POLICE BHAVAN KALABURAGI

POLICE BHAVAN KALABURAGI

22 June 2013

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ ಠಾಣೆ:ಶ್ರೀಮತಿ ಶಿವಕಾಂತಮ್ಮ ಗಂಡ ಹುಲಿಗಯ್ಯ ಗುತ್ತಧಾರ ಸಾ: ಸಾಯಿರಾಮ ನಗರ ಗುಲಬರ್ಗಾ ರವರು ನಾನಿ ಬೀದರಕ್ಕೆ ಹೋಗಿದ್ದಾಗ ದಿನಾಂಕ 20/21-06-2013 ರ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಸಾಯಿ ರಾಮ ನಗರದಲ್ಲಿರುವ ನಮ್ಮ ಮನೆಯ ಬಾಗಿಲ ಕೀಲಿ ಮೂರಿದು ಮನೆಯಲ್ಲಿಟ್ಟ ಬಂಗಾರದ 2 ಸುತ್ತು ಉಂಗುರ ಸಾದಾ ನಮೂನೆಯ ತಲಾ 5 ಗ್ರಾಂ ಒಟ್ಟು 10 ಗ್ರಾಂ ಅ,ಕಿ 25,000/- , ಬಂಗಾರದ ಬಿಸ್ಕಿಟ ನಮೂನೆಯ ಇದ್ದ ಬಂಗಾರ 15 ಗ್ರಾಂ ಅ.ಕಿ 45,000/- ರೂ, ಬೆಳ್ಳಿಯ ನಾಲ್ಕು ಗ್ಲಾಸಗಳು ಡಿಸೈನದ್ದು ಅ.ಕಿ 6,000/-,ಬೆಳ್ಳಿಯ ಬಟ್ಟಲುಗಳು ಸಾದಾ ಮಾಟದ್ದು 4 ಅ.ಕಿ 2000/- ,ಬೆಳ್ಳಿಯ ಪ್ಲೇಟಗಳು 5 ಅ.ಕಿ 3000/-, ನಗದು ಹಣ ಒಟ್ಟು 19,300/- ಇವುಗಳಲ್ಲಿ 500, 100 ರೂಪಾಯಿ ನೋಟುಗಳಿದ್ದವು. ಹೀಗೆ ಒಟ್ಟು  1,00,300/- ರೂ ಬೆಲೆ ಯುಳ್ಳದ್ದು ಕಳುವಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:97/2013 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಾಣೆಯಾದ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ. ಜಗದೇವಿ ಗಂಡ ಜೈಭೀಮ ಚನ್ನಗುಂಡೆ  ವಯ:26 ವರ್ಷ ಉ: ಹೊಲ-ಮನೆ ಕೆಲಸ  ಜಾತಿ:ಹೊಲೆಯ  ಸಾ: ಕೇರೂರ  ತಾ: ಆಳಂದ ರವರು ನನ್ನ ಗಂಡನಾದ ಜೈಭೀಮ ಇತನು ದಿನಾಂಕ:28/05/2013 ರಂದು ಮಧ್ಯಾಹ್ನ 2 ಗಂಟೆಗೆ ನಮ್ಮ ಕೇರೂರ ಗ್ರಾಮದಿಂದ ಮಾದನ ಹಿಪ್ಪರಗಾಕ್ಕೆ ಹೋಗಿ ಬಜಾರ ಮಾಡಿಕೊಂಡು ಬರುತ್ತೆನೆ ಅಂತಾ ಮನೆಯಲ್ಲಿ ಹೇಳಿ ಹೋದವನು ಇಲ್ಲಿಯವರೆಗೆ ಮನೆಗೆ ಮರಳಿ ಬಂದಿರುವುದಿಲ್ಲಾ ಎಲ್ಲಾ ಕಡೆ ಹುಡುಕಾಡಿದರು  ಪತ್ತೆಯಾಗಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ.ನಂ:52/2013 ಕಲಂ: ಮನುಷ್ಯ ಕಾಣೆಯಾದ ಬಗ್ಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷೀಣೆ ಕಿರುಕುಳ ಪ್ರಕರಣ:
ಶಹಾಬಾದ ನಗರ ಠಾಣೆ;ದಿನಾಂಕ:16/04/2012 ರಂದು ಪೇಠಶಿರೂರ ಗ್ರಾಮದಲ್ಲಿ ಆನಂದರಾವ ಘಾಟೆ ಇವರ ಮಗನಾದ ರಾಜೇಶ ಇವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿರುತ್ತಾರೆ. ನನಗೆ ಆಂಧ್ರದ ವೆಲ್ಗಟೂರ ಗ್ರಾಮಕ್ಕೆ ಕರೆದುಕೊಂಡು ಹೋಗಿರುತ್ತಾರೆ ಅಲ್ಲಿ ನನ್ನ ಗಂಡ ರಾಜೇಶ, ಮಾವ ಆನಂದರಾವ, ಅತ್ತೆ ಶಾಂತ@ಖ್ಯಾದ, ನಾದಿನಿಯರಾದ ಜ್ಯೋತಿ, ರಜಿತ, ಲತಾ ಇವರೆಲ್ಲರೂ ಸೇರಿಕೊಂಡು ನೀನು ದರಿದ್ರ ಹೆಣ್ಣು ಗಂಟು ಬಿದ್ದೀದಿ, ನಿನಗೆ ಮದುವೆ ಮಾಡಿಕೊಂಡಿದ್ದಕ್ಕೆ ಯಾವುದೆ ಲಾಭ ಆಗಿಲ್ಲ  ತವರು ಮನೆಯಿಂದ ಮದುವೆಯಲ್ಲಿ ಕೊಟ್ಟ ಸಾಮಾನುಗಳು ಯಾವುದಕ್ಕೂ ಬರುವದಿಲ್ಲಾ ನಿನಗೆ ಅಡುಗೆ ಮಾಡಲು ಬರುವದಿಲ್ಲಾ, ನಡತೆಗೆಟ್ಟವಳು ನೀನು ನಮ್ಮ ಮನೆಯಲ್ಲಿ ಇರಬೇಕಾದರೆ ತವರು ಮನೆಯಿಂದ ಇನ್ನೂ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಎಂದು ಮಾನಸಿಕ ಹಿಂಸೆ ನೀಡಿರುತ್ತಾರೆ ಹಾಗೂ ವಿಷ ಬೇರಿಸಿದ ಔಷದ ಕೊಟ್ಟು, ಗ್ಯಾಸ ಸಿಲಿಂಡೆರ ತೆರೆದು, ಭಾವಿಗೆ ನೂಕಿ ಕೊಲ್ಲಲು ಪ್ರಯತ್ನಿಸಿರುತ್ತಾರೆ, ಹಾಗೂ ಕೈಯಿಂದ ಹೊಡೆದಿರುತ್ತಾರೆ, ನಿನ್ನೆ ರಾತ್ರಿ 10-11 ಸುಮಾರಿನ ಸಮಯದಲ್ಲಿ ನನ್ನ ಗಂಡ, ಮಾವ, ಅತ್ತೆ ಮತ್ತು ಮೂವರು ನಾದಿನಿಯರು ಸೇರಿಕೊಂಡು ನನ್ನ ತವರು ಮನೆಯಾದ ಶಹಾಬಾದಕ್ಕೆ ಬಂದು ನೀನು ವಿಚ್ಛೇದನಾ ಕೊಡದಿದ್ದರೆ ನಿನಗೆ ಮತ್ತು ನಿನ್ನ ತವರು ಮನೆಯವರಿಗೆ ಖಲಾಸ ಮಾಡುವದಾಗಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಶ್ರೀಮತಿ ಶಿವರಂಜನಿ ಗಂಡ ರಾಜೇಶ ಗಾಟೆ ವ:19 ಜಾ:ಯಾದವ ಉ:ಮನೆಕೆಲಸ ಸಾ:ವೆಲ್ಗೆಟೂರ ಜಿಲ್ಲೆ:ಕರೀಂ ನಗರ ರಾಜ್ಯ ಆಂಧ್ರ ಪ್ರದೇಶ ಹಾ:ವ:ಹನುಮಾನ ನಗರ ಶಹಾಬಾದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 128/2013 ಕಲಂ:323,307,498(ಎ),504,506 ಸಂ:149 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅತ್ಯಚಾರ ಪ್ರಕರಣ:

ಮಹಿಳಾ ಪೊಲೀಸ್ ಠಾಣೆ:ನಾನು ಎರಡು ಗಂಡು ಮಕ್ಕಳ ತಾಯಿಯಿದ್ದು, ನನ್ನ ನನ್ನ ಗಂಡ ಗ್ಯಾಸ ರೀಪೆರಿ ಮತ್ತು ರೀಫಿಲಿಂಗ ಸೇಂಟರ್ ಅಂಗಡಿ ಇಟ್ಟುಕೊಂಡಿರುತ್ತಾರೆ. ನನ್ನ ಗಂಡ ವ್ಯಾಪಾರ ಮಾಡುವ ಅಂಗಡಿಯಲ್ಲಿ ವಿಜಯಕುಮಾರ ತಂದೆ ನಾಗೇಂದ್ರಪ್ಪಾ ಅಣಕಲ ಎಂಬುವನು ನಾವು ಈ ಮೊದಲು ಸಿದ್ದೇಶ್ವರ ಕಾಲೋನಿಯಲ್ಲಿದ್ದಾಗ ಕೆಲಸ ಮಾಡುತ್ತಿದ್ದರು. ನನ್ನ ಗಂಡನಿಗೆ ಊಟದ ಬುತ್ತಿ ತೆಗೆದುಕೊಂಡು ಹೋದಾಗ ಅವನು ನಮ್ಮ್ಲಲ್ಲಿ ಕೆಲಸ ಮಾಡುತ್ತಿದ್ದರಿಂದ ಪರಿಚಯವಾಗಿರುತ್ತದೆ ಸುಮಾರು 5-6 ತಿಂಗಳ ಹಿಂದೆ ನನ್ನ ಮನೆಗೆ ವಿಜಯಕುಮಾರ ಅಣಕಲ ಇತನು ಬಂದು ನಿನ್ನ ಗಂಡನಿಗೆ  ಮೂರು ಲಕ್ಷ ರೂಪಾಯಿ ಸಾಲ ಕೊಟ್ಟಿರುತ್ತೇನೆ ಸಾಲ ಕೊಡು ಅಂದರೆ ಅವನು ತಲೆ ಮರೆಸಿಕೊಂಡಿರುತ್ತಾನೆ ಅಂತಾ ಬೈದು ನನಗೆ ಕೂದಲು ಹಿಡಿದು ಎಳೆದಾಡಿ ಹೊಡೆ ಬಡೆ ಮಾಡುತ್ತಿರುವದನ್ನು ಕಂಡು ನಮ್ಮ ಮನೆಯ ಮಾಲಿಕರು ಜಗಳ ಬಿಡಿಸಿದರು, ನನ್ನ ಗಂಡನಿಗೆ ವಿಷಯ ತಿಳಿಸಿದೆ ಅವರು ವಿಜಯಕುಮಾರನಿಗೆ ತಮ್ಮನಿಂಗಿತ ಹೆಚ್ಚಿಗೆ ನೋಡಿರುತ್ತೇನೆ ವಿಚಾರಿಸೊಣ ಅಂತಾ ಸುಮ್ಮನಾದರು ದಿನಾಂಕ:27.05.2013 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ರಾಜು ಎಂಬುವನು ಮನೆಗೆ ಬಂದು ನಿಮಗೆ ವಿಜಯಕುಮಾರ ಕರೆಯುತ್ತಿದ್ದಾನೆ ಅಂತಾ ಹೇಳಿದ್ದರಿಂದ ನಾನು ಹಣದ ವಿಷಯದಲ್ಲಿ ಕರೆಯಿತ್ತಿರಬಹುದು ಅಂತಾ ನನ್ನ ಮಕ್ಕಳೊಂದಿಗೆ ರಾಜುವಿನೊಂದಿಗೆ ಹಿಂಬಾಲಿಸಿ ವಿಜಯಕುಮಾರ ಇದ್ದಲ್ಲಿಗೆ ಹೋದೆನು. ಅಲ್ಲಿ ವಿಜಯಕುಮಾರ ಹಾಗೂ ಇತರ 3-4 ಜನರು ವಿಜಯಕುಮಾರನು ಇತ್ತಿಚಿಗೆ ಕ್ರೂಜರ್ ಜೀಪ ಖರೀದಿಸಿದ ವಾಹನದಲ್ಲಿ ಆಳಂದ ಪಟ್ಟಣಕ್ಕೆ ಕರೆದುಕೊಂಡು ಹೋಗಿ ರಫೀಕ ಎಂಬುವವರ ಮನೆಯಲ್ಲಿ ಕೂಡಿ ಹಾಕಿ ದಿನಾಂಕ:27.05.2013 ರಿಂದ ದಿನಾಂಕ:21.06.2013 ರವರೆಗೆ ಪ್ರತಿ ದಿವಸ ಕುಡಿದು ಬಂದು ನನ್ನ ಮಕ್ಕಳಿಗೆ ಕೊಲೆ ಮಾಡುತ್ತೇನೆ ಅಂತಾ ಬೆದರಿಸಿ ನನ್ನೊಂದಿಗೆ ಜಬರಿ ಸಂಬೋಗ ಪ್ರತಿ ರಾತ್ರಿ ಮಾಡಿರುತ್ತಾನೆ. ಬೆಳಿಗ್ಗೆ ಅವನ ಮಿತ್ರರು ಕಾವಲು ಕಾಯುತ್ತಿದ್ದರು. ದಿನಾಂಕ:21.06.2013 ರಂದು ಮಧ್ಯಾಹ್ನ ನನ್ನ ಗಂಡನಿಗರ ಪೋನ ಮಾಡಿ ನಾ ಇರುವ ಸ್ಥಳ  ಹಾಗೂ  ನನಗೆ ಅಪಹರಿಸಿ ಜಬರಿ ಸಂಬೋಗ ಮಾಡಿದ ಬಗ್ಗೆ ತಿಳಿಸಿದರಿಂದ ನನ್ನನ್ನು ಕರೆದುಕೊಂಡು ಬಂದಿರುತ್ತಾರೆ ಅಂತಾ ನೊಂದ 28 ವರ್ಷದ ಮಹಿಳೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:37/2013 ಕಲಂ 143.147.341.366.376.504.506.ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

21 June 2013

GULBARGA DISTRICT REPORTED CRIME

ಅಪಘಾತ ಪ್ರಕರಣ:


ವಾಡಿ ಪೊಲೀಸ್ ಠಾಣೆ:ದಿನಾಂಕ:20-06-2013 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ನನ್ನ ಮಗ ಬಾಬುಮಿಯಾ ತನ್ನ ಹೀರೊ ಹೊಂಡಾ ಪ್ಯಾಸನ್ ಮೋಟರ್ ಸೈಕಲ್ ನಂ ಕೆಎ-39 ಎಚ್-9334 ನೇದ್ದರ ಮೇಲೆ ಹಲಕಟ್ಟಾಗೆ ಬರುತ್ತಿರುವಾಗ ಚೌವಾಣ ದಾಬಾ ಹತ್ತಿರ ರಸ್ತೆಯ ಮೇಲೆ ಲಾರಿ ನಂ ಕೆಎ-32 ಬಿ-2343 ನೇದ್ದರ ಚಾಲಕ ನಿರ್ಲಕ್ಷತನದಿಂದ ರಸ್ತೆಯಲ್ಲಿ ಲಾರಿ ನಿಲ್ಲಿಸಿ ಯಾವುದೇ ಮುನ್ಸೂಚನೆ ಲೈಟ ಹಾಕದೇ ನಿಲ್ಲಿಸಿದ್ದರಿಂದ ನನ್ನ ಮಗ ತನ್ನ ಮೋಟಾರು ಸೈಕಲದೊಂದಿಗೆ ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಮಗನಿಗೆ ತಲೆಗೆ, ಮುಖಕ್ಕೆ ಎದೆಗೆ ಬಾರಿ ರಕ್ತಗಾಯವಾಗಿತ್ತು, ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ರಾತ್ರಿ 11.00 ಗಂಟೆಗೆ ತೆಗೆದುಕೊಂಡು ಬಂದಾಗ ವೈದ್ಯರು ಮರಣ ಹೊಂದಿರುತ್ತಾನೆ ಅಂತಾ ತಿಳಿಸಿದರು. ನನ್ನ ಮಗ ಸಾವಿಗೆ ಲಾರಿಯ ಚಾಲಕನೇ ಕಾರಣನನಾಗಿರುತ್ತಾನೆ. ಅಂತಾ ಶ್ರೀ,ಮತಿ ಸಾಹೇಬಿ ಗಂಡ ಬಾಸುಮಿಯಾ ಮಲ್ಲೆವಾಲೆ ಸಾ|| ಹಲಕಟ್ಟಾ ದರ್ಗಾದ ಹತ್ತಿರ ಹಲಕಟ್ಟ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:107/2013 ಕಲಂ 279,283,304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

19 June 2013

GULBARGA DISTRICT REPORTED CRIMES

ಎರಡನೆ ಮದುವೆ ಮಾಡಿಕೊಂಡ ಬಗ್ಗೆ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:18/06/2013 ರಂದು ಸಾಯಂಕಾಲ 6-00 ಗಂಟೆಗೆ ನಮ್ಮ ಠಾಣೆಯ ಕೋರ್ಟ ಸಿಬ್ಬಂದಿಯಾದ ಶ್ರೀ ಮಾಣಿಕ ಪಿಸಿ ರವರು ಮಾನ್ಯ 1ನೇ ಅಪರ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶ ಸಂ.2469 ದಿನಾಂಕ: 14/06/2013 ನೇದ್ದರ ಅರ್ಜಿದಾರಳಾದ ಶ್ರೀಮತಿ ಉಷಾದೇವಿ ಗಂಡ ಸಂಗಣ್ಣಾ ಕಲ್ಲೂರ ವಯ:55ವರ್ಷ ಉಃಮನೆಕೆಲಸ ಸಾಃಹೊಳಕುಂದಾ ತಾಃಗುಲಬರ್ಗಾ ಇವರು 1975 ರಲ್ಲಿ ಸಂಗಣ್ಣಾ ತಂದೆ ಬಸವಣ್ಣಪ್ಪಾ ಕಲ್ಲೂರ ವಯ:60 ವರ್ಷ ಉಃನಿವೃತ್ತ ಫಾರೆಸ್ಟ ಅಧಿಕಾರಿಯೊಂದಿಗೆ ಮದುವೆಯಾಗಿದ್ದು. ನಮಗೆ ಮಹಾನಂದ ಎಂಬ ಮಗಳು ಜನಿಸಿದ್ದು ಅವಳು 3 ವರ್ಷದ ನಂತರ ಅನಾರೋಗ್ಯದಿಂದ ಮೃತಪಟ್ಟಿದ್ದು. ಮದುವೆಯಾದ 4-5 ವರ್ಷಗಳ ನಂತರ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕವಾಗಿ ನೌಕರಿಗೆ ಸೇರಿ, ಅವರಾದ ತಾಲ್ಲೂಕಿನ ಸಂಗಮ ಫಾರೆಸ್ಟಗೆ ವರ್ಗಾವಣೆಯಾಗಿ ನಂತರ ಹುಮನಾಬಾದಕ್ಕೆ  ವರ್ಗಾವಣೆಯಾಯಿತು. ಆವಾಗಿನಿಂದ ದಿನಾಲು ಕುಡಿಯುವುದು ತಿನ್ನುವುದು ಮಜಾ ಮಾಡಿ  ಹೊಡೆಬಡೆ ಮಾಡುತ್ತಿದ್ದನು. ನಾನು ಬೇಸತ್ತು ನಾನು ನನ್ನ ತವರು ಮನೆಯಲ್ಲಿ ಬಂದು ಉಳಿದೇನು. ನಂತರ ನನಗೆ ಗೊತ್ತಾಗದಂತೆ 2000ನೇ ಸಾಲಿನಲ್ಲಿ ಕಮಲಾಪೂರ ಗ್ರಾಮದ ರಾಮತೀರ್ಥ ಗುಡಿಯಲ್ಲಿ ರೇಣುಕಾ @ ಆಶಾದೇವಿ ತಾಯಿ ನಾಗಮ್ಮಾ ಸಾಃಹೊಳಕುಂದಾ ಹಾಃವಃ ಹುಮನಾಬಾದ  (ಗಂಡ ಸಂಗಣ್ಣಾ ಕಲ್ಲೂರ ) ಇವಳೊಂದಿಗೆ 2ನೇ ಮದುವೆ ಮಾಡಿಕೊಂಡು ಮತದಾನ ಪತ್ರದಲ್ಲಿ ಹೆಸರು ಸೇರಿದ್ದು ಅಲ್ಲದೇ ತನ್ನ ಸೇವಾ ಪುಸ್ತಕದಲ್ಲಿ ನನ್ನ ಹೆಸರು ತೆಗೆದು ಹಾಕಿ 2ನೇ ಹೆಂಡತಿಯಾದ ರೇಣುಕಾ @ಆಶಾದೇವಿ ಇವಳ ಹೆಸರು ನಮೂದಿಸಿದ್ದಾರೆ.ನನ್ನ ಗಂಡ ಸಂಗಣ್ಣಾ ಈತನು 2ನೇ ಮದುವೆ ಮಾಡಿಕೊಂಡು ತನ್ನ ಸೇವಾ ಪುಸ್ತಕ ದಲ್ಲಿ 2ನೇ ಹೆಂಡತಿ ಹೆಸರು ನಮೂದಿಸಿ ನನಗೆ  ಮೋಸ ಮಾಡಿದ್ದರಿಂದ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ನ್ಯಾಯಾಲಯದ ಆದೇಶ ಪ್ರಕಾರ ದೂರು ವಸೂಲಾಗಿದ್ದರಿಂದ ಠಾಣೆ ಗುನ್ನೆ ನಂ:58/2013 ಕಲಂ. 494, 420, 465, 468, 419 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ದಿನಾಂಕ:18-06-2013 ರಂದು ಸಂಬಂಧಿಯೊಬ್ಬರು ಹುಡಾ (ಬಿ) ಗ್ರಾಮದಲ್ಲಿ ಮೃತಪಟ್ಟಿದ್ದರಿಂದ ಮೃತನ ಅಂತಿಮ ಕಾರ್ಯಕ್ಕೆ ಹೋದಾಗ ಸೂರ್ಯಕಾಂತ ಸಿಬರ್ ಈತನು ವಿನಾಃಕಾರಣ ಜಗಳ ತೆಗೆದಿದ್ದನು. ರಾತ್ರಿ 9-00 ಗಂಟೆಗೆ ಮಳಖೇಡಕ್ಕೆ ಬಂದು ಮನೆಯ ಮುಂದೆ ನಿಂತಾಗ ಸೂರ್ಯಕಾಂತ ಮತ್ತು ಅವನ ಸಂಗಡ ಅಣ್ಣ ತಮ್ಮಂದಿರು ಕೂಡಿಕೊಂಡು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಶ್ರೀ ರವಿಚಂದ್ರ ತಂದೆ ಶರಣಪ್ಪ ಸಿಬರ್ ವಯಾ|| 21 ವರ್ಷ ಜಾ|| ಕಬ್ಬಲಿಗ ಉ||  ಆರ್.ಸಿ.ಎಫ್ ಕಂಪನಿಯಲ್ಲಿ ಕೆಲಸ ಸಾ|| ಮಳಖೇಡ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:59/2013 ಕಲಂ 323. 324. 504 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ದಿನಾಂಕ:18-06-2013 ರಂದು ಸಂಬಂಧಿಯೊಬ್ಬರು ಹುಡಾ (ಬಿ) ಗ್ರಾಮದಲ್ಲಿ ಮೃತಪಟ್ಟಿದ್ದರಿಂದ ಮೃತನ ಅಂತಿಮ ಕಾರ್ಯಕ್ಕೆ ನಾವು ಮತ್ತು ರವಿಚಂದ್ರ ತಂದೆ ಶರಣಪ್ಪ ಸಿಬರ್  2) ಸಾಬಣ್ಣ 3ನಾಗಪ್ಪ ಸಾ|| ಎಲ್ಲರು ಮಳಖೇಡ ರವರು ಜಗಳ ತೆಗೆದಿದ್ದು ಮರಳಿ ಮಳಖೇಡಕ್ಕೆ ಬಂದಾಗ ನಿಮ್ಮ ತಮ್ಮ ನಮ್ಮ ಜೋತೆ ಜಗಳ ತೆಗೆದಿದ್ದಾನೆ ನಿಮ್ಮ ಸೊಕ್ಕು ಬಹಳ ಬಂದಿದೆ ಅಂತ ಅವಾಚ್ಯವಾಗಿ ಬೈದು ಹೋಡೆ ಬಡೆ ಮಾಡಿರುತ್ತಾರೆ ಅಂತಾ ಲಕ್ಷ್ಮಿಕಾಂತ ತಂದೆ ಚಂದ್ರಪ್ಪ ಸಿಬಾನೋ ವಯಾ||23 ವರ್ಷ ಜಾ|| ಕಬ್ಬಲಿಗ ಉ|| ಆರ್.ಸಿ.ಎಫ್ ಕೇಲಸ ಸಾ|| ಮಳಖೇಡ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:60/2013 ಕಲಂ 341. 323. 504 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.