POLICE BHAVAN KALABURAGI

POLICE BHAVAN KALABURAGI

10 July 2013

GULBARGA DIST REPORTED CRIMES

ಮಟಕಾ ಪ್ರಕರಣ:
 ರೋಜಾ ಪೊಲೀಸ್ ಠಾಣೆ ಗುಲಬರ್ಗಾ: ದಿನಾಂಕ:09/07/2013 ರಂದು ಶ್ರೀ ನಿಂಗಪ್ಪಾ ಪೂಜೇರಿ ಪಿಎಸ್ಐ[ಅ.ವಿ] ರೋಜಾ ಠಾಣೆ ರವರು ಖಚಿತ ಮಾಹಿತಿ ಮೇರೆಗೆ ಕಾಲಾಹುಡಾ ಮೇಸ್ತ್ರಿ ಹೋಟೆಲ ಹತ್ತಿರದಲ್ಲಿ ಸಾರ್ವಜನಿಕರಿಂದ ತನ್ನ ಲಾಭಕ್ಕಾಗಿ ಹಣ ಪಡೆದುಕೊಂಡು 1 ರೂಪಾಯಿಗೆ 80ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಕಿಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ ಪಿಸಿ-645 ಮದರಸಾಬ, ಪಿಸಿ-248 ವೈಜನಾಥ, ಹಾಗೂ ಪಂಚರಾದ 1} ಸಂಜು @ ಸಂಜೀವಕುಮಾರ ತಂದೆ ಅರ್ಜುನ ರಾವ ಆಕಾಶ ಕೋರೆ ಸಾ: ರೋಜಾ [ಬಿ] ಗುಲಬರ್ಗಾ 2} ರಾಜೇಂದ್ರ ತಂದೆ ತುಳಸಿರಾಮ ಬೋಳೆ ಸಾ: ರೋಜಾ [ಬಿ] ಗುಲಬರ್ಗಾ ರವರೊಂದಿಗೆ ಕಾಲಾಹೂಡಾ ಹತ್ತಿರ ಬರುವ ಮೇಸ್ರತಿ ಹೋಟೆಲ ಹತ್ತಿರದ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಿಯಾಕೂ 80 ರೂಪಿಯಾ ದೇತಾಹೂ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ನಾವೆಲ್ಲರೂ ಸುತ್ತುವರೆದು ಮಟಕಾ ಚೀಟಿ ಬರೆದುಕೊಳ್ಳುವ ವ್ಯಕ್ತಿಗೆ ದಾಳಿಮಾಡಿ ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹ್ಮದ ನಿಜಾಮ ತಂದೆ ಮಹ್ಮದ ಮೈನುದ್ದಿನ ಆಟೋವಾಲೆ ಉ: ಆಟೋ ಡ್ರೈವರ ಸಾ: ಮಂಗಲಗಿ ಗ್ರಾಮ ಹಾ||ವಾ||  ಮಿಲ್ಲತ ನಗರ ಗುಲಬರ್ಗಾ ಅಂತಾ ಹೇಳಿದ್ದು ಆತನಿಂದ  ನಗದು ಹಣ 2350/-ರೂಪಾಯಿಗಳು ಅಲ್ಲದೇ 2 ಮಟಕಾ ನಂಬರ ಬರೆದ ಚೀಟಿಗಳು, ಒಂದು ಬಾಲಪೆನ್ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ ಮುದ್ದೆಮಾಲನ್ನು ಪಂಚರ ಸಮಕ್ಷಮ ಆರೋಪಿತನಿಗೆ ದಸ್ತಗಿರಿ ಮಾಡಿ ಆರೋಪಿ ಮಹ್ಮದ ನಿಜಾಮ ತಂದೆ ಮಹ್ಮದ ಮೈನುದ್ದಿನ ಆಟೋವಾಲೆ ಈತನ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕಳ್ಳತನ ಪ್ರಕರಣ:
 ಅಶೋಕ ನಗರ ಪೋಲಿಸ್ ಠಾಣೆ:  ಶ್ರೀಮತಿ ಶಶಿಕಲಾ ಗಂಡ ಶಿವಶರಣಪ್ಪ ಬಂಡೇನೋರ ಸಾ: ಎನ್.ಜಿ. ಕಾಲೋನಿ ಗುಲಬರ್ಗಾ ರವರು ದಿನಾಂಕ: 25-26/03/2013 ರಂದು ರಾತ್ರಿ ವೇಳೆ ಮನೆಯ ಬಾಗಿಲು ಮುಂದೆ ಮಾಡಿ ಮನೆಯ ಮುಂದಿನ ಕಟ್ಟೆಯ ಮೇಲೆ ಮಲಗಿ ಮುಂಜಾನೆ 6:00 ಗಂಟೆಗೆ ಎದ್ದು ಮನೆಯ ಒಳಗೆ ಹೋಗಿ ನೋಡಿದಾಗ  ಅಲಮಾರಿ ತೆಗೆದಿದ್ದು ಬಟ್ಟೆ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಲಮಾರಿಯಲ್ಲಿ ಸ್ಟೀಲ್ ಡಬ್ಬಿಯಲ್ಲಿ ಇಟ್ಟಿದ್ದ ಬಂಗಾರದ ವಸ್ತುಗಳಾದ  1) ಒಂದು ಬಂಗಾರದ ತಾಳಿ ಚೈನ್  40 ಗ್ರಾಂ .ಕಿ. 1,00,000=00 ರೂ. 2) ಒಂದು ಬಂಗಾರದ ಜಿರಾಮಣಿ 10 ಗ್ರಾಂ .ಕಿ. 25,000=00 ರೂ. 3) ಒಂದು ಬಂಗಾರದಕರಿಮಣಿ ತಾಳಿ 10 ಗ್ರಾಂ .ಕಿ. 25,000=00 ರೂ. 4) ಒಂದು ಬಂಗಾರದ ಕರೆಳ್ಳಿ 10 ಗ್ರಾಂ .ಕಿ. 25,000=00 ರೂ. 5) ಒಂದು ಜೋತೆ ಕಿವಿಓಲೆ 10 ಗ್ರಾಂ .ಕಿ. 25,000=00 ರೂ. 6) ಬೆಳ್ಳಿಯ ಕಾಲ್ಚೈನ, ಊಡದಾರ 400 ಗ್ರಾಂ .ಕಿ. 20,000=00 ರೂ ಹೀಗೆ ಒಟ್ಟು 80 ಗ್ರಾಂ ಬಂಗಾರ ಮತ್ತು 400 ಗ್ರಾಂ ಬೆಳ್ಳಿಯ ಆಭರಣಗಳು ಅಂದಾಜು ಕಿಮ್ಮತ್ತು 2,20,000=00 ರೂ ಬೆಲೆ ಬಾಳುವ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಪ್ರಕರಣ ದಾಖಲಿಸಿ ತನಿಖೆ ಕೈಕೊಂಳ್ಳಲಾಗಿದೆ.

09 July 2013

Gulbarga Dist Reported Crimes

ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ ಠಾಣೆ: ದಿನಾಂಕ: 08/07/2013 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಶ್ರೀ. ಜಯವಂತರೆಡ್ಡಿ  ತಂದೆ ಮಾಣಿಕರೆಡ್ಡಿ ಯನಗಲ : 40 ವರ್ಷ ಜಾ: ರೆಡ್ಡಿ :ಒಕ್ಕಲುತನ  ಸಾ: ಮುಸ್ತಾರಿವಾಡಿ ತಾ:ಹುಮನಾಬಾದ  ಜಿ: ಬೀದರ  ಮತ್ತು ಜಗನ್ನಾಥರೆಡ್ಡಿ ತಂದೆ ವೀರಾರೆಡ್ಡಿ : 45 ವರ್ಷ ಸಾ; ಚರಕಪಲ್ಲಿ ತಾ: ಜಹಿರಾಬಾದ ಜಿ: ಮೇದಕ (ಎ.ಪಿ) ರವರು ಹುಮನಾಬಾದ- ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ಕಮಲಾಪೂರ ಅಂಬೇಡ್ಕರ್ ಕಾಲೂನಿಯ ಹತ್ತಿರದ ದಾಬಾಕ್ಕೆ ಹೋಗುವ ಕುರಿತು  ಜಗನ್ನಾಥ ರೆಡ್ಡಿಯ ಮೋಟರ್ ಸೈಕಲ ನಂ: ಕೆಎ-39- ಹೆಚ್ - 3834 ನೇದ್ದರ ಮೇಲೆ ಕುಳಿತುಕೊಂಡು ಹೋಗುತ್ತಿದ್ದಾಗ ಇಸ್ಮಾಯಿಲ್ ದಾಬಾದ ಹತ್ತಿರ  ಗುಲಬರ್ಗಾ ಕಡೆಯಿಂದ  ಹಣಮಂತ ತಂದೆ ಸೋಮಶೇಖರ ಪಾಟೀಲ್  ಸಾ; ನವನಿಹಾಳ  ಈತನು ತನ್ನ ಮೋಟರ್ ಸೈಕಲ್ ನಂಬರ್ ಕೆಎ-32-ವಿ-2934 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜಗನ್ನಾಥರೆಡ್ಡಿಯ ಮೋಟರ್ ಸೈಕಲಗೆ ಅಪಘಾತ ಪಡಿಸಿದ್ದು ಅಪಘಾತದಲ್ಲಿ ಜಗನ್ನಾಥರೆಡ್ಡಿಯ ತೆಲೆಯ ಹಿಂದುಗಡೆ ರಕ್ತಗಾಯವಾಗಿ  ಎಡಕಿವಿಯಿಂದ ರಕ್ತ ಬರುತ್ತಿರುವದನ್ನು ಕಂಡು ಜಯವಂತರೆಡ್ಡಿ ಚಿರಾಡುತ್ತಿದ್ದಾಗ ಅಪಘಾತ ಪಡಿಸಿದ ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಪಘಾತವು ದಿನಾಂಕ:08/07/2013 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಜರುಗಿದ್ದು. ನಂತರ ಯಾರೋ 108 ಅಂಬುಲೇನ್ಸ್ ಗೆ ಫೋನ್ ಮಾಡಿ ಕರೆಯಿಸಿ ಜಗನ್ನಾಥರೆಡ್ಡಿಯನ್ನು ಅಂಬುಲೇನ್ಸದಲ್ಲಿ ಕರೆದುಕೊಂಡು ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ತಂದು ಜಗನ್ನಾಥರೆಡ್ಡಿಯನ್ನು ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಆಸ್ಪತ್ರೆಗೆ ಕರೆದುಕೊಂಡು ರಾತ್ರಿ  11-30 ಗಂಟೆ ಸುಮಾರಿಗೆ ಜಹಿರಾಬಾದ ಸಮೀಪ ಮಾರ್ಗಮಧ್ಯದಲ್ಲಿಯೇ ಜಗನ್ನಾಥರೆಡ್ಡಿ  ಮೃತಪಟ್ಟ ಬಗ್ಗೆ ಶ್ರೀ. ಜಯವಂತರೆಡ್ಡಿ  ತಂದೆ ಮಾಣಿಕರೆಡ್ಡಿ ಯನಗಲ ರವರು ಫಿರ್ಯಾದಿಯ ಹೇಳಿಕೆ ಸಲ್ಲಿಸಿದ್ದು ಫಿರ್ಯಾದಿಯ ಮೇಲಿಂದ ಕಮಲಪೂರ ಪೊಲೀಸ್ ಠಾಣೆಯಲ್ಲಿ ಕಲಂ 279. 304 [ಎ] ಐಪಿಸಿ ಸಂಗಡ  187 ಐಎಂವ್ಹಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ