನಾಬಾದ ರಿಂಗ ರೋಡದಿಂದ ಗಂಜನ ಕಡೆ ಹೋಗುವಾಗ ಅದೇ ವೇಳೆಗೆ ಸೇಡಂ ರಿಂಗ ರೋಡ ಕಡೆಯಿಂದ ಒಂದು ಲಾರಿ ಚಾಲಕ ತನ್ನ ಲಾರಿಯನ್ನು ಅತಿ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದು ಇರುತ್ತದೆ. ಅಂತಾ ಹೇಳಿದರು. ನೋಡಲಾಗಿ ಅವರಿಗೆ ತಲೆಯ ಹಿಂದುಗಡೆ ಎಡಭಾಗದಲ್ಲಿ ಭಾರಿ ರಕ್ತಗಾಯ, ಎದೆಗೆ ,ಟೊಂಕಕ್ಕೆ ಗುಪ್ತ ಪಟ್ಟಾಗಿದ್ದು, ಹಣೆಗೆ , ಮೂಗಿಗೆ ಗಲ್ಲಕ್ಕೆ ತರಚಿದ ಗಾಯಗಳಾಗಿದ್ದವು. ನೋಡಲಾಗಿ ಅಪಘಾತ ಪಡಿಸಿದ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅದರ ನಂ: ನೋಡಲಾಗಿ ಎಪಿ-21 ಟಿವೈ 3159 ನೇದ್ದು ಇರುತ್ತದೆ ನನ್ನ ತಂದೆಯವರಿಗೆ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಬಸವೇಶ್ಚರ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿದ್ದು, ಉಪಚಾರದಲ್ಲಿ ಗುಣಮುಖನಾಗದೆ 7-30 ,ಎಮಕ್ಕೆ ಮೃತ ಪಟ್ಟಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ಶ್ರೀ ಕುಬೇರ ತಂದೆ ದೇವಿಂದ್ರಪ್ಪ ಗಡೆದ್ ಸಾ|| ಬೋಧನ ವಾಡಿ ತಾ|| ಆಳಂದ ರವರು ದಿನಾಂಕ: 23.06.2014 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ತಮ್ಮೂರಿನಿಂದ ಕ್ರೋಜರ್ ಜೀಪ ನಂ: ಕೆಎ-32-ಬಿ-2916 ನೇದ್ದರಲ್ಲಿ ತಾನೂ & ತನ್ನ ಹೆಂಡತಿ ಶಿವಲೀಲಾ ಮಗ ಶರಣು ಹಾಗೂ ಶಿವಾನಂದ , ಪ್ರೇಮಾ ಮತ್ತು ಹೆಂಡತಿಯ ತಂಗಿಯ ಮಗ ಮಲ್ಲಿಕಾಜುF@ ಅಪ್ಪು ತಂದೆ ಶರಣಬಸಪ್ಪ ಬಿರಾದಾರ ಸಾ|| ಹಿರೇನಾಗಾಂವ ಇವರೊಂದಿಗೆ ಬಂದು ಕುಪೇಂದ್ರ ರೂಳೆ ಇವರ ಮಗನ ತೋಟ್ಟಿಲು ಕಾರ್ಯಕ್ರಮ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಹೋಗುವ ಸಂಬಂಧ ಸದರ್ ಕ್ರೂಜರದಲ್ಲಿ ಹೊರಟು ಸಾಯಂಕಾಲ ಕೂರಿಕೋಟಾ ಗ್ರಾಮದಿಂದ ಸಿರಾಗಾಪೂರ ದೇವಿ ಗೂಡಿಯ ಹತ್ತೀರ ಅಲ್ಲಿ ದೇವಿಯ ದಶFನ ಮಾಡುವ ಸಂಬಂಧ ಎಲ್ಲರೂ ಇಳಿದು ಕ್ರೂಜರನ್ನು ಬಬಲಾದ ರೋಡಿನ ಕಡೆ ನಿಲ್ಲಿಸಿ ದೇವರಿಗೆ ಹೋಗಿ ದರ್ಶನ ಮಾಡಿ ಮರಳಿ ಸದರ್ ಕ್ರೂಜರ್ದಲ್ಲಿ ಕುಳಿತುಕೊಂಡು ಹೋಗುವ ಸಂಬಂಧ ರೋಡಿನ ಬದಿಯಲ್ಲಿ ಮಲ್ಲಿಕಾರ್ಜುನ ಬಿರಾದಾರ ನಿಂತಾಗ ಅಂದಾಜು ಸಾಯಂಕಾಲ 4 ಗಂಟೆ ಸುಮಾರಿಗೆ ಗುಲಬರ್ಗಾ ಕಡೆಯಿಂದ ಒಂದು ಬಜಾಜ ಡಿಸ್ಕವರಿ ಮೋ.ಸೈ ನಂ: ಕೆಎ-32-ಇಇ-4163 ನೇದ್ದರ ಚಾಲಕನು ತನ್ನ ಮೋ.ಸೈ ಅನ್ನು ಅತಿ ವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಬಂದವನೆ ರೋಡಿನ ಬದಿಗೆ ನಿಂತ ಮಲ್ಲಿಕಾರ್ಜುನನಿಗೆ ಡಿಕ್ಕಿ ಹೊಡೆದಿದ್ದರಿಂದ ಅವನ ಬಲ ಮೇಲಕಿನ ಗಲ್ಲದ ವರೆಗೆ ಭಾರಿ ಕಂದು ಗಟ್ಟಿದ ರಕ್ತಗಾಯವಗಿದ್ದು ಬಲಗೈ ಮೊಳಕೈ ಮೇಲೆ ತರಚಿದ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ತನಿಗೆ ಉಪಚಾರ ಕುರಿತು ನಾವೂ ತೆಗೆದುಕೊಂಡು ಬಂದ ಕ್ರೂಜರ್ದಲ್ಲಿ ಹಾಕಿಕೊಂಡು ಬಂದು 5-30 ಪಿ,ಎಂಕ್ಕೆ ಜಿಲ್ಲಾ ಸಕಾವರಿ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಲು ಮಲ್ಲಿಕಾಜುFನ ಈತನು ಮೃತ ಪಟ್ಟ ಬಗ್ಗೆ ವೈದ್ಯರು ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಕಲಾವತಿ ಗಂಡ ಬಸವರಾಜ ಅಳ್ಳಗಿ ಸಾ : ಮಣ್ಣುರ ರವರ ಗಂಡನಾದ ಬಸವರಾಜ ರವರು ನಮ್ಮ ಗ್ರಾಮದಲ್ಲಿ ಒಂದು ಜಾಗ ಕರೀದಿ ಮಾಡಿರುತ್ತಾರೆ, ಸದರಿ ಜಾಗವನ್ನು ನಮ್ಮ ಹೆಸರಿಗೆ ಮಾಡಿಕೊಳ್ಳಬೇಕು ಎಂದು ನಮ್ಮ ಯಜಮಾನರು ಈಗ ಕೆಲವು ದಿನಗಳ ಹಿಂದೆ ನಮ್ಮ ಮಣೂರ ಗ್ರಾಮದ ಗ್ರಾಮ ಪಂಚಾಯತ  ಕಾರ್ಯಾಲಯಕ್ಕೆ ಹೋಗಿ ಪಿ.ಡಿ. ರವರಿಗೆ ನಾನು ಒಂದು ಜಾಗಾ ಕರೀದಿ ಮಾಡಿದ್ದು, ಸದರಿ ಜಾಗಾವನ್ನು ನನ್ನ ಹೆಸರಿಗೆ ಮಾಡಿ ಅಂತಾ ಅಂದೆನು, ಆಗ ಸದರಿ ಪಿ.ಡಿ. ರವರು ಗ್ರಾಮ ಪಂಚಾಯತ ಅದ್ಯಕ್ಷರಾದ ರಮೇಶ ಬಾಕೆ ರವರಿಗೆ ಕೇಳುತ್ತೆನೆ ಅಂತಾ ಅಂದರು, ಆಗ ನನ್ನ ಗಂಡ ಅವರಿಗೆ ಯಾಕ ಕೇಳುತ್ತಿರಿ ನಿಮ್ಮ ಕೆಲಸ ನೀವು ಮಾಡಿ ಅಂತ ಹೇಳಿರುತ್ತಾರೆ, ಹಿಗಿದ್ದು ನಿನ್ನೆ ದಿನಾಂಕ 22-06-2014 ರಂದು ಬೆಳಿಗ್ಗೆ 9:00 ಗಂಟೆ ಸಮಯಕ್ಕೆ ನಾನು ಮತ್ತು ನನ್ನ ಗಂಡ ಮನೆಯಲ್ಲಿದ್ದಾಗ ನನ್ನ ಗಂಡನ ಮೋಬೈಲಿಗೆ ರಮೇಶ ಬಾಕೆ ಇವರು ಪೋನ ಮಾಡಿ ಏನೊ ಸೂಳೆ ಮಗನೆ ಗ್ರಾಮ ಪಂಚಾಯತಿಯಲ್ಲಿ ನನಗ ಏನು ಬೈದ ಬಂದಿ ಅಂತಾ ಅವಾಚ್ಯವಾಗಿ ಬೈದು, ನಿಂದು ತಿಂಡಿ ಇದ್ದರೆ ಶಿವೂರ ಕ್ರಾಸಿಗೆ ಬಾ, ನಿನ್ನನ್ನು ಒಂದು ಕೈ ನೊಡಿಕೊಳ್ಳುತ್ತೆನೆ ಅಂತಾ  ಹೇಳಿರುತ್ತಾರೆ ಅಂತಾ ನನ್ನ ಗಂಡ ನನಗೆ ತಿಳಿಸಿರುತ್ತಾರೆ, ನಂತರ ನನ್ನ ಗಂಡ ಶಿವೂರ ಕ್ರಾಸಿಗೆ ಹೋಗಿ ಬರ್ತಿನಿ ಅಂತಾ ಹೇಳಿ, ನನ್ನ ಗಂಡ ಹಾಗೂ ಬಸವರಾಜ ಮಾಹಾದೇವಪ್ಪ ಕರೂಟಿ, ಮಾಹಾಂತೇಶ ತಂದೆ ಚಂದಪ್ಪ ವಾಯಿ ಮೂರು ಜನರು ಸೇರಿ ನಮ್ಮ ಬೋಲೆರೊ ವಾಹನದಲ್ಲಿ ಮನೆಯಿಂದ ಹೋಗಿರುತ್ತಾರೆ, ನಂತರ ನನ್ನ ಗಂಡ ಅಂದಾಜು 11:00 ಎಮ್ ಗಂಟೆ ಸಮಯಕ್ಕೆ ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ, ನಾವು ಮೂರು ಜನರು ಶಿವೂರ ಕ್ರಾಸ ದಾಟಿ ಕರಜಗಿ ಕಡೆಗೆ ಬರುತ್ತಿದ್ದಾಗ, ಮನೋಹರ ರಾಮನಗರ ರವರ ಇಟ್ಟಂಗಿ ಬಟ್ಟಿ ಹತ್ತಿರ ಅಂದಾಜು 10:30 ಎಎಮ್ ಸುಮಾರಿಗೆ ರೋಡಿನ ಮೇಲೆ ರಮೇಶ ಬಾಕೆ ರವರು ಗೌಡಪ್ಪಗೌಡ ತಂದೆ ಸಿದ್ದಪ್ಪ ಚಿಕ್ಕಮಣೂರ ಹಾಗೂ ಶಾಹುರಸಿದ್ದ ಜಮಾದಾರ ಇವರೊಂದಿಗೆ ನಿಂತುಕೊಂಡಿದ್ದರು, ನಾವು ಸಹ ನಮ್ಮ ಬೊಲೆರೊ ನಿಲ್ಲಿಸಿ ಅವರ ಹತ್ತಿರ ಹೋಗಿ ರಮೇಶ ಬಾಕೆ ರವರಿಗೆ ಯಾಕ್ರಿ ಸಾಹುಕಾರ ಬರೊದಕ್ಕೆ  ಹೇಳಿರಲ್ಲಾ ಯಾಕ ಅಂತಾ ಕೇಳಿದೆನು, ನಾನು ಕೇಳುತ್ತಿದ್ದಂತೆ ಸಾಹುಕಾರ ಇವರ ಜೋತೆಗೆ ನಿಂತಿದ್ದ ಗೌಡಪ್ಪ ಚಿಕ್ಕಮಣೂರ ಮತ್ತು ಶಾಹುರಸಿದ್ದ ಜಮಾದಾರ ಇಬ್ಬರು ನನಗೆ ಏಕಾಏಕಿ ಕೈಯಿಂದ ಮತ್ತು ಅಲ್ಲಿಯೆ ಬಿದ್ದ ಒಂದು ಕಲ್ಲಿನಿಂದ ನನ್ನ ಮೈ ಕೈಗೆ ಹೊಡೆದಿರುತ್ತಾರೆ, ಶಾಹುರಸಿದ್ದ ಈತನು ನನಗೆ ಎಲ್ಲಿಯೂ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡನು, ನಂತರ ಗೌಡಪ್ಪ ಈತನು ನನ್ನ ಮೈ ಕೈಗೆ ಹೊಡೆದಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಮಲಾಪೂರ ಠಾಣೆ : ಶ್ರೀ ರಾಜಶೇಖರ ತಂದೆ ಮಹಾದೇವಪ್ಪ ಶರಣ ಸಾ; ಜೇರಪೇಡ ಹುಮನಾಬಾದ ತಾ; ಹುಮನಾಬಾದ ಜಿ; ಬೀದರ ರವರ ತಂಗಿಯಾದ ಸುನೀತಾ ಇವಳಿಗೆ ಈಗ 14 ವರ್ಷದ ಹಿಂದೆ ಡೊಂಗರಗಾಂವ ಗ್ರಾಮದ ರವಿ ತಂದೆ ರಾಚಪ್ಪ ವಡ್ಡನಕೇರಿ ಇವರಿಗೆ ಕೊಟ್ಟು ಲಗ್ನ ಮಾಡಿದ್ದು, ಅವರಿಗೆ ಮೂರು ಜನ ಗಂಡ ಮಕ್ಕಳು ಇರುತ್ತಾರೆ. ನಮ್ಮ ಭಾವನ ತಮ್ಮ ಕುಪೇಂದ್ರ ಅಂತ ಇದ್ದು, ಆತನು ತನ್ನ ಖಾಸಾ ಅಕ್ಕ ಮಲ್ಲಮ್ಮಳ ಮಗಳಾದ ಸುಧಾ ಇವಳೊಂದಿಗೆ ಲಗ್ನ ಮಾಡಿಕೊಂಡಿರುತ್ತಾರೆ. ಈಗ 5 - 6 ವರ್ಷದ ಹಿಂದೆ ಅವರು ಬೇರೆ ಬೇರೆಯಾಗಿದ್ದು, ಬೇರೆಯಾಗುವ ಕಾಲಕ್ಕೆ ಕೆಜಿಬಿ ಬ್ಯಾಂಕಿನಲ್ಲಿರುವ ಕ್ರಾಪ್ ಲೋನ್ ಸಂಭಂದಪಟ್ಟವರು ಕಟ್ಟುವಂತೆ ಮಾತುಕತೆಯಾಗಿದ್ದು ಇರುತ್ತದೆ. ಈಗ ಕೆಲವು ದಿವಸಗಳಿಂದ ಕೆಜಿಬಿ ಬ್ಯಾಂಕಿನವರು ಕ್ರಾಪ್ ಲೋನ ತುಂಬಾ ಹಳೆಯದಿರುವದರಿಂದ, ಅದನ್ನು ಕಟ್ಟುವಂತೆ ನೊಟೀಸ್ ಕಳುಹಿಸಿಕೊಡುತ್ತಿರುವದರಿಂದ, ಈ ಕ್ರಾಪ್ ಲೋನನ್ನು ನಮ್ಮ ಭಾವನ ತಮ್ಮ ಕುಪೇಂದ್ರ ಕಟ್ಟಬೇಕಾಗಿರುವದರಿಂದ ಆತನಿಗೆ ಕಟ್ಟುವಂತೆ ಹೇಳಿದಕ್ಕೆ ಆತನು ಹಾಗೂ ಅವನ ಅಕ್ಕ ಮಲ್ಲಮ್ಮ ಇಬ್ಬರು ಕೆಲವು ದಿವಸಗಳಿಂದ ನಮ್ಮ ಭಾವ ಹಾಗೂ ತಂಗಿ ಸುನೀತಾ ಇವರಿಬ್ಬರಿಗೆ ಸಿಕ್ಕಾಪಟ್ಟೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಬರುತ್ತಿದ್ದು, ಅದನ್ನು ನಮ್ಮ ಭಾವ ಸಹನೆ ಮಾಡಿಕೊಂಡು ಬಂದಿದ್ದು ವಿಷಯ ನನಗೆ ಹಾಗೂ ಗ್ರಾಮದ ಹಿರಿಯವರಿಗೆ ಗೊತ್ತಾಗಿ ಸಮಾಧಾನ ಮಾಡಿದ್ದು ಇರುತ್ತದೆ. ದಿನಾಂಕ 21/06/2014 ರಂದು ಬೆಳಿಗ್ಗೆ 11:30 ಗಂಟೆಗೆ ಮತ್ತು ದಿನಾಂಕ 22/06/2014 ರಂದು ಮದ್ಯಾಹ್ನ 1:30 ಗಂಟೆಗೆ ಕುಪೇಂದ್ರ ಹಾಗೂ ಮಲ್ಲಮ್ಮ ಇವರಿಬ್ಬರು ನಮ್ಮ ಭಾವನವರ ಮನೆಯವರೆಗ ಹೋಗಿ ಈ ಕ್ರಾಪ್ ಲೋನಿನ ವಿಷಯದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ನಮ್ಮ ಭಾವನ ಕಣ್ಣಿಗೆ ಕಂದು ಗಾಯ ಪಡಿಸಿರುತ್ತಾರೆ. ನಮ್ಮ ತಂಗಿಗೆ ಮಲ್ಲಮ್ಮ ಇವಳು ನೂಕಿಸಿಕೊಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

23 June 2014

Gulbarga District Reported Crimes

ಅಪಘಾತ ಪ್ರಕರಣಗಳು :
ಕಾಳಗಿ ಠಾಣೆ : ಶ್ರೀ ಮಾರುತಿ ತಂದೆ ಸಾಬಣ್ಣಾ ಬೇವಿನಗಿಡ   ಸಾ: ಮಳಗ(ಕೆ) ಇವರು ದಿನಾಂಕ 22-06-2014 ರಂದು ನನ್ನ ವ್ಯಯಕ್ತಿಕ ಕೆಲಸಕ್ಕಾಗಿ ಮೋಟರ ಸೈಕಲ ನಂ ಕೆಎ-32, 7228-ನೇದ್ದರ ಮೇಲೆ ಕಾಳಗಿ ಗ್ರಾಮಕ್ಕೆ ಹೋಗಿ ಮರಳಿ ರಾಜಾಪೂರ ಗ್ರಾಮ ಮಾರ್ಗವಾಗಿ ಮಳಗಿ (ಕೆ) ಗ್ರಾಮಕ್ಕೆ ಹೋರಟಾಗ ಸಾಯಂಕಾಲ 5-30 ಗಂಟೆಯ ಸುಮಾರಿಗೆ ಎದುರಿನಿಂದ ಲೊಕೇಶ ತಂದೆ ಶರಣಯ್ಯ ಜೀವಣಗಿ ಸಾ:: ರಾಜಾಫೂರ ಇತನು ಮೋಟರ ಸೈಕಲ ನಂ ಕೆಎ-32 ಎಕ್ಸ್ 0316 ನೇದ್ದರ ಮೇಲೆ ಅತೀವೇಗ ಮತ್ತು ನೀಷ್ಕಾಳಜೀತನದಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆದು ನನ್ನ ಬಲಗಾಲಿಗೆ ಒಳಪೇಟ್ಟು ಮಾಡಿ ನಂತರ ಲೊಕೇಶನು ತನ್ನ ಅಣ್ಣನಾದ ವಿರೇಶನೋಂದಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಜೀವ ಬೇದರಿಕೆ ಹಾಕಿ ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಗಾಯಾಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಯ್ಯದ ಹಬಿಬೂರ ರಹಿಮಾನ ತಂದೆ ಸಯ್ಯದ ರುಕ್ನೋದ್ದಿನ ಸಾ:ರಹಿಮತ ನಗರ ಹಳೆ ಜೇವರ್ಗಿ ರೋಡ ಗುಲಬರ್ಗಾ  ರವರು ದಿನಾಂಕ: 21-06-2014  ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಅಬ್ದುಲ್ ರವುಫ ಈತನು  ಫಿರ್ಯಾದಿಯ ಮೋ/ಸೈಕಲ್ ನಂ; ಕೆಎ 32 ಇಇ 3081 ನೆದ್ದರ ಮೇಲೆ ಫಿರ್ಯಾದಿಗೆ  ಹಿಂದೆ ಕೂಡಿಸಿಕೊಂಡು ಅಬ್ದುಲ್ ರವುಫ ಸದರ  ಮೋ/ಸೈಕಲ್  ರೈಲ್ವೆ ಸ್ಟೇಶನ ದಿಂದ  ಎಸ್.ವಿ.ಪಿ.ಸರ್ಕಲ್ ಮುಖಾಂತರ ಮಿನಿ ವಿಧಾನ ಸೌದ ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕನ್ನಡ ಭವನ ಎದುರು ರೋಡ ಮೇಲೆ ಮೊ/ಸೈಕಲ್ ನಂ; ಕೆಎ 01ಹೆಚ್.ಎ 0780 ನೆದ್ದರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತು ಹೋಗುತ್ತಿದ್ದ ಮೋ/ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗು ಮತ್ತು ಅಬ್ದುಲ ರವುಫನಿಗೆ ಗಾಯಗೊಳಿಸಿ ತನ್ನ ಮೋ/ಸೈಕಲ್ ಸ್ಥಳದಲ್ಲೇ ಬಿಟ್ಟು ಸವಾರನು ಓಡಿ ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 22-06-2014 ರಂದು ಬೆಳಗ್ಗೆ ಶ್ರೀ ಮಲ್ಲಪ್ಪ ತಂದೆ ಹಣಮಂತ ಜಮಾದಾರ ಸಾ : ಮಣ್ಣುರ ಹಾಗು ಸಾಯಬಣ್ಣ ಚಿಕ್ಕಮಣೂರ, ಬಾಷಾ ಬಡಗೇರ, ಶಾಹುರಸಿದ್ದ ರವರು ಕುಡಿಕೊಂಡು ರಮೇಶ ಬಾಕೆ ಇವರ ಸಫಾರಿ ವಾಹಣದಲ್ಲಿ ಮಣ್ಣುರ ಗ್ರಾಮದಿಂದ ಅಫಜಲಪೂರಕ್ಕೆ ಹೊರಟಿದ್ದು ಬೆಳಗ್ಗೆ 10-30 ಗಂಟೆ ಸುಮಾರಿಗೆ ಕರಜಗಿ ಗ್ರಾಮದ ಸಮೀಪ ಮನೋಹರ ರಾಮನಗರ ಇವರ ಇಟ್ಟಂಗಿ ಭಟ್ಟಿ ಹತ್ತಿರ ವಾಹನ ನಿಲ್ಲಿಸಿ ಇಟ್ಟಂಗಿ ನೋಡುತ್ತಿರುವಾಗ ಅದೆ ಸಮಯಕ್ಕೆ ಬಸವರಾಜ ತಂದೆ ಮಾಹಾದೇವಪ್ಪಾ ಕರೂಟಿ  ಇವರು ತಮ್ಮ ಬೋಲೆರೊ ವಾಹನವನ್ನು ತಗೆದುಕೊಂಡು ನಮ್ಮ ಎದುರಿಗೆ ಬಂದು ನಮ್ಮ ವಾಹನಕ್ಕೆ ಅಡ್ಡಲಾಗಿ ನಿಲ್ಲಿಸಿ ತಮ್ಮ ವಾಹನದಿಂದ ಇಳಿದು ಬಂದು ನನ್ನನ್ನು ನೋಡಿ ಅವಾಚ್ಯ ಶಬ್ದಗಳಿಂದ ಬೈದು ಬಸವರಾಜ ಅಳ್ಳಗಿ ಇವನಿಗೆ ಪಂಚಾಯತಿಯಲ್ಲಿ ಬೈದಿ ಅಂತಾ ನ್ನ ಜೋತೆಗೆ ಜಗಳ ತೆಗೆದು ಅಲ್ಲಿಯೆ ಬಿದ್ದ ಬಡಿಗೆಯಿಂದ ನನಗೆ ಹೊಡೆಯತೊಡಗಿದನು ಬಸವರಾಜ ಜೋತೆಯಲ್ಲಿ ಬಂದಿದ್ದ ಬಸವರಾಜ ತಂದೆ ಗೌಡಪ್ಪ ಅಳ್ಳಗಿ, ಮಾಹಾಂತೇಶ ತಂದೆ ಚಂದಪ್ಪ ವಾಯಿ ಶಿವಪ್ಪ ತಂದೆ ಮಾಹಾದೇವಪ್ಪ ಕರೂಟಿ, ಹಣಮಂತ ತಂದೆ ಬನ್ನಪ್ಪ ಕರೂಟಿ, ಶಾಮ ತಂದೆ ಕಲ್ಲಪ್ಪ ಹಿರೋಳಿ ಇವರುಗಳು ನನ್ನನ್ನು ಮುಂದೆ ಹೋಗದಂತೆ ತಡೆದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಧರ್ಮರಾಜ ತಂದೆ ಭಗವಾನ ಜಾಧವ ಸಾ: ಭಗವಾನ ತಾಂಡಾ ವರನಾಳ ತಾ:ಜಿ:ಗುಲಬರ್ಗಾ ಇವರು  ದಿನಾಂಕ:21/06/2014ರಂದು ರಾತ್ರಿ 7-30 ಗಂಟೆಗೆ ನನ್ನ ಕ್ರೋಜರ ಜೀಪನ್ನು ತೆಗೆದುಕೊಂಡು ನಮ್ಮ ತಾಂಡಾಕ್ಕೆ ಬಂದು ಸರ್ಕಾರಿ ಶಾಲೆಯ ಮುಂದೆ ರಸ್ತೆಯಲ್ಲಿ ನನ್ನ ಕ್ರೋಜರ ಜೀಪನ್ನು ಸೈಡಿಗೆ ಹಚ್ಚಿ ಮನೆ ಕಡೆಗೆ ಹೋಗುತ್ತಿದ್ದಾಗ ನಮ್ಮ ಸಂಬಂಧಿಕರಾದ ಮೋಹನ ತಂದೆ ಕಿಶನ ಜಾಧವ ಮತ್ತು ನಾರಾಯಣ ತಂದೆ ಕಿಶನ ಜಾಧವ ಇವರು  ಬಂದು ನಮ್ಮ ತಾಂಡಾದ ವಸಂತ ಜಾಧವ ಇವರಿಗೆ ಮೈಯಲ್ಲಿ ಆರಾಮ ಇರುವುದಿಲ್ಲಾ ಅವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿದೆ. ನಿನ್ನ ಕ್ರೋಜರ ಜೀಪನ್ನು ಕೊಡು ಅಂತಾ ಕೇಳಿದ್ದು. ಅದಕ್ಕೆ ನಾನು ಜೀಪನ್ನು ಕೊಡುವುದಿಲ್ಲಾ  ನಾನೆ ಬರುತ್ತೇನೆ. ನಡೆಯಿರಿ ಅಂತಾ ಅಂದಿದಕ್ಕೆ ಏ ರಂಡಿ ಮಗನೇ ಧರ್ಮ್ಯಾನೀನು ಒಬ್ಬನೇ ನಮ್ಮ ತಾಂಡಾದಲ್ಲಿ ಕ್ರೋಜರ ಜೀಪ ಇಟ್ಟಿದ್ದಿಯಾ ಅಂತಾ ನಿನಗೆ ಸೊಕ್ಕ ಬಂದಿದೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನಾನು, ಜೀಪ ಕೊಡುವುದಿಲ್ಲಾ ಅಂತಾ ಮನೆ ಕಡೆಗೆ ಹೋಗುತ್ತಿದ್ದಾಗ ವಸಂತ ಈತನು ನನಗೆ ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದು ನಿಲ್ಲಿಸಿದಾಗ ನಾರಾಯಣ ಈತನು ಬಡಿಗೆಯಿಂದ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನಾನು ಚೀರಾಡುತ್ತಿರುವಾಗ ಮೋಹನ ಜಾಧವ ಈತನು ನನಗೆ ಮೇಲಕ್ಕೆ ಎತ್ತಿ ಬಗೆದಿದ್ದರಿಂದ ಸೊಂಟಕ್ಕೆಗುಪ್ತಗಾಯವಾಯಿತು. ಅಲ್ಲಿಯೇ ಮನೆಯ ಮುಂದೆ ಕುಳಿತಿದ್ದ ನನ್ನ ತಂದೆ ಭಗವಾನ ಜಾಧವ ಮತ್ತು ನನ್ನ ಹೆಂಡತಿ ಶಾರದಾಬಾಯಿ ಇವರು ಜಗಳ ಬಿಡಿಸಲು ಬಂದಾಗ ನಾರಾಯಣ ಈತನು ಏ ರಂಡಿ ಮಕ್ಕಳೇ ನೀವು ಜಗಳ ಬಿಡಿಸಲು ಬರುತ್ತಿರಿ ನಮಗೆ ಎದುರು ಹಾಕಿಕೊಂಡುವರು ಯಾರೂ ಉಳಿದಿಲ್ಲಾ ಜೀವದ ಮೇಲೆ ಆಶೆ ಇದ್ದರೆ ನಾವು ಹೇಳಿದಂತೆ ಕೇಳ ಬೇಕು ಅಂತಾ ಜೀವದ ಭಯ ಹಾಕಿ ಹೊಡೆಬಡೆ ಮಾಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 June 2014

Gulbarga District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಅಂಬಿಕಾ ಗಂಡ ನಾಗಪ್ಪಾ  ಜಮಾದಾರ ಸಾ : ಲಿಂಬಿತೋಟ ಅಫಜಲಪೂರ ರವರ  ಗಂಡನಾದ ನಾಗಪ್ಪಾ ಇವರು ದಿನಾಂಕ 20-06-2014 ರಂದು 5:00 ಗಂಟೆಯ ಸುಮಾರಿಗೆ ನನ್ನ ಗಂಡ ಯಾರದೋ ಮೋಟರ ಸೈಕಲ್ ತೆಗೆದುಕೊಂಡು ಬಂದು ಅವಸರದಲ್ಲಿ ಬಟ್ಟೆ ಬದಲಾಯಿಸಿಕೊಳ್ಳುತ್ತಿದ್ದರು, ಆಗ ನಾನು ಯಾಕೆ ಇಷ್ಟು ಅವಸರ ಮಾಡುತ್ತಿದ್ದಿರಿ ಏನಾಯಿತು ಅಂತಾ ಕೇಳಿದಾಗ ಕೇಶಾಪೂರದಿಂದ ನನ್ನ ಗೆಳೆಯ ಕಮಲಾಕರ ಎನ್ನುವವರು ಬಾ ಅಂತಾ ಫೋನ್ ಮಾಡಿದ್ದಾನೆ ಕೆಲಸ ಇದೆ ಅದಕ್ಕೆ ಹೋಗುತ್ತಿದ್ದೇನೆ ಅಂತಾ ಹೇಳಿ ಸದರಿ ಮೋಟರ ಸೈಕಲ್ ತೆಗೆದುಕೊಂಡು ಹೋದರು, ನಂತರ 9;30 ಪಿ.ಎಂ ಸುಮಾರಿಗೆ ನನ್ನ ಗಂಡನ ಸೋದರ ಮಾವ ವಿಠ್ಠಲ ತಂದೆ ಸಿದ್ರಾಮ ಇಂಗಳಗಿ ರವರು ನಮ್ಮ ಮನೆಗೆ ಫೋನ್ ಮಾಡಿ ಕೇಶಾಪೂರದಲ್ಲಿ ಯಾರೋ ನಾಗಪ್ಪನನ್ನು ಕೊಲೆ ಮಾಡಿರುತ್ತಾರೆ ಅಂತಾ ಹೇಳಿದರು. ಆಗ ನಾವೆಲ್ಲರು ಗಾಬರಿಯಾಗಿ ನಾನು ಮತ್ತು ನಮ್ಮ ಅತ್ತೆ-ಮಾವ ಹಾಗು ವಿಠ್ಠಲ ಇಂಗಳಗಿ ಮತ್ತು ಇನ್ನಿತರರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಕೇಶಾಪೂರ ಗ್ರಾಮಕ್ಕೆ ಹೋಗಿ ನೋಡಲಾಗಿ ನನ್ನ ಗಂಡನ ಶವ ಬಿದ್ದಿತ್ತು. ನನ್ನ ಗಂಡನ ಶವ ನೋಡಲು ನನ್ನ ಗಂಡ ಕೆಳಗಡೆ ಮುಖ ಮಾಡಿ ಬಿದ್ದುದ್ದು, ತಲೆಯ ಮೇಲೆ ಭಾರಿ ರಕ್ತಗಾಯ ವಾಗಿ ರಕ್ತ ಸೋರಿದ್ದು ಇತ್ತು. ಸದರಿ ನನ್ನ ಗಂಡನ ಶವ ಕಮಲಾಕರ ಕುಂಬಾರ ರವರ ಮನೆಯ ಮುಂದೆ ಬಿದ್ದಿರುತ್ತದೆ ಅಂತಾ ಜನರು ಮಾತಾಡುತ್ತಿದ್ದರು, ನಂತರ ಅಲ್ಲೇ ಪಕ್ಕದಲ್ಲೇ ನಿಂತಿದ ಅದೇ ಗ್ರಾಮದ ಗುರಣ್ಣಗೌಡ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ದೌಲಪ್ಪ ಹೊಸಮನಿ, ಸೈಫನ್ ಚೌಧರಿ ರವರಿಗೆ ಘಟನೆ ಬಗ್ಗೆ ಕೇಳಿದಾಗ ಅವರು ಹೇಳಿದ್ದೇನೆಂದರೆ, 8;00 ಪಿ.ಎಂ ಸುಮಾರಿಗೆ ನಾಗಪ್ಪ ಇವನು ನಮ್ಮೂರ ಕಮಲಾಕರ ಕುಂಬಾರ ರವರ ಮನೆಗೆ ಬಂದು ಕಮಲಾಕರನನ್ನು ಅವಾಚ್ಯವಾಗಿ ಬೈಯುತ್ತಿದ್ದನು, ಆಗ ಕಮಲಾಕರ ಇವನು ನಾಗಪ್ಪನಿಗೆ ನೀನು ನಮ್ಮ ಮನೆಗೆ ಯಾಕ ಬರತಿಯೋ ಮಗನಾ ನಿನಗು ನನ್ನ ಹೆಂಡತಿಗು ಸಂಬಧ ಆದೇನಲೆ ಅಂತಾ ಅಂದನು ಆಗ ನಾಗಪ್ಪನು ನಾನು ನಿನ್ನ ಹೆಂಡತಿ ಸಂಗಡ ಇದಿನಿ, ಏನ ಮಾಡಕೋತಿಯೋ ಅಂಥಾ ಅಂದು ಇಬ್ಬರು ಒಬ್ಬರಿಗೊಬ್ಬರು ಹೊಡೆದಾಡುತ್ತಿದ್ದರು. ಆಗ ಕಮಲಾಕರ ಇವನು ರೋಷದಲ್ಲಿ ಅಲ್ಲೆ ಬಿದ್ದಿದ ಒಲೆ ಉದುವ ಉದಕೊಳಿಯಿಂದ ಮತ್ತು ಕಲ್ಲಿನಿಂದ ನಾಗಪ್ಪನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಪಡಿಸಿದನು. ಆಗ ನಾಗಪ್ಪನು ನೆಲದ ಮೇಲೆ ಮುಖ ಕೆಳಗೆ ಮಾಡಿ ಬಿಕ್ಕುತ್ತಾ ಬಿದ್ದನು, ಆ ಸಮಯದಲ್ಲಿ ನಾವೆಲ್ಲರು ಸೇರಿ ಜಗಳ ಬಿಡಿಸಿ ನಾಗಪ್ಪನಿಗೆ ನೋಡಲಾಗಿ ಅವನ ತಲೆಯ ಮೇಲೆ ಭಾರಿ ರಕ್ತಗಾಯ ವಾಗಿ ತಲೆಯಿಂದ ಅತೀ ರಕ್ತ ಸ್ರಾವ ವಾಗುತ್ತಿತ್ತು, ಆಗ ನಾವು ಅವನನ್ನು ನೀರು ಕುಡಿಸುತ್ತಿದಾಗ 9;00 ಪಿ.ಎಂ ಸುಮಾರಿಗೆ ಒಮ್ಮೇಲೆ ಉಸಿರು ನಿಂತು, ಮೃತ ಪಟ್ಟಿದ ಬಗ್ಗೆ ಖಚಿತಪಟ್ಟೆವು. ಸದರಿ ಕಮಲಾಕರ ತಂದೆ ಮಲ್ಕಪ್ಪ ಕುಂಬಾರ ಸಾ|| ಕೇಶಾಪೂರ ಇವನು ತನ್ನ ಹೆಂಡತಿಯೊಂದಿಗೆ ನನ್ನ ಗಂಡ ಅನೈತಿಕ ಸಂಬಂಧ ಇಟ್ಟುಕೊಂಡ ವಿಷಯವನ್ನು ತಲೆಯಲ್ಲಿ ಇಟ್ಟುಕೊಂಡು ನನ್ನ ಗಂಡನನ್ನು ಕಲ್ಲಿನಿಂದ ಮತ್ತು ಒಲೆ ಉದುವ ಉದಕೊಳಿಯಿಂದ ತಲೆಯ ಮೇಲೆ ಜೋರಾಗಿ ಹೊಡೆದು ಬಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶೇಖರ ತಂದೆ ರಾಣಪ್ಪಾ ಸರಡಗಿ ಸಾ: ಮರಗಮ್ಮ ಟೆಂಪಲ ಹತ್ತಿರ ಬಾಪು ನಗರ ಗುಲಬರ್ಗಾ  ರವರು ದಿನಾಂಕ 20-06-2014 ರಂದು ಸಾಯಂಕಾಲ 5-15 ಗಂಟೆ ಸುಮಾರಿಗೆ ತಾನು ಚಲಾಯಿಸುತ್ತಿರುವ ಮೋ/ಸೈಕಲ ನಂಬರ ಎಪಿ-28 ಎಜೆ-7670 ನೇದ್ದರ ಹಿಂದುಗಡೆ ನನ್ನ ಅಕ್ಕಳಾದ ಆರತಿ ಇವಳನ್ನು ಕೂಡಿಸಿಕೊಂಡು ಏಷಿಯನ ಮಹಲದಿಂದ ಮನೆಯ ಕಡೆಗೆ ಹೋಗುವಾಗ ಏಷಿಯನ ಮಹಲ ಎದುರುಗಡೆ ಇರುವ ರೋಡ ಮೇಲೆ ಹಳೆ ಡಿಪಿಓ ಕ್ರಾಸ ಕಡೆಯಿಂದ ಕಾರ ನಂಬರ ಕೆಎ-32 ಬಿ-9243 ರ ಚಾಲಕ ಇನಾಯತ ಅಲಿ ತಂದೆ ಮಕ್ಸೂದ ಅಲಿ ಇತನು ಎದುರಿನಿಂದ  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಮತ್ತು ನನ್ನ ಅಕ್ಕ ಆರತಿ ಇವಳಿಗೆ ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮಾಹಾಗಾಂವ ಠಾಣೆ : ಶ್ರೀ ಬಸವರಾಜ ತಂದೆ ವೀರಭದ್ರಪ್ಪ ಮಂಠಾಳ ಸಾ: ಮುಕರಂಬಿ ಗ್ರಾಮ ತಾ:ಚಿಂಚೋಳಿ  ರವರು ದಿನಾಂಕ 20-06-14 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿ ಮುಕರಂಬಿಯಿಂದ ಟೆಂಪೋದಲ್ಲಿ ಕುಳಿತುಕೊಂಡು, ಮಾಹಾಗಾಂವ ಕ್ರಾಸಿಗೆ ಬೆಳಿಗ್ಗೆ 8-15 ಗಂಟೆ ಸುಮಾರಿಗೆ ಬಂದಾಗ, ಆಗ ಮಾಹಾಗಾಂವ ಕ್ರಾಸಿನಲ್ಲಿ ಒಬ್ಬ ಟಂಟಂ ಕೆಎ 32 ಬಿ 9915 ಚಾಲಕ ಕಮಲಾಪೂರ ಅಂತಾ ಕೂಗುತ್ತಿದ್ದರಿಂದ ನಾವೆಲ್ಲರೂ ಕಮಲಾಪೂರಕ್ಕೆ ಹೋಗುವ ಕುರಿತು ಟಂಟಂ ಕೆಎ 32 ಬಿ 9915 ರಲ್ಲಿ ಏರಿ ಕುಳಿತೇವು. ನಾನು ಟಂಟಂ ಎಡಭಾಗದ ಬದಿಯಲ್ಲಿ ಕುಳಿತೆನು. ಟಂಟಂ ಚಾಲಕನು ಟಂಟಂನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ  ನಡೆಸುತ್ತಾ ಹೊರಟಿದ್ದು, ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಮಾಹಾಗಾಂವ ಕ್ರಾಸ ದಾಟಿ ಸ್ವಲ್ಪ  ಮುಂದೆ ಇರುವ ಕಾರ್ಪೋರೇಶನ ಬ್ಯಾಂಕ ದಾಟಿ ಸ್ವಲ್ಪ ಮುಂದೆ ಎದುರಿನ ರೋಡಿನ ಮೇಲೆ ಬಂದಾಗ, ವೇಗದಲ್ಲಿ ಒಮ್ಮಿಂದ ಒಮ್ಮೇಲೆ ಎಡಕ್ಕೆ ಹೊರಳಿಸಿದ್ದರಿಂದ, ವೇಗದ ಆಯ ತಪ್ಪಿ ರೋಡಿನ ಎಡಭಾಗಕ್ಕೆ ಪಲ್ಟಿ ಮಾಡಿದ್ದರಿಂದಒಳಗಿದ್ದ ಎಲ್ಲಾ ಜನರು ನನ್ನ ಮೇಲೆ ಬಿದ್ದರು. ಇದರಿಂದಾಗಿ ನನ್ನ  ಬಲಗಾಲ ಮೊಳಕಾಲ ಭಾರಿ ರಕ್ತಗಾಯವಾಗಿ ಕಾಲು ಮುರಿದಂತಾಗಿದ್ದು, ಮತ್ತು ಎಡಗೈ ಮೊಳಕೈ ಮೇಲೆ ತರಚಿದ ರಕ್ತಗಾಯವಾಗಿದ್ದು, ನನ್ನ ಹೆಂಡತಿ ಗಂಗಮ್ಮಾ, ಅಪ್ಪಣ್ಣಾ, ಸಿದ್ರಾಮ, ಕಸ್ತೂರಬಾಯಿ, ಶೋಭಾ, ದಾಸಮಯ್ಯ, ಅಣವೀರಮ್ಮಾ ಮತ್ತು ಟಂಟಂ ಚಾಲಕನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಸಂಚಾರಿ ಠಾಣೆ : ಶ್ರೀಮತಿ ಪಾರ್ವತಿ  ಗಂಡ ಬಾಬುರಾವ ರಾಠೋಡ, ಸಾಃ ಮರ್ತುರ ತಾಂಡ ಗುಲಬರ್ಗಾ ರವರು ದಿನಾಂಕ 21-06-2014 ರಂದು 1930 ಗಂಟೆಯ ಸುಮಾರಿ ಫಿರ್ಯಾದಿಯು ಆಳಂದ ರೋಡಿಗೆ ಇರುವ ಆರ್ಶಿವಾದ ಕಲ್ಯಾಣ ಮಂಟಪದ ಎದರುಗಡೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತನು ತನ್ನ ಅಟೋರಿಕ್ಷಾ ನಂ. ಕೆ.ಎ 32 8742 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಪಲ್ಟಿ ಮಾಡಿ ಫಿರ್ಯಾದಿ ಹಾಗೂ ಆರೋಪಿ ಗಾಯಗೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ದೊಡ್ಡಪ್ಪ ತಂದೆ ಶರಣಬಸಪ್ಪ ನಿಷ್ಠಿ ರವರು ದಿನಾಂಕ 21-06-2014  ರಂದು ಮಧ್ಯಾಹ್ನ 12=30 ಗಂಟೆಗೆ  ತನ್ನ ಕಾರ ನಂ: ಕೆಎ 32 ಎನ್ 3663 ನೆದ್ದರಲ್ಲಿ ಎಸ್.ವಿ.ಪಿ.ಸರ್ಕಲ್ ದಿಂದ ಸುಪರ ಮಾರ್ಕೇಟ ಕಡೆಗೆ ಹೋಗುತ್ತಿದ್ದಾಗ ಮಹಾನಗರ ಪಾಲಿಕೆ ಎದುರು ರೋಡ ಮೇಲೆ ಹಿಂದಿನಿಂದ ಮೋ/ಸೈಕಲ್ ನಂ: ಕೆಎ 32 ಎಸ್ 6408 ನೆದ್ದರ ಸವಾರ ನರೇಶ ಇತನು ತನ್ನ ಮೋ/ಸೈಕಲ್ ನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕಾರಿಗೆ ಹಿಂದಿನಿಂದ  ಡಿಕ್ಕಿ ಪಡಿಸಿ ಅಪಘಾತಮಾಡಿ ಕಾರ ಜಕ್ಂ:ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-06-2014 ರಂದು 4;00 ಪಿಎಮ್ ಕ್ಕೆ ಅಫಜಲಪೂರ ಪಟ್ಟಣದ ದೇಸಾಯಿಕಲ್ಲೂರ ರಸ್ತೆಯಲ್ಲಿರುವ ಸೋಂದುಸಾಬ ದರ್ಗಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಂತೆ ಸೋಂದು ಸಾಬ ದರ್ಗಾಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸೋಂದು ಸಾಬ ಸರ್ಗಾದ ಮುಂದೆ ಆಲದ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜುಜಾಡುತ್ತಿದ್ದ 5 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಪ್ರಶಾಂತ ತಂದೆ ದತ್ತುಗೌಡ ಪಾಟೀಲ 2) ವಿಜಯಕುಮಾರ ತಂದೆ ವಿಶ್ವನಾಥ ಗೂಳೆದ 3) ಬಸವರಾಜ ತಂದೆ ಶಾಮರಾಯ ಖಂಡೋಳಿ 4) ಸಂಜಯಕುಮಾರ ತಂದೆ ಗುರಣ್ಣ ಬಟಗೇರಿ 5) ಶರಣಪ್ಪ ತಂದೆ ಮಾಂತಪ್ಪ ಟಗೇರಿ ಸಾ|| ಎಲ್ಲರೂ ಅಫಜಲಪೂರ ಅಂತಾ ತಿಳಿಸಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  ಒಟ್ಟು 2,290/- ರೂ ನಗದು ಹಣ ಮತ್ತು ಮತ್ತು 52 ಇಸ್ಪೆಟ ಎಲೆಗಳುನ್ನು ಜಪ್ತಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-06-2014 ರಂದು 6:00 ಪಿ.ಎಂ ಕ್ಕೆ ಘತ್ತರಗಿ ಗ್ರಾಮದಲ್ಲಿ ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಶ್ರೀ  ಭಾಗ್ಯವಂತಿ ಕಲ್ಯಾಣ ಮಂಟಪದಿಂದ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲು ಇಬ್ಬ ವ್ಯಕ್ತಿ  ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಚಂದುಗೌಡ ತಂದೆ ಹಣಮಂತರಾಯಗೌಡ ಮಾಲಿ ಪಾಟೀಲ ಸಾ|| ಘತ್ತರಗಿ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3380/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.