POLICE BHAVAN KALABURAGI

POLICE BHAVAN KALABURAGI

20 April 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ: 19-04-2014 ರಂದು ತೆಲ್ಲೂರ ಗ್ರಾಮದ ನಿಂಗರಾಯ ದೇವರ ಗುಡಿಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಗಾಣಗಾಪೂರ, ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಮತ್ತು ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1. ಕರೇಪ್ಪಾ ತಂದೆ ಯಲಗೂರೆಪ್ಪಾ ಪೂಜಾರಿ 2. ಕಾಶೀನಾಥ ತಂದೆ ಬಸಣ್ಣ ಪೂಜಾರಿ 3. ನಿಂಗಪ್ಪ ತಂದೆ ಶರಣಪ್ಪ ತಳವಾರ 4. ದವಲಪ್ಪ ತಂದೆ ನಬಿಸಾಬ ನಾಯ್ಕೋಡಿ 5. ನಂದು ತಂದೆ ಶರಣಪ್ಪ ಕಲಶೆಟ್ಟಿ 6. ಶಾಂತಪ್ಪ ತಂದೆ ನಿಂಗಪ್ಪ ಧರಿಗೊಂಡ ಸಾ: ಎಲ್ಲರೂ ತೆಲ್ಲೂರ  ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  52 ಎಲೆ ಎಸ್ಟೇಟ ಎಲೆಗಳನ್ನು ಮತ್ತು ನಗದು ಹಣ  2640-00 ರೂ ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಠಾಣೆಗೆ ಬಂದು ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 19-04-2014  ರಂದು 2-00 ಪಿಎಮ್ ದಿಂದ 2-30 ಪಿಎಂ ಮಧ್ಯದ ಸುಮಾರಿಗೆ ಮೃತ ಅಮೃತ ತಂದೆ ಹಣಮಂತರಾಯ ಸನಗುಂದಿ  ಈತನು ತನ್ನ ಹೊಂಡಾ ಆಕ್ಟೀವಾ ಮೋಟರ್‌ ಸೈಕಲ್‌ ನಂ ಕೆಎ 32 ಇಎಫ್ 4491 ನೇದ್ದರ ಮೇಲೆ ಕೆಲಸ ಮುಗಿಸಿಕೊಂಡು ಆಳಂದ ಕಡೆಯಿಂದ ಗುಲ್ಬರ್ಗಾ ಕಡೆಗೆ ಬರುವಾಗ  ಸುಂಟನೂರ ಕ್ರಾಸ ಹತ್ತಿರ ಯಾವುದೋ ಒಂದು ಲಾರಿ  ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ಕೆಎ 32 ಇಎಫ್ 4491 ಹೊಂಡಾ ಆಕ್ಟೀವಾ ಮೆಲೆ ಹೊರಟಿದ್ದ  ಮೃತ ಅಮೃತ  ಈತನ ಮೋಟರ್‌ ಸೈಕಲ್‌ಗೆ ಡಿಕ್ಕಿ ಹೊಡೆದು ತನ್ನ ಲಾರಿಯನ್ನು ನಿಲ್ಲಿಸದೇ ಓಡಿಸಿಕೊಂಡು  ಹೋಗಿದ್ದು ಸದರಿ ಅಪಘಾತದಿಂದ  ಅಮೃತನಿಗೆ ನಡು ಹಣೆಗೆ ರಕ್ತಗಾಯ ತಲೆಗೆ ಗುಪ್ತಗಾಯ ಗದ್ದಕ್ಕೆ ತರಚಿದ ರಕ್ತಗಾಯ ಎಡತುಟಿಗೆ ತರಚಿದ ರಕ್ತಗಾಗಯ ಬಲಭುಜಕ್ಕೆ ಬಲಗೈಗೆ ಎಡಗಾಲ ಮೋಳಕಾಲ ಕೆಳಗೆ ಎಡ ಎದೆಗೆ ಬಲ ಎದೆಗೆ ರಕ್ತಗಾಯ ಹಾಗೂ ತರಚಿದ ಗಾಯಗಳಾಗಿ ಮೂಗಿನಿಂದ ಮತ್ತು ಬಲಕಿವಿಯಿಂದ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ²æÃ ರಾಜೇಂದ್ರ ತಂದೆ ಹಣಮಂತರಾಯ ಸನಗುಂದಿ  ಸಾ: ಹಿತ್ತಲಶಿರೂರ ತಾ: ಆಳಂದ ಜಿ: ಗುಲ್ಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಹಣಮಂತ ತಂದೆ ರೇವಣಸಿದ್ದಪ್ಪ ರೊಡಗಿ  ಸಾ: ಹೆಚ್.ಕೆ.ಇ ಸುಸೈಟಿ ಕ್ವಾಟರ್ಸ ಎಮ್.ಎಸ್.ಐ ಕಾಲೇಜ ಹತ್ತಿರ ಗುಲಬರ್ಗಾ ರವರು  ದಿನಾಂಕ: 19/04/2014 ರಂದು ಸಾಯಂಕಾಲ 5=00 ಗಂಟೆಯ ಸುಮಾರಿಗೆ ತನ್ನ ಮನೆಯಿಂದ ಬ್ಯಾಂಕ ಕಾಲೋನಿ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ರಾಜಾಪೂರ ಕಡೆಯಿಂದ ಒಂದು ಕಪ್ಪು ಬಣ್ಣದ ಹಿರೋ ಸ್ಪೆಲೆಂಡರ ಮೋ/ಸೈಕಲ್ ರ ಸವಾರನು ತನ್ನ ಮೋ/ಸೈಕಲ್ ನ್ನು ಅತಿವೇಗವಾಗಿ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಗಾಯಗೋಳಿಸಿ ತನ್ನ ಮೋ/ಸೈಕಲ್ ಸಮೇತ ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 
ಸಂಚಾರಿ ಠಾಣೆ : ಇಂದು ದಿನಾಂಕ 19-04-2014 ರಂದು ಬೆಳಗ್ಗೆ 05-45 ಗಂಟೆಗೆ ಸಿ.ಟಿ ಬಸ್ ನಿಲ್ದಾಣ ಹತ್ತಿರ ಇರುವ ಹೋಟೆಲ ಹೆರಟೆಜ್ ಇನ್ ಎದರುಗಡೆ ರೋಡಿನ ಮೇಲೆ ಆರೋಪಿತನು ತನ್ನ ಟಿಪ್ಪರ ಲಾರಿ ನಂ. ಕೆಎ. 35 6821 ನೇದ್ದನ್ನು ಎಸ್.ಬಿ ಟೆಂಪಲ್ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮದನ ಟಾಕೀಜ ಕಡೆಯಿಂದ ಫಿರ್ಯಾದಿ ಚಲಾಯಿಸಿಕೊಂಡು ಬರುತ್ತಿದ್ದ ಕೆ.ಎಸ್. ಆರ್.ಟಿ.ಸಿ  ಬಸ್ ನಂ. ಕೆ.ಎ 32 ಎಪ್. 1799 ನೇದ್ದಕ್ಕೆ ಎದರುಗಡೆಯಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ಟಿಪ್ಪರ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಹಸನ ಶೇಖ ತಂದೆ ರುಕ್ಕಮೋದ್ದಿನ ಶೇಖ ಸಾ: ಗಾಲಿಬ ಕಾಲೋನಿ, ಎಂ.ಎಸ್.ಕೆ ಮಿಲ್ ಗುಲಬರ್ಗಾ ಇವರು ದಿನಾಂಕ 19-04-2014 ರಂದು ಸಾಯಂಕಾಲ 05-30  ಗಂಟೆಗೆ ನನ್ನ ಗೆಳೆಯನಾದ ಶಕೀಬ ಇವನ ಮನೆಗೆ ಹೋಗಿ ಬರುವಾಗ ಸನಾ ಸ್ಕೂಲ್ ಹತ್ತಿರ ನಡೆದುಕೊಂಡು ರೋಡಿನ ಮೇಲೆ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ವಸಿಂ ತನ್ನ ಆಟೋರಿಕ್ಷವನ್ನು ಅತೀವೇಗ ದಿಂದ ನಡೆಸಿಕೊಂಡು ಬಂದು ಒಮ್ಮೆಲೆ ಕಟ್ ಹೊಡೆದನು ಅದಕ್ಕೆ ನಾನು ಜರಾ ದೇಕ್ ಕೇ ಚಲಾರೇ ಅಂತಾ ಅಂದೆನು ಅಷ್ಟಕ್ಕೆ ಅವನು ಆಟೋ ನಿಲ್ಲಿಸಿ ಆಟೋನಿಂದ ಕಳೆಗೆ ಇಳಿದು ಬೋಸಡಿಕೆ ಮೇರೆಕೊ ಆಟೋ ಚಲನಾ ಸಿಕಾತಾ ತೂ ರಸ್ತೆ ಪೇ ಸೀದಾ ಚಲನೆ ಕಾ ಸೀಕ್ ಅಂತಾ ಕೈಯಿಂದ ಕಪಾಳದ ಮೇಲೆ, ಮತ್ತು ಬೆನ್ನನ ಮೇಲೆ ಹೊಡೆದನು ಅಲ್ಲಿಯೆ ಇದ್ದ ಅವನ ಅಣ್ಣ ತಮ್ಮಂದಿರಾದ  ಸಮಿರ ಎಂಬುವನು ಕ್ಯೂರೆ ಮಾದರ ಚೋದ  ಅಂತಾ ಕೈಯಿಂದ ಕಪಾಳ ಮೇಲೆ, ಬೆನ್ನಿನ ಮೇಲೆ ಹೊಡೆದನು, ಹಾಶಮ್  ಎಂಬುವನು ಕೈಮುಷ್ಠಿ ಮಾಡಿ  ಬಲಗಣ್ಣಿನ ಕೆಳಗಡೆ ಹೊಡೆದನು ಅಜರ ಎಂಬತನು ರಾಡಿನಿಂದ ಬಲಕಾಲಿನ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ರಕ್ತಗಾಯ ಮಾಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಪ್ರಕಾಶ ತಂದೆ ಮಾಹಾಂತಪ್ಪ ಕಲ್ಲೂರ ಸಾ: ಹಡಲಗಿ ಇವರು ತನ್ನ ತಂದೆಯವರಾದ ಮಾಹಾಂತಪ್ಪ ಕಲ್ಲೂರ ಇವರು ಸುಮಾರು 15 ವರ್ಷಗಳಹಿಂದೆ ಶಿವಪ್ಪ ಪರೀಟ ಎಂಬುವವನ 6-ಎಕರೆ ಜಮೀನು ಖರಿದಿಸಿದ್ದು ಅದರಲ್ಲಿ 3-ಎಕರೆ ಜಮೀನು ರಜಿಷ್ಟರ ಆಗಿದ್ದು ಉಳಿದ 3-ಎಕರೆ ಜಮೀನು ರಜಿಷ್ಟರ ಆಗಿರುವುದಿಲ್ಲಾ ರಜಿಷ್ಟರ ಆಗದ ಜಮೀನನ್ನು ಆರೋಪಿತನು ಸಾಗುವಳಿ ಮಾಡುವ ಉದ್ದೇಶದಿಂದ ದಿನಾಂಕ 19-04-2014 ರಂದು 1730 ಗಂಟೆಗೆ ಫೀರ್ಯಾದಿ ಹಾಗೂ ಆತನ ಕಾಕಾತಮ್ಮಎಲ್ಲರೂ ತಮ್ಮ ಸ್ವಂತ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ 1. ಆನಂದ ತಂದೆ ಲಗಮಣ್ಣ ಅತ್ತೆ 2. ರವಿ ತಂದೆ ಲಗಮಣ್ಣ ಅತ್ತೆ 3. ರಾಮಣ್ಣ ತಂದೆ ಲಗಮಣ್ಣ ಅತ್ತೆ ಇವರು ತೋಟದಲ್ಲಿ ಅಕ್ರಮ ಪ್ರವೇಶ ಮಾಡಿ ಫೀರ್ಯಾದಿಗೆ ಕಲ್ಲಿನಿಂದ ತಲೆಗೆಫೀರ್ಯಾದಿಯ ಕಾಕನಿಗೆ ಎದೆಯ ಮೇಲಿನ ಅಂಗಿ ಹಿಡೆದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 April 2014

Gulbarga District Reported Crimes

ಕೊಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ನಾಗೇಂದ್ರಪ್ಪ ತಂದೆ ಮಲ್ಲಿಕಾರ್ಜುನ ಗರೂರ, ಬೈರಾಮಡಗಿ ಸಾಃ ಬೈರಾಮಡಗಿ ಹಾಃವಃ ಮನೆ ನಂ. 212 ಹೌಸಿಂಗಬೊರ್ಡ ಕಾಲೋನಿ ಹೈಕೊರ್ಟ ಪಕ್ಕದಲ್ಲಿ ಗುಲಬರ್ಗಾ ಇವರ ಮಗ, ರವಿ ಮತ್ತು ಅವನ ಗೆಳೆಯನಾದ ಶಿವಕುಮಾರ ಮತ್ತು ಪ್ರಕಾಶ ಕೂಡಿಕೊಂಡು ದಿನಾಂಕ 18.04.14 ರಂದು ರಾತ್ರಿ 9.30 ಪಿ.ಎಂಕ್ಕೆ  ಆರೋಪಿ ಶೀನ್ಯಾ ಇತನು ಚೆಂದುಗೆ 20 ಸಾವಿರ ರೂಪಾಯಿ ಕೊಡು ಅಂತ ತೊಂದರೆ ಕೊಡುತ್ತಿದ್ದಾನೆ ಅವನೊಂದಿಗೆ ಮಾತುಕತೆ ಆಡುವ ಕುರಿತು ಸಂಜೀವ ನಗರದಲ್ಲಿಯರುವ ಶಿನ್ಯಾನ ಮಾವನ ಮನೆಯ ಹತ್ತಿರ ಹೋಗಿ ಅವನಿಗೆ ರವಿ ಇತನು ಯಾಕೆ ಚೆಂದುಗೆ ಹಣ ಕೊಡು ಅಂತ ತೊಂದರೆ ಕೊಡುತ್ತಿದ್ದಿ ಅಂತ ಕೇಳಿದಾಗ ಶಿನ್ಯಾ ಇತನು  ರವಿಗೆ ರಂಡಿ ಮಗನೆ ನೀನು ನನ್ನ ವ್ಯವಹಾರದಲ್ಲಿ ಅಡ್ಡ ಬರುತ್ತಿ ಅಂತ ಅಂದವನೆ ತನ್ನ ಹತ್ತಿರ ಇದ್ದ ಪಿಸ್ತೂಲದಿಂದ ರವಿಯ ಹೊಟ್ಟೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ಆಗ ರವಿ ಇತನು ನನ್ನ ಮೇಲೆ ಗುಂಡು ಹಾರಿಸುತ್ತಿ ರಂಡಿ ಮಗನೆ ಶಿನ್ಯಾ ಅಂತ ಅಂದು ತನ್ನ ಹತ್ತಿರ ಇದ್ದ ಪಿಸ್ತೂಲದಿಂದ ಶಿನುನ ಹೆಡಕಿಗೆ ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ನಸಿದ್ದು ಆಗ ಶಿನುನ ಸಂಗಡ ಇದ್ದ ಪ್ರಕಾಶ, ದೇವು, ಸುಧೀರ, ಈಶ್ವರ, ಪ್ರತೇಶ, ಆನಂದ ಎಲ್ಲರು ಕೂಡಿಕೊಂಡು ರವಿಗೆ ಸುತ್ತುವರೆದು ಮಚ್ಚಿನಿಂದ, ಕಲ್ಲುಗಳಿಂದ, ಕ್ರಿಕೇಟ ಸ್ಟಂಪನಿಂದ ಎದೆಯ ಬಲಭಾಗಕ್ಕೆ, ಬಲಕಪಾಳಕ್ಕೆ, ಬಾಯಿ ಮೇಲೆ ಹೊಡೆದು ರಕ್ತಗಾಯ ಪಡಿಸಿ ನಾಲೆಯಲ್ಲಿ ಹಾಕಿ ರೇಜಿಗಲ್ಲು ಮತ್ತು ಫರ್ಸಿಕಲ್ಲುಗಳು ಮೈಮೇಲು ಎತ್ತಿಹಾಕಿ ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಗುರುಬಸಪ್ಪಾ ತಂದೆ ಭೀಮಣ್ಣಪ್ಪಾ ಸವಳೇಶ್ವರ  ಸಾ: ಖಜೂರಿ ತಾ: ಆಳಂದ ರವರ ಹೊಲ ಖಜೂರಿ ಸಿಮಾಂತರದ ಸರ್ವೆ ನಂ 15 ತಡೋಳಾ- ಖಜೂರಿ ಬಾರ್ಡರ ರೋಡಿನ ಪಕ್ಕದಲ್ಲಿ ಇದ್ದು ಸದರಿ ಹೊಲದಲ್ಲಿ ಭಾವಿ ತೊಡುತ್ತಿದ್ದು ಆಗಾಗ ಹೊಲಕ್ಕೆ ಬಂದು ಹೊಗುವುದು ಮಾಡುತ್ತೇನೆ. ದಿನಾಂಕ 18/04/2014 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಎಂದಿನಂತೆ ನಾನು ನಮ್ಮ ಹೊಲಕ್ಕೆ ಬಂದಿದ್ದಾಗ ನಮ್ಮ ಹೊಲದ ಬಂದಾರಿಯ ಹತ್ತಿರ ಒಬ್ಬ ಅಪರಿಚಿತ ಗಂಡು ವ್ಯಕ್ತಿಯ ಶವವು ಅಂಗಾತಾಗಿ ಬಿದಿದ್ದು ಅಂದಾಜು 40-45 ವಯಸ್ಸಿನವನಿದ್ದು . ಸದರಿ ಶವವು ನೋಡಲಾಗಿ ಕೊರಳಿಗೆ ಊರಲು ಹಾಕಿದ ಗುರುತು ಇದ್ದು ಮುಖದ ಮೇಲೆ ಚಾಕುವಿನಿಂದ ಚುಚ್ಚಿದ ರಕ್ತಗಾಯವಾಗಿದ್ದು ಇದೆ. ಸದರಿ ಶವದ ಮೇಲೆ ಗಾಯಗಳು ನೋಡಿದರೆ ದಿನಾಂಕ 17/04/2014 ರಂದು ರಾತ್ರಿ 11 ಗಂಟೆಯಿಂದ 18/04/2014 ರ ಬೆಳಗಿನ ಜಾವದ 6:00 ಗಂಟೆಯ ಮದ್ಯದಲ್ಲಿ ಯ್ಯಾರೂ ದುರ್ಷ್ಕಿಮಿಗಳು ಯಾವದೊ ಉದ್ದೇಶದಿಂದ ಇತನಿಗೆ  ಕೊರಳಿಗೆ ಊರಲು ಹಾಕಿ ಮುಖಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಯ್ಯಾರಿಗೆ ಗೊತ್ತಾಗಬಾರದು ಅಂತಾ ತಂದು ನಮ್ಮ ಹೊಲದಲ್ಲಿ ಹಾಕಿ ತಲೆ ಮುಖದ ಮೇಲೆ ಮಣ್ಣು ಹಾಕಿ ಮುಚ್ಚಿ ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 14-04-2014 ರ ಸಂಜೆ 5-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ದುಷ್ಕರ್ಮಿಗಳು ಅಪರಿಚಿತ ಹೆಣ್ಣು ಮಗಳಿಗೆ  ಎಲ್ಲಿಂದಲೋ ಕರೆದುಕೊಂಡು, ತಡಕಲ್ಲ ಸೀಮಾಂತರದಲ್ಲಿ ಇರುವ ಹೊಲ ಸರ್ವೆ ನಂ. 58/ಸಿ ರಲ್ಲಿ ಇರುವ  ಹೊಲದ ಕೊಟ್ಟಿಗೆಯಲ್ಲಿ ತಂದು ಅವಳ ಎರಡು ಕೈಗಳು  ಹಿಂದೆ ಕಟ್ಟಿ, ಅವಳ ಮೇಲೆ ಅತ್ಯಾಚಾರ  ಮಾಡಿ ನಂತರ ಅವಳಿಗೆ ಯಾವುದೋ ವಿಧದಿಂದ ಕೊಲೆ ಮಾಡಿ, ಮುಖ ಗುರುತು ಸಿಗದಂತೆ ಮುಖದ ಮೇಲೆ ಸೀರೆ ಮುಚ್ಚಿ ಸಾಕ್ಷಿ ನಾಶಪಡಿಸಿ, ಹೋಗಿರುತ್ತಾರೆ. ಅಂತಾ ಶ್ರೀ ದೇವಿದಾಸ ತಂದೆ ಮಾರೆಪ್ಪ ಸಿಂಧೆ  ಸಾ: ಜಿವಣಗಿ ಗ್ರಾಮ ತಾ:ಜಿ: ಗುಲಬರ್ಗಾ ಇವರು ಕೊಟ್ಟ  ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ಶ್ರೀನಾಥ @ ಶೀನು @ ಶೀನ್ಯಾ ತಂದೆ ಶರಣಪ್ಪ ಕಮಲಾಪುರಕ ಸಾಃ ಪೌರಕಾರ್ಮಿಕ ಶಾಲೆ ಗುಲಬರ್ಗಾ ರವರಿಗೆ  ದಿನಾಂಕ 18.04.14 ರಂದು ರಾತ್ರಿ 9.30 ಪಿ.ಎಂ ಸುಮಾರಿಗೆ 1.ರವಿ ಭೈರಾಮಡಗಿ 2. ಶಿವಕುಮಾರ 3. ಪ್ರಕಾಶ 4. ಚೆಂದು 5. ದೇವಿಂದ್ರ 6.  ಶ್ರೀಶೈಲ ಚರಪಳ್ಳಿ ರವರು ಕೂಡಿಕೊಂಡು ಮೋಟಾರ ಸೈಕಲ ಮೇಲೆ ಬಂದು ನನ್ನೊಂದಿಗೆ ಜಗಳ ತೆಗೆದು ಆರೋಪಿ ರವಿ ಇತನು ತನ್ನ ಹತ್ತಿರ ಇದ್ದ ಪಿಸ್ತೂಲದಿಂದ ಫಿರ್ಯಾದಿಯ ಹೆಡಕಿನ ಕೆಳಗೆ ಪಿಸ್ತೂಲದಿಂದ ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಉಳಿದ ಆರೋಪಿತರು ಫಿರ್ಯಾದಿಗೆ ಎಳೆದಾಡಿ, ಕೈಯಿಂದ ಹೊಡೆಬಡೆ ಮಾಡಿ ಜಾತಿ ನಿಂದನೆ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಸಂಜೀವಕುಮಾರ ತಂದೆ ಮಧುಕರ ಕಾಂಬಳೆಸಾ:ದೇಶಮುಖವಾಡಾ ಬ್ರಹ್ಮಪೂರ ಗುಲಬರ್ಗಾ ರವರು ದಿನಾಂಕ 15-04-2014 ರಂದು ಸಾಯಂಕಾಲ ತನ್ನ ತಮ್ಮ ರುಕ್ಮಾಜಿರವರ ಲೇಡಿಜ ಕಾರ್ನರ ಅಂಗಡಿಯಲ್ಲಿ ಕುಳಿತಿದ್ದೇನು  ರಾತ್ರಿ 9.30 ಗಂಟೆ ಸುಮಾರಿಗೆ ಅಂಗಡಿ ಮುಂದುಗಡೆ ಜಗಳ ಮಾಡುವದು ಕೇಳಿ ಬಂದು ನೋಡಲು ತನ್ನ ತಮ್ಮನಿಗೆ ಶರಣು ಹೊಡ್ಡಿನಮನಿ ಮತ್ತು ಇತರೆ 8 ಜನರು ಕೂಡಿ ಹೊಡೆಹತ್ತಿದ್ದರು ಆಗ ನಾನು ಯಾಕೆ ಹೊಡೆಯುತ್ತಿರಿ ಅಂತಾ ಬಿಡಿಸಲು ಹೋದರೆ ನಿಮ್ಮ ತಮ್ಮ ನಮಗೆ ಇಲ್ಲಿ ಯಾಕೆ ನಿಂತಿರುತ್ತಿರಿ ಅಂತಾ ಕೇಳುತ್ತಾನೆ ನೀನು ಬಂದು ನನ್ನದೇನು ಶಂಟಾ ಕಿತ್ತುಕೊತಿ ಅಂತಾ ಎಲ್ಲರೂ ಕೂಡಿ ನನಗೆ ಕೈಯಿಂದ ಹೊಡೆಯಹತ್ತಿದ್ದರು ಮತ್ತು ಕಾಲಿನಿಂದ ಒದೆಯ ಹತ್ತಿದ್ದರು ನಂತರ ಶರಣು ಹೊಡ್ಡಿನಮನಿ ಇತನು ಈ ಮಕ್ಕಳು ಹೀಗಾದರೆ ನಮ್ಮ ಆಟ ನಡೆಗೊಡುವದಿಲ್ಲಾ ಅಂತಾ ಕಬ್ಬಿಣದ ರಾಡಿನಿಂದ ನನ್ನ ತಲೆಯ ಎಡಭಾಗದಲ್ಲಿ ಹೊಡೆದು ರಕ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿರೇಶ ಪಿಸಿ ರವರಿಗೆ ಮಾತನಾಡಿಸಲು ಸದರಿಯವರು ಮಾತನಾಡಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರದ ಕಾರಣ ಶ್ರೀಮತಿ ಮಲ್ಲಮ್ಮ ಗಂಡ ರಾಚಯ್ಯಸ್ವಾಮಿ ರವರಿಗೆ ವಿಚಾರಿಸಲು ಅವರು   ದಿನಾಂಕ 18-04-2014 ರಂದು ಮದ್ಯಾಹ್ನ 2-10 ಗಂಟೆಗೆ ನನ್ನ ಮಗ ವಿರೇಶ ಇತನು ತನ್ನ ಮೋಟಾರ ಸೈಕಲ ನಂಬರ ಕೆಎ-32 ಆರ್-229 ನೇದ್ದನ್ನು ಐವಾನ ಈ ಷಾಯಿ ರೋಡ ಕಡೆಯಿಂದ ಜಗತ ರೋಡ ಕಡೆಗೆ ಹೋಗುವ ಕುರಿತು ಇಂಡಿಕೇಟರ ಹಾಕಿ ಸನ್ನೆ ಮಾಡಿ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಮೀನಿ ವಿಧಾನ ಸೌಧದ ಎದುರುಗಡೆ ರೋಡ ಮೇಲೆ ಮೋಟಾರ ಸೈಕಲ ನಂಬರ ಕೆಎ-32 ಇಎ-1289 ನೇದ್ದರ ಸವಾರ ಜಗತ ರೋಡ ಕಡೆಯಿಂದ ಎಸ್.ವಿ.ಪಿ ಸರ್ಕಲ ಕಡೆಗೆ ಹೋಗುವ ಕುರಿತು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಪೆಟ್ಟುಗೊಳಿಸಿ ಆತನು ಸಣ್ಣಪುಟ್ಟ ಗಾಯಹೊಂದಿರುತ್ತಾನೆ
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಖುರ್ಷೀದ ಮಿಯಾ ತಂದೆ ಪತ್ರು ಪಟೇಲ ರವರು ದಿನಾಂಕ: 17/04/2014 ರಂದು ಮಧ್ಯಾಹ್ನ 12=30 ಗಂಟೆಗೆ ತನ್ನ ಅಟೋರೀಕ್ಷಾ ನಂ: ಕೆಎ 32  6994 ನೆದ್ದರಲ್ಲಿ ಪ್ರಯಾಣಿಕರನ್ನು ಕೂಡಿಕೊಂಡು ಎಸ್.ವಿ.ಪಿ.ಸರ್ಕಲ್ ದಿಂದ ಖುಬಾ ಪ್ಲಾಟ ಕಡೆಗೆ ಹೋಗುವ ಕುರಿತು ಕೋರ್ಟ ಕ್ರಾಸ್ ಮುಖಾಂತರ ಹೋಗುತ್ತಿದ್ದಾಗ ಕೇಂದ್ರ ಬಸ್ ನಿಲ್ದಾಣದ ರೋಡ ಕಡೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಂ: ಕೆಎ 32 ಎಫ್ 1416 ರ ಚಾಲಕ ರತ್ನಸಿಂಗ ಈತನು ತನ್ನ ಬಸ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸಿಕೊಂಡು ಹೋಗುತ್ತಿದ್ದ ಅಟೋರೀಕ್ಷಾಕ್ಕೆ ಎಡ ಸೈಡಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ಸಾಹೇಬಪಟೇಲ ಮದರಕಿ ಸಾ: . ಹಿಪ್ಪರಗಿ ಎಸ್.ಎನ್  ರವರು   ದಿನಾಂಕ: 11/04/2014 ರಂದು ಸಾಯಂಕಾಲ 7-45 ಗಂಟೆಗೆ ಜೇವರ್ಗಿ - ಸಿಂದಗಿ ಮೇನ ರೋಡ ಕೂಡಿ ಗ್ರಾಮದ ಕ್ರಾಸ ಹತ್ತಿರ ರೊಡಿನಲ್ಲಿ ಬಸ್ ನಂಬರ ಕೆ.ಎ. 34 ಎಫ 1023 ನೇದ್ದರಲ್ಲಿ ಕುಳಿತು ಊರಿಗೆ ಬರುತ್ತಿದ್ದ ನನ್ನ ಅಣ್ಣ ಮಿಟೇಸಾಬ ಇತನು ಬಸ್ಸಿನ ಬಾಗಿಲಿನಲ್ಲಿ ನಿಂತು ಉಗಳುತ್ತಿದ್ದಾಗ  ಸ್ಪೀಡಾಗಿ ಹೋಗುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದು ನನ್ನ ಅಣ್ಣನಿಗೆ ಭಾರಿ ಗಾಯಾವಾಗಿದ್ದು ಅವನಿಗೆ ಉಪಚಾರ ಕುರಿತು ಗುಲಬರ್ಗಾದ ಯುನೇಟೇಡ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಕೇಮ್ಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಉಪಚಾರ ಪಡೆಯುತ್ತಾ ಇಂದು ದಿ: 17/04/2014 ರಂದು ಮುಂಜಾನೆ 6-15 ಗಂಟೆಗೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ನರೋಣಾ ಠಾಣೆ : ಶ್ರೀ. ಶೀವಲೀಲಾ ಗಂ ದಿ: ರಾಜಶೇಖರ ಮುನ್ನಳ್ಳೀ ಸಾ:ಸಾವಳಗಿ ಕೆ ರವರು ದಿನಾಂಕ: 16/04/2014 ರಂದು 05-45 ಗಂಟಗೆ ಶ್ರೀ,ಮಹಾದೇವ ಪಲ್ಲಕ್ಕಿ ಮುಖ್ಯ ರಸ್ತೆಯಿಂದ ನಡೆಯುತ್ತಿದ್ದಾಗ ನನ್ನ ಮಗ ನೋಡಲಿಕೆ ಹೋಗಿದ್ದನು, ನಮ್ಮೂರಿನ ಜವಳ್ಗಾರವರ ಮನೆಯ ಹತ್ತಿರ ರಸ್ತೆಯ ಮೇಲೆ ಮೆರವಣಿಗೆ ಇದ್ದಾಗ ನಾನು ಕೂಡ ನೋಡಲಿಕೆ ಹೋಗಿದ್ದು  ಪಲ್ಲಕ್ಕಿಯ ಮುಂದೆ ಟ್ರ್ಯಾಕ್ಟರ ನಂ KA 28 T 7275 ಟ್ರ್ಯಾಲಿ ನಂ KA 32 T 8106 ಅಂತಾ ಇದ್ದು ಟ್ರ್ಯಾಲಿಯಲ್ಲಿ ಸೌಂಡ್ ಬಾಕ್ಸ್ ಇದ್ದು ಟ್ರ್ಯಾಕ್ಟರ ಮುಂದಿನ ಭಾಗ ನನ್ನ ಮಗ ನಿಂತಿದನು ಟ್ರ್ಯಾಕ್ಟರ ಚಾಲಕ ಪರಮೇಶ್ವರ ತಂ ಭೀಮಶ್ಯಾ ಮೂಲಗೆ ಸಾ:ಸಾವಳಗಿ ಅಂತಾ ಚಾಲಕನಿದ್ದು ಚಾಲಕನು ನಿಷ್ಕಾಳಜಿತನದಿಂದ ಮತ್ತು ಬೇಜವಾಬ್ದಾರಿಯಿಂದ ತನ್ನ ಟ್ರ್ಯಾಕ್ಟರ ಚಲಾಯಿಸುತ್ತಿದ್ದಾಗ ಎದುರ ಇದ್ದ ನನ್ನ ಮಗಾ ಸಿದ್ದಾರೂಡನಿಗೆ ಡಿಕ್ಕಿಪಡಿಸಿದನು. ಆಗ ನಾನು ನೋಡಿ ಚಿರಾಡುತ್ತಿದ್ದಾಗ ನನ್ನ ಮೈದುನ ಸಂಜಯ ಇವರು ಮತ್ತು ವಿಜಯಕುಮಾರ ತಂ ಅಂಬರಾಯ ಮುನ್ನಹಳ್ಳಿ ಇವರು ಬಂದು ನೋಡಿದರು ನನ್ನ ಮಗನಿಗೆ ಅಪಘಾತದಲ್ಲಿ ಗಾಯ ಎಡಗಡೆ ಎದೆಗೆ ಭಾರಿ ಒಳಪೆಟ್ಟಾಗಿದ್ದು.ಬಲಗಡೆ ಕಣ್ಣಿನ ಕೇಳಗೆ ಮೇಲೆ ಭಾರಿ ಪೆಟ್ಟಾಗಿ ರಕ್ತಗಾಯ ವಾಗಿದೆ. ಎಡಗೈ ಮುಂಗೈಗೆ ರಕ್ತಗಾಯ, ರಟ್ಟೆಗೆ ಗಾಯ , ಎಡಹೊಟ್ಟೆಯ ಮೇಲೆ ತರಚಿದ ರಕ್ತಗಾಯ, ಎದೆಗೆ ತರಿಚದ ಗಾಯ ಬೆನ್ನಿನ ಎಡಗಡೆ ತರಚಿದ ಗಾಯವಾಗಿರುತ್ತದೆ. ಇವನಿಗೆ ಉಪಚಾರ ಕುರಿತು ನನ್ನ ಮೈದುನ ಸಂಜಯರವರು ಮತ್ತು ಶೇಖರ ತಂ ಬಸವರಾಜ ಬಿರೆದಾರ ಮತ್ತು ನಾನು ಕೂಡಿ ಗುಲಬರ್ಗಾದ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ಆಸ್ಪತ್ರೆಯಲ್ಲಿ ಉಪಚಾರ ಪಡೆದು ಹೆಚ್ಚಿನ ಉಪಚಾರ ಕುರಿತು ಸೋಲಾಪುರ ಯಶೋಧಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ನನ್ನ ಮಗ ಮರಣ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ನಾಡಗೌಡ ತಂದೆ ಅಪ್ಪಾಸಾಬಗೌಡ ಮಾಲಿಪಾಟೀಲ ಸಾ: ಓಂ ನಗರ ಬಿಜಾಪೂರ ರಸ್ತೆ ಗುಲಬರ್ಗಾ ರವರು ದಿನಾಂಕ 15/04/2014 ರಂದು ಮುಂಜಾನೆ 10 ಗಂಟೆಗೆ  ನನ್ನ ಅಣ್ಣ ಭಗವಂತರಾಯಗೌಡ ಅವರು ತಮ್ಮ ಸ್ಕಾರ್ಪಿಯೊ ವಾಹನ ನಂ. ಕೆಎ 32-ಎಂ-8993 ರಲ್ಲಿ  ಚಾಲಕ ಶಬ್ಬಿರ ರವರೊಂದಿಗೆ ವ್ಯವಹಾರಕ್ಕಾಗಿ ಗುಲಬರ್ಗಾಕ್ಕೆ ಹೊಗುತ್ತಿರುವುದಾಗಿ ಹೇಳಿ ಹೊಗಿದ್ದರು,  ನಿನ್ನೆ ಸಂಜೆ 7-30 ಗಂಟೆಗೆ ನಾನು ನನ್ನ ಅಣ್ಣನ ಮೊಬೈಲ ನಂ. 9448435467 ಕ್ಕೆ  ಫೋನ ಮಾಡಿದಾಗ  ಸ್ವಿಚ್ಛ ಆಫ್‌ ಆಗಿತ್ತು. ಅದೇ ವೇಳೆಗೆ  ಅವರ ಸ್ಕಾರ್ಪಿಯೊ ವಾಹನ ಚಾಲಕ ಶಬ್ಬೀರ ಇತನು  ಗಾಡಿ ತೆಗೆದುಕೊಂಡು ಬಂದಾಗ  ನಾನು ಅಣ್ಣ ಎಲ್ಲಿ ಎಂದು ಕೇಳಿದಾಗ  ಶಬ್ಬೀರನು ಹೇಳಿದ್ದೆನೆಂದರೆ   ಸಂಜೆ 4-30 ಗಂಟೆಗೆ  ಗುಲಬರ್ಗಾ ಬಸ ಸ್ಟ್ಯಾಂಡ ಹತ್ತಿರ ಇಳಿದು  ಗಾಡಿ ತೆಗೆದುಕೊಂಡು ಹೊಗು ನಾನು ಬಸ್ಸಿನಲ್ಲಿ ಬರುತ್ತೆನೆ ಅಂತಾ ಹೇಳಿದ್ದರಿಂದ ನಾನು ಒಬ್ಬನೇ ಗಾಡಿ ತೆಗೆದುಕೊಂಡು ಬಂದಿರುತ್ತೆನೆ. ಅಂಥಾ ತಿಳಿಸಿದ್ದು   ನಂತರ ನಾನು ಮತ್ತು  ನಮ್ಮ ಮನೆಯವರೆಲ್ಲರೂ  ನಮ್ಮ ಅಣ್ಣನ ಮೊಬೈಲಿಗೆ ಫೋನ ಮಾಡಿದ್ದು ಸ್ವಿಚ್ಛ ಆಫ್‌ ಆಗಿದ್ದು  ರಾತ್ರಿ  ನಾವೇಲ್ಲರೂ ಗುಲಬರ್ಗಾ ಹಾಗು ಜೇವರ್ಗಿ ಯಲ್ಲಿ ಹುಡುಕಾಡಿದ್ದು ಮತ್ತು ಸಂಬಂಧಿಕರಿಗೆ ಫೋನ ಮಾಡಿ ಕೇಳಿದ್ದು  ಸಿಕ್ಕಿರುವುದಿಲ್ಲಾ. ಕಾಣೆಯಾಗಿರುತ್ತಾರೆ.  ನನ್ನ ಅಣ್ಣ ಭಗವಂತರಾಯಗೌಡ ತಂದೆ ನಾಡಗೌಡ  ಮಾಲಿಪಾಟೀಲ ವಯಸ್ಸು 46 ವರ್ಷ ಇದ್ದು ಮತ್ತು ಅವರು  ನೀಲಿ ಬಣ್ಣದ ಆಫ್‌ ಶರ್ಟ,  ಕಪ್ಪು ಬಣ್ಣದ ಪ್ಯಾಂಟ  ಹಾಗು ಕಪ್ಪು ಲೆಬರ್ಟಿ ಚಪ್ಪಲಿ ಧರಿಸಿದ್ದಾರೆ. ಅವರು  ಕನ್ನಡ ಮತ್ತು ಹಿಂದಿ ಭಾಷೆ ಮಾತಾಡುತ್ತಾರೆ. ಅವರ ಹತ್ತಿರ ನೊಕಿಯಾ ಮೊಬೈಲ  ಐಎಂಇಐ ನಂ. 359991055232281 ಅದರಲ್ಲಿ ಬಿಎಸ್‌ಎನಲ್‌ ಸಿಮ್‌ ನಂ. 9448435467 ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 April 2014

Gulbarga District Reported Crimes

ಬೆಂಕಿ ಹತ್ತಿ ಗೃಹಿಣಿ ಸಾವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಗೋದಾವರಿ ಗಂಡ ನಾಗನಾಥ ಸೋಲಾಪೂರೆ  ಸಾಕನಕಟ್ಟಾ  ತಾಹುಮನಾಬಾದ ಜಿಗುಲಬರ್ಗಾ ಇವರು ದಿನಾಂಕ 14-04-2014 ರಂದು ಬೆಳಗ್ಗೆ 07-30 ಗಂಟೆಗೆ ಮಗಳಾದ ಸಂಗೀತಾ ಗಂಡ ಶಿವಕುಮಾರ ಜನಕಟ್ಟಿ ಸಾಡೊಂಗರಗಾಂವ ತಾಜಿಗುಲಬರ್ಗಾ ಇವಳು ಡೊಂಗರಗಾಂವ ಗ್ರಾಮದ ತನ್ನ ಮನೆಯಲ್ಲಿ ಅಡುಗೆ ಮಾಡುವಾಗ ಸೀಮೆ ಎಣ್ಣೆ ಸ್ಟೋ ಹತ್ತಿಸಿಕೊಂಡು ಆಕಸ್ಮಕವಾಗಿ ಸ್ಟೋ ಬ್ಲಾಸ್ಟಾವಾಗಿ , ಅದರಲ್ಲಿಂದ  ಸೀಮೆ ಎಣ್ನೆ ಮೈ ಮೇಲೆ ಸಿಡಿದು , ಮೈಗೆ ಬೆಂಕಿ ಹತ್ತಿಕೊಂಡಿದ್ದುಆಗ ಅವಳು ಚೀರಾಡುತ್ತಾ ಮನೆಯಿಂದ ಹೋರೆಗೆ ಬಂದಾಗಅವಳ ಗಂಡ ಮತ್ತು ತಾಯಿ ಕೂಡಿಕೊಂಡುಬೆಂಕಿ ನಂದಿಸಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದ್ದು,  ಉಪಚಾರ ಪಲಿಸದೆ ಬೆಳಗ್ಗೆ 11-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ ;
ಫರತಾಬಾದ ಠಾಣೆ : ದಿನಾಂಕ 09-04-2014  ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಮಲಗಿಕೊಂಡಾಗ ನಮ್ಮ ಅಣ್ಣತಮ್ಮಕೀಯವರ ಅಳಿಯನಾದ ಕೊರೆಪ್ಪ ದೊಡಮನಿ ಅವನ ಹೆಂಡತಿ ಲಕ್ಕಮ್ಮ ,ಮಗಳಾದ ಮಹಾಪೂರಿ ಮತ್ತು ನಮ್ಮ ಅಣ್ಣತಮ್ಮಕಿಯವರಾದ ಜಟ್ಟೆಪ್ಪ ಅವನ ಹೆಂಡತಿ ಪಾರ್ವತಿ ಇವರೆಲ್ಲರೂ ಕೂಡಿಕೊಂಡು ಬಂದು ಅವರಲ್ಲಿ ಕೊರೆಪ್ಪ ಇತನು ನನಗೆ ಎಬ್ಬಸಿ ರಂಡಿ ಮಗನೆ ಶರಣ್ಯ ನಿನ್ನೆ ರಾತ್ರಿ ನಮಗ ನಿಮ್ಮ ಮನೆಯ ಮೇಲೆ ನಿಂಬಿಕಾಯಿ ಬಿಸಾಕ್ಯರ ಅಂತಾ ಸುಮ್ಮ-ಸುಮ್ಮನೆ ಬೈತಿ ಬೊಸ್ಡಿ ಮಗನೆ ಅಂತಾ ಬೈಯುತ್ತಾ ನನಗೆ ರಂಡಿ ಮಗನೆ ತೊರಿಸು ಯಾರ ಬಿಸಾಕ್ಯರ ಅಂತಾ ಅನ್ನುತ್ತಿದ್ದಾಗ  ನಾನು ಎದ್ದು, ನೋಡು ನಿಮಗ ಬೈದಿಲ್ಲಾ ನಾ ಬಿಸಾಕದವರಿಗಿ ಬೈದಿನ ಅಂತಾ ಅನ್ನುತ್ತಿದ್ದಾಗ ಕೊರೆಪ್ಪ ಇತನು ನನಗೆ ಕೈಯಿಂದ ಕಪಾಳ ಮೇಲೆ ಬೆನ್ನ  ಮೇಲೆ ಹೊಡೆದಿರುತ್ತಾನೆ. ಅಲ್ಲೆ ನನ್ನ ಹಿಂದೆ ಇದ್ದ ಜಟ್ಟೆಪ್ಪ ಇತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಹೆಡಕಿನ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:11/04/2014 ರಂದು ಮದ್ಯಾಹ್ನ 02:30 ಗಂಟೆ ಸುಮಾರಿಗೆ ಅಣವೀರಪ್ಪ ಇತನು ತನ್ನ ಹಿರೋ ಹೊಂಡಾ ಮೋಟಾರ ಸೈಕಲ ನಂ ಕೆ.-32 .ಬಿ-6197 ನೇದ್ದರಕ್ಕೆ ಅವಿನಾಶ ಪೆಟ್ರೋಲ ಪಂಪನಲ್ಲಿ ಪೆಟ್ರೋಲ ಹಾಕಿಸಿಕೊಂಡು ಮಾಶಾಬ್ದಿ ದರ್ಗಾ ಹತ್ತಿರ ಇರುವ ಕ್ರಾಸಿನಲ್ಲಿ ಮೋಟಾರ ಸೈಕಲ ತಿರುಗಿಸುತ್ತಿದ್ದಾಗ ಅದೇ ವೇಳೆಗೆ ಕಾರ ನಂ ಕೆ.-33 ಎಂ-3616 ನೇದ್ದರ ಚಾಲಕನು ರಾಂಗ ರೂಟ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಣವೀರಪ್ಪ ಇತನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ರೋಡಿನ ಮೇಲೆ ಬಿದಿದ್ದು ಆತನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತಸ್ರಾವವಾಗಿ ಬಲಗಣ್ಣಿನ ಕೆಳೆಗೆ ಹಾಗು ಇತರೇ ಭಾಗದಲ್ಲಿ ಭಾರಿ ಗಾಯವಾಗಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಆಗಿದ್ದಾಗ ಉಪಚಾರ ಫಲಕಾರಿ ಆಗದೇ ಇಂದು ದಿನಾಂಕ:-14/04/2014 ರಂದು ಬೆಳಿಗ್ಗೆ 06:30 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ ಆಂತಾ ಆತನ ತಂದೆ ಬಸವರಾಜ ತಂದೆ ಗುರಲಿಂಗಪ್ಪ ಚಿಂಚೂರ ಸಾ:ಚಿಂಚನಸೂರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.