POLICE BHAVAN KALABURAGI

POLICE BHAVAN KALABURAGI

22 February 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ನಾನು ಮತ್ತು ನನ್ನ ಹೆಂಡತಿ ಅನೀತಾ, ನನ್ನ ಅಣ್ಣ ರಾಜೇಂದ್ರ, ಅತ್ತಿಗೆಯಾದ ಅಶ್ವಿನಿ ನಾಲ್ಕು ಜನರು ಹಾಗೂ ಹೋಳಿ ಗ್ರಾಮದ ಇತರ 5 ಜನರು ಹಾಗೂ ನಮ್ಮ  ಗ್ರಾಮದ ರಂಜಿತ್ ಮತ್ತು ಗಣೇಶ ಎಲ್ಲರೂ ಕೂಡಿಕೊಂಡು ನಮ್ಮ ಗ್ರಾಮದಿಂದ ನಾಗರಳ್ಳಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಡೆಯಲು 3 ತಿಂಗಳ ಹಿಂದೆ ಮುರಗಾನೂರ ಗ್ರಾಮಕ್ಕೆ ಬಂದು ಕೆಲಸ ಮಾಡುತ್ತಿದ್ದೆವು ದಿನಾಂಕ:21-02-2013 ರಂದು ಮುರಗಾನೂರ ಗ್ರಾಮದ ಶಿವಪೂಜೇಪ್ಪ ಒಡೆಯರ ಇವರ ಹೊಲದಲ್ಲಿಯ ಕಬ್ಬು ಕಡೆದು ಟ್ರ್ಯಾಕ್ಟರನಲ್ಲಿ ತುಂಬಲು ಟ್ರ್ಯಾಕ್ಟರ ನಂ ಕೆಎ-32/ಟಿ-995 ನೇದ್ದರಲ್ಲಿ ನನ್ನ ಅಳಿಯ ಗಣೇಶ, ರಂಜಿತ್ ಇವರಿಬ್ಬರು ನನ್ನ ಮಗನನ್ನು ತಗೆದುಕೊಂಡು ಟ್ರ್ಯಾಕ್ಟರ ನಲ್ಲಿ ಕುಳಿತುಕೊಂಡು ಶಿವಪೂಜೇಪ್ಪ ಒಡೆಯರರವರ ಹೊಲಕ್ಕೆ ಹೋರಟಿದ್ದು, ಟ್ರ್ಯಾಕರ್ ಚಾಲಕ ಸಿದ್ದಪ್ಪ ತಂದೆ ಶಂಕ್ರಪ್ಪ ಇತನು ಚಲಾಯಿಸುತ್ತಿದ್ದು, ಚಾಲಕನು ತನ್ನ ಟ್ರ್ಯಾಕ್ಟರ ಅತೀವೇಗ ಹಾಗೂ ಅಲಕ್ಷತನದಿಂದ ನಡೆಸುತ್ತಾ ಹೋಗಿ ಮುಗಾನೂರದ ಶಿವಲಿಂಗಪ್ಪ ಕಾಳಗಿ ಇವರ ಹೊಲದ ಕೆನಾಲನಲ್ಲಿ ಪಲ್ಟಿ ಮಾಡಿದನು. ನನ್ನ ಮಗ ಕೃಷ್ಣಾ ಇತನ ಹೊಟ್ಟೆಗೆ ಬಡೆದಿದ್ದು, ರಂಜಿತ್ ಮತ್ತು ಗಣೇಶನಿಗೆ ಭಾರಿಗಾಯವಾಗಿರುತ್ತದೆ.  ಉಪಚಾರ ಕುರಿತು ಜೇವರ್ಗಿ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ನನ್ನ ಮಗನು ಮೃತಪಟ್ಟನು ಗಾಯ ಹೊಂದಿದ ರಂಜಿತ್ ಮತ್ತು ಗಣೇಶನಿಗೆ ಜೇವರ್ಗಿಯಲ್ಲಿ ಉಪಚರಿಸಿ ಹೆಚ್ಚಿನ ಉಪಚಾರಕ್ಕಾಗಿ ಗುಲಬರ್ಗಾದ ಯುನಾಯಿಟೆಡ್ ಹಾಸ್ಪಟೇಲ್ ಗೆ ಸೇರಿಕೆ ಮಾಡಿರುತ್ತಾರೆ ಅಂತಾ ಶ್ರೀ ಸಂಜಯ ತಂದೆ  ಭೀಮರಾಯ ಪವಾರ ಸಾ:ಅಸ್ಟಾ ತಾ||ಲೋಹಾರ ಜಿ:ಓಸ್ಮಾನಾಬಾದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:35/2013  ಕಲಂ 279,337, 338,304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRCIT REPORTED CRIME


ದರೋಡೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ವಿದ್ಯಾದರ ತಂದೆ ಕೃಷ್ಣ ಭಟ್ ಸಾ|| ನಂದ ಗೋಕುಲ್  ಎನ್ ವಿ ಲೇಔಟ್ ಗುಲಬರ್ಗಾರವರು ನಾನು ಮತ್ತು ಸತ್ಯನಾಥ ಶೆಟ್ಟಿ ಹಾಗು ಅರುಣಾಚಲ್ ಭಟ್ ಕೂಡಿಕೊಂಡು ಪಾರ್ಟನರ್ ಶಿಪ್ ನಲ್ಲಿ ರಾಮ ಮಂದಿರ ಹತ್ತಿರ ಶ್ರೀ ಕಲ್ಯಾಣ ಅಸೋಸಿಯಟ್ಸ ಬಜಾಜ ಅಟೋ ಶೋ ರೂಮ್ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇವೆ. ದಿನಾಂಕ:20/02/2013 ರಂದು ರಾತ್ರಿ 8:00 ಗಂಟೆಯವರೆಗೆ ಶೋರೂಮ್ ನಲ್ಲಿದ್ದು ಕೆಲಸ ಮುಗಿಸಿಕೊಂಡು ಕೀಲಿ ಹಾಕಿಕೊಂಡು ಯಶ್ವಂತ ಹೊಸಮನಿ ವಾಚಮನಗೆ ಶೋರೋಮ ಚನ್ನಾಗಿ ನೋಡಿಕೋಳ್ಳುವಂತೆ ತಿಳಿಸಿ ಹೋಗಿರುತ್ತೆವೆ. ದಿನಾಂಕ:21/02/2013 ರಂದು ಬೆಳಗ್ಗೆ 5:30 ಗಂಟೆಗೆ ಹೊಸಮನಿ ವಾಚಮನ ನನಗೆ ಪೋನ ಮಾಡಿ ಯಾರೋ ಆರು ಜನ ಅಪರಿಚಿತರು ನಮ್ಮ ಶೋರೂಮ್ ಗೆ ಬಂದು ನನಗೆ ಹೊಡೆ ಬಡೆ ಮಾಡಿ ಶೆಟರ ಮುರಿದು 90,000/- ರೂಪಾಯಿಗಳು ದೋಚಿಕೊಂಡು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಶೊರೂಮ್ ಗೆ ಬಂದು ನೋಡಲಾಗಿ ನಮ್ಮ ಶೋರೂಮ್ ಮುಂದಿನ ಶೆಟರ  ಮುರಿದು 90,000/- ರೂಪಾಯಿಗಳು ತೆಗೆದುಕೊಂಡು ಹೋಗಿದ್ದು ನಿಜವಿರುತ್ತದೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:36/2013 ಕಲಂ, 395 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

21 February 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಸೂರ್ಯಕಾಂತ ತಂದೆ ಮಲ್ಲಪ್ಪ ಮದಾನೆ ವ:40 ವರ್ಷ ಉ: ಬಿ.ಇ.ಓ. ಬೀದರ ಜಾ: ಲಿಂಗಾಯತ ಸಾ: ಜವಳಿ (ಡಿ) ಗ್ರಾಮ ತಾ: ಆಳಂದ ಹಾ||ವ|| ನ್ಯೂ ರಾಘವೇಂದ್ರ ನಗರ ಗುಲಬರ್ಗಾ ರವರು ನನ್ನ ಆಧೀನದಲ್ಲಿ ಕರ್ತವ್ಯ ಮಾಡುವ ವೆಂಕಟ್ ತಂದೆ ಅಂಬಾರಾವ ಕುಲಕರ್ಣಿ :59 ವರ್ಷ : .ಸಿ.. ಬಿ... ಆಫೀಸ ಸಾ:ಎಲ್..ಜಿ. ಕಾಲನಿ ಬೀದರ ರವರು 15 ದಿವಸಗಳ ಹಿಂದೆ ನನ್ನ ಹೆಂಡತಿ ನಿರ್ಮಲಾ ಇವರಿಗೆ ಕುತ್ತಿಗೆ ಹತ್ತಿರ ಗಡ್ಡೆ ಆಗಿದ್ದರಿಂದ ಗುಲಬರ್ಗಾ ನಗರದ ಡಾ|| ಅರುಣ ಬಡಶೇಷಿವರ ಹತ್ತಿರ ಅಪರೇಶನ ಮಾಡಿಸಿರುತ್ತೆನೆ. ಅವರಿಗೆ ಕರೆದುಕೊಂಡು ಬರುವ ಕುರಿತು ವೆಂಕಟ ಕುಲಕರ್ಣಿ ಇವರ ಮಾರುತಿ ಅಲ್ಟೋ ಕೆಎ-05 ಎಂಜೆ-5068 ನೇದ್ದರಲ್ಲಿ  ಹೊರಟಾಗ ಮಧ್ಯಾಹ್ನ 4-30 ಗಂಟೆ ಹೊರಟಿದ್ದು, ಕಾರ ವೆಂಕಟ್ ಇವರು ನಡೆಸುತ್ತಿದ್ದವರು. ವೆಂಕಟ್  ಕುಲಕರ್ಣಿ ಇವರು ತಮ್ಮ ಕಾರು ಅತಿವೇಗ ಮತ್ತು ನಿಷ್ಕಾಳಿಜಿತ ನದಿಂದ ರೋಡಿನ ಮಧ್ಯದಲ್ಲಿ  ನಡೆಸುತ್ತಾ ಉಪಳಾಂವ ಕ್ರಾಸ ನಂತರ ಭವಾನಿ ಗುಡಿ ಎದುರಿನ ರೋಡಿನ ಮೇಲೆ ಬರುತ್ತಿರುವಾಗ ಬಿಳಿ ಬಣ್ಣದ ಟಾಟಾ ಇಂಡಿಕಾ ಕಾರ ಚಾಲಕನು ಕೂಡಾ ತನ್ನ ಕಾರನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ರೋಡಿನ ಮಧ್ಯದಲ್ಲಿ  ನಡೆಸುತ್ತಾ ಹೊರಟಿದ್ದು ಇಬ್ಬರು ವಾಹನ ಚಾಲಕರು ಮುಖಾಮುಖಿ ಡಿಕ್ಕಿ ಹೊಡೆದರು. ಇದರಿಂದಾಗಿ  ನನಗೆ  ನನ್ನ ಬಲಗಾಲ ಮತ್ತು ಎಡಗಾಲ ಮೊಳಕಾಲ ಮೇಲೆ ಭಾರಿ ಗುಪ್ತಗಾಯವಾಗಿದ್ದು, ವೆಂಕಟ್  ಕುಲಕರ್ಣಿ ಇವರಿಗೆ ನೋಡಲಾಗಿ ಅವರು ಎಡ ಹಣೆಯ ಮೇಲೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದರು. ನಮಗೆ ಡಿಕ್ಕಿ ಪಡಿಸಿದ ಕಾರ ನಂಬರ ನೋಡಲಾಗಿ ಕೆಎ-33 -5000 ನೇದ್ದರಲ್ಲಿರುವ ಜಮೀಲಖಾನ ಗುಲಬರ್ಗಾ ಇವರಿಗೆ ಮತ್ತು ಅವರ ಕಾರಿನಲ್ಲಿ ಕುಳಿತ ಇತರರಿಗೆ ಗುಪ್ತಗಾಯವಾಗಿರುತ್ತವೆ. ಟಾಟಾ ಇಂಡಿಕಾ ಕಾರ ಚಾಲಕ  ಹುಸೇನ  ಸಾ:ಸೀತನೂರ  ಹಾ::ಮುಸ್ಲಿಂ ಸಂಘ ಗುಲಬರ್ಗಾ ಇತನಿಗೆ ಬಾಯಿ ತುಟಿಗೆ ರಕ್ತಗಾಯವಾಗಿರುತ್ತವೆ. ಈ ಘಟನೆಗೆ ಇಬ್ಬರ ಕಾರ ಚಾಲಕರು ಕಾರಣವಾಗಿದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:100/2013 ಕಲಂ 279, 338 304 (ಎ) ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ: ಶ್ರೀ ಹರೀಶ್ಚಂದ್ರ ತಂದೆ ಸೋಮಲಾ ರಾಠೋಡ ಉ|| ತಾಜ ಸುಲ್ತಾನಪೂರದಲ್ಲಿ ಪ್ರಭಾರಿ ಪಿ.ಡಿ.ಓ ಸಾ:ಸಣ್ಣೂರ ಗ್ರಾಮ ಹಾ||ವ|| ಭಾಗ್ಯ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಮಕ್ಕಳು ಕೂಡಿಕೊಂಡು ನಮ್ಮೂರ ತಾಂಡಾದಲ್ಲಿ ದೇವರ ಕಾರ್ಯಕ್ರಮ ಇದ್ದುದ್ದರಿಂದ ದಿನಾಂಕ:19-02-2013 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಭಾಗ್ಯ ನಗರದ ಬಾಡಿಗೆ ಮನೆಗೆ ಕೀಲಿ  ಹಾಕಿಕೊಂಡು ಸಣ್ಣೂರ ತಾಂಡಾಕ್ಕೆ ಹೋಗಿರುತ್ತೇವೆ. ಮರಳಿ ದಿನಾಂಕ:20-02-2013 ರಂದು 10-00 ಗಂಟೆಗೆ ಮನೆಗೆ  ಬಂದಾಗ,  ನಮ್ಮ ಮನೆಯ ಮುಖ್ಯ್ಯ ದ್ವಾರದ ಬಾಗಿಲು ಕೀಲಿ ಮುರಿದು ಆಲಮಾರಿಟ್ಟಿದ್ದ  ಬಂಗಾರದ ಆಭರಣ ಹಾಗೂ ನಗದು ಹಣ 20,000/-  ರೂಪಾಯಿಗಳು ಮತ್ತು ಒಂದು ಸಾಮಸಾಂಗ ಮೋಬೈಲ್ ಅ.ಕಿ-8,000/- ರೂ  ಹೀಗೆ ಒಟ್ಟು 40,000/- ರೂ ಬೆಲೆಯುಳ್ಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 56/2013  ಕಲಂ, 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.