POLICE BHAVAN KALABURAGI

POLICE BHAVAN KALABURAGI

28 November 2012

GULBARGA DISTRICT REPORTED CRIMES


ಹುಡಗ ಕಾಣೆಯಾದ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ,ಅಂಬವ್ವ ಗಂಡ ದಶರಥ ಸನಾಗರ ವ||40,ಸಾ|| ಬೋರಾಬಾಯಿ ನಗರ ಬ್ರಹ್ಮಪುರ ಗುಲಬರ್ಗಾ ರವರು ನನ್ನ  ಮಗನಾದ ಮಂಜುನಾಥ @ಕಾಕಿ ತಂದೆ ದಶರಥ ಸನಾಗರ್ ವ||10 ವರ್ಷ, ಇತನು ದಿನಾಂಕ 02-11-2012 ರಂದು ಮದ್ಯಾಹ್ನ 3-00 ಗಂಟೆಗೆ ಮನೆಯಿಂದ ಹೊರಗೆ ಹೋದವನು ಮರಳಿ ಮನೆಗೆ ಬಂದಿರುವದಿಲ್ಲ. ಎಲ್ಲಾ ಕಡೆಗು ಹುಡುಕಾಡಿದರು ಮಗ ಪತ್ತೆ ಆಗದೇ ಇರುವದರಿಂದ, ಕಾಣೆಯಾದ ತನ್ನ ಮಗನನ್ನು ಪತ್ತೆ ಹಚ್ಚಿ ಕೊಡಬೇಕು ಅಂತ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:88/2012 ಕಲಂ ಹುಡುಗ ಕಾಣೆಯಾದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ. ಮಹ್ಮದ ಅಬ್ದುಲ ಖದೀರ ತಂದೆ ಮೊಹ್ಮದ ಅಬ್ದುಲ ಹಮೀದ ಸಾ|| ಮನೆ ನಂ: ಎಂ.ಐ.ಜಿ.10 ಆನಂದ ನಗರ ರಾಜಾಪೂರ ರೋಡ  ಗುಲಬರ್ಗಾ ರವರು ನಾನು ದಿನಾಂಕ:27/10/2012 ರಂದು 14-30 ಗಂಟೆಗೆ ಸುಪರ ಮಾರ್ಕೆಟ ಘಂಟೋಜಿ ಅಂಗಡಿ ಹತ್ತಿರ ನನ್ನ ಹೀರೋ ಹೊಂಡಾ ಸಿಡಿ 100 ಡಿಲಕ್ಸ್  ಕಪ್ಪು ಬಣ್ಣದ ಮೋಟರ ಸೈಕಲ ನಂ: ಕೆಎ 32 ಎಲ್4210 ||ಕಿ|| 30,000/- ನೇದ್ದನ್ನು ನಿಲ್ಲಿಸಿ ನಮಾಜ ಮುಗಿಸಿಕೊಂಡು ಬಂದು ನೋಡಲಾಗಿ ಯಾರೋ ಕಳ್ಳರು ನನ್ನ ಮೋಟರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 123/2012 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿ:27-11-12 ಮದ್ಯಾಹ್ನ 2-45 ಗಂಟೆ ಸುಮಾರಿಗೆ ಸಾಗರ ದಾಬಾದ ಹಿಂದಿನ ಜಾಗದಲ್ಲಿ ವಿಠಲ ತಂದೆ ಘಾಳೆಪ್ಪ ರಂಗೋಜಿ ವ: 21 ಸಾ: ದೇಗಾಂವ ತಾ: ಆಳಂದ ಹಾ:ವ: ಸಾಗರ ಧಾಬಾ,ಮಹ್ಮದಅಲಿ ತಂದೆ ಅಬ್ದುಲ ರಶೀದ ಶೇಕ ವ: 24 ವರ್ಷ ಸಾ: ರಹೇಮತ ನಗರ ಗುಲಬರ್ಗಾ,ಬಾಬಾ ತಂದೆ ಮಲ್ಲಿಕಸಾಬ ಭಾಗವಾನ ವ: 36 ಸಾ: ಚಟ್ಟೆವಾಡಿ ರೋಜಾ ಗುಲಬರ್ಗಾ,ಮಹೇಶ ತಂದೆ ರುಕ್ಮಣ್ಣ ಚವ್ಹಾಣ ವ: 35 ವರ್ಷ  ಸಾ: ಮಕ್ತಂಪೂರ ಗುಲಬರ್ಗಾ,ಸೋಮನಾಥ ತಂದೆ ಬಾಬುರಾವ ಏವಲೇ ವ: 35 ಸಾ: ಆರ್‌ಎಸ್‌ ಕಾಲನಿ ಗುಲಬರ್ಗಾ,ನಾಶೀರ ತಂದೆ ಮಹೇಬೂಬಪಟೇಲ ವ: 36 ಸಾ: ಬುಲಂದ ಪರವೇಜ ಕಾಲನಿ ಗುಲಬರ್ಗಾ,ಸದ್ದಾಂ ತಂದೆ ಅಮಜಾದ  ಶೇಖ ವ: 20 ಸಾ: ರಹೇಮತ ನಗರ ಗುಲ್ಬರ್ಗಾ,ಸೈಬಣ್ಣ ತಂದೆ ಮಲ್ಲಪ್ಪ ತೋಟ್ನಳ್ಳಿ ಸಾ:ಹೊಸಳ್ಳಿ ತಾ:ಸೇಡಂ ಹಾ:ವ:ಸಾಗರದಾಬಾ ಗುಲ್ಬರ್ಗಾ,ದತ್ತಾತ್ರೇಯ  ತಂದೆ ಕಾಶೀನಾಥ ಪಾಟಳ ವ: 35 ವರ್ಷ ಸಾ: ಸ್ಟೇಷನ ಗಾಣಗಾಪೂರ,ಓಂ ಪ್ರಕಾಶ ತಂದೆ ರಾಮಚಂದ್ರಪ್ಪ ಬಿರಾದಾರ ವ: 27 ವರ್ಷ ಸಾ: ಶಿವಾಜಿನಗರ ಗುಲಬರ್ಗಾ  ರವರು  ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಪಿ.ಎಸ.ಐ ಆನಂದರಾವ ಮತ್ತು ಸಿಬ್ಬಂದಿಯವರು ಮಾನ್ಯ ಡಿ.ಎಸ್.ಪಿ. (ಗ್ರಾ) ಉಪವಿಭಾಗ ಗುಲಬರ್ಗಾ ಮಾರ್ಗದರ್ಶನ ಮತ್ತು ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ ರವರ ನೇತ್ರತ್ವದಲ್ಲಿ ದಾಳಿ ಮಾಡಿ 10 ಜನರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಸಂಬಂಧಿ ಸಿದ ನಗದು ಹಣ 10,400/- ರೂ. ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನ ನಂ: ಗುನ್ನೆ ನಂ 390/12  ಕಲಂ 87 ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ಅಂಬುಬಾಯಿ ಗಂಡ  ಮಲ್ಲೇಶಪ್ಪಾ ಅಂಬಲಗಿ ವಯ;65 ವರ್ಷ ಉ: ಮನೆಗೆಲಸ ಸಾ: ಕಪನೂರ ತಾ: ಜಿ: ಗುಲಬರ್ಗಾರವರು ನಾನು ದಿನಾಂಕ:27/11/2012 ರಂದು ಹೊಲದಿಂದ ಮನೆಗೆ ರಸ್ತೆಯ ಪಕ್ಕದಿಂದ ನಡೆದುಕೊಂಡು ಬರುತ್ತಿರುವಾಗ ಸಾಯಂಕಾಲ 6:30 ಗಂಟೆಯ ಸುಮಾರಿಗೆ ಹುಮನಾಬಾದ ರಿಂಗ ರೋಡ ಕಡೆಯಿಂದ ಹಿಂದಿನಿಂದ ಯಾವುದೋ ಒಂದು ಮೋಟಾರ ಸೈಕಲ  ಸವಾರನು ನನಗೆ ಡಿಕ್ಕಿ ಹೊಡೆದು ಗಾಯಗೊಳಿಸಿ ತನ್ನ ಮೋಟಾರ ಸೈಕಲ್ಲನ್ನು ಹಾಗೇ ಒಡಿಸಿಕೊಂಡು ಓಡಿ ಹೋಗಿರುತ್ತಾನೆ ಅಂತಯಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:391/2012  ಕಲಂ 279 337 ಐಪಿಸಿ ಸಂಗಡ 187 ಐಎಂವಿ ಆಕ್ಟ್‌‌  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ಜಗದೇವಿ ಗಂಡ ಶರಣಪ್ಪ ಉಪ್ಪಾರ ವ: 30 ಉ: ಗೌಂಡಿಕೆಲಸ ಜಾ;ಲಿಂಗಾಯತ ಸಾ:ಮೋತಕಪಳ್ಳಿ ತಾ: ಚಿಂಚೋಳಿ ಹಾ: ವ: ಬೇಲೂರ (ಜೆ) ತಾ: ಜಿ: ಗುಲಬರ್ಗಾರವರು ನಾನು ನನ್ನ ಗಂಡ ದಿನಾಂಕ:27/11/2012 ರಂದು ಸಾಯಂಕಾಲ ಮೋಟಾರ ಸೈಕಲ ಮೇಲೆ ಕುಮಸಿ ಗ್ರಾಮದಿಂದ ಬೇಲೂರ (ಜೆ) ಗ್ರಾಮಕ್ಕೆ ನಮ್ಮ ಬಜಾಜ ಡಿಸ್ಕವರಿ ಮೋಟಾರ ಸೈಕಲ ನಂ:ಕೆಎ-32 ಇಎ-6238 ನೇದ್ದರ ಮೇಲೆ ಹೋರಟಿದ್ದು,ನನ್ನ  ಪತಿಯವರು ಅವರಾದ (ಬಿ) ಗ್ರಾಮ ದಾಟಿ ಸ್ವಾಮಿ ಸರ್ಮಥ ಆಶ್ರಮದ ಎದುರಿನ ರಸ್ತೆಯ ಮೇಲೆ ಅತಿವೇಗದಿಂದ ನಡೆಸುತ್ತಾ ಹೋರಟಾಗ ಎದರುನಿಂದ ಯಾವುದೋ ಭಾರಿ ವಾಹನ ಬರಲು ಅದರ ಲೈಟಿನ ಬೆಳಕು ಒಮ್ಮೇಲೆ ಮುಖದ ಮೇಲೆ ಬಿದಿದ್ದರಿಂದ ವೇಗದಲ್ಲಿ ಮೋಟಾರ ಸೈಕಲ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ನನಗೆ ಮತ್ತು ನನ್ನ ಗಂಡನಿಗೆ ತಲೆಗೆ ಹಣೆಗೆ ಅಲಲ್ಲಿ ರಕ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:392/12 ಕಲಂ 279,337 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

27 November 2012

GULBARGA DISTRICT REPORTED CRIMES


ಜೂಜಾಟ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ: ದಿನಾಂಕ: 26-11-2012 ರಂದು ಜಯನಗರದಲ್ಲಿರುವ ಅಂಬಿಕಾ ಚಾಟ್ ಅಂಗಡಿ ಎದರುಗಡೆ ಸಾರ್ವಜನಿಕರ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ  ಬಂದ ಮೇರೆಗೆ ಪಿಎಸ.ಐ ಶ್ರೀಮಂತ ಇಲ್ಲಾಳ ರವರು ಮತ್ತು ಸಿಬ್ಬಂದಿ ಜನರು ಕೂಡಿಕೊಂಡು ಜೂಜುಕೋರರ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ ಭೀಮ ತಂದೆ ಅಶೋಕ ಕೊಳ್ಳೂರ,ಗುಂಡು ತಂದೆ ಸಂತೋಷ ರಾಠೋಡ,ಪ್ರಕಾಶ ತಂದೆ ಸಿದ್ದರಾಮ ಪಾಟೀಲ,ರಾಜು ತಂದೆ ಶರಣಪ್ಪ ಸಿಂಗೆ,ಶರಣು ತಂದೆ ರಾಜಶೇಖರ ಪಾಟೀಲ,ಮಹೇಶ ತಂದೆ ಬಲಭೀಮ ಪಂಚಾಳ,ಮೌನೇಶ ತಂದೆ ನರಸಪ್ಪ ಪಂಚಾಳ,ರಾಮಚಂದ್ರ ತಂದೆ ನಾಗಣ್ಣಾ ವಾರಿಕ್,ರಾಜಕುಮಾರ ತಂದೆ ವೈಜನಾಥ ಕಾಮಠಾಣ,ಸಂತೋಷ ತಂದೆ ವೈಜನಾಥ ಮಡಿವಾಳ,ಪೀರಪ್ಪಾ ತಂದೆ ಚಂದ್ರಶೇಖರ ಬಟಗೇರಿ,ಪವನ ತಂದೆ ಅಣ್ಣಾರಾವ ಬಿರಾದಾರ ಇವರುಗಳನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ ನಗದು ಹಣ 2,800/- ರೂ. ಹಾಗು ಇಸ್ಪೀಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ.130/2012 ಕಲಂ 87 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :ಶ್ರೀ ಖಾದರ ಪಟೇಲ್ ತಂದೆ ಖಾಸೀಮ ಪಟೇಲ್ ಸಾ|| ಇಸ್ಲಾಮಬಾದ ಕಾಲೋನಿ ಗುಲಬರ್ಗಾ ದಿನಾಂಕ:26-11-2012 ಮಧ್ಯಾಹ್ನ  1-30 ಗಂಟೆ ಸುಮಾರಿಗೆ ಮೋಟಾರ ಸೈಕಲ ಮೇಲೆ  ಗಂಜಿನಿಂದ ಹುಮನಾಬಾದ ರಿಂಗ ಮಧ್ಯದಲ್ಲಿ ಬಂದು ಸೇಡಂ ರಿಂಗ ರೋಡ ಕಡೆ, ನನ್ನ ಮೋಟಾರ ಸೈಕಲ ಹೊರಳಿಸುತ್ತಿದ್ದಾಗ ಆಳಂದ ಚೆಕ್ಕ ಪೋಸ್ಟ ಕಡೆಯಿಂದ ಎಪಿ  21 ಟಿಯು 6777 ಚಾಲಕ ನರಸಪ್ಪ ತನ್ನ ಲಾರಿಯನ್ನು ಯಾವುದೇ ಮುನ್ಸೂಚನೇ ನೀಡದೇ ಹಾರ್ನ ವಗೈರೇ ಹಾಕದೇ ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ನನ್ನ  ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ ಎಡಗಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:389/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ದಯಾನಂದ  ತಂದೆ ಅಮರ  ಹಿರೇಮಠ   ಸಾ: ಪ್ರಶಾಂತ ನಗರ ರಾಜಾಪೂರ   ಗುಲಬರ್ಗಾ ರವರು ನಾನು ದಿನಾಂಕ:25-11-2012  ರಂದು ರಾತ್ರಿ 8=15 ಗಂಟೆಗೆ ಜಗತ ಏರಿಯಾದಲ್ಲಿರುವ ಡ್ಯಾನ್ಸ ಶಾಲೆಯಿಂದ ಐವಾನ-ಇ-ಶಾಹಿ ಕಡೆಗೆ ನಾನು ನನ್ನ ಟಿ.ವಿ.ಎಸ್. ಮೋಟಾರ ಸೈಕಲ ನಂಬರ ಕೆಎ-32 ಎಕ್ಸ-9112 ನೇದ್ದರ ಮೇಲೆ ಹಳೆ ಡಿಪೋ ಕ್ರಾಸ್ ದಿಂದ ಲಾಹೋಟಿ ಕ್ರಾಸ್ ಕಡೆಗೆ ಹೋಗುವಾಗ ಎದುರಿನಿಂದ  ಮೋಟಾರ ಸೈಕಲ ನಂ: ಕೆಎ-32 ಯು-7488 ರ ಸವಾರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಗೆ ಎದುರುನಿಂದ  ಡಿಕ್ಕಿ ಪಡಿಸಿ  ಗಾಯಗೊಳಿಸಿ ಮೋಟಾರ ಸೈಕಲ ಸಮೇತ ಓಡಿ ಹೊಗಿರುತ್ತಾನೆ .ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 1165/2012 ಕಲಂ, 279,338, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಭೀಮಬಾಯಿ ಗಂಡ ಮಲ್ಲಿಕಾರ್ಜುನ ಕವಲಗಿ  ಸಾ|| ಭೂಸನೂರ ಗ್ರಾಮ ರವರು ದಿನಾಂಕ: 26-11-2012 ರಂದು 22-00 ಗಂಟೆಗೆ ನಾನು ನನ್ನ  ಮನೆಯಲ್ಲಿ ಕುಳಿತಿರುವಾಗ ರಂಜಿತ @ ರಂಜು ತಂದೆ ಶರಣಪ್ಪ ಬೆಳಮಗಿ ಜಾ|| ಹರಿಜನ ಸಾ|| ಭೂಸನೂರ ಇತನು ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ  ಏ ರಂಡಿ ನೀನು ನನ್ನ ಮೇಲೆ ಏಕೆ ಕೇಸು ಮಾಡಿದ್ದೀಯಾ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಅವಳ ಹಣೆಯ ಮೇಲೆ ಹೊಡೆದು ರಕ್ತಗಾಯಪಡಿಸಿದ್ದು ಅಲ್ಲದೆ ಅವರ ಮಾನ ಭಂಗ ಮಾಡುವ ಉದ್ದೇಶದಿಂದ ಕೂದಲು ಹಿಡಿದು ಎಳೆದಾಡಿ ಮಾನ ಭಂಗಕ್ಕೆ ಪ್ರಯತ್ನಿಸಿದ್ದುನಂತರ ಕೈ ಹಿಡಿದು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ನೆಲಕ್ಕೆ ಕೆಡವಿದ್ದು ಆಗ ಅಲ್ಲಿಯೇ ಇದ್ದ ರಂಜಿತನ ತಂದೆಯಾದ ಶರಣಪ್ಪ ಮತ್ತು ತಾಯಿಯಾದಕಮಲಾಬಾಯಿ ಇವರುಗಳು ಕೈಯಿಂದ ನನಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 98/2012 ಕಲಂ, 448, 323, 324, 354, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಚೇತನ ತಂದೆ ಗುಂಡಪ್ಪಾ ಕೊಟಗಿ ಸಾ| ಗೋಟುರ ತಾ|| ಚಿತ್ತಾಪೂರ ಹಾ||ವ|| ಗೋದುತಾಯಿ ನಗರ ರವರು ನಾನು ಕಾಲೇಜ ಮತ್ತು ಟಿವಿಷನ್ ಮುಗಿಸಿಕೊಂಡು ಇಂದು ದಿನಾಂಕ:26/11/2012 ರಂದು ಸಾಯಂಕಾಲ 7-00 ಗಂಟೆಗೆ ನನ್ನ ಗೆಳೆಯನಾದ ಶಫಿ ಇತನು ನಮ್ಮ ಮನೆಯ ಮುಂದೆ ಬಂದು ನಿಂತು ಕರೆದಾಗ ನಾನು ಹೊರಗೆ ಬಂದು ಇಬ್ಬರೂ ಕೂಡಿಕೊಂಡು ನಮ್ಮ ಮನೆಯಿಂದ ರೇಲ್ವೆ ಹಳಿ ದಾಟಿ ಮಾಕಾ ಲೇಔಟದಲ್ಲಿರುವ ಶಫಿ ಮುಲ್ಲಾ ರವರ ಮನೆಗೆ ಹೋರಟಾಗ ಗೋದುತಾಯಿ ಕಾಲೋನಿಗೆ ಹತ್ತಿಕೊಂಡಿರುವ ಕಂಪೌಂಡ ದಾಟಿ ರೇಲ್ವೆ ಹಳಿ ಹತ್ತಿರ ಇಬ್ಬರೂ ಯಾರೋ ಅಪರಿಚಿತರು ಅಂದಾಜು ಸುಮಾರು 18 ರಿಂದ 22 ವಯಸ್ಸಿನ ಇಬ್ಬರು ಹುಡುಗರು ಎದುರುಗಡೆ ಬಂದು ನನಗೆ ನಿಲ್ಲಿಸಿ ನನ್ನ ಕೈಯಲ್ಲಿದ್ದ ನೋಕಿಯಾ ಮೋಬೈಲನ್ನು ಕಸಿದುಕೊಂಡು ನನಗೆ  ಹೊಡೆಯುತ್ತಿದ್ದಾಗ ನನ್ನ ಗೆಳೆಯ ಶಫಿ ಅಂಜಿ ಓಡಿಹೋದನು ನನಗೆ ಅವರಿಬ್ಬರು ಕೈಗೆ ಮತ್ತು ಕೈಯಲ್ಲಿ ಕಲ್ಲು ತೆಗೆದುಕೊಂಡು ತೊಡೆಗೆ ಹೊಡೆದರು ನನ್ನ ಕಿಸೆಯನ್ನು ಚೆಕ್ಕ ಮಾಡಿದಾಗ ಎನು ಸಿಗಲಾರದಕ್ಕೆ ಹೋಗುವಾಗ ಅವರ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ನಾನು ಚಿರಾಡುತ್ತಿರುವಾಗ ಅವರ ಬಿಟ್ಟು ಓಡಿಹೋದರು ಆಗ ನನ್ನ ಗೆಳೆಯ ಶಫಿ 100 ಕ್ಕೆ ಪೋನ ಮಾಡಿ ತಿಳಿಸಿದ ನಂತರ ಪೊಲೀಸರು ಬಂದು ನನಗೆ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ನನ್ನ ಮೋಬೈಲ್ ನಂ.8553802336 ಇದ್ದು ಅದರ ಕಿಮ್ಮತ್ತು  1000/- ರೂ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:107/2012 ಕಲಂ. 397 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

26 November 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮಹ್ಮದ ಸಾಜೀದ ಅಹ್ಮದ ತಂದೆ ಅಬ್ದುಲ ಸುಕ್ಕುರ ವ|| 21 ವರ್ಷ ಉ|| ಕೂಲಿ ಕೆಲಸ ಸಾ|| ಹೊಸ ರಾಘವೇಂದ್ರ ಕಾಲೋನಿ ಬ್ರಹ್ಮಪೂರ ಗುಲಬರ್ಗಾ ನಾನು ದಿನಾಂಕ:26-11-12 ರಂದು ರಾತ್ರಿ 00-30 ಗಂಟೆ ಸುಮಾರಿಗೆ ನನ್ನ ಗೆಳೆಯನ ಜೊತೆ ದ್ವಿ-ಚಕ್ರ ವಾಹನದ ಮೇಲೆ ಹಿಂದೆ ಕುಳಿತುಕೊಂಡು ಡಾಲಫೀನ ಶಾಲೆ ಹತ್ತಿರ ಹೋರಟಾಗ ಅಲ್ಲಿ ಆರೀಪ ಇತನು ನಿಂತಿದ್ದು ನಮ್ಮನ್ನು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ತನ್ನ ಬಳಿ ಇರುವ ಚಾಕುವಿನಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:86/2012 ಕಲಂ 341, 323, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಜೇವರಗಿ ಪೊಲೀಸ್ ಠಾಣೆ:ಶ್ರೀ ಮಾನಪ್ಪ ತಂದೆ ಈರಣ್ಣಾ ದೊಡ್ಡಮನಿ  ಸಾ: ಬಿರಾಳ ಬಿ ತಾ: ಜೇವರ್ಗಿ ನಮ್ಮೂರ ಯಲ್ಲಾಲಿಂಗ ತಂದೆ ಭೀಮರಾಯ ಟಣಕೇದಾರ ಮತ್ತು ಅವರ ಜನಾಂಗದವರು ಅಲ್ಲದೇ ಇತರೆ ಜನರೊಂದಿಗೆ ಕೂಡಿಕೊಂಡು ದಿನಾಂಕ:30-7-2012 ರಂದು ಬಿರಾಳ (ಬಿ) ಗ್ರಾಮದ ಬಸವೇಶ್ವರ ಕಟ್ಟೆಯನ್ನು ದ್ವಂಶಗೊಳಿಸಿ, ಅದೇ ವಿಷಯದಲ್ಲಿ ನಮ್ಮ ಮತ್ತು ಲಿಂಗಾಯತ ಜನರೊಂದಿಗೆ ದ್ವೇಶ ಸಾಧಿಸುತ್ತಾ ಬಂದಿದ್ದಿಲ್ಲದೇ ಒಂದಿಲ್ಲ ಒಂದು ದಿವಸ ನಮ್ಮಗೆ ಖಲಾಸ ಮಾಡಿಯೇ ಬಿಡುತ್ತೇವೆ ಅಂತ ಊರಲ್ಲಿ ಬೈದಾಡುತ್ತಾ ಬಂದಿದ್ದು, ದಿನಾಂಕ: 25-11-2012 ರಂದು ಸಾಯಂಕಾಲ 5-00 ಗಂಟೆಗೆ ಬಿರಾಳ (ಬಿ) ಗ್ರಾಮದ ಗ್ರಾಮ ಪಂಚಯತ ಎದರು ಖುಲ್ಲಾ ಜಾಗೆಯಲ್ಲಿ ಯಲ್ಲಾಲಿಂಗ ತಂದೆ ಭೀಮರಾಯ ಟಣಕೇದಾರ ಸಂಗಡ 71   ಜನರು ಸಾ:ಎಲ್ಲರೂ ಬಿರಾಳ (ಬಿ ಗ್ರಾಮದವರು ಕೊಲೆ ಮಾಡು ಉದ್ದೇಶದಿಂದ ಗುಂಪು ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ )ರಾಡು, ಕೊಡಲಿ, ಕಲ್ಲು ಬಡಿಗೆ ಹಿಡಿದುಕೊಂಡು ಬಂದು ನನಗೆ ಮತ್ತು ಗ್ರಾಮದ ಇತರ ಜನರಿಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:175/12 ಕಲಂ 143. 147. 148. 323. 324. 336. 307 ಸಂಗಡ 147 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಅಯ್ಯಪ್ಪ ತಂದೆ ಸಿದ್ದಪ್ಪ ನಾಗನಟಗಿ ಬೇಡರ ಸಾ:ಬಿರಾಳ (ಬಿ) ರವರು ನಮ್ಮೂರ ನಿಂಗನಗೌಡ ತಂದೆ ಅಯ್ಯನಗೌಡ  ಮತ್ತು ಅವರ ಜನಾಂಗದವರು ನಿರ್ಮಿಸಿದ ಬಸವೇಶ್ವರ ಕಟ್ಟೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಇತರರು ಕೂಡಿಕೊಂಡು ನ್ಯಾಯಾಲಯದ ಆದೇಶದ ಪ್ರಕಾರ ಕಾನೂನು ರೀತಿ ದಿನಾಂಕ:30/07/2012 ರಂದು ಕಟ್ಟೆಯನ್ನು ತೆರುವಗೊಳಿಸಿದ್ದು ಇರುತ್ತದೆ. ಅದೇ ವೈಶ್ಯಮ್ಯದಿಂದ ಲಿಂಗಾಯತ ಜನಾಂಗದವರು ಮತ್ತು ಇತರ ಜನಾಂಗದವರು ಕೂಡಿಕೊಂಡು ನಮ್ಮ ಸಮಾಜದ ಮೇಲೆ ಹಲ್ಲೇ ಮಾಡುತ್ತಾ ಬಂದಿದಲ್ಲದೇ ದಿನಾಂಕ:25-11-2012 ರಂದು ಸಾಯಾಂಕಾಲ 5-00 ಗಂಟೆಗೆ ಗ್ರಾಮ ಪಂಚಾಯತಿ ಕಾರ್ಯಾಲಯದ ಖುಲ್ಲಾ ಜಾಗದಲ್ಲಿ ನಿಂಗಣ್ಣಾ ಗೌಡ ತಂದೆ ಅಯ್ಯಣಗೌಡ ಮಾಲಿ ಪಾಟೀಲ ಸಂಗಡ 24 ಜನರು ಅಲ್ಲದೇ ಗ್ರಾಮದ ಇತರರು ಸಾ:ಬಿರಾಳ (ಬಿ) ಗುಂಪು ಕಟ್ಟಿಕೊಂಡು ಬಂದು ನನಗೆ ಮತ್ತು ನಮ್ಮ ಜನಾಂಗದವರಿಗೆ ಕೊಲೆ ಮಾಡುವ ಉದ್ದೇಶದಿಂದ ಅವರಲ್ಲಿಯ ಕೆಲವು ಜನರು ಕೈಯಲ್ಲಿ ಬಡಿಗೆ, ಕಲ್ಲುಗಳು ಹಿಡಿದುಕೊಂಡು,ನಾವು ಕಟ್ಟಿದ ಬಸವೇಶ್ವರ ಕಟ್ಟೆ ದ್ವಂಶ ಮಾಡಿರುತ್ತಾರೆ. ಶರಣಬಸಪ್ಪ ತಂದೆ ಕರಣಪ್ಪ ಆಂದೊಲಾ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ  ನನ್ನ ತಲೆಗೆ ಹೊಡೆದು ರಕ್ತಗಾಯಗೊಳಿಸಿದನು. ನಿಂಗಣ್ಣಗೌಡ ತಂದೆ ಅಯ್ಯಣಗೌಡ ಪಾಟೀಲ  ಇತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯಗೊಳಿಸಿದನು.  ಅಲ್ಲದೆ ಅವರಲ್ಲಿಯ ಕೆಲವು ಜನರು ಒಮ್ಮೇಲೆ ಅವರ ಕೈಯಲ್ಲಿದ ಬಡಿಗೆಗಳಿಂದ ನಮ್ಮ ಜನಾಂಗದವರಿಗೆ  ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಗುಪ್ತಪೆಟ್ಟು ಮಾಡಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:176/12 ಕಲಂ 143.147.148.323.324.504.506.336.307 ಐ.ಪಿ.ಸಿ ಸಂ 3(1) (10) ಎಸ.ಸಿ/ಎಸ.ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರುಯತ್ನ:
ಮುಧೋಳ ಪೊಲೀಸ್ ಠಾಣೆ:ಶ್ರೀ ಮೋಹನರಡ್ಡಿ ತಂದೆ ವೆಂಕಟರಡ್ಡಿ ನಾಯಕಿನ್ ಸಾ|| ಆಡಕಿ ಗ್ರಾಮ ತಾ|| ಸೇಡಂ ರವರು ನಮ್ಮ ಹೊಲ ಹಾಗೂ ನಮ್ಮ ಪಕ್ಕದ ಮನೆಯವರಾದ ನಮ್ಮ ಜಾತಿಯ ಸಾಯಿರಡ್ಡಿ ಇವರ ಹೊಲ ಅಕ್ಕಪಕ್ಕದಲ್ಲಿದ್ದು ನಮ್ಮ ಹೊಲಕ್ಕೆ ಹೋಗಬೇಕಾದರೆ ಸಾಯಿರಡ್ಡಿ ಇವರ ಹೊಲದಿಂದ ಹೋಗಲು ದಾರಿ ಇದ್ದು ಸಾಯಿರಡ್ಡಿ ಇತನು ನಮಗೆ ತನ್ನ ಹೊಲದಿಂದ ನಮ್ಮ ಹೊಲಕ್ಕೆ ಹೋಗದಂತೆ ಒಂದು ವರ್ಷದಿಂದ ತಕರಾರು ಮಾಡುತ್ತಿದ್ದು ನಮ್ಮ ಮೇಲೆ ವೈಮನಸ್ಸು ಹೊಂದಿರುತ್ತಾರೆ. ದಿನಾಂಕ:25-11-2012 ರಂದು ರಾತ್ರಿ 9-00 ಗಂಟೆಗೆ ನಾನು ಹಾಗೂ ನಮ್ಮ ಅಣ್ಣ-ತಮ್ಮಕಿಯವರಾದ  ಶ್ರೀನಿವಾಸರಡ್ಡಿ ತಂದೆ ಮಾಸರಡ್ಡಿ ನಾಯಕಿನ್, ಮೋಹನರಡ್ಡಿ ತಂದೆ ನರಸಿಂಹಲು ಮನ್ನೆ  ನರಸಿಂಹಲು ತಂದೆ ನಾಗಪ್ಪಾ, ಮನ್ನೆ ಕೃಷ್ಣಾ ತಂದೆ ನರಸಿಂಹಲು ಮನ್ನೆ, ಅನಿಲ ತಂದೆ ಕೃಷ್ಣಾ ಮನ್ನೆ, ಶ್ರೀಕಾಂತ ತಂದೆ ಮೋಹನರಡ್ಡಿ ಮನ್ನೆ ಎಲ್ಲರೂ ಕೂಡಿ ಮೋಹರಂ ನೋಡಿ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ನೀರಿನ ಟ್ಯಾಂಕಿನ ಹತ್ತಿರ ಸಾಯಿರಡ್ಡಿ, ರಘುಪತಿರಡ್ಡಿ,ನಾಗರಡ್ಡಿ,ಲಾಲಪ್ಪಾ ತಂದೆ ಬಸಪ್ಪಾ ಮನ್ನೆ,ಶಾಣಪ್ಪಾ ತಂದೆ ಶಾಮಪ್ಪಾ ಮನ್ನೆ ಮತ್ತು ಶ್ರೀನಿವಾಸರಡ್ಡಿ ತಂದೆ ತಿಪ್ಪಣ್ಣ ಮನ್ನೆ ಸಾ|| ಎಲ್ಲರೂ ಆಡಕಿ ಗ್ರಾಮ ರವರು ಕೈಯಲ್ಲಿ ರಾಡು, ಕಲ್ಲು ಕೊಡಲಿ, ಬಡಿಗೆ ಹಿಡಿದುಕೊಂಡು ಬಂದು ನಮಗೆ ನಿಲ್ಲಿಸಿ ಅವಾಚ್ಯವಾಗಿ ಬೈದು ನೀವು ನಮ್ಮ ಹೊಲದಿಂದ ಹೋಗಬೇಡಿರಿ ಅಂದರೂ ಕೂಡಾ ಯಾಕೆ ಹೋಗುತ್ತೀರಿ ಅಂತಾ ಜಗಳ ತಗೆದು ಕೊಲೆ ಮಾಡುವ ಉದ್ಯೇಶದಿಂದ ಕೊಡಲಿಯಿಂದ .ರಾಡಿನಿಂದ ,ಬಡಿಗೆಯಿಂದ ,ಕಲ್ಲಿನಿಂದ ಹೊಡೆಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:150/2012 ಕಲಂ- 143,147,148,341, 324,307504, 506 ಸಂ. 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.